Homeಅಂಕಣಗಳುನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

- Advertisement -
- Advertisement -

ಇಂದು ಸರ್ಕಾರಕ್ಕೆ ಸವಾಲಾಗಿರುವ, ಪ್ರಮುಖವಾಗಿ ಪಂಜಾಬ್, ಹರಿಯಾಣಗಳ ಮತ್ತು ದೇಶದೆಲ್ಲೆಡೆಯಿಂದ ಸೇರಿಕೊಳ್ಳುತ್ತಿರುವ ರೈತರ ಚಳವಳಿ ಭಾರತದಲ್ಲಿ ನಡೆಯುತ್ತಿರುವ ಎಲ್ಲ ಚಳವಳಿಗಿಂತ ಭಿನ್ನವಾದುದು ಮತ್ತು ಗಾಂಧಿಯವರ ಸತ್ಯಾಗ್ರಹದಷ್ಟೇ ಪರಿಣಾಮಕಾರಿಯಾದುದು. ಅಹಿಂಸೆಯ ಪ್ರಯೋಗ ಶಾಲೆಯಂತಿದೆ ರೈತ ಹೋರಾಟ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಡವ ಜನರು ನಡೆಸಿದ ಕರನಿರಾಕಣೆ ಸತ್ಯಾಗ್ರಹವನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹ ನೆನಪಿಗೆ ತರುತ್ತದೆ.

ಬ್ರಿಟಿಷರ ಕಾಲದಲ್ಲಿ ರೈತರನ್ನು, ಕಾರ್ಮಿಕರನ್ನು ಕಾಲ ಕೆಳಗಿನ ಕಸವಾಗಿ ಆಡಳಿತ ನಡೆಸುವವರು ಕಾಣುತ್ತಿದ್ದರು. ಕಮ್ಯುನಿಸ್ಟರು ಕಾರ್ಮಿಕ ಸಂಘಟನೆಗೆ ಗಮನ ಕೊಟ್ಟರು ಕಾರ್ಮಿಕರ ಹಕ್ಕು ಬಾಧ್ಯತೆಗಾಗಿ ಹೋರಾಟಗಳನ್ನು ನಡೆಸಿದರು, ಅವರು ಹಿಂಸೆ-ಅಹಿಂಸೆ ಇವೆಲ್ಲದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಆಕ್ರಮಣಕಾರಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದರು. ಹೋರಾಟ ನಡೆಸಿದ ಸಂದರ್ಭದಲ್ಲಿ ಹಿಂಸೆ, ಪ್ರತಿಹಿಂಸೆ, ಗೋಲಿಬಾರ್ ಎಲ್ಲವೂ ಸಾಂಗವಾಗಿ ನಡೆದವು. ಮಿಲ್ಲು ಕಾರ್ಖಾನೆಗಳ ಮಾಲೀಕರ ಅವರ ಹತ್ತಿರದ ಅಧಿಕಾರಿಗಳ ಕೊಲೆಗಳು ನಡೆದು ಹೋದವು. ಬಂಡವಾಳಶಾಹಿಗಳು ದಬ್ಬಾಳಿಕೆಯನ್ನು ಮುಂದುವರೆಸಲು ಇನ್ನು ಸಾಧ್ಯವಿಲ್ಲವೆಂದು ಅರಿತರು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಅನಿವಾರ್ಯತೆ ನಿಧಾನವಾಗಿ ಉಂಟಾಯಿತು. ಬ್ರಿಟಿಷ್ ಸರ್ಕಾರಕ್ಕೂ ಕೂಡ ಮುಂದೆ ಕಾರ್ಮಿಕರ ಹಿತರಕ್ಷಣೆಯ ಕಾಯ್ದೆಗಳನ್ನು ರಚಿಸುವುದು ಅನಿವಾರ್ಯವಾಯಿತು.

ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ಇದ್ದದ್ದರಿಂದ ಅವರನ್ನು ಸಂಘಟಿಸುವುದು ಸುಲಭವಾಯಿತು. ಭಾರತದ ನಾನಾ ಹಳ್ಳಿಗಳಲ್ಲಿ ರೈತರು ಚದುರಿಹೋಗಿದ್ದರಿಂದ ಅವರ ಸಂಘಟನೆ ಯಶಸ್ವಿಯಾಗಲಿಲ್ಲ. ರೈತರ ಶೋಷಣೆ ಮುಂದುವರೆಯಿತು. ಕಮ್ಯುನಿಸ್ಟರು ರೈತರ ಸಂಘಟನೆಗೂ ಕೈ ಹಾಕಿದರಾದರೂ ಅದು ಫಲ ಕೊಡಲಿಲ್ಲ. ಸ್ವಾತಂತ್ರ್ಯ ಪ್ರಾಪ್ತವಾಗುವವರೆಗೂ ರೈತರ ಈ ಬವಣೆ ಮುಂದುವರೆಯಿತು. ಸ್ವಾತಂತ್ರ್ಯ ಪ್ರಾಪ್ತವಾದ ಎಷ್ಟೋ ವರ್ಷಗಳ ನಂತರ ರೈತಸಂಘಗಳು ತಲೆ ಎತ್ತಿದವು. ಅವು ತಮ್ಮ ಇತಿಮಿತಿಯಲ್ಲಿ ರೈತರ ಶೋಷಣೆಯನ್ನು ತಡೆಗಟ್ಟಿದವು. ಈಗ ಪಂಜಾಬ್ ಮತ್ತು ಹರ್ಯಾಣ ರೈತರ ಸಂಘಟನೆಗಳ ಮುಂದಾಳತ್ವದಲ್ಲಿ ರೈತರು ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಡ ತರುವಷ್ಟು ಶಕ್ತಿಯುತವಾದ ಸಂಘಟನೆಯನ್ನು ರೂಪಿಸಿಕೊಂಡಿದ್ದಾರೆ. ಇದು ಒಂದು ವಿಸ್ಮಯಕರವಾದ ಬೆಳವಣಿಗೆ.

ಈಗ ಸರ್ಕಾರ ಈ ಸವಾಲನ್ನು ಎದುರಿಸಬೇಕಾದ ದುಸ್ಥಿತಿಗೆ ತಲುಪಿದೆ. ಸರ್ಕಾರ ಇದನ್ನು ತನ್ನ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದೆ. ಅದ್ದರಿಂದ ಹೋರಾಟಕ್ಕಾಗಿ ಸುಮಾರು 60 ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಈ 30 ಸಾವಿರ ರೈತರನ್ನು tire out ಮಾಡುವುದು ಹೇಗೆ ಎಂದು ಸರ್ಕಾರ ತಂತ್ರ ಹೊಸೆಯುತ್ತಿದೆ. ರೈತ ಸಂಘಟನೆಗೆ ಸರ್ಕಾರದ ಆಲೋಚನೆಯ ಅರಿವಿದೆ. ಈ ಕಾನೂನುಗಳಿಂದ ಇದುವರೆಗೆ ತಾನು ಬೆಳೆದ ಬೆಳೆಗೆ ನಿಖರವಾದ ಆದಾಯ ದೊರೆಯುತ್ತದೆ, ಬೆಂಬಲ ಬೆಲೆ ದೊರೆಯುತ್ತದೆ ಎಂಬ ಭರವಸೆಯನ್ನು ಸರ್ಕಾರ ನೀಡುತ್ತಿದೆ. ಆದರೆ ಸರ್ಕಾರ ಎಲ್ಲಿ ತಮ್ಮನ್ನು ಅದಾನಿ, ಅಂಬಾನಿಗಳ ಅಧೀನರನ್ನಾಗಿ ಮಾಡಿಬಿಡುವುದೋ ಎಂಬ ಭಯ ರೈತರದ್ದು.

ಸರ್ವೋಚ್ಚ ನ್ಯಾಯಾಲಯ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆಯಾದರೂ, ಅಂತಿಮವಾಗಿ ಈ ಮೂರು ಕಾಯ್ದೆಗಳನ್ನು ಅಲ್ಲಲ್ಲಿ ತಿದ್ದುಪಡಿ ಮಾಡಿ ರೈತರು ಇದಕ್ಕೆ ಒಪ್ಪಿಕೊಳ್ಳಬೇಕೆಂದು ತೀರ್ಪುಕೊಡಬಹುದು ಎಂಬ ಭಯ ರೈತ ಸಂಘಟನೆಗಳಿಗೆ ಇದೆ. ಅಷ್ಟೇ ಅಲ್ಲ ಸರ್ಕಾರ ಕೂಡ ರೈತ ಹೋರಾಟದ ತೀವ್ರತೆಯನ್ನು ಅಡಗಿಸಲು ಬೇರೆ ಬೇರೆ ತಂತ್ರಗಳನ್ನು ಹರಿಯಬಿಡಬಹುದು. ಆದರೆ ದೆಹಲಿಯಲ್ಲಿ ಝಾಂಡಾ ಹೂಡಿರುವ ಈ ರೈತ ಸಂಘಟನೆಯವರು ಸರ್ಕಾರದ ನಿಲುವು ಬದಲಾದಂತೆ ಕೂಡಲೇ ಆ ನಿಲುವನ್ನು ಬೆತ್ತಲೆ ಮಾಡುವುದಕ್ಕೆ ಅಷ್ಟೇ ಚಾಕಚಕ್ಯತೆಯನ್ನು ತೋರುತ್ತಾರೆ. ’ರೈತರ ಸಮಸ್ಯೆ ಪರಿಹಾರಕ್ಕೆ ದಾರಿಯನ್ನು ಹುಡುಕಲು ತೊಡಗಿದರೆ, ಈಗಾಗಲೇ ತರಲಾಗಿರುವ CAA ಮುಂತಾದ ಕಾನೂನುಗಳ ವಿಚಾರಕ್ಕೆ ಅದೇ ಮಾನದಂಡವನ್ನು ಉಪಯೋಗಿಸಿ ಎಂದು ಸರ್ಕಾರದ ಮೇಲೆ ಒತ್ತಡ ಬಂದೇಬರುತ್ತದೆ. ಆ ಭಯವೂ ಸರ್ಕಾರವನ್ನು ಕಾಡುತ್ತಿರಬಹುದು’ ಎಂದು ಹಿಂದೆ ಕೇರಳ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ಕೆ. ಜಯಕುಮಾರ್ ಅಭಿಪ್ರಾಯ ಪಡುತ್ತಾರೆ.

PC : The Week

ರೈತರ ಈ ಚಳವಳಿ ಸೋಲನ್ನು ಒಪ್ಪಿಕೊಳ್ಳುವ ಸಂಭವವೇ ಇಲ್ಲ. ಏಕೆಂದರೆ ಈಗಾಗಲೇ ಈ ರೈತ ಸಂಘಟನೆಗಳ ಮುಖಂಡರು ಭಾರತದ ಎಲ್ಲ ರಾಜ್ಯಗಳಲ್ಲಿರುವ ರೈತ ಸಂಘಟನೆಗಳನ್ನು ಸಂಧಿಸಿ, ಅವನ್ನೂ ಬಲಗೊಳಿಸುವ ಹೋರಾಟಕ್ಕೆ ಅನುಗೊಳಿಸುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಆದ್ದರಿಂದ ಸರ್ಕಾರ ತಮ್ಮ ಪ್ರತಿಷ್ಠೆಯ ನಿಲುವನ್ನು ಸಡಿಲಿಸಿ ರೈತರ ಕೋರಿಕೆಯಾದ ಈ ರೈತ ವಿರೋಧಿ ಶಾಸನಗಳನ್ನು ರದ್ದುಗೊಳಿಸುವುದು ವಿವೇಕಯುತವಾದ ನಿಲುವು.

ಇನ್ನು ಅದಾನಿ, ಅಂಬಾನಿಗಳ ಪಾತ್ರದ ಬಗೆಗೆ ಎರಡು ಮಾತು. ಮೋದಿಯವರು ಅಧಿಕಾರ ಹಿಡಿಯುವ ಮೊದಲು ಇದ್ದ ಸರ್ಕಾರಗಳೂ ಬಂಡವಾಳಶಾಹಿ ಕಾರ್ಪೊರೆಟ್‌ಗಳನ್ನು ಬೆಂಬಲಿಸುತ್ತಲೇ ಇದ್ದರು. ಅಂದಿನ ದಿನಗಳಲ್ಲಿ ಟಾಟಾ, ಬಿರ್ಲಾಗಳ ಹಾವಳಿಯ ಬಗೆಗೆ ಬಹಳ ಕೇಳಿಬರುತ್ತಿತ್ತು, ಆದರೆ ಇಂದಿನ ಅದಾನಿ, ಅಂಬಾನಿಗಳಂತೆ ಸರ್ಕಾರದೊಡನೆ ಹೆಣೆದುಕೊಳ್ಳಲು ಆಗಿನ ಸರ್ಕಾರಗಳು ಅವಕಾಶ ಕಲ್ಪಿಸುತ್ತಿರಲಿಲ್ಲ. ದೊಡ್ಡ ದೊಡ್ಡ ಕಂಟ್ರಾಕ್ಟುಗಳನ್ನು ಅವರ ಪಾಲಾಗಲು ಸರ್ಕಾರ ನಡೆಸುವವರು ನೆರವಾಗುತ್ತಿದ್ದರು. ಆದರೆ ಅವರ ತೆಕ್ಕೆಗೆ ಸರ್ಕಾರ ಎಂದೂ ಬಿದ್ದದ್ದಿಲ್ಲ.

ರೈತರ ಈ ಹೋರಾಟ 2024ರ ಪಾರ್ಲಿಮೆಂಟ್ ಚುನಾವಣೆವರೆಗೂ ನಡೆಯುತ್ತದೆ ಎಂದು ದೆಹಲಿಯಲ್ಲಿ ಸತ್ಯಾಗ್ರಹ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿ ಹೇಳಿದೆ. ಮೋದಿಯವರು ಮರ್ಯಾದೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೊಂಡುತನಕ್ಕೆ ಬಿದ್ದರೆ, ಸರ್ಕಾರ ಮುಂದೆರಡು ವರ್ಷಗಳ ಕಾಲ ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೋದಿಯವರು ’ನಾನು ತಂದ ಈ ಕಾಯ್ದೆಗಳ ಬಗ್ಗೆ ನಿಮಗೆ ಆತಂಕ ಇದೆ. ಆದ್ದರಿಂದ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿ ರೈತರ ಹೋರಾಟವನ್ನು ಮುಕ್ತಾಯಗೊಳಿಸಿ ಎಂದು ರೈತ ಮುಖಂಡರಿಗೆ ತಿಳಿಸಬೇಕು.

ರೈತ ಸಂಘಟನೆ ಬೆಳೆದು ಸದೃಢವಾಗಿಸಲು ಬಹಳ ಕಾಲಬೇಕಾಯಿತು. ರೈತರು ಬೆಳೆದದ್ದನ್ನು ಸರ್ಕಾರವೇ ಕೊಳ್ಳಬೇಕು. ಈಗ ನಾವು ಮಧ್ಯವರ್ತಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದೇವೆ. ಈ ಮಿಡಲ್‌ಮ್ಯಾನ್ ಮತ್ತು ಸಗಟು ವರ್ತಕರು ನಮ್ಮನ್ನು ಅಡಕತ್ತರಿಯಲ್ಲಿ ಸಿಕ್ಕಿಸಿಕೊಂಡು ಅಪಾರವಾಗಿ ಲಾಭ ಸಂಪಾದಿಸುತ್ತಿದ್ದಾರೆ. ಬೆಳೆದ ಬೆಳೆಗೆ ಬೆಂಬಲ ನೀಡಿ ರೈತರಿಗಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಸರ್ಕಾರ ನೆರವಿಗೆ ಬರಬೇಕು ಆದರೆ ಈಗ ರೈತ ವಿರೋಧಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ.

ಬಂಡವಾಳಶಾಹಿ ಗ್ಯಾಂಗ್‌ನವರು ಈಗಾಗಲೇ ಆಹಾರ ಧಾನ್ಯಗಳನ್ನು ದೋಚಲು 53 ವ್ಯವಸಾಯಾಧಾರಿತ ತಳಹದಿಯ ಕಂಪನಿಗಳನ್ನು ರಿಜಿಸ್ಟರ್ ಮಾಡಿದ್ದಾರೆ. ರೈತರ ಸುಲಿಗೆ ಯಾನಕ್ಕೆ ಸಕಲ ಸಿದ್ಧತೆಯೂ ಆಗಿದೆ. ಕಾನೂನನ್ನು ನುಗ್ಗಿಸುವುದು ಮಾತ್ರ ಉಳಿದಿತ್ತು. ಎಚ್ಚೆತ್ತ ಪಂಜಾಬ್ ಮತ್ತು ಹರ್ಯಾಣ ರೈತರ ಮುಂದಾಳತ್ವದಲ್ಲಿ ದೇಶದ ರೈತರೆಲ್ಲ ಒಗ್ಗೂಡಿ ಸಕಾಲದಲ್ಲಿ ಆಂದೋಲನ ಆರಂಭಿಸಿ ಈ ಅನಾಹುತವನ್ನು ತಡೆ ಹಿಡಿದಿದ್ದಾರೆ.


ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...