Homeಅಂತರಾಷ್ಟ್ರೀಯಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

ಇರಾನ್ ನಿಂದ ಭಾರತ ತೈಲ ತರಿಸಿಕೊಂಡರೆ ಅಮೇರಿಕಾಗೆ ಏನು ಕಷ್ಟ?

- Advertisement -
- Advertisement -

 

| ಭರತ್ ಹೆಬ್ಬಾಳ |

ಕಳೆದ ಹಲವಾರು ವರ್ಷಗಳಿಂದ ಅಮೆರಿಕ ಮತ್ತು ಇರಾನ್‍ನ ಸಂಬಂಧಗಳು ಹದಗೆಡುತ್ತಲೇ ಇವೆ. ಇದನ್ನೇ ಮುಂದುವರೆಸಿ, ಏಪ್ರಿಲ್ 22ರಂದು ಅಮೆರಿಕ ದೇಶವು ಇರಾನಿನ ಮೇಲೆ ಸಂಪೂರ್ಣ ಆರ್ಥಿಕ ಸಮರವನ್ನೇ ಘೋಷಿಸಿದೆ. ‘ಇರಾನಿನಿಂದ ಇತರ ದೇಶಗಳಿಗೆ ರಫ್ತು ಆಗುವ ತೈಲದ ಪ್ರಮಾಣವನ್ನು ಸೊನ್ನೆಗೆ ಇಳಿಸುವುದೇ ಈ ನಿರ್ಧಾರದ ಉದ್ದೇಶ. ಅದರಿಂದ ಆ ದೇಶದ ಆದಾಯದ ಪ್ರಮುಖ ಮೂಲವನ್ನು ಇಲ್ಲವಾಗಿಸುವುದು’. ಈ ಹೇಳಿಕೆ ಬಂದಿದ್ದು ಅಮೇರಿಕದ ವೈಟ್‍ಹೌಸ್‍ನಿಂದ. ತೈಲವೇ ಇರಾನಿನ ಪ್ರಮುಖ ರಫ್ತು ಆಗಿದ್ದು, ಅಮೇರಿಕದಲ್ಲಿ ಟ್ರಂಪ್ ಆಡಳಿತ ಬಂದನಂತರ ಇರಾನ್ ದೇಶದ ಕತ್ತುಹಿಸುಕಿ ತನ್ನ ತಾಳಕ್ಕೆ ಕುಣಿಯುವಂತೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದೆ. ಪ್ರಸ್ತುತ ಸಮಯದಲ್ಲಿ ಇರಾನ್ ಪ್ರತಿನಿತ್ಯ 10 ಲಕ್ಷ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. 2018ರ ನವೆಂಬರ್ 5ರಂದು ಮೊದಲ ಬಾರಿ ನಿರ್ಬಂಧನೆಗಳನ್ನು ಹೇರಲಾಗಿತ್ತು. ಆಗ ಅಮೆರಿಕ 8 ದೇಶಗಳಿಗೆ ತೈಲದ ಆಮದನ್ನು ನಿಲ್ಲಿಸಲು 6 ತಿಂಗಳ ಸಮಯಾವಕಾಶವನ್ನು ನೀಡಲಾಗಿತ್ತು. ಒಂದೇ ಬಾರಿ ಸಂಪೂರ್ಣ ನಿರ್ಬಂಧ ಹೇರಿದರೆ ಮಾರುಕಟ್ಟೆಗಳು ಅತಂತ್ರಗೊಳ್ಳುವವು ಎನ್ನುವ ಆತಂಕದ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ನಿರ್ಬಂಧನೆಗಳಿಗಿರುವ ಈ ವಿನಾಯಿತಿಗಳು ಏಪ್ರಿಲ್ 30 ರಂದು ಕೊನೆಗೊಳ್ಳುತ್ತವೆ, ಮೇ 1ರಿಂದ ಎಲ್ಲ ಎಂಟೂ ದೇಶಗಳು ನಿರ್ಬಂಧನೆಗಳಿಗೆ ಬದ್ಧವಾಗಬೇಕಿದೆ.

ಚೈನಾ, ಭಾರತ, ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಟರ್ಕಿ, ಇಟಲಿ ಮತ್ತು ಗ್ರೀಸ್ ಈ ನಿರ್ಬಂಧನೆಯಿಂದ 6 ತಿಂಗಳು ವಿನಾಯಿತಿ ಪಡೆದ ದೇಶಗಳು. ಜಪಾನ್, ದಕ್ಷಿಣ ಕೋರಿಯಾ ಮತ್ತು ತೈವಾನ್ ದೇಶಗಳು ಎರಡನೇ ಮಹಾಯುದ್ಧದ ನಂತರ ಅಮೇರಿಕವೇ ಈ ದೇಶಗಳ ರಕ್ಷಕ ದೇಶವಾಗಿರುವುದರಿಂದ ದಿಗ್ಬಂಧನೆಗಳಿಗೆ ಒಪ್ಪಿಕೊಳ್ಳುತ್ತವೆ. ಇಟಲಿ ಮತ್ತು ಗ್ರೀಸ್ ದೇಶಗಳು ಇರಾನ್‍ನಿಂದ ತುಂಬಾ ಕಡಿಮೆ ತೈಲ ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಚೈನಾ ದೇಶ ಈ ದಿಗ್ಬಂಧನೆಗಳಿಗೆ ಬದ್ಧವಾಗುವುದೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಡೆಯುತ್ತಿರುವ ಟ್ರೇಡ್ ವಾರ್ ಮೇಲೆ ಅವಲಂಬಿತವಾಗಿದೆ. ಭಾರತದ ಪೆಟ್ರೋಲಿಯಮ್ ಸಚಿವರು ಅಮೆರಿಕ ವಿಧಿಸಿದ ದಿಗ್ಬಂಧನೆಗಳಿಗೆ ಬದ್ಧರಿರುವುದಾಗಿ ಹೇಳಿಕೆ ನೀಡಿದ್ದರಾದರೂ ಅಂತಿಮ ನಿರ್ಣಯ ಹೊಸ ಸರಕಾರ ಬಂದ ನಂತರವೇ. ಇರಾನ್‍ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ದೇಶ ಟರ್ಕಿ. ಈಗ ಬೇರೆ ಮೂಲಗಳಿಂದ ಇಷ್ಟು ಕಡಿಮೆ ಸಮಯದಲ್ಲಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೇ ಇರಬಹುದಾಗಿ, ಅದರ ಪರಿಣಾಮಗಳನ್ನು ಎದುರಿಸಬೇಕಾಗುವುದು.

ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಲಾನ್ ಆಫ್ ಆಕ್ಷನ್ (ಜೆಸಿಪಿಓಏ) ಎಂದು ಕರೆಯಲಾಗುವ ಬಹುಪಕ್ಷೀಯ ನ್ಯೂಕ್ಲಿಯರ್ ಒಪ್ಪಂದದಿಂದ ಮೇ 2018ರಲ್ಲಿ ಅಮೇರಿಕವು ಏಕಪಕ್ಷೀಯವಾಗಿ ಹಿಂತೆಗೆದು ಕೊಂಡಿತು, ಅಂದಿನಿಂದ ಈ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಬರಾಕ್ ಒಬಾಮಾ ಆಡಳಿತದ ಕಾಲದಲ್ಲಿ(2015) ಇರಾನ್ ಮತ್ತು ಆರು ವಿಶ್ವಶಕ್ತಿಗಳ ಮಧ್ಯೆ ಜೆಸಿಪಿಓಏ ರಚಿಸಲಾಗಿತ್ತು. ಆ ಒಪ್ಪಂದದಲ್ಲಿ ಹಿಂಪಡೆಯಲಾದ ಏಕಪಕ್ಷೀಯ ದಿಗ್ಬಂಧನೆಗಳನ್ನು ಟ್ರಂಪ್ ಆಡಳಿತ ಮತ್ತೆ ವಿಧಿಸಿದೆ. ಇತ್ತೀಚಿಗೆ ಹಲವಾರು ಷರತ್ತುಗಳ ಅಡಿಯಲ್ಲಿ ಈ ಒಪ್ಪಂದವನ್ನು ಇನ್ನೊಂದು ಸುತ್ತು ಚರ್ಚಿಸುವ ಪ್ರಸ್ತಾಪ ಇಟ್ಟಿದೆ. ಸಿರಿಯಾದಲ್ಲಿ ಆಳ್ವಿಕೆ ಬದಲಾವಣೆಗಾಗಿ ಅಮೆರಿಕ ಮಾಡಿದ ಯತ್ನಗಳು, ವೆನೆಜುವೆಲಾದಲ್ಲೂ ಮಾಡಿದ ಪ್ರಯತ್ನ ಹಾಗೂ ಸದ್ಯಕ್ಕೆ ನಡೆಯುತ್ತಿರುವ ಯುದ್ಧಗಳ ಮಧ್ಯೆ ಇರಾನ್ ಅನ್ನು ಒಂದು ದುಷ್ಟ ಭಯೋತ್ಪಾದಕ ದೇಶವನ್ನಾಗಿ ಚಿತ್ರಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನಿನ ಆಳ್ವಿಕೆಯು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೆಂದೂ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅಮೆರಿಕ ವಿರೋಧಿ ಭಾವನೆಗಳನ್ನು ಹರಡಿಸುವ ಪ್ರಯತ್ನ ಇರಾನ್ ಮಾಡುತ್ತಿದೆ ಎಂದು ಅಮೆರಿಕ ಚಿತ್ರಿಸುತ್ತಿದೆ. 2002ರಲ್ಲಿ ಪ್ರಾರಂಭಿಸಿದ ಇರಾಕ್‍ನ ಯುದ್ಧವನ್ನೂ ಇದೇ ರೀತಿಯಲ್ಲಿ ಪ್ರಾರಂಭಿಸಲಾಗಿತ್ತು. ಆಗಲೂ ಈಗಿರುವ ರಕ್ಷಣಾ ಸಲಹಾಕಾರರಾದ ಜಾನ್ ಬೋಲ್ಟನ್ ಅವರೇ ಸಲಹಾಕಾರರಾಗಿದ್ದರು.

ಈಗ ಅಮೇರಿಕವು ಮಾತುಕತೆಗಳಿಗೆ ಇಟ್ಟಿರುವ ಷರತ್ತುಗಳನ್ನು ‘ಸುಳ್ಳುಗಳ ಸರಮಾಲೆ, ಇರಾನ್ ದೇಶವನ್ನು ತನ್ನ ಮಂಡಿಯೂರಿಸುವ ಉದ್ದೇಶದಿಂದ ವಿಧಿಸಲಾಗಿದ್ದು’ ಎಂದು ಇರಾನ್‍ನ ಅಧ್ಯಕ್ಷ ಹಸನ್ ರೋಹಾನಿ ಹೇಳಿದರು. ‘ಈ ಮುಂಚೆ ಮಾಡಿದ ಒಪ್ಪಂದಗಳಿಂದ ಅಮೆರಿಕ ಹಿಂದಕ್ಕೆ ಹೋಗಿರುವಾಗ ಇನ್ನೊಂದು ಹೊಸ ಒಪ್ಪಂದಕ್ಕೆ ಇರಾನ್ ದೇಶ ಏಕೆ ಸೇರಬೇಕು’ ಎಂದು ಇರಾನ್‍ನ ವಿದೇಶಾಂಗ ಸಚಿವ ಕೇಳಿದರು. ಅವರು ಸ್ಪಷ್ಟವಾಗಿ ಹೇಳಿದ ಇನ್ನೊಂದು ವಿಷಯವೇನೆಂದರೆ, ‘ಟ್ರಂಪ್ ಯುದ್ಧವನ್ನು ಬಯಸುವುದಿಲ್ಲ ಎನ್ನುವ ನಂಬಿಕೆ ಇದೆ ಆದರೆ ಅವರ ಸಲಹಾಕಾರರೆ (ಬಿ-ಟೀಮ್) ಈ ಬಿಕ್ಕಟ್ಟಿಗೆ ಕಾರಣ’. ಇಲ್ಲಿ ಬಿ ಟೀಮ್ ಎಂದರೆ, ಇಸ್ರೇಲಿನ ಬಿಬಿ, ಸೌದಿಯ ಬಿನ್ ಸಲ್ಮಾನ್, ಯು.ಏ.ಈ.ಯ ಬಿನ್ ಖಾಲೆದ್ ಹಾಗೂ ಅಮೇರಿಕದ ಜಾನ್ ಬೋಲ್ಟನ್. ಇಂತಹ ಒತ್ತಡದ ತಂತ್ರಗಾರಿಕೆಯಿಂದ ಇರಾನ್ ದೇಶವನ್ನು ಮಂಡಿಯೂರುವ ಪರಿಸ್ಥಿತಿಗೆ ತರಲಾಗದು ಎಂತಲೂ ವಿದೇಶಾಂಗ ಸಚಿವ ಹೇಳಿದ್ದಾರೆ.

‘ಸ್ಟ್ರೇಟ್ ಆಫ್ ಹೊರ್ಮುಝ್’ ಎಂದು ಕರೆಯಲಾಗುವ ಪರ್ಷಿಯನ್ ಕೊಲ್ಲಿಯಿಂದಲೇ ವಿಶ್ವದ 35% ತೈಲ ಹಾದುಹೋಗಬೇಕಿದೆ. ಆ ಕೊಲ್ಲಿ ಇರಾನ್‍ನ ಜಲಭಾಗವನ್ನು ಹೊಂದಿದೆ. ಇರಾನಿನ ರೆವಲೂಷನರಿ ಗಾಡ್ರ್ಸ್ ಆ ಕೊಲ್ಲಿಯ ರಕ್ಷಣೆ ಮಾಡುತ್ತಾರೆ. ಏಪ್ರಿಲ್ 8 ರಂದು ಟ್ರಂಪ್ ಆಡಳಿತವು ಇರಾನಿಯನ್ ರೆವಲೂಷನರಿ ಗಾಡ್ರ್ಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತು. ಅಮೆರಿಕವು ಈ ರೀತಿ ಬೇರೊಂದು ದೇಶದ ಸೈನ್ಯವನ್ನು ‘ಭಯೋತ್ಪಾದಕ ಗುಂಪು’ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು. ಇರಾನ್ ಅದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ದೇಶವನ್ನು ‘ಭಯೋತ್ಪಾದನೆಯ ಪ್ರಾಯೋಜಕ ದೇಶ’ ಎಂದು ಕರೆದು, ಆ ಭಾಗದಲ್ಲಿರುವ ಅಮೆರಿಕದ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪು’ಗಳು ಎಂದು ಕರೆದಿದೆ.

ಐತಿಹಾಸಿಕವಾಗಿ, ಭಾರತ ಮತ್ತು ಇರಾನ್ ಒಳ್ಳೆಯ ಬಾಂಧವ್ಯಗಳನ್ನು ಹೊಂದಿವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯ ಆಳ್ವಿಕೆಯ ಕಾಲದಲ್ಲಿ ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಹೇರಿದ್ದಾಗ ಭಾರತವು ಇರಾನ್ ಜೊತೆಗೆ ನಿಂತು, ಆ ದೇಶಕ್ಕೆ ಸಹಾಯ ನೀಡಿದೆ. ಅಮೆರಿಕದ ಒತ್ತಡದ ಪರಿಸ್ಥಿತಿಯಲ್ಲಿ ಮುಂದೆ ಈ ಪ್ರಾದೇಶಿಕ ಸಂಬಂಧವನ್ನು ಗಟ್ಟಿಗೊಳಿಸುವುದೋ ಅಥವಾ ಅಮೆರಿಕಾದ ಒತ್ತಡಕ್ಕೆ ಮಣಿದು ಎರಡು ದೇಶಗಳ ಐತಿಹಾಸಿಕ ಸ್ನೇಹಕ್ಕೆ ದ್ರೋಹಬಗೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....