Homeಮುಖಪುಟ26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

- Advertisement -
- Advertisement -

ದೆಹಲಿಯಲ್ಲಿ ಮತ್ತು ಅದರ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಭರ್ಜರಿಯಾಗಿ ಹಾಕಲಾಗುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಡಿವೈಡರ್ ಮೇಲೆ ಕುಳಿತ ರೈತಾಪಿಯೊಬ್ಬರ ಜೊತೆ ನಡೆದ ಮಾತುಕತೆಯ ಮೂಲಕ ಒಂದು ಅರ್ಥಪೂರ್ಣ ಪ್ರತ್ಯಕ್ಷ ವರದಿಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.

ಘಾಜಿಪುರ ಗಡಿಯಲ್ಲಿ ಶನಿವಾರ ಒಂದು ಪ್ರತಿಭಟನೆಯ ಬಲೂನನ್ನು ಹಾರಿಸಲಾಯಿತು. ಆಕಾಶದತ್ತ ಹಾರಿದ ಈ ಬಲೂನನ್ನು ಪೂರ್ವ ಮತ್ತು ಪಶ್ಚಿಮದ ಕಡೆಯಿಂದ ಹಲವು ಕಿಲೋಮೀಟರ್‌ಗಳ ದೂರದಿಂದ ನೋಡಬಹುದಿತ್ತು. ಪಶ್ಚಿಮಕ್ಕೆ ದೇಶದ ರಾಜಧಾನಿ ದೆಹಲಿಯಿದೆ, ಪೂರ್ವದಲ್ಲಿ ಉತ್ತರ ಪ್ರದೇಶ ರಾಜ್ಯವಿದೆ.
ಬಲೂನ್ ಹಾರಿಸುವ ಈ ಸಂದರ್ಭದಲ್ಲಿ ರೈತ ಮತ್ತು ಕೃಷಿ ಕಾರ್ಮಿಕ ರಾಮ್ ಚರಣ್ ತ್ರಿಪಾಠಿಯವರು, ದಕ್ಷಿಣ ಏಷ್ಯಾದಲ್ಲೇ ದೊಡ್ಡದಾದ ಎಕ್ಸ್‌ಪ್ರೆಸ್‌ವೇನ ವಿಭಜಕದ (ಡಿವೈಡರ್) ಮೇಲೆ ಕುಳಿತಿದ್ದರು. ಅವರು ಶನಿವಾರ ಸಂಜೆ ದಿ ಟೆಲಿಗ್ರಾಫ್ ಆನ್‌ಲೈನ್ ಜೊತೆ ಮಾತಿಗೆ ಸಿಕ್ಕು, ನವೆಂಬರ್ 2, 2020 ರಂದು ತಮ್ಮ ಮಗನನ್ನು ಕಳೆದುಕೊಂಡ ವಿಷಯ ತಿಳಿಸಿದರು.

ರಾಮ್ ಚರಣ್ ತ್ರಿಪಾಠಿ ಅವರಿಗೆ 78 ವರ್ಷ. ಹವಾಮಾನ ವೈಪರೀತ್ಯಕ್ಕೆ ನಲುಗಿದ ಮುಖ, ಕೆಂಪು ಪೇಟ, ಚುರುಕಾದ ಬೂದು ಮೀಸೆಯ ಅಜ್ಜ ಹೇಳಿದರು: ನನಗೆ ಮೂವರು ಗಂಡು ಮಕ್ಕಳಿದ್ದರು. ಈಗ ನನಗೆ ಇಬ್ಬರು ಮಾತ್ರ ಉಳಿದರು. ನವೆಂಬರ್ 2 ರಂದು ಒಬ್ಬ ಮಗ ಸುಕೇಶ್ ನಿಧನರಾದರು. ನವೆಂಬರ್ 28 ರಿಂದ ನಾನು ಇಲ್ಲಿದ್ದೇನೆ. ನನ್ನಲ್ಲಿ ಒಂದೂವರೆ ಎಕರೆ ಭೂಮಿ ಇದೆ, ಅದನ್ನು ಮೂವರ ನಡುವೆ ಹಂಚಬೇಕಿತ್ತು……’
ಬೆಳಕು ಚೆಲ್ಲುವ ಒಂದು ಟ್ರಾಕ್ಟರ್ ಮತ್ತು ಧ್ವನಿವರ್ಧಕಗಳ ಮೂಲಕ ಪಂಜಾಬಿ ರ್‍ಯಾಪ್ ಹರಿದು ಬಂದ ಕಾರಣಕ್ಕೆ ಸಂಭಾಷಣೆಗೆ ಅಡಚಣೆಯಾಗಿತು. ಯುಪಿ ಕಡೆಯಿಂದ ಬಂದ ಈ ಟ್ರ್ಯಾಕ್ಟರ್ ಫ್ಲೈ ಓವರ್ ಏರುತ್ತಿತ್ತು. ಗಾಜಿಪುರದ ಪ್ರತಿಭಟನಾ ಸ್ಥಳದ ಮೂಲಕ ಟ್ರ್ಯಾಕ್ಟರ್ ಹಾದುಹೋಗಿತು. ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ, ರೈತರು ನೇತಾಜಿಯನ್ನು ಅವರ 125 ನೇ ಜನ್ಮ ದಿನಾಚರಣೆಯಂದು ನೆನಪಿಸಿಕೊಂಡರು.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ನಾನು ಟ್ರಾಕ್ಟರ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ನಾನು ಮೊದಲ ಬಾರಿಗೆ ಇಲ್ಲಿ ನಡಕೊಂಡೇ ಬಂದಿದ್ದೇನೆ ಎಂದು ರಾಮ್ ಚರಣ್ ಹೇಳುತ್ತಾರೆ. ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗಿನಿಂದ ಎರಡು ಬಾರಿ ಮನೆಗೆ ಮರಳಿದ್ದೇನೆ. ’ಖೇತಿ ಭಿ ತೋ ಕರ್ನಿ ಹೈನಾ?’ ಎನ್ನುವ ಅವರಿಗೆ ಈ ವಯಸ್ಸಿನಲ್ಲೂ ಕೃಷಿ ಮಾಡುವುದು ಹೆಮ್ಮೆಯ ವಿಷಯ.

ಬೆಳಗುತ್ತಿರುವ ದೀಪಗಳು ಮತ್ತು ಸ್ಟಿರಿಯೊಫೋನಿಕ್ ಸಂಗೀತವನ್ನು ಹೊಂದಿರುವ ಟ್ರ್ಯಾಕ್ಟರ್ ರಾಮ್ ಚರಣ್ ಬಳಿ ಇಲ್ಲ. ರಾಮ್ ಚರಣ್ ತನ್ನ ಜಮೀನಿನಿಂದ 20 ಕ್ವಿಂಟಾಲ್ ಗೋಧಿಯನ್ನು ಕೊಯ್ಲು ಮಾಡುತ್ತಾರೆ. ಕಳೆದ ವರ್ಷ, ಸರ್ಕಾರ ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 1,868 ರೂ. ಅವರು ಉಳುಮೆಗೆ ಟ್ರ್ಯಾಕ್ಟರ್ ಅನ್ನು ಬಾಡಿಗೆಗೆ ಪಡೆಯಬೇಕು, ನೀರಾವರಿ ಮಾಡಲು ನೆರೆಯವರಿಂದ ಪಂಪ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಅವರ ಭೂಮಿ ಒಟ್ಟು 10 ಬಿಘಾ ಅಷ್ಟೇ. ಅದಕ್ಕೆ ಪಂಪ್ ಬಾಡಿಗೆಗೆಂದೇ 1,500 ರೂ. ಖರ್ಚು ಮಾಡಬೇಕು. ಒಂದು ಹಂಗಾಮಿನಲ್ಲಿ ಕನಿಷ್ಟ ನಾಲ್ಕು ಬಾರಿ ಇದನ್ನು ಮಾಡಬೇಕು. ಕಳೆದ ಕೆಲವು ವಾರಗಳಲ್ಲಿ ಮಳೆ ಬಂದಿದ್ದು ಅವರಿಗೆ ಒಂದು ವರವಾಗಿತ್ತು. ಅದು ರಾಮ್‌ಚರಣ್‌ಗೆ ಒಂದಿಷ್ಟು ಉಳಿತಾಯ ಮಾಡಿತು.

ಇದಲ್ಲದೆ, ಗೊಬ್ಬರ ಮತ್ತು ಕೀಟನಾಶಕಗಳಿಗೂ ಅವರು ಪಾವತಿಸಬೇಕಾಗುತ್ತದೆ. ಸದ್ಯ ಯುಪಿ-ದೆಹಲಿ ಗಡಿಯಲ್ಲಿರುವ ಈ ಹಿರಿಯ ರೈತ 20 ಕ್ವಿಂಟಾಲ್ ಧಾನ್ಯವನ್ನು (ಗೋಧಿ) ಕೊಯ್ಯಲು ಸುಮಾರು 31,000 ರೂ. ಖರ್ಚು ಮಾಡಿದರು. ಆದರೆ ಸರ್ಕಾರವು ಕ್ವಿಂಟಲ್‌ಗೆ 1,868 ರೂ. ಎಂಎಸ್‌ಪಿ ಖಾತ್ರಿಯನ್ನು ನೀಡಲೇ ಇಲ್ಲ, ಅದನ್ನು 125 ರೂ. ಕಡಿಮೆ ಮಾಡಿದ ಕಾರಣಕ್ಕೆ ರಾಮ್‌ಚರಣ್ ಅವರಿಗೆ ಸಿಕ್ಕಿದ್ದು ಕೇವಲ 35,000 ರೂ!

ಇದನ್ನೂ ಓದಿ: ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ಹೇಳಿ: ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ!

“ನನ್ನ ಜೀವನದಲ್ಲಿ, ನಾನು ಎಂದಿಗೂ ಸಾಲದಿಂದ ಮುಕ್ತನಾಗಿಲ್ಲ” ಎಂದು ಅವರು ಹೇಳುತ್ತಾರೆ.
ಬ್ರಾಹ್ಮಣರು ಸಹ ಹಸಿವಿನ ನೋವನ್ನು ಅನುಭವಿಸುತ್ತಾರೆ. ರಾಮ್ ಚರಣ್ ತ್ರಿಪಾಠಿ ಬ್ರಾಹ್ಮಣ, ಹಿಂದೂ ಜಾತಿ ಶ್ರೇಣಿಯಲ್ಲಿನ ಗಣ್ಯ ಗುಂಪಿನವರು. ಅಮ್ರೋಹಾ ಜಿಲ್ಲೆಯ ಗೋಸಾಯಿ ಬ್ಲಾಕ್‌ನಲ್ಲಿರುವ ಅವರ ಗ್ರಾಮ ಶೈಲೇಂದ್ರನಗರವು ಸಮೃದ್ಧ ಜಾಟ್ ಮತ್ತು ಬಡ ರೈತರ ಮಿಶ್ರಣವಾಗಿದೆ. ವರ್ಷದ ಉಳಿದ ಭಾಗವನ್ನು ಸರಿದೂಗಿಸಲು, ರಾಮ್‌ಚರಣ್ ದೊಡ್ಡ ರೈತರ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ದಿನಕ್ಕೆ 300 ರೂ. ವೇತನ ಪಡೆಯುತ್ತಾರೆ.

“ಪೂರ್ವ ಯುಪಿ ಮತ್ತು ಬಿಹಾರದ ಜನರು ಇಲ್ಲಿಗೆ (ಪ್ರತಿಭಟನಾ ಸ್ಥಳಕ್ಕೆ) ದೊಡ್ಡ ಪ್ರಮಾಣದಲ್ಲಿ ಬರುತ್ತಿಲ್ಲ. ರೈಲು ಸಂಪರ್ಕ ಈಗ ಕಡಿಮೆಯಾಗಿದೆ, ಅದಕ್ಕೂ ಮುಖ್ಯವಾಗಿ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂ. ವಿರಳವಾಗಿ ಸಿಗುತ್ತಿದೆ ಎಂಬುದು ಇದಕ್ಕೆ ಕಾರಣ ಎಂದು ರಾಮ್ ಚರಣ್ ವಿವರಿಸುತ್ತಾರೆ.

ಅವರು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನ ವಿಭಜಕದ ಮೇಲೆ ಕುಳಿತಿದ್ದರು. ತಮ್ಮ ಬಲಕ್ಕೆ ಕೈ ಮಾಡಿ ತೋರಿಸಿದ ಅವರು, ವಹಾಂ ಜಾಯಿಯೆ, ಎಂದು ದೆಹಲಿಯತ್ತ ಕೈ ಮಾಡಿದರು. ದೇಖಿಯೆ ದಿಲ್ಲಿ ಸರ್ಕಾರ್ (ಕೇಂದ್ರ ಸರ್ಕಾರ)ಕ್ಯಾ ಕರ್ ರಹಿ ಹೈಂ (ಹೋಗಿ ದೆಹಲಿಯ ಸರ್ಕಾರ ಏನು ಮಾಡುತ್ತಿದೆ ಎಂದು ನೋಡಿ) ಎಂದು ರಾಮಚರಣ್ ಹೇಳಿದರು.

ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರ ಅನುಮತಿ

ದೆಹಲಿಯಲ್ಲಿ ಕುಳಿತ ಭಾರತ ಸರ್ಕಾರ ಮಾಡುತ್ತಿರುವುದೇನು?

ಜನವರಿ 23 ರ ಸಂಜೆ ನೇತಾಜಿ ಸುಭಾಷ್‌ಚಂದ್ರರನ್ನು ರೈತರು ಸ್ಮರಿಸುತ್ತಿದ್ದರು. ಉತ್ತರಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಫ್ಲೈ ಓವರ್‌ನಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದರು. ದೆಹಲಿ ಪೊಲೀಸರು ಇದನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮಾಡುತ್ತಿದ್ದಾರೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದನ್ನು ಮಾಡುತ್ತಿಲ್ಲ.

ಇಲ್ಲಿರುವ ಬ್ಯಾರಿಕೇಡ್ 1,400 ಪೇಸ್ ಅಗಲವಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಕಾಂಕ್ರೀಟ್ ಬ್ಲಾಕ್‌ಗಳಿಂದ ನಿರ್ಮಾಣ ಆಗಿದ್ದು, ದೆಹಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಈ “ಕಲ್ಲಿನ ಕಂಬಗಳ” ಫೋಟೊಗಳನ್ನು ತೆಗೆಯಲು ವರದಿಗಾರನಿಗೆ ಬಿಡಲಿಲ್ಲ. ಅವು ವಾಸ್ತವವಾಗಿ ಕಾಂಕ್ರೀಟ್ ಬ್ಲಾಕ್‌ಗಳೇ ಆಗಿವೆ. ಎಕ್ಸ್‌ಪ್ರೆಸ್‌ವೇ ಲೇನ್‌ಗಳನ್ನು ಸರ್ವಿಸ್ ರೋಡ್‌ಗಳಿಂದ ಬೇರ್ಪಡಿಸುವುದು ಅವರ ಉದ್ದೇಶ. ಪ್ರತಿಯೊಂದು ಕಾಂಕ್ರೀಟ್ ಬ್ಲಾಕ್ ನಾಲ್ಕು ಅಡಿ ಎತ್ತರ ಮತ್ತು ಐದು ಅಡಿ ಉದ್ದವಿದೆ.. ಅವುಗಳನ್ನು ರಸ್ತೆಗೆ ಅಡ್ಡಲಾಗಿ ಇಡಲಾಗುತ್ತಿದೆ.

ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ದೇಶದ ರಾಜಧಾನಿ ತನ್ನ ರಕ್ಷಣೆ ಮಾಡಿಕೊಳ್ಳುತ್ತಿದೆ!

ಫ್ಲೈ ಓವರ್ ಅಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮುಂತಾದವರಿದ್ದಾರೆ. ಭಾರತದ ಗಣರಾಜ್ಯೋತ್ಸವದ ಜನವರಿ 26 ರಂದು ಕಿಸಾನ್ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ ಎಂದು ಬಿಕೆಯುನ ಪ್ರತ್ಯೇಕ ಬಣವನ್ನು ಮುನ್ನಡೆಸುವ ವಕೀಲ ಭಾನು ಪ್ರತಾಪ್ ಸಿಂಗ್ ಹೇಳುತ್ತಾರೆ. ’ಆತ ಸೂಟ್-ಬೂಟ್ ಮತ್ತು ಟೈ ಧರಿಸುತ್ತಾನೆ. ಕ್ಯಾಮೆರಾಗಳು ಮತ್ತು ಮೈಕ್ರೊಫೋನ್‌ಗಳ ಎದುರು ಮಿಂಚಲು ಆದ್ಯತೆ ನೀಡುತ್ತಾನೆ’ ಎಂದು ಅವರು ದೇಶದ ’ಗಣ್ಯ’ ವ್ಯಕ್ತಿಯನ್ನು ಟೀಕಿಸಿದರು.

ಫ್ಲೈಓವರ್ ಅಡಿಯಲ್ಲಿ, ಸರ್ವಿಸ್ ರಸ್ತೆಗಳಲ್ಲಿ ಪಕೋಡಗಳನ್ನು ತಯಾರಿಸಲಾಗುತ್ತಿದೆ. ’ಮೋದಿಜಿ, ಇಸಿ ಕೊ ಜಿಡಿಪಿ ಗ್ರೋಥ್ ಮಾಂತೆ ಹೈ’ (ಮೋದಿ ಇದನ್ನು ಆರ್ಥಿಕ ಬೆಳವಣಿಗೆ ಅಂದುಕೊಳ್ಳುತ್ತಾರೆ) ಎಂಬ ಭಿತ್ತಿಪತ್ರವೂ ಇಲ್ಲಿದೆ.  ಕಳೆದ ವಾರ ಮತ್ತು ಈಗಿನ ನಡುವಿನ ಅವಧಿಯಲ್ಲಿ, ಯುಪಿ-ದೆಹಲಿ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನಾ ಶಿಬಿರದ ಗಾತ್ರವು ದ್ವಿಗುಣಗೊಂಡಿದೆ. ಅಂಗಡಿಯೊಂದರ ಮುಂಭಾಗದಲ್ಲಿ ಹಳದಿ ಟೆಂಟ್‌ನ ಅಂಚಿನಲ್ಲಿ ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ, ಅಲ್ಲಿ 2 ರೂ. ದಾನ ಮಾಡಿ ಎಲ್ಲವನ್ನೂ ಪಡೆಯಿರಿ ಎಂಬ ಪೋಸ್ಟರ್ ಇದೆ, ಅದು ಸಾಧ್ಯವಾಗದವರು ತಮಗೆ ಬೇಕಾದುದನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

ಮೂಲ: ಸುಜನ್ ದತ್ತಾ (ದಿ ಟೆಲಿಗ್ರಾಫ್ ಆನ್‌ಲೈನ್)
ಅನುವಾದ: ಮಲ್ಲನಗೌಡರ್‌ ಪಿ.ಕೆ.

ಇದನ್ನೂ ಓದಿ: ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ ರಾಜ್ಯಾದ್ಯಂತ ರಸ್ತೆ ಬಂದ್: ಬಡಗಲಪುರ ನಾಗೇಂದ್ರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...