Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

- Advertisement -
- Advertisement -

ಒಲವಿನ ಹುಡುಕಾಟದ ನಡುವೆಯೇ ಕವಿತೆಗಳು ಹುಟ್ಟುತ್ತವೆ. ಪ್ರಕೃತಿ ಮತ್ತು ಪ್ರೀತಿ ಮನುಷ್ಯನ ಅವಿಭಾಜ್ಯ ಅಂಗ. ತದನಂತರದಲ್ಲಿ ವ್ಯಕ್ತಿನಿಷ್ಠ ಅನುಭವಗಳನ್ನು ಸಮಷ್ಠಿಯತ್ತ ಕೊಂಡೊಯ್ಯುವ ಶಕ್ತಿ ಕವಿಗಿರುತ್ತದೆ. ಅಂತಹ ಕವಿ ಮಾತ್ರ ಕಾಲದಾಚೆಗೂ ನಿಂತುಕೊಳ್ಳುತ್ತಾನೆ ಅನ್ನುವುದನ್ನು ಮರೆಯುವಂತಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಜನರು ಬೇಗುದಿಗಳನ್ನು, ತಲ್ಲಣಗಳನ್ನು, ಆತಂಕಗಳನ್ನೂ ಅನುಭವಿಸಿದರು. ಅದರ ನಡುವೆಯೇ ಬಹಳಷ್ಟು ಸಾಹಿತ್ಯ ಕೃತಿಗಳು ಹೊರಬಂದವು. ಆದರೆ ಅನಾದಿಕಾಲದಿಂದಲೂ, ಅಡುಗೆಮನೆಯ ಬೇಗುದಿ ಬೇರೊಂದು ತೆರನಾದದ್ದು ಎಂದು ಹೇಳಬೇಕಾಗಿಲ್ಲ. ಅದಕ್ಕೊಂದು ಹೊಗೆ ಕೊಳವೆ – ಚಿಮಣಿ ಆಮೇಲೆ ಎಕ್ಸಾಸ್ಟ್ ಫ್ಯಾನ್ ಆಧುನಿಕ ಕಾಲದಲ್ಲಿ ಬಂದರೂ ಹೊಗೆ ಪೂರ್ಣವಾಗಿ ಹೊರಹೋಗಿದ್ದುರ ಖಚಿತತೆ ಇನ್ನೂ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕೊರೊನಾ ಕಾಲದ 2020ರಲ್ಲಿನ ಎರಡು ಮಹಿಳಾ ಕವನ ಸಂಕಲನಗಳನ್ನು ಉಲ್ಲೇಖಿಸುವ ಸಂದರ್ಭ ಬಂದಾಗ, ಒಂದು ಬಿ. ಆರ್. ಶೃತಿಯವರ ’ಜೀರೋ ಬ್ಯಾಲೆನ್ಸ್’ ಇನ್ನೊಂದು ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ನೆನಪಾಗುತ್ತದೆ.

’ಜೀರೋ ಬ್ಯಾಲೆನ್ಸ್’ ಶೀರ್ಷಿಕೆ ಕ್ಯಾಚಿಯಾಗಿರುವ ಹಾಗೆ ಅದರೊಳಗಿರುವ ಕವಿತೆಗಳು ಸಹ ಓದುಗನ ಮನಸ್ಸನ್ನು ಹಿಡಿದಿಡುವುದರಲ್ಲಿ ಸಫಲವಾಗಿವೆ. ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತಗಳ ನಡುವೆ ’ಜೀರೋ ಬ್ಯಾಲೆನ್ಸ್’ ಅನ್ನುವ ಶೀರ್ಷಿಕೆ ಏನು ಹೇಳಲು ಹೊರಟಿದೆ ಅನ್ನುವ ಕುತೂಹಲ ಮೂಡಿಸುವುದು ಸಹಜವಾಗಿದೆ. ’ಏರುತ್ತಿರುವ ದರಗಳೊಂದಿಗೆ ಸೆಣಿಸಿ ಸೋತು’ ಮಧ್ಯಮ ವರ್ಗದ ಜನರ ಉಳಿತಾಯದ ಖಾತೆಯಲ್ಲಿ ಬ್ಯಾಲೆನ್ಸ್ ಜೀರೋ ಎನ್ನುವುದರ ಸಾಂಕೇತಿಕವಾಗಿದೆ ’ಜೀರೋ ಬ್ಯಾಲೆನ್ಸ್’ ಕವಿತೆ.

ಒಳಗಿನ ಬೇಗುದಿಯ ಹೊರಹಾಕಲು
ಎದೆಗೊಂದು ಎಕ್ಸಾಸ್ಟ್ ಫ್ಯಾನೋ
ಸಣ್ಣ ಕಿಟಕಿಯೋ ಇರಬಹುದಿತ್ತೆನಿಸಿತು

ಎನ್ನುವ ಸಾಲುಗಳಲ್ಲಿ ಮಹಿಳಾ ಬೇಗುದಿಯನ್ನು ಹೊರಹಾಕಲು ಒಂದು ಕವಾಟದ ಅಪೇಕ್ಷೆಯನ್ನಿಡುವ ಶೃತಿಯವರ ಹಲವಾರು ಕವನಗಳು ಮನದ ತೊಳಲಾಟಗಳ ಬ್ಯಾಲೆನ್ಸ್‌ನ್ನು ಜೀರೋ ಮಾಡಿಕೊಳ್ಳುವ ಪ್ರಯತ್ನವಂತೂ ಕವನಸಂಕಲನದಲ್ಲಿ ಕಾಣಸಿಗುತ್ತದೆ. ಆದರೆ ಇನ್ನೊಂದು ಮಗ್ಗುಲಲ್ಲಿ ’ಜೀರೋ’ ಅನ್ನುವುದನ್ನು ಶೂನ್ಯ ಎಂದು ಪರಿಗಣಿಸಿದರೆ ಪೂರ್ಣತೆಯಡೆ ಹೋಗಬೇಕಾಗುತ್ತದೆ. ಒಂದು ಕಾಲಕ್ಕೆ ಇಲ್ಲದಿದ್ದ ಸಮಸ್ಯೆಗಳು ಹಾಗೂ ಇದ್ದ ಸಮಸ್ಯೆಗಳು ಇವತ್ತು ಭಿನ್ನ ಸ್ವರೂಪದೊಡನೆ ಹೊಸ ಸವಾಲುಗಳೊಂದಿಗೆ ಸಮಾಜದ ಮುಂದೆ ನಿಂತಾಗ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಅಕೌಂಟ್ ಹೋಲ್ಡರ್‌ನ ಮುಂದಿರುವ ಸವಾಲು ಹೌದು! ಬ್ಯಾಲೆನ್ಸ್ ಜೀರೋ ಆದಾಗ ಅಕೌಂಟ್ ಕ್ಲೋಸ್ ಆಗುವುದಿಲ್ಲ. ಅದರ ಮುಂದೆ ಹಲವಾರು ಆಪ್ಶನ್‌ಗಳು ಇರುತ್ತವೆ ಎಂಬುದು ಸಹ ಸೂಚಿತವಾಗಿದೆ.

ಇನ್ನೇನು ಅಡುಗೆಯೋ ಮನೆಗೆಲಸವೋ ಮಾಡಿರಬೇಕು
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ
ಬಿಡು ಅಪ್ಪನೊ, ಗಂಡನೊ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು
ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ…

ಅದೆಲ್ಲಾ ಇಲ್ಲಕ್ಕ ಪುಸ್ತಕದಲ್ಲಿ ಎನ್ನುತ್ತಾ
ಅಕ್ಕನ ನಿಟ್ಟುಸಿರು ಅರ್ಥವಾಗದ ತಂಗಿ
ಪಿಳಿ ಪಿಳಿ ಕಣ್ಣುಬಿಟ್ಟಳು…

ಹೆಣ್ಣಿನ ಸ್ಥಿತಿಯನ್ನು ನಿಧಾನವಾಗಿ, ಸರಳವಾಗಿ ತೆರೆದಿಡುತ್ತಲೇ ಪ್ರತಿರೋಧವನ್ನು ವ್ಯಕ್ತಪಡಿಸುವ ಕವನ ’ಅಕ್ಕನ ಮೊಹೆಂಜೊದಾರೋ’. ತುಳಿಯುವ ಪ್ರಯತ್ನ ಅನಾದಿಯಿಂದಲೂ ನಡೆದುಕೊಂಡೇ ಬಂದಿರುವ ವ್ಯವಸ್ಥೆಯಲ್ಲಿ ಟೀಕಿಸಲು ಹಕ್ಕಿಲ್ಲ ಅಥವಾ ತನ್ನ ಹತಾಶೆಯನ್ನು ತೋರ್ಪಡಿಸಲು ದಾರಿಗಳೆಲ್ಲಿವೆ ಎಂಬ ಪ್ರಶ್ನೆಯನ್ನು ತಲತಲಾಂತರಗಳಿಂದ ಪ್ರಶ್ನಿಸಿಕೊಳ್ಳದ ಅಥವಾ ಪ್ರಶ್ನಿಸಿಕೊಳ್ಳುತ್ತಲೇ ಸುಮ್ಮನಿದ್ದುಬಿಡುವ ಸ್ತ್ರೀ ಸಂಕುಲಕ್ಕೆ ಬಿಡುಗಡೆಯ ದಾರಿಗಳು ಎಲ್ಲಿವೆ ಹಾಗಾದರೆ.. ಎನ್ನುತ್ತಲೇ ಸೂಕ್ಷ್ಮವಾಗಿ ಪ್ರಶ್ನಿಸುವ ಕವನಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಓದಬೇಕಾಗುತ್ತದೆ.

ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ಕವನ ಸಂಕಲನ ಆತ್ಮ ನಿವೇದನೆಯ ರೂಪವನ್ನು ಹೊತ್ತುಬಂದಿರುವುದರ ಜೊತೆಗೆ ಖಾಸಗಿತನವನ್ನು ಎಳೆಯಾಗಿ ಅನಾವರಣಗೊಳಿಸುವ ಜಾಡುಹಿಡಿದು, ಹೊಸದಾದ ಧಾಟಿಯನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಮೃದುವಾದ, ಸಹಜವಾದ ರೀತಿಯಲ್ಲಿ ಕಾವ್ಯವನ್ನು ಮಂಜುಳಾ ಕಟ್ಟಿಕೊಡುವ ರೀತಿ ’ಗಾಯಗೊಂಡವರಿಗೆ’ ಹೊಸದಾದ ಬ್ಯಾಂಡೇಜ್ ಹಾಕಿದಂತಿದೆ.

ಯುಗಯುಗಗಳಿಂದ
ಆಕೆಯನ್ನು ಕತ್ತಲ
ಕೋಣೆಯೊಳಗೆ
ಕೂಡಿ ಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ

ಎನ್ನುವ ಸಾಲುಗಳು ’ಅವಳ’ ಕುರಿತು ಮಾತನಾಡುತ್ತವೆ. ಮಂಜುಳಾ ಹಿರೇಮಠರವರ ಕವಿತೆಗಳಲ್ಲಿಯೂ ಸ್ತ್ರೀ ಸಂವೇದನೆಯು ’ಕತ್ತಲ ಕೋಣೆಯಲ್ಲಿ’ನ ಬೆಳಕಿನ ಕಿಂಡಿಯ ಹಾಗೆ ಇಣುಕುತ್ತವೆ. ’ಪ್ರತಿಮೆಯಾಗೋಣ ಬಾ’ ಕವಿತೆ ಕ್ಷಮಿಸುವ ಔದಾರ್ಯತೆ ಇದೆ ಎನ್ನುವುದನ್ನು ಕವಯತ್ರಿಯ ಭಾವಲಹರಿಯಲ್ಲಿ ತಿಳಿಯುವಂತದ್ದು. ನನ್ನದೇ ಪದಗಳನ್ನು, ಅನುಭವಗಳನ್ನು ಈ ಕವಯತ್ರಿಯರಿಬ್ಬರೂ ನಿನ್ನೆ ರಾತ್ರಿ ಕಡ ತೆಗೆದುಕೊಂಡು ಹೋಗಿರುವವರೇ ಎನ್ನುವ ಭಾವನೆ ಪ್ರತಿಯೊಬ್ಬಳಿಗೂ ಈ ಕವನದಲ್ಲಿ ಝಳಪಿಸುತ್ತದೆ.

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ಗಾಯಗೊಂಡವರಿಗೆ ಕವನದಲ್ಲಿ ನೋವಿದೆ. ಆದರೆ ನೋವಿನಿಂದ ಬಿಡುಗಡೆ ಬಯಸುವ ನಿರೀಕ್ಷೆ ಇದೆಯಲ್ಲ ಅದೇ ಜೀವನ ಪ್ರಿತಿ. ಹಾಗಾದರೆ ಗಾಯ ಮಾಡಿದವರ ಕುರಿತು ಒಂದು ಕವಿತೆಯಂತೂ ಬರಬೇಕಲ್ಲವೇ?
ಜೀವನೋತ್ಸಾಹವಿದ್ದಾಗ ಮಾತ್ರವೇ ಅದೆಷ್ಟು ದಾಳಿಗಳಾದರೂ ಮತ್ತೆ ಮತ್ತೆ ಚಿಗುರುವ ಬದುಕುವ ಹಂಬಲವಿದ್ದೇ ಇರುತ್ತದೆ. ಇದೇ ಪ್ರಕೃತಿಯ ಗುಟ್ಟು. ಹೆಣ್ಣು ಸಹ ಪ್ರಕೃತಿಯಂತೆ; ಹೊರತಾಗಿಲ್ಲ. ಮನುಷ್ಯ ಸಾವಿಗೆ ಮೊರೆ ಹೋಗುವ ಅಗತ್ಯವಿಲ್ಲ. ಬದುಕಲು ನೂರಾರು ದಾರಿಗಳಿವೆ. ಗಾಯಗಳು ಎಲ್ಲರಿಗೂ ಕಾಣುವಂತಾದರೂ ಕಷ್ಟ! ಈ ಜಗದ ತುಂಬಾ ಮುಲಾಮು ಹಚ್ಚುವ ಕಾವಲುಗಾರರಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ

’ಗಾಯಗೊಂಡವರಿಗೆ’ ಕವನಸಂಕಲದಲ್ಲಿನ ಪ್ರತಿರೋಧ ತಣ್ಣನೆಯ ಮಂಜುಗಡ್ಡೆಯನ್ನು ಅಂಗಿಯೊಳಗೆ ಹಾಕಿದಂತಹ ಅನುಭವ ನೀಡುವಂತದ್ದು. ಪ್ರತಿರೋಧದ ಅಲೆ ಪ್ರತಿ ಹೆಣ್ಣಿನ ಆಳದಲ್ಲಿ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ ಆದರೆ ಅದರ ಸ್ವರೂಪ ಹಾಗೂ ಸ್ಫೋಟಗೊಳ್ಳುವ ಪರಿಗಾಗಿ ಕಾಯಬೇಕಾಗುತ್ತದೆ ಹಾಗೂ ಸಿದ್ಧಗೊಳ್ಳಬೇಕಾಗುತ್ತದೆ.

ಶತಮಾನಗಳಿಂದ ವಿದ್ಯೆಯಿಂದ ವಂಚಿತಳಾಗಿ, ಲಿಂಗ ತಾರತಮ್ಯಕ್ಕೆ ಒಳಗಾಗಿದುದರ ಫಲವಾಗಿ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದ ಕಾರಣವೂ ಸೇರಿದಂತೆ, ಮಹಿಳೆ ಅಭಿವ್ಯಕ್ತಿಯಲ್ಲಿ ಇನ್ನೂ ಮುಂದೆ ಬರಬೇಕಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ; ನೆರೆಯ ಮರಾಠಿ ಹಾಗೂ ಮಲಯಾಳ ಸಾಹಿತ್ಯವನ್ನು ಅವಲೋಕಿಸಿದಾಗ ಕಂಡುಬರುವ ಮುಕ್ತತೆ, ಸ್ವಾತಂತ್ರ್ಯ ಇನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ಬಿ. ಆರ್. ಶೃತಿ ಮತ್ತು ಮಂಜುಳಾ ಹಿರೇಮಠರವರ ಕವನ ಸಂಕಲನಗಳ ಹೆಸರು ’ಜೀರೋ ಬ್ಯಾಲೆನ್ಸ್’ ಹಾಗೂ ’ಗಾಯಗೊಂಡವರಿಗೆ’ ತತ್‌ಕ್ಷಣಕ್ಕೆ ನೆಗೆಟಿವ್ ಶೀರ್ಷಿಕೆಗಳೆಂದೆನಿಸಿದರೂ ಕವನಗಳ ಓದು ಆಶಾವಾದದ ಸಂದೇಶಗಳನ್ನು ನೀಡುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಕವಯತ್ರಿಯರ ಭಾವಗಳನ್ನು ಓದುಗ ತನ್ನದೇ ಎನ್ನುವಷ್ಟರಮಟ್ಟಿಗೆ ಆವಾಹಿಸಿಕೊಂಡು ಆಪ್ತತೆಯನ್ನು ಪಡೆಯುವಷ್ಟು ಸಶಕ್ತವಾಗಿವೆ. ವಿಶೇಷ ಏನೆಂದರೆ ಶತಮಾನಗಳಿಂದ ’ಗಾಯಗೊಂಡವರಿಗೆ’ಲ್ಲ ಅಂತರಂಗದ ನೋವನ್ನು ’ಜೀರೋ ಬ್ಯಾಲೆನ್ಸ್’ ಮಾಡುವ ಸಂದರ್ಭ ಬರುತ್ತಿದೆ ಎನ್ನುತ್ತಿವೆ ಪ್ರಸ್ತುತ ಕವನ ಸಂಕಲನಗಳು.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 6 ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...