Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

- Advertisement -
- Advertisement -

ಒಲವಿನ ಹುಡುಕಾಟದ ನಡುವೆಯೇ ಕವಿತೆಗಳು ಹುಟ್ಟುತ್ತವೆ. ಪ್ರಕೃತಿ ಮತ್ತು ಪ್ರೀತಿ ಮನುಷ್ಯನ ಅವಿಭಾಜ್ಯ ಅಂಗ. ತದನಂತರದಲ್ಲಿ ವ್ಯಕ್ತಿನಿಷ್ಠ ಅನುಭವಗಳನ್ನು ಸಮಷ್ಠಿಯತ್ತ ಕೊಂಡೊಯ್ಯುವ ಶಕ್ತಿ ಕವಿಗಿರುತ್ತದೆ. ಅಂತಹ ಕವಿ ಮಾತ್ರ ಕಾಲದಾಚೆಗೂ ನಿಂತುಕೊಳ್ಳುತ್ತಾನೆ ಅನ್ನುವುದನ್ನು ಮರೆಯುವಂತಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಜನರು ಬೇಗುದಿಗಳನ್ನು, ತಲ್ಲಣಗಳನ್ನು, ಆತಂಕಗಳನ್ನೂ ಅನುಭವಿಸಿದರು. ಅದರ ನಡುವೆಯೇ ಬಹಳಷ್ಟು ಸಾಹಿತ್ಯ ಕೃತಿಗಳು ಹೊರಬಂದವು. ಆದರೆ ಅನಾದಿಕಾಲದಿಂದಲೂ, ಅಡುಗೆಮನೆಯ ಬೇಗುದಿ ಬೇರೊಂದು ತೆರನಾದದ್ದು ಎಂದು ಹೇಳಬೇಕಾಗಿಲ್ಲ. ಅದಕ್ಕೊಂದು ಹೊಗೆ ಕೊಳವೆ – ಚಿಮಣಿ ಆಮೇಲೆ ಎಕ್ಸಾಸ್ಟ್ ಫ್ಯಾನ್ ಆಧುನಿಕ ಕಾಲದಲ್ಲಿ ಬಂದರೂ ಹೊಗೆ ಪೂರ್ಣವಾಗಿ ಹೊರಹೋಗಿದ್ದುರ ಖಚಿತತೆ ಇನ್ನೂ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕೊರೊನಾ ಕಾಲದ 2020ರಲ್ಲಿನ ಎರಡು ಮಹಿಳಾ ಕವನ ಸಂಕಲನಗಳನ್ನು ಉಲ್ಲೇಖಿಸುವ ಸಂದರ್ಭ ಬಂದಾಗ, ಒಂದು ಬಿ. ಆರ್. ಶೃತಿಯವರ ’ಜೀರೋ ಬ್ಯಾಲೆನ್ಸ್’ ಇನ್ನೊಂದು ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ನೆನಪಾಗುತ್ತದೆ.

’ಜೀರೋ ಬ್ಯಾಲೆನ್ಸ್’ ಶೀರ್ಷಿಕೆ ಕ್ಯಾಚಿಯಾಗಿರುವ ಹಾಗೆ ಅದರೊಳಗಿರುವ ಕವಿತೆಗಳು ಸಹ ಓದುಗನ ಮನಸ್ಸನ್ನು ಹಿಡಿದಿಡುವುದರಲ್ಲಿ ಸಫಲವಾಗಿವೆ. ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತಗಳ ನಡುವೆ ’ಜೀರೋ ಬ್ಯಾಲೆನ್ಸ್’ ಅನ್ನುವ ಶೀರ್ಷಿಕೆ ಏನು ಹೇಳಲು ಹೊರಟಿದೆ ಅನ್ನುವ ಕುತೂಹಲ ಮೂಡಿಸುವುದು ಸಹಜವಾಗಿದೆ. ’ಏರುತ್ತಿರುವ ದರಗಳೊಂದಿಗೆ ಸೆಣಿಸಿ ಸೋತು’ ಮಧ್ಯಮ ವರ್ಗದ ಜನರ ಉಳಿತಾಯದ ಖಾತೆಯಲ್ಲಿ ಬ್ಯಾಲೆನ್ಸ್ ಜೀರೋ ಎನ್ನುವುದರ ಸಾಂಕೇತಿಕವಾಗಿದೆ ’ಜೀರೋ ಬ್ಯಾಲೆನ್ಸ್’ ಕವಿತೆ.

ಒಳಗಿನ ಬೇಗುದಿಯ ಹೊರಹಾಕಲು
ಎದೆಗೊಂದು ಎಕ್ಸಾಸ್ಟ್ ಫ್ಯಾನೋ
ಸಣ್ಣ ಕಿಟಕಿಯೋ ಇರಬಹುದಿತ್ತೆನಿಸಿತು

ಎನ್ನುವ ಸಾಲುಗಳಲ್ಲಿ ಮಹಿಳಾ ಬೇಗುದಿಯನ್ನು ಹೊರಹಾಕಲು ಒಂದು ಕವಾಟದ ಅಪೇಕ್ಷೆಯನ್ನಿಡುವ ಶೃತಿಯವರ ಹಲವಾರು ಕವನಗಳು ಮನದ ತೊಳಲಾಟಗಳ ಬ್ಯಾಲೆನ್ಸ್‌ನ್ನು ಜೀರೋ ಮಾಡಿಕೊಳ್ಳುವ ಪ್ರಯತ್ನವಂತೂ ಕವನಸಂಕಲನದಲ್ಲಿ ಕಾಣಸಿಗುತ್ತದೆ. ಆದರೆ ಇನ್ನೊಂದು ಮಗ್ಗುಲಲ್ಲಿ ’ಜೀರೋ’ ಅನ್ನುವುದನ್ನು ಶೂನ್ಯ ಎಂದು ಪರಿಗಣಿಸಿದರೆ ಪೂರ್ಣತೆಯಡೆ ಹೋಗಬೇಕಾಗುತ್ತದೆ. ಒಂದು ಕಾಲಕ್ಕೆ ಇಲ್ಲದಿದ್ದ ಸಮಸ್ಯೆಗಳು ಹಾಗೂ ಇದ್ದ ಸಮಸ್ಯೆಗಳು ಇವತ್ತು ಭಿನ್ನ ಸ್ವರೂಪದೊಡನೆ ಹೊಸ ಸವಾಲುಗಳೊಂದಿಗೆ ಸಮಾಜದ ಮುಂದೆ ನಿಂತಾಗ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಅಕೌಂಟ್ ಹೋಲ್ಡರ್‌ನ ಮುಂದಿರುವ ಸವಾಲು ಹೌದು! ಬ್ಯಾಲೆನ್ಸ್ ಜೀರೋ ಆದಾಗ ಅಕೌಂಟ್ ಕ್ಲೋಸ್ ಆಗುವುದಿಲ್ಲ. ಅದರ ಮುಂದೆ ಹಲವಾರು ಆಪ್ಶನ್‌ಗಳು ಇರುತ್ತವೆ ಎಂಬುದು ಸಹ ಸೂಚಿತವಾಗಿದೆ.

ಇನ್ನೇನು ಅಡುಗೆಯೋ ಮನೆಗೆಲಸವೋ ಮಾಡಿರಬೇಕು
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ
ಬಿಡು ಅಪ್ಪನೊ, ಗಂಡನೊ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು
ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ…

ಅದೆಲ್ಲಾ ಇಲ್ಲಕ್ಕ ಪುಸ್ತಕದಲ್ಲಿ ಎನ್ನುತ್ತಾ
ಅಕ್ಕನ ನಿಟ್ಟುಸಿರು ಅರ್ಥವಾಗದ ತಂಗಿ
ಪಿಳಿ ಪಿಳಿ ಕಣ್ಣುಬಿಟ್ಟಳು…

ಹೆಣ್ಣಿನ ಸ್ಥಿತಿಯನ್ನು ನಿಧಾನವಾಗಿ, ಸರಳವಾಗಿ ತೆರೆದಿಡುತ್ತಲೇ ಪ್ರತಿರೋಧವನ್ನು ವ್ಯಕ್ತಪಡಿಸುವ ಕವನ ’ಅಕ್ಕನ ಮೊಹೆಂಜೊದಾರೋ’. ತುಳಿಯುವ ಪ್ರಯತ್ನ ಅನಾದಿಯಿಂದಲೂ ನಡೆದುಕೊಂಡೇ ಬಂದಿರುವ ವ್ಯವಸ್ಥೆಯಲ್ಲಿ ಟೀಕಿಸಲು ಹಕ್ಕಿಲ್ಲ ಅಥವಾ ತನ್ನ ಹತಾಶೆಯನ್ನು ತೋರ್ಪಡಿಸಲು ದಾರಿಗಳೆಲ್ಲಿವೆ ಎಂಬ ಪ್ರಶ್ನೆಯನ್ನು ತಲತಲಾಂತರಗಳಿಂದ ಪ್ರಶ್ನಿಸಿಕೊಳ್ಳದ ಅಥವಾ ಪ್ರಶ್ನಿಸಿಕೊಳ್ಳುತ್ತಲೇ ಸುಮ್ಮನಿದ್ದುಬಿಡುವ ಸ್ತ್ರೀ ಸಂಕುಲಕ್ಕೆ ಬಿಡುಗಡೆಯ ದಾರಿಗಳು ಎಲ್ಲಿವೆ ಹಾಗಾದರೆ.. ಎನ್ನುತ್ತಲೇ ಸೂಕ್ಷ್ಮವಾಗಿ ಪ್ರಶ್ನಿಸುವ ಕವನಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಓದಬೇಕಾಗುತ್ತದೆ.

ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ಕವನ ಸಂಕಲನ ಆತ್ಮ ನಿವೇದನೆಯ ರೂಪವನ್ನು ಹೊತ್ತುಬಂದಿರುವುದರ ಜೊತೆಗೆ ಖಾಸಗಿತನವನ್ನು ಎಳೆಯಾಗಿ ಅನಾವರಣಗೊಳಿಸುವ ಜಾಡುಹಿಡಿದು, ಹೊಸದಾದ ಧಾಟಿಯನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಮೃದುವಾದ, ಸಹಜವಾದ ರೀತಿಯಲ್ಲಿ ಕಾವ್ಯವನ್ನು ಮಂಜುಳಾ ಕಟ್ಟಿಕೊಡುವ ರೀತಿ ’ಗಾಯಗೊಂಡವರಿಗೆ’ ಹೊಸದಾದ ಬ್ಯಾಂಡೇಜ್ ಹಾಕಿದಂತಿದೆ.

ಯುಗಯುಗಗಳಿಂದ
ಆಕೆಯನ್ನು ಕತ್ತಲ
ಕೋಣೆಯೊಳಗೆ
ಕೂಡಿ ಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ

ಎನ್ನುವ ಸಾಲುಗಳು ’ಅವಳ’ ಕುರಿತು ಮಾತನಾಡುತ್ತವೆ. ಮಂಜುಳಾ ಹಿರೇಮಠರವರ ಕವಿತೆಗಳಲ್ಲಿಯೂ ಸ್ತ್ರೀ ಸಂವೇದನೆಯು ’ಕತ್ತಲ ಕೋಣೆಯಲ್ಲಿ’ನ ಬೆಳಕಿನ ಕಿಂಡಿಯ ಹಾಗೆ ಇಣುಕುತ್ತವೆ. ’ಪ್ರತಿಮೆಯಾಗೋಣ ಬಾ’ ಕವಿತೆ ಕ್ಷಮಿಸುವ ಔದಾರ್ಯತೆ ಇದೆ ಎನ್ನುವುದನ್ನು ಕವಯತ್ರಿಯ ಭಾವಲಹರಿಯಲ್ಲಿ ತಿಳಿಯುವಂತದ್ದು. ನನ್ನದೇ ಪದಗಳನ್ನು, ಅನುಭವಗಳನ್ನು ಈ ಕವಯತ್ರಿಯರಿಬ್ಬರೂ ನಿನ್ನೆ ರಾತ್ರಿ ಕಡ ತೆಗೆದುಕೊಂಡು ಹೋಗಿರುವವರೇ ಎನ್ನುವ ಭಾವನೆ ಪ್ರತಿಯೊಬ್ಬಳಿಗೂ ಈ ಕವನದಲ್ಲಿ ಝಳಪಿಸುತ್ತದೆ.

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ಗಾಯಗೊಂಡವರಿಗೆ ಕವನದಲ್ಲಿ ನೋವಿದೆ. ಆದರೆ ನೋವಿನಿಂದ ಬಿಡುಗಡೆ ಬಯಸುವ ನಿರೀಕ್ಷೆ ಇದೆಯಲ್ಲ ಅದೇ ಜೀವನ ಪ್ರಿತಿ. ಹಾಗಾದರೆ ಗಾಯ ಮಾಡಿದವರ ಕುರಿತು ಒಂದು ಕವಿತೆಯಂತೂ ಬರಬೇಕಲ್ಲವೇ?
ಜೀವನೋತ್ಸಾಹವಿದ್ದಾಗ ಮಾತ್ರವೇ ಅದೆಷ್ಟು ದಾಳಿಗಳಾದರೂ ಮತ್ತೆ ಮತ್ತೆ ಚಿಗುರುವ ಬದುಕುವ ಹಂಬಲವಿದ್ದೇ ಇರುತ್ತದೆ. ಇದೇ ಪ್ರಕೃತಿಯ ಗುಟ್ಟು. ಹೆಣ್ಣು ಸಹ ಪ್ರಕೃತಿಯಂತೆ; ಹೊರತಾಗಿಲ್ಲ. ಮನುಷ್ಯ ಸಾವಿಗೆ ಮೊರೆ ಹೋಗುವ ಅಗತ್ಯವಿಲ್ಲ. ಬದುಕಲು ನೂರಾರು ದಾರಿಗಳಿವೆ. ಗಾಯಗಳು ಎಲ್ಲರಿಗೂ ಕಾಣುವಂತಾದರೂ ಕಷ್ಟ! ಈ ಜಗದ ತುಂಬಾ ಮುಲಾಮು ಹಚ್ಚುವ ಕಾವಲುಗಾರರಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ

’ಗಾಯಗೊಂಡವರಿಗೆ’ ಕವನಸಂಕಲದಲ್ಲಿನ ಪ್ರತಿರೋಧ ತಣ್ಣನೆಯ ಮಂಜುಗಡ್ಡೆಯನ್ನು ಅಂಗಿಯೊಳಗೆ ಹಾಕಿದಂತಹ ಅನುಭವ ನೀಡುವಂತದ್ದು. ಪ್ರತಿರೋಧದ ಅಲೆ ಪ್ರತಿ ಹೆಣ್ಣಿನ ಆಳದಲ್ಲಿ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ ಆದರೆ ಅದರ ಸ್ವರೂಪ ಹಾಗೂ ಸ್ಫೋಟಗೊಳ್ಳುವ ಪರಿಗಾಗಿ ಕಾಯಬೇಕಾಗುತ್ತದೆ ಹಾಗೂ ಸಿದ್ಧಗೊಳ್ಳಬೇಕಾಗುತ್ತದೆ.

ಶತಮಾನಗಳಿಂದ ವಿದ್ಯೆಯಿಂದ ವಂಚಿತಳಾಗಿ, ಲಿಂಗ ತಾರತಮ್ಯಕ್ಕೆ ಒಳಗಾಗಿದುದರ ಫಲವಾಗಿ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದ ಕಾರಣವೂ ಸೇರಿದಂತೆ, ಮಹಿಳೆ ಅಭಿವ್ಯಕ್ತಿಯಲ್ಲಿ ಇನ್ನೂ ಮುಂದೆ ಬರಬೇಕಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ; ನೆರೆಯ ಮರಾಠಿ ಹಾಗೂ ಮಲಯಾಳ ಸಾಹಿತ್ಯವನ್ನು ಅವಲೋಕಿಸಿದಾಗ ಕಂಡುಬರುವ ಮುಕ್ತತೆ, ಸ್ವಾತಂತ್ರ್ಯ ಇನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ಬಿ. ಆರ್. ಶೃತಿ ಮತ್ತು ಮಂಜುಳಾ ಹಿರೇಮಠರವರ ಕವನ ಸಂಕಲನಗಳ ಹೆಸರು ’ಜೀರೋ ಬ್ಯಾಲೆನ್ಸ್’ ಹಾಗೂ ’ಗಾಯಗೊಂಡವರಿಗೆ’ ತತ್‌ಕ್ಷಣಕ್ಕೆ ನೆಗೆಟಿವ್ ಶೀರ್ಷಿಕೆಗಳೆಂದೆನಿಸಿದರೂ ಕವನಗಳ ಓದು ಆಶಾವಾದದ ಸಂದೇಶಗಳನ್ನು ನೀಡುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಕವಯತ್ರಿಯರ ಭಾವಗಳನ್ನು ಓದುಗ ತನ್ನದೇ ಎನ್ನುವಷ್ಟರಮಟ್ಟಿಗೆ ಆವಾಹಿಸಿಕೊಂಡು ಆಪ್ತತೆಯನ್ನು ಪಡೆಯುವಷ್ಟು ಸಶಕ್ತವಾಗಿವೆ. ವಿಶೇಷ ಏನೆಂದರೆ ಶತಮಾನಗಳಿಂದ ’ಗಾಯಗೊಂಡವರಿಗೆ’ಲ್ಲ ಅಂತರಂಗದ ನೋವನ್ನು ’ಜೀರೋ ಬ್ಯಾಲೆನ್ಸ್’ ಮಾಡುವ ಸಂದರ್ಭ ಬರುತ್ತಿದೆ ಎನ್ನುತ್ತಿವೆ ಪ್ರಸ್ತುತ ಕವನ ಸಂಕಲನಗಳು.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 6 ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...