Homeಮುಖಪುಟಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

ಕಂಡ ಕಂಡಲ್ಲಿ ಸಾಲ ಮಾಡಿಕೊಂಡು ತಿರುಗುವ, ಪರದೇಶಗಳಲ್ಲೂ ತೆರಿಗೆ ವಂಚನೆ ಮಾಡಿ ‘ವಿಶ್ವಗುರು’ ಭಾರತದ ಕೀರ್ತಿ ಪತಾಕೆ ಹಾರಿಸುವ, ಪಾಲುದಾರ ಕಂಪನಿಗಳಿಗೆ ಕೊಡಬೇಕಾದ ಹಣ ನೀಡದೇ ಸತಾಯಿಸುವ, ಜೈಲಿಗೆ ಹಾಕಬೇಕ್ತಾಗದೆ ಹುಷಾರ್ ಎಂದು ಸುಪ್ರಿಂಕೋರ್ಟ್‍ನಿಂದ ಉಗಿಸಿಕೊಳ್ಳುವ ಒಬ್ಬ ದುಷ್ಟ ಬ್ಯುಸಿನೆಸ್‍ಮ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿಯ ಸ್ನೇಹ ಎಂಥದ್ದು? ವಿದೇಶ ಪ್ರವಾಸಗಳಲ್ಲಿ ಮೋದಿಗೆ ಅಂಬಾನಿ ಕಂಪನಿ ಕೊಟ್ಟರೋ, ಅಂಬಾನಿಗೇ ಕಂಪನಿ ಕೊಡಲು ಮೋದಿ ಟೂರ್ ಮಾಡಿದರೋ?

ಇವೆಲ್ಲ ಪ್ರಶ್ನೆಗಳನ್ನು ಮತದಾರರು ಈಗ ಎತ್ತಿಕೊಳ್ಳಲೇ ಬೇಕಾಗಿದೆ. ರಫೆಲ್ ಒಪ್ಪಂದದ ನಂತರ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ 1,124.9 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.

      ರಕ್ಷಣಾ ಇಲಾಖೆಯ ‘ಡಿಫೆನ್ಸ್’ ಆಟ!

ಫ್ರಾನ್ಸಿನ ‘ಲೆ ಮಾಂಡೆ’ ಪತ್ರಿಕೆ ಇದನ್ನು ಪ್ರಕಟಿಸಿದ ನಂತರ, ‘ದಿ ವೈರ್’ ಅದನ್ನು ಭಾರತದಲ್ಲಿ ಪ್ರಕಟಿಸಿತು. ವಿಪಕ್ಷಗಳು ಈ ಕುರಿತು ಮೋದಿಯತ್ತ, ಸರ್ಕಾರದತ್ತ ಬೊಟ್ಟು ಮಾಡಿದವು. ಸರ್ಕಾರದ ನಡೆಯ ಬಗ್ಗೆ, ಪ್ರಧಾನಿ ವಿರುದ್ಧ ಟೀಕೆಗೆ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿಗಿಂತ ರಕ್ಷಣಾ ಸಚಿವಾಲಯಕ್ಕೇ ಹೆಚ್ಚು ಆಸಕ್ತಿಯಿರುವಂತಿದೆ!

‘ಡಿಫೆನ್ಸ್ ಗೆ ಇಳಿದ ರಕ್ಷಣಾ ಸಚಿವಾಲಯ, ‘ತೆರಿಗೆ ವಿನಾಯತಿ ಪಡೆದಿರುವುದನ್ನು ರಫೆಲ್ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ತಪ್ಪು. ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯತಿಗೂ ಸಂಬಂಧವಿಲ್ಲ’ ಎಂದು ಸರ್ಕಾರದ ಪರ, ಮೋದಿ ಪರ ‘ರಕ್ಷಣಾತ್ಮಕ’ ಬ್ಯಾಟಿಂಗ್ ಮಾಡಿದೆ! ರಫೆಲ್ ಡೀಲ್‍ನ ಅಧಿಕೃತ ಭಾಗವಾಗಿ ಅಥವಾ ರಫೆಲ್ ಕಾರಣಕ್ಕೇ ಅಂತ ಬಹಿರಂಗವಾಗಿ ಘೋಷಿಸಿ ತೆರಿಗೆ ವಿನಾಯತಿ ಮಾಡಲು ಫ್ರಾನ್ಸ್ ಸರ್ಕಾರವೂ ಮೂರ್ಖವಲ್ಲ, ಅಂಬಾನಿ-ಮೊದಿಯೂ ಮೂರ್ಖರಲ್ಲ. ಈ ಸರಳ ಸತ್ಯ  ರಕ್ಷಣಾ ಸಚಿವಾಲಯಕ್ಕೆ ತಿಳಿಯಲಿಲ್ಲವೇ? ಅಥವಾ ಸರ್ಕಾರವೇ ಒತ್ತಾಯದಿಂದ ಅದರ ಕಡೆ ಸ್ಟೇಟ್‍ಮೆಂಟ್ ಕೊಡೊಸಿತೇ?

ರಫೆಲ್‍ಗೆ ಪೂರಕವಾಗಿ, ಸಮಾಂತರವಾಗಿ ಅನಧಿಕೃತ ಡೀಲ್ ಏರ್ಪಟ್ಟ ಕಾರಣಕ್ಕೆ ತೆರಿಗೆ ವಿನಾಯತಿ ಮಾಡಲಾಗಿದೆ, ಇದಕ್ಕೆ ಪ್ರಧಾನಿಯ ಕೃಪೆ ಇದೆ ಎಂಬುದು ಆರೋಪ. ಹೀಗಿರುವಾಗ ಡಿಫೆನ್ಸ್ ಮಿನಿಸ್ಟ್ರಿ ಕುಂಬಳಕಾಯಿ ಕಳ್ಳನಂತೆ ವರ್ತಿಸಿತೇ?

  ಸಂಶಯಾತ್ಮಕ ಘಟನಾವಳಿಗಳು

ಮಾರ್ಚ್ 25, 2015: ಡಸಾಲ್ಟ್ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಪ್ರಕಾರ, ಎಚ್‍ಎಎಲ್, ಭಾರತೀಯ ರಕ್ಷಣಾ ಇಲಾಖೆ  ನಡುವಿನ ರಫೆಲ್ ಒಪ್ಪಂದದ ಮಾತುಕತೆಗಳು ಶೇ.95ರಷ್ಟು ಮುಗಿದಿದ್ದು, ಭಾರತ ವಾಯುಸೇನೆಗೆ 126 ರಫೆಲ್ ವಿಮಾನ ಪೂರೈಸಲು ಡಸಾಲ್ಟ್ ಖುಷಿ ಪಡುತ್ತದೆ.

ಮಾರ್ಚ್ 28, 2015: ಯುದ್ಧ ವಿಮಾನವಿರಲಿ, ಏರೋನಾಟಿಕ್ಸ್‍ನಲ್ಲಿ ಕಿಂಚಿತ್ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಾಯನ್ಸ್‍ನಿಂದ ಡಿಫೆನ್ಸ್ ಕಂಪನಿಯೊಂದು ರಿಜಿಸ್ಟರ್ ಆಗುತ್ತದೆ.

ಏಪ್ರಿಲ್ 8, 2015: ಪ್ರಧಾನಿ ಏಪ್ರಿಲ್ 9ರಿಂದ (ಮರುದಿನ) ಕೈಗೊಳ್ಳಲಿರುವ ಫ್ರಾನ್ಸ್ ಪ್ರವಾಸ ಕುರಿತು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಂದ ಪತ್ರಿಕಾಗೋಷ್ಠಿ. 126 ರಫೆಲ್ ವಿಮಾನ ಖರೀದಿ ಕುರಿತು ಡಸಾಲ್ಟ್, ಎಚ್‍ಎಎಲ್, ರಕ್ಷಣಾ ಇಲಾಖೆ ನಡುವೆ ಸುದೀರ್ಘ ಮತ್ತು ತಾಂತ್ರಿಕ ಚರ್ಚೆಗಳು ಮುಂದುವರೆದಿವೆ, ಪ್ರಧಾನಿ ಭೇಟಿಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು.

ಅಂದರೆ, ಅಲ್ಲಿವರೆಗೂ ವಿದೇಶಾಂಗ ಇಲಾಖೆಗೂ ಎರಡೇ ದಿನದಲ್ಲಿ  ‘ಅಂಬಾನಿಯ ರಫೆಲ್’ ಹಾರುವುದೂ ಗೊತ್ತಿರಲಿಲ್ಲ.

ಏಪ್ರಿಲ್ 10: ಫ್ರಾನ್ಸಿನ ರಾಹಧಾನಿ ಪ್ಯಾರಿಸ್‍ನಲ್ಲಿ ಪ್ರಧಾನಿ ಮೋದಿಯಿಂದ ಸಂಪೂರ್ಣ ಮಾರ್ಪಾಡಾದ ರಫೆಲ್ ಒಪ್ಪಂದದ ಘೋಷಣೆ! ಎಚ್‍ಎಎಲ್ ಬದಲು ಅನಿಲ್ ಅಂಬಾನಿಯ ಕಂಪನಿ1 126ರ ಬದಲು 36 ರಫೆಲ್ ವಿಮಾನ! ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಯ ಒಪ್ಪಂದ.

ಇದಾದ ಆರು ತಿಂಗಳಿಗೆ, ಫ್ರಾನ್ಸ್ ಸರ್ಕಾರದಿಂದ ಬಹು ವರ್ಷಗಳವರೆಗೂ ಇತ್ಯರ್ಥವಾಗದ ಅಂಬಾನಿಯ ತೆರಿಗೆ ವಂಚನೆ ಪ್ರಕರಣದ ಇತ್ಯರ್ಥ. ಅಂಬಾನಿಗೆ 1,100 ಕೋಟಿ ತೆರಿಗೆ ರಿಯಾಯಿತಿ!

ವಿದೇಶದಲ್ಲೂ ತೆರಿಗೆ ವಂಚಿಸಿದ ಅಂಬಾನಿಗೆ ಮೋದಿ ‘ಕಂಪನಿ’ ಕೊಡುತ್ತಿರುವುದೇಕೆ? ಸ್ವೀಡನ್ನಿನ ಎರಿಕ್ಸನ್ ಕಂನಿಗೆ ಕೊಡಬೇಕಿದ್ದ 462 ಕೋಟಿ ರೂ.ಗಳನ್ನು ನೀಡದೇ ಸತಾಯಿಸಿ, ಪದೇ ಪದೇ ಕೋರ್ಟಿಗೆ ಗೈರಾಗಿ, ಅಂತಿಮದಲ್ಲಿ ಜೈಲಿಗೆ ಕಾಕಬೇಕಾಗ್ತದೆ ಎಂದು ಸುಪ್ರಿಂಕೋರ್ಟಿಂದ ಎಚ್ಚರಿಕೆ ಪಡೆದಿದ್ದ ದಗಲ್ಬಾಜಿ ಅನಿಲ್ ಅಂಬಾನಿಯಂ ಮನುಷ್ಯನನ್ನು ರಫೆಲ್ ಡೀಲ್‍ನಲ್ಲಿ ಸೇರಿಸಿಕೊಂಡಿದ್ದು ಏಕೆ?

ಚೌಕಿದಾರ್ ಮತ್ತು ಅಂಬಾನಿ ನಡುವೆ ಬರೀ ‘ಚಾಯ್’ ಪಾರ್ಟಿಗಳು ನಡೆಯುತ್ತಿವೆಯೋ ಅಥವಾ ಪರಸ್ಪರ ಹಂಚಿ ತಿನ್ನುವ ಡೀಲ್ ನಡೆದಿವೆಯೋ?

ಕೊನೆಯಲ್ಲಿ ಕೇಳಬೇಕಾದ ಪ್ರಶ್ನೆ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...