Homeಅಂತರಾಷ್ಟ್ರೀಯಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

ಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

- Advertisement -
- Advertisement -

 

| ಭರತ್ ಹೆಬ್ಬಾಳ |

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್‍ನ ಸಂಬಂಧಗಳು ಹದಗೆಡುತ್ತಲೇ ಇವೆ. ಇದನ್ನೇ ಮುಂದುವರೆಸಿ, ಏಪ್ರಿಲ್ 22ರಂದು ಅಮೆರಿಕ ದೇಶವು ಇರಾನಿನ ಮೇಲೆ ಸಂಪೂರ್ಣ ಆರ್ಥಿಕ ಸಮರವನ್ನೇ ಘೋಷಿಸಿದೆ. ‘ಇರಾನಿನಿಂದ ಇತರ ದೇಶಗಳಿಗೆ ರಫ್ತು ಆಗುವ ತೈಲದ ಪ್ರಮಾಣವನ್ನು ಸೊನ್ನೆಗೆ ಇಳಿಸುವುದೇ ಈ ನಿರ್ಧಾರದ ಉದ್ದೇಶ. ಅದರಿಂದ ಆ ದೇಶದ ಆದಾಯದ ಪ್ರಮುಖ ಮೂಲವನ್ನು ಇಲ್ಲವಾಗಿಸುವುದು’. ಈ ಹೇಳಿಕೆ ಬಂದಿದ್ದು ಅಮೇರಿಕದ ವೈಟ್‍ಹೌಸ್‍ನಿಂದ. ತೈಲವೇ ಇರಾನಿನ ಪ್ರಮುಖ ರಫ್ತು ಆಗಿದ್ದು, ಅಮೇರಿಕದಲ್ಲಿ ಟ್ರಂಪ್ ಆಡಳಿತ ಬಂದನಂತರ ಇರಾನ್ ದೇಶದ ಕತ್ತುಹಿಸುಕಿ ತನ್ನ ತಾಳಕ್ಕೆ ಕುಣಿಯುವಂತೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಪ್ರಸ್ತುತ ಸಮಯದಲ್ಲಿ ಇರಾನ್ ಪ್ರತಿನಿತ್ಯ 10 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. 2018ರ ನವೆಂಬರ್ 5ರಂದು ಮೊದಲ ಬಾರಿ ನಿರ್ಬಂಧನೆಗಳನ್ನು ಹೇರಲಾಗಿತ್ತು. ಆಗ ಅಮೆರಿಕ 8 ದೇಶಗಳಿಗೆ ತೈಲದ ಆಮದನ್ನು ನಿಲ್ಲಿಸಲು 6 ತಿಂಗಳ ಸಮಯಾವಕಾಶವನ್ನು ನೀಡಲಾಗಿತ್ತು. ಒಂದೇ ಬಾರಿ ಸಂಪೂರ್ಣ ನಿರ್ಬಂಧ ಹೇರಿದರೆ ಮಾರುಕಟ್ಟೆಗಳು ಅತಂತ್ರಗೊಳ್ಳುವವು ಎನ್ನುವ ಆತಂಕದ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ನಿರ್ಬಂಧನೆಗಳಿಗಿರುವ ಈ ವಿನಾಯಿತಿಗಳು ಏಪ್ರಿಲ್ 30 ರಂದು ಕೊನೆಗೊಳ್ಳುತ್ತವೆ, ಮೇ 1ರಿಂದ ಎಲ್ಲ ಎಂಟೂ ದೇಶಗಳು ನಿರ್ಬಂಧನೆಗಳಿಗೆ ಬದ್ಧವಾಗಬೇಕಿದೆ.

ಚೈನಾ, ಭಾರತ, ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಟರ್ಕಿ, ಇಟಲಿ ಮತ್ತು ಗ್ರೀಸ್ ಈ ನಿರ್ಬಂಧನೆಯಿಂದ 6 ತಿಂಗಳು ವಿನಾಯಿತಿ ಪಡೆದ ದೇಶಗಳು. ಜಪಾನ್, ದಕ್ಷಿಣ ಕೋರಿಯಾ ಮತ್ತು ತೈವಾನ್ ದೇಶಗಳು ಎರಡನೇ ಮಹಾಯುದ್ಧದ ನಂತರ ಅಮೇರಿಕವೇ ಈ ದೇಶಗಳ ರಕ್ಷಕ ದೇಶವಾಗಿರುವುದರಿಂದ ದಿಗ್ಬಂಧನೆಗಳಿಗೆ ಒಪ್ಪಿಕೊಳ್ಳುತ್ತವೆ. ಇಟಲಿ ಮತ್ತು ಗ್ರೀಸ್ ದೇಶಗಳು ಇರಾನ್‍ನಿಂದ ತುಂಬಾ ಕಡಿಮೆ ತೈಲ ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಚೈನಾ ದೇಶ ಈ ದಿಗ್ಬಂಧನೆಗಳಿಗೆ ಬದ್ಧವಾಗುವುದೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಟ್ರೇಡ್ ವಾರ್ ಮೇಲೆ ಅವಲಂಬಿತವಾಗಿದೆ. ಭಾರತದ ಪೆಟ್ರೋಲಿಯಮ್ ಸಚಿವರು ಅಮೆರಿಕ ವಿಧಿಸಿದ ದಿಗ್ಬಂಧನೆಗಳಿಗೆ ಬದ್ಧರಿರುವುದಾಗಿ ಹೇಳಿಕೆ ನೀಡಿದ್ದರಾದರೂ ಅಂತಿಮ ನಿರ್ಣಯ ಹೊಸ ಸರಕಾರ ಬಂದ ನಂತರವೇ. ಇರಾನ್‍ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ದೇಶ ಟರ್ಕಿ. ಈಗ ಬೇರೆ ಮೂಲಗಳಿಂದ ಇಷ್ಟು ಕಡಿಮೆ ಸಮಯದಲ್ಲಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದಾಗಿ, ಅದರ ಪರಿಣಾಮಗಳನ್ನು ಎದುರಿಸಬೇಕಾಗುವುದು.

ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್ (ಜೆಸಿಪಿಓಏ) ಎಂದು ಕರೆಯಲಾಗುವ ಬಹುಪಕ್ಷೀಯ ನ್ಯೂಕ್ಲಿಯರ್ ಒಪ್ಪಂದದಿಂದ ಮೇ 2018ರಲ್ಲಿ ಅಮೇರಿಕವು ಏಕಪಕ್ಷೀಯವಾಗಿ ಹಿಂತೆಗೆದು ಕೊಂಡಿತು, ಅಂದಿನಿಂದ ಈ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಬರಾಕ್ ಒಬಾಮಾ ಆಡಳಿತದ ಕಾಲದಲ್ಲಿ(2015) ಇರಾನ್ ಮತ್ತು ಆರು ವಿಶ್ವಶಕ್ತಿಗಳ ಮಧ್ಯೆ ಜೆಸಿಪಿಓಏ ರಚಿಸಲಾಗಿತ್ತು. ಆ ಒಪ್ಪಂದದಲ್ಲಿ ಹಿಂಪಡೆಯಲಾದ ಏಕಪಕ್ಷೀಯ ದಿಗ್ಬಂಧನೆಗಳನ್ನು ಟ್ರಂಪ್ ಆಡಳಿತ ಮತ್ತೆ ವಿಧಿಸಿದೆ. ಇತ್ತೀಚಿಗೆ ಹಲವಾರು ಷರತ್ತುಗಳ ಅಡಿಯಲ್ಲಿ ಈ ಒಪ್ಪಂದವನ್ನು ಇನ್ನೊಂದು ಸುತ್ತು ಚರ್ಚಿಸುವ ಪ್ರಸ್ತಾಪ ಇಟ್ಟಿದೆ. ಸಿರಿಯಾದಲ್ಲಿ ಆಳ್ವಿಕೆ ಬದಲಾವಣೆಗಾಗಿ ಅಮೆರಿಕ ಮಾಡಿದ ಯತ್ನಗಳು, ವೆನೆಜುವೆಲಾದಲ್ಲೂ ಮಾಡಿದ ಪ್ರಯತ್ನ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಯುದ್ಧಗಳ ಮಧ್ಯೆ ಇರಾನ್ ಅನ್ನು ಒಂದು ದುಷ್ಟ ಭಯೋತ್ಪಾದಕ ದೇಶವನ್ನಾಗಿ ಚಿತ್ರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನಿನ ಆಳ್ವಿಕೆಯು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೆಂದೂ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆಗಳನ್ನು ಹರಡಿಸುವ ಪ್ರಯತ್ನ ಇರಾನ್ ಮಾಡುತ್ತಿದೆ ಎಂದು ಅಮೆರಿಕ ಚಿತ್ರಿಸುತ್ತಿದೆ. 2002ರಲ್ಲಿ ಪ್ರಾರಂಭಿಸಿದ ಇರಾಕ್‍ನ ಯುದ್ಧವನ್ನೂ ಇದೇ ರೀತಿಯಲ್ಲಿ ಪ್ರಾರಂಭಿಸಲಾಗಿತ್ತು. ಆಗಲೂ ಈಗಿರುವ ರಕ್ಷಣಾ ಸಲಹಾಕಾರರಾದ ಜಾನ್ ಬೋಲ್ಟನ್ ಅವರೇ ಸಲಹಾಕಾರರಾಗಿದ್ದರು.

ಈಗ ಅಮೇರಿಕವು ಮಾತುಕತೆಗಳಿಗೆ ಇಟ್ಟಿರುವ ಷರತ್ತುಗಳನ್ನು ‘ಸುಳ್ಳುಗಳ ಸರಮಾಲೆ, ಇರಾನ್ ದೇಶವನ್ನು ತನ್ನ ಮಂಡಿಯೂರಿಸುವ ಉದ್ದೇಶದಿಂದ ವಿಧಿಸಲಾಗಿದ್ದು’ ಎಂದು ಇರಾನ್‍ನ ಅಧ್ಯಕ್ಷ ಹಸನ್ ರೋಹಾನಿ ಹೇಳಿದರು. ‘ಈ ಮುಂಚೆ ಮಾಡಿದ ಒಪ್ಪಂದಗಳಿಂದ ಅಮೆರಿಕ ಹಿಂದಕ್ಕೆ ಹೋಗಿರುವಾಗ ಇನ್ನೊಂದು ಹೊಸ ಒಪ್ಪಂದಕ್ಕೆ ಇರಾನ್ ದೇಶ ಏಕೆ ಸೇರಬೇಕು’ ಎಂದು ಇರಾನ್‍ನ ವಿದೇಶಾಂಗ ಸಚಿವ ಕೇಳಿದರು. ಅವರು ಸ್ಪಷ್ಟವಾಗಿ ಹೇಳಿದ ಇನ್ನೊಂದು ವಿಷಯವೇನೆಂದರೆ, ‘ಟ್ರಂಪ್ ಯುದ್ಧವನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವರ ಸಲಹಾಕಾರರೆ (ಬಿ-ಟೀಮ್) ಈ ಬಿಕ್ಕಟ್ಟಿಗೆ ಕಾರಣ’. ಇಲ್ಲಿ ಬಿ ಟೀಮ್ ಎಂದರೆ, ಇಸ್ರೇಲಿನ ಬಿಬಿ, ಸೌದಿಯ ಬಿನ್ ಸಲ್ಮಾನ್, ಯು.ಏ.ಈ.ಯ ಬಿನ್ ಖಾಲೆದ್ ಹಾಗೂ ಅಮೇರಿಕದ ಜಾನ್ ಬೋಲ್ಟನ್. ಇಂತಹ ಒತ್ತಡದ ತಂತ್ರಗಾರಿಕೆಯಿಂದ ಇರಾನ್ ದೇಶವನ್ನು ಮಂಡಿಯೂರುವ ಪರಿಸ್ಥಿತಿಗೆ ತರಲಾಗದು ಎಂತಲೂ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಸ್ಟ್ರೇಟ್ ಆಫ್ ಹೊರ್ಮುಝ್’ ಎಂದು ಕರೆಯಲಾಗುವ ಪರ್ಷಿಯನ್ ಕೊಲ್ಲಿಯಿಂದಲೇ ವಿಶ್ವದ 35% ತೈಲ ಹಾದುಹೋಗಬೇಕಿದೆ. ಆ ಕೊಲ್ಲಿ ಇರಾನ್‍ನ ಜಲಭಾಗವನ್ನು ಹೊಂದಿದೆ. ಇರಾನಿನ ರೆವಲೂಷನರಿ ಗಾಡ್ರ್ಸ್ ಆ ಕೊಲ್ಲಿಯ ರಕ್ಷಣೆ ಮಾಡುತ್ತಾರೆ. ಏಪ್ರಿಲ್ 8 ರಂದು ಟ್ರಂಪ್ ಆಡಳಿತವು ಇರಾನಿಯನ್ ರೆವಲೂಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಅಮೆರಿಕವು ಈ ರೀತಿ ಬೇರೊಂದು ದೇಶದ ಸೈನ್ಯವನ್ನು ‘ಭಯೋತ್ಪಾದಕ ಗುಂಪು’ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು. ಇರಾನ್ ಅದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ದೇಶವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಕರೆದು, ಆ ಭಾಗದಲ್ಲಿರುವ ಅಮೆರಿಕದ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪು’ಗಳು ಎಂದು ಕರೆದಿದೆ.

ಐತಿಹಾಸಿಕವಾಗಿ, ಭಾರತ ಮತ್ತು ಇರಾನ್ ಒಳ್ಳೆಯ ಬಾಂಧವ್ಯಗಳನ್ನು ಹೊಂದಿವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯ ಆಳ್ವಿಕೆಯ ಕಾಲದಲ್ಲಿ ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಹೇರಿದ್ದಾಗ ಭಾರತವು ಇರಾನ್ ಜೊತೆಗೆ ನಿಂತು, ಆ ದೇಶಕ್ಕೆ ಸಹಾಯ ನೀಡಿದೆ. ಅಮೆರಿಕದ ಒತ್ತಡದ ಪರಿಸ್ಥಿತಿಯಲ್ಲಿ ಮುಂದೆ ಈ ಪ್ರಾದೇಶಿಕ ಸಂಬಂಧವನ್ನು ಗಟ್ಟಿಗೊಳಿಸುವುದೋ ಅಥವಾ ಅಮೆರಿಕಾದ ಒತ್ತಡಕ್ಕೆ ಮಣಿದು ಎರಡು ದೇಶಗಳ ಐತಿಹಾಸಿಕ ಸ್ನೇಹಕ್ಕೆ ದ್ರೋಹಬಗೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...