Homeಕರ್ನಾಟಕಚುನಾವಣೆಗೆ ಮುಂಚೆಯೇ 3 ಬಿಜೆಪಿ ಔಟ್, 2 ಕಾಂಗ್ರೆಸ್ ಔಟ್, 4 ಕಡೆ ಫೈಟ್

ಚುನಾವಣೆಗೆ ಮುಂಚೆಯೇ 3 ಬಿಜೆಪಿ ಔಟ್, 2 ಕಾಂಗ್ರೆಸ್ ಔಟ್, 4 ಕಡೆ ಫೈಟ್

- Advertisement -
- Advertisement -

ಮೊದಲ ಹಂತ: ಕಡೆಯ ದಿನದ ಬೆಳವಣಿಗೆಗಳು

ನಾಮಪತ್ರ ಸಲ್ಲಿಕೆಯಾದ ಸಂದರ್ಭದಲ್ಲೇ ಐದು ಕ್ಷೇತ್ರಗಳಲ್ಲಿ ಫಲಿತಾಂಶದ ದಿಕ್ಕು ಸ್ಪಷ್ಟವಾಗಿದ್ದರೆ, ಕಡೆಯ ದಿನಗಳಲ್ಲಿ ನಡೆದ ಕೆಲವು ಮಹತ್ವದ ಬೆಳವಣಿಗೆಗಳ ಕಾರಣದಿಂದ ಐದು ಕ್ಷೇತ್ರಗಳಲ್ಲಿ ಫಲಿತಾಂಶ ದಿಕ್ಕು ಪಡೆದುಕೊಂಡುಬಿಟ್ಟಿದೆ. ಉಳಿದಂತೆ, 4 ಕ್ಷೇತ್ರಗಳಲ್ಲಿ ಈಗಲೂ ಫೈಟ್ ಇದ್ದು ಇಂದಿನ ಬೆಳವಣಿಗೆಗಳು ಏನಾಗುತ್ತದೆಂಬುದರ ಜೊತೆಗೆ ಹೊರಗೆ ವ್ಯಕ್ತವಾಗದ ಮತದಾರರ ಭಾವನೆಗಳು ಮತಗಟ್ಟೆಯಲ್ಲಿ ಯಾರನ್ನು ಗೆಲ್ಲಿಸುತ್ತದೋ ನೋಡಬೇಕು.

ಮೊದಲಿಗೆ ಕಾಂಗ್ರೆಸ್ಸಿನದ್ದು ನೋಡೋಣ. ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಮುಂಚೆಯೇ ಭಾರೀ ವಿರೋಧ ಎದುರಿಸಿದ್ದು ಕೆ.ಎಚ್.ಮುನಿಯಪ್ಪ. 30 ವರ್ಷಗಳಿಂದ ಎಂಪಿಯಾಗಿರುವ ಕೆ.ಎಚ್.ಗೆ ಸಹಜ ವಿರೋಧದ ಅಲೆಯ ಜೊತೆಗೆ ಅವರ ವ್ಯಕ್ತಿತ್ವದ ಸಮಸ್ಯೆಯ ಕಾರಣಕ್ಕೆ ಇನ್ನಷ್ಟು ಎಡವಟ್ಟು ಮಾಡಿಕೊಂಡರು. ಅವರ ಮಗಳೂ ಸೇರಿದಂತೆ ಇಬ್ಬರು ಎಂಎಲ್‌ಎಗಳು ಬಿಟ್ಟರೆ, ಮಿಕ್ಕೆಲ್ಲರೂ ಈ ಸಾರಿ ಮುನಿಯಪ್ಪಗೆ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿಯಲು ದೆಹಲಿಯವರೆಗೆ ಹೋಗಿ ಬಂದರು. ಅವರಲ್ಲಿ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಮತ್ತು ಸೋಮವಾರ ಶಿಡ್ಲಘಟ್ಟದ ಮುನಿಯಪ್ಪ ಜೊತೆ ರಾಜಿ ಮಾಡಿಕೊಂಡರೂ, ಮುನಿಯಪ್ಪ ಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ.

ಕೋಲಾರಕ್ಕೆ ಬಂದಿದ್ದ ರಾಹುಲ್‌ಗಾಂಧಿ ಸ್ಪೀಕರ್ ರಮೇಶ್‌ಕುಮಾರ್‌ರಿಗೆ ಫೋನ್ ಮಾಡಿ ಕೋಪ ತಣಿಸುತ್ತಾರೆಂದು ಎಲ್ಲರೂ ಭಾವಿಸಿದ್ದರು. ಅದೂ ಆಗಲಿಲ್ಲ. ಈಗ ರಮೇಶ್‌ಕುಮಾರ್ ಕೆ.ಎಚ್.ಸೋಲಿಸಲು ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟರೆ, ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಏ.16ರಂದು ಬಹಿರಂಗ ಕರೆಯನ್ನೇ ಕೊಟ್ಟಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜು ಬಿಜೆಪಿಯ ವೇದಿಕೆಯನ್ನೇ ಹತ್ತಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಇಲ್ಲಿ ಕಾಂಗ್ರೆಸ್ ಔಟ್ ಆಗಿಬಿಟ್ಟಿದೆ.

ಎರಡನೇ ಕ್ಷೇತ್ರ ಚಿಕ್ಕಬಳ್ಳಾಪುರ. ವಾಸ್ತವದಲ್ಲಿ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಎಡವಟ್ಟು ಮಾಡಿಕೊಂಡಿದ್ದು ಮೊಯ್ಲಿ. ಕಳೆದ ಸಾರಿ ಒಕ್ಕಲಿಗರ ಓಟು ಒಡೆಯಲು ಕುಮಾರಸ್ವಾಮಿಯವರನ್ನು ಸ್ಪರ್ಧೆ ಮಾಡಲು ಒಪ್ಪಿಸಿ ಅವರಿಗೆ ಹಣ ನೀಡಿದ್ದಲ್ಲದೇ, ತನ್ನ ಗೆಲುವಿಗೂ ಮೊಯ್ಲಿ ಸಾಕಷ್ಟು ಹಣ ಚೆಲ್ಲಿದ್ದರು. ಆದರೆ, ಈ ಸಾರಿ ಬೂತ್ ಖರ್ಚಿಗೂ ಹಣ ಕೊಟ್ಟಿಲ್ಲ. ನಿನ್ನೆ ರಾತ್ರಿಯವರೆಗೂ ಕಾದ ಶಾಸಕರುಗಳಿಗೆ ಮೊಯ್ಲಿ ಕಡೆಯ ಕ್ಷಣದಲ್ಲಿ ಕೈ ಎತ್ತಿದ್ದಾರೆ. ಇದು ಕೇವಲ ಹಣದ ಪ್ರಶ್ನೆ ಅಲ್ಲ. ಅಭ್ಯರ್ಥಿಗೇ ತಾನು ಗೆಲ್ಲುವ ಭರವಸೆ ಇಲ್ಲ ಎಂಬ ಸಂದೇಶವನ್ನು ಅದು ರವಾನಿಸುತ್ತದೆ. ಈಗ ಈ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಯಾವ ರೀತಿ ಖರ್ಚು ಮಾಡುತ್ತಾರೆ ಎಂದು ನೋಡಬೇಕು.

ದುಡ್ಡು ಖರ್ಚು ಮಾಡಿಯೇ ಗೆಲ್ಲಬೇಕು ಎಂಬುದು ಚುನಾವಣೆಯ ನೀತಿಯಾಗಬೇಕಿಲ್ಲ. ಆದರೆ, ತನ್ನ ಸ್ಪರ್ಧೆಯ ಸೀರಿಯಸ್‌ನೆಸ್ ಬಗ್ಗೆ ಮೊಯ್ಲಿ ಯಾವ ರೀತಿ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕಿತ್ತೋ ಅದಾಗಲಿಲ್ಲ. ಹೀಗಾಗಿ ಕೈಯ್ಯಲ್ಲಿದ್ದ ಕ್ಷೇತ್ರವನ್ನು ಕೈ ಚೆಲ್ಲಿದಂತಾಗಿದೆ.

ಅದೇ ರೀತಿ ಗೆಲ್ಲುವ ಸಾಧ್ಯತೆಯಿದ್ದ, ಆದರೆ ಬಿಜೆಪಿ ಕಳೆದುಕೊಳ್ಳುತ್ತಿರುವ ಮೂರು ಕ್ಷೇತ್ರಗಳಿವೆ. ಒಂದು, ಮೈಸೂರು. ಸಿದ್ದರಾಮಯ್ಯನವರು ಮತ್ತು ಜಿ.ಟಿ.ದೇವೇಗೌಡರು ಎಷ್ಟೇ ಅಪ್ಪಿಕೊಂಡರು ಮೈಸೂರಿನ ಒಕ್ಕಲಿಗರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮನಸ್ಸಿರಲಿಲ್ಲ. ಮೇಲಾಗಿ ಕೊಡಗು ಸಂಪೂರ್ಣ ಪ್ರತಾಪಸಿಂಹರ ಪರ ನಿಲ್ಲುವ ಸಾಧ್ಯತೆಯಿತ್ತು. ಆದರೆ, ಪ್ರತಾಪ ಸಿಂಹನ ಪ್ರತಾಪದ ಆಡಿಯೋ, ಸೆಕ್ಸ್ ಚಾಟ್‌ನ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳು ಇಡೀ ಕ್ಷೇತ್ರದ ಪ್ರತೀ ಮೊಬೈಲಿಗೂ ಹೋದ ನಂತರ ಜನರು ಬೆಚ್ಚಿ ಬಿದ್ದಿದ್ದಾರೆ. ಸಾರ್ವಜನಿಕರಿರಲಿ, ಬಿಜೆಪಿ ಮತದಾರರೇ ಅಸಹ್ಯ ಪಟ್ಟುಕೊಳ್ಳುವ ರೇಂಜಿಗೆ ಆತನ ಕಾಮಪುರಾಣವಿದೆ. ಒಂದೋ ಸಜ್ಜನ ವಿಜಯಶಂಕರರಿಗೆ ಮತ ಹಾಕಿ ಪ್ರತಾಪಸಿಂಹ ಸೋಲುವಂತೆ ಮಾಡಬೇಕು, ಇಲ್ಲವೇ ಮನೆಯಲ್ಲೇ ಇರಬೇಕು ಅಷ್ಟೇ ಆಯ್ಕೆ ಎಂಬಂತಾಗಿದೆ. ಪ್ರತಾಪ ಸಿಂಹ ಜೊತೆ ಓಡಾಡಲು ಬಿಜೆಪಿ ನಾಯಕರು/ಕಾರ್ಯಕರ್ತರು ಮುಜುಗರ ಪಟ್ಟುಕೊಳ್ಳುವಂತಾಗಿರುವುದು ಕಡೆಯ ಎರಡು ದಿನಗಳ ಬೆಳವಣಿಗೆ.
ನಾಮಪತ್ರ ಸಲ್ಲಿಕೆಯಾದ ದಿನದಿಂದಲೇ ಮೀಟೂ ಆರೋಪಗಳು ಬೆಳಕಿಗೆ ಬಂದದ್ದು ತೇಜಸ್ವಿಯದ್ದು. ಬೆಂಗಳೂರಿನಲ್ಲಿ ತೇಜಸ್ವಿ ಜೊತೆಗೆ ಕಾರ್ಯಕರ್ತರು ಓಡಾಡುತ್ತಿದ್ದರೂ, ಸಜ್ಜನರು ಗೊಂದಲಕ್ಕೆ ಬಿದ್ದು ಬಹಳ ದಿನಗಳಾದುವು. ಏನೇ ಇರಲಿ, ಪಕ್ಷಕ್ಕೆ ಮತ ಹಾಕಬೇಕು ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದರೂ, ನಿನ್ನೆಯ ಅವರ ಹೇಳಿಕೆ ಬೇರೆ ಸಂದೇಶವನ್ನೇ ರವಾನೆ ಮಾಡಿದೆ. ಬಿಜೆಪಿ ಪರ ಪ್ರಚಾರದಲ್ಲೂ ಭಾಗಿಯಾಗಿರುವ ಅವರು, ‘ತನಗಿನ್ನೂ ಬಿಜೆಪಿ ನಾಯಕರು ಟಿಕೆಟ್ ತಪ್ಪಿದ್ದೇಕೆಂದು ಹೇಳಿಲ್ಲ’, ತೇಜಸ್ವಿ ಸೂರ್ಯನ ಮೇಲಿನ ಲೈಂಗಿಕ ಹಗರಣಗಳ ಆರೋಪದ ಕುರಿತು ‘ಚುನಾವಣೆ ಸಮಯದಲ್ಲಿ ಇಂತಹ ಆರೋಪಗಳು ಸಹಜ. ಇವುಗಳ ಬಗ್ಗೆ ತನಿಖೆ ನಡೆದರೆ ಸತ್ಯ ಗೊತ್ತಾಗುತ್ತದೆ’ ಎಂದಿದ್ದಾರೆ. ಈ ಹೇಳಿಕೆ ಬಂದ ದಿನವೇ ಬ್ರಾಹ್ಮಣರ ಸಭೆಯಲ್ಲಿ ಗಲಾಟೆಯಾಗಿ ತೇಜಸ್ವಿಯ ವಿರುದ್ಧ ಮತ ಚಲಾಯಿಸಬೇಕು ಎಂದು ಒಂದು ಬಣ ಹೇಳಿಕೆ ನೀಡಿದೆ.

ಇಂತಹ ಗೊಂದಲಗಳು ಆರ್.ಅಶೋಕ್ ಮತ್ತು ಸೋಮಣ್ಣರಿಗೆ ಅನುಕೂಲ ಮಾಡಿದೆ. ತಮ್ಮ ವ್ಯಾಪ್ತಿಯಲ್ಲಿ ತೇಜಸ್ವಿಗೆ ಕಡಿಮೆ ಮತಗಳು ಬಂದರೆ ದೂರಬೇಕಾದ್ದು ಅಭ್ಯರ್ಥಿಯ ಚಾರಿತ್ರ್ಯಯವನ್ನೇ ಹೊರತು ತಮ್ಮನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಸೋಮ್‌ದತ್ತಾ ಅವರ ದೀರ್ಘ ಸಂಭಾಷಣೆಯ ಆಡಿಯೋ ವಿಡಿಯೋ ರೂಪದಲ್ಲಿ ಎಲ್ಲೆಡೆ ಹರಡಿದ ನಂತರವಂತೂ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಾ ಬಂದಿತು. ಹೊಸ ಮತದಾರರನ್ನು ಮಾತನಾಡಿಸಿದ ದಿ ಕ್ವಿಂಟ್‌ನ ವರದಿಯಲ್ಲಿ ಇದರ ಅಭಿವ್ಯಕ್ತಿ ಇತ್ತು. ನಾವು ಬಿಜೆಪಿಗೆ ಮತ ಹಾಕಬೇಕೆಂದಿದ್ದೆವು, ಈಗ ಅಭ್ಯರ್ಥಿಯ ಚಾರಿತ್ರ್ಯಯದ ಬಗ್ಗೆ ಗೊತ್ತಾದ ನಂತರ ಗೊಂದಲವಾಗಿದೆ. ನಮ್ಮ ಅಭ್ಯರ್ಥಿಯಾದವರು ಅರ್ಹರಾಗಿರಬೇಕೆಂದು ಬಯಸುತ್ತೇವೆ ಎಂದು ಹಲವು ಕಾಲೇಜು ಹುಡುಗಿಯರು ಹೇಳಿದರು.
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಪರವಾಗಿ ರಾಮಲಿಂಗಾರೆಡ್ಡಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ಹವಾ ಬದಲಾವಣೆಗೆ ಕಾರಣವಾಗಿವೆ.

ಇನ್ನು ಮೂರನೆಯದ್ದು, ಬೆಂಗಳೂರು ಉತ್ತರ. ಸದಾನಂದ ಗೌಡ ವರ್ಸಸ್ ಕೃಷ್ಣ ಭೈರೇಗೌಡ ಆದ ಹೊತ್ತಿನಲ್ಲೇ ಫೈಟ್ ಜೋರಾಗುವುದು ಖಾತ್ರಿಯಿತ್ತು. ಆದರೆ, ಕಡೆಯ ಎರಡು ದಿನಗಳಲ್ಲಿ ಸದಾನಂದಗೌಡರು ಕೈ ಚೆಲ್ಲಿ ಕೂತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲಾ ಶಾಸಕರು ಕೃಷ್ಣ ಭೈರೇಗೌಡರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸದಾನಂದಗೌಡ ಔಟ್ ಎಂಬ ಸಂದೇಶವನ್ನು ಕ್ಷೇತ್ರದೆಲ್ಲೆಡೆ ಕೊಟ್ಟು, ತಳಮಟ್ಟದಲ್ಲಿ ಬೇಲಿ ಮೇಲೆ ಕೂತಿರುವವರು ಹಾರಲು ಕಾರಣವಾಗಿದೆ.

ಇನ್ನು ಫೈಟ್ ಇರುವ ನಾಲ್ಕು ಕ್ಷೇತ್ರಗಳೆಂದರೆ, ಮಂಡ್ಯ, ಮಂಗಳೂರು, ಉಡುಪಿ-ಚಿಕ್ಕಮಗಳೂರು ಮತ್ತು ಬೆಂಗಳೂರು ಸೆಂಟ್ರಲ್. ಇವುಗಳಲ್ಲಿ ಮಂಡ್ಯದಲ್ಲಿ ಅಲೆ ಸುಮಲತಾ ಪರವಾಗಿಯೇ ಇದ್ದರೂ, ಜೆಡಿಎಸ್‌ನ ಕಡೆಯ ದಿನದ ಕಾರ್ಯತಂತ್ರದ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ಇನ್ನು ಮೈತ್ರಿ ಅಭ್ಯರ್ಥಿಗಳು ಸೇಫಾಗಿ ಗೆಲ್ಲಲಿದ್ದಾರೆ ಎಂದು ಭಾವಿಸಲಾಗುವ ಕ್ಷೇತ್ರಗಳೆಂದರೆ, ಬೆಂ.ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ.
ಉಳಿದ ಚರ್ಚೆ ಏನಿದ್ದರೂ, ಕಡೆಯ ಸುತ್ತಿನ ಚುನಾವಣೆ ಮುಗಿದ ನಂತರವೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...