Homeಅಂತರಾಷ್ಟ್ರೀಯಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

ಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

- Advertisement -
- Advertisement -

 

| ಭರತ್ ಹೆಬ್ಬಾಳ |

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್‍ನ ಸಂಬಂಧಗಳು ಹದಗೆಡುತ್ತಲೇ ಇವೆ. ಇದನ್ನೇ ಮುಂದುವರೆಸಿ, ಏಪ್ರಿಲ್ 22ರಂದು ಅಮೆರಿಕ ದೇಶವು ಇರಾನಿನ ಮೇಲೆ ಸಂಪೂರ್ಣ ಆರ್ಥಿಕ ಸಮರವನ್ನೇ ಘೋಷಿಸಿದೆ. ‘ಇರಾನಿನಿಂದ ಇತರ ದೇಶಗಳಿಗೆ ರಫ್ತು ಆಗುವ ತೈಲದ ಪ್ರಮಾಣವನ್ನು ಸೊನ್ನೆಗೆ ಇಳಿಸುವುದೇ ಈ ನಿರ್ಧಾರದ ಉದ್ದೇಶ. ಅದರಿಂದ ಆ ದೇಶದ ಆದಾಯದ ಪ್ರಮುಖ ಮೂಲವನ್ನು ಇಲ್ಲವಾಗಿಸುವುದು’. ಈ ಹೇಳಿಕೆ ಬಂದಿದ್ದು ಅಮೇರಿಕದ ವೈಟ್‍ಹೌಸ್‍ನಿಂದ. ತೈಲವೇ ಇರಾನಿನ ಪ್ರಮುಖ ರಫ್ತು ಆಗಿದ್ದು, ಅಮೇರಿಕದಲ್ಲಿ ಟ್ರಂಪ್ ಆಡಳಿತ ಬಂದನಂತರ ಇರಾನ್ ದೇಶದ ಕತ್ತುಹಿಸುಕಿ ತನ್ನ ತಾಳಕ್ಕೆ ಕುಣಿಯುವಂತೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಪ್ರಸ್ತುತ ಸಮಯದಲ್ಲಿ ಇರಾನ್ ಪ್ರತಿನಿತ್ಯ 10 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. 2018ರ ನವೆಂಬರ್ 5ರಂದು ಮೊದಲ ಬಾರಿ ನಿರ್ಬಂಧನೆಗಳನ್ನು ಹೇರಲಾಗಿತ್ತು. ಆಗ ಅಮೆರಿಕ 8 ದೇಶಗಳಿಗೆ ತೈಲದ ಆಮದನ್ನು ನಿಲ್ಲಿಸಲು 6 ತಿಂಗಳ ಸಮಯಾವಕಾಶವನ್ನು ನೀಡಲಾಗಿತ್ತು. ಒಂದೇ ಬಾರಿ ಸಂಪೂರ್ಣ ನಿರ್ಬಂಧ ಹೇರಿದರೆ ಮಾರುಕಟ್ಟೆಗಳು ಅತಂತ್ರಗೊಳ್ಳುವವು ಎನ್ನುವ ಆತಂಕದ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ನಿರ್ಬಂಧನೆಗಳಿಗಿರುವ ಈ ವಿನಾಯಿತಿಗಳು ಏಪ್ರಿಲ್ 30 ರಂದು ಕೊನೆಗೊಳ್ಳುತ್ತವೆ, ಮೇ 1ರಿಂದ ಎಲ್ಲ ಎಂಟೂ ದೇಶಗಳು ನಿರ್ಬಂಧನೆಗಳಿಗೆ ಬದ್ಧವಾಗಬೇಕಿದೆ.

ಚೈನಾ, ಭಾರತ, ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಟರ್ಕಿ, ಇಟಲಿ ಮತ್ತು ಗ್ರೀಸ್ ಈ ನಿರ್ಬಂಧನೆಯಿಂದ 6 ತಿಂಗಳು ವಿನಾಯಿತಿ ಪಡೆದ ದೇಶಗಳು. ಜಪಾನ್, ದಕ್ಷಿಣ ಕೋರಿಯಾ ಮತ್ತು ತೈವಾನ್ ದೇಶಗಳು ಎರಡನೇ ಮಹಾಯುದ್ಧದ ನಂತರ ಅಮೇರಿಕವೇ ಈ ದೇಶಗಳ ರಕ್ಷಕ ದೇಶವಾಗಿರುವುದರಿಂದ ದಿಗ್ಬಂಧನೆಗಳಿಗೆ ಒಪ್ಪಿಕೊಳ್ಳುತ್ತವೆ. ಇಟಲಿ ಮತ್ತು ಗ್ರೀಸ್ ದೇಶಗಳು ಇರಾನ್‍ನಿಂದ ತುಂಬಾ ಕಡಿಮೆ ತೈಲ ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಚೈನಾ ದೇಶ ಈ ದಿಗ್ಬಂಧನೆಗಳಿಗೆ ಬದ್ಧವಾಗುವುದೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಟ್ರೇಡ್ ವಾರ್ ಮೇಲೆ ಅವಲಂಬಿತವಾಗಿದೆ. ಭಾರತದ ಪೆಟ್ರೋಲಿಯಮ್ ಸಚಿವರು ಅಮೆರಿಕ ವಿಧಿಸಿದ ದಿಗ್ಬಂಧನೆಗಳಿಗೆ ಬದ್ಧರಿರುವುದಾಗಿ ಹೇಳಿಕೆ ನೀಡಿದ್ದರಾದರೂ ಅಂತಿಮ ನಿರ್ಣಯ ಹೊಸ ಸರಕಾರ ಬಂದ ನಂತರವೇ. ಇರಾನ್‍ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ದೇಶ ಟರ್ಕಿ. ಈಗ ಬೇರೆ ಮೂಲಗಳಿಂದ ಇಷ್ಟು ಕಡಿಮೆ ಸಮಯದಲ್ಲಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದಾಗಿ, ಅದರ ಪರಿಣಾಮಗಳನ್ನು ಎದುರಿಸಬೇಕಾಗುವುದು.

ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್ (ಜೆಸಿಪಿಓಏ) ಎಂದು ಕರೆಯಲಾಗುವ ಬಹುಪಕ್ಷೀಯ ನ್ಯೂಕ್ಲಿಯರ್ ಒಪ್ಪಂದದಿಂದ ಮೇ 2018ರಲ್ಲಿ ಅಮೇರಿಕವು ಏಕಪಕ್ಷೀಯವಾಗಿ ಹಿಂತೆಗೆದು ಕೊಂಡಿತು, ಅಂದಿನಿಂದ ಈ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಬರಾಕ್ ಒಬಾಮಾ ಆಡಳಿತದ ಕಾಲದಲ್ಲಿ(2015) ಇರಾನ್ ಮತ್ತು ಆರು ವಿಶ್ವಶಕ್ತಿಗಳ ಮಧ್ಯೆ ಜೆಸಿಪಿಓಏ ರಚಿಸಲಾಗಿತ್ತು. ಆ ಒಪ್ಪಂದದಲ್ಲಿ ಹಿಂಪಡೆಯಲಾದ ಏಕಪಕ್ಷೀಯ ದಿಗ್ಬಂಧನೆಗಳನ್ನು ಟ್ರಂಪ್ ಆಡಳಿತ ಮತ್ತೆ ವಿಧಿಸಿದೆ. ಇತ್ತೀಚಿಗೆ ಹಲವಾರು ಷರತ್ತುಗಳ ಅಡಿಯಲ್ಲಿ ಈ ಒಪ್ಪಂದವನ್ನು ಇನ್ನೊಂದು ಸುತ್ತು ಚರ್ಚಿಸುವ ಪ್ರಸ್ತಾಪ ಇಟ್ಟಿದೆ. ಸಿರಿಯಾದಲ್ಲಿ ಆಳ್ವಿಕೆ ಬದಲಾವಣೆಗಾಗಿ ಅಮೆರಿಕ ಮಾಡಿದ ಯತ್ನಗಳು, ವೆನೆಜುವೆಲಾದಲ್ಲೂ ಮಾಡಿದ ಪ್ರಯತ್ನ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಯುದ್ಧಗಳ ಮಧ್ಯೆ ಇರಾನ್ ಅನ್ನು ಒಂದು ದುಷ್ಟ ಭಯೋತ್ಪಾದಕ ದೇಶವನ್ನಾಗಿ ಚಿತ್ರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನಿನ ಆಳ್ವಿಕೆಯು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೆಂದೂ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆಗಳನ್ನು ಹರಡಿಸುವ ಪ್ರಯತ್ನ ಇರಾನ್ ಮಾಡುತ್ತಿದೆ ಎಂದು ಅಮೆರಿಕ ಚಿತ್ರಿಸುತ್ತಿದೆ. 2002ರಲ್ಲಿ ಪ್ರಾರಂಭಿಸಿದ ಇರಾಕ್‍ನ ಯುದ್ಧವನ್ನೂ ಇದೇ ರೀತಿಯಲ್ಲಿ ಪ್ರಾರಂಭಿಸಲಾಗಿತ್ತು. ಆಗಲೂ ಈಗಿರುವ ರಕ್ಷಣಾ ಸಲಹಾಕಾರರಾದ ಜಾನ್ ಬೋಲ್ಟನ್ ಅವರೇ ಸಲಹಾಕಾರರಾಗಿದ್ದರು.

ಈಗ ಅಮೇರಿಕವು ಮಾತುಕತೆಗಳಿಗೆ ಇಟ್ಟಿರುವ ಷರತ್ತುಗಳನ್ನು ‘ಸುಳ್ಳುಗಳ ಸರಮಾಲೆ, ಇರಾನ್ ದೇಶವನ್ನು ತನ್ನ ಮಂಡಿಯೂರಿಸುವ ಉದ್ದೇಶದಿಂದ ವಿಧಿಸಲಾಗಿದ್ದು’ ಎಂದು ಇರಾನ್‍ನ ಅಧ್ಯಕ್ಷ ಹಸನ್ ರೋಹಾನಿ ಹೇಳಿದರು. ‘ಈ ಮುಂಚೆ ಮಾಡಿದ ಒಪ್ಪಂದಗಳಿಂದ ಅಮೆರಿಕ ಹಿಂದಕ್ಕೆ ಹೋಗಿರುವಾಗ ಇನ್ನೊಂದು ಹೊಸ ಒಪ್ಪಂದಕ್ಕೆ ಇರಾನ್ ದೇಶ ಏಕೆ ಸೇರಬೇಕು’ ಎಂದು ಇರಾನ್‍ನ ವಿದೇಶಾಂಗ ಸಚಿವ ಕೇಳಿದರು. ಅವರು ಸ್ಪಷ್ಟವಾಗಿ ಹೇಳಿದ ಇನ್ನೊಂದು ವಿಷಯವೇನೆಂದರೆ, ‘ಟ್ರಂಪ್ ಯುದ್ಧವನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವರ ಸಲಹಾಕಾರರೆ (ಬಿ-ಟೀಮ್) ಈ ಬಿಕ್ಕಟ್ಟಿಗೆ ಕಾರಣ’. ಇಲ್ಲಿ ಬಿ ಟೀಮ್ ಎಂದರೆ, ಇಸ್ರೇಲಿನ ಬಿಬಿ, ಸೌದಿಯ ಬಿನ್ ಸಲ್ಮಾನ್, ಯು.ಏ.ಈ.ಯ ಬಿನ್ ಖಾಲೆದ್ ಹಾಗೂ ಅಮೇರಿಕದ ಜಾನ್ ಬೋಲ್ಟನ್. ಇಂತಹ ಒತ್ತಡದ ತಂತ್ರಗಾರಿಕೆಯಿಂದ ಇರಾನ್ ದೇಶವನ್ನು ಮಂಡಿಯೂರುವ ಪರಿಸ್ಥಿತಿಗೆ ತರಲಾಗದು ಎಂತಲೂ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಸ್ಟ್ರೇಟ್ ಆಫ್ ಹೊರ್ಮುಝ್’ ಎಂದು ಕರೆಯಲಾಗುವ ಪರ್ಷಿಯನ್ ಕೊಲ್ಲಿಯಿಂದಲೇ ವಿಶ್ವದ 35% ತೈಲ ಹಾದುಹೋಗಬೇಕಿದೆ. ಆ ಕೊಲ್ಲಿ ಇರಾನ್‍ನ ಜಲಭಾಗವನ್ನು ಹೊಂದಿದೆ. ಇರಾನಿನ ರೆವಲೂಷನರಿ ಗಾಡ್ರ್ಸ್ ಆ ಕೊಲ್ಲಿಯ ರಕ್ಷಣೆ ಮಾಡುತ್ತಾರೆ. ಏಪ್ರಿಲ್ 8 ರಂದು ಟ್ರಂಪ್ ಆಡಳಿತವು ಇರಾನಿಯನ್ ರೆವಲೂಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಅಮೆರಿಕವು ಈ ರೀತಿ ಬೇರೊಂದು ದೇಶದ ಸೈನ್ಯವನ್ನು ‘ಭಯೋತ್ಪಾದಕ ಗುಂಪು’ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು. ಇರಾನ್ ಅದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ದೇಶವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಕರೆದು, ಆ ಭಾಗದಲ್ಲಿರುವ ಅಮೆರಿಕದ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪು’ಗಳು ಎಂದು ಕರೆದಿದೆ.

ಐತಿಹಾಸಿಕವಾಗಿ, ಭಾರತ ಮತ್ತು ಇರಾನ್ ಒಳ್ಳೆಯ ಬಾಂಧವ್ಯಗಳನ್ನು ಹೊಂದಿವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯ ಆಳ್ವಿಕೆಯ ಕಾಲದಲ್ಲಿ ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಹೇರಿದ್ದಾಗ ಭಾರತವು ಇರಾನ್ ಜೊತೆಗೆ ನಿಂತು, ಆ ದೇಶಕ್ಕೆ ಸಹಾಯ ನೀಡಿದೆ. ಅಮೆರಿಕದ ಒತ್ತಡದ ಪರಿಸ್ಥಿತಿಯಲ್ಲಿ ಮುಂದೆ ಈ ಪ್ರಾದೇಶಿಕ ಸಂಬಂಧವನ್ನು ಗಟ್ಟಿಗೊಳಿಸುವುದೋ ಅಥವಾ ಅಮೆರಿಕಾದ ಒತ್ತಡಕ್ಕೆ ಮಣಿದು ಎರಡು ದೇಶಗಳ ಐತಿಹಾಸಿಕ ಸ್ನೇಹಕ್ಕೆ ದ್ರೋಹಬಗೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...