Homeಅಂಕಣಗಳುಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

ಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

- Advertisement -
- Advertisement -

‘ಸರಕಾರ’ ಎನ್ನುವುದು ಪರ್ಶಿಯನ್ ಭಾಷೆ ಪದ. ಅದರ ಅನೇಕ ಅರ್ಥಗಳಲ್ಲಿ ಒಂದು ‘ಕೆಲಸದಲ್ಲಿ ಇರುವುದು’ ಅಂತ. ಸರಕಾರ ಅನ್ನುವುದೇ ಕೆಲಸ ಅನ್ನುವುದಕ್ಕ ಸಮಾನಾರ್ಥಕ ಪದ ಅನ್ನೋದಾದರ, ಸರ್ಕಾರದ ಕೆಲಸ ಏನು?

ಈ ಸರಕಾರದ ಕೆಲಸ ಏನು ಎನ್ನುವ ಸರಳವಾದ ಪ್ರಶ್ನೆ ಇಡೀ ಜಗತ್ತನ್ನು ಇಬ್ಭಾಗ ಮಾಡಿಬಿಟ್ಟಿದೆ.
ಕೆಲವರು ಸರಕಾರಕ್ಕ ಕೆಲಸನ ಇಲ್ಲ ಅನ್ನೋರು. ಇನ್ನೂ ಕೆಲವರು ಎಲ್ಲವೂ ಸರ್ಕಾರದ ಕೆಲಸ ಅನ್ನೋರು. ಅವರ ನಡುವೆ ಬಹಳ ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ಮಾರ್ಗಿಗಳು. ಸರ್ಕಾರದ ಕೆಲಸ ಏನು ಅನ್ನೋದು ನಮಗ ಗೊತ್ತಿಲ್ಲ. ಅದು ಏನು ಅಂತ ತಿಳಕೋಳೋದು ಬೇಕಾಗಿಲ್ಲ, ಅಂತ ಇವರು ಗಟ್ಟಿಯಾಗಿ ನಂಬತಾರ. ಮಜಾ ಏನು ಅಂದ್ರ ಈ ರೀತಿಯ ಜನಗಳಿಗೆ ಅತಿ ಕಠೋರವಾದ ರಾಜಕೀಯ ನಿಲುವು ಇರ್ತಾವ. ಯಾವುದನ್ನು ನಾವು ಸ್ಪಷ್ಟವಾಗಿ ತಿಳಕೊಂಡಿರೋದಿಲ್ಲವೋ ಅದರ ಬಗ್ಗೆ ಅಭಿಪ್ರಾಯ ಮಾತ್ರ ಗಟ್ಟಿಯಾಗಿ ರೂಪಿಸಿಕೊಂಡು ಬಿಟ್ಟಿರತೀವಿ.

ಯಥಾ ಪ್ರಜಾ ತಥಾ ರಾಜಾ ಅನ್ನುವ ಗಾದಿಮಾತಿನ ಹಂಗ, ನಾವು ಹೆಂಗ ಇರತೆವೋ, ನಮ್ಮನ್ನ ಆಳುವ ಧೀರರು ಹಂಗೆ ಇರ್ತಾರ. ಎಲ್ಲ ವಿಷಯದ ಬಗ್ಗೆ ನಾವು ಸರಿಯಾಗಿ ಓದಿ, ಕೇಳಿ, ಅರ್ಥಮಾಡಿಕೊಂಡರ, ನಮಗೆ ಅರ್ಥ ಆಗಲಾರದ ವಿಷಯದ ಬಗ್ಗೆ ಪ್ರಶ್ನೆ ಮಾಡಿದರ ಅವರು ಸರಿಯಾಗಿ ಎಚ್ಚರದಿಂದ ಇರ್ತಾರ. ಅದನ್ನ ಬಿಟ್ಟು ನಮಗ ಏನು ಸರಿಯಾಗಿ ಗೊತ್ತಿಲ್ಲ. ಆದರೆ ನಾವು ಅವರ ಪರವಾಗಿ ಇದ್ದೇವೆ. ನಾವು ಅವರನ್ನ ಪ್ರಶ್ನೆ ಮಾಡೋದಿಲ್ಲ. ಯಾಕ ಅಂದ್ರ ಅವರು ತಪ್ಪು ಮಾಡಲಿಕ್ಕೆ ಸಾಧ್ಯ ಇಲ್ಲ ಅನ್ನುವ ಪ್ರಶ್ನಾತೀತ ಮಾತೃ ಪ್ರೇಮದ ನಾಗರಿಕರು ಇದ್ದರೆ, ಸರಕಾರ ಎನ್ನುವುದು ಕೈಕಯಿಯಂತಹ ತಾಯಿ ಆಗಿ ಬಿಡುತ್ತದೆ. ತನಗೆ ಓಟು ಕೊಟ್ಟ ಹಲವರನ್ನು ಮರೆತು ನೋಟು ಕೊಟ್ಟ ಕೆಲವರನ್ನು ಮಾತ್ರ ಪೋಷಿಸುತ್ತದೆ. ಆ ನೋಟು ಕೊಟ್ಟ ಕೆಲವರು ರಾಮನ ತಮ್ಮ ಭರತನ ಹಂಗ ಇದ್ದರ ಅಡ್ಡಿಯಿಲ್ಲ. ಆದರೆ ಅವರು ರಾವಣನ ತಂಗಿ ಶೂರ್ಪನಖಿ ಹಂಗ ಚೂಪಾದ ಉಗುರಿನಿಂದ ಬಡವರ ರಕ್ತ ಹೀರುವವರು ಇರ್ತಾರ.

ಮೊನ್ನೆ ನಮ್ಮ ಉಳ್ಳಿ ಪಥ್ಯದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಆಯವ್ಯಯ ಪತ್ರ ಭಾರತೀಯ ಕಂಪನಿ ವಿದೇಶಿ ಸಾಮಾನು ಬಳಸಿ ತಯಾರು ಮಾಡಿದ ಪಾಟಿ ಕಂಪ್ಯೂಟರ್‌ದೊಳಗ (ಟ್ಯಾಬ್ಲೆಟ್) ಓದಿದರು. ಹೆಸರಿನೊಳಗ ಸೀತಾ ಹಾಗೂ ರಾಮ್ ಎರಡೂ ಇರುವ ಅವರು ಜನರನ್ನು ಮಾತ್ರ ಅಯೋಧ್ಯಾ ನಾಗರಿಕರಂತೆ ನೋಡಲಿಲ್ಲ.

ನನ್ನ ಭಾಷಣದ ಮೂಲಮಂತ್ರ ಕನಿಷ್ಠ ಸರಕಾರ, ಗರಿಷ್ಟ ಆಡಳಿತ ಅಂತ ಘೋಷಿಸಿದ ಅವರು ಆ ಗುರಿ ಮುಟ್ಟುವುದು ಹೇಗೆ ಅಂತ ಬಿಡಿಸಿ ಹೇಳಲಿಲ್ಲ. ಆಡಳಿತದಲ್ಲಿ ಸರ್ಕಾರದ ಪಾಲು ಕಮ್ಮಿ ಆಗುತ್ತಾ ಹೋದರೆ ಗರಿಷ್ಟ ಆಡಳಿತ ಸಾಧ್ಯ ಆಗೋದು ಹೇಗೆ ಅನ್ನುವುದು ಅವರು ಹೇಳಲಿಲ್ಲ, ನಾವು ಕೇಳಲಿಲ್ಲ.

ಉನ್ನತ ಶಿಕ್ಷಣದ ಸ್ಥಿತಿ ಸುಧಾರಿಸುವ ಯೋಜನೆ ಒಳಗೆ ಖಾಸಗಿ ಬಂಡವಾಳ ತಂತ್ರ ಕುಶಲತೆಯು ಭಾಗ ವಹಿಸಲಿದೆಯಂತೆ. ಅಂದ್ರ ಸರಕಾರ ಕೈಚೆಲ್ಲಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟದ.

ಪ್ರಾಥಮಿಕ ಶಿಕ್ಷಣದೊಳಗ ಸರ್ಕಾರದ ನಿಯಂತ್ರಣ ಹಂತಹಂತವಾಗಿ ಕಮ್ಮಿಯಾಗಿ ಖಾಸಗಿಯವರ ಭಾಗಿದಾರಿಕೆ ಹೆಚ್ಚು ಆಗಲಿಕ್ಕೆ ಶುರು ಆಗತದ. ಹಿಂದೆ ಈ ಕೆಲಸ ಸಣ್ಣಗ ಶುರು ಆಗಿತ್ತು. ಇನ್ನು ಮುಂದ ಇದು ಗತಿ ಪಡತಿದ. ಅದಕ್ಕ ಸದ್ಗತಿ ಸಿಗತದೋ ಇಲ್ಲೋ.

ಸಚಿವರ ಪ್ರಕಾರ ಅಂಕೀಕೃತ ಆರೋಗ್ಯ ವಾಗ್ದಾನ ಯೋಜನೆ (ಡಿಜಿಟಲ್ ಹೆಲ್ತ್ ಅಷ್ಯೂರೆನ್ಸ್) ಪ್ರಕಾರ ಎಲ್ಲ 130 ಕೋಟಿ ಭಾರತೀಯ ರಹವಾಸಿಗಳ ಆರೋಗ್ಯ ಸೂಚಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಮೇಲೆ ಅದರ ಪ್ರಕಾರ ನಿಮ್ಮ ರೋಗದ ಲಕ್ಷಣ, ಸ್ಥಿತಿ, ರೋಗ ನಿರೋಧಕ ಶಕ್ತಿ, ಅದಕ್ಕೆ ಚಿಕಿತ್ಸೆ ಎಲ್ಲಾ. ಅದನ್ನು ಮಾಡೋರು ಯಾರು? ಖಾಸಗಿ ಕಂಪನಿಯವರು. ಅವರು ಬರೆ ನಿಮ್ಮ ರೋಗ ಚೆಕ್ ಮಾಡೋದಿಲ್ಲ. ನಿಮ್ಮ ಹಾಗೂ ನಿಮ್ಮ ಮನೆಯವರ, ನಿಮ್ಮ ಕಂಪನಿ ಉದ್ಯೋಗಿಗಳ, ಎಲ್ಲರ ಮಾಹಿತಿ ಇಟ್ಟುಕೊಂಡು ನಿಮ್ಮನ್ನ ಆಟ ಅಡಿಸತಾರ. ಅದನ್ನ ವಿಮಾ ಕಂಪನಿಗೆ ಮಾರಾಟ ಮಾಡಿಬಿಡತಾರ. ಅವರು ನಿಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದರಿಂದ ನಿಮಗೆ ವಿಮೆ ಕೊಡಲಿಕ್ಕೆ ಇಲ್ಲೆ, ಅಥವಾ ಅತಿ ಹೆಚ್ಚಿನ ವೆಚ್ಚದ ಪಾಲಿಸಿ ಕೊಡಬಹುದು. ಎಲ್ಲ ಚಿಕಿತ್ಸೆ ಕೊಡಲಿಕ್ಕೆ ಮಾತ್ರ ಇರಲಿಕ್ಕಿಲ್ಲ.

ಕೋವಿಡ್ ಮಾರಿಯ ಕಾಲದಾಗ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆ ಹಾಗೂ ಖಾಸಗಿ ಮಾಧ್ಯಮಗಳು ಆಡಿದ ಆಟ ನೋಡಿದ ಮೇಲೆ ಸಹಿತ ಎಲ್ಲಾ ರೋಗಕು ಖಾಸಗಿ ಕ್ಷೇತ್ರ ರಾಮ ಬಾಣ ಅಲ್ಲ ಅನ್ನುವುದು ನಮಗ ಇನ್ನೂ ಖಾತರಿ ಯಾಗಿಲ್ಲ ಅಂತ ಅನ್ನಿಸತದ.

ಇನ್ನ ಉದ್ಯೋಗ ಸೃಷ್ಟಿ ಸಲುವಾಗಿ ಸರಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳಿಗೆ ಖಾಸಗಿಯವರೇ ಇಂಜಿನ್, ಗಾಲಿ ಹಾಗೂ ಇಂಧನ. ಸರಕಾರ ಯಾವುದೇ ಉದ್ಯೋಗ ಸೃಷ್ಟಿ ಮಾಡೋದಿಲ್ಲ. ಇರುವ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡೋದರಿಂದ ಜನರಿಗೆ ಒಳ್ಳೆಯದು ಆಗತದ. ಎರಡು ಬ್ಯಾಂಕು ಹಾಗೂ ಎಲ್‌ಐಸಿಗಳನ್ನು ಖಾಸಗಿಗೆ ಮಾರಾಟ ಮಾಡಿದರ ಎಲ್ಲ ಸಮಸ್ಯೆ ಪರಿಹಾರ ಆಗತದ ಅಂತ ಸಚಿವರು ಹೇಳಿದ್ದಾರ. ಅದಕ್ಕ ಸರ್ಕಾರಿ-ಖಾಸಗಿ ಸಹ ಭಾಗಿತ್ವದ ಮೊದಲ ಮಾದರಿಯಾದ ಮಾರುತಿ ಕಂಪನಿಯ ಹಿಂದಿನ ಮುಖ್ಯಸ್ಥ ಭಾರ್ಗವ ಅವರು ಒಪ್ಪಿಗೆ ಸೂಚಿಸಿಬಿಟ್ಟಾರ. ಮಾರುತಿ ಕಂಪನಿ ಸರಕಾರದಿಂದ ಅನೇಕ ಬಾರಿ ಸಹಾಯ ಪಡೆಯಿತು ಅನ್ನೋದನ್ನ ಮರ್ತುಬಿಟ್ಟಾರ.

ಸರಕಾರ ಮನಿ ಕಟ್ಟುವುದಿಲ್ಲ. ಆ ಕೆಲಸ ಮಾಡುವ ಖಾಸಗಿಯವರಿಗೆ ಸಹಾಯ ಮಾಡತದ ಅಂತ ಸಚಿವರು ಹೇಳಿಬಿಟ್ಟಾರ. ಅವರಿಗೆ ಸುಲಭ ಸಾಲ, ಕಟ್ಟು ಬಾಕಿ ಸಾಲಗಾರರ ಕಡೆ ಮೃದು ಧೋರಣೆ, ಈ ರೀತಿಯ ಡೆವಲಪರ್‌ಗಳ ಕೈಗೆ ಸಿಕ್ಕುವ ಬಡಪಾಯಿ ಮಧ್ಯಮ ವರ್ಗದವರಿಗೆ ಎರಡು ಶೇಕಡಾ ಬಡ್ಡಿ ಕಮ್ಮಿ, ಇತ್ಯಾದಿ ಘೋಷಣೆ ಮಾಡಿದ್ದಾರೆ.

ಕುಡಿಯುವ ನೀರು ಖಾಸಗಿಯವರಿಂದ ಪಡೆಯಬೇಕು. ಅದನ್ನು ಸರಕಾರ ಕೊಡಲಿಕ್ಕೆ ಆಗೋದಿಲ್ಲ. ಅದು ಸರ್ಕಾರದ ಕೆಲಸ ಅಲ್ಲ. ಅದಕ್ಕೆ ಜಲವೆ ಜೀವನ ಅನ್ನುವ ಯೋಜನೆ ಒಳಗ ಖಾಸಗಿ ಕಂಪನಿಗಳು ನೀರು ಕೊಡತಾವ. ಅವರಿಗೆ ಅನುಕೂಲ ಆಗು ಹಂಗ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳಬೇಕು. ಆಡಳಿತ ಪಕ್ಷದ ಮಾಲೀಕರೆ ಸರ್ಕಾರಿ ಅಧಿಕಾರಿಗಳ ಮಾಲೀಕರು, ಅಷ್ಟೂ ತಿಳಿಯದೇ?

ಎಲ್ಲಾ ಹೋಗಲಿ, ಮುಂದಿನ ವರ್ಷದ ಜನಗಣತಿ ಸಹಿತ ಖಾಸಗಿಯವರು ಮಾಡೋರು. ಹಂಗಾರ ಇನ್ನೇನು ಉಳಿಯಿತು? ಶಾಸನ ಸಭೆ, ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ, ದೇಶ ರಕ್ಷಣೆ ಹಾಗೂ ಯುದ್ಧ ಮಾಡುವುದು, ನಾಣ್ಯ ಟಂಕಿಸುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳು. ಮುಂದಿನ ಸಾರಿ ಖಾಸಗಿ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದ ಖಾಸಗಿ ಕಂಪನಿ ಸಿಈಒ ಒಬ್ಬರು ನಮ್ಮ ಹಣಕಾಸು ಸಚಿವರ ಬದಲಿಗೆ ಬಜೆಟ್ ಮಂಡಿಸಿದರೂ ಮಂಡಿಸಬಹುದು. ಏನೇನೋ ಆಗುತ್ತಿರುವಾಗ ಇದು ಆದರೆ ಆಶ್ಚರ್ಯ ಏನು?


ಇದನ್ನೂ ಓದಿ: ಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...