Homeಮುಖಪುಟಲಂಕೇಶ್ 86: ಕಣ್ಣಾಮುಚ್ಚಾಲೆ ಓದುತ್ತಾ, ಟೀಕೆ-ಟಿಪ್ಪಣಿಯ ಬಂಧನವಾದ ಕತೆ

ಲಂಕೇಶ್ 86: ಕಣ್ಣಾಮುಚ್ಚಾಲೆ ಓದುತ್ತಾ, ಟೀಕೆ-ಟಿಪ್ಪಣಿಯ ಬಂಧನವಾದ ಕತೆ

ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ ಎಂಬ ಲಂಕೇಶರ ಟೈಟಲ್ ಈಗಲೂ ದೇಹ ಮತ್ತು ಮನಸ್ಸಿನಲ್ಲಿದೆ. ಪೋಸ್ಟರ್ ಕದಿಯುತ್ತ, ಕಣ್ಣಾ ಮುಚ್ಚಾಲೆ ಆಡುತ್ತ ತುಂಟಾಟ ಮಾಡುತ್ತಿದ್ದ ಕಳ್ಳನೊಬ್ಬ ಟೀಕೆ-ಟಿಪ್ಪಣಿಯಲ್ಲಿ ಬಂಧಿತನಾದ ಕತೆಯಿದು

- Advertisement -
- Advertisement -

ಅದು ತುಂಟಾಟವೂ ಆಗಿತ್ತು, ಕಣ್ಣಾಮುಚ್ಚಾಲೆಯೂ ಆಗಿತ್ತು ಎಂದರೆ ಸಾಕೆ? ನಾವಿಬ್ಬರು ಕಳ್ಳರು ಕದಿಯುವ ಹುಚ್ಚಾಟವಾಗಿಯೇ ಇತ್ತು ಎಂದರೆ ಸರಿ ಅನಿಸುತ್ತದೆ.

ಅದೊಂದು ಪುಟ್ಟ ಗ್ರಂಥಾಲಯ. 3ನೆ ಕ್ಲಾಸಿನಲ್ಲಿದ್ದ ನಾನು ಮತ್ತು ಧನಂಜಯ್ ಕುಂದಾಪೂರ (ಹೊಟೆಲ್ ಮಾಡಿದ್ದ ಕುಂದಾಪೂರ ಕುಟುಂಬದ ಹುಡುಗ, ಈಗ ಅವರ ಫ್ಯಾಮಿಲಿ ಅಲ್ಲಿಲ್ಲ) ಅದ್ಹೇಗೋ ಆ ಗ್ರಂಥಾಲಯದತ್ತ ಆಕರ್ಷಿತರಾದೆವು, ಶಾಲೆಯ ಸಮೀಪವೇ ಇದ್ದುದು ಒಂದು ಕಾರಣ ಅನಿಸುತ್ತೆ.

ಶಾಲೆ ಮುಗಿದ ನಂತರ ಸಿಕ್ಕಾಪಟ್ಟೆ ಆಟ ಆಡಿ ಸುಸ್ತಾಗಿರುತ್ತಿದ್ದ ನಮಗೆ ಆ ಗ್ರಂಥಾಲಯ ಒಂದು ರಿಲೀಫ್ ಸೆಂಟರ್ ಆಗಿತ್ತೇನೊ? ಹಲವು ದಿನಪತ್ರಿಕೆಗಳು, ವಾರಪತ್ರಿಕೆಗಳು… ಅಂತೂ ಒಂದನ್ನು ಹಿಡಿದು ಓದುತ್ತ ಇದ್ದೆವು… ನಂತರ ಹಾಗೆ ನಟಿಸ ತೊಡಗಿದೆವು!
ಇದಕ್ಕೆ ಕಾರಣ ಆಗ ನಮಗೆ ಹುಚ್ಚು ಹಿಡಿಸಿದ್ದ ಕ್ರಿಕೆಟ್ ಮತ್ತು ಗ್ರಂಥಾಲಯದಲ್ಲಿ ಇರುತ್ತಿದ್ದ ಸ್ಪೋರ್ಟ್ಸ್ ಸ್ಟಾರ್ ಮ್ಯಾಗಜೀನ್!

ನಾವು ಕಳ್ಳರಾಗಿ ಬಿಟ್ಟೆವು, ಸ್ಪೋರ್ಟ್ಸ್ ಸ್ಟಾರ್ ‌ನಲ್ಲಿ ಬರುತ್ತಿದ್ದ ಕ್ರಿಕೆಟಿಗರ ವರ್ಣರಂಜಿತ ಫೋಟೊ ಇರುವ ಪೇಜ್ ಎಗರಿಸತೊಡಗಿದೆವು.. 4ನೆ ಕ್ಲಾಸ್ ಮುಟ್ಟುವವರೆಗೂಗೂ ಅವ್ಯಾಹತವಾಗಿ ಹರಿದೆವು, ಕಲೆಕ್ಷನ್ ಮಾಡಿದೆವು. ನನ್ನ ಕಡೆ ಕಲೆಕ್ಷನ್ ಜಾಸ್ತಿ ಎಂದೆಲ್ಲ ಜಗಳ ಆಡಿದೆವು. ಕಲೆಕ್ಷನ್ ಹೆಚ್ಚಿಸಲು, ರಣಜಿ ಆಟಗಾರರ ಫೋಟೊಗಳನ್ನೂ ಕಿತ್ತುಕೊಂಡು ಬಂದೆವು. ರಾಷ್ಟ್ರೀಯ ತಂಡಕ್ಕೆ ಆಡುವ ಮೊದಲೇ ದೆಹಲಿಯ ಬ್ತಾಟ್ಸ್‌ಮನ್ ರಮಣ್ ಲಂಬಾ ಪೋಸ್ಟರ್ ನನ್ನ ಸಂಗ್ರಹದಲ್ಲಿತ್ತು!

ಗಂಭೀರ ಓದುಗರಿಗೆ ಸಂಶಯ ಬರಬಾರದೆಂದು, ಬೇರೆ ಬೇರೆ ಪೇಪರ್ ಓದುವ ನಾಟಕ ಮಾಡುತ್ತಿದ್ದೆವು. ಆಗ ತುಂಟಾಟ ಮತ್ತು ಕಣ್ಣಾಮುಚ್ಚಾಲೆ ನನಗೆ ಆಪ್ತವಾದವು!

ಅಲ್ಲಿನ ಗ್ರಂಥಪಾಲಕ ‘ಪುಂಡ’ ಅವರ ಕೈಗೆ ನಾವು ಒಂದು ಸಲಾನೂ ಸಿಗಲಿಲ್ಲ. ಮೊದಲೆಲ್ಲ ಸ್ಪೋರ್ಟ್ಸ್ ಸ್ಟಾರ್ ಪುಟ ಹರಿದಾಗ ಚರಕ್ ಎಂಬ ಶಬ್ದ ಬರುತ್ತಿತ್ತು, ಪಕ್ಕದವರು ನೋಡಿದ ಕೂಡಲೇ ಗಾಬರಿ ಆಗುತ್ತಿತ್ತು. ಅದಕ್ಕೂ ಒಂದು ಸಲ್ಯೂಷನ್ ಕಂಡು ಹಿಡಿದೆವು. ನೈಸ್ ಆಗಿರುತ್ತಿದ್ದ ಆ ಪುಟಗಳ ಅಂಚಿಗೆ ಒಗುಳನ್ನು (ಎಂಜಲನ್ನು) ಹಚ್ಚಿ ಬಿಡುವುದು! ಹರಿಯುವಾಗ ಚರಕ್ ಇಲ್ಲ ಪರಕ್ ಇಲ್ಲ!

ಗ್ರಂಥಪಾಲಕ ‘ಪುಂಡ’ ಎಂದು ಬರಹದಲ್ಲಿ ಇದೆ ಅಲ್ಲವೇ? ಮುಂದೆ ಇವರೇ ನೀಲು ಕಾವ್ಯಕ್ಕೆ ಹಲವು ವರ್ಷ ‘ಪುಂಡ’ ಹೆಸರಲ್ಲಿ ರೇಖಾಚಿತ್ರ ಬರೆದ ಕೆ.ವಿ. ಪುಂಡಲೀಕ ಅಥವಾ ಪುಂಡಲೀಕ ಕಲ್ಲಿಗನೂರು…

ಈ ದುಸ್ಸಾಹಸದ ನಡುವೆ ನನ್ನನ್ನು ಲಂಕೇಶ್ ಪತ್ರಿಕೆ ಕ್ಯಾಚ್ ಮಾಡಿತ್ತು. ಆರನೇ ಕ್ಲಾಸಿನಲ್ಲಿ ಇರುವಾಗ ಹೈಸ್ಕೂಲ್‌ಗೆ ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಇ.ಪ್ರಭಾಕರನ್ ಸರ್ ಹತ್ತಿರವಾದರು. ದಿನವೂ ಅವರ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪ್ರಜಾವಾಣಿ, ಲಂಕೇಶ್ ಪತ್ರಿಕೆ, ಸುಧಾ, ಮಯೂರ ಎಲ್ಲವೂ ಲಭ್ಯವಿತ್ತು. ತಮಿಳು ಮೂಲದ ಪ್ರಭಾಕರನ್ ಸರ್ ಗದಗ ಜಿಲ್ಲೆಯ ಪುಟ್ಟ ಊರಿಗೆ ಮಾಸ್ತರಾಗಿ ಬಂದಿದ್ದೇ ಒಂದು ಕುತೂಹಲದ ವಿಷಯ. ಅಪ್ಪಟ ಸೆಕ್ಯುಲರ್ ಮತ್ತು ವಿಚಾರವಾದಿ ಆಗಿದ್ದ ಅವರು ನನ್ನಂತಹ ಅನೇಕರಿಗೆ ಟೀಕೆ ಟಿಪ್ಪಣಿ ಓದಲು ಸಲಹೆ ಮಾಡುತ್ತಿದ್ದರು. (ಸರ್ 3 ವರ್ಷದ ಹಿಂದೆ ತೀರಿಕೊಂಡರು)

ಅಲ್ಲಿಂದ ಶುರುವಾಯ್ತು ಲಂಕೇಶರ ಜೊತೆಗಿನ ವರ್ಚುವಲ್ ಒಡನಾಟ. ಪಿಯುಸಿಗೆಂದು ಬಲವಂತವಾಗಿ ನನ್ನನ್ನು ಧಾರವಾಡಕ್ಕೆ ಅಟ್ಟಿದ ಮೇಲೆ, ಅಲ್ಲಿದ್ದ ಹೋರಾಟದ ಪರಿಸರ ನನ್ನನ್ನು ಲಂಕೇಶ್ ಪತ್ರಿಕೆಯೊಂದಿಗೆ ಇನ್ನಷ್ಟು ಆಪ್ತಗೊಳಿಸಿತು. ಕಣ್ಣಾಮುಚ್ಚಾಲೆಗೆ ಕಳಿಸಿದ ಪ್ರಶ್ನೆಗಳಿಗೆ ಮೊದಲು 30, ನಂತರ 50 ರೂ ಬಹುಮಾನ ತಿಂಗಳಲ್ಲಿ ಎರಡು ಸಲ ಸಿಗುವಂತಾಯಿತು.
****

ಧಾರವಾಡದಲ್ಲಿ ನಾನಿದ್ದ ಹಾಸ್ಟೇಲ್ ಪಕ್ಕದಲ್ಲಿ ಎಸ್‌ಸಿ/ಎಸ್‌ಟಿ, ಬಿಸಿಎಂ ಮತ್ತು ಸ್ಪೋರ್ಟ್ಸ್ ಹಾಸ್ಟೇಲ್ ಇದ್ದವು. ಅಲ್ಲಿದ್ದ ಮಿತ್ರರನ್ನು ಭೇಟಿಯಾಗಲು ಹೋಗುತ್ತಿದ್ದ ಕಾರಣಕ್ಕೆ, ನನಗೆ ಪಿವಿಕೆ (ಪ್ರಗತಿಪರ ವಿದ್ಯಾರ್ಥಿ ಕೇಂದ್ರ) ನಂಟು ಬೆಳೆಯಿತು. ಹಾಗಂತ ನಾನೇನೂ ಅದರ ಸದಸ್ಯನಾಗಲಿಲ್ಲ. ಪಿವಿಕೆ ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ ತುಂಬ ಸ್ಟ್ರಾಂಗ್ ಆಗಿತ್ತು. ವಿದ್ಯಾರ್ಥಿಗಳ ಕಷ್ಟಗಳಿಗೆ ಅದು ಸ್ಪಂದಿಸಿ ಜಯ ಸಾಧಿಸುತ್ತಿತ್ತು.

ಚೆನ್ನೈನಲ್ಲಿ ನಡೆದ ಅಖಿಲ ಭಾರತೀಯ ಕ್ರಾಂತಿಕಾರಿ ವಿದ್ಯಾರ್ಥಿ ಸಮಾವೇಶಕ್ಕೆ ಹೋಗಿ ಚೆನ್ನೈನ ಪೆರಿಯಾರ್ ಭವನದಲ್ಲಿ ಎಂಟು ತಾಸು ಗೃಹ ಬಂಧನವಾಗಿತ್ತು.
ನಂತರ ಕಾಡತೊಡಗಿದ್ದು, ಯಾಕೆ ಲಂಕೇಶ್ ಇಂತಹ ಚಳುವಳಿಯ ಬಗ್ಗೆ ಅಷ್ಟಾಗಿ ಪ್ರಚಾರ ಕೊಡುತ್ತಿಲ್ಲ ಎಂಬ ವಿಷಯ… ಅದು ಆ ಕಾಲಘಟ್ಟದ ವೈಪರೀತ್ಯವೋ? ಅಥವಾ ಲಂಕೇಶ್‌ರಿಗೆ ಆಪ್ತವಾಗಿದ್ದವರು ಪಿವಿಕೆ ಮತ್ತು ಕೆವಿಆರ್ ಸದಸ್ಯರನ್ನು ಅವರಿಂದ ದೂರ ಇಡಿಸಿದರೋ? ಈ ಪ್ರಶ್ನೆ ಈಗಲೂ ಇದೆ.
****

ಆಗ ನನಗೆ ಚಳುವಳಿಗಳ ಬಗ್ಗೆ ಅಷ್ಟಾದ ತಿಳುವಳಿಕೆ ಇರಲಿಲ್ಲ. ಧಾರವಾಡ ಗ್ರಾಮೀಣದಲ್ಲಿ ನಂಜುಂಡಸ್ವಾಮಿಯವರ ಗೆಲುವಿಗೆ ಕೆಲಸ ಮಾಡಿದೆವು. ಅದೊಂದು ಅಭೂತಪೂರ್ವ ಅನುಭವ. ಹಳ್ಳಿಹಳ್ಳಿಗಳಲ್ಲಿ ರೈತರ ರಣೋತ್ಸಾಹವಿತ್ತು. ಈಗಿನ ಐತಿಹಾಸಿಕ ರೈತ ಪ್ರತಿಭಟನೆ ವೇಳೆ ಅದೆಲ್ಲ ನೆನಪಾಗುತ್ತಿದೆ.

ಮತ್ತೆ ಮೂಲ ವಿಷಯಕ್ಕೆ ಬರೋಣ, ತುಮಕೂರಿನಲ್ಲಿ ಎರಡನೇ ಪಿಯುಸಿ ವಿಜ್ಞಾನ ಓದುತ್ತಿದ್ದ ಹುಡುಗನೊಬ್ಬ (ಹೆಸರು ಯೋಗೀಶ್ ಅನಿಸುತ್ತೆ) ಲಂಕೇಶರಿಗೆ ಪತ್ರ ಬರೆದಿದ್ದ: ‘ದೆಹಲಿಯಲ್ಲಿ ಅಧಿಕಾರ ಸ್ವೀಕಾರದ ಸಂಭ್ರಮ ನಡೆಯುತ್ತಿರುವಾಗ ಗಾಂಧಿ ಕಲಕತ್ತಾದ ಬೀದಿಗಳಲ್ಲಿ ಅಡ್ಡಾಡುತ್ತಿದ್ದರು’ ಎಂಬ ವಾಕ್ಯ ಅರ್ಥವಾಗಲಿಲ್ಲ ಸರ್ ಎಂದು ಕೇಳಿದ್ದ. ಆಗ ಎರಡನೇ ಪಿಯು ಕನ್ನಡದಲ್ಲಿ ಲಂಕೇಶರ ‘ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಎಂಬ ಟೀಕೆ-ಟಿಪ್ಪಣೆ ಪಠ್ಯವಾಗಿತ್ತು. ಆ ತುಮಕೂರಿನ ಹುಡುಗನ ಪ್ರಶ್ನೆಗೆ ಮರುವಾರ ಉತ್ತರಿಸಿದ ಲಂಕೇಶ್, ಅಂದಿನ ( ಸ್ವಾತಂತ್ರ್ಯ ಸಿಕ್ಕ ಸಂದರ್ಭ) ಸಾಮಾಜಿಕ ಸಂದರ್ಭ, ಕೋಮು ಗಲಭೆ ಇತ್ಯಾದಿ ಸಂಗತಿಗಳನ್ನು ಸರಳವಾಗಿ ಹೇಳಿದ್ದರು.

ಬರೆದರೆ ದೀರ್ಘವಾಗುತ್ತದೆ.. ಪ್ರತಿ ಸಲ ದೇಶದಲ್ಲಿ, ರಾಜ್ಯದಲ್ಲಿ ಬಿಕ್ಕಟ್ಟು ಸಂಭವಿಸಿದಾಗೆಲ್ಲ ಲಂಕೇಶ್ ಇದ್ದರೆ ಏನು ಹೇಳುತ್ತಿದ್ದರು ಎಂಬ ಪ್ರಶ್ನೆ ಕಾಡಿತ್ತು. ಅದಕ್ಕೆ ಚಳುವಳಿಯ ಮೂಲಕ ಗೌರಿ ನಮಗೆ ಉತ್ತರ ಕೊಟ್ಟರು.

ಈಗ ಗೌರಿಯೂ ಇಲ್ಲ, ಲಂಕೇಶರೂ ಇಲ್ಲ ಎಂದು ಕೈಚೆಲ್ಲುವಂತಿಲ್ಲ.
ಈಗ ನಡೆಯುತ್ತಿರವ ಐತಿಹಾಸಿಕ ಚಳುವಳಿಗೆ ಬೆಂಬಲಿಸುವ ಮೂಲಕ ನಾವೆಲ್ಲ ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ…. ಅದರಾಚೆ ಕುವೆಂಪು, ಬಸವಣ್ಣ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ.


ಇದನ್ನೂ ಓದಿ: ಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...