Homeಅಂಕಣಗಳುಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

- Advertisement -
- Advertisement -

ಭಯೋತ್ಪಾದಕರೆಂದೂ, ದೇಶದ್ರೋಹಿಗಳೆಂದೂ ಮುಸಲ್ಮಾನರನ್ನು, ತೀವ್ರ ಎಡಪಂಥೀಯರೆಂದು ಆದಿವಾಸಿಗಳನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸಿ ಜೈಲಿಗೆ ಅಟ್ಟುವ ಇಲ್ಲವೇ ಹುಸಿ ಎನ್‌ಕೌಂಟರುಗಳಲ್ಲಿ ಹೊಡೆದು ಹಾಕುವ ಅಕ್ರಮ ಮತ್ತು ಅಮಾನುಷ ಪ್ರವೃತ್ತಿಗೆ ಅಂಕೆಯೇ ಇಲ್ಲವಾಗಿದೆ. ಇಸ್ಲಾಮಿಕ್ ಭಯೋತ್ಪಾದನೆ ಮತ್ತು ತೀವ್ರ ಮಾವೋವಾದದ ಹೆಸರಿನಲ್ಲಿ ಅಮಾಯಕರು ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಯುವಂತಾಗಿದೆ. ಸಾಮಾಜಿಕ ಕಳಂಕವನ್ನು ಹೊತ್ತು ತಿರುಗಬೇಕಿದೆ.

’ಸಿಮಿ’ ಭಯೋತ್ಪಾದಕರೆಂದು ಬಂಧಿಸಲಾಗಿದ್ದ 127 ಮುಸಲ್ಮಾನರನ್ನು ಸೂರತ್ ನ್ಯಾಯಾಲಯವೊಂದು 19 ವರ್ಷಗಳ ವಿಚಾರಣೆಯ ನಂತರ ಇತ್ತೀಚೆಗೆ ನಿರಪರಾಧಿಗಳೆಂದು ಸಾರಿತು. ಹತ್ತಾರು ವರ್ಷಗಳ ಕಾಲ ಜೈಲುಗಳಲ್ಲಿ ಕಳೆದುಹೋಗುವ ಇವರ ಬದುಕುಗಳನ್ನು, ಸಾಮಾಜಿಕವಾಗಿ ಹೊರಬೇಕಿರುವ ಅಪನಿಂದೆ ಮತ್ತು ಬಹಿಷ್ಕಾರಗಳಿಂದ ಅನುಭವಿಸುವ ಮಾನಸಿಕ ಕ್ಲೇಶಕ್ಕೆ ಪರಿಹಾರವೇ ಇಲ್ಲವಾಗಿದೆ.

2002ರ ಅಕ್ಷರಧಾಮ್ ದಾಳಿ ಪ್ರಕರಣದಲ್ಲಿ ದಸ್ತಗಿರಿಯಾಗಿ ಹತ್ತು ವರ್ಷಗಳಿಗೂ ಹೆಚ್ಚುಕಾಲ ಜೈಲಿನಲ್ಲಿ ಕಳೆದ ನಂತರ ನಿರಪರಾಧಿಗಳೆಂದು ಸಾಬೀತಾಗಿ ಹೊರಬಿದ್ದವರು ಆರು ಮಂದಿ ಮುಸ್ಲಿಮ್ ಯುವಕರು. ನಿರಪರಾಧಿಗಳಾಗಿಯೂ ಹತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಕ್ಕೆ ಮತ್ತು ಸಮಾಜದಲ್ಲಿ ಕಳಂಕ ಹೊತ್ತದ್ದಕ್ಕೆ ಪರಿಹಾರ ನೀಡಬೇಕೆಂದು ಅವರು ಹೂಡಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟು 2016ರಲ್ಲಿ ತಳ್ಳಿ ಹಾಕಿತು. ಮಾನವ ಹಕ್ಕುಗಳ ಆಂದೋಲನಕ್ಕೆ ಉಂಟಾದ ತೀವ್ರ ಹಿನ್ನಡೆಯಿದು.

ಪರಿಹಾರ ನೀಡುವಿಕೆಯು ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ ಎಂಬ ಕಾರಣ ಮುಂದೆ ಮಾಡಿತ್ತು ಸುಪ್ರೀಮ್ ಕೋರ್ಟು. ಹಾಗಿದ್ದರೆ ಅಮಾಯಕರ ಬದುಕುಗಳು ಜೈಲುಗಳ ಅಂಧಕಾರದಲ್ಲಿ ಸೋರಿ ಹೋಗುವ ದುರಂತದ ಹೊಣೆ ಹೊರುವವರು ಯಾರು? ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ಜವಾಬುದೇಹಿ ಅಲ್ಲವೇ?

ಮುಸಲ್ಮಾನರನ್ನು ನಿರಂತರವಾಗಿ ಹೊರಗಿನವರೆಂದೂ ಇತರರೆಂದೂ ಕಾಣಲಾಗುತ್ತಿದೆ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಸಂದೇಶಗಳನ್ನು ಕಳೆದ ಐದಾರು ವರ್ಷಗಳಲ್ಲಿ ಬಗೆಬಗೆಯಾಗಿ ಅವರಿಗೆ ರವಾನಿಸುತ್ತ ಬರಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡುಹಗಲೇ ದಾರಿ ಹೆದ್ದಾರಿಗಳಲ್ಲಿ ಅವರನ್ನು ಜಜ್ಜಿ ಕೊಂದವರನ್ನು ಕೊಂಡಾಡಲಾಯಿತು. 370ನೆಯ ಕಲಮಿನ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು, ಉಸಿರುಕಟ್ಟಿಸುವ ಹಲವು ನಿರ್ಬಂಧಗಳ ವಿಧಿಸಿ ಮುಕ್ಕಾಲು ಕೋಟಿ ಜನರು ಬದುಕುವ ಕಾಶ್ಮೀರ ಕಣಿವೆಗೆ ತಿಂಗಳುಗಟ್ಟಲೆ ಬೀಗ ಜಡಿಯಲಾಯಿತು. ಅವರು ಈ ದೇಶದ ನಾಗರಿಕರೇ ಅಲ್ಲ ಎಂಬ ತಳಮಳಕ್ಕೆ ತಳ್ಳಲಾಯಿತು. ಅವರ ಕುರಿತು ಸಾಮಾನ್ಯ ಜನಮಾನಸದಲ್ಲಿ ಪೂರ್ವಗ್ರಹ ಮತ್ತು ದ್ವೇಷವನ್ನು ಬಡಿದೆಬ್ಬಿಸಲಾಯಿತು. ಇತ್ತೀಚಿನ ದೆಹಲಿ ಕೋಮುಗಲಭೆಯಲ್ಲಿ ಅವರನ್ನು ಬೇಟೆಯಾಡಿದ ಪರಿ 2002ರ ಗುಜರಾತ್ ಭೀಭತ್ಸವನ್ನು ನೆನಪಿಸಿತ್ತು. ಮುಸಲ್ಮಾನರೊಂದಿಗೆ ಕೈ ಕಲೆಸಿ ಕೆಲಸ ಮಾಡುವ ಸ್ವಯಂಸೇವಾಸಂಸ್ಥೆಗಳನ್ನು ಮಟ್ಟಹಾಕುವ ಕೃತ್ಯ ಲಾಗಾಯ್ತಿನಿಂದ ಚಾಲೂ ಇದ್ದೇ ಇದೆ. ಅವರ ಕುರಿತು ಸಹಾನುಭೂತಿ ತೋರುವ ಉದಾರವಾದಿಗಳು- ವಿಚಾರವಂತರನ್ನು ದೇಶದ್ರೋಹಿಗಳೆಂದೂ ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದೂ ಕೇಂದ್ರ ಮಂತ್ರಿಗಳು ಇದ್ದ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಲಾಯಿತು. ದೇಶದ ಮುಸ್ಲಿಂ ಸಮುದಾಯ ಇಂದು ಭಯ ಮತ್ತು ಅನಿಶ್ಚಿತತೆಯಲ್ಲಿ ತೊಳಲಾಡಿದೆ.

ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂ ರಾಷ್ಟ್ರದ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿ ಸಮಾನತೆಯನ್ನು ನಿರಾಕರಿಸುವುದು ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್‌ಆರ್‌ಸಿಯ ಮೂಲ ಉದ್ದೇಶವಾಗಿತ್ತು. ಈ ಕಾಯಿದೆಗಳ ಕತ್ತಿ ಇನ್ನೂ ಮುಸಲ್ಮಾನರ ತಲೆ ಮೇಲೆ ತೂಗಿದೆ.

’ಹಿಂದೂ ಜನಾಂಗ ಮತ್ತು ಹಿಂದೂ ರಾಷ್ಟ್ರವನ್ನು ತಮ್ಮ ಹೃದಯಕ್ಕೆ ಹತ್ತಿರ ಇರಿಸಿಕೊಂಡು ವೈಭವೀಕರಿಸಿ ಆ ಧ್ಯೇಯದೆಡೆಗೆ ಸಾಗುವ ಆಶೋತ್ತರ ಉಳ್ಳವರು ಮಾತ್ರವೇ ರಾಷ್ಟ್ರವಾದೀ ದೇಶಭಕ್ತರು. ಉಳಿದವರೆಲ್ಲ ದೇಶದ್ರೋಹಿಗಳು ಮತ್ತು ರಾಷ್ಟ್ರೀಯತೆಯ ವೈರಿಗಳು’ ಎಂದು ಮೂರು ದಶಕಗಳ ಕಾಲ ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಹೇಳಿದ್ದರು. We or Our Nationhood Defined (1939) ಕೃತಿಯಲ್ಲಿ ರಾಷ್ಟ್ರೀಯತೆ ಕುರಿತ ಅವರ ವಿಚಾರದ ಸವಿವರ ಪ್ರಸ್ತಾಪವಿದೆ.

“ಹಿಂದುಸ್ತಾನದ ಪರಕೀಯ ಜನಾಂಗಗಳು ಹಿಂದು ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದು ಧರ್ಮವನ್ನು ಭಕ್ತಿ ಗೌರವದಿಂದ ಕಾಣಬೇಕು, ಹಿಂದೂ ಜನಾಂಗ ಮತ್ತು ಸಂಸ್ಕೃತಿಯನ್ನು ವೈಭವೀಕರಿಸುವುದರ ವಿನಾ ಬೇರೆ ಯಾವ ವಿಚಾರವನ್ನೂ ನೆಚ್ಚಕೂಡದು. ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟುಕೊಟ್ಟು ಹಿಂದು ಜನಾಂಗದೊಳಕ್ಕೆ ವಿಲೀನಗೊಳ್ಳಬೇಕು, ಇಲ್ಲವಾದರೆ ಹಿಂದು ರಾಷ್ಟ್ರಕ್ಕೆ ಸಂಪೂರ್ಣ ಅಧೀನವಾಗಿ ನಾಗರಿಕ ಹಕ್ಕುಗಳನ್ನು ಕೂಡ ಕೇಳದಂತೆ ಈ ದೇಶದಲ್ಲಿ ಜೀವಿಸಬೇಕು. ನಮ್ಮದು ಪ್ರಾಚೀನ ರಾಷ್ಟ್ರ. ತಮ್ಮ ದೇಶದಲ್ಲಿ ನೆಲೆಸಲು ಬಂದ ಪರಕೀಯ ಜನಾಂಗಗಳನ್ನು ಪ್ರಾಚೀನ ದೇಶಗಳು ಹೇಗೆ ನಡೆಸಿಕೊಳ್ಳುತ್ತವೆಯೋ ಅದೇ ರೀತಿ ನಡೆಸಿಕೊಳ್ಳೋಣ” ಎಂಬುದು ಗೋಲ್ವಾಲ್ಕರ್ ಅವರ ಪ್ರತಿಪಾದನೆಯಾಗಿತ್ತು.

ಆದರೆ ಸಂವಿಧಾನ ರಚನಾ ಸಭೆಯು ಗೋಲ್ವಾಲ್ಕರ್ ಅವರ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿತು. ಪೌರತ್ವದ ತಳಹದಿ ಧರ್ಮ ಅಲ್ಲ ಎಂದು ಸಾರಿತು. ಭಾರತವನ್ನು ಹಿಂದೂ ಬಹುಸಂಖ್ಯಾತ ದೇಶ ಎಂದು ಘೋಷಿಸದೆ ಜಾತ್ಯತೀತ ಮೌಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

ಮುಸ್ಲಿಮ್ ಅಸ್ಮಿತೆಯು ಇಂದು ಎದುರಿಸಿರುವಂತಹ ತೀವ್ರ ಬಹಿರಂಗ ದಾಳಿಯನ್ನು ಹಿಂದೆಂದೂ ಕಂಡಿರಲಿಲ್ಲ ಎನ್ನುತ್ತಾರೆ ಮಾಜಿ ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ.

ಹಿತಾಸಕ್ತಿಗಳಿಂದ ಹಲವು ಬಗೆಯ ಮಿಥ್ಯಾಪ್ರಚಾರಕ್ಕೆ ಬಲಿಯಾಗಿರುವ ಸಮುದಾಯವಿದು. 2011ರ ಜನಗಣತಿಯ ಪ್ರಕಾರ ಭಾರತದಲ್ಲಿನ ಮುಸಲ್ಮಾನರ ಜನಸಂಖ್ಯೆ 17.22 ಕೋಟಿ. ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ.14.23. ಆದರೆ ಅವರ ಹಾಲಿ ಪ್ರಮಾಣ ಶೇ.30 ಎಂದೂ, 2041ರ ಹೊತ್ತಿಗೆ ಶೇ.84ರಷ್ಟಾಗಿ ಭಾರತ ಮುಸಲ್ಮಾನ ದೇಶವಾಗುವುದೆಂದೂ ವ್ಯಾಪಕ ಮಿಥ್ಯಾಪ್ರಚಾರ ನಡೆದಿದೆ. 1951ರಲ್ಲಿ ಶೇ.9.8ರಷ್ಟಿದ್ದ ಮುಸಲ್ಮಾನ ಜನಸಂಖ್ಯೆ 2011ರ ಹೊತ್ತಿಗೆ 60 ವರ್ಷಗಳ ಅವಧಿಯಲ್ಲಿ ಶೇ.14.2ರಷ್ಟಾಗಿದೆ. ಅಮೆರಿಕೆಯ ಪ್ಯೂ ರಿಸರ್ಚ್ ಸೆಂಟರ್ ವರದಿಯ ಪ್ರಕಾರ 2050ರ ವೇಳೆಗೆ ಭಾರತದಲ್ಲಿ ಮುಸಲ್ಮಾನರ ಶೇಕಡಾವಾರು ಪ್ರಮಾಣ ಶೇ.18.4ರಷ್ಟಾಗಲಿದೆ. ಅಂದರೆ ಇನ್ನೂ 30 ವರ್ಷಗಳ ನಂತರ. ಅದೇ ವರದಿಯ ಪ್ರಕಾರ 2050ರ ವೇಳೆಗೆ ಭಾರತದಲ್ಲಿ ಹಿಂದೂಗಳ ಪ್ರಮಾಣ ಶೇ.76.7ಕ್ಕೆ ಏರಲಿದೆ.

ವಿಶೇಷವಾಗಿ ಕಳೆದ ಆರೇಳು ವರ್ಷಗಳ ರಾಜಕಾರಣದಲ್ಲಿ ಮುಸಲ್ಮಾನರನ್ನು ವ್ಯವಸ್ಥಿತವಾಗಿ ಮರೆಯಾಗಿಸಲಾಗುತ್ತಿದೆ. ದೇಶದ ಒಟ್ಟು ಮುಸಲ್ಮಾನರ ಸಂಖ್ಯೆಯಲ್ಲಿ ಶೇ.80ರಷ್ಟು ಹತ್ತು ರಾಜ್ಯಗಳಲ್ಲಿದ್ದಾರೆ. ಆ ಹತ್ತು ರಾಜ್ಯ ಸರ್ಕಾರಗಳ ಮಂತ್ರಿಮಂಡಲಗಳ ಮಂತ್ರಿಗಳ ಸಂಖ್ಯೆ 281. ಈ ಪೈಕಿ ಮುಸಲ್ಮಾನ ಮಂತ್ರಿಗಳ ಸಂಖ್ಯೆ 16. ಪ್ರಮಾಣದಲ್ಲಿ ಹೇಳುವುದಾದರೆ ಶೇ.5.7. ಅವರ ಜನಸಂಖ್ಯೆಯ ಮೂರನೆಯ ಒಂದು ಭಾಗ ಮಾತ್ರ. ಇದೊಂದು ಸಣ್ಣ ಉದಾಹರಣೆ ಮಾತ್ರ.

ಜಾಮಿಯಾ ಮಿಲಿಯಾ ಉಪಕುಲಪತಿ ಮತ್ತು ದೆಹಲಿಯ ಉಪರಾಜ್ಯಪಾಲರಾಗಿದ್ದ ನಜೀಬ್ ಜಂಗ್ ತಮ್ಮ ಸಮುದಾಯದ ಕುರಿತು ಆಡಿರುವ ಕೆಲವು ಮಾತುಗಳನ್ನೂ ಇಲ್ಲಿ ಪ್ರಸ್ತಾಪಿಸಬೇಕಿದೆ.

“ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ಮುಸಲ್ಮಾನ ಮಕ್ಕಳ ಸಂಖ್ಯೆ ಈಗಲೂ ಕಡಿಮೆಯೇ. ಮದರಸಾಗಳಲ್ಲಿ ಕಲಿಯುವವರದ್ದೇ ದೊಡ್ಡ ಸಂಖ್ಯೆ. ಇಂಗ್ಲಿಷ್, ವಿಜ್ಞಾನ ಮತ್ತು ಗಣಿತವನ್ನು ಕೆಲವು ಮದರಸಾಗಳಲ್ಲಿ ಕಲಿಸಲಾಗುತ್ತಿದೆ. ಆದರೆ ಅಂತಹವುಗಳ ಸಂಖ್ಯೆ ಬಹಳ ಕಡಿಮೆ. ಖುರಾನ್ ಬಾಯಿಪಾಠವೊಂದೇ ಮುಖ್ಯ ಕಲಿಕೆಯಾಗಿ ಉಳಿದಿದೆ. ಹತ್ತು ಹನ್ನೆರಡು ವರ್ಷಗಳ ಮಗ ’ಹಾಫೀಜ್’ ಆಗಿಬಿಟ್ಟರೆ ಸಾಧಾರಣ ಮುಸ್ಲಿಮ್ ಕುಟುಂಬಕ್ಕೆ ಅದೇ ಹೆಮ್ಮೆಯ ಸಂಗತಿ.”

“ಮೌಲ್ವಿಗಳು ಮೌಲಾನಾಗಳು ಮುಸ್ಲಿಮ್ ಸಮುದಾಯದ ದೊಡ್ಡ ಸಮಸ್ಯೆ. ಮಸೀದಿಗಳು, ದಾರುಲ್ ಉಲೂಮ್‌ಗಳಲ್ಲಿ ಕುಳಿತು ಫತ್ವಾಗಳನ್ನು ಹೊರಡಿಸುವ ಇವರ ಹಿಡಿತದಲ್ಲಿದೆ ಸಮುದಾಯ. ಮುಸಲ್ಮಾನರ ಪರ ದನಿ ಎತ್ತುವ ಮತ್ತು ಕಟ್ಟರ್ ಹಿಂದೂ ಬಲಪಂಥೀಯರು ಮತ್ತು ಬೇಲಿಯ ಮೇಲೆ ಕುಳಿತವರ ವಿರುದ್ಧ ಹೋರಾಡುತ್ತ ಬಂದಿರುವ ಮುಸ್ಲಿಮೇತರ ಉದಾರವಾದಿಗಳಿದ್ದಾರೆ. ಅದರೆ ಮುಸ್ಲಿಮ್ ಸಂಪ್ರದಾಯವಾದ ಮತ್ತು ಗೊಡ್ಡು ನಂಬಿಕೆಗಳ ವಿಷಯ ಬಂದಾಗ ಅವರು ಬಲಪಂಥೀಯರ ಮುಂದೆ ಅಸಹಾಯಕರಾಗುತ್ತಿರುವುದನ್ನು ಕಾಣುತ್ತಿದ್ದೇನೆ.”

“ಇಂದಿನ ಬಹುತೇಕ ಮುಸಲ್ಮಾನರು ಬೌದ್ಧಿಕ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ. ಈ ಹಿಂದಿನ ಪೀಳಿಗೆಗಳ ಮುಸ್ಲಿಮ್ ವಿದ್ವಾಂಸರು ಇಬ್ನ್ ಅರಬಿ, ಫಖ್ರುದ್ದೀನ್ ರಾಝಿ, ಐನ್ಸ್ಟೀನ್, ಬರ್ಗ್ಸನ್, ರಸೆಲ್ ಹಾಗೂ ಫ್ರಾಯ್ಡ್‌ನನ್ನು ಅಧ್ಯಯನ ಮಾಡಿಕೊಂಡಿರುತ್ತಿದ್ದರು. ಅಲ್ಲಾಮಾ ಇಕ್ಬಾಲ್ ಹೇಳಿರುವಂತೆ ಗೌರವಾದರ ಮತ್ತು ಸ್ವತಂತ್ರ ಮನೋವೃತ್ತಿಯಿಂದ ಆಧುನಿಕ ಜ್ಞಾನಸಂಪತ್ತಿನ ಬಳಿ ಸಾಗಬೇಕಿದೆ. ಇಸ್ಲಾಮ್ ಬೋಧನೆಗಳನ್ನು ಇದೇ ಜ್ಞಾನದ ಬೆಳಕಿನಲ್ಲಿ ನೋಡಬೇಕಿದೆ. ಯಾವುದೇ ಸಮಾಜ ಅಥವಾ ಯಾವುದೇ ಧರ್ಮ ತನ್ನ ಗತವನ್ನು ಸಾರಾಸಗಟಾಗಿ ಮರೆತುಬಿಡುವುದು ಇಲ್ಲವೇ ತಿರಸ್ಕರಿಸುವುದು ಎಂದಿಗೂ ಸಾಧ್ಯವಿಲ್ಲ. ಪ್ರವಾದಿಯವರು ಗತಿಸಿದ ನಂತರದ ವರ್ಷಗಳಲ್ಲಿ ಇಸ್ಲಾಮ್ ಮತ್ತು ಇಸ್ಲಾಮಿಕ್ ಇತಿಹಾಸ ಉಜ್ವಲ ಶಕೆಯನ್ನು ಕಂಡಿತ್ತು. ಭಾರತದ ಮುಸಲ್ಮಾನರು ಮೌಲಾನಾಗಳ ಮಧ್ಯಯುಗೀನ ಫ್ಯಾಂಟಸಿಯಿಂದ ಹೊರಬಂದು ಹೆಚ್ಚು ಹೆಚ್ಚು ಸಮಕಾಲೀನ ಪ್ರವೃತ್ತಿಗಳನ್ನು ಆಲಂಗಿಸಿಕೊಳ್ಳಬೇಕು. ಊಹಾತ್ಮಕ ತತ್ವಜ್ಞಾನಗಳು ಮತ್ತು ಪೂರ್ವಾಚಾರ ಪದ್ಥತಿಗಳ ವಿರುದ್ಧದ ಬಂಡಾಯ ಮತ್ತು ಪ್ರತಿಪಾದಿಸಿದ ಸ್ಥಾಪಕ ತರ್ಕಗಳಿಗಾಗಿ ಪವಿತ್ರ ಖುರಾನನ್ನು ಓದಿ ಅರಿಯಲೇಬೇಕು.”

“ವೈಜ್ಞಾನಿಕ ಅರಿವು ಮತ್ತು ಜಿಜ್ಞಾಸೆಯ ಹುಡುಕಾಟವನ್ನು ಪ್ರವಾದಿಯವರ ಕಾಲದಿಂದಲೂ ಪ್ರೋತ್ಸಾಹಿಸಲಾಗಿದೆ. ಜ್ಞಾನ ಸಂಪಾದನೆಗೆ ಚೀನಾ ತನಕವೂ ಪ್ರವಾಸ ಮಾಡಿರೆಂದು ಖುದ್ದು ಪ್ರವಾದಿ ತಮ್ಮ ಅನುಯಾಯಿಗಳನ್ನು ಆಗ್ರಹಿಸಿದ್ದರಂತೆ. ’ಮಂಜಿಲ್ ಸೇ ಆಗೇ ಬಢಕರ್ ಮಂಜಿಲ್ ತಲಾಶ್ ಕರ್, ಮಿಲ್ ಜಾಯೇ ತುಝೇ ದರಿಯಾ, ಸಮಂದರ್ ತಲಾಶ್ ಕರ್’ ಎಂಬ ಅಲ್ಲಾಮಾ ಇಕ್ಬಾಲ್ ಕವಿವಾಣಿ ಹೇಳುವುದೂ ಅದನ್ನೇ”.


ಇದನ್ನೂ ಓದಿ: ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...