Homeಮುಖಪುಟಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

ಕಂಡ ಕಂಡಲ್ಲಿ ಸಾಲ ಮಾಡಿಕೊಂಡು ತಿರುಗುವ, ಪರದೇಶಗಳಲ್ಲೂ ತೆರಿಗೆ ವಂಚನೆ ಮಾಡಿ ‘ವಿಶ್ವಗುರು’ ಭಾರತದ ಕೀರ್ತಿ ಪತಾಕೆ ಹಾರಿಸುವ, ಪಾಲುದಾರ ಕಂಪನಿಗಳಿಗೆ ಕೊಡಬೇಕಾದ ಹಣ ನೀಡದೇ ಸತಾಯಿಸುವ, ಜೈಲಿಗೆ ಹಾಕಬೇಕ್ತಾಗದೆ ಹುಷಾರ್ ಎಂದು ಸುಪ್ರಿಂಕೋರ್ಟ್‍ನಿಂದ ಉಗಿಸಿಕೊಳ್ಳುವ ಒಬ್ಬ ದುಷ್ಟ ಬ್ಯುಸಿನೆಸ್‍ಮ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿಯ ಸ್ನೇಹ ಎಂಥದ್ದು? ವಿದೇಶ ಪ್ರವಾಸಗಳಲ್ಲಿ ಮೋದಿಗೆ ಅಂಬಾನಿ ಕಂಪನಿ ಕೊಟ್ಟರೋ, ಅಂಬಾನಿಗೇ ಕಂಪನಿ ಕೊಡಲು ಮೋದಿ ಟೂರ್ ಮಾಡಿದರೋ?

ಇವೆಲ್ಲ ಪ್ರಶ್ನೆಗಳನ್ನು ಮತದಾರರು ಈಗ ಎತ್ತಿಕೊಳ್ಳಲೇ ಬೇಕಾಗಿದೆ. ರಫೆಲ್ ಒಪ್ಪಂದದ ನಂತರ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ 1,124.9 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.

      ರಕ್ಷಣಾ ಇಲಾಖೆಯ ‘ಡಿಫೆನ್ಸ್’ ಆಟ!

ಫ್ರಾನ್ಸಿನ ‘ಲೆ ಮಾಂಡೆ’ ಪತ್ರಿಕೆ ಇದನ್ನು ಪ್ರಕಟಿಸಿದ ನಂತರ, ‘ದಿ ವೈರ್’ ಅದನ್ನು ಭಾರತದಲ್ಲಿ ಪ್ರಕಟಿಸಿತು. ವಿಪಕ್ಷಗಳು ಈ ಕುರಿತು ಮೋದಿಯತ್ತ, ಸರ್ಕಾರದತ್ತ ಬೊಟ್ಟು ಮಾಡಿದವು. ಸರ್ಕಾರದ ನಡೆಯ ಬಗ್ಗೆ, ಪ್ರಧಾನಿ ವಿರುದ್ಧ ಟೀಕೆಗೆ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿಗಿಂತ ರಕ್ಷಣಾ ಸಚಿವಾಲಯಕ್ಕೇ ಹೆಚ್ಚು ಆಸಕ್ತಿಯಿರುವಂತಿದೆ!

‘ಡಿಫೆನ್ಸ್ ಗೆ ಇಳಿದ ರಕ್ಷಣಾ ಸಚಿವಾಲಯ, ‘ತೆರಿಗೆ ವಿನಾಯತಿ ಪಡೆದಿರುವುದನ್ನು ರಫೆಲ್ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ತಪ್ಪು. ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯತಿಗೂ ಸಂಬಂಧವಿಲ್ಲ’ ಎಂದು ಸರ್ಕಾರದ ಪರ, ಮೋದಿ ಪರ ‘ರಕ್ಷಣಾತ್ಮಕ’ ಬ್ಯಾಟಿಂಗ್ ಮಾಡಿದೆ! ರಫೆಲ್ ಡೀಲ್‍ನ ಅಧಿಕೃತ ಭಾಗವಾಗಿ ಅಥವಾ ರಫೆಲ್ ಕಾರಣಕ್ಕೇ ಅಂತ ಬಹಿರಂಗವಾಗಿ ಘೋಷಿಸಿ ತೆರಿಗೆ ವಿನಾಯತಿ ಮಾಡಲು ಫ್ರಾನ್ಸ್ ಸರ್ಕಾರವೂ ಮೂರ್ಖವಲ್ಲ, ಅಂಬಾನಿ-ಮೊದಿಯೂ ಮೂರ್ಖರಲ್ಲ. ಈ ಸರಳ ಸತ್ಯ  ರಕ್ಷಣಾ ಸಚಿವಾಲಯಕ್ಕೆ ತಿಳಿಯಲಿಲ್ಲವೇ? ಅಥವಾ ಸರ್ಕಾರವೇ ಒತ್ತಾಯದಿಂದ ಅದರ ಕಡೆ ಸ್ಟೇಟ್‍ಮೆಂಟ್ ಕೊಡೊಸಿತೇ?

ರಫೆಲ್‍ಗೆ ಪೂರಕವಾಗಿ, ಸಮಾಂತರವಾಗಿ ಅನಧಿಕೃತ ಡೀಲ್ ಏರ್ಪಟ್ಟ ಕಾರಣಕ್ಕೆ ತೆರಿಗೆ ವಿನಾಯತಿ ಮಾಡಲಾಗಿದೆ, ಇದಕ್ಕೆ ಪ್ರಧಾನಿಯ ಕೃಪೆ ಇದೆ ಎಂಬುದು ಆರೋಪ. ಹೀಗಿರುವಾಗ ಡಿಫೆನ್ಸ್ ಮಿನಿಸ್ಟ್ರಿ ಕುಂಬಳಕಾಯಿ ಕಳ್ಳನಂತೆ ವರ್ತಿಸಿತೇ?

  ಸಂಶಯಾತ್ಮಕ ಘಟನಾವಳಿಗಳು

ಮಾರ್ಚ್ 25, 2015: ಡಸಾಲ್ಟ್ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಪ್ರಕಾರ, ಎಚ್‍ಎಎಲ್, ಭಾರತೀಯ ರಕ್ಷಣಾ ಇಲಾಖೆ  ನಡುವಿನ ರಫೆಲ್ ಒಪ್ಪಂದದ ಮಾತುಕತೆಗಳು ಶೇ.95ರಷ್ಟು ಮುಗಿದಿದ್ದು, ಭಾರತ ವಾಯುಸೇನೆಗೆ 126 ರಫೆಲ್ ವಿಮಾನ ಪೂರೈಸಲು ಡಸಾಲ್ಟ್ ಖುಷಿ ಪಡುತ್ತದೆ.

ಮಾರ್ಚ್ 28, 2015: ಯುದ್ಧ ವಿಮಾನವಿರಲಿ, ಏರೋನಾಟಿಕ್ಸ್‍ನಲ್ಲಿ ಕಿಂಚಿತ್ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಾಯನ್ಸ್‍ನಿಂದ ಡಿಫೆನ್ಸ್ ಕಂಪನಿಯೊಂದು ರಿಜಿಸ್ಟರ್ ಆಗುತ್ತದೆ.

ಏಪ್ರಿಲ್ 8, 2015: ಪ್ರಧಾನಿ ಏಪ್ರಿಲ್ 9ರಿಂದ (ಮರುದಿನ) ಕೈಗೊಳ್ಳಲಿರುವ ಫ್ರಾನ್ಸ್ ಪ್ರವಾಸ ಕುರಿತು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಂದ ಪತ್ರಿಕಾಗೋಷ್ಠಿ. 126 ರಫೆಲ್ ವಿಮಾನ ಖರೀದಿ ಕುರಿತು ಡಸಾಲ್ಟ್, ಎಚ್‍ಎಎಲ್, ರಕ್ಷಣಾ ಇಲಾಖೆ ನಡುವೆ ಸುದೀರ್ಘ ಮತ್ತು ತಾಂತ್ರಿಕ ಚರ್ಚೆಗಳು ಮುಂದುವರೆದಿವೆ, ಪ್ರಧಾನಿ ಭೇಟಿಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು.

ಅಂದರೆ, ಅಲ್ಲಿವರೆಗೂ ವಿದೇಶಾಂಗ ಇಲಾಖೆಗೂ ಎರಡೇ ದಿನದಲ್ಲಿ  ‘ಅಂಬಾನಿಯ ರಫೆಲ್’ ಹಾರುವುದೂ ಗೊತ್ತಿರಲಿಲ್ಲ.

ಏಪ್ರಿಲ್ 10: ಫ್ರಾನ್ಸಿನ ರಾಹಧಾನಿ ಪ್ಯಾರಿಸ್‍ನಲ್ಲಿ ಪ್ರಧಾನಿ ಮೋದಿಯಿಂದ ಸಂಪೂರ್ಣ ಮಾರ್ಪಾಡಾದ ರಫೆಲ್ ಒಪ್ಪಂದದ ಘೋಷಣೆ! ಎಚ್‍ಎಎಲ್ ಬದಲು ಅನಿಲ್ ಅಂಬಾನಿಯ ಕಂಪನಿ1 126ರ ಬದಲು 36 ರಫೆಲ್ ವಿಮಾನ! ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಯ ಒಪ್ಪಂದ.

ಇದಾದ ಆರು ತಿಂಗಳಿಗೆ, ಫ್ರಾನ್ಸ್ ಸರ್ಕಾರದಿಂದ ಬಹು ವರ್ಷಗಳವರೆಗೂ ಇತ್ಯರ್ಥವಾಗದ ಅಂಬಾನಿಯ ತೆರಿಗೆ ವಂಚನೆ ಪ್ರಕರಣದ ಇತ್ಯರ್ಥ. ಅಂಬಾನಿಗೆ 1,100 ಕೋಟಿ ತೆರಿಗೆ ರಿಯಾಯಿತಿ!

ವಿದೇಶದಲ್ಲೂ ತೆರಿಗೆ ವಂಚಿಸಿದ ಅಂಬಾನಿಗೆ ಮೋದಿ ‘ಕಂಪನಿ’ ಕೊಡುತ್ತಿರುವುದೇಕೆ? ಸ್ವೀಡನ್ನಿನ ಎರಿಕ್ಸನ್ ಕಂನಿಗೆ ಕೊಡಬೇಕಿದ್ದ 462 ಕೋಟಿ ರೂ.ಗಳನ್ನು ನೀಡದೇ ಸತಾಯಿಸಿ, ಪದೇ ಪದೇ ಕೋರ್ಟಿಗೆ ಗೈರಾಗಿ, ಅಂತಿಮದಲ್ಲಿ ಜೈಲಿಗೆ ಕಾಕಬೇಕಾಗ್ತದೆ ಎಂದು ಸುಪ್ರಿಂಕೋರ್ಟಿಂದ ಎಚ್ಚರಿಕೆ ಪಡೆದಿದ್ದ ದಗಲ್ಬಾಜಿ ಅನಿಲ್ ಅಂಬಾನಿಯಂ ಮನುಷ್ಯನನ್ನು ರಫೆಲ್ ಡೀಲ್‍ನಲ್ಲಿ ಸೇರಿಸಿಕೊಂಡಿದ್ದು ಏಕೆ?

ಚೌಕಿದಾರ್ ಮತ್ತು ಅಂಬಾನಿ ನಡುವೆ ಬರೀ ‘ಚಾಯ್’ ಪಾರ್ಟಿಗಳು ನಡೆಯುತ್ತಿವೆಯೋ ಅಥವಾ ಪರಸ್ಪರ ಹಂಚಿ ತಿನ್ನುವ ಡೀಲ್ ನಡೆದಿವೆಯೋ?

ಕೊನೆಯಲ್ಲಿ ಕೇಳಬೇಕಾದ ಪ್ರಶ್ನೆ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...

ಅಸ್ಸಾಂ ಎಸ್‌ಐಆರ್‌ನಲ್ಲಿ 5 ಲಕ್ಷ ‘ಮಿಯಾ’ಗಳ ಹೆಸರು ಅಳಿಸಲಾಗುವುದು, ಅವರಿಗೆ ತೊಂದರೆ ಕೊಡುವುದೇ ನನ್ನ ಕೆಲಸ : ಸಿಎಂ ಹಿಮಂತ ಬಿಸ್ವಾ ಶರ್ಮಾ

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕೈಗೆತ್ತಿಕೊಂಡಾಗ ನಾಲ್ಕರಿಂದ ಐದು ಲಕ್ಷ 'ಮಿಯಾ ಮತದಾರರ' ಹೆಸರುಗಳನ್ನು ಅಳಿಸಲಾಗುವುದು, ಅವರಿಗೆ ತೊಂದರೆ ಕೊಡುವುದೇ ನನ್ನ ಕೆಲಸ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ...

ವಿಮಾನ ಪತನ : ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಸೇರಿ ಐದು ಮಂದಿ ಸಾವು

ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ...

ಕಾನೂನುಬಾಹಿರ ಹತ್ಯೆ ಆರೋಪ : ಸಿಆರ್‌ಪಿಎಫ್ ಅಧಿಕಾರಿಗೆ ಶೌರ್ಯ ಚಕ್ರ ನೀಡಿರುವುದನ್ನು ಖಂಡಿಸಿದ ಕುಕಿ-ಝೋ ಗುಂಪುಗಳು

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ "ಕಾನೂನುಬಾಹಿರ ಹತ್ಯೆ"ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ...

ಉತ್ತರ ಪ್ರದೇಶ: ಸೋನಭದ್ರಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು 

ಸೋನಭದ್ರ: ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರವಾರ್ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ರಾವರ್ ಗ್ರಾಮದ ಪಂಚಾಯತ್ ಕಟ್ಟಡದ ಬಳಿ...

ಬುಡಕಟ್ಟು ರೈತರ ಬೃಹತ್ ಮೆರವಣಿಗೆ: ಬೇಡಿಕೆಗಳ ಕುರಿತು ಸಿಪಿಐ(ಎಂ)-ಎಐಕೆಎಸ್ ನಿಯೋಗದೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆ

ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ...

‘ಭಾರತದಲ್ಲಿ ಬಿಜೆಪಿ ದಾಳಿಯನ್ನು ಎದುರಿಸಲು ‘ದೀದಿ’ಗೆ ಮಾತ್ರ ಸಾಧ್ಯ’: ಅಖಿಲೇಶ್ ಯಾದವ್ 

ಕೋಲ್ಕತ್ತಾ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ "ಬಿಜೆಪಿಯ ದಾಳಿಯನ್ನು ಎದುರಿಸುವಲ್ಲಿನ ಧೈರ್ಯ"ಕ್ಕಾಗಿ ಟಿಎಂಸಿ ಮುಖ್ಯಸ್ಥೆಯನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ...

ಬದರಿನಾಥ್-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು...

ವಿಬಿ-ಜಿ ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...