Homeಮುಖಪುಟನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

ನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

- Advertisement -
- Advertisement -

ಮೊನ್ನೆಯಷ್ಟೇ 4ನೇ ಹಂತದ ಮತದಾನ ಮುಗಿದಿದೆ. ಮೋದಿ ಜನಪ್ರಿಯತೆ ಬಾಲಾಕೋಟ್ ವಾಯುದಾಳಿ ಕಾರಣದಿಂದಾಗಿ ಮತ್ತೆ ಮೊದಲಿನಷ್ಟು ಅಲ್ಲದಿದ್ದರೂ ಉತ್ತಮಗೊಂಡಿದೆ ಎಂದು ಸಮೀಕ್ಷಾ ವರದಿಯೊಂದು 3ನೇ ಹಂತದ ಮತದಾನಕ್ಕೂ ಮುಂಚೆ ಹೇಳಿತ್ತು. ಈ ಬಾಲಾಕೋಟ್ ವಾಯುದಾಳಿಯ ವಿಚಾರವೆಲ್ಲ ಹಳ್ಳಿಹಳ್ಳಿಗೆಲ್ಲ ಮುಟ್ಟಿತೆ? ಹಾಗಾಗಿದ್ದರೆ, ಈ ವಿಚಾರ ಪ್ರಸ್ತಾಪಿಸುತ್ತಲೇ ಇರುವ ಮೋದಿ ಸಹಿತ ಬಿಜೆಪಿ ನಾಯಕರ ಮಾತುಗಳನ್ನು ಪ್ರಚಾರ ಮಾಡಲು ಮಾತ್ರ ಒಂದು ದೊಡ್ಡ ಮಟ್ಟದ ವ್ಯವಸ್ಥಿತ ಯೋಜನೆ ನಡೆದಿದೆಯಲ್ಲವೇ? ಭಾರಿ ಮೊತ್ತವನ್ನು ವ್ಯಯಿಸದೇ ಅದು ಸಾಧ್ಯವೇ?

ಇಲ್ಲಿ ಮೋದಿ ವೇವ್ ಅಂದುಬಿಟ್ಟರೆ ಮುಗಿಯಲ್ಲ ಮಾಧ್ಯಮಗಳೇ, ಅದನ್ನು ಪುಶ್ ಮಾಡ್ತಾ ಇರೋದು ಮನಿ ವೇವ್… ಅಂದರೆ ಬಿಜೆಪಿ ನೀರಿನಂತೆ ಖರ್ಚು ಮಾಡುತ್ತಿರುವ ದುಡ್ಡು…ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ವಿಪರೀತ ಪಾರ್ಟಿ ಫಂಡ್ ಬಗ್ಗೆ ಚರ್ಚೆಯೇ ಆಗಿಲ್ಲ… ಈ ಕುರಿತಾಗಿ ಒಂದು ನೋಟ ಇಲ್ಲಿದೆ….

ಇವತ್ತು ದೇಶದ ಎಲ್ಲ ಬಿಜೆಪಿಯೇತರ ಪಕ್ಷಗಳು ಚುನಾವಣೆಗಾಗಿ ವೆಚ್ಚ ಮಾಡುತ್ತಿರುವ ಒಟ್ಟು ಮೊತ್ತಕ್ಕಿಂತಲೂ ಹಲವು ಪಟ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಜೊತೆಗೆ ವಿವಿಧ ರೂಪದಲ್ಲಿ ‘ಅಗೋಚರ’ ಮೂಲಗಳು ಅದಕ್ಕೆ ಹಣಕಾಸಿನ ನೆರವು ಹರಿಸುತ್ತಲೇ ಇವೆ.
ಫಂಡ್ ರೈಸಿಂಗ್: ಬಿಜೆಪಿದು ಶೇ.75!

ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದ ಎಲ್ಲ ಪಕ್ಷಗಳಿಗೆ ದೊರೆತ ಪಾರ್ಟಿ ಫಂಡಿಗಿಂತಲೂ ಹಲವು ಪಟ್ಟು ಬಿಜೆಪಿಗೆ ಲಭಿಸಿದೆ. ಆಶ್ಚರ್ಯವೇನು ಬಂತು ಅಲ್ಲವೇ… ಕಾರ್ಪೋರೇಟ್ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡ ಬಿಜೆಪಿಗೆ, ಆ ನೀತಿಗಳ ಅಕ್ರಮ ಫಲಾನುಭವಿಗಳು ಸಿಕ್ಕಾಪಟ್ಟೆ ಫಂಡ್ ಮಾಡದೇ ಇರುತ್ತಾರಾ?

ಚುನಾವಣೆ, ರಾಜಕೀಯ ವ್ಯವಹಹಾರಗಳ ಕುರಿತು ಅಧ್ಯಯನ ಮಾಡುವ ಅಶೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ (ಎ.ಡಿ.ಆರ್) ಸಂಸ್ಥೆ ಪಡೆದ ಅಧಿಕೃತ ಖಚಿತ ದಾಖಲೆಗಳ ಪ್ರಕಾರ, 2017-18ರಲ್ಲಿ ಈ ದೇಶದ ಪ್ರಮುಖ 7 ಪಕ್ಷಗಳ ಆದಾಯ (ಫಂಡ್) 1,397.90 ಕೋಟಿ ರೂಪಾಯಿ. ಇದರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿ. ಅಂದರೆ ಶೇ 73.5ರಷ್ಟು ಪಾರ್ಟಿ ಫಂಡ್ ಬಿಜೆಪಿಗೇ ಬಂದಿದೆ! ಇದು ಅಧಿಕೃತ ಮಾತ್ರ. ಅನಧಿಕೃತವಾಗಿ ಬಿಜೆಪಿಗೆ ಈ ಐದು ವರ್ಷಗಳಲ್ಲಿ ಸಾಕಷ್ಟು ‘ಪೇಮೆಂಟ್’ ಆಗಿಯೇ ಆಗಿದೆ.

ಬಿಜೆಪಿಯ ಆದಾಯ 1,027.34 ಕೋಟಿಯಲ್ಲಿ ದೇಣಿಗೆ ಮೂಲಕವೇ ಜಾಸ್ತಿ ಬಂದಿದ್ದು ಅದು 989 ಕೋಟಿ ರೂಪಾಯಿ! ಇದು ಕೇವಲ 2017-18ರ ಅಂಕಿಅಂಶ… ಕಪ್ಪುಹಣ ನಿರ್ನಾಮ ಮಾಡಿದೆವು ಎನ್ನುವ ಪ್ರಧಾನಿಯ ಪಾರ್ಟಿಗೆ ಬಂದ ಈ ದೇಣಿಗೆಗಳ ಮೂಲ ಬಿಳಿ ಹಣದ ವಹಿವಾಟು ಖಂಡಿತ ಇರಲಾರದು. ಕಾಂಗ್ರೆಸ್ ಏನ್ ಕಡಿಮೆಯಾ? ಅದಕ್ಕೂ 143 ಕೋಟಿ ರೂಪಾಯಿ ಅದೇ ವರ್ಷದಲ್ಲಿ ದೇಣಿಗೆ ರೂಪದಲ್ಲಿ ಬಂದು ಬಿದ್ದಿದೆ!

ಈ ಬೇನಾಮಿ ಹಣದ ಮೂಲ ಯಾವುದು?
2017ರಲ್ಲಿ ಬಿಜೆಪಿ ಸರ್ಕಾರದಿಂದ ಜಾರಿಗೆ ಬಂದ ಚುನಾವಣಾ ಬಾಂಡ್ ( ಈ ಕುರಿತಾಗಿ ಪರ-ವಿರೋಧ ವಾದ ಇದ್ದೇ ಇದೆ) ನಿಯಮ ಬಿಜೆಪಿಗೇ ಹೆಚ್ಚು ‘ಲಾಭ’ದಾಯಕವಾಗಿದೆ. ಬಾಂಡ್‍ಗಳ ಮೂಲಕ ಪಾರ್ಟಿ ಫಂಡ್ ನೀಡುವವರ ವಿವರವೇ ಗೊತ್ತಾಗುವುದಿಲ್ಲ. ಈ ‘ಅನಾಮಧೇಯ’ ಮೂಲಗಳು ಎಲ್ಲ ಪ್ರಮುಖ ಪಕ್ಷಗಳಿಗೂ ದೇಣಿಗೆ ನೀಡುತ್ತವೆ. ಆದರೆ, ದೇಶದ ಇತಿಹಾಸದಲ್ಲೇ ಈ ಸಲ ಭಾರಿ ಎನ್ನುವಂತಹ ಫಂಡ್ ಸಿಕ್ಕಿದ್ದು ಬಿಜೆಪಿಗೇ! ಒಂದು ಉದಾಹರಣೆ: 2017-18ರಲ್ಲಿ ಆರ್‍ಬಿಐ 215 ಕೋಟಿ ಮೊತ್ತದ ಚುನಾವಣಾ ಬಾಂಡ್‍ಗಳನ್ನು ಇಶ್ಯೂ ಮಾಡಿತು. ಅದರಲ್ಲಿ ಬಿಜೆಪಿ ಶೇರು 210 ಕೋಟಿ ರೂಪಾಯಿ, ಅಂದರೆ ಶೇ.98! ಈ ದೇಶದ ಉದ್ಯಮಪತಿಗಳಿಗೆ ತಲೆ ಕೆಟ್ಟಿದೆಯೇ? ಖಂಡಿತ ಇಲ್ಲ, ಮೋದಿ ಸರ್ಕಾರ ಅವರಿಗೆ ಬೇಕಾದುದನ್ನೆಲ್ಲ ನಮ್ಮ ತೆರಿಗೆ ಹಣದಲ್ಲಿ ಒದಗಿಸುತ್ತ ಬರುತ್ತಿದೆ. ಹೀಗಾಗಿ ಕೊಳ್ಳೆ ಹೊಡೆದ ನಮ್ಮ ತೆರಿಗೆ ಹಣದಲ್ಲಿ ಒಂದು ಪಾಲನ್ನು ಅವರು ಬಿಜೆಪಿಗೆ ನೀಡುತ್ತಿದ್ದಾರಷ್ಟೇ!

ಚುನಾವಣೆ ಹತ್ತಿರ ಬಂದಂತೆ ಈ ‘ಅನಾಮಧೇಯ’ರ ಫಂಡ್ ನೀಡುವಿಕೆ ಹೆಚ್ಚುತ್ತಲೇ ಹೋಗಿದೆ. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ 1,366 ಕೋಟಿ ಫಂಡ್ ಬಂದಿದೆ. ಇದೆಲ್ಲ ಆಲ್‍ಮೋಸ್ಟ್ ಬಿಜೆಪಿಯ ಬುಟ್ಟಿಗೆ ಬಿದ್ದಿದೆ!

ಇದಲ್ಲದೇ ಎಲ್ಲ ಪ್ರಮುಖ ಪಾರ್ಟಿಗಳಿಗೂ ಬಾಂಡ್ ಅಲ್ಲದೇ ಗುಪ್ತವಾಗಿ ನೂರಾರು ಕೋಟಿ ಬೇನಾಮಿ ದುಡ್ಡು ಹರಿದು ಬರುತ್ತಲೇ ಇದೆ. ಅದರಲ್ಲಿ ಬಿಜೆಪಿಗೆ ಶೇ. 90ಕ್ಕೂ ಹೆಚ್ಚು ಸಿಗುತ್ತಿದೆ! ಈ ಹಣದಲ್ಲೇ ಬಿಜೆಪಿಯ ಪ್ರಚಾರ ಇವತ್ತು ಜೋರಾಗಿದೆ. ಜಾಹಿರಾತು, ಪ್ರಾಯೋಜನೆ ಹೆಸರಲ್ಲಿ ಮತ್ತು ಗುಪ್ತವಾಗಿಯೂ ಅದು ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಬೇನಾಮಿ ದುಡ್ಡಿನ ಒಂದು ಪಾಲನ್ನು ನೀಡುತ್ತಿದೆ.
ಸುಮ್ಮನೇ ಮೋದಿ ವೇವ್! ಅದನ್ನೆಲ್ಲ ಪುಶ್ ಮಾಡ್ತಾ ಇರೋದು ಕಳ್ಳ ಉದ್ಯಮಿಗಳ ಬೇನಾಮಿ ಹಣ! ಅದಕ್ಕೇ ಇದು ‘MONEY WAVE’ ಅಲ್ಲವೇ?

(ಆಧಾರ: thewire.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...