Homeಮುಖಪುಟನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

ನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

- Advertisement -
- Advertisement -

ಮೊನ್ನೆಯಷ್ಟೇ 4ನೇ ಹಂತದ ಮತದಾನ ಮುಗಿದಿದೆ. ಮೋದಿ ಜನಪ್ರಿಯತೆ ಬಾಲಾಕೋಟ್ ವಾಯುದಾಳಿ ಕಾರಣದಿಂದಾಗಿ ಮತ್ತೆ ಮೊದಲಿನಷ್ಟು ಅಲ್ಲದಿದ್ದರೂ ಉತ್ತಮಗೊಂಡಿದೆ ಎಂದು ಸಮೀಕ್ಷಾ ವರದಿಯೊಂದು 3ನೇ ಹಂತದ ಮತದಾನಕ್ಕೂ ಮುಂಚೆ ಹೇಳಿತ್ತು. ಈ ಬಾಲಾಕೋಟ್ ವಾಯುದಾಳಿಯ ವಿಚಾರವೆಲ್ಲ ಹಳ್ಳಿಹಳ್ಳಿಗೆಲ್ಲ ಮುಟ್ಟಿತೆ? ಹಾಗಾಗಿದ್ದರೆ, ಈ ವಿಚಾರ ಪ್ರಸ್ತಾಪಿಸುತ್ತಲೇ ಇರುವ ಮೋದಿ ಸಹಿತ ಬಿಜೆಪಿ ನಾಯಕರ ಮಾತುಗಳನ್ನು ಪ್ರಚಾರ ಮಾಡಲು ಮಾತ್ರ ಒಂದು ದೊಡ್ಡ ಮಟ್ಟದ ವ್ಯವಸ್ಥಿತ ಯೋಜನೆ ನಡೆದಿದೆಯಲ್ಲವೇ? ಭಾರಿ ಮೊತ್ತವನ್ನು ವ್ಯಯಿಸದೇ ಅದು ಸಾಧ್ಯವೇ?

ಇಲ್ಲಿ ಮೋದಿ ವೇವ್ ಅಂದುಬಿಟ್ಟರೆ ಮುಗಿಯಲ್ಲ ಮಾಧ್ಯಮಗಳೇ, ಅದನ್ನು ಪುಶ್ ಮಾಡ್ತಾ ಇರೋದು ಮನಿ ವೇವ್… ಅಂದರೆ ಬಿಜೆಪಿ ನೀರಿನಂತೆ ಖರ್ಚು ಮಾಡುತ್ತಿರುವ ದುಡ್ಡು…ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ವಿಪರೀತ ಪಾರ್ಟಿ ಫಂಡ್ ಬಗ್ಗೆ ಚರ್ಚೆಯೇ ಆಗಿಲ್ಲ… ಈ ಕುರಿತಾಗಿ ಒಂದು ನೋಟ ಇಲ್ಲಿದೆ….

ಇವತ್ತು ದೇಶದ ಎಲ್ಲ ಬಿಜೆಪಿಯೇತರ ಪಕ್ಷಗಳು ಚುನಾವಣೆಗಾಗಿ ವೆಚ್ಚ ಮಾಡುತ್ತಿರುವ ಒಟ್ಟು ಮೊತ್ತಕ್ಕಿಂತಲೂ ಹಲವು ಪಟ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಜೊತೆಗೆ ವಿವಿಧ ರೂಪದಲ್ಲಿ ‘ಅಗೋಚರ’ ಮೂಲಗಳು ಅದಕ್ಕೆ ಹಣಕಾಸಿನ ನೆರವು ಹರಿಸುತ್ತಲೇ ಇವೆ.
ಫಂಡ್ ರೈಸಿಂಗ್: ಬಿಜೆಪಿದು ಶೇ.75!

ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದ ಎಲ್ಲ ಪಕ್ಷಗಳಿಗೆ ದೊರೆತ ಪಾರ್ಟಿ ಫಂಡಿಗಿಂತಲೂ ಹಲವು ಪಟ್ಟು ಬಿಜೆಪಿಗೆ ಲಭಿಸಿದೆ. ಆಶ್ಚರ್ಯವೇನು ಬಂತು ಅಲ್ಲವೇ… ಕಾರ್ಪೋರೇಟ್ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡ ಬಿಜೆಪಿಗೆ, ಆ ನೀತಿಗಳ ಅಕ್ರಮ ಫಲಾನುಭವಿಗಳು ಸಿಕ್ಕಾಪಟ್ಟೆ ಫಂಡ್ ಮಾಡದೇ ಇರುತ್ತಾರಾ?

ಚುನಾವಣೆ, ರಾಜಕೀಯ ವ್ಯವಹಹಾರಗಳ ಕುರಿತು ಅಧ್ಯಯನ ಮಾಡುವ ಅಶೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ (ಎ.ಡಿ.ಆರ್) ಸಂಸ್ಥೆ ಪಡೆದ ಅಧಿಕೃತ ಖಚಿತ ದಾಖಲೆಗಳ ಪ್ರಕಾರ, 2017-18ರಲ್ಲಿ ಈ ದೇಶದ ಪ್ರಮುಖ 7 ಪಕ್ಷಗಳ ಆದಾಯ (ಫಂಡ್) 1,397.90 ಕೋಟಿ ರೂಪಾಯಿ. ಇದರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿ. ಅಂದರೆ ಶೇ 73.5ರಷ್ಟು ಪಾರ್ಟಿ ಫಂಡ್ ಬಿಜೆಪಿಗೇ ಬಂದಿದೆ! ಇದು ಅಧಿಕೃತ ಮಾತ್ರ. ಅನಧಿಕೃತವಾಗಿ ಬಿಜೆಪಿಗೆ ಈ ಐದು ವರ್ಷಗಳಲ್ಲಿ ಸಾಕಷ್ಟು ‘ಪೇಮೆಂಟ್’ ಆಗಿಯೇ ಆಗಿದೆ.

ಬಿಜೆಪಿಯ ಆದಾಯ 1,027.34 ಕೋಟಿಯಲ್ಲಿ ದೇಣಿಗೆ ಮೂಲಕವೇ ಜಾಸ್ತಿ ಬಂದಿದ್ದು ಅದು 989 ಕೋಟಿ ರೂಪಾಯಿ! ಇದು ಕೇವಲ 2017-18ರ ಅಂಕಿಅಂಶ… ಕಪ್ಪುಹಣ ನಿರ್ನಾಮ ಮಾಡಿದೆವು ಎನ್ನುವ ಪ್ರಧಾನಿಯ ಪಾರ್ಟಿಗೆ ಬಂದ ಈ ದೇಣಿಗೆಗಳ ಮೂಲ ಬಿಳಿ ಹಣದ ವಹಿವಾಟು ಖಂಡಿತ ಇರಲಾರದು. ಕಾಂಗ್ರೆಸ್ ಏನ್ ಕಡಿಮೆಯಾ? ಅದಕ್ಕೂ 143 ಕೋಟಿ ರೂಪಾಯಿ ಅದೇ ವರ್ಷದಲ್ಲಿ ದೇಣಿಗೆ ರೂಪದಲ್ಲಿ ಬಂದು ಬಿದ್ದಿದೆ!

ಈ ಬೇನಾಮಿ ಹಣದ ಮೂಲ ಯಾವುದು?
2017ರಲ್ಲಿ ಬಿಜೆಪಿ ಸರ್ಕಾರದಿಂದ ಜಾರಿಗೆ ಬಂದ ಚುನಾವಣಾ ಬಾಂಡ್ ( ಈ ಕುರಿತಾಗಿ ಪರ-ವಿರೋಧ ವಾದ ಇದ್ದೇ ಇದೆ) ನಿಯಮ ಬಿಜೆಪಿಗೇ ಹೆಚ್ಚು ‘ಲಾಭ’ದಾಯಕವಾಗಿದೆ. ಬಾಂಡ್‍ಗಳ ಮೂಲಕ ಪಾರ್ಟಿ ಫಂಡ್ ನೀಡುವವರ ವಿವರವೇ ಗೊತ್ತಾಗುವುದಿಲ್ಲ. ಈ ‘ಅನಾಮಧೇಯ’ ಮೂಲಗಳು ಎಲ್ಲ ಪ್ರಮುಖ ಪಕ್ಷಗಳಿಗೂ ದೇಣಿಗೆ ನೀಡುತ್ತವೆ. ಆದರೆ, ದೇಶದ ಇತಿಹಾಸದಲ್ಲೇ ಈ ಸಲ ಭಾರಿ ಎನ್ನುವಂತಹ ಫಂಡ್ ಸಿಕ್ಕಿದ್ದು ಬಿಜೆಪಿಗೇ! ಒಂದು ಉದಾಹರಣೆ: 2017-18ರಲ್ಲಿ ಆರ್‍ಬಿಐ 215 ಕೋಟಿ ಮೊತ್ತದ ಚುನಾವಣಾ ಬಾಂಡ್‍ಗಳನ್ನು ಇಶ್ಯೂ ಮಾಡಿತು. ಅದರಲ್ಲಿ ಬಿಜೆಪಿ ಶೇರು 210 ಕೋಟಿ ರೂಪಾಯಿ, ಅಂದರೆ ಶೇ.98! ಈ ದೇಶದ ಉದ್ಯಮಪತಿಗಳಿಗೆ ತಲೆ ಕೆಟ್ಟಿದೆಯೇ? ಖಂಡಿತ ಇಲ್ಲ, ಮೋದಿ ಸರ್ಕಾರ ಅವರಿಗೆ ಬೇಕಾದುದನ್ನೆಲ್ಲ ನಮ್ಮ ತೆರಿಗೆ ಹಣದಲ್ಲಿ ಒದಗಿಸುತ್ತ ಬರುತ್ತಿದೆ. ಹೀಗಾಗಿ ಕೊಳ್ಳೆ ಹೊಡೆದ ನಮ್ಮ ತೆರಿಗೆ ಹಣದಲ್ಲಿ ಒಂದು ಪಾಲನ್ನು ಅವರು ಬಿಜೆಪಿಗೆ ನೀಡುತ್ತಿದ್ದಾರಷ್ಟೇ!

ಚುನಾವಣೆ ಹತ್ತಿರ ಬಂದಂತೆ ಈ ‘ಅನಾಮಧೇಯ’ರ ಫಂಡ್ ನೀಡುವಿಕೆ ಹೆಚ್ಚುತ್ತಲೇ ಹೋಗಿದೆ. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ 1,366 ಕೋಟಿ ಫಂಡ್ ಬಂದಿದೆ. ಇದೆಲ್ಲ ಆಲ್‍ಮೋಸ್ಟ್ ಬಿಜೆಪಿಯ ಬುಟ್ಟಿಗೆ ಬಿದ್ದಿದೆ!

ಇದಲ್ಲದೇ ಎಲ್ಲ ಪ್ರಮುಖ ಪಾರ್ಟಿಗಳಿಗೂ ಬಾಂಡ್ ಅಲ್ಲದೇ ಗುಪ್ತವಾಗಿ ನೂರಾರು ಕೋಟಿ ಬೇನಾಮಿ ದುಡ್ಡು ಹರಿದು ಬರುತ್ತಲೇ ಇದೆ. ಅದರಲ್ಲಿ ಬಿಜೆಪಿಗೆ ಶೇ. 90ಕ್ಕೂ ಹೆಚ್ಚು ಸಿಗುತ್ತಿದೆ! ಈ ಹಣದಲ್ಲೇ ಬಿಜೆಪಿಯ ಪ್ರಚಾರ ಇವತ್ತು ಜೋರಾಗಿದೆ. ಜಾಹಿರಾತು, ಪ್ರಾಯೋಜನೆ ಹೆಸರಲ್ಲಿ ಮತ್ತು ಗುಪ್ತವಾಗಿಯೂ ಅದು ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಬೇನಾಮಿ ದುಡ್ಡಿನ ಒಂದು ಪಾಲನ್ನು ನೀಡುತ್ತಿದೆ.
ಸುಮ್ಮನೇ ಮೋದಿ ವೇವ್! ಅದನ್ನೆಲ್ಲ ಪುಶ್ ಮಾಡ್ತಾ ಇರೋದು ಕಳ್ಳ ಉದ್ಯಮಿಗಳ ಬೇನಾಮಿ ಹಣ! ಅದಕ್ಕೇ ಇದು ‘MONEY WAVE’ ಅಲ್ಲವೇ?

(ಆಧಾರ: thewire.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...