Homeಮುಖಪುಟಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

- Advertisement -
- Advertisement -

| ಮಲ್ಲನಗೌಡರ್ ಪಿ.ಕೆ |

ಕಂಡ ಕಂಡಲ್ಲಿ ಸಾಲ ಮಾಡಿಕೊಂಡು ತಿರುಗುವ, ಪರದೇಶಗಳಲ್ಲೂ ತೆರಿಗೆ ವಂಚನೆ ಮಾಡಿ ‘ವಿಶ್ವಗುರು’ ಭಾರತದ ಕೀರ್ತಿ ಪತಾಕೆ ಹಾರಿಸುವ, ಪಾಲುದಾರ ಕಂಪನಿಗಳಿಗೆ ಕೊಡಬೇಕಾದ ಹಣ ನೀಡದೇ ಸತಾಯಿಸುವ, ಜೈಲಿಗೆ ಹಾಕಬೇಕ್ತಾಗದೆ ಹುಷಾರ್ ಎಂದು ಸುಪ್ರಿಂಕೋರ್ಟ್‍ನಿಂದ ಉಗಿಸಿಕೊಳ್ಳುವ ಒಬ್ಬ ದುಷ್ಟ ಬ್ಯುಸಿನೆಸ್‍ಮ್ಯಾನ್ ಜೊತೆ ಪ್ರಧಾನಿ ನರೇಂದ್ರ ಮೋದಿಯ ಸ್ನೇಹ ಎಂಥದ್ದು? ವಿದೇಶ ಪ್ರವಾಸಗಳಲ್ಲಿ ಮೋದಿಗೆ ಅಂಬಾನಿ ಕಂಪನಿ ಕೊಟ್ಟರೋ, ಅಂಬಾನಿಗೇ ಕಂಪನಿ ಕೊಡಲು ಮೋದಿ ಟೂರ್ ಮಾಡಿದರೋ?

ಇವೆಲ್ಲ ಪ್ರಶ್ನೆಗಳನ್ನು ಮತದಾರರು ಈಗ ಎತ್ತಿಕೊಳ್ಳಲೇ ಬೇಕಾಗಿದೆ. ರಫೆಲ್ ಒಪ್ಪಂದದ ನಂತರ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಕಂಪನಿಗೆ 1,124.9 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿರುವುದು ಬೆಳಕಿಗೆ ಬಂದಿದೆ.

      ರಕ್ಷಣಾ ಇಲಾಖೆಯ ‘ಡಿಫೆನ್ಸ್’ ಆಟ!

ಫ್ರಾನ್ಸಿನ ‘ಲೆ ಮಾಂಡೆ’ ಪತ್ರಿಕೆ ಇದನ್ನು ಪ್ರಕಟಿಸಿದ ನಂತರ, ‘ದಿ ವೈರ್’ ಅದನ್ನು ಭಾರತದಲ್ಲಿ ಪ್ರಕಟಿಸಿತು. ವಿಪಕ್ಷಗಳು ಈ ಕುರಿತು ಮೋದಿಯತ್ತ, ಸರ್ಕಾರದತ್ತ ಬೊಟ್ಟು ಮಾಡಿದವು. ಸರ್ಕಾರದ ನಡೆಯ ಬಗ್ಗೆ, ಪ್ರಧಾನಿ ವಿರುದ್ಧ ಟೀಕೆಗೆ ಪ್ರತ್ಯುತ್ತರ ನೀಡುವಲ್ಲಿ ಬಿಜೆಪಿಗಿಂತ ರಕ್ಷಣಾ ಸಚಿವಾಲಯಕ್ಕೇ ಹೆಚ್ಚು ಆಸಕ್ತಿಯಿರುವಂತಿದೆ!

‘ಡಿಫೆನ್ಸ್ ಗೆ ಇಳಿದ ರಕ್ಷಣಾ ಸಚಿವಾಲಯ, ‘ತೆರಿಗೆ ವಿನಾಯತಿ ಪಡೆದಿರುವುದನ್ನು ರಫೆಲ್ ಒಪ್ಪಂದದ ಜತೆ ಸಂಬಂಧ ಕಲ್ಪಿಸುವುದು ತಪ್ಪು. ಸರ್ಕಾರಕ್ಕೂ ಹಾಗೂ ತೆರಿಗೆ ವಿನಾಯತಿಗೂ ಸಂಬಂಧವಿಲ್ಲ’ ಎಂದು ಸರ್ಕಾರದ ಪರ, ಮೋದಿ ಪರ ‘ರಕ್ಷಣಾತ್ಮಕ’ ಬ್ಯಾಟಿಂಗ್ ಮಾಡಿದೆ! ರಫೆಲ್ ಡೀಲ್‍ನ ಅಧಿಕೃತ ಭಾಗವಾಗಿ ಅಥವಾ ರಫೆಲ್ ಕಾರಣಕ್ಕೇ ಅಂತ ಬಹಿರಂಗವಾಗಿ ಘೋಷಿಸಿ ತೆರಿಗೆ ವಿನಾಯತಿ ಮಾಡಲು ಫ್ರಾನ್ಸ್ ಸರ್ಕಾರವೂ ಮೂರ್ಖವಲ್ಲ, ಅಂಬಾನಿ-ಮೊದಿಯೂ ಮೂರ್ಖರಲ್ಲ. ಈ ಸರಳ ಸತ್ಯ  ರಕ್ಷಣಾ ಸಚಿವಾಲಯಕ್ಕೆ ತಿಳಿಯಲಿಲ್ಲವೇ? ಅಥವಾ ಸರ್ಕಾರವೇ ಒತ್ತಾಯದಿಂದ ಅದರ ಕಡೆ ಸ್ಟೇಟ್‍ಮೆಂಟ್ ಕೊಡೊಸಿತೇ?

ರಫೆಲ್‍ಗೆ ಪೂರಕವಾಗಿ, ಸಮಾಂತರವಾಗಿ ಅನಧಿಕೃತ ಡೀಲ್ ಏರ್ಪಟ್ಟ ಕಾರಣಕ್ಕೆ ತೆರಿಗೆ ವಿನಾಯತಿ ಮಾಡಲಾಗಿದೆ, ಇದಕ್ಕೆ ಪ್ರಧಾನಿಯ ಕೃಪೆ ಇದೆ ಎಂಬುದು ಆರೋಪ. ಹೀಗಿರುವಾಗ ಡಿಫೆನ್ಸ್ ಮಿನಿಸ್ಟ್ರಿ ಕುಂಬಳಕಾಯಿ ಕಳ್ಳನಂತೆ ವರ್ತಿಸಿತೇ?

  ಸಂಶಯಾತ್ಮಕ ಘಟನಾವಳಿಗಳು

ಮಾರ್ಚ್ 25, 2015: ಡಸಾಲ್ಟ್ ಬಿಡುಗಡೆ ಮಾಡಿದ ಅಧಿಕೃತ ವಿಡಿಯೋ ಪ್ರಕಾರ, ಎಚ್‍ಎಎಲ್, ಭಾರತೀಯ ರಕ್ಷಣಾ ಇಲಾಖೆ  ನಡುವಿನ ರಫೆಲ್ ಒಪ್ಪಂದದ ಮಾತುಕತೆಗಳು ಶೇ.95ರಷ್ಟು ಮುಗಿದಿದ್ದು, ಭಾರತ ವಾಯುಸೇನೆಗೆ 126 ರಫೆಲ್ ವಿಮಾನ ಪೂರೈಸಲು ಡಸಾಲ್ಟ್ ಖುಷಿ ಪಡುತ್ತದೆ.

ಮಾರ್ಚ್ 28, 2015: ಯುದ್ಧ ವಿಮಾನವಿರಲಿ, ಏರೋನಾಟಿಕ್ಸ್‍ನಲ್ಲಿ ಕಿಂಚಿತ್ ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಾಯನ್ಸ್‍ನಿಂದ ಡಿಫೆನ್ಸ್ ಕಂಪನಿಯೊಂದು ರಿಜಿಸ್ಟರ್ ಆಗುತ್ತದೆ.

ಏಪ್ರಿಲ್ 8, 2015: ಪ್ರಧಾನಿ ಏಪ್ರಿಲ್ 9ರಿಂದ (ಮರುದಿನ) ಕೈಗೊಳ್ಳಲಿರುವ ಫ್ರಾನ್ಸ್ ಪ್ರವಾಸ ಕುರಿತು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಂದ ಪತ್ರಿಕಾಗೋಷ್ಠಿ. 126 ರಫೆಲ್ ವಿಮಾನ ಖರೀದಿ ಕುರಿತು ಡಸಾಲ್ಟ್, ಎಚ್‍ಎಎಲ್, ರಕ್ಷಣಾ ಇಲಾಖೆ ನಡುವೆ ಸುದೀರ್ಘ ಮತ್ತು ತಾಂತ್ರಿಕ ಚರ್ಚೆಗಳು ಮುಂದುವರೆದಿವೆ, ಪ್ರಧಾನಿ ಭೇಟಿಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು.

ಅಂದರೆ, ಅಲ್ಲಿವರೆಗೂ ವಿದೇಶಾಂಗ ಇಲಾಖೆಗೂ ಎರಡೇ ದಿನದಲ್ಲಿ  ‘ಅಂಬಾನಿಯ ರಫೆಲ್’ ಹಾರುವುದೂ ಗೊತ್ತಿರಲಿಲ್ಲ.

ಏಪ್ರಿಲ್ 10: ಫ್ರಾನ್ಸಿನ ರಾಹಧಾನಿ ಪ್ಯಾರಿಸ್‍ನಲ್ಲಿ ಪ್ರಧಾನಿ ಮೋದಿಯಿಂದ ಸಂಪೂರ್ಣ ಮಾರ್ಪಾಡಾದ ರಫೆಲ್ ಒಪ್ಪಂದದ ಘೋಷಣೆ! ಎಚ್‍ಎಎಲ್ ಬದಲು ಅನಿಲ್ ಅಂಬಾನಿಯ ಕಂಪನಿ1 126ರ ಬದಲು 36 ರಫೆಲ್ ವಿಮಾನ! ಮೂಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಯ ಒಪ್ಪಂದ.

ಇದಾದ ಆರು ತಿಂಗಳಿಗೆ, ಫ್ರಾನ್ಸ್ ಸರ್ಕಾರದಿಂದ ಬಹು ವರ್ಷಗಳವರೆಗೂ ಇತ್ಯರ್ಥವಾಗದ ಅಂಬಾನಿಯ ತೆರಿಗೆ ವಂಚನೆ ಪ್ರಕರಣದ ಇತ್ಯರ್ಥ. ಅಂಬಾನಿಗೆ 1,100 ಕೋಟಿ ತೆರಿಗೆ ರಿಯಾಯಿತಿ!

ವಿದೇಶದಲ್ಲೂ ತೆರಿಗೆ ವಂಚಿಸಿದ ಅಂಬಾನಿಗೆ ಮೋದಿ ‘ಕಂಪನಿ’ ಕೊಡುತ್ತಿರುವುದೇಕೆ? ಸ್ವೀಡನ್ನಿನ ಎರಿಕ್ಸನ್ ಕಂನಿಗೆ ಕೊಡಬೇಕಿದ್ದ 462 ಕೋಟಿ ರೂ.ಗಳನ್ನು ನೀಡದೇ ಸತಾಯಿಸಿ, ಪದೇ ಪದೇ ಕೋರ್ಟಿಗೆ ಗೈರಾಗಿ, ಅಂತಿಮದಲ್ಲಿ ಜೈಲಿಗೆ ಕಾಕಬೇಕಾಗ್ತದೆ ಎಂದು ಸುಪ್ರಿಂಕೋರ್ಟಿಂದ ಎಚ್ಚರಿಕೆ ಪಡೆದಿದ್ದ ದಗಲ್ಬಾಜಿ ಅನಿಲ್ ಅಂಬಾನಿಯಂ ಮನುಷ್ಯನನ್ನು ರಫೆಲ್ ಡೀಲ್‍ನಲ್ಲಿ ಸೇರಿಸಿಕೊಂಡಿದ್ದು ಏಕೆ?

ಚೌಕಿದಾರ್ ಮತ್ತು ಅಂಬಾನಿ ನಡುವೆ ಬರೀ ‘ಚಾಯ್’ ಪಾರ್ಟಿಗಳು ನಡೆಯುತ್ತಿವೆಯೋ ಅಥವಾ ಪರಸ್ಪರ ಹಂಚಿ ತಿನ್ನುವ ಡೀಲ್ ನಡೆದಿವೆಯೋ?

ಕೊನೆಯಲ್ಲಿ ಕೇಳಬೇಕಾದ ಪ್ರಶ್ನೆ: ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...