Homeಅಂಕಣಗಳುಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

ಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

- Advertisement -
- Advertisement -

ಚುನಾವಣಾ ಆಯೋಗ ಪೋಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲವೂ ಚುನಾವಣಾ ಭ್ರಷ್ಟಾಚಾರ ತಡೆಯುವುದರಲ್ಲಿ ಸೋತಿವೆ. ಇಲ್ಲವೇ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಸಹಾಯಕವಾಗಿವೆ ಎಂದು ಖಚಿತವಾಗಿ ಹೇಳಬಹುದು.

ನಾನು ನನ್ನ ಅನುಭವದಿಂದ ಈ ಗುರುತರ ಆಪಾದನೆಯನ್ನು ಮಾಡುತ್ತಿದ್ದೇನೆ. ದಿವಂಗತ ಪ್ರಭಾಕರ ರೆಡ್ಡಿ ಮತ್ತು ನಾನು ಕೂಡಿಕೊಂಡು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿದ್ದೆವು. ನಾವು ಒಮ್ಮೆ ರಾಜ್ಯದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ನಂತರ ಒಂದು ಡಿಮ್ಯಾಂಡ್ ಅವರ ಮುಂದಿಟ್ಟೆವು. ಡಿಮ್ಯಾಂಡ್ ಇದು – ನೀವು ಚುನಾವಣೆ ಸಮಯದಲ್ಲಿ ಇಷ್ಟು ಬ್ಯಾರಲ್ ಮದ್ಯ ಹಿಡಿದೆವು, ಇಷ್ಟು ಕೋಟಿ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿದೆವು, ಸೀರೆ-ಪಂಚೆ ಸಾವಿರ ಗಟ್ಟಲೆ ಹಿಡಿದೆವು, ಚಿನ್ನ-ಬೆಳ್ಳಿ ಸಾಮಾನು ಹಿಡಿದೆವು ಎಂದು ಚುನಾವಣೆ ಮುಗಿಯುವವರೆಗೆ ಪತ್ರಿಕೆಗೆ ವರದಿ ಮಾಡುತ್ತೀರಿ. ಆದರೆ ಮುಂದೆ ಹಿಡಿದ ಹಣ, ಮದ್ಯ, ಜವಳಿ, ಚಿನ್ನ-ಬೆಳ್ಳಿ ಸಾಮಾನುಗಳು ಏನಾದವು? ಎಲ್ಲಿ ಹೋದವು, ಹಿಡಿದವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದಿರಾ? ನೀವು ಹಿಡಿದವರಲ್ಲಿ ಎಷ್ಟು ಜನಕ್ಕೆ ಏನು ಶಿಕ್ಷೆಯಾಗಿದೆ? ಯಾವುದನ್ನೂ ನೀವು ಪ್ರಕಟಿಸುವುದಿಲ್ಲ. ಹಿಡಿದ ಎಲ್ಲ ಹಣ, ಮದ್ಯ ಇತರ ಸಾಮಗ್ರಿಗಳು ನಿಮ್ಮ ಮನೆಗಳಲ್ಲಿದೆಯೇ? ಖಜಾನೆಯಲ್ಲಿದೆಯೇ? ನ್ಯಾಯಾಲಯದ ವಶದಲ್ಲಿದೆಯೇ? ಪೋಲೀಸ್ ಠಾಣೆಗಳಲ್ಲಿದೆಯೇ? ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರತಿ ಒಂದು ಸಾರಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಈ ಕುರಿತು ಒಂದು ಶ್ವೇತ ಪತ್ರ ಹೊರಡಿಸಿ ಎಂದು ಪಟ್ಟು ಹಿಡಿದೆವು.

ಚುನಾವಣಾ ಕಚೇರಿಯವರು ಚುನಾವಣಾ ಸಂದರ್ಭದಲ್ಲಿ ಹಿಡಿಯಲಾದ ಎಲ್ಲವನ್ನೂ ನಾವು ಪೋಲೀಸರ ವಶಕ್ಕೆ ಕೊಡುತ್ತೇವೆ. ಅವರೇ ಕೇಸುಗಳನ್ನು ಹಾಕುತ್ತಾರೆ. ನಾನು ಎಲ್ಲಾ ಎಸ್‌ಪಿಗಳಿಗೆ ಪತ್ರ ಬರೆದು ನಿಮಗೆ ನೀವು ಕೇಳಿರುವ ಎಲ್ಲಾ ವಿವರಗಳನ್ನು ಕೊಡಲು ತಿಳಿಸುತ್ತೇನೆ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡರು. ನಾಲ್ಕಾರು ತಿಂಗಳ ಮೇಲೆ ನಮಗೆ ಎರಡು ಜಿಲ್ಲೆಗಳ ಎಸ್‌ಪಿಗಳಿಂದ ‘ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಸಂಗಗಳು ನಡೆದೇ ಇಲ್ಲ’ ಎಂಬ ಉತ್ತರ ಬಂದಿತ್ತು. ಉಳಿದ ಜಿಲ್ಲೆಗಳ ಯಾವ ಎಸ್‌ಪಿಯೂ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪೋಲೀಸ್ ವರಿಷ್ಠರ ಕಚೇರಿಗೆ ಹೋಗಿ ಅವರಿಗೆ ಎಸ್‌ಪಿಗಳ ಬೇಜವಬ್ದಾರಿಯುತ ಮೌನದ ಬಗೆಗೆ ತಿಳಿಸಿದೆವು.

ಮಾತುಕತೆಯೆಲ್ಲ ಆದಮೇಲೆ ಅವರು ತಿಳಿಸಿದ್ದು ಹೀಗೆ;- ‘ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ಹಣವನ್ನು ಖಜಾನೆಗೆ ಕಟ್ಟಲಾಗುತ್ತದೆ, ಮದ್ಯವನ್ನು ನಾಶ ಮಾಡಲಾಗುತ್ತದೆ. ಆದರೆ ಇತರ ವಸ್ತುಗಳ ಬಗೆಗೆ ನಮಗೆ ಮಾಹಿತಿ ಇಲ್ಲ’ ಎಂದರು. ಜಪ್ತಿಯಾದ ಉಳಿಕೆ ಸಾಮಾನುಗಳು ಏನಾದವು? ಅದನ್ನು ಹೊಂದಿದ್ದವರ ಮೇಲೆ ಖಟ್ಲೆ ಹೂಡಲಾಯಿತೆ? ಅವರಿಗೆ ಶಿಕ್ಷೆ ಆಯಿತೆ? ಅವರು ಯಾವ ಅಭ್ಯರ್ಥಿಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದರು? ಅಭ್ಯರ್ಥಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತೆ? ಅವರಿಗಾದ ಶಿಕ್ಷೆ ಏನು? ಇದರ ಮಾಹಿತಿಯನ್ನು ಯಾರೂ ಒದಗಿಸಲಿಲ್ಲ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಯಾವತ್ತೂ ನಡೆಯುವ ಪ್ರಹಸನ ಇದು. ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ನಡೆಯುವ ದುರ್ವ್ಯವಹಾರಗಳನ್ನು ತಡೆಗಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಚುನಾವಣಾ ಆಯೋಗಕ್ಕೆ, ಪೋಲಿಸರಿಗೆ, ಚುನಾವಣಾಧಿಕಾರಿಗಳಿಗೆ ನಿಜವಾಗಿ ಚುನಾವಣೆಯನ್ನು ಪರಿಶುದ್ಧಗೊಳಿಸಬೇಕೆಂಬ ಕಾತರವಿದ್ದಿದ್ದರೆ ಅವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರಲಿಲ್ಲ. ಚುನಾವಣೆಯನ್ನು ಸುಧಾರಿಸಬೇಕೆಂಬ ಉತ್ಕಟೇಚ್ಛೆ ಇವರಿಗೆಲ್ಲ ಇದ್ದಿದ್ದರೆ ಈ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರು ಆದ್ಯತೆ ನೀಡುತ್ತಿದ್ದರು. ಅವರೆಲ್ಲ ಕಾಟಾಚಾರಕ್ಕೆ, ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಕಾಟಾಚಾರದ ತಪಾಸಣೆ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಹಾಗೂ ಪೋಲೀಸರ ಬೇಜವಾಬ್ದಾರಿತನ ಒಂದು ವರವಾಗಿ ಪರಿಣಮಿಸಿದೆ.

ನಾನು ಈ ಬಗೆಗೆ ಚುನಾವಣಾ ಆಯೋಗಕ್ಕೆ, ಒಂದು ಪತ್ರ ಬರೆದಿದ್ದೆ. ಅವರು ಆ ಪತ್ರಕ್ಕೆ ಉತ್ತರ ನೀಡುವ ಸೌಜನ್ಯವನ್ನು ತೋರಲಿಲ್ಲ.

ಚುನಾವಣಾ ಪದ್ದತಿಯಲ್ಲಿ ರೂಢಮೂಲ ಬದಲಾವಣೆಗಳನ್ನು ತರಬೇಕೆಂದು ನ್ಯಾ.ತಾರ್ಕುಂಡೆಯವರು ಮೊದಲುಗೊಂಡು ನೂರಾರು ಮಂದಿ ಸಲಹೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ಚುನಾವಣಾ ಆಯೋಗಕ್ಕೂ ಬೇಕಾಗಿಲ್ಲ, ಸರ್ಕಾರಕ್ಕೂ ಬೇಕಾಗಿಲ್ಲ. ಪಾರ್ಲಿಮೆಂಟ್ ಸದಸ್ಯರಿಗೆ ಈ ಸುಧಾರಣೆ ಆದರೆ ತಮಗೆ ಅಸ್ತಿತ್ವವಿಲ್ಲದೆ ಹೋಗುವುದೆಂಬ ಭಯವಿರುವುದರಿಂದ ಅವರು ಮೌನವನ್ನವಲಂಬಿಸುತ್ತಾರೆ.

ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈಗ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಚುನಾವಣೆಯ ಅನೇಕ ಅಕ್ರಮಗಳನ್ನು ತಡೆದರು. ಪಾರ್ಲಿಮೆಂಟ್ ಸದಸ್ಯರಿಗೆ ಸರ್ಕಾರಗಳಿಗೆ ನಡುಕ ಹುಟ್ಟಿಸಿದ್ದರು. ಶೇಷನ್‌ರವರಾದ ಮೇಲೆ ಅಧಿಕಾರಕ್ಕೆ ಬಂದ ಯಾವ ಚುನಾವಣಾ ಆಯೋಗದ ಸದಸ್ಯರಿಗೂ ಶೇಷನ್‌ರವರ ಗಟ್ಸ್ ಇಲ್ಲವಾದ್ದರಿಂದ ಬದಲಾಗಿದ್ದ ಚುನಾವಣಾ ಪದ್ಧತಿ, ರಿವರ್ಸ್ಗೇರ್ ಹೊಡೆಯಿತು. ಅಪ್ಪ ಹಾಕಿದ ಆಲದಮರಕ್ಕೇ ನೇಣು ಹಾಕಿಕೊಳ್ಳುತ್ತಿದ್ದಾರೆ, ಶೇಷನ್ ನಂತರ ಬಂದ ಚುನಾವಣಾ ಆಯೋಗದ ಸದಸ್ಯರು.

ಸರ್ಕಾರ ನಡೆಸುವವರು ಯಾವ ಪಕ್ಷದವರಾದರೂ ಸರಿಯೇ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಮಾತನ್ನು ಕೇಳುವ ಎಸ್‌ಪಿಗಳನ್ನು, ಜಿಲ್ಲಾಧಿಕಾರಿಗಳನ್ನು ತಮಗೆ ಬೇಕಾದ ಜಿಲ್ಲೆಗೆ ವರ್ಗಾಯಿಸುತ್ತಾರೆ. ಮುಖ್ಯವಾಗಿ ಎಸ್‌ಪಿಯ ಜವಾಬ್ದಾರಿ ಅವರ ಅಧೀನದ ಎಲ್ಲಾ ಠಾಣೆಗಳಿಗೂ ಫರ್ಮಾನು ನೀಡುವುದು. ಇಷ್ಟನೇ ನಂಬರ್ ಕಾರು ಅಥವಾ ಟ್ಯಾಕ್ಸಿ ನಮ್ಮ ಜಿಲ್ಲೆಗೆ ಬಂದರೆ ಅದರ ತಂಟೆಗೆ ಹೋಗಬಾರದು. ಚುನಾವಣೆ ಸಮಯದಲ್ಲಿ ಅವರು ಹಣ ತರಲಿ, ಏನೇ ತರಲಿ ಅದರ ತನಿಖೆ ಮಾಡಬಾರದು.

ಟ್ಯಾಕ್ಸಿಯಲ್ಲಿ ಮೈಸೂರಿಗೆ ಹೋಗುವಾಗ ಆ ಟ್ಯಾಕ್ಸಿ ಡ್ರೈವರ್ ತನ್ನ ಘನಂದಾರಿ ಕೆಲಸ ಕುರಿತು ನನಗೆ ಹೇಳಿದ ನನ್ನ ಹತ್ತಿರ ಹಣ ಕೊಟ್ಟು ಕಳಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲೂ ನನ್ನನ್ನು ತಡೆದು ಕಾರು ತಪಾಸಣೆ ಮಾಡುವ ಕೆಲಸ ನಡೆಯುವುದಿಲ್ಲ. ಅಲ್ಲಿಗೆ ಚುನಾವಣೆಗೆ ಸ್ವಲ್ಪ ಮೊದಲು ವರ್ಗಾವಣೆಯಾಗಿರುವಾಗ ಎಸ್‌ಪಿ ಎಲ್ಲಾ ಠಾಣೆಗಳಿಗೂ ನನ್ನ ಟ್ಯಾಕ್ಸಿ ಹಿಡಿಯದಂತೆ ತಾಕೀತು ಮಾಡಿರುತ್ತಾರೆ. ನಾನು ಆ ಸಂದರ್ಭದಲ್ಲಿ ನಾಲ್ಕಾರು ಸಲ ಜಿಲ್ಲಾ ಕೇಂದ್ರಗಳಿಗೆ ಹಣ ತೆಗೆದುಕೊಂಡು ಹೋಗಿ ತಲುಪಿಸಬೇಕಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿದೆ.

ಈ ಲೇಖನ ಬರೆದ ಉದ್ದೇಶ ಇಷ್ಟೇ;- ಪ್ರತಿ ಒಂದು ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷದ ಒಳಗೆ ಚುನಾವಣಾ ಆಯೋಗ ಒಂದು ಶ್ವೇತ ಪತ್ರ ಹೊರಡಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆ ಶ್ವೇತ ಪತ್ರದಲ್ಲಿ ಆ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಆಗಿರುವ ಹಣಕಾಸಿನ ಇತರೆ ಸಾಮಗ್ರಿಗಳ ಸಾಗಾಣಿಕೆಯ ದಂಧೆಯಲ್ಲಿ ಸಿಕ್ಕಿಬಿದ್ದವರು ಯಾರು? ಯಾವ ಅಭ್ಯರ್ಥಿಗಾಗಿ ಆ ಹಣ ಸಾಗಾಣಿಕೆಯಾಯಿತು. ಅವರಿಗೆ ಶಿಕ್ಷೆ ಆಯಿತೇ ಮುಂತಾದ ವಿವರಗಳನ್ನು ಪ್ರಕಟಿಸಬೇಕು. ಮತದಾರರಿಗೆ ಇದು ಗೊತ್ತಾದರೆ ಅವರು ಜಾಗೃತರಾಗುತ್ತಾರೆ. ಚುನಾವಣೆಗೆ ನಿಲ್ಲುವ ಕ್ರಿಮಿನಲ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ. ಚುನಾವಣಾ ಆಯೋಗ ಇದರ ಜೊತೆ ಜೊತೆಗೇ ಚುನಾವಣಾ ಪದ್ಧತಿಯಲ್ಲಿ ರೂಢಮೂಲ ಬದಲಾವಣೆ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....