Homeಮುಖಪುಟಲಂಕೇಶ್ 86: ಕಣ್ಣಾಮುಚ್ಚಾಲೆ ಓದುತ್ತಾ, ಟೀಕೆ-ಟಿಪ್ಪಣಿಯ ಬಂಧನವಾದ ಕತೆ

ಲಂಕೇಶ್ 86: ಕಣ್ಣಾಮುಚ್ಚಾಲೆ ಓದುತ್ತಾ, ಟೀಕೆ-ಟಿಪ್ಪಣಿಯ ಬಂಧನವಾದ ಕತೆ

ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ ಎಂಬ ಲಂಕೇಶರ ಟೈಟಲ್ ಈಗಲೂ ದೇಹ ಮತ್ತು ಮನಸ್ಸಿನಲ್ಲಿದೆ. ಪೋಸ್ಟರ್ ಕದಿಯುತ್ತ, ಕಣ್ಣಾ ಮುಚ್ಚಾಲೆ ಆಡುತ್ತ ತುಂಟಾಟ ಮಾಡುತ್ತಿದ್ದ ಕಳ್ಳನೊಬ್ಬ ಟೀಕೆ-ಟಿಪ್ಪಣಿಯಲ್ಲಿ ಬಂಧಿತನಾದ ಕತೆಯಿದು

- Advertisement -
- Advertisement -

ಅದು ತುಂಟಾಟವೂ ಆಗಿತ್ತು, ಕಣ್ಣಾಮುಚ್ಚಾಲೆಯೂ ಆಗಿತ್ತು ಎಂದರೆ ಸಾಕೆ? ನಾವಿಬ್ಬರು ಕಳ್ಳರು ಕದಿಯುವ ಹುಚ್ಚಾಟವಾಗಿಯೇ ಇತ್ತು ಎಂದರೆ ಸರಿ ಅನಿಸುತ್ತದೆ.

ಅದೊಂದು ಪುಟ್ಟ ಗ್ರಂಥಾಲಯ. 3ನೆ ಕ್ಲಾಸಿನಲ್ಲಿದ್ದ ನಾನು ಮತ್ತು ಧನಂಜಯ್ ಕುಂದಾಪೂರ (ಹೊಟೆಲ್ ಮಾಡಿದ್ದ ಕುಂದಾಪೂರ ಕುಟುಂಬದ ಹುಡುಗ, ಈಗ ಅವರ ಫ್ಯಾಮಿಲಿ ಅಲ್ಲಿಲ್ಲ) ಅದ್ಹೇಗೋ ಆ ಗ್ರಂಥಾಲಯದತ್ತ ಆಕರ್ಷಿತರಾದೆವು, ಶಾಲೆಯ ಸಮೀಪವೇ ಇದ್ದುದು ಒಂದು ಕಾರಣ ಅನಿಸುತ್ತೆ.

ಶಾಲೆ ಮುಗಿದ ನಂತರ ಸಿಕ್ಕಾಪಟ್ಟೆ ಆಟ ಆಡಿ ಸುಸ್ತಾಗಿರುತ್ತಿದ್ದ ನಮಗೆ ಆ ಗ್ರಂಥಾಲಯ ಒಂದು ರಿಲೀಫ್ ಸೆಂಟರ್ ಆಗಿತ್ತೇನೊ? ಹಲವು ದಿನಪತ್ರಿಕೆಗಳು, ವಾರಪತ್ರಿಕೆಗಳು… ಅಂತೂ ಒಂದನ್ನು ಹಿಡಿದು ಓದುತ್ತ ಇದ್ದೆವು… ನಂತರ ಹಾಗೆ ನಟಿಸ ತೊಡಗಿದೆವು!
ಇದಕ್ಕೆ ಕಾರಣ ಆಗ ನಮಗೆ ಹುಚ್ಚು ಹಿಡಿಸಿದ್ದ ಕ್ರಿಕೆಟ್ ಮತ್ತು ಗ್ರಂಥಾಲಯದಲ್ಲಿ ಇರುತ್ತಿದ್ದ ಸ್ಪೋರ್ಟ್ಸ್ ಸ್ಟಾರ್ ಮ್ಯಾಗಜೀನ್!

ನಾವು ಕಳ್ಳರಾಗಿ ಬಿಟ್ಟೆವು, ಸ್ಪೋರ್ಟ್ಸ್ ಸ್ಟಾರ್ ‌ನಲ್ಲಿ ಬರುತ್ತಿದ್ದ ಕ್ರಿಕೆಟಿಗರ ವರ್ಣರಂಜಿತ ಫೋಟೊ ಇರುವ ಪೇಜ್ ಎಗರಿಸತೊಡಗಿದೆವು.. 4ನೆ ಕ್ಲಾಸ್ ಮುಟ್ಟುವವರೆಗೂಗೂ ಅವ್ಯಾಹತವಾಗಿ ಹರಿದೆವು, ಕಲೆಕ್ಷನ್ ಮಾಡಿದೆವು. ನನ್ನ ಕಡೆ ಕಲೆಕ್ಷನ್ ಜಾಸ್ತಿ ಎಂದೆಲ್ಲ ಜಗಳ ಆಡಿದೆವು. ಕಲೆಕ್ಷನ್ ಹೆಚ್ಚಿಸಲು, ರಣಜಿ ಆಟಗಾರರ ಫೋಟೊಗಳನ್ನೂ ಕಿತ್ತುಕೊಂಡು ಬಂದೆವು. ರಾಷ್ಟ್ರೀಯ ತಂಡಕ್ಕೆ ಆಡುವ ಮೊದಲೇ ದೆಹಲಿಯ ಬ್ತಾಟ್ಸ್‌ಮನ್ ರಮಣ್ ಲಂಬಾ ಪೋಸ್ಟರ್ ನನ್ನ ಸಂಗ್ರಹದಲ್ಲಿತ್ತು!

ಗಂಭೀರ ಓದುಗರಿಗೆ ಸಂಶಯ ಬರಬಾರದೆಂದು, ಬೇರೆ ಬೇರೆ ಪೇಪರ್ ಓದುವ ನಾಟಕ ಮಾಡುತ್ತಿದ್ದೆವು. ಆಗ ತುಂಟಾಟ ಮತ್ತು ಕಣ್ಣಾಮುಚ್ಚಾಲೆ ನನಗೆ ಆಪ್ತವಾದವು!

ಅಲ್ಲಿನ ಗ್ರಂಥಪಾಲಕ ‘ಪುಂಡ’ ಅವರ ಕೈಗೆ ನಾವು ಒಂದು ಸಲಾನೂ ಸಿಗಲಿಲ್ಲ. ಮೊದಲೆಲ್ಲ ಸ್ಪೋರ್ಟ್ಸ್ ಸ್ಟಾರ್ ಪುಟ ಹರಿದಾಗ ಚರಕ್ ಎಂಬ ಶಬ್ದ ಬರುತ್ತಿತ್ತು, ಪಕ್ಕದವರು ನೋಡಿದ ಕೂಡಲೇ ಗಾಬರಿ ಆಗುತ್ತಿತ್ತು. ಅದಕ್ಕೂ ಒಂದು ಸಲ್ಯೂಷನ್ ಕಂಡು ಹಿಡಿದೆವು. ನೈಸ್ ಆಗಿರುತ್ತಿದ್ದ ಆ ಪುಟಗಳ ಅಂಚಿಗೆ ಒಗುಳನ್ನು (ಎಂಜಲನ್ನು) ಹಚ್ಚಿ ಬಿಡುವುದು! ಹರಿಯುವಾಗ ಚರಕ್ ಇಲ್ಲ ಪರಕ್ ಇಲ್ಲ!

ಗ್ರಂಥಪಾಲಕ ‘ಪುಂಡ’ ಎಂದು ಬರಹದಲ್ಲಿ ಇದೆ ಅಲ್ಲವೇ? ಮುಂದೆ ಇವರೇ ನೀಲು ಕಾವ್ಯಕ್ಕೆ ಹಲವು ವರ್ಷ ‘ಪುಂಡ’ ಹೆಸರಲ್ಲಿ ರೇಖಾಚಿತ್ರ ಬರೆದ ಕೆ.ವಿ. ಪುಂಡಲೀಕ ಅಥವಾ ಪುಂಡಲೀಕ ಕಲ್ಲಿಗನೂರು…

ಈ ದುಸ್ಸಾಹಸದ ನಡುವೆ ನನ್ನನ್ನು ಲಂಕೇಶ್ ಪತ್ರಿಕೆ ಕ್ಯಾಚ್ ಮಾಡಿತ್ತು. ಆರನೇ ಕ್ಲಾಸಿನಲ್ಲಿ ಇರುವಾಗ ಹೈಸ್ಕೂಲ್‌ಗೆ ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಇ.ಪ್ರಭಾಕರನ್ ಸರ್ ಹತ್ತಿರವಾದರು. ದಿನವೂ ಅವರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪ್ರಜಾವಾಣಿ, ಲಂಕೇಶ್ ಪತ್ರಿಕೆ, ಸುಧಾ, ಮಯೂರ ಎಲ್ಲವೂ ಲಭ್ಯವಿತ್ತು. ತಮಿಳು ಮೂಲದ ಪ್ರಭಾಕರನ್ ಸರ್ ಗದಗ ಜಿಲ್ಲೆಯ ಪುಟ್ಟ ಊರಿಗೆ ಮಾಸ್ತರಾಗಿ ಬಂದಿದ್ದೇ ಒಂದು ಕುತೂಹಲದ ವಿಷಯ. ಅಪ್ಪಟ ಸೆಕ್ಯುಲರ್ ಮತ್ತು ವಿಚಾರವಾದಿ ಆಗಿದ್ದ ಅವರು ನನ್ನಂತಹ ಅನೇಕರಿಗೆ ಟೀಕೆ ಟಿಪ್ಪಣಿ ಓದಲು ಸಲಹೆ ಮಾಡುತ್ತಿದ್ದರು. (ಸರ್ 3 ವರ್ಷದ ಹಿಂದೆ ತೀರಿಕೊಂಡರು)

ಅಲ್ಲಿಂದ ಶುರುವಾಯ್ತು ಲಂಕೇಶರ ಜೊತೆಗಿನ ವರ್ಚುವಲ್ ಒಡನಾಟ. ಪಿಯುಸಿಗೆಂದು ಬಲವಂತವಾಗಿ ನನ್ನನ್ನು ಧಾರವಾಡಕ್ಕೆ ಅಟ್ಟಿದ ಮೇಲೆ, ಅಲ್ಲಿದ್ದ ಹೋರಾಟದ ಪರಿಸರ ನನ್ನನ್ನು ಲಂಕೇಶ್ ಪತ್ರಿಕೆಯೊಂದಿಗೆ ಇನ್ನಷ್ಟು ಆಪ್ತಗೊಳಿಸಿತು. ಕಣ್ಣಾಮುಚ್ಚಾಲೆಗೆ ಕಳಿಸಿದ ಪ್ರಶ್ನೆಗಳಿಗೆ ಮೊದಲು 30, ನಂತರ 50 ರೂ ಬಹುಮಾನ ತಿಂಗಳಲ್ಲಿ ಎರಡು ಸಲ ಸಿಗುವಂತಾಯಿತು.
****

ಧಾರವಾಡದಲ್ಲಿ ನಾನಿದ್ದ ಹಾಸ್ಟೇಲ್ ಪಕ್ಕದಲ್ಲಿ ಎಸ್‌ಸಿ/ಎಸ್‌ಟಿ, ಬಿಸಿಎಂ ಮತ್ತು ಸ್ಪೋರ್ಟ್ಸ್ ಹಾಸ್ಟೇಲ್ ಇದ್ದವು. ಅಲ್ಲಿದ್ದ ಮಿತ್ರರನ್ನು ಭೇಟಿಯಾಗಲು ಹೋಗುತ್ತಿದ್ದ ಕಾರಣಕ್ಕೆ, ನನಗೆ ಪಿವಿಕೆ (ಪ್ರಗತಿಪರ ವಿದ್ಯಾರ್ಥಿ ಕೇಂದ್ರ) ನಂಟು ಬೆಳೆಯಿತು. ಹಾಗಂತ ನಾನೇನೂ ಅದರ ಸದಸ್ಯನಾಗಲಿಲ್ಲ. ಪಿವಿಕೆ ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ ತುಂಬ ಸ್ಟ್ರಾಂಗ್ ಆಗಿತ್ತು. ವಿದ್ಯಾರ್ಥಿಗಳ ಕಷ್ಟಗಳಿಗೆ ಅದು ಸ್ಪಂದಿಸಿ ಜಯ ಸಾಧಿಸುತ್ತಿತ್ತು.

ಚೆನ್ನೈನಲ್ಲಿ ನಡೆದ ಅಖಿಲ ಭಾರತೀಯ ಕ್ರಾಂತಿಕಾರಿ ವಿದ್ಯಾರ್ಥಿ ಸಮಾವೇಶಕ್ಕೆ ಹೋಗಿ ಚೆನ್ನೈನ ಪೆರಿಯಾರ್ ಭವನದಲ್ಲಿ ಎಂಟು ತಾಸು ಗೃಹ ಬಂಧನವಾಗಿತ್ತು.
ನಂತರ ಕಾಡತೊಡಗಿದ್ದು, ಯಾಕೆ ಲಂಕೇಶ್ ಇಂತಹ ಚಳುವಳಿಯ ಬಗ್ಗೆ ಅಷ್ಟಾಗಿ ಪ್ರಚಾರ ಕೊಡುತ್ತಿಲ್ಲ ಎಂಬ ವಿಷಯ… ಅದು ಆ ಕಾಲಘಟ್ಟದ ವೈಪರೀತ್ಯವೋ? ಅಥವಾ ಲಂಕೇಶ್‌ರಿಗೆ ಆಪ್ತವಾಗಿದ್ದವರು ಪಿವಿಕೆ ಮತ್ತು ಕೆವಿಆರ್ ಸದಸ್ಯರನ್ನು ಅವರಿಂದ ದೂರ ಇಡಿಸಿದರೋ? ಈ ಪ್ರಶ್ನೆ ಈಗಲೂ ಇದೆ.
****

ಆಗ ನನಗೆ ಚಳುವಳಿಗಳ ಬಗ್ಗೆ ಅಷ್ಟಾದ ತಿಳುವಳಿಕೆ ಇರಲಿಲ್ಲ. ಧಾರವಾಡ ಗ್ರಾಮೀಣದಲ್ಲಿ ನಂಜುಂಡಸ್ವಾಮಿಯವರ ಗೆಲುವಿಗೆ ಕೆಲಸ ಮಾಡಿದೆವು. ಅದೊಂದು ಅಭೂತಪೂರ್ವ ಅನುಭವ. ಹಳ್ಳಿಹಳ್ಳಿಗಳಲ್ಲಿ ರೈತರ ರಣೋತ್ಸಾಹವಿತ್ತು. ಈಗಿನ ಐತಿಹಾಸಿಕ ರೈತ ಪ್ರತಿಭಟನೆ ವೇಳೆ ಅದೆಲ್ಲ ನೆನಪಾಗುತ್ತಿದೆ.

ಮತ್ತೆ ಮೂಲ ವಿಷಯಕ್ಕೆ ಬರೋಣ, ತುಮಕೂರಿನಲ್ಲಿ ಎರಡನೇ ಪಿಯುಸಿ ವಿಜ್ಞಾನ ಓದುತ್ತಿದ್ದ ಹುಡುಗನೊಬ್ಬ (ಹೆಸರು ಯೋಗೀಶ್ ಅನಿಸುತ್ತೆ) ಲಂಕೇಶರಿಗೆ ಪತ್ರ ಬರೆದಿದ್ದ: ‘ದೆಹಲಿಯಲ್ಲಿ ಅಧಿಕಾರ ಸ್ವೀಕಾರದ ಸಂಭ್ರಮ ನಡೆಯುತ್ತಿರುವಾಗ ಗಾಂಧಿ ಕಲಕತ್ತಾದ ಬೀದಿಗಳಲ್ಲಿ ಅಡ್ಡಾಡುತ್ತಿದ್ದರು’ ಎಂಬ ವಾಕ್ಯ ಅರ್ಥವಾಗಲಿಲ್ಲ ಸರ್ ಎಂದು ಕೇಳಿದ್ದ. ಆಗ ಎರಡನೇ ಪಿಯು ಕನ್ನಡದಲ್ಲಿ ಲಂಕೇಶರ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಎಂಬ ಟೀಕೆ-ಟಿಪ್ಪಣೆ ಪಠ್ಯವಾಗಿತ್ತು. ಆ ತುಮಕೂರಿನ ಹುಡುಗನ ಪ್ರಶ್ನೆಗೆ ಮರುವಾರ ಉತ್ತರಿಸಿದ ಲಂಕೇಶ್, ಅಂದಿನ ( ಸ್ವಾತಂತ್ರ್ಯ ಸಿಕ್ಕ ಸಂದರ್ಭ) ಸಾಮಾಜಿಕ ಸಂದರ್ಭ, ಕೋಮು ಗಲಭೆ ಇತ್ಯಾದಿ ಸಂಗತಿಗಳನ್ನು ಸರಳವಾಗಿ ಹೇಳಿದ್ದರು.

ಬರೆದರೆ ದೀರ್ಘವಾಗುತ್ತದೆ.. ಪ್ರತಿ ಸಲ ದೇಶದಲ್ಲಿ, ರಾಜ್ಯದಲ್ಲಿ ಬಿಕ್ಕಟ್ಟು ಸಂಭವಿಸಿದಾಗೆಲ್ಲ ಲಂಕೇಶ್ ಇದ್ದರೆ ಏನು ಹೇಳುತ್ತಿದ್ದರು ಎಂಬ ಪ್ರಶ್ನೆ ಕಾಡಿತ್ತು. ಅದಕ್ಕೆ ಚಳುವಳಿಯ ಮೂಲಕ ಗೌರಿ ನಮಗೆ ಉತ್ತರ ಕೊಟ್ಟರು.

ಈಗ ಗೌರಿಯೂ ಇಲ್ಲ, ಲಂಕೇಶರೂ ಇಲ್ಲ ಎಂದು ಕೈಚೆಲ್ಲುವಂತಿಲ್ಲ.
ಈಗ ನಡೆಯುತ್ತಿರವ ಐತಿಹಾಸಿಕ ಚಳುವಳಿಗೆ ಬೆಂಬಲಿಸುವ ಮೂಲಕ ನಾವೆಲ್ಲ ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ…. ಅದರಾಚೆ ಕುವೆಂಪು, ಬಸವಣ್ಣ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.


ಇದನ್ನೂ ಓದಿ: ಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...