Homeಮುಖಪುಟನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

ನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

- Advertisement -
- Advertisement -

ಮೊನ್ನೆಯಷ್ಟೇ 4ನೇ ಹಂತದ ಮತದಾನ ಮುಗಿದಿದೆ. ಮೋದಿ ಜನಪ್ರಿಯತೆ ಬಾಲಾಕೋಟ್ ವಾಯುದಾಳಿ ಕಾರಣದಿಂದಾಗಿ ಮತ್ತೆ ಮೊದಲಿನಷ್ಟು ಅಲ್ಲದಿದ್ದರೂ ಉತ್ತಮಗೊಂಡಿದೆ ಎಂದು ಸಮೀಕ್ಷಾ ವರದಿಯೊಂದು 3ನೇ ಹಂತದ ಮತದಾನಕ್ಕೂ ಮುಂಚೆ ಹೇಳಿತ್ತು. ಈ ಬಾಲಾಕೋಟ್ ವಾಯುದಾಳಿಯ ವಿಚಾರವೆಲ್ಲ ಹಳ್ಳಿಹಳ್ಳಿಗೆಲ್ಲ ಮುಟ್ಟಿತೆ? ಹಾಗಾಗಿದ್ದರೆ, ಈ ವಿಚಾರ ಪ್ರಸ್ತಾಪಿಸುತ್ತಲೇ ಇರುವ ಮೋದಿ ಸಹಿತ ಬಿಜೆಪಿ ನಾಯಕರ ಮಾತುಗಳನ್ನು ಪ್ರಚಾರ ಮಾಡಲು ಮಾತ್ರ ಒಂದು ದೊಡ್ಡ ಮಟ್ಟದ ವ್ಯವಸ್ಥಿತ ಯೋಜನೆ ನಡೆದಿದೆಯಲ್ಲವೇ? ಭಾರಿ ಮೊತ್ತವನ್ನು ವ್ಯಯಿಸದೇ ಅದು ಸಾಧ್ಯವೇ?

ಇಲ್ಲಿ ಮೋದಿ ವೇವ್ ಅಂದುಬಿಟ್ಟರೆ ಮುಗಿಯಲ್ಲ ಮಾಧ್ಯಮಗಳೇ, ಅದನ್ನು ಪುಶ್ ಮಾಡ್ತಾ ಇರೋದು ಮನಿ ವೇವ್… ಅಂದರೆ ಬಿಜೆಪಿ ನೀರಿನಂತೆ ಖರ್ಚು ಮಾಡುತ್ತಿರುವ ದುಡ್ಡು…ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ವಿಪರೀತ ಪಾರ್ಟಿ ಫಂಡ್ ಬಗ್ಗೆ ಚರ್ಚೆಯೇ ಆಗಿಲ್ಲ… ಈ ಕುರಿತಾಗಿ ಒಂದು ನೋಟ ಇಲ್ಲಿದೆ….

ಇವತ್ತು ದೇಶದ ಎಲ್ಲ ಬಿಜೆಪಿಯೇತರ ಪಕ್ಷಗಳು ಚುನಾವಣೆಗಾಗಿ ವೆಚ್ಚ ಮಾಡುತ್ತಿರುವ ಒಟ್ಟು ಮೊತ್ತಕ್ಕಿಂತಲೂ ಹಲವು ಪಟ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಜೊತೆಗೆ ವಿವಿಧ ರೂಪದಲ್ಲಿ ‘ಅಗೋಚರ’ ಮೂಲಗಳು ಅದಕ್ಕೆ ಹಣಕಾಸಿನ ನೆರವು ಹರಿಸುತ್ತಲೇ ಇವೆ.
ಫಂಡ್ ರೈಸಿಂಗ್: ಬಿಜೆಪಿದು ಶೇ.75!

ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದ ಎಲ್ಲ ಪಕ್ಷಗಳಿಗೆ ದೊರೆತ ಪಾರ್ಟಿ ಫಂಡಿಗಿಂತಲೂ ಹಲವು ಪಟ್ಟು ಬಿಜೆಪಿಗೆ ಲಭಿಸಿದೆ. ಆಶ್ಚರ್ಯವೇನು ಬಂತು ಅಲ್ಲವೇ… ಕಾರ್ಪೋರೇಟ್ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡ ಬಿಜೆಪಿಗೆ, ಆ ನೀತಿಗಳ ಅಕ್ರಮ ಫಲಾನುಭವಿಗಳು ಸಿಕ್ಕಾಪಟ್ಟೆ ಫಂಡ್ ಮಾಡದೇ ಇರುತ್ತಾರಾ?

ಚುನಾವಣೆ, ರಾಜಕೀಯ ವ್ಯವಹಹಾರಗಳ ಕುರಿತು ಅಧ್ಯಯನ ಮಾಡುವ ಅಶೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ (ಎ.ಡಿ.ಆರ್) ಸಂಸ್ಥೆ ಪಡೆದ ಅಧಿಕೃತ ಖಚಿತ ದಾಖಲೆಗಳ ಪ್ರಕಾರ, 2017-18ರಲ್ಲಿ ಈ ದೇಶದ ಪ್ರಮುಖ 7 ಪಕ್ಷಗಳ ಆದಾಯ (ಫಂಡ್) 1,397.90 ಕೋಟಿ ರೂಪಾಯಿ. ಇದರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿ. ಅಂದರೆ ಶೇ 73.5ರಷ್ಟು ಪಾರ್ಟಿ ಫಂಡ್ ಬಿಜೆಪಿಗೇ ಬಂದಿದೆ! ಇದು ಅಧಿಕೃತ ಮಾತ್ರ. ಅನಧಿಕೃತವಾಗಿ ಬಿಜೆಪಿಗೆ ಈ ಐದು ವರ್ಷಗಳಲ್ಲಿ ಸಾಕಷ್ಟು ‘ಪೇಮೆಂಟ್’ ಆಗಿಯೇ ಆಗಿದೆ.

ಬಿಜೆಪಿಯ ಆದಾಯ 1,027.34 ಕೋಟಿಯಲ್ಲಿ ದೇಣಿಗೆ ಮೂಲಕವೇ ಜಾಸ್ತಿ ಬಂದಿದ್ದು ಅದು 989 ಕೋಟಿ ರೂಪಾಯಿ! ಇದು ಕೇವಲ 2017-18ರ ಅಂಕಿಅಂಶ… ಕಪ್ಪುಹಣ ನಿರ್ನಾಮ ಮಾಡಿದೆವು ಎನ್ನುವ ಪ್ರಧಾನಿಯ ಪಾರ್ಟಿಗೆ ಬಂದ ಈ ದೇಣಿಗೆಗಳ ಮೂಲ ಬಿಳಿ ಹಣದ ವಹಿವಾಟು ಖಂಡಿತ ಇರಲಾರದು. ಕಾಂಗ್ರೆಸ್ ಏನ್ ಕಡಿಮೆಯಾ? ಅದಕ್ಕೂ 143 ಕೋಟಿ ರೂಪಾಯಿ ಅದೇ ವರ್ಷದಲ್ಲಿ ದೇಣಿಗೆ ರೂಪದಲ್ಲಿ ಬಂದು ಬಿದ್ದಿದೆ!

ಈ ಬೇನಾಮಿ ಹಣದ ಮೂಲ ಯಾವುದು?
2017ರಲ್ಲಿ ಬಿಜೆಪಿ ಸರ್ಕಾರದಿಂದ ಜಾರಿಗೆ ಬಂದ ಚುನಾವಣಾ ಬಾಂಡ್ ( ಈ ಕುರಿತಾಗಿ ಪರ-ವಿರೋಧ ವಾದ ಇದ್ದೇ ಇದೆ) ನಿಯಮ ಬಿಜೆಪಿಗೇ ಹೆಚ್ಚು ‘ಲಾಭ’ದಾಯಕವಾಗಿದೆ. ಬಾಂಡ್‍ಗಳ ಮೂಲಕ ಪಾರ್ಟಿ ಫಂಡ್ ನೀಡುವವರ ವಿವರವೇ ಗೊತ್ತಾಗುವುದಿಲ್ಲ. ಈ ‘ಅನಾಮಧೇಯ’ ಮೂಲಗಳು ಎಲ್ಲ ಪ್ರಮುಖ ಪಕ್ಷಗಳಿಗೂ ದೇಣಿಗೆ ನೀಡುತ್ತವೆ. ಆದರೆ, ದೇಶದ ಇತಿಹಾಸದಲ್ಲೇ ಈ ಸಲ ಭಾರಿ ಎನ್ನುವಂತಹ ಫಂಡ್ ಸಿಕ್ಕಿದ್ದು ಬಿಜೆಪಿಗೇ! ಒಂದು ಉದಾಹರಣೆ: 2017-18ರಲ್ಲಿ ಆರ್‍ಬಿಐ 215 ಕೋಟಿ ಮೊತ್ತದ ಚುನಾವಣಾ ಬಾಂಡ್‍ಗಳನ್ನು ಇಶ್ಯೂ ಮಾಡಿತು. ಅದರಲ್ಲಿ ಬಿಜೆಪಿ ಶೇರು 210 ಕೋಟಿ ರೂಪಾಯಿ, ಅಂದರೆ ಶೇ.98! ಈ ದೇಶದ ಉದ್ಯಮಪತಿಗಳಿಗೆ ತಲೆ ಕೆಟ್ಟಿದೆಯೇ? ಖಂಡಿತ ಇಲ್ಲ, ಮೋದಿ ಸರ್ಕಾರ ಅವರಿಗೆ ಬೇಕಾದುದನ್ನೆಲ್ಲ ನಮ್ಮ ತೆರಿಗೆ ಹಣದಲ್ಲಿ ಒದಗಿಸುತ್ತ ಬರುತ್ತಿದೆ. ಹೀಗಾಗಿ ಕೊಳ್ಳೆ ಹೊಡೆದ ನಮ್ಮ ತೆರಿಗೆ ಹಣದಲ್ಲಿ ಒಂದು ಪಾಲನ್ನು ಅವರು ಬಿಜೆಪಿಗೆ ನೀಡುತ್ತಿದ್ದಾರಷ್ಟೇ!

ಚುನಾವಣೆ ಹತ್ತಿರ ಬಂದಂತೆ ಈ ‘ಅನಾಮಧೇಯ’ರ ಫಂಡ್ ನೀಡುವಿಕೆ ಹೆಚ್ಚುತ್ತಲೇ ಹೋಗಿದೆ. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ 1,366 ಕೋಟಿ ಫಂಡ್ ಬಂದಿದೆ. ಇದೆಲ್ಲ ಆಲ್‍ಮೋಸ್ಟ್ ಬಿಜೆಪಿಯ ಬುಟ್ಟಿಗೆ ಬಿದ್ದಿದೆ!

ಇದಲ್ಲದೇ ಎಲ್ಲ ಪ್ರಮುಖ ಪಾರ್ಟಿಗಳಿಗೂ ಬಾಂಡ್ ಅಲ್ಲದೇ ಗುಪ್ತವಾಗಿ ನೂರಾರು ಕೋಟಿ ಬೇನಾಮಿ ದುಡ್ಡು ಹರಿದು ಬರುತ್ತಲೇ ಇದೆ. ಅದರಲ್ಲಿ ಬಿಜೆಪಿಗೆ ಶೇ. 90ಕ್ಕೂ ಹೆಚ್ಚು ಸಿಗುತ್ತಿದೆ! ಈ ಹಣದಲ್ಲೇ ಬಿಜೆಪಿಯ ಪ್ರಚಾರ ಇವತ್ತು ಜೋರಾಗಿದೆ. ಜಾಹಿರಾತು, ಪ್ರಾಯೋಜನೆ ಹೆಸರಲ್ಲಿ ಮತ್ತು ಗುಪ್ತವಾಗಿಯೂ ಅದು ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಬೇನಾಮಿ ದುಡ್ಡಿನ ಒಂದು ಪಾಲನ್ನು ನೀಡುತ್ತಿದೆ.
ಸುಮ್ಮನೇ ಮೋದಿ ವೇವ್! ಅದನ್ನೆಲ್ಲ ಪುಶ್ ಮಾಡ್ತಾ ಇರೋದು ಕಳ್ಳ ಉದ್ಯಮಿಗಳ ಬೇನಾಮಿ ಹಣ! ಅದಕ್ಕೇ ಇದು ‘MONEY WAVE’ ಅಲ್ಲವೇ?

(ಆಧಾರ: thewire.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...