Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

- Advertisement -
- Advertisement -

ಒಲವಿನ ಹುಡುಕಾಟದ ನಡುವೆಯೇ ಕವಿತೆಗಳು ಹುಟ್ಟುತ್ತವೆ. ಪ್ರಕೃತಿ ಮತ್ತು ಪ್ರೀತಿ ಮನುಷ್ಯನ ಅವಿಭಾಜ್ಯ ಅಂಗ. ತದನಂತರದಲ್ಲಿ ವ್ಯಕ್ತಿನಿಷ್ಠ ಅನುಭವಗಳನ್ನು ಸಮಷ್ಠಿಯತ್ತ ಕೊಂಡೊಯ್ಯುವ ಶಕ್ತಿ ಕವಿಗಿರುತ್ತದೆ. ಅಂತಹ ಕವಿ ಮಾತ್ರ ಕಾಲದಾಚೆಗೂ ನಿಂತುಕೊಳ್ಳುತ್ತಾನೆ ಅನ್ನುವುದನ್ನು ಮರೆಯುವಂತಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಜನರು ಬೇಗುದಿಗಳನ್ನು, ತಲ್ಲಣಗಳನ್ನು, ಆತಂಕಗಳನ್ನೂ ಅನುಭವಿಸಿದರು. ಅದರ ನಡುವೆಯೇ ಬಹಳಷ್ಟು ಸಾಹಿತ್ಯ ಕೃತಿಗಳು ಹೊರಬಂದವು. ಆದರೆ ಅನಾದಿಕಾಲದಿಂದಲೂ, ಅಡುಗೆಮನೆಯ ಬೇಗುದಿ ಬೇರೊಂದು ತೆರನಾದದ್ದು ಎಂದು ಹೇಳಬೇಕಾಗಿಲ್ಲ. ಅದಕ್ಕೊಂದು ಹೊಗೆ ಕೊಳವೆ – ಚಿಮಣಿ ಆಮೇಲೆ ಎಕ್ಸಾಸ್ಟ್ ಫ್ಯಾನ್ ಆಧುನಿಕ ಕಾಲದಲ್ಲಿ ಬಂದರೂ ಹೊಗೆ ಪೂರ್ಣವಾಗಿ ಹೊರಹೋಗಿದ್ದುರ ಖಚಿತತೆ ಇನ್ನೂ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕೊರೊನಾ ಕಾಲದ 2020ರಲ್ಲಿನ ಎರಡು ಮಹಿಳಾ ಕವನ ಸಂಕಲನಗಳನ್ನು ಉಲ್ಲೇಖಿಸುವ ಸಂದರ್ಭ ಬಂದಾಗ, ಒಂದು ಬಿ. ಆರ್. ಶೃತಿಯವರ ’ಜೀರೋ ಬ್ಯಾಲೆನ್ಸ್’ ಇನ್ನೊಂದು ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ನೆನಪಾಗುತ್ತದೆ.

’ಜೀರೋ ಬ್ಯಾಲೆನ್ಸ್’ ಶೀರ್ಷಿಕೆ ಕ್ಯಾಚಿಯಾಗಿರುವ ಹಾಗೆ ಅದರೊಳಗಿರುವ ಕವಿತೆಗಳು ಸಹ ಓದುಗನ ಮನಸ್ಸನ್ನು ಹಿಡಿದಿಡುವುದರಲ್ಲಿ ಸಫಲವಾಗಿವೆ. ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತಗಳ ನಡುವೆ ’ಜೀರೋ ಬ್ಯಾಲೆನ್ಸ್’ ಅನ್ನುವ ಶೀರ್ಷಿಕೆ ಏನು ಹೇಳಲು ಹೊರಟಿದೆ ಅನ್ನುವ ಕುತೂಹಲ ಮೂಡಿಸುವುದು ಸಹಜವಾಗಿದೆ. ’ಏರುತ್ತಿರುವ ದರಗಳೊಂದಿಗೆ ಸೆಣಿಸಿ ಸೋತು’ ಮಧ್ಯಮ ವರ್ಗದ ಜನರ ಉಳಿತಾಯದ ಖಾತೆಯಲ್ಲಿ ಬ್ಯಾಲೆನ್ಸ್ ಜೀರೋ ಎನ್ನುವುದರ ಸಾಂಕೇತಿಕವಾಗಿದೆ ’ಜೀರೋ ಬ್ಯಾಲೆನ್ಸ್’ ಕವಿತೆ.

ಒಳಗಿನ ಬೇಗುದಿಯ ಹೊರಹಾಕಲು
ಎದೆಗೊಂದು ಎಕ್ಸಾಸ್ಟ್ ಫ್ಯಾನೋ
ಸಣ್ಣ ಕಿಟಕಿಯೋ ಇರಬಹುದಿತ್ತೆನಿಸಿತು

ಎನ್ನುವ ಸಾಲುಗಳಲ್ಲಿ ಮಹಿಳಾ ಬೇಗುದಿಯನ್ನು ಹೊರಹಾಕಲು ಒಂದು ಕವಾಟದ ಅಪೇಕ್ಷೆಯನ್ನಿಡುವ ಶೃತಿಯವರ ಹಲವಾರು ಕವನಗಳು ಮನದ ತೊಳಲಾಟಗಳ ಬ್ಯಾಲೆನ್ಸ್‌ನ್ನು ಜೀರೋ ಮಾಡಿಕೊಳ್ಳುವ ಪ್ರಯತ್ನವಂತೂ ಕವನಸಂಕಲನದಲ್ಲಿ ಕಾಣಸಿಗುತ್ತದೆ. ಆದರೆ ಇನ್ನೊಂದು ಮಗ್ಗುಲಲ್ಲಿ ’ಜೀರೋ’ ಅನ್ನುವುದನ್ನು ಶೂನ್ಯ ಎಂದು ಪರಿಗಣಿಸಿದರೆ ಪೂರ್ಣತೆಯಡೆ ಹೋಗಬೇಕಾಗುತ್ತದೆ. ಒಂದು ಕಾಲಕ್ಕೆ ಇಲ್ಲದಿದ್ದ ಸಮಸ್ಯೆಗಳು ಹಾಗೂ ಇದ್ದ ಸಮಸ್ಯೆಗಳು ಇವತ್ತು ಭಿನ್ನ ಸ್ವರೂಪದೊಡನೆ ಹೊಸ ಸವಾಲುಗಳೊಂದಿಗೆ ಸಮಾಜದ ಮುಂದೆ ನಿಂತಾಗ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಅಕೌಂಟ್ ಹೋಲ್ಡರ್‌ನ ಮುಂದಿರುವ ಸವಾಲು ಹೌದು! ಬ್ಯಾಲೆನ್ಸ್ ಜೀರೋ ಆದಾಗ ಅಕೌಂಟ್ ಕ್ಲೋಸ್ ಆಗುವುದಿಲ್ಲ. ಅದರ ಮುಂದೆ ಹಲವಾರು ಆಪ್ಶನ್‌ಗಳು ಇರುತ್ತವೆ ಎಂಬುದು ಸಹ ಸೂಚಿತವಾಗಿದೆ.

ಇನ್ನೇನು ಅಡುಗೆಯೋ ಮನೆಗೆಲಸವೋ ಮಾಡಿರಬೇಕು
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ
ಬಿಡು ಅಪ್ಪನೊ, ಗಂಡನೊ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು
ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ…

ಅದೆಲ್ಲಾ ಇಲ್ಲಕ್ಕ ಪುಸ್ತಕದಲ್ಲಿ ಎನ್ನುತ್ತಾ
ಅಕ್ಕನ ನಿಟ್ಟುಸಿರು ಅರ್ಥವಾಗದ ತಂಗಿ
ಪಿಳಿ ಪಿಳಿ ಕಣ್ಣುಬಿಟ್ಟಳು…

ಹೆಣ್ಣಿನ ಸ್ಥಿತಿಯನ್ನು ನಿಧಾನವಾಗಿ, ಸರಳವಾಗಿ ತೆರೆದಿಡುತ್ತಲೇ ಪ್ರತಿರೋಧವನ್ನು ವ್ಯಕ್ತಪಡಿಸುವ ಕವನ ’ಅಕ್ಕನ ಮೊಹೆಂಜೊದಾರೋ’. ತುಳಿಯುವ ಪ್ರಯತ್ನ ಅನಾದಿಯಿಂದಲೂ ನಡೆದುಕೊಂಡೇ ಬಂದಿರುವ ವ್ಯವಸ್ಥೆಯಲ್ಲಿ ಟೀಕಿಸಲು ಹಕ್ಕಿಲ್ಲ ಅಥವಾ ತನ್ನ ಹತಾಶೆಯನ್ನು ತೋರ್ಪಡಿಸಲು ದಾರಿಗಳೆಲ್ಲಿವೆ ಎಂಬ ಪ್ರಶ್ನೆಯನ್ನು ತಲತಲಾಂತರಗಳಿಂದ ಪ್ರಶ್ನಿಸಿಕೊಳ್ಳದ ಅಥವಾ ಪ್ರಶ್ನಿಸಿಕೊಳ್ಳುತ್ತಲೇ ಸುಮ್ಮನಿದ್ದುಬಿಡುವ ಸ್ತ್ರೀ ಸಂಕುಲಕ್ಕೆ ಬಿಡುಗಡೆಯ ದಾರಿಗಳು ಎಲ್ಲಿವೆ ಹಾಗಾದರೆ.. ಎನ್ನುತ್ತಲೇ ಸೂಕ್ಷ್ಮವಾಗಿ ಪ್ರಶ್ನಿಸುವ ಕವನಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಓದಬೇಕಾಗುತ್ತದೆ.

ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ಕವನ ಸಂಕಲನ ಆತ್ಮ ನಿವೇದನೆಯ ರೂಪವನ್ನು ಹೊತ್ತುಬಂದಿರುವುದರ ಜೊತೆಗೆ ಖಾಸಗಿತನವನ್ನು ಎಳೆಯಾಗಿ ಅನಾವರಣಗೊಳಿಸುವ ಜಾಡುಹಿಡಿದು, ಹೊಸದಾದ ಧಾಟಿಯನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಮೃದುವಾದ, ಸಹಜವಾದ ರೀತಿಯಲ್ಲಿ ಕಾವ್ಯವನ್ನು ಮಂಜುಳಾ ಕಟ್ಟಿಕೊಡುವ ರೀತಿ ’ಗಾಯಗೊಂಡವರಿಗೆ’ ಹೊಸದಾದ ಬ್ಯಾಂಡೇಜ್ ಹಾಕಿದಂತಿದೆ.

ಯುಗಯುಗಗಳಿಂದ
ಆಕೆಯನ್ನು ಕತ್ತಲ
ಕೋಣೆಯೊಳಗೆ
ಕೂಡಿ ಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ

ಎನ್ನುವ ಸಾಲುಗಳು ’ಅವಳ’ ಕುರಿತು ಮಾತನಾಡುತ್ತವೆ. ಮಂಜುಳಾ ಹಿರೇಮಠರವರ ಕವಿತೆಗಳಲ್ಲಿಯೂ ಸ್ತ್ರೀ ಸಂವೇದನೆಯು ’ಕತ್ತಲ ಕೋಣೆಯಲ್ಲಿ’ನ ಬೆಳಕಿನ ಕಿಂಡಿಯ ಹಾಗೆ ಇಣುಕುತ್ತವೆ. ’ಪ್ರತಿಮೆಯಾಗೋಣ ಬಾ’ ಕವಿತೆ ಕ್ಷಮಿಸುವ ಔದಾರ್ಯತೆ ಇದೆ ಎನ್ನುವುದನ್ನು ಕವಯತ್ರಿಯ ಭಾವಲಹರಿಯಲ್ಲಿ ತಿಳಿಯುವಂತದ್ದು. ನನ್ನದೇ ಪದಗಳನ್ನು, ಅನುಭವಗಳನ್ನು ಈ ಕವಯತ್ರಿಯರಿಬ್ಬರೂ ನಿನ್ನೆ ರಾತ್ರಿ ಕಡ ತೆಗೆದುಕೊಂಡು ಹೋಗಿರುವವರೇ ಎನ್ನುವ ಭಾವನೆ ಪ್ರತಿಯೊಬ್ಬಳಿಗೂ ಈ ಕವನದಲ್ಲಿ ಝಳಪಿಸುತ್ತದೆ.

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ಗಾಯಗೊಂಡವರಿಗೆ ಕವನದಲ್ಲಿ ನೋವಿದೆ. ಆದರೆ ನೋವಿನಿಂದ ಬಿಡುಗಡೆ ಬಯಸುವ ನಿರೀಕ್ಷೆ ಇದೆಯಲ್ಲ ಅದೇ ಜೀವನ ಪ್ರಿತಿ. ಹಾಗಾದರೆ ಗಾಯ ಮಾಡಿದವರ ಕುರಿತು ಒಂದು ಕವಿತೆಯಂತೂ ಬರಬೇಕಲ್ಲವೇ?
ಜೀವನೋತ್ಸಾಹವಿದ್ದಾಗ ಮಾತ್ರವೇ ಅದೆಷ್ಟು ದಾಳಿಗಳಾದರೂ ಮತ್ತೆ ಮತ್ತೆ ಚಿಗುರುವ ಬದುಕುವ ಹಂಬಲವಿದ್ದೇ ಇರುತ್ತದೆ. ಇದೇ ಪ್ರಕೃತಿಯ ಗುಟ್ಟು. ಹೆಣ್ಣು ಸಹ ಪ್ರಕೃತಿಯಂತೆ; ಹೊರತಾಗಿಲ್ಲ. ಮನುಷ್ಯ ಸಾವಿಗೆ ಮೊರೆ ಹೋಗುವ ಅಗತ್ಯವಿಲ್ಲ. ಬದುಕಲು ನೂರಾರು ದಾರಿಗಳಿವೆ. ಗಾಯಗಳು ಎಲ್ಲರಿಗೂ ಕಾಣುವಂತಾದರೂ ಕಷ್ಟ! ಈ ಜಗದ ತುಂಬಾ ಮುಲಾಮು ಹಚ್ಚುವ ಕಾವಲುಗಾರರಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ

’ಗಾಯಗೊಂಡವರಿಗೆ’ ಕವನಸಂಕಲದಲ್ಲಿನ ಪ್ರತಿರೋಧ ತಣ್ಣನೆಯ ಮಂಜುಗಡ್ಡೆಯನ್ನು ಅಂಗಿಯೊಳಗೆ ಹಾಕಿದಂತಹ ಅನುಭವ ನೀಡುವಂತದ್ದು. ಪ್ರತಿರೋಧದ ಅಲೆ ಪ್ರತಿ ಹೆಣ್ಣಿನ ಆಳದಲ್ಲಿ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ ಆದರೆ ಅದರ ಸ್ವರೂಪ ಹಾಗೂ ಸ್ಫೋಟಗೊಳ್ಳುವ ಪರಿಗಾಗಿ ಕಾಯಬೇಕಾಗುತ್ತದೆ ಹಾಗೂ ಸಿದ್ಧಗೊಳ್ಳಬೇಕಾಗುತ್ತದೆ.

ಶತಮಾನಗಳಿಂದ ವಿದ್ಯೆಯಿಂದ ವಂಚಿತಳಾಗಿ, ಲಿಂಗ ತಾರತಮ್ಯಕ್ಕೆ ಒಳಗಾಗಿದುದರ ಫಲವಾಗಿ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದ ಕಾರಣವೂ ಸೇರಿದಂತೆ, ಮಹಿಳೆ ಅಭಿವ್ಯಕ್ತಿಯಲ್ಲಿ ಇನ್ನೂ ಮುಂದೆ ಬರಬೇಕಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ; ನೆರೆಯ ಮರಾಠಿ ಹಾಗೂ ಮಲಯಾಳ ಸಾಹಿತ್ಯವನ್ನು ಅವಲೋಕಿಸಿದಾಗ ಕಂಡುಬರುವ ಮುಕ್ತತೆ, ಸ್ವಾತಂತ್ರ್ಯ ಇನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ಬಿ. ಆರ್. ಶೃತಿ ಮತ್ತು ಮಂಜುಳಾ ಹಿರೇಮಠರವರ ಕವನ ಸಂಕಲನಗಳ ಹೆಸರು ’ಜೀರೋ ಬ್ಯಾಲೆನ್ಸ್’ ಹಾಗೂ ’ಗಾಯಗೊಂಡವರಿಗೆ’ ತತ್‌ಕ್ಷಣಕ್ಕೆ ನೆಗೆಟಿವ್ ಶೀರ್ಷಿಕೆಗಳೆಂದೆನಿಸಿದರೂ ಕವನಗಳ ಓದು ಆಶಾವಾದದ ಸಂದೇಶಗಳನ್ನು ನೀಡುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಕವಯತ್ರಿಯರ ಭಾವಗಳನ್ನು ಓದುಗ ತನ್ನದೇ ಎನ್ನುವಷ್ಟರಮಟ್ಟಿಗೆ ಆವಾಹಿಸಿಕೊಂಡು ಆಪ್ತತೆಯನ್ನು ಪಡೆಯುವಷ್ಟು ಸಶಕ್ತವಾಗಿವೆ. ವಿಶೇಷ ಏನೆಂದರೆ ಶತಮಾನಗಳಿಂದ ’ಗಾಯಗೊಂಡವರಿಗೆ’ಲ್ಲ ಅಂತರಂಗದ ನೋವನ್ನು ’ಜೀರೋ ಬ್ಯಾಲೆನ್ಸ್’ ಮಾಡುವ ಸಂದರ್ಭ ಬರುತ್ತಿದೆ ಎನ್ನುತ್ತಿವೆ ಪ್ರಸ್ತುತ ಕವನ ಸಂಕಲನಗಳು.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 6 ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...