Homeಮುಖಪುಟಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?

ಸರ್ಕಾರದ ಆಡಳಿತ ರಾಜ್ಯ‘ಪಾಲ’ನ್ನು ವರ್ಗಾಯಿಸಬಹುದೇ?

ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಗವರ್ನರ್‌‌ ಹುದ್ದೆ ಎಷ್ಟೇ ಸ್ವತಂತ್ರ ಎಂದು ಸಾರಿದರೂ ಈ ಹುದ್ದೆಯ ಮೇಲೆ ಕೇಂದ್ರ ಸರ್ಕಾರದ ಹಸ್ತಕ್ಷೇಪ ನಿಂತಿಲ್ಲ.

- Advertisement -
- Advertisement -

ಕೊರೊನಾ ಭೀಕರ ಅಲೆಯು ಇಂದು ಜನಜೀವನವನ್ನು ಜರ್ಜರಿತಗೊಳಿಸುತ್ತಿದೆ. ಈ ಪೆಟ್ಟು ತಿಂದ ಜನರು ಎತ್ತಲೂ ದಿಕ್ಕು ಕಾಣದೇ ಬರಿದಾದ ಬದುಕಿನಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂಕ್ರಾಂಮಿಕ ಪಿಡುಗಿನ ನಿರ್ವಹಣೆಯನ್ನು ಜವಬ್ದಾರಿಯುತ ಚುನಾಯಿತ ಸರ್ಕಾರವು ಜನರ ಒಳಿತಿಗಾಗಿ ಮತ್ತು ರೋಗ ನಿಯಂತ್ರಣಕ್ಕಾಗಿ ಆಯಾ ಸಂದರ್ಭಾನುಸಾರ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಆದ್ಯ ಕರ್ತವ್ಯ. ಆದರೆ, ಈ ಸರ್ಕಾರದ ಕರ್ತವ್ಯ ಮತ್ತು ನಡೆಯನ್ನು ಇಂದು ಎಲ್ಲೋ ಒಂದು ಕಡೆ ವೈಫಲ್ಯದತ್ತ ಹಾದಿ ತುಳಿದಿದೆಯೇನೋ ಎಂದು ಕಾಣುತ್ತಿದೆ. ಏಕೆಂದರೆ, ಒಂದು ಸ್ಥಿರ ಸರ್ಕಾರ ಅಸ್ವಿತ್ವದಲ್ಲಿವಿದ್ದಾಗ್ಯೂ ಕೋವಿಡ್-19 ರೋಗದ ಪರಿಸ್ಥಿತಿ ಪರಿಶೀಲಿಸಲು ರಾಜ್ಯಪಾಲರಾದ ವಜುಭಾಯಿ ವಾಲಾರವರು ಸರ್ವಪಕ್ಷ ಸಭೆ ನಡೆಸಿರುವುದು.

ಇದು ನಿಜಕ್ಕೂ ಸಂವಿಧಾನದ ಚೌಕಟ್ಟನ್ನು ಪರಿಶೀಲನೆ ಮಾತ್ರವಲ್ಲದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದ ಸರ್ಕಾರದ ಕಾರ್ಯವೈಖರಿಯಲ್ಲಿ ನಿಶ್ಯಕ್ತತತೆ ಕಾಣುತ್ತಿದೆಯೇ ಎಂಬುದನ್ನು ನೋಡಬೇಕಾಗಿದೆ.

ನಮ್ಮ ದೇಶದ ಮಟ್ಟಿಗೆ ಸ್ವಾತಂತ್ರ್ಯಪೂರ್ವದಲ್ಲಿ ವಸಾಹತುಶಾಹಿ ಆಡಳಿತವಿರುವಾಗ ಮೊದಲಿಗೆ ಕಂಪೆನಿ ರೂಲ್ (1773-1858) ರಲ್ಲಿ ಗವರ್ನರ್‌‌ ಆಫ್ ಬೆಂಗಾಲ್ ಎಂಬ ಹುದ್ದೆಯಯಿತ್ತು. ಆ ನಂತರದಲ್ಲಿ ಆ ಹುದ್ದೆಯ ಹೆಸರನ್ನು ಮಾರ್ಪಡಿಸಿ ಗವರ್ನರ್‌‌ ಜೆನರ್ ಆಫ್ ಬೆಂಗಾಲ್ ಎಂದು ನಾಮಕರಣ ಮಾಡಲಾಯಿತು. ಈ ಹುದ್ದೆಯ ಗವರ್ನರ್‌‌ ಜನರಲ್‍ರವರಿಗೆ ನಾಲ್ಕು ಜನ ಸಹಾಯಕರನ್ನು ಎಕ್ಸಿಕ್ಯೂಟಿವ್ ಕೌನ್ಸಿಲ್ ರಚಿಸಿ ನೇಮಕ ಮಾಡಲಾಯಿತು. ಈ ಹುದ್ದೆಗೆ ಪ್ರಥಮ ಗವರ್ನರ್‌‌ ಜನರಲ್ ಆಗಿ ಲಾರ್ಡ್ ವಾರೆನ್ ಹ್ಯಾಸ್ಟಿಂಗ್ಸ್‌ ನೇಮಕವಾದರು. ತದನಂತರ, 1833ರ ಚಾಟರ್ ಆಕ್ಟ್‌‌ನಲ್ಲಿ ಗವರ್ನರ್‌‌‌ ಜನರಲ್ ಆಫ್ ಬೆಂಗಾಲ್ ಎಂಬುದನ್ನು ಮಾರ್ಪಾಡಿಸಿ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ‘ಎರಡೇಟು ತಿನ್ನುತ್ತಿ’; ಆಕ್ಸಿಜನ್ ಸಿಲಿಂಡರ್‌ ಕೇಳಿದ ವ್ಯಕ್ತಿಗೆ ಬೆದರಿಸಿದ ಕೇಂದ್ರ ಸಚಿವ!

ಈ ಮೂಲಕ ಲಾರ್ಡ್ ವಿಲಿಯಂ ಬೆನೆಟಿಕ್‌ ಪ್ರಥಮ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಆಗಿ ನೇಮಕವಾದರು. ಮುಂದುವರೆದು ಬ್ರಿಟಿಷ್ ಆಳ್ವಿಕೆಯಲ್ಲಿ ಕ್ರೌನ್ ರೂಲ್ (1858-1947)ನ ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ – 1858 ನಲ್ಲಿ ಗವರ್ನರ್‌‌ ಜನರಲ್ ಆಫ್ ಇಂಡಿಯಾ ಎಂಬ ಹುದ್ದೆಯ ಹೆಸರನ್ನು ವೈಸ್‍ರಾಯ್ ಆಫ್ ಇಂಡಿಯಾ ಎಂದು ಬದಲಾಯಿಸಿ ಲಾರ್ಡ್ ಕ್ಯಾನಿಂಗ್‌ರನ್ನು ಮೊದಲ ವೈಸ್‍ರಾಯ್ ಆಗಿ ನೇಮಕ ಮಾಡಲಾಯಿತು. ಈ ರೀತಿ ನಮ್ಮ ದೇಶದಲ್ಲಿ ಗವರ್ನರ್‌‌ ಅಂದರೆ ರಾಜ್ಯಪಾಲರ ಹುದ್ದೆಯೂ ಬ್ರಿಟಿಷ್ ಆಳ್ವಿಕೆಯ ಪಳೆಯುಳಿಕೆಯಾಗಿ ಬಂದಿದೆ.

ನಂತರ ಸ್ವಾತಂತ್ರ್ಯ ಪಡೆದ ನಮ್ಮ ದೇಶ, ದೇಶದ ಅಧಿಕಾರ ಮತ್ತು ಆಡಳಿತವು ಒಂದು ಸಂಘಟನಾತ್ಮಕವಾಗಿ ನಮ್ಮಗಳ ಕೈಗೆ ಸಿಕ್ಕಿ ಅದನ್ನು ಹೊತ್ತು ನಡೆಸಲು ಡಾ. ಬಿ.ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಸಂವಿಧಾನದ ಭಾಗ-6 ರ ವಿಧಿ 152 ರಿಂದ 163 ರವರೆಗೆ ರಾಜ್ಯಪಾಲರ ನೇಮಕ, ಅಧಿಕಾರ ಮತ್ತು ಆಡಳಿತದ ಬಗ್ಗೆ ವಿವರಿಸಲಾಗಿದೆ. ಇತ್ತೀಚೆಗೆ ಅವರು ನಡೆಸಿದ ಸರ್ವಪಕ್ಷ ಸಭೆಯೂ ಸಂವಿಧಾನದ ಮೂಲ ತತ್ವ ಉಲ್ಲಂಘನೆಯಾಗಿದೆಯೇ ಎಂಬುದು ನೋಡಿದಾಗ, ಸಂವಿಧಾನ ವಿಧಿ – 154 ರಲ್ಲಿ ರಾಜ್ಯದ ಕಾರ್ಯಾಂಗ ಅಧಿಕಾರವು ರಾಜ್ಯಪಾಲರಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅವರು ಅದನ್ನು ನೇರವಾಗಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕ ಈ ಸಂವಿಧಾನಕ್ಕನುಸಾರವಾಗಿ ಚಲಾಯಿಸತಕ್ಕದ್ದು ಎಂದು ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಆಕ್ಸಿಜನ್‌ಗೆ ಹಾಹಾಕಾರ; ನೇಪಾಳಕ್ಕೆ ವೆಂಟಿಲೇಟರ್‌‌‌ ಹೊಂದಿರುವ 39 ಆಂಬುಲೆನ್ಸ್‌ ಗಿಫ್ಟ್‌‌‌!

ರಾಜ್ಯಪಾಲರ ಈ ಅಧಿಕಾರ ವ್ಯಾಪ್ತಿಯನ್ನು ದಿನಾಂಕ: 02/06/1949 ರಲ್ಲಿ ಸಂವಿಧಾನ ರಚನಾಸಭೆಯ ಚರ್ಚೆಯಲ್ಲಿ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್‌ರವರು ಸಭೆಯನ್ನು ಉದ್ದೇಶಿಸಿ “ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ಕೆಲವು ಕರ್ತವ್ಯಗಳಿರುತ್ತವೆ. ಅವು ಸಚಿವ ಸಂಪುಟಕ್ಕೆ ಸಲಹೆ ನೀಡುವುದು, ಸಚಿವ ಸಂಪುಟವನ್ನು ಎಚ್ಚರಿಸುವುದು, ಸಚಿವ ಸಂಪುಟಕ್ಕೆ ಪರ್ಯಾಯ ಮಾರ್ಗಗಳ ಬಗೆಗೆ ಸಲಹೆ ನೀಡುವುದು ಹಾಗೂ ಅದನ್ನು ಸಚಿವ ಸಂಪುಟ ಮರುಪರಿಶೀಲಿಸಲು ಸೂಚಿಸುವುದು. ಈ ಸದನದಲ್ಲಿರುವ ಯಾರಾದರೂ ರಾಜ್ಯಪಾಲರ ಮೇಲೆ ಹೊರೆಸಿರುವ ಈ ಕರ್ತವ್ಯಗಳ ಬಗೆಗೆ ಪ್ರಶ್ನಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಇಲ್ಲದಿದ್ದರೆ ಅವರೊಬ್ಬ ಸಂಪೂರ್ಣವಾಗಿ ಅನಗತ್ಯ ಅಧಿಕಾರಿಯಾಗುತ್ತಾರೆ ಹಾಗಾಗುವುದು ಒಳ್ಳೆಯದಲ್ಲ. ಅವರು ಯಾವ ಪಕ್ಷದ ಪ್ರತಿನಿಧಿಯೂ ಅಲ್ಲ.

ಅವರು ಇಡೀ ರಾಜ್ಯದ ಜನತೆಯ ಪ್ರತಿನಿಧಿ. ಅವರು ಜನತೆಯ ಹೆಸರಿನಲ್ಲಿ ತಮ್ಮ ಆಡಳಿತವನ್ನು ನಡೆಸಿಕೊಂಡು ಹೋಗುವರು. ಅವರು ಆಡಳಿತವನ್ನು ನಡೆಸಿಕೊಂಡು ಹೋಗುತ್ತಿರುವುದು ಒಂದು ಹಂತದಲ್ಲಿ ಒಳ್ಳಯದೆಂದೂ, ಸಮರ್ಥನೀಯವೆಂದೂ, ಪ್ರಾಮಾಣಿಕವಾಗಿದೆಯೆಂದು ಪರಿಗಣಿಸಬಹುದು. ಆದುದರಿಂದ, ರಾಜ್ಯಪಾಲರು ಭ್ರಷ್ಟಚಾರವಿಲ್ಲದ, ನಿಷ್ಪಕ್ಷಪಾತವಾದ ಶುದ್ಧ ಆಡಳಿತವನ್ನು ನೀಡುವುದು ಹಾಗೂ ಸಚಿವ ಸಂಪುಟದಿಂದ ಪ್ರತಿಪಾದಿಸಲಾಗದ ಪ್ರಸ್ತಾವಗಳು ಜನತೆಯ ಇಚ್ಛೆಗೆ ವಿರುದ್ಧವಾಗಿರದಂತೆ ನೋಡಿಕೊಳ್ಳುವುದು ಅದಕ್ಕಾಗಿ ಸಚಿವರಿಗೆ ಸಲಹೆ ನೀಡಲು, ಅವರನ್ನು ಎಚ್ಚರಿಸಲು ಹಾಗೂ ಮರುಪರಿಶೀಲಿಸಲು ಹೇಳುವುದು ಅವರ ಕರ್ತವ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಇದು ಒಂದು ಕಡೆಯಾದರೆ, ಸಂವಿಧಾನ ವಿಧಿ-163 ಯು, “ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ: (1) ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲರು, ತನ್ನ ಎಲ್ಲ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರ ಚಲಾಯಿಸಲು ಅವರನ್ನು ಅಗತ್ಯಪಡಿಸಿರುವಷ್ಟರ ಮಟ್ಟಿಗೆ ಹೊರತು, ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವರಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು” ಎಂದು ಹೇಳಿದೆ.

ಅಂದರೆ, ನೆರವು ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು. ಆದರೆ, ಇಲ್ಲಿ ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲವಿದ್ದಾಗ್ಯೂ ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿರುವುದು ಸಂವಿಧಾನದ ತತ್ವ ಮತ್ತು ಒಕ್ಕೂಟ (ಫೆಡರಲ್) ವ್ಯವಸ್ಥೆಗೆ ಧಕ್ಕೆಯಾದಂತೆ ಯಾಕೆಂದರೆ, ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕವಾದವರು 1979 ರಲ್ಲಿ ಸುಪ್ರೀಂಕೋರ್ಟ್ ಗವರ್ನರ್‌ ಹುದ್ದೆಯೂ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಹುದ್ದೆಯಲ್ಲ ಅದು ಸಾಂವಿಧಾನಿಕ ಸ್ವಾತಂತ್ರ್ಯ ಹುದ್ದೆ ಎಂದು ಹೇಳಿದ್ದರೂ ಸಹ ಕೆಲವೊಮ್ಮೆ ಹಲವು ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್‍ರ ರೀತಿಯಲ್ಲಿ ವರ್ತಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾ – ಒಂದು ಧ್ವಂಸ ಕಾರ್ಯಾಚರಣೆಯಷ್ಟೇ!

ಉದಾಹರಣೆಗೆ ವಿ.ಪಿ. ಸಿಂಗ್ ನೇತೃತ್ವದ ನ್ಯಾಷನಲ್‌‌ ಫ್ರಂಟ್ ಗೌರ್ನಮೆಂಟ್ (1989) ರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಗವರ್ನರ್‌‌ಗಳು ರಾಜೀನಾಮೆ ನೀಡುವಂತೆ ಕೇಳಿತು. ಅದರಂತೆ ಕೆಲವರನ್ನು ಬದಲಿಸಿ ಉಳಿದವರನ್ನು ಮುಂದುವರೆಸಿಕೊಂಡು ಹೋಗಲಾಯಿತು. ನಂತರ 1991 ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಾಗ ವಿ.ಪಿ. ಸಿಂಗ್ ಸರ್ಕಾರದಲ್ಲಿ ನೇಮಕವಾಗಿದ್ದ 14 ಗವರ್ನರ್‌ಗಳನ್ನು ಬದಲಾಯಿಸಲಾಯಿತು. ಇತ್ತೀಚೆಗೆ ನಡೆದ ರಾಜ್ಯಪಾಲರ ಸರ್ವಪಕ್ಷ ಸಭೆಯ ವರ್ತನೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಮತ್ತು ಆಡಳಿತ ಪಕ್ಷದ ಕೆ.ಎಸ್. ಈಶ್ವರಪ್ಪ ಮತ್ತು ಹೆಚ್. ವಿಶ್ವನಾಥ್‌ರವರು ಖಂಡಿಸಿದ್ದಾರೆ.

ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಗವರ್ನರ್‌‌ ಹುದ್ದೆ ಎಷ್ಟೇ ಸ್ವತಂತ್ರ ಎಂದು ಸಾರಿದರೂ ಈ ಹುದ್ದೆಯ ಮೇಲೆ ಕೇಂದ್ರ ಸರ್ಕಾರದ ಹಸ್ತಕ್ಷೇಪ ನಿಂತಿಲ್ಲ. ಈಗಾಗಲೇ, ಯಡಿಯೂರಪ್ಪರವರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿಯೊಳಗಿನ ಹೈಕಮಾಂಡ್ ತುದಿಗಾಲಲ್ಲಿ ನಿಂತಿರುವುದು, ಬಸವನಗೌಡ ಪಾಟೀಲ್ ಯತ್ನಾಳ್‍‌ ಯಡಿಯೂರಪ್ಪರವರ ಮೇಲೆ ನೇರ ಆರೋಪ ಮತ್ತು ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಇದು ಪಕ್ಷದೊಳಗೆ ಆಂತರಿಕವಾಗಿ ನಡೆಯುತ್ತಿರುವುದು ಮುಚ್ಚಿಟ್ಟ ಸತ್ಯವಾಗಿ ಉಳಿದಿಲ್ಲ. ಇಂದು ರಾಜ್ಯಪಾಲರ ಅಧಿಕಾರ ಹಸ್ತಕ್ಷೇಪ ಮತ್ತು ಮುಖ್ಯಮಂತ್ರಿ ಅವರ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯ ಅಥವಾ ನಿಶ್ಯಕ್ತತೆಯನ್ನು ಎತ್ತಿ ತೋರಿಸಿದೆ.

ಈಗಾಗಲೇ, ಕೊರೊನಾದಿಂದ ಜನಜೀವನಕ್ಕೆ ಪೆಟ್ಟು ಬಿದ್ದಿದೆ. ಈ ಅಲೆಯಲ್ಲಿ ರಾಜ್ಯಪಾಲರ ಈ ನಡೆಯೂ ಸಂವಿಧಾನದ ಮೂಲತತ್ವ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದೆ ಅದು ಹೆಚ್ಚು ಗಾಯವಾಗದಂತೆ ನೋಡಿಕೊಂಡು ನಮ್ಮ ಸಂವಿಧಾನ ಉಳಿಸುವ ನಿಟ್ಟಿನತ್ತ ಸರ್ಕಾರ ಸಾಗಬೇಕಾಗಿದೆ.

(ಅಭಿಪ್ರಾಯಗಳು ಲೇಖಕರ ವೈಯಕ್ತಿಕವಾದವು)

ಇದನ್ನೂ ಓದಿ: ಆಕ್ಸಿಜನ್, ಐಸಿಯು ಕೊರತೆಯಿಂದ ಉಂಟಾಗುವ ಸಾವುಗಳಿಗೆ ಕೇಂದ್ರವೇ ಹೊಣೆ- ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...