Homeಕರ್ನಾಟಕಚುನಾವಣೆಗೆ ಮುಂಚೆಯೇ 3 ಬಿಜೆಪಿ ಔಟ್, 2 ಕಾಂಗ್ರೆಸ್ ಔಟ್, 4 ಕಡೆ ಫೈಟ್

ಚುನಾವಣೆಗೆ ಮುಂಚೆಯೇ 3 ಬಿಜೆಪಿ ಔಟ್, 2 ಕಾಂಗ್ರೆಸ್ ಔಟ್, 4 ಕಡೆ ಫೈಟ್

- Advertisement -
- Advertisement -

ಮೊದಲ ಹಂತ: ಕಡೆಯ ದಿನದ ಬೆಳವಣಿಗೆಗಳು

ನಾಮಪತ್ರ ಸಲ್ಲಿಕೆಯಾದ ಸಂದರ್ಭದಲ್ಲೇ ಐದು ಕ್ಷೇತ್ರಗಳಲ್ಲಿ ಫಲಿತಾಂಶದ ದಿಕ್ಕು ಸ್ಪಷ್ಟವಾಗಿದ್ದರೆ, ಕಡೆಯ ದಿನಗಳಲ್ಲಿ ನಡೆದ ಕೆಲವು ಮಹತ್ವದ ಬೆಳವಣಿಗೆಗಳ ಕಾರಣದಿಂದ ಐದು ಕ್ಷೇತ್ರಗಳಲ್ಲಿ ಫಲಿತಾಂಶ ದಿಕ್ಕು ಪಡೆದುಕೊಂಡುಬಿಟ್ಟಿದೆ. ಉಳಿದಂತೆ, 4 ಕ್ಷೇತ್ರಗಳಲ್ಲಿ ಈಗಲೂ ಫೈಟ್ ಇದ್ದು ಇಂದಿನ ಬೆಳವಣಿಗೆಗಳು ಏನಾಗುತ್ತದೆಂಬುದರ ಜೊತೆಗೆ ಹೊರಗೆ ವ್ಯಕ್ತವಾಗದ ಮತದಾರರ ಭಾವನೆಗಳು ಮತಗಟ್ಟೆಯಲ್ಲಿ ಯಾರನ್ನು ಗೆಲ್ಲಿಸುತ್ತದೋ ನೋಡಬೇಕು.

ಮೊದಲಿಗೆ ಕಾಂಗ್ರೆಸ್ಸಿನದ್ದು ನೋಡೋಣ. ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಮುಂಚೆಯೇ ಭಾರೀ ವಿರೋಧ ಎದುರಿಸಿದ್ದು ಕೆ.ಎಚ್.ಮುನಿಯಪ್ಪ. 30 ವರ್ಷಗಳಿಂದ ಎಂಪಿಯಾಗಿರುವ ಕೆ.ಎಚ್.ಗೆ ಸಹಜ ವಿರೋಧದ ಅಲೆಯ ಜೊತೆಗೆ ಅವರ ವ್ಯಕ್ತಿತ್ವದ ಸಮಸ್ಯೆಯ ಕಾರಣಕ್ಕೆ ಇನ್ನಷ್ಟು ಎಡವಟ್ಟು ಮಾಡಿಕೊಂಡರು. ಅವರ ಮಗಳೂ ಸೇರಿದಂತೆ ಇಬ್ಬರು ಎಂಎಲ್‌ಎಗಳು ಬಿಟ್ಟರೆ, ಮಿಕ್ಕೆಲ್ಲರೂ ಈ ಸಾರಿ ಮುನಿಯಪ್ಪಗೆ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿಯಲು ದೆಹಲಿಯವರೆಗೆ ಹೋಗಿ ಬಂದರು. ಅವರಲ್ಲಿ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಮತ್ತು ಸೋಮವಾರ ಶಿಡ್ಲಘಟ್ಟದ ಮುನಿಯಪ್ಪ ಜೊತೆ ರಾಜಿ ಮಾಡಿಕೊಂಡರೂ, ಮುನಿಯಪ್ಪ ಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ.

ಕೋಲಾರಕ್ಕೆ ಬಂದಿದ್ದ ರಾಹುಲ್‌ಗಾಂಧಿ ಸ್ಪೀಕರ್ ರಮೇಶ್‌ಕುಮಾರ್‌ರಿಗೆ ಫೋನ್ ಮಾಡಿ ಕೋಪ ತಣಿಸುತ್ತಾರೆಂದು ಎಲ್ಲರೂ ಭಾವಿಸಿದ್ದರು. ಅದೂ ಆಗಲಿಲ್ಲ. ಈಗ ರಮೇಶ್‌ಕುಮಾರ್ ಕೆ.ಎಚ್.ಸೋಲಿಸಲು ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟರೆ, ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಏ.16ರಂದು ಬಹಿರಂಗ ಕರೆಯನ್ನೇ ಕೊಟ್ಟಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜು ಬಿಜೆಪಿಯ ವೇದಿಕೆಯನ್ನೇ ಹತ್ತಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಇಲ್ಲಿ ಕಾಂಗ್ರೆಸ್ ಔಟ್ ಆಗಿಬಿಟ್ಟಿದೆ.

ಎರಡನೇ ಕ್ಷೇತ್ರ ಚಿಕ್ಕಬಳ್ಳಾಪುರ. ವಾಸ್ತವದಲ್ಲಿ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಎಡವಟ್ಟು ಮಾಡಿಕೊಂಡಿದ್ದು ಮೊಯ್ಲಿ. ಕಳೆದ ಸಾರಿ ಒಕ್ಕಲಿಗರ ಓಟು ಒಡೆಯಲು ಕುಮಾರಸ್ವಾಮಿಯವರನ್ನು ಸ್ಪರ್ಧೆ ಮಾಡಲು ಒಪ್ಪಿಸಿ ಅವರಿಗೆ ಹಣ ನೀಡಿದ್ದಲ್ಲದೇ, ತನ್ನ ಗೆಲುವಿಗೂ ಮೊಯ್ಲಿ ಸಾಕಷ್ಟು ಹಣ ಚೆಲ್ಲಿದ್ದರು. ಆದರೆ, ಈ ಸಾರಿ ಬೂತ್ ಖರ್ಚಿಗೂ ಹಣ ಕೊಟ್ಟಿಲ್ಲ. ನಿನ್ನೆ ರಾತ್ರಿಯವರೆಗೂ ಕಾದ ಶಾಸಕರುಗಳಿಗೆ ಮೊಯ್ಲಿ ಕಡೆಯ ಕ್ಷಣದಲ್ಲಿ ಕೈ ಎತ್ತಿದ್ದಾರೆ. ಇದು ಕೇವಲ ಹಣದ ಪ್ರಶ್ನೆ ಅಲ್ಲ. ಅಭ್ಯರ್ಥಿಗೇ ತಾನು ಗೆಲ್ಲುವ ಭರವಸೆ ಇಲ್ಲ ಎಂಬ ಸಂದೇಶವನ್ನು ಅದು ರವಾನಿಸುತ್ತದೆ. ಈಗ ಈ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಯಾವ ರೀತಿ ಖರ್ಚು ಮಾಡುತ್ತಾರೆ ಎಂದು ನೋಡಬೇಕು.

ದುಡ್ಡು ಖರ್ಚು ಮಾಡಿಯೇ ಗೆಲ್ಲಬೇಕು ಎಂಬುದು ಚುನಾವಣೆಯ ನೀತಿಯಾಗಬೇಕಿಲ್ಲ. ಆದರೆ, ತನ್ನ ಸ್ಪರ್ಧೆಯ ಸೀರಿಯಸ್‌ನೆಸ್ ಬಗ್ಗೆ ಮೊಯ್ಲಿ ಯಾವ ರೀತಿ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕಿತ್ತೋ ಅದಾಗಲಿಲ್ಲ. ಹೀಗಾಗಿ ಕೈಯ್ಯಲ್ಲಿದ್ದ ಕ್ಷೇತ್ರವನ್ನು ಕೈ ಚೆಲ್ಲಿದಂತಾಗಿದೆ.

ಅದೇ ರೀತಿ ಗೆಲ್ಲುವ ಸಾಧ್ಯತೆಯಿದ್ದ, ಆದರೆ ಬಿಜೆಪಿ ಕಳೆದುಕೊಳ್ಳುತ್ತಿರುವ ಮೂರು ಕ್ಷೇತ್ರಗಳಿವೆ. ಒಂದು, ಮೈಸೂರು. ಸಿದ್ದರಾಮಯ್ಯನವರು ಮತ್ತು ಜಿ.ಟಿ.ದೇವೇಗೌಡರು ಎಷ್ಟೇ ಅಪ್ಪಿಕೊಂಡರು ಮೈಸೂರಿನ ಒಕ್ಕಲಿಗರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮನಸ್ಸಿರಲಿಲ್ಲ. ಮೇಲಾಗಿ ಕೊಡಗು ಸಂಪೂರ್ಣ ಪ್ರತಾಪಸಿಂಹರ ಪರ ನಿಲ್ಲುವ ಸಾಧ್ಯತೆಯಿತ್ತು. ಆದರೆ, ಪ್ರತಾಪ ಸಿಂಹನ ಪ್ರತಾಪದ ಆಡಿಯೋ, ಸೆಕ್ಸ್ ಚಾಟ್‌ನ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳು ಇಡೀ ಕ್ಷೇತ್ರದ ಪ್ರತೀ ಮೊಬೈಲಿಗೂ ಹೋದ ನಂತರ ಜನರು ಬೆಚ್ಚಿ ಬಿದ್ದಿದ್ದಾರೆ. ಸಾರ್ವಜನಿಕರಿರಲಿ, ಬಿಜೆಪಿ ಮತದಾರರೇ ಅಸಹ್ಯ ಪಟ್ಟುಕೊಳ್ಳುವ ರೇಂಜಿಗೆ ಆತನ ಕಾಮಪುರಾಣವಿದೆ. ಒಂದೋ ಸಜ್ಜನ ವಿಜಯಶಂಕರರಿಗೆ ಮತ ಹಾಕಿ ಪ್ರತಾಪಸಿಂಹ ಸೋಲುವಂತೆ ಮಾಡಬೇಕು, ಇಲ್ಲವೇ ಮನೆಯಲ್ಲೇ ಇರಬೇಕು ಅಷ್ಟೇ ಆಯ್ಕೆ ಎಂಬಂತಾಗಿದೆ. ಪ್ರತಾಪ ಸಿಂಹ ಜೊತೆ ಓಡಾಡಲು ಬಿಜೆಪಿ ನಾಯಕರು/ಕಾರ್ಯಕರ್ತರು ಮುಜುಗರ ಪಟ್ಟುಕೊಳ್ಳುವಂತಾಗಿರುವುದು ಕಡೆಯ ಎರಡು ದಿನಗಳ ಬೆಳವಣಿಗೆ.
ನಾಮಪತ್ರ ಸಲ್ಲಿಕೆಯಾದ ದಿನದಿಂದಲೇ ಮೀಟೂ ಆರೋಪಗಳು ಬೆಳಕಿಗೆ ಬಂದದ್ದು ತೇಜಸ್ವಿಯದ್ದು. ಬೆಂಗಳೂರಿನಲ್ಲಿ ತೇಜಸ್ವಿ ಜೊತೆಗೆ ಕಾರ್ಯಕರ್ತರು ಓಡಾಡುತ್ತಿದ್ದರೂ, ಸಜ್ಜನರು ಗೊಂದಲಕ್ಕೆ ಬಿದ್ದು ಬಹಳ ದಿನಗಳಾದುವು. ಏನೇ ಇರಲಿ, ಪಕ್ಷಕ್ಕೆ ಮತ ಹಾಕಬೇಕು ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದರೂ, ನಿನ್ನೆಯ ಅವರ ಹೇಳಿಕೆ ಬೇರೆ ಸಂದೇಶವನ್ನೇ ರವಾನೆ ಮಾಡಿದೆ. ಬಿಜೆಪಿ ಪರ ಪ್ರಚಾರದಲ್ಲೂ ಭಾಗಿಯಾಗಿರುವ ಅವರು, ‘ತನಗಿನ್ನೂ ಬಿಜೆಪಿ ನಾಯಕರು ಟಿಕೆಟ್ ತಪ್ಪಿದ್ದೇಕೆಂದು ಹೇಳಿಲ್ಲ’, ತೇಜಸ್ವಿ ಸೂರ್ಯನ ಮೇಲಿನ ಲೈಂಗಿಕ ಹಗರಣಗಳ ಆರೋಪದ ಕುರಿತು ‘ಚುನಾವಣೆ ಸಮಯದಲ್ಲಿ ಇಂತಹ ಆರೋಪಗಳು ಸಹಜ. ಇವುಗಳ ಬಗ್ಗೆ ತನಿಖೆ ನಡೆದರೆ ಸತ್ಯ ಗೊತ್ತಾಗುತ್ತದೆ’ ಎಂದಿದ್ದಾರೆ. ಈ ಹೇಳಿಕೆ ಬಂದ ದಿನವೇ ಬ್ರಾಹ್ಮಣರ ಸಭೆಯಲ್ಲಿ ಗಲಾಟೆಯಾಗಿ ತೇಜಸ್ವಿಯ ವಿರುದ್ಧ ಮತ ಚಲಾಯಿಸಬೇಕು ಎಂದು ಒಂದು ಬಣ ಹೇಳಿಕೆ ನೀಡಿದೆ.

ಇಂತಹ ಗೊಂದಲಗಳು ಆರ್.ಅಶೋಕ್ ಮತ್ತು ಸೋಮಣ್ಣರಿಗೆ ಅನುಕೂಲ ಮಾಡಿದೆ. ತಮ್ಮ ವ್ಯಾಪ್ತಿಯಲ್ಲಿ ತೇಜಸ್ವಿಗೆ ಕಡಿಮೆ ಮತಗಳು ಬಂದರೆ ದೂರಬೇಕಾದ್ದು ಅಭ್ಯರ್ಥಿಯ ಚಾರಿತ್ರ್ಯಯವನ್ನೇ ಹೊರತು ತಮ್ಮನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಸೋಮ್‌ದತ್ತಾ ಅವರ ದೀರ್ಘ ಸಂಭಾಷಣೆಯ ಆಡಿಯೋ ವಿಡಿಯೋ ರೂಪದಲ್ಲಿ ಎಲ್ಲೆಡೆ ಹರಡಿದ ನಂತರವಂತೂ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಾ ಬಂದಿತು. ಹೊಸ ಮತದಾರರನ್ನು ಮಾತನಾಡಿಸಿದ ದಿ ಕ್ವಿಂಟ್‌ನ ವರದಿಯಲ್ಲಿ ಇದರ ಅಭಿವ್ಯಕ್ತಿ ಇತ್ತು. ನಾವು ಬಿಜೆಪಿಗೆ ಮತ ಹಾಕಬೇಕೆಂದಿದ್ದೆವು, ಈಗ ಅಭ್ಯರ್ಥಿಯ ಚಾರಿತ್ರ್ಯಯದ ಬಗ್ಗೆ ಗೊತ್ತಾದ ನಂತರ ಗೊಂದಲವಾಗಿದೆ. ನಮ್ಮ ಅಭ್ಯರ್ಥಿಯಾದವರು ಅರ್ಹರಾಗಿರಬೇಕೆಂದು ಬಯಸುತ್ತೇವೆ ಎಂದು ಹಲವು ಕಾಲೇಜು ಹುಡುಗಿಯರು ಹೇಳಿದರು.
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಪರವಾಗಿ ರಾಮಲಿಂಗಾರೆಡ್ಡಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಹವಾ ಬದಲಾವಣೆಗೆ ಕಾರಣವಾಗಿವೆ.

ಇನ್ನು ಮೂರನೆಯದ್ದು, ಬೆಂಗಳೂರು ಉತ್ತರ. ಸದಾನಂದ ಗೌಡ ವರ್ಸಸ್ ಕೃಷ್ಣ ಭೈರೇಗೌಡ ಆದ ಹೊತ್ತಿನಲ್ಲೇ ಫೈಟ್ ಜೋರಾಗುವುದು ಖಾತ್ರಿಯಿತ್ತು. ಆದರೆ, ಕಡೆಯ ಎರಡು ದಿನಗಳಲ್ಲಿ ಸದಾನಂದಗೌಡರು ಕೈ ಚೆಲ್ಲಿ ಕೂತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕೃಷ್ಣ ಭೈರೇಗೌಡರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸದಾನಂದಗೌಡ ಔಟ್ ಎಂಬ ಸಂದೇಶವನ್ನು ಕ್ಷೇತ್ರದೆಲ್ಲೆಡೆ ಕೊಟ್ಟು, ತಳಮಟ್ಟದಲ್ಲಿ ಬೇಲಿ ಮೇಲೆ ಕೂತಿರುವವರು ಹಾರಲು ಕಾರಣವಾಗಿದೆ.

ಇನ್ನು ಫೈಟ್ ಇರುವ ನಾಲ್ಕು ಕ್ಷೇತ್ರಗಳೆಂದರೆ, ಮಂಡ್ಯ, ಮಂಗಳೂರು, ಉಡುಪಿ-ಚಿಕ್ಕಮಗಳೂರು ಮತ್ತು ಬೆಂಗಳೂರು ಸೆಂಟ್ರಲ್. ಇವುಗಳಲ್ಲಿ ಮಂಡ್ಯದಲ್ಲಿ ಅಲೆ ಸುಮಲತಾ ಪರವಾಗಿಯೇ ಇದ್ದರೂ, ಜೆಡಿಎಸ್‌ನ ಕಡೆಯ ದಿನದ ಕಾರ್ಯತಂತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ಇನ್ನು ಮೈತ್ರಿ ಅಭ್ಯರ್ಥಿಗಳು ಸೇಫಾಗಿ ಗೆಲ್ಲಲಿದ್ದಾರೆ ಎಂದು ಭಾವಿಸಲಾಗುವ ಕ್ಷೇತ್ರಗಳೆಂದರೆ, ಬೆಂ.ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ.
ಉಳಿದ ಚರ್ಚೆ ಏನಿದ್ದರೂ, ಕಡೆಯ ಸುತ್ತಿನ ಚುನಾವಣೆ ಮುಗಿದ ನಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...