Homeಮುಖಪುಟ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್'

’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

- Advertisement -
- Advertisement -

ಭಾರತದ ಮುಖ್ಯವಾಹಿನಿ ಸಿನಿಮಾಗಳು ಬಹುತೇಕ ಜಾತಿಯ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದೇ ಹೆಚ್ಚು. ಪಾತ್ರಗಳನ್ನು ಹೆಸರಿಸುವುದರಲ್ಲೂ ಕೂಡಾ ಜಾತಿ ಗೊತ್ತಾಗಬಾರದೆಂಬಂತೆ ಜಾಗ್ರತೆ ವಹಿಸಲಾಗುತ್ತೆ. ಆದರೆ ಅವೇ ಸಿನಿಮಾಗಳಲ್ಲಿ ಮೇಲ್ಜಾತಿಗಳ ಬಗ್ಗೆ ಈ ಧೋರಣೆ ತಳೆಯುವುದು ಕಡಿಮೆ. ಬ್ರಾಹ್ಮಣಿಕೆಯ ಪ್ರದರ್ಶನಕ್ಕೆ ಇದು ಅಡ್ಡಿಯೇ ಆಗುವುದಿಲ್ಲ. ಕನ್ನಡದ ಹಲವು ಸಿನಿಮಾಗಳಲ್ಲಿ ’ಗೌಡರ ಗತ್ತಿ’ನೂ ಕಮ್ಮಿಯಿಲ್ಲ. ಇಂತದಕ್ಕೆ ಅತ್ತ ತಮಿಳಿನಲ್ಲಿ ಥೇವರ್ ಮಗನ್‌ನಂತಹ ಚಿತ್ರಗಳೂ ಬಂದಿವೆ. ಆದರೆ ಇದೇ ಮಾತನ್ನು ತಳವರ್ಗಗಳ ಬಗ್ಗೆ ಹೇಳಲು ಬರುವುದಿಲ್ಲ. ಇದಕ್ಕೆ ಭಿನ್ನವಾಗಿ ಇಂದು ತಮಿಳು ಸಿನಿಮಾ ಮಾತ್ರ ಜಾತಿಯ ಪ್ರಶ್ನೆಯನ್ನು ನಿಜವಾಗಿ ಚರ್ಚಿಸುತ್ತಿದೆ ಅನ್ನಿಸುತ್ತೆ.

ರಜನೀಕಾಂತ್ ನಾಯಕನಾಗಿದ್ದ ’ಕಬಾಲಿ’ ಸಿನೆಮಾವನ್ನು ಪ. ರಂಜಿತ್ ನಿರ್ದೇಶಿಸುವುದರೊಂದಿಗೆ ಗಟ್ಟಿಯಾದ ದಲಿತ ಧ್ವನಿಯೊಂದು ಹುಟ್ಟಿಕೊಂಡಿತು. ಕಾಲಾ, ಪರೆಯೇರುಂ ಪೆರುಮಾಳ್, ಅಸುರನ್ ಅಂತಹ ಚಿತ್ರಗಳು ಇವತ್ತು ಜಾತಿಯ ಪ್ರಶ್ನೆಯನ್ನು ಪೊಲಿಟಿಕಲ್ ಪ್ರಶ್ನೆಯಾಗಿಯೇ ಚರ್ಚಿಸಿವೆ. ಅತ್ತ ತೆಲುಗಿನಲ್ಲಿ ’ಪಲಾಸ 1976’ ಎಂಬ ಸಿನಿಮಾ ಸಹ ದಲಿತ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಯಲಸೀಮೆಯ ಫ್ಯೂಡಲ್ ಹಿಂಸೆಯನ್ನು ನೋಡಿತ್ತು. ಇದೆಲ್ಲದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮರ್ಯಾದೆಗೇಡು ಹತ್ಯೆಗಳನ್ನು ಸಮರ್ಥಿಸುವ ದನಿಯಿದ್ದ ’ದ್ರೌಪದಿ’ ಚಿತ್ರವೂ ತಮಿಳಿನಲ್ಲಿ ಬಂತು. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಾಲ್ಕು ಚಿತ್ರಗಳ ಗುಚ್ಛ ’ಪಾವ ಕದೈಗಳ್ ಅನ್ನು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಜಾತಿ ಪ್ರಶ್ನೆಯ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕಿದೆ.

’ಪಾವ ಕದೈಗಳ್‌ನ ನಾಲ್ಕು ಚಿತ್ರಗಳೂ “ಮರ್ಯಾದೆ”ಯ ಪ್ರಶ್ನೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಮರ್ಯಾದೆ ಪ್ರಶ್ನೆಯಲ್ಲಿ ಹೇಗೆ ಜಾತಿ ಮತ್ತು ಹೆಣ್ಣು ಎರಡೂ ಪ್ರಮುಖ ಎಂಬುದನ್ನು ಈ ನಾಲ್ಕೂ ಚಿತ್ರಗಳು ಅತ್ಯಂತ ಶಕ್ತಿಯುತವಾಗಿ ಕಟ್ಟಿಕೊಡುತ್ತವೆ. ಈ ನಾಲ್ಕರಲ್ಲಿ ಎರಡು ಕಥೆಗಳು ತಮಿಳುನಾಡಿನಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಣೆ ಪಡೆದವು – ಗೌತಂ ಮೆನನ್ ಅವರು ನಿರ್ದೇಶಿಸಿರುವ ’ವಾನ್ಮಗಳ್, ಪೊಲ್ಲಾಚಿ ಸೆಕ್ಸ್ ಹಗರಣದಿಂದ ಮತ್ತು ವೆಟ್ರಿಮಾರನ್ ನಿರ್ದೇಶಿಸಿರುವ ’ಊರ್ ಇರುವು’ ತಮಿಳುನಾಡಿನಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯೊಂದರ ಪ್ರೇರಣೆಯಿಂದ ಹೆಣೆದಿರುವ ಕಥೆಗಳು. ಹಾಗಾಗಿಯೇ ಈ ಚಿತ್ರಗಳಲ್ಲಿ ಪತ್ರಿಕಾ ವರದಿಯ ಛಾಯೆಯಿದೆ ಮತ್ತು ಹಾಗಾಗಿಯೇ ಅವು ಅಷ್ಟು ಪರಿಣಾಮಕಾರಿ ಅಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರಾದರೂ, ಈ ಚಿತ್ರಗಳು ನೀಡುವ ಒಳನೋಟ ಮತ್ತು ಮೂಡಿಸುವ ತಲ್ಲಣ ಆಳವಾದದ್ದು. ಈ ಚಿತ್ರಗಳ ವಿಶೇಷತೆಯೆಂದರೆ “ಮರ್ಯಾದೆ” ಉಳಿಸಿಕೊಳ್ಳಲು ಹಿಂಸೆಗೆ ಇಳಿಯುವ ತಲೆಮಾರಿನ ಬಗ್ಗೆಯೇ ಈ ಕಥೆಗಳ ಫೋಕಸ್ ಇದ್ದು, ಹಿಂಸೆಗೆ ಒಳಗಾದ ಯುವಕರ ಬಗ್ಗೆ ಮಾತ್ರ ಅಲ್ಲ ಎನ್ನಬಹುದು. ಈ ತಲೆಮಾರುಗಳ ನಡುವಿನ ಅಂತರ ಮತ್ತು ತಲ್ಲಣಗಳನ್ನು ಈ ಚಿತ್ರಗಳು ಶಕ್ತವಾಗಿ ಹಿಡಿದುಕೊಡುತ್ತವೆ.

ಗಾಂಧಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತಾ, ಪಾಶ್ಚಿಮಾತ್ಯ ನಾಗರಿಕತೆಯು ಕ್ರೈಸಿಸ್‌ನಲ್ಲಿದ್ದು, ಅವರಿಗಾಗಿಯೂ ನಾನು ಹೋರಾಡುತ್ತಿದ್ದೇನೆ ಎಂದೇ ತಿಳಿದಿದ್ದರು. ಈ ಚಿತ್ರಗಳಲ್ಲೂ “ಮರ್ಯಾದೆ” ಎಂಬುದು ಹೇಗೆ ಒಂದು ಸಾಮಾಜಿಕ ಸಂರಚನೆಯಾಗಿದ್ದು ಅದನ್ನು ಒಳಗೊಳ್ಳಲು ಸಮಾಜವು ಹೇಗೆ ಒಬ್ಬನ ಮೇಲೆ ನಿರಂತರ ಒತ್ತಡ ಹೇರುತ್ತದೆ ಮತ್ತು ಅನೇಕ ಮರ್ಯಾದೆಗೇಡು ಹತ್ಯೆಗಳ ಹಿಂದೆ ಇಂಥದೊಂದು ಒತ್ತಡವು ಕೆಲಸ ಮಾಡುತ್ತದೆ, ಮತ್ತು ಸ್ವಂತ ಮಕ್ಕಳನ್ನೇ ಕೊಲ್ಲುವ ಹಂತಕ್ಕೆ ಹೋಗುವ ಜನ ಕೂಡ ಹೇಗೆ ಒಂದು ರೀತಿಯಲ್ಲಿ ಈ ವ್ಯವಸ್ಥೆಯ ವಿಕ್ಟಿಂಗಳು ಮತ್ತು ಅವರಿಗೂ ಈ ಉಸಿರುಕಟ್ಟುವ ವ್ಯವಸ್ಥೆಯಿಂದ ಬಿಡುಗಡೆ ಬೇಕಾಗಿದೆ ಎಂಬ ದನಿಯಲ್ಲಿ ಈ ಚಿತ್ರಗಳಿವೆ. ವಿಗ್ನೇಶ್ ಶಿವನ್ ನಿರ್ದೇಶನದ ’ಲವ್ ಪಣ್ಣಾ ಉತ್ರಾಣಮ್ ಮತ್ತು ’ಊರ್ ಇರುವು’ ಚಿತ್ರಗಳಲ್ಲಿ ಅವರ ಮಕ್ಕಳನ್ನು ಕೊಲ್ಲಲು ಆ ಜಾತಿ ಸಮಾಜದಿಂದ ಇರುವ ಒತ್ತಡ ಸ್ಪಷ್ಟ. ಈ ತಂದೆಯರ ತೊಳಲಾಟವು ವಿದಿತ. ಆದರೆ ಅವರು ಕಡೆಗೆ ತಮ್ಮ ಮಕ್ಕಳನ್ನು ಕೊಲ್ಲುತ್ತಾರೆ. ಶಿವನ್ ಅವರ ಚಿತ್ರದಲ್ಲಿ ಒಬ್ಬ ಮಗಳನ್ನು ಕೊಲ್ಲುವ ತಂದೆ ಕೊನೆಗೆ ಮತ್ತೊಬ್ಬ ಮಗಳನ್ನು ಹಳ್ಳಿಯಿಂದ ತಪ್ಪಿಸಿಕೊಳ್ಳಲು ಬಿಡುವುದಷ್ಟೇ ಅಲ್ಲದೆ, ತಾನೂ ಹಳ್ಳಿಯಿಂದ ತಪ್ಪಿಸಿಕೊಂಡು ಮಗಳ ಜೊತೆ ಫ್ರಾನ್ಸ್‌ನಲ್ಲಿ ಅವಳ ಜೊತೆ ವಾಸ ಮಾಡುತ್ತಾನೆ.

PC : Only kollywood

’ಊರ್ ಇರುವು’ ಚಿತ್ರದಲ್ಲಿ ಮನೆಯಿಂದ ಓಡಿಹೋದ ಮಗಳು ಬಹುಶಃ ದಲಿತ ಹುಡುಗನೊಬ್ಬನನ್ನು ಮದುವೆ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾಳೆ. ಗರ್ಭಿಣಿ. ಆಕೆಯನ್ನು ಹುಡುಕಿಕೊಂಡು ಬರುವ ತಂದೆ ಅಳಿಯ ಕೊಟ್ಟ ನೀರು ಮುಟ್ಟಲೂ ಅಂಜುವವನು. ಮೊಮ್ಮಗುವನ್ನು ಬಿಟ್ಟು ಇರಕ್ಕಾಗಲ್ಲ, ಮಗಳನ್ನು ಕರಕೊಂಡು ಹೋಗಿ ಸೀಮಂತ ಮಾಡ್ತೀನಿ ಅಂದಾಗ ಅಳಿಯ ’ನಾನು ಕೊಟ್ಟ ನೀರನ್ನೇ ಕುಡಿಯದ ನಿಮ್ಮನೆಗೆ ನಾನು ಹೇಗೆ ಬರಲಿ’ ಅಂತ ಕೇಳ್ತಾನೆ. ನನಗೆ ಹೇಳದೆಯೇ ಯಾಕೆ ಓಡಿ ಹೋದೆ ಎಂದು ಕೇಳಿದ್ದಕ್ಕೆ ಮಗಳು ’ಇದೇ ರೀತಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಊರಲ್ಲಿ ಏನು ಮಾಡಿದರು, ನೀನೂ ಸುಮ್ಮನಿದ್ದೆಯಲ್ಲ ಎಂದು ಕೇಳುತ್ತಾಳೆ, ತಂದೆಯಲ್ಲಿ ಉತ್ತರವಿಲ್ಲ. ಒಂದು ಬಾರಿ ಆಕೆಯನ್ನು ಬಿಟ್ಟು ಹೊರಟುಹೋಗಲು ಅನುವಾಗುತ್ತಾನೆ ಕೂಡಾ. ಆದರೆ ಮಗಳೇ ತಡೆಯುತ್ತಾಳೆ. ತಂದೆ ಮಗಳಿಗೆ ಹೇಳ್ತಾನೆ: “ಈ ಜೀವನವನ್ನು ನೀನು ಕಟ್ಟಿಕೊಂಡಿದ್ದೀಯ. ಇದರ ಮೇಲೆ ಯಾರಿಗೂ ಹಕ್ಕಿಲ್ಲ ಎಂದು. ಅತ್ತ ಈಕೆಯ ಅಕ್ಕನನ್ನು ಗಂಡ ಬಿಟ್ಟುಬಿಟ್ಟಿದ್ದಾನೆ. ಕಾರಣ ದಲಿತರ ಹುಡುಗನೊಬ್ಬನಿಗೆ ಹುಟ್ಟುವ ಮಗುವಿನ ಮನೆಯ ಹುಡುಗಿ ಅಂತ! ಇನ್ನೂ ಒಬ್ಬಳು ಮಗಳಿದ್ದಾಳೆ, ಅವಳಿಗೆ ಓದು ಬಿಡಿಸಿದ್ದಾನೆ ಅಪ್ಪ. ಮಗಳನ್ನು ಊರಿಗೆ ಕರಕೊಂಡು ಬಂದು ಸೀಮಂತಕ್ಕೆ ಎಲ್ಲ ತಯಾರಿ ನಡೆದಿದೆ. ಜಾತಿಯ ಹುಡುಗರು ಬಂದು ಇದಕ್ಕೆ ಆಕ್ಷೇಪಿಸುತ್ತಾರೆ. ಬೇರೆಯವರಿಗೊಂದು ನ್ಯಾಯ ತನ್ನ ಮಗಳಿಗೊಂದು ನ್ಯಾಯವಾ ಎಂಬುದು ಅವರ ಪ್ರಶ್ನೆ.

ಲವ್ ಪಣ್ಣಾ ಉತ್ರಾಣುಂ

ಶಿವನ್ ಅವರ ’ಲವ್ ಪಣ್ಣಾ ಉತ್ರಾಣುಂ’ ಚಿತ್ರದಲ್ಲಿ ಸ್ವತಃ ಜಾತಿಯನ್ನು ಉಳಿಸಲು ಅಂತರಜಾತಿ ವಿವಾಹಗಳಾಗುತ್ತಿರುವ ಯುವಕರನ್ನು ಕೊಲ್ಲುತ್ತಿರುವ ತಂದೆಗೆ ಆತನ ಬಂಟ ಕೇಳುವುದೂ ಅದೇ ಪ್ರಶ್ನೆ. ಈ ಪಾತ್ರವು ’ಪರೆಯೇರುಂ ಪೆರುಮಾಳ್ ಚಿತ್ರದಲ್ಲಿ ಹೀಗೆ ಉಚ್ಛಜಾತಿಯ ಹುಡುಗಿಯರನ್ನು ಪ್ರೇಮಿಸುವ ಹುಡುಗರನ್ನು ಕೊಲ್ಲುವುದೇ ಕಾಯಕ ಮಾಡಿಕೊಂಡ ಮುದುಕನ ಪಾತ್ರ ನೆನಪಿಸುತ್ತದೆ. ’ಊರ್ ಇರುವು’ನಲ್ಲಿ ಸೀಮಂತದ ಹಿಂದಿನ ರಾತ್ರಿ ಮಗಳಿಗೆ ಅಪ್ಪನೇ ವಿಷ ಹಾಕಿ ಸಾಯಿಸುತ್ತಾನೆ. “ನಿನ್ನನ್ನು ನಾನು ಬಿಡಲಾಗುವುದಿಲ್ಲ. ನನಗೆ ಇನ್ನೂ ಬೇರೆ ಮಕ್ಕಳಿದ್ದಾರೆ. ಅವರ ಒಳತಿಗಾಗಿ…”, ಎಂಬ ಆತನ ವಾದ ಹುಚ್ಚು ಎನಿಸಿದರೂ ಆ ಹಳ್ಳಿಯಲ್ಲಿ (ಎಲ್ಲೆಲ್ಲೂ) ಜಾತಿ ಸಮಾಜದಲ್ಲಿ ಅದು ವಾಸ್ತವೂ ಹೌದು ಎಂಬುದು ನಮ್ಮನ್ನು ತಟ್ಟುತ್ತದೆ. ಇದೇ ಮಾತನ್ನು ಸುಧಾ ಕೊಂಗಾರಾ ಅವರ ನಿರ್ದೇಶನದ ’ತಂಗಮ್ ಎಂಬ ಚಿತ್ರದಲ್ಲಿ ತಾಯಿ ತನ್ನ ತೃತೀಯ ಲಿಂಗ ಮಗ ಸತ್ತಾರ್‌ನಿಗೆ ಹೇಳುತ್ತಾಳೆ: ’ನಿನ್ನ ತಂಗಿ, ತಮ್ಮಂದಿರಿಗಾಗಿ ನೀನು ಸತ್ತು ಹೋಗು’ ಎಂದು.

ಇನ್ನು ’ವಾನ್ಮಗಳ್ ಚಿತ್ರದಲ್ಲಿ ಹನ್ನೆರಡು ವರ್ಷದ ಹುಡುಗಿಯನ್ನು ಕೆಲವು ಹುಡುಗರು ರೇಪ್ ಮಾಡಿದ್ದಾರೆ. ಅದಕ್ಕೆ ಆ ಹುಡುಗಿಯ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಚಿತ್ರ ಕಟ್ಟಿಕೊಡುತ್ತದೆ. ತಂದೆಗೆ ಮಗಳನ್ನು ಮಾತಾಡಿಸಲೇ ಆಗುತ್ತಿಲ್ಲ, ಆಕೆಯನ್ನು ಆತ ತಪ್ಪಿಸುತ್ತಿದ್ದಾನೆ, ಮಗನ ಸ್ನೇಹಿತರೇ ಈ ಕೃತ್ಯ ಎಸಗಿದ್ದು ಅದು ತಿಳಿದು ಪೊಲೀಸರಿಗೆ ದೂರು ನೀಡೋಣ ಎಂದು ಮಗ ತಂದೆಯನ್ನು ಕರೆಯುತ್ತಾನೆ. ಆದರೆ ತಾಯಿ ಪೊಲೀಸರಿಗೆ ದೂರು ನೀಡಿದರೆ ಮರ್ಯಾದೆ ಹೋಗುತ್ತದೆ ಬೇಡ ಎಂದು ತಡೆಯುತ್ತಾಳೆ. ಮಗ ಹೋಗಿ ತನ್ನ ತಂಗಿಯನ್ನು ಅಬ್ಯೂಸ್ ಮಾಡಿದ ಹುಡುಗನ ಶಿಶ್ನ ಕತ್ತರಿಸುತ್ತಾನೆ. ಆದರೆ ಈ ಕುಟುಂಬದಲ್ಲಿ ಅತ್ಯಂತ ಹೆಚ್ಚು ಪಿತೃಪ್ರಧಾನ್ಯವಾಗಿ ಯೋಚಿಸುವುದು, ತಳಮಳಕ್ಕೆ ಒಳಗಾಗುವುದು ತಾಯಿ. ಹಿರಿಯ ಮಗಳು ದೊಡ್ಡವಳಾದಾಗ ಮನೆಯ ಗೌರವ ಹೆಣ್ಣಿನ ದೇಹ, ನಡತೆಯಲ್ಲಿರುತ್ತದೆ ಎಂದು ಪಾಠ ಮಾಡುವ ಈ ತಾಯಿಗೆ ತನ್ನ ಕಿರಿಯ ಮಗಳನ್ನು ಯಾರೋ ಹುಡುಗರು ಬಲಾತ್ಕಾರ ಮಾಡಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲೇ ಆಗುವುದಿಲ್ಲ. ಆ ಮಗುವಿಗೆ ಪದೇ ಪದೇ ಸ್ನಾನ ಮಾಡಿಸುತ್ತಾ ಆ ಘಾತವನ್ನು ತೊಳೆದುಬಿಡಬೇಕೆಂಬಂತೆ ಮೈಉಜ್ಜುತ್ತಲೇ ಇರುವ ತಾಯಿಗೆ, ಆ ಮಗುವನ್ನೇ ಕೊಂದುಬಿಡುವ ಯೋಚನೆ! ಕೂಡಲೇ ಎಚ್ಚೆತ್ತುಕೊಳ್ಳುವ ಆಕೆ ತನ್ನ ಮಗಳನ್ನೇ ಕೊಂದುಬಿಡುವ ಯೋಚನೆ ನನಗೆ ಮೂಡಿಸಿದ ಈ “ಮರ್ಯಾದೆ”ಗೆ ಬೆಂಕಿ ಹಾಕ, ನನ್ನ ಮಗಳು ಬೆಳೆದು ದೊಡ್ಡವಳಾಗಿ ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮರ್ಯಾದೆ ಎಂದು ಮುಂದಿನ ಜೀವನಕ್ಕೆ ಅಣಿಯಾಗುತ್ತಾಳೆ. ನಾವಿರುವ ಜಾತಿ ಸಮಾಜದಲ್ಲಿ ಇಂತಹ ಯೋಚನೆಗಳೂ ನಮಗೂ ಬರಬಹುದು, ಆದರೆ ಇಂಥ ಒಂದು ಕ್ಷಣದ ಎಚ್ಚರ, ಯಾವುದು ಮರ್ಯಾದೆ ಎಂಬ ಒಂದು ಸಣ್ಣ ಪ್ರಶ್ನೆ ನಮ್ಮನ್ನು ಮನುಷ್ಯರಾಗೇ ಉಳಿಸಬಲ್ಲದು.

ವಾನ್ಮಗಳ್

’ತಂಗಮ್ ಚಿತ್ರದಲ್ಲಿ ಓಡಿಹೋಗಿ ಮದುವೆಯಾಗಿರುವ ದಂಪತಿ (ಇಲ್ಲಿ ಒಂದು ಸಂಕೀರ್ಣ ಪ್ರೇಮಕಥೆಯೂ ಅಡಗಿದೆ. ಸತ್ತಾರ್ ತನ್ನ ಪ್ರಿಯಕರ ಶರವಣನಿಗೆ ಅವನ ಬಯಕೆಯಂತೆ ತನ್ನ ತಂಗಿ ಸಾಯಿರಾ ಜೊತೆ ಓಡಿಹೋಗಿ ಅಂತರಧರ್ಮೀಯ ಮದುವೆ ಮಾಡಿಕೊಳ್ಳಲು ಸಹಕರಿಸುತ್ತಾರೆ) ಹಿಂದಿರುಗಿದಾಗ, ಅವರನ್ನು ಒಪ್ಪಿಕೊಳ್ಳಲು ಎರಡೂ ಕುಟುಂಬದವರು ಸಿದ್ಧರಿದ್ದರೂ, ಸತ್ತಾರ್‌ನನ್ನು ಮನೆಯಿಂದ ಹೊರದಬ್ಬಿ ಅವನ ಸಾವಿಗೆ ಕಾರಣವಾಗಿರುವ ತಮ್ಮ ಕುಟುಂಬದ ಸದಸ್ಯರ ಬಗ್ಗೆ, ಊರ ಜನರ ಬಗ್ಗೆ ಆ ದಂಪತಿ ತಳೆಯುವ, ಸಿಟ್ಟು, ಹತಾಶೆ, ಆಕ್ರೋಶ ಎಲ್ಲವೂ ಪ್ರೇಕ್ಷಕನದ್ದೂ ಆಗುತ್ತದೆ.

ತಂಗಮ್

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

ಒರು ಇರವು

ಇದನ್ನೂ ಓದಿ: ಮರ್ಯಾದಾಹೀನ ಹತ್ಯೆ: ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ ಯುವತಿಯ ಕುಟುಂಬ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...