Homeಮುಖಪುಟ26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

- Advertisement -
- Advertisement -

ದೆಹಲಿಯಲ್ಲಿ ಮತ್ತು ಅದರ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಭರ್ಜರಿಯಾಗಿ ಹಾಕಲಾಗುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಡಿವೈಡರ್ ಮೇಲೆ ಕುಳಿತ ರೈತಾಪಿಯೊಬ್ಬರ ಜೊತೆ ನಡೆದ ಮಾತುಕತೆಯ ಮೂಲಕ ಒಂದು ಅರ್ಥಪೂರ್ಣ ಪ್ರತ್ಯಕ್ಷ ವರದಿಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.

ಘಾಜಿಪುರ ಗಡಿಯಲ್ಲಿ ಶನಿವಾರ ಒಂದು ಪ್ರತಿಭಟನೆಯ ಬಲೂನನ್ನು ಹಾರಿಸಲಾಯಿತು. ಆಕಾಶದತ್ತ ಹಾರಿದ ಈ ಬಲೂನನ್ನು ಪೂರ್ವ ಮತ್ತು ಪಶ್ಚಿಮದ ಕಡೆಯಿಂದ ಹಲವು ಕಿಲೋಮೀಟರ್‌ಗಳ ದೂರದಿಂದ ನೋಡಬಹುದಿತ್ತು. ಪಶ್ಚಿಮಕ್ಕೆ ದೇಶದ ರಾಜಧಾನಿ ದೆಹಲಿಯಿದೆ, ಪೂರ್ವದಲ್ಲಿ ಉತ್ತರ ಪ್ರದೇಶ ರಾಜ್ಯವಿದೆ.
ಬಲೂನ್ ಹಾರಿಸುವ ಈ ಸಂದರ್ಭದಲ್ಲಿ ರೈತ ಮತ್ತು ಕೃಷಿ ಕಾರ್ಮಿಕ ರಾಮ್ ಚರಣ್ ತ್ರಿಪಾಠಿಯವರು, ದಕ್ಷಿಣ ಏಷ್ಯಾದಲ್ಲೇ ದೊಡ್ಡದಾದ ಎಕ್ಸ್‌ಪ್ರೆಸ್‌ವೇನ ವಿಭಜಕದ (ಡಿವೈಡರ್) ಮೇಲೆ ಕುಳಿತಿದ್ದರು. ಅವರು ಶನಿವಾರ ಸಂಜೆ ದಿ ಟೆಲಿಗ್ರಾಫ್ ಆನ್‌ಲೈನ್ ಜೊತೆ ಮಾತಿಗೆ ಸಿಕ್ಕು, ನವೆಂಬರ್ 2, 2020 ರಂದು ತಮ್ಮ ಮಗನನ್ನು ಕಳೆದುಕೊಂಡ ವಿಷಯ ತಿಳಿಸಿದರು.

ರಾಮ್ ಚರಣ್ ತ್ರಿಪಾಠಿ ಅವರಿಗೆ 78 ವರ್ಷ. ಹವಾಮಾನ ವೈಪರೀತ್ಯಕ್ಕೆ ನಲುಗಿದ ಮುಖ, ಕೆಂಪು ಪೇಟ, ಚುರುಕಾದ ಬೂದು ಮೀಸೆಯ ಅಜ್ಜ ಹೇಳಿದರು: ನನಗೆ ಮೂವರು ಗಂಡು ಮಕ್ಕಳಿದ್ದರು. ಈಗ ನನಗೆ ಇಬ್ಬರು ಮಾತ್ರ ಉಳಿದರು. ನವೆಂಬರ್ 2 ರಂದು ಒಬ್ಬ ಮಗ ಸುಕೇಶ್ ನಿಧನರಾದರು. ನವೆಂಬರ್ 28 ರಿಂದ ನಾನು ಇಲ್ಲಿದ್ದೇನೆ. ನನ್ನಲ್ಲಿ ಒಂದೂವರೆ ಎಕರೆ ಭೂಮಿ ಇದೆ, ಅದನ್ನು ಮೂವರ ನಡುವೆ ಹಂಚಬೇಕಿತ್ತು……’
ಬೆಳಕು ಚೆಲ್ಲುವ ಒಂದು ಟ್ರಾಕ್ಟರ್ ಮತ್ತು ಧ್ವನಿವರ್ಧಕಗಳ ಮೂಲಕ ಪಂಜಾಬಿ ರ್‍ಯಾಪ್ ಹರಿದು ಬಂದ ಕಾರಣಕ್ಕೆ ಸಂಭಾಷಣೆಗೆ ಅಡಚಣೆಯಾಗಿತು. ಯುಪಿ ಕಡೆಯಿಂದ ಬಂದ ಈ ಟ್ರ್ಯಾಕ್ಟರ್ ಫ್ಲೈ ಓವರ್ ಏರುತ್ತಿತ್ತು. ಗಾಜಿಪುರದ ಪ್ರತಿಭಟನಾ ಸ್ಥಳದ ಮೂಲಕ ಟ್ರ್ಯಾಕ್ಟರ್ ಹಾದುಹೋಗಿತು. ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ, ರೈತರು ನೇತಾಜಿಯನ್ನು ಅವರ 125 ನೇ ಜನ್ಮ ದಿನಾಚರಣೆಯಂದು ನೆನಪಿಸಿಕೊಂಡರು.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ನಾನು ಟ್ರಾಕ್ಟರ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ನಾನು ಮೊದಲ ಬಾರಿಗೆ ಇಲ್ಲಿ ನಡಕೊಂಡೇ ಬಂದಿದ್ದೇನೆ ಎಂದು ರಾಮ್ ಚರಣ್ ಹೇಳುತ್ತಾರೆ. ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗಿನಿಂದ ಎರಡು ಬಾರಿ ಮನೆಗೆ ಮರಳಿದ್ದೇನೆ. ’ಖೇತಿ ಭಿ ತೋ ಕರ್ನಿ ಹೈನಾ?’ ಎನ್ನುವ ಅವರಿಗೆ ಈ ವಯಸ್ಸಿನಲ್ಲೂ ಕೃಷಿ ಮಾಡುವುದು ಹೆಮ್ಮೆಯ ವಿಷಯ.

ಬೆಳಗುತ್ತಿರುವ ದೀಪಗಳು ಮತ್ತು ಸ್ಟಿರಿಯೊಫೋನಿಕ್ ಸಂಗೀತವನ್ನು ಹೊಂದಿರುವ ಟ್ರ್ಯಾಕ್ಟರ್ ರಾಮ್ ಚರಣ್ ಬಳಿ ಇಲ್ಲ. ರಾಮ್ ಚರಣ್ ತನ್ನ ಜಮೀನಿನಿಂದ 20 ಕ್ವಿಂಟಾಲ್ ಗೋಧಿಯನ್ನು ಕೊಯ್ಲು ಮಾಡುತ್ತಾರೆ. ಕಳೆದ ವರ್ಷ, ಸರ್ಕಾರ ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 1,868 ರೂ. ಅವರು ಉಳುಮೆಗೆ ಟ್ರ್ಯಾಕ್ಟರ್ ಅನ್ನು ಬಾಡಿಗೆಗೆ ಪಡೆಯಬೇಕು, ನೀರಾವರಿ ಮಾಡಲು ನೆರೆಯವರಿಂದ ಪಂಪ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಅವರ ಭೂಮಿ ಒಟ್ಟು 10 ಬಿಘಾ ಅಷ್ಟೇ. ಅದಕ್ಕೆ ಪಂಪ್ ಬಾಡಿಗೆಗೆಂದೇ 1,500 ರೂ. ಖರ್ಚು ಮಾಡಬೇಕು. ಒಂದು ಹಂಗಾಮಿನಲ್ಲಿ ಕನಿಷ್ಟ ನಾಲ್ಕು ಬಾರಿ ಇದನ್ನು ಮಾಡಬೇಕು. ಕಳೆದ ಕೆಲವು ವಾರಗಳಲ್ಲಿ ಮಳೆ ಬಂದಿದ್ದು ಅವರಿಗೆ ಒಂದು ವರವಾಗಿತ್ತು. ಅದು ರಾಮ್‌ಚರಣ್‌ಗೆ ಒಂದಿಷ್ಟು ಉಳಿತಾಯ ಮಾಡಿತು.

ಇದಲ್ಲದೆ, ಗೊಬ್ಬರ ಮತ್ತು ಕೀಟನಾಶಕಗಳಿಗೂ ಅವರು ಪಾವತಿಸಬೇಕಾಗುತ್ತದೆ. ಸದ್ಯ ಯುಪಿ-ದೆಹಲಿ ಗಡಿಯಲ್ಲಿರುವ ಈ ಹಿರಿಯ ರೈತ 20 ಕ್ವಿಂಟಾಲ್ ಧಾನ್ಯವನ್ನು (ಗೋಧಿ) ಕೊಯ್ಯಲು ಸುಮಾರು 31,000 ರೂ. ಖರ್ಚು ಮಾಡಿದರು. ಆದರೆ ಸರ್ಕಾರವು ಕ್ವಿಂಟಲ್‌ಗೆ 1,868 ರೂ. ಎಂಎಸ್‌ಪಿ ಖಾತ್ರಿಯನ್ನು ನೀಡಲೇ ಇಲ್ಲ, ಅದನ್ನು 125 ರೂ. ಕಡಿಮೆ ಮಾಡಿದ ಕಾರಣಕ್ಕೆ ರಾಮ್‌ಚರಣ್ ಅವರಿಗೆ ಸಿಕ್ಕಿದ್ದು ಕೇವಲ 35,000 ರೂ!

ಇದನ್ನೂ ಓದಿ: ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ಹೇಳಿ: ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ!

“ನನ್ನ ಜೀವನದಲ್ಲಿ, ನಾನು ಎಂದಿಗೂ ಸಾಲದಿಂದ ಮುಕ್ತನಾಗಿಲ್ಲ” ಎಂದು ಅವರು ಹೇಳುತ್ತಾರೆ.
ಬ್ರಾಹ್ಮಣರು ಸಹ ಹಸಿವಿನ ನೋವನ್ನು ಅನುಭವಿಸುತ್ತಾರೆ. ರಾಮ್ ಚರಣ್ ತ್ರಿಪಾಠಿ ಬ್ರಾಹ್ಮಣ, ಹಿಂದೂ ಜಾತಿ ಶ್ರೇಣಿಯಲ್ಲಿನ ಗಣ್ಯ ಗುಂಪಿನವರು. ಅಮ್ರೋಹಾ ಜಿಲ್ಲೆಯ ಗೋಸಾಯಿ ಬ್ಲಾಕ್‌ನಲ್ಲಿರುವ ಅವರ ಗ್ರಾಮ ಶೈಲೇಂದ್ರನಗರವು ಸಮೃದ್ಧ ಜಾಟ್ ಮತ್ತು ಬಡ ರೈತರ ಮಿಶ್ರಣವಾಗಿದೆ. ವರ್ಷದ ಉಳಿದ ಭಾಗವನ್ನು ಸರಿದೂಗಿಸಲು, ರಾಮ್‌ಚರಣ್ ದೊಡ್ಡ ರೈತರ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ದಿನಕ್ಕೆ 300 ರೂ. ವೇತನ ಪಡೆಯುತ್ತಾರೆ.

“ಪೂರ್ವ ಯುಪಿ ಮತ್ತು ಬಿಹಾರದ ಜನರು ಇಲ್ಲಿಗೆ (ಪ್ರತಿಭಟನಾ ಸ್ಥಳಕ್ಕೆ) ದೊಡ್ಡ ಪ್ರಮಾಣದಲ್ಲಿ ಬರುತ್ತಿಲ್ಲ. ರೈಲು ಸಂಪರ್ಕ ಈಗ ಕಡಿಮೆಯಾಗಿದೆ, ಅದಕ್ಕೂ ಮುಖ್ಯವಾಗಿ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂ. ವಿರಳವಾಗಿ ಸಿಗುತ್ತಿದೆ ಎಂಬುದು ಇದಕ್ಕೆ ಕಾರಣ ಎಂದು ರಾಮ್ ಚರಣ್ ವಿವರಿಸುತ್ತಾರೆ.

ಅವರು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನ ವಿಭಜಕದ ಮೇಲೆ ಕುಳಿತಿದ್ದರು. ತಮ್ಮ ಬಲಕ್ಕೆ ಕೈ ಮಾಡಿ ತೋರಿಸಿದ ಅವರು, ವಹಾಂ ಜಾಯಿಯೆ, ಎಂದು ದೆಹಲಿಯತ್ತ ಕೈ ಮಾಡಿದರು. ದೇಖಿಯೆ ದಿಲ್ಲಿ ಸರ್ಕಾರ್ (ಕೇಂದ್ರ ಸರ್ಕಾರ)ಕ್ಯಾ ಕರ್ ರಹಿ ಹೈಂ (ಹೋಗಿ ದೆಹಲಿಯ ಸರ್ಕಾರ ಏನು ಮಾಡುತ್ತಿದೆ ಎಂದು ನೋಡಿ) ಎಂದು ರಾಮಚರಣ್ ಹೇಳಿದರು.

ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರ ಅನುಮತಿ

ದೆಹಲಿಯಲ್ಲಿ ಕುಳಿತ ಭಾರತ ಸರ್ಕಾರ ಮಾಡುತ್ತಿರುವುದೇನು?

ಜನವರಿ 23 ರ ಸಂಜೆ ನೇತಾಜಿ ಸುಭಾಷ್‌ಚಂದ್ರರನ್ನು ರೈತರು ಸ್ಮರಿಸುತ್ತಿದ್ದರು. ಉತ್ತರಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಫ್ಲೈ ಓವರ್‌ನಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದರು. ದೆಹಲಿ ಪೊಲೀಸರು ಇದನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮಾಡುತ್ತಿದ್ದಾರೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದನ್ನು ಮಾಡುತ್ತಿಲ್ಲ.

ಇಲ್ಲಿರುವ ಬ್ಯಾರಿಕೇಡ್ 1,400 ಪೇಸ್ ಅಗಲವಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಕಾಂಕ್ರೀಟ್ ಬ್ಲಾಕ್‌ಗಳಿಂದ ನಿರ್ಮಾಣ ಆಗಿದ್ದು, ದೆಹಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಈ “ಕಲ್ಲಿನ ಕಂಬಗಳ” ಫೋಟೊಗಳನ್ನು ತೆಗೆಯಲು ವರದಿಗಾರನಿಗೆ ಬಿಡಲಿಲ್ಲ. ಅವು ವಾಸ್ತವವಾಗಿ ಕಾಂಕ್ರೀಟ್ ಬ್ಲಾಕ್‌ಗಳೇ ಆಗಿವೆ. ಎಕ್ಸ್‌ಪ್ರೆಸ್‌ವೇ ಲೇನ್‌ಗಳನ್ನು ಸರ್ವಿಸ್ ರೋಡ್‌ಗಳಿಂದ ಬೇರ್ಪಡಿಸುವುದು ಅವರ ಉದ್ದೇಶ. ಪ್ರತಿಯೊಂದು ಕಾಂಕ್ರೀಟ್ ಬ್ಲಾಕ್ ನಾಲ್ಕು ಅಡಿ ಎತ್ತರ ಮತ್ತು ಐದು ಅಡಿ ಉದ್ದವಿದೆ.. ಅವುಗಳನ್ನು ರಸ್ತೆಗೆ ಅಡ್ಡಲಾಗಿ ಇಡಲಾಗುತ್ತಿದೆ.

ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ದೇಶದ ರಾಜಧಾನಿ ತನ್ನ ರಕ್ಷಣೆ ಮಾಡಿಕೊಳ್ಳುತ್ತಿದೆ!

ಫ್ಲೈ ಓವರ್ ಅಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮುಂತಾದವರಿದ್ದಾರೆ. ಭಾರತದ ಗಣರಾಜ್ಯೋತ್ಸವದ ಜನವರಿ 26 ರಂದು ಕಿಸಾನ್ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ ಎಂದು ಬಿಕೆಯುನ ಪ್ರತ್ಯೇಕ ಬಣವನ್ನು ಮುನ್ನಡೆಸುವ ವಕೀಲ ಭಾನು ಪ್ರತಾಪ್ ಸಿಂಗ್ ಹೇಳುತ್ತಾರೆ. ’ಆತ ಸೂಟ್-ಬೂಟ್ ಮತ್ತು ಟೈ ಧರಿಸುತ್ತಾನೆ. ಕ್ಯಾಮೆರಾಗಳು ಮತ್ತು ಮೈಕ್ರೊಫೋನ್‌ಗಳ ಎದುರು ಮಿಂಚಲು ಆದ್ಯತೆ ನೀಡುತ್ತಾನೆ’ ಎಂದು ಅವರು ದೇಶದ ’ಗಣ್ಯ’ ವ್ಯಕ್ತಿಯನ್ನು ಟೀಕಿಸಿದರು.

ಫ್ಲೈಓವರ್ ಅಡಿಯಲ್ಲಿ, ಸರ್ವಿಸ್ ರಸ್ತೆಗಳಲ್ಲಿ ಪಕೋಡಗಳನ್ನು ತಯಾರಿಸಲಾಗುತ್ತಿದೆ. ’ಮೋದಿಜಿ, ಇಸಿ ಕೊ ಜಿಡಿಪಿ ಗ್ರೋಥ್ ಮಾಂತೆ ಹೈ’ (ಮೋದಿ ಇದನ್ನು ಆರ್ಥಿಕ ಬೆಳವಣಿಗೆ ಅಂದುಕೊಳ್ಳುತ್ತಾರೆ) ಎಂಬ ಭಿತ್ತಿಪತ್ರವೂ ಇಲ್ಲಿದೆ.  ಕಳೆದ ವಾರ ಮತ್ತು ಈಗಿನ ನಡುವಿನ ಅವಧಿಯಲ್ಲಿ, ಯುಪಿ-ದೆಹಲಿ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನಾ ಶಿಬಿರದ ಗಾತ್ರವು ದ್ವಿಗುಣಗೊಂಡಿದೆ. ಅಂಗಡಿಯೊಂದರ ಮುಂಭಾಗದಲ್ಲಿ ಹಳದಿ ಟೆಂಟ್‌ನ ಅಂಚಿನಲ್ಲಿ ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ, ಅಲ್ಲಿ 2 ರೂ. ದಾನ ಮಾಡಿ ಎಲ್ಲವನ್ನೂ ಪಡೆಯಿರಿ ಎಂಬ ಪೋಸ್ಟರ್ ಇದೆ, ಅದು ಸಾಧ್ಯವಾಗದವರು ತಮಗೆ ಬೇಕಾದುದನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

ಮೂಲ: ಸುಜನ್ ದತ್ತಾ (ದಿ ಟೆಲಿಗ್ರಾಫ್ ಆನ್‌ಲೈನ್)
ಅನುವಾದ: ಮಲ್ಲನಗೌಡರ್‌ ಪಿ.ಕೆ.

ಇದನ್ನೂ ಓದಿ: ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ ರಾಜ್ಯಾದ್ಯಂತ ರಸ್ತೆ ಬಂದ್: ಬಡಗಲಪುರ ನಾಗೇಂದ್ರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...