Homeಅಂಕಣಗಳುಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

ಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

- Advertisement -
- Advertisement -

‘ಸರಕಾರ’ ಎನ್ನುವುದು ಪರ್ಶಿಯನ್ ಭಾಷೆ ಪದ. ಅದರ ಅನೇಕ ಅರ್ಥಗಳಲ್ಲಿ ಒಂದು ‘ಕೆಲಸದಲ್ಲಿ ಇರುವುದು’ ಅಂತ. ಸರಕಾರ ಅನ್ನುವುದೇ ಕೆಲಸ ಅನ್ನುವುದಕ್ಕ ಸಮಾನಾರ್ಥಕ ಪದ ಅನ್ನೋದಾದರ, ಸರ್ಕಾರದ ಕೆಲಸ ಏನು?

ಈ ಸರಕಾರದ ಕೆಲಸ ಏನು ಎನ್ನುವ ಸರಳವಾದ ಪ್ರಶ್ನೆ ಇಡೀ ಜಗತ್ತನ್ನು ಇಬ್ಭಾಗ ಮಾಡಿಬಿಟ್ಟಿದೆ.
ಕೆಲವರು ಸರಕಾರಕ್ಕ ಕೆಲಸನ ಇಲ್ಲ ಅನ್ನೋರು. ಇನ್ನೂ ಕೆಲವರು ಎಲ್ಲವೂ ಸರ್ಕಾರದ ಕೆಲಸ ಅನ್ನೋರು. ಅವರ ನಡುವೆ ಬಹಳ ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ಮಾರ್ಗಿಗಳು. ಸರ್ಕಾರದ ಕೆಲಸ ಏನು ಅನ್ನೋದು ನಮಗ ಗೊತ್ತಿಲ್ಲ. ಅದು ಏನು ಅಂತ ತಿಳಕೋಳೋದು ಬೇಕಾಗಿಲ್ಲ, ಅಂತ ಇವರು ಗಟ್ಟಿಯಾಗಿ ನಂಬತಾರ. ಮಜಾ ಏನು ಅಂದ್ರ ಈ ರೀತಿಯ ಜನಗಳಿಗೆ ಅತಿ ಕಠೋರವಾದ ರಾಜಕೀಯ ನಿಲುವು ಇರ್ತಾವ. ಯಾವುದನ್ನು ನಾವು ಸ್ಪಷ್ಟವಾಗಿ ತಿಳಕೊಂಡಿರೋದಿಲ್ಲವೋ ಅದರ ಬಗ್ಗೆ ಅಭಿಪ್ರಾಯ ಮಾತ್ರ ಗಟ್ಟಿಯಾಗಿ ರೂಪಿಸಿಕೊಂಡು ಬಿಟ್ಟಿರತೀವಿ.

ಯಥಾ ಪ್ರಜಾ ತಥಾ ರಾಜಾ ಅನ್ನುವ ಗಾದಿಮಾತಿನ ಹಂಗ, ನಾವು ಹೆಂಗ ಇರತೆವೋ, ನಮ್ಮನ್ನ ಆಳುವ ಧೀರರು ಹಂಗೆ ಇರ್ತಾರ. ಎಲ್ಲ ವಿಷಯದ ಬಗ್ಗೆ ನಾವು ಸರಿಯಾಗಿ ಓದಿ, ಕೇಳಿ, ಅರ್ಥಮಾಡಿಕೊಂಡರ, ನಮಗೆ ಅರ್ಥ ಆಗಲಾರದ ವಿಷಯದ ಬಗ್ಗೆ ಪ್ರಶ್ನೆ ಮಾಡಿದರ ಅವರು ಸರಿಯಾಗಿ ಎಚ್ಚರದಿಂದ ಇರ್ತಾರ. ಅದನ್ನ ಬಿಟ್ಟು ನಮಗ ಏನು ಸರಿಯಾಗಿ ಗೊತ್ತಿಲ್ಲ. ಆದರೆ ನಾವು ಅವರ ಪರವಾಗಿ ಇದ್ದೇವೆ. ನಾವು ಅವರನ್ನ ಪ್ರಶ್ನೆ ಮಾಡೋದಿಲ್ಲ. ಯಾಕ ಅಂದ್ರ ಅವರು ತಪ್ಪು ಮಾಡಲಿಕ್ಕೆ ಸಾಧ್ಯ ಇಲ್ಲ ಅನ್ನುವ ಪ್ರಶ್ನಾತೀತ ಮಾತೃ ಪ್ರೇಮದ ನಾಗರಿಕರು ಇದ್ದರೆ, ಸರಕಾರ ಎನ್ನುವುದು ಕೈಕಯಿಯಂತಹ ತಾಯಿ ಆಗಿ ಬಿಡುತ್ತದೆ. ತನಗೆ ಓಟು ಕೊಟ್ಟ ಹಲವರನ್ನು ಮರೆತು ನೋಟು ಕೊಟ್ಟ ಕೆಲವರನ್ನು ಮಾತ್ರ ಪೋಷಿಸುತ್ತದೆ. ಆ ನೋಟು ಕೊಟ್ಟ ಕೆಲವರು ರಾಮನ ತಮ್ಮ ಭರತನ ಹಂಗ ಇದ್ದರ ಅಡ್ಡಿಯಿಲ್ಲ. ಆದರೆ ಅವರು ರಾವಣನ ತಂಗಿ ಶೂರ್ಪನಖಿ ಹಂಗ ಚೂಪಾದ ಉಗುರಿನಿಂದ ಬಡವರ ರಕ್ತ ಹೀರುವವರು ಇರ್ತಾರ.

ಮೊನ್ನೆ ನಮ್ಮ ಉಳ್ಳಿ ಪಥ್ಯದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಆಯವ್ಯಯ ಪತ್ರ ಭಾರತೀಯ ಕಂಪನಿ ವಿದೇಶಿ ಸಾಮಾನು ಬಳಸಿ ತಯಾರು ಮಾಡಿದ ಪಾಟಿ ಕಂಪ್ಯೂಟರ್‌ದೊಳಗ (ಟ್ಯಾಬ್ಲೆಟ್) ಓದಿದರು. ಹೆಸರಿನೊಳಗ ಸೀತಾ ಹಾಗೂ ರಾಮ್ ಎರಡೂ ಇರುವ ಅವರು ಜನರನ್ನು ಮಾತ್ರ ಅಯೋಧ್ಯಾ ನಾಗರಿಕರಂತೆ ನೋಡಲಿಲ್ಲ.

ನನ್ನ ಭಾಷಣದ ಮೂಲಮಂತ್ರ ಕನಿಷ್ಠ ಸರಕಾರ, ಗರಿಷ್ಟ ಆಡಳಿತ ಅಂತ ಘೋಷಿಸಿದ ಅವರು ಆ ಗುರಿ ಮುಟ್ಟುವುದು ಹೇಗೆ ಅಂತ ಬಿಡಿಸಿ ಹೇಳಲಿಲ್ಲ. ಆಡಳಿತದಲ್ಲಿ ಸರ್ಕಾರದ ಪಾಲು ಕಮ್ಮಿ ಆಗುತ್ತಾ ಹೋದರೆ ಗರಿಷ್ಟ ಆಡಳಿತ ಸಾಧ್ಯ ಆಗೋದು ಹೇಗೆ ಅನ್ನುವುದು ಅವರು ಹೇಳಲಿಲ್ಲ, ನಾವು ಕೇಳಲಿಲ್ಲ.

ಉನ್ನತ ಶಿಕ್ಷಣದ ಸ್ಥಿತಿ ಸುಧಾರಿಸುವ ಯೋಜನೆ ಒಳಗೆ ಖಾಸಗಿ ಬಂಡವಾಳ ತಂತ್ರ ಕುಶಲತೆಯು ಭಾಗ ವಹಿಸಲಿದೆಯಂತೆ. ಅಂದ್ರ ಸರಕಾರ ಕೈಚೆಲ್ಲಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟದ.

ಪ್ರಾಥಮಿಕ ಶಿಕ್ಷಣದೊಳಗ ಸರ್ಕಾರದ ನಿಯಂತ್ರಣ ಹಂತಹಂತವಾಗಿ ಕಮ್ಮಿಯಾಗಿ ಖಾಸಗಿಯವರ ಭಾಗಿದಾರಿಕೆ ಹೆಚ್ಚು ಆಗಲಿಕ್ಕೆ ಶುರು ಆಗತದ. ಹಿಂದೆ ಈ ಕೆಲಸ ಸಣ್ಣಗ ಶುರು ಆಗಿತ್ತು. ಇನ್ನು ಮುಂದ ಇದು ಗತಿ ಪಡತಿದ. ಅದಕ್ಕ ಸದ್ಗತಿ ಸಿಗತದೋ ಇಲ್ಲೋ.

ಸಚಿವರ ಪ್ರಕಾರ ಅಂಕೀಕೃತ ಆರೋಗ್ಯ ವಾಗ್ದಾನ ಯೋಜನೆ (ಡಿಜಿಟಲ್ ಹೆಲ್ತ್ ಅಷ್ಯೂರೆನ್ಸ್) ಪ್ರಕಾರ ಎಲ್ಲ 130 ಕೋಟಿ ಭಾರತೀಯ ರಹವಾಸಿಗಳ ಆರೋಗ್ಯ ಸೂಚಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಮೇಲೆ ಅದರ ಪ್ರಕಾರ ನಿಮ್ಮ ರೋಗದ ಲಕ್ಷಣ, ಸ್ಥಿತಿ, ರೋಗ ನಿರೋಧಕ ಶಕ್ತಿ, ಅದಕ್ಕೆ ಚಿಕಿತ್ಸೆ ಎಲ್ಲಾ. ಅದನ್ನು ಮಾಡೋರು ಯಾರು? ಖಾಸಗಿ ಕಂಪನಿಯವರು. ಅವರು ಬರೆ ನಿಮ್ಮ ರೋಗ ಚೆಕ್ ಮಾಡೋದಿಲ್ಲ. ನಿಮ್ಮ ಹಾಗೂ ನಿಮ್ಮ ಮನೆಯವರ, ನಿಮ್ಮ ಕಂಪನಿ ಉದ್ಯೋಗಿಗಳ, ಎಲ್ಲರ ಮಾಹಿತಿ ಇಟ್ಟುಕೊಂಡು ನಿಮ್ಮನ್ನ ಆಟ ಅಡಿಸತಾರ. ಅದನ್ನ ವಿಮಾ ಕಂಪನಿಗೆ ಮಾರಾಟ ಮಾಡಿಬಿಡತಾರ. ಅವರು ನಿಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದರಿಂದ ನಿಮಗೆ ವಿಮೆ ಕೊಡಲಿಕ್ಕೆ ಇಲ್ಲೆ, ಅಥವಾ ಅತಿ ಹೆಚ್ಚಿನ ವೆಚ್ಚದ ಪಾಲಿಸಿ ಕೊಡಬಹುದು. ಎಲ್ಲ ಚಿಕಿತ್ಸೆ ಕೊಡಲಿಕ್ಕೆ ಮಾತ್ರ ಇರಲಿಕ್ಕಿಲ್ಲ.

ಕೋವಿಡ್ ಮಾರಿಯ ಕಾಲದಾಗ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆ ಹಾಗೂ ಖಾಸಗಿ ಮಾಧ್ಯಮಗಳು ಆಡಿದ ಆಟ ನೋಡಿದ ಮೇಲೆ ಸಹಿತ ಎಲ್ಲಾ ರೋಗಕು ಖಾಸಗಿ ಕ್ಷೇತ್ರ ರಾಮ ಬಾಣ ಅಲ್ಲ ಅನ್ನುವುದು ನಮಗ ಇನ್ನೂ ಖಾತರಿ ಯಾಗಿಲ್ಲ ಅಂತ ಅನ್ನಿಸತದ.

ಇನ್ನ ಉದ್ಯೋಗ ಸೃಷ್ಟಿ ಸಲುವಾಗಿ ಸರಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳಿಗೆ ಖಾಸಗಿಯವರೇ ಇಂಜಿನ್, ಗಾಲಿ ಹಾಗೂ ಇಂಧನ. ಸರಕಾರ ಯಾವುದೇ ಉದ್ಯೋಗ ಸೃಷ್ಟಿ ಮಾಡೋದಿಲ್ಲ. ಇರುವ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡೋದರಿಂದ ಜನರಿಗೆ ಒಳ್ಳೆಯದು ಆಗತದ. ಎರಡು ಬ್ಯಾಂಕು ಹಾಗೂ ಎಲ್‌ಐಸಿಗಳನ್ನು ಖಾಸಗಿಗೆ ಮಾರಾಟ ಮಾಡಿದರ ಎಲ್ಲ ಸಮಸ್ಯೆ ಪರಿಹಾರ ಆಗತದ ಅಂತ ಸಚಿವರು ಹೇಳಿದ್ದಾರ. ಅದಕ್ಕ ಸರ್ಕಾರಿ-ಖಾಸಗಿ ಸಹ ಭಾಗಿತ್ವದ ಮೊದಲ ಮಾದರಿಯಾದ ಮಾರುತಿ ಕಂಪನಿಯ ಹಿಂದಿನ ಮುಖ್ಯಸ್ಥ ಭಾರ್ಗವ ಅವರು ಒಪ್ಪಿಗೆ ಸೂಚಿಸಿಬಿಟ್ಟಾರ. ಮಾರುತಿ ಕಂಪನಿ ಸರಕಾರದಿಂದ ಅನೇಕ ಬಾರಿ ಸಹಾಯ ಪಡೆಯಿತು ಅನ್ನೋದನ್ನ ಮರ್ತುಬಿಟ್ಟಾರ.

ಸರಕಾರ ಮನಿ ಕಟ್ಟುವುದಿಲ್ಲ. ಆ ಕೆಲಸ ಮಾಡುವ ಖಾಸಗಿಯವರಿಗೆ ಸಹಾಯ ಮಾಡತದ ಅಂತ ಸಚಿವರು ಹೇಳಿಬಿಟ್ಟಾರ. ಅವರಿಗೆ ಸುಲಭ ಸಾಲ, ಕಟ್ಟು ಬಾಕಿ ಸಾಲಗಾರರ ಕಡೆ ಮೃದು ಧೋರಣೆ, ಈ ರೀತಿಯ ಡೆವಲಪರ್‌ಗಳ ಕೈಗೆ ಸಿಕ್ಕುವ ಬಡಪಾಯಿ ಮಧ್ಯಮ ವರ್ಗದವರಿಗೆ ಎರಡು ಶೇಕಡಾ ಬಡ್ಡಿ ಕಮ್ಮಿ, ಇತ್ಯಾದಿ ಘೋಷಣೆ ಮಾಡಿದ್ದಾರೆ.

ಕುಡಿಯುವ ನೀರು ಖಾಸಗಿಯವರಿಂದ ಪಡೆಯಬೇಕು. ಅದನ್ನು ಸರಕಾರ ಕೊಡಲಿಕ್ಕೆ ಆಗೋದಿಲ್ಲ. ಅದು ಸರ್ಕಾರದ ಕೆಲಸ ಅಲ್ಲ. ಅದಕ್ಕೆ ಜಲವೆ ಜೀವನ ಅನ್ನುವ ಯೋಜನೆ ಒಳಗ ಖಾಸಗಿ ಕಂಪನಿಗಳು ನೀರು ಕೊಡತಾವ. ಅವರಿಗೆ ಅನುಕೂಲ ಆಗು ಹಂಗ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳಬೇಕು. ಆಡಳಿತ ಪಕ್ಷದ ಮಾಲೀಕರೆ ಸರ್ಕಾರಿ ಅಧಿಕಾರಿಗಳ ಮಾಲೀಕರು, ಅಷ್ಟೂ ತಿಳಿಯದೇ?

ಎಲ್ಲಾ ಹೋಗಲಿ, ಮುಂದಿನ ವರ್ಷದ ಜನಗಣತಿ ಸಹಿತ ಖಾಸಗಿಯವರು ಮಾಡೋರು. ಹಂಗಾರ ಇನ್ನೇನು ಉಳಿಯಿತು? ಶಾಸನ ಸಭೆ, ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ, ದೇಶ ರಕ್ಷಣೆ ಹಾಗೂ ಯುದ್ಧ ಮಾಡುವುದು, ನಾಣ್ಯ ಟಂಕಿಸುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳು. ಮುಂದಿನ ಸಾರಿ ಖಾಸಗಿ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದ ಖಾಸಗಿ ಕಂಪನಿ ಸಿಈಒ ಒಬ್ಬರು ನಮ್ಮ ಹಣಕಾಸು ಸಚಿವರ ಬದಲಿಗೆ ಬಜೆಟ್ ಮಂಡಿಸಿದರೂ ಮಂಡಿಸಬಹುದು. ಏನೇನೋ ಆಗುತ್ತಿರುವಾಗ ಇದು ಆದರೆ ಆಶ್ಚರ್ಯ ಏನು?


ಇದನ್ನೂ ಓದಿ: ಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...