Homeಮುಖಪುಟ26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

- Advertisement -
- Advertisement -

ದೆಹಲಿಯಲ್ಲಿ ಮತ್ತು ಅದರ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಭರ್ಜರಿಯಾಗಿ ಹಾಕಲಾಗುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಡಿವೈಡರ್ ಮೇಲೆ ಕುಳಿತ ರೈತಾಪಿಯೊಬ್ಬರ ಜೊತೆ ನಡೆದ ಮಾತುಕತೆಯ ಮೂಲಕ ಒಂದು ಅರ್ಥಪೂರ್ಣ ಪ್ರತ್ಯಕ್ಷ ವರದಿಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.

ಘಾಜಿಪುರ ಗಡಿಯಲ್ಲಿ ಶನಿವಾರ ಒಂದು ಪ್ರತಿಭಟನೆಯ ಬಲೂನನ್ನು ಹಾರಿಸಲಾಯಿತು. ಆಕಾಶದತ್ತ ಹಾರಿದ ಈ ಬಲೂನನ್ನು ಪೂರ್ವ ಮತ್ತು ಪಶ್ಚಿಮದ ಕಡೆಯಿಂದ ಹಲವು ಕಿಲೋಮೀಟರ್‌ಗಳ ದೂರದಿಂದ ನೋಡಬಹುದಿತ್ತು. ಪಶ್ಚಿಮಕ್ಕೆ ದೇಶದ ರಾಜಧಾನಿ ದೆಹಲಿಯಿದೆ, ಪೂರ್ವದಲ್ಲಿ ಉತ್ತರ ಪ್ರದೇಶ ರಾಜ್ಯವಿದೆ.
ಬಲೂನ್ ಹಾರಿಸುವ ಈ ಸಂದರ್ಭದಲ್ಲಿ ರೈತ ಮತ್ತು ಕೃಷಿ ಕಾರ್ಮಿಕ ರಾಮ್ ಚರಣ್ ತ್ರಿಪಾಠಿಯವರು, ದಕ್ಷಿಣ ಏಷ್ಯಾದಲ್ಲೇ ದೊಡ್ಡದಾದ ಎಕ್ಸ್‌ಪ್ರೆಸ್‌ವೇನ ವಿಭಜಕದ (ಡಿವೈಡರ್) ಮೇಲೆ ಕುಳಿತಿದ್ದರು. ಅವರು ಶನಿವಾರ ಸಂಜೆ ದಿ ಟೆಲಿಗ್ರಾಫ್ ಆನ್‌ಲೈನ್ ಜೊತೆ ಮಾತಿಗೆ ಸಿಕ್ಕು, ನವೆಂಬರ್ 2, 2020 ರಂದು ತಮ್ಮ ಮಗನನ್ನು ಕಳೆದುಕೊಂಡ ವಿಷಯ ತಿಳಿಸಿದರು.

ರಾಮ್ ಚರಣ್ ತ್ರಿಪಾಠಿ ಅವರಿಗೆ 78 ವರ್ಷ. ಹವಾಮಾನ ವೈಪರೀತ್ಯಕ್ಕೆ ನಲುಗಿದ ಮುಖ, ಕೆಂಪು ಪೇಟ, ಚುರುಕಾದ ಬೂದು ಮೀಸೆಯ ಅಜ್ಜ ಹೇಳಿದರು: ನನಗೆ ಮೂವರು ಗಂಡು ಮಕ್ಕಳಿದ್ದರು. ಈಗ ನನಗೆ ಇಬ್ಬರು ಮಾತ್ರ ಉಳಿದರು. ನವೆಂಬರ್ 2 ರಂದು ಒಬ್ಬ ಮಗ ಸುಕೇಶ್ ನಿಧನರಾದರು. ನವೆಂಬರ್ 28 ರಿಂದ ನಾನು ಇಲ್ಲಿದ್ದೇನೆ. ನನ್ನಲ್ಲಿ ಒಂದೂವರೆ ಎಕರೆ ಭೂಮಿ ಇದೆ, ಅದನ್ನು ಮೂವರ ನಡುವೆ ಹಂಚಬೇಕಿತ್ತು……’
ಬೆಳಕು ಚೆಲ್ಲುವ ಒಂದು ಟ್ರಾಕ್ಟರ್ ಮತ್ತು ಧ್ವನಿವರ್ಧಕಗಳ ಮೂಲಕ ಪಂಜಾಬಿ ರ್‍ಯಾಪ್ ಹರಿದು ಬಂದ ಕಾರಣಕ್ಕೆ ಸಂಭಾಷಣೆಗೆ ಅಡಚಣೆಯಾಗಿತು. ಯುಪಿ ಕಡೆಯಿಂದ ಬಂದ ಈ ಟ್ರ್ಯಾಕ್ಟರ್ ಫ್ಲೈ ಓವರ್ ಏರುತ್ತಿತ್ತು. ಗಾಜಿಪುರದ ಪ್ರತಿಭಟನಾ ಸ್ಥಳದ ಮೂಲಕ ಟ್ರ್ಯಾಕ್ಟರ್ ಹಾದುಹೋಗಿತು. ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ, ರೈತರು ನೇತಾಜಿಯನ್ನು ಅವರ 125 ನೇ ಜನ್ಮ ದಿನಾಚರಣೆಯಂದು ನೆನಪಿಸಿಕೊಂಡರು.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ನಾನು ಟ್ರಾಕ್ಟರ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ನಾನು ಮೊದಲ ಬಾರಿಗೆ ಇಲ್ಲಿ ನಡಕೊಂಡೇ ಬಂದಿದ್ದೇನೆ ಎಂದು ರಾಮ್ ಚರಣ್ ಹೇಳುತ್ತಾರೆ. ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗಿನಿಂದ ಎರಡು ಬಾರಿ ಮನೆಗೆ ಮರಳಿದ್ದೇನೆ. ’ಖೇತಿ ಭಿ ತೋ ಕರ್ನಿ ಹೈನಾ?’ ಎನ್ನುವ ಅವರಿಗೆ ಈ ವಯಸ್ಸಿನಲ್ಲೂ ಕೃಷಿ ಮಾಡುವುದು ಹೆಮ್ಮೆಯ ವಿಷಯ.

ಬೆಳಗುತ್ತಿರುವ ದೀಪಗಳು ಮತ್ತು ಸ್ಟಿರಿಯೊಫೋನಿಕ್ ಸಂಗೀತವನ್ನು ಹೊಂದಿರುವ ಟ್ರ್ಯಾಕ್ಟರ್ ರಾಮ್ ಚರಣ್ ಬಳಿ ಇಲ್ಲ. ರಾಮ್ ಚರಣ್ ತನ್ನ ಜಮೀನಿನಿಂದ 20 ಕ್ವಿಂಟಾಲ್ ಗೋಧಿಯನ್ನು ಕೊಯ್ಲು ಮಾಡುತ್ತಾರೆ. ಕಳೆದ ವರ್ಷ, ಸರ್ಕಾರ ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 1,868 ರೂ. ಅವರು ಉಳುಮೆಗೆ ಟ್ರ್ಯಾಕ್ಟರ್ ಅನ್ನು ಬಾಡಿಗೆಗೆ ಪಡೆಯಬೇಕು, ನೀರಾವರಿ ಮಾಡಲು ನೆರೆಯವರಿಂದ ಪಂಪ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಅವರ ಭೂಮಿ ಒಟ್ಟು 10 ಬಿಘಾ ಅಷ್ಟೇ. ಅದಕ್ಕೆ ಪಂಪ್ ಬಾಡಿಗೆಗೆಂದೇ 1,500 ರೂ. ಖರ್ಚು ಮಾಡಬೇಕು. ಒಂದು ಹಂಗಾಮಿನಲ್ಲಿ ಕನಿಷ್ಟ ನಾಲ್ಕು ಬಾರಿ ಇದನ್ನು ಮಾಡಬೇಕು. ಕಳೆದ ಕೆಲವು ವಾರಗಳಲ್ಲಿ ಮಳೆ ಬಂದಿದ್ದು ಅವರಿಗೆ ಒಂದು ವರವಾಗಿತ್ತು. ಅದು ರಾಮ್‌ಚರಣ್‌ಗೆ ಒಂದಿಷ್ಟು ಉಳಿತಾಯ ಮಾಡಿತು.

ಇದಲ್ಲದೆ, ಗೊಬ್ಬರ ಮತ್ತು ಕೀಟನಾಶಕಗಳಿಗೂ ಅವರು ಪಾವತಿಸಬೇಕಾಗುತ್ತದೆ. ಸದ್ಯ ಯುಪಿ-ದೆಹಲಿ ಗಡಿಯಲ್ಲಿರುವ ಈ ಹಿರಿಯ ರೈತ 20 ಕ್ವಿಂಟಾಲ್ ಧಾನ್ಯವನ್ನು (ಗೋಧಿ) ಕೊಯ್ಯಲು ಸುಮಾರು 31,000 ರೂ. ಖರ್ಚು ಮಾಡಿದರು. ಆದರೆ ಸರ್ಕಾರವು ಕ್ವಿಂಟಲ್‌ಗೆ 1,868 ರೂ. ಎಂಎಸ್‌ಪಿ ಖಾತ್ರಿಯನ್ನು ನೀಡಲೇ ಇಲ್ಲ, ಅದನ್ನು 125 ರೂ. ಕಡಿಮೆ ಮಾಡಿದ ಕಾರಣಕ್ಕೆ ರಾಮ್‌ಚರಣ್ ಅವರಿಗೆ ಸಿಕ್ಕಿದ್ದು ಕೇವಲ 35,000 ರೂ!

ಇದನ್ನೂ ಓದಿ: ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ಹೇಳಿ: ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ!

“ನನ್ನ ಜೀವನದಲ್ಲಿ, ನಾನು ಎಂದಿಗೂ ಸಾಲದಿಂದ ಮುಕ್ತನಾಗಿಲ್ಲ” ಎಂದು ಅವರು ಹೇಳುತ್ತಾರೆ.
ಬ್ರಾಹ್ಮಣರು ಸಹ ಹಸಿವಿನ ನೋವನ್ನು ಅನುಭವಿಸುತ್ತಾರೆ. ರಾಮ್ ಚರಣ್ ತ್ರಿಪಾಠಿ ಬ್ರಾಹ್ಮಣ, ಹಿಂದೂ ಜಾತಿ ಶ್ರೇಣಿಯಲ್ಲಿನ ಗಣ್ಯ ಗುಂಪಿನವರು. ಅಮ್ರೋಹಾ ಜಿಲ್ಲೆಯ ಗೋಸಾಯಿ ಬ್ಲಾಕ್‌ನಲ್ಲಿರುವ ಅವರ ಗ್ರಾಮ ಶೈಲೇಂದ್ರನಗರವು ಸಮೃದ್ಧ ಜಾಟ್ ಮತ್ತು ಬಡ ರೈತರ ಮಿಶ್ರಣವಾಗಿದೆ. ವರ್ಷದ ಉಳಿದ ಭಾಗವನ್ನು ಸರಿದೂಗಿಸಲು, ರಾಮ್‌ಚರಣ್ ದೊಡ್ಡ ರೈತರ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ದಿನಕ್ಕೆ 300 ರೂ. ವೇತನ ಪಡೆಯುತ್ತಾರೆ.

“ಪೂರ್ವ ಯುಪಿ ಮತ್ತು ಬಿಹಾರದ ಜನರು ಇಲ್ಲಿಗೆ (ಪ್ರತಿಭಟನಾ ಸ್ಥಳಕ್ಕೆ) ದೊಡ್ಡ ಪ್ರಮಾಣದಲ್ಲಿ ಬರುತ್ತಿಲ್ಲ. ರೈಲು ಸಂಪರ್ಕ ಈಗ ಕಡಿಮೆಯಾಗಿದೆ, ಅದಕ್ಕೂ ಮುಖ್ಯವಾಗಿ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂ. ವಿರಳವಾಗಿ ಸಿಗುತ್ತಿದೆ ಎಂಬುದು ಇದಕ್ಕೆ ಕಾರಣ ಎಂದು ರಾಮ್ ಚರಣ್ ವಿವರಿಸುತ್ತಾರೆ.

ಅವರು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನ ವಿಭಜಕದ ಮೇಲೆ ಕುಳಿತಿದ್ದರು. ತಮ್ಮ ಬಲಕ್ಕೆ ಕೈ ಮಾಡಿ ತೋರಿಸಿದ ಅವರು, ವಹಾಂ ಜಾಯಿಯೆ, ಎಂದು ದೆಹಲಿಯತ್ತ ಕೈ ಮಾಡಿದರು. ದೇಖಿಯೆ ದಿಲ್ಲಿ ಸರ್ಕಾರ್ (ಕೇಂದ್ರ ಸರ್ಕಾರ)ಕ್ಯಾ ಕರ್ ರಹಿ ಹೈಂ (ಹೋಗಿ ದೆಹಲಿಯ ಸರ್ಕಾರ ಏನು ಮಾಡುತ್ತಿದೆ ಎಂದು ನೋಡಿ) ಎಂದು ರಾಮಚರಣ್ ಹೇಳಿದರು.

ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರ ಅನುಮತಿ

ದೆಹಲಿಯಲ್ಲಿ ಕುಳಿತ ಭಾರತ ಸರ್ಕಾರ ಮಾಡುತ್ತಿರುವುದೇನು?

ಜನವರಿ 23 ರ ಸಂಜೆ ನೇತಾಜಿ ಸುಭಾಷ್‌ಚಂದ್ರರನ್ನು ರೈತರು ಸ್ಮರಿಸುತ್ತಿದ್ದರು. ಉತ್ತರಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಫ್ಲೈ ಓವರ್‌ನಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದರು. ದೆಹಲಿ ಪೊಲೀಸರು ಇದನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮಾಡುತ್ತಿದ್ದಾರೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದನ್ನು ಮಾಡುತ್ತಿಲ್ಲ.

ಇಲ್ಲಿರುವ ಬ್ಯಾರಿಕೇಡ್ 1,400 ಪೇಸ್ ಅಗಲವಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಕಾಂಕ್ರೀಟ್ ಬ್ಲಾಕ್‌ಗಳಿಂದ ನಿರ್ಮಾಣ ಆಗಿದ್ದು, ದೆಹಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಈ “ಕಲ್ಲಿನ ಕಂಬಗಳ” ಫೋಟೊಗಳನ್ನು ತೆಗೆಯಲು ವರದಿಗಾರನಿಗೆ ಬಿಡಲಿಲ್ಲ. ಅವು ವಾಸ್ತವವಾಗಿ ಕಾಂಕ್ರೀಟ್ ಬ್ಲಾಕ್‌ಗಳೇ ಆಗಿವೆ. ಎಕ್ಸ್‌ಪ್ರೆಸ್‌ವೇ ಲೇನ್‌ಗಳನ್ನು ಸರ್ವಿಸ್ ರೋಡ್‌ಗಳಿಂದ ಬೇರ್ಪಡಿಸುವುದು ಅವರ ಉದ್ದೇಶ. ಪ್ರತಿಯೊಂದು ಕಾಂಕ್ರೀಟ್ ಬ್ಲಾಕ್ ನಾಲ್ಕು ಅಡಿ ಎತ್ತರ ಮತ್ತು ಐದು ಅಡಿ ಉದ್ದವಿದೆ.. ಅವುಗಳನ್ನು ರಸ್ತೆಗೆ ಅಡ್ಡಲಾಗಿ ಇಡಲಾಗುತ್ತಿದೆ.

ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ದೇಶದ ರಾಜಧಾನಿ ತನ್ನ ರಕ್ಷಣೆ ಮಾಡಿಕೊಳ್ಳುತ್ತಿದೆ!

ಫ್ಲೈ ಓವರ್ ಅಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮುಂತಾದವರಿದ್ದಾರೆ. ಭಾರತದ ಗಣರಾಜ್ಯೋತ್ಸವದ ಜನವರಿ 26 ರಂದು ಕಿಸಾನ್ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ ಎಂದು ಬಿಕೆಯುನ ಪ್ರತ್ಯೇಕ ಬಣವನ್ನು ಮುನ್ನಡೆಸುವ ವಕೀಲ ಭಾನು ಪ್ರತಾಪ್ ಸಿಂಗ್ ಹೇಳುತ್ತಾರೆ. ’ಆತ ಸೂಟ್-ಬೂಟ್ ಮತ್ತು ಟೈ ಧರಿಸುತ್ತಾನೆ. ಕ್ಯಾಮೆರಾಗಳು ಮತ್ತು ಮೈಕ್ರೊಫೋನ್‌ಗಳ ಎದುರು ಮಿಂಚಲು ಆದ್ಯತೆ ನೀಡುತ್ತಾನೆ’ ಎಂದು ಅವರು ದೇಶದ ’ಗಣ್ಯ’ ವ್ಯಕ್ತಿಯನ್ನು ಟೀಕಿಸಿದರು.

ಫ್ಲೈಓವರ್ ಅಡಿಯಲ್ಲಿ, ಸರ್ವಿಸ್ ರಸ್ತೆಗಳಲ್ಲಿ ಪಕೋಡಗಳನ್ನು ತಯಾರಿಸಲಾಗುತ್ತಿದೆ. ’ಮೋದಿಜಿ, ಇಸಿ ಕೊ ಜಿಡಿಪಿ ಗ್ರೋಥ್ ಮಾಂತೆ ಹೈ’ (ಮೋದಿ ಇದನ್ನು ಆರ್ಥಿಕ ಬೆಳವಣಿಗೆ ಅಂದುಕೊಳ್ಳುತ್ತಾರೆ) ಎಂಬ ಭಿತ್ತಿಪತ್ರವೂ ಇಲ್ಲಿದೆ.  ಕಳೆದ ವಾರ ಮತ್ತು ಈಗಿನ ನಡುವಿನ ಅವಧಿಯಲ್ಲಿ, ಯುಪಿ-ದೆಹಲಿ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನಾ ಶಿಬಿರದ ಗಾತ್ರವು ದ್ವಿಗುಣಗೊಂಡಿದೆ. ಅಂಗಡಿಯೊಂದರ ಮುಂಭಾಗದಲ್ಲಿ ಹಳದಿ ಟೆಂಟ್‌ನ ಅಂಚಿನಲ್ಲಿ ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ, ಅಲ್ಲಿ 2 ರೂ. ದಾನ ಮಾಡಿ ಎಲ್ಲವನ್ನೂ ಪಡೆಯಿರಿ ಎಂಬ ಪೋಸ್ಟರ್ ಇದೆ, ಅದು ಸಾಧ್ಯವಾಗದವರು ತಮಗೆ ಬೇಕಾದುದನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

ಮೂಲ: ಸುಜನ್ ದತ್ತಾ (ದಿ ಟೆಲಿಗ್ರಾಫ್ ಆನ್‌ಲೈನ್)
ಅನುವಾದ: ಮಲ್ಲನಗೌಡರ್‌ ಪಿ.ಕೆ.

ಇದನ್ನೂ ಓದಿ: ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ ರಾಜ್ಯಾದ್ಯಂತ ರಸ್ತೆ ಬಂದ್: ಬಡಗಲಪುರ ನಾಗೇಂದ್ರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....