Homeಮುಖಪುಟಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

ಕಂಡ ಕಂಡಲ್ಲಿ ಸಾಲ ಮಾಡಿಕೊಂಡು ತಿರುಗುವ, ಪರದೇಶಗಳಲ್ಲೂ ತೆರಿಗೆ ವಂಚನೆ ಮಾಡಿ ‘ವಿಶ್ವಗುರು’ ಭಾರತದ ಕೀರ್ತಿ ಪತಾಕೆ ಹಾರಿಸುವ, ಪಾಲುದಾರ ಕಂಪನಿಗಳಿಗೆ ಕೊಡಬೇಕಾದ ಹಣ ನೀಡದೇ ಸತಾಯಿಸುವ, ಜೈಲಿಗೆ ಹಾಕಬೇಕ್ತಾಗದೆ ಹುಷಾರ್ ಎಂದು ಸುಪ್ರಿಂಕೋರ್ಟ್‍ನಿಂದ ಉಗಿಸಿಕೊಳ್ಳುವ ಒಬ್ಬ ದುಷ್ಟ ಬ್ಯುಸಿನೆಸ್‍ಮ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿಯ ಸ್ನೇಹ ಎಂಥದ್ದು? ವಿದೇಶ ಪ್ರವಾಸಗಳಲ್ಲಿ ಮೋದಿಗೆ ಅಂಬಾನಿ ಕಂಪನಿ ಕೊಟ್ಟರೋ, ಅಂಬಾನಿಗೇ ಕಂಪನಿ ಕೊಡಲು ಮೋದಿ ಟೂರ್ ಮಾಡಿದರೋ?

ಇವೆಲ್ಲ ಪ್ರಶ್ನೆಗಳನ್ನು ಮತದಾರರು ಈಗ ಎತ್ತಿಕೊಳ್ಳಲೇ ಬೇಕಾಗಿದೆ. ರಫೆಲ್ ಒಪ್ಪಂದದ ನಂತರ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ 1,124.9 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.

      ರಕ್ಷಣಾ ಇಲಾಖೆಯ ‘ಡಿಫೆನ್ಸ್’ ಆಟ!

ಫ್ರಾನ್ಸಿನ ‘ಲೆ ಮಾಂಡೆ’ ಪತ್ರಿಕೆ ಇದನ್ನು ಪ್ರಕಟಿಸಿದ ನಂತರ, ‘ದಿ ವೈರ್’ ಅದನ್ನು ಭಾರತದಲ್ಲಿ ಪ್ರಕಟಿಸಿತು. ವಿಪಕ್ಷಗಳು ಈ ಕುರಿತು ಮೋದಿಯತ್ತ, ಸರ್ಕಾರದತ್ತ ಬೊಟ್ಟು ಮಾಡಿದವು. ಸರ್ಕಾರದ ನಡೆಯ ಬಗ್ಗೆ, ಪ್ರಧಾನಿ ವಿರುದ್ಧ ಟೀಕೆಗೆ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿಗಿಂತ ರಕ್ಷಣಾ ಸಚಿವಾಲಯಕ್ಕೇ ಹೆಚ್ಚು ಆಸಕ್ತಿಯಿರುವಂತಿದೆ!

‘ಡಿಫೆನ್ಸ್ ಗೆ ಇಳಿದ ರಕ್ಷಣಾ ಸಚಿವಾಲಯ, ‘ತೆರಿಗೆ ವಿನಾಯತಿ ಪಡೆದಿರುವುದನ್ನು ರಫೆಲ್ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ತಪ್ಪು. ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯತಿಗೂ ಸಂಬಂಧವಿಲ್ಲ’ ಎಂದು ಸರ್ಕಾರದ ಪರ, ಮೋದಿ ಪರ ‘ರಕ್ಷಣಾತ್ಮಕ’ ಬ್ಯಾಟಿಂಗ್ ಮಾಡಿದೆ! ರಫೆಲ್ ಡೀಲ್‍ನ ಅಧಿಕೃತ ಭಾಗವಾಗಿ ಅಥವಾ ರಫೆಲ್ ಕಾರಣಕ್ಕೇ ಅಂತ ಬಹಿರಂಗವಾಗಿ ಘೋಷಿಸಿ ತೆರಿಗೆ ವಿನಾಯತಿ ಮಾಡಲು ಫ್ರಾನ್ಸ್ ಸರ್ಕಾರವೂ ಮೂರ್ಖವಲ್ಲ, ಅಂಬಾನಿ-ಮೊದಿಯೂ ಮೂರ್ಖರಲ್ಲ. ಈ ಸರಳ ಸತ್ಯ  ರಕ್ಷಣಾ ಸಚಿವಾಲಯಕ್ಕೆ ತಿಳಿಯಲಿಲ್ಲವೇ? ಅಥವಾ ಸರ್ಕಾರವೇ ಒತ್ತಾಯದಿಂದ ಅದರ ಕಡೆ ಸ್ಟೇಟ್‍ಮೆಂಟ್ ಕೊಡೊಸಿತೇ?

ರಫೆಲ್‍ಗೆ ಪೂರಕವಾಗಿ, ಸಮಾಂತರವಾಗಿ ಅನಧಿಕೃತ ಡೀಲ್ ಏರ್ಪಟ್ಟ ಕಾರಣಕ್ಕೆ ತೆರಿಗೆ ವಿನಾಯತಿ ಮಾಡಲಾಗಿದೆ, ಇದಕ್ಕೆ ಪ್ರಧಾನಿಯ ಕೃಪೆ ಇದೆ ಎಂಬುದು ಆರೋಪ. ಹೀಗಿರುವಾಗ ಡಿಫೆನ್ಸ್ ಮಿನಿಸ್ಟ್ರಿ ಕುಂಬಳಕಾಯಿ ಕಳ್ಳನಂತೆ ವರ್ತಿಸಿತೇ?

  ಸಂಶಯಾತ್ಮಕ ಘಟನಾವಳಿಗಳು

ಮಾರ್ಚ್ 25, 2015: ಡಸಾಲ್ಟ್ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಪ್ರಕಾರ, ಎಚ್‍ಎಎಲ್, ಭಾರತೀಯ ರಕ್ಷಣಾ ಇಲಾಖೆ  ನಡುವಿನ ರಫೆಲ್ ಒಪ್ಪಂದದ ಮಾತುಕತೆಗಳು ಶೇ.95ರಷ್ಟು ಮುಗಿದಿದ್ದು, ಭಾರತ ವಾಯುಸೇನೆಗೆ 126 ರಫೆಲ್ ವಿಮಾನ ಪೂರೈಸಲು ಡಸಾಲ್ಟ್ ಖುಷಿ ಪಡುತ್ತದೆ.

ಮಾರ್ಚ್ 28, 2015: ಯುದ್ಧ ವಿಮಾನವಿರಲಿ, ಏರೋನಾಟಿಕ್ಸ್‍ನಲ್ಲಿ ಕಿಂಚಿತ್ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಾಯನ್ಸ್‍ನಿಂದ ಡಿಫೆನ್ಸ್ ಕಂಪನಿಯೊಂದು ರಿಜಿಸ್ಟರ್ ಆಗುತ್ತದೆ.

ಏಪ್ರಿಲ್ 8, 2015: ಪ್ರಧಾನಿ ಏಪ್ರಿಲ್ 9ರಿಂದ (ಮರುದಿನ) ಕೈಗೊಳ್ಳಲಿರುವ ಫ್ರಾನ್ಸ್ ಪ್ರವಾಸ ಕುರಿತು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಂದ ಪತ್ರಿಕಾಗೋಷ್ಠಿ. 126 ರಫೆಲ್ ವಿಮಾನ ಖರೀದಿ ಕುರಿತು ಡಸಾಲ್ಟ್, ಎಚ್‍ಎಎಲ್, ರಕ್ಷಣಾ ಇಲಾಖೆ ನಡುವೆ ಸುದೀರ್ಘ ಮತ್ತು ತಾಂತ್ರಿಕ ಚರ್ಚೆಗಳು ಮುಂದುವರೆದಿವೆ, ಪ್ರಧಾನಿ ಭೇಟಿಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು.

ಅಂದರೆ, ಅಲ್ಲಿವರೆಗೂ ವಿದೇಶಾಂಗ ಇಲಾಖೆಗೂ ಎರಡೇ ದಿನದಲ್ಲಿ  ‘ಅಂಬಾನಿಯ ರಫೆಲ್’ ಹಾರುವುದೂ ಗೊತ್ತಿರಲಿಲ್ಲ.

ಏಪ್ರಿಲ್ 10: ಫ್ರಾನ್ಸಿನ ರಾಹಧಾನಿ ಪ್ಯಾರಿಸ್‍ನಲ್ಲಿ ಪ್ರಧಾನಿ ಮೋದಿಯಿಂದ ಸಂಪೂರ್ಣ ಮಾರ್ಪಾಡಾದ ರಫೆಲ್ ಒಪ್ಪಂದದ ಘೋಷಣೆ! ಎಚ್‍ಎಎಲ್ ಬದಲು ಅನಿಲ್ ಅಂಬಾನಿಯ ಕಂಪನಿ1 126ರ ಬದಲು 36 ರಫೆಲ್ ವಿಮಾನ! ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಯ ಒಪ್ಪಂದ.

ಇದಾದ ಆರು ತಿಂಗಳಿಗೆ, ಫ್ರಾನ್ಸ್ ಸರ್ಕಾರದಿಂದ ಬಹು ವರ್ಷಗಳವರೆಗೂ ಇತ್ಯರ್ಥವಾಗದ ಅಂಬಾನಿಯ ತೆರಿಗೆ ವಂಚನೆ ಪ್ರಕರಣದ ಇತ್ಯರ್ಥ. ಅಂಬಾನಿಗೆ 1,100 ಕೋಟಿ ತೆರಿಗೆ ರಿಯಾಯಿತಿ!

ವಿದೇಶದಲ್ಲೂ ತೆರಿಗೆ ವಂಚಿಸಿದ ಅಂಬಾನಿಗೆ ಮೋದಿ ‘ಕಂಪನಿ’ ಕೊಡುತ್ತಿರುವುದೇಕೆ? ಸ್ವೀಡನ್ನಿನ ಎರಿಕ್ಸನ್ ಕಂನಿಗೆ ಕೊಡಬೇಕಿದ್ದ 462 ಕೋಟಿ ರೂ.ಗಳನ್ನು ನೀಡದೇ ಸತಾಯಿಸಿ, ಪದೇ ಪದೇ ಕೋರ್ಟಿಗೆ ಗೈರಾಗಿ, ಅಂತಿಮದಲ್ಲಿ ಜೈಲಿಗೆ ಕಾಕಬೇಕಾಗ್ತದೆ ಎಂದು ಸುಪ್ರಿಂಕೋರ್ಟಿಂದ ಎಚ್ಚರಿಕೆ ಪಡೆದಿದ್ದ ದಗಲ್ಬಾಜಿ ಅನಿಲ್ ಅಂಬಾನಿಯಂ ಮನುಷ್ಯನನ್ನು ರಫೆಲ್ ಡೀಲ್‍ನಲ್ಲಿ ಸೇರಿಸಿಕೊಂಡಿದ್ದು ಏಕೆ?

ಚೌಕಿದಾರ್ ಮತ್ತು ಅಂಬಾನಿ ನಡುವೆ ಬರೀ ‘ಚಾಯ್’ ಪಾರ್ಟಿಗಳು ನಡೆಯುತ್ತಿವೆಯೋ ಅಥವಾ ಪರಸ್ಪರ ಹಂಚಿ ತಿನ್ನುವ ಡೀಲ್ ನಡೆದಿವೆಯೋ?

ಕೊನೆಯಲ್ಲಿ ಕೇಳಬೇಕಾದ ಪ್ರಶ್ನೆ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...