Homeಕರ್ನಾಟಕ‘ಎಲ್ಲಾ ಬಿಟ್ಟ ಬಿಜೆಪಿ’- ಕೊರೊನಾ ವಿರುದ್ಧ ಹೋರಾಡಲಿಲ್ಲ, ವೈರಸ್ ಜೊತೆಗೇ ಒಳ ಒಪ್ಪಂದ!

‘ಎಲ್ಲಾ ಬಿಟ್ಟ ಬಿಜೆಪಿ’- ಕೊರೊನಾ ವಿರುದ್ಧ ಹೋರಾಡಲಿಲ್ಲ, ವೈರಸ್ ಜೊತೆಗೇ ಒಳ ಒಪ್ಪಂದ!

- Advertisement -
- Advertisement -

ಸಂಸದ ತೇಜಸ್ವಿ ಸೂರ್ಯ ಮಂಗಳವಾರ (ನಿನ್ನೆ) ಅದೇನೋ ಕಂಡುಹಿಡಿದವರಂತೆ ಪೋಸ್ ಕೊಟ್ಟಿದ್ದಾರೆ. ಕೇಂದ್ರ, ರಾಜ್ಯಗಳಲ್ಲಿ, ಬಿಬಿಎಂಪಿಯಲ್ಲಿ ಅವರ ಪಕ್ಷದ ಅಧಿಕಾರವಿದೆ. ಬಿಬಿಎಂಪಿ ವ್ಯಾಪ್ತಿಯ ಶಾಸಕರೂ ಕೂಡ ಬಿಜೆಪಿಯವರೆ. ಹಾಗಾದರೆ, ಸಂಘಪರಿವಾರದ ಹೊಸ ಪೋಸ್ಟರ್ ಬಾಯ್ ಆಗುತ್ತಿರುವ ಸಂಸದ ತೇಜಸ್ವಿ ಸೂರ್ಯ ಯಾರ ವಿರುದ್ಧ ಅಪಾದನೆ ಮಾಡಿದರು? ತಾತ್ವಿಕವಾಗಿ ನೋಡಿದರೆ, ಅವರು ಬಿಜೆಪಿ ವಿರುದ್ಧ, ತಮ್ಮ ಬೆಂಗಳೂರು ಶಾಸಕರ ವಿರುದ್ಧ, ಅವರಿಗೇ ಗೊತ್ತಿಲ್ಲದೇ ಅವರದೇ ವಿರುದ್ಧ ಮತ್ತು ಕೊನೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ವಿರುದ್ಧವೂ ಅಪಾದನೆ ಮಾಡಿ, ತಮ್ಮ ಜೊತೆಗೆ ಕಟಕಟೆಯಲ್ಲಿ ಯಡಿಯೂರಪ್ಪ ಮತ್ತು ಮೋದಿಯವರನ್ನೂ ನಿಲ್ಲಿಸಿದ್ದಾರೆ.

ಆ ಮಟ್ಟಿಗೆ ಈ ಸಂಸದರಿಗೆ ಥ್ಯಾಂಕ್ಸಸ್ ಹೇಳಬೇಕು. ಆದರೆ, ಹಾಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಅವರು ಪ್ರೆಸ್‌ಮೀಟ್ ಮಾಡಿದ ತಕ್ಷಣ, ಬಿಜೆಪಿ ಐಟಿ ಸೆಲ್ (ಪೂರ್ವ ನಿಯೋಜನೆಯಂತೆ?) ಕಾರ್ಯಾಚರಣಗೆ ಇಳಿದು, ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತು.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

‘ಯಾವಾಗ ತೇಜಸ್ವಿ ಸೂರ್ಯ, ಇದು ಬಿಬಿಎಂಪಿ ವಾರ್‌ರೂಮೋ ಅಥವಾ ಮದರಸಾನೋ ಎಂದು ಕೇಳಿದಾಗಲೇ, ಇದು ಮುಸ್ಲಿಮರನ್ನು ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ಎಂಬುದು ಸ್ಪಷ್ಟವಾಗಿತ್ತು’ ಎಂದು ನಟ ಅಹಿಂಸಾ ಚೇತನ್ ಟ್ವೀಟ್ ಮಾಡುವುದರಲ್ಲಿ ಸತ್ಯ ಇದೆ.

‘ತೇಜಸ್ವಿ ಸೂರ್ಯ ಒಬ್ಬ ಚೈಲ್ಡ್ ಎಂಬ ನಿರ್ಲಕ್ಷಿಸುವಿಕೆಯನ್ನು ಪ್ರಗತಿಪರರು ಬಿಡಬೇಕು. ಆತ ದಕ್ಷಿಣ ಭಾರತದ ಅಗ್ರ ಹಿಂದೂ ಭಯೋತ್ಪಾದಕ’ ಎಂದು ಪತ್ರಕರ್ತ ಆದಿತ್ಯ ಭಾರದ್ವಾಜ್ ಪೋಸ್ಟ್ ಮಾಡಿದ್ದಾರೆ.

ಕಳೆದ ವಾರ ನಾನುಗೌರಿ.ಕಾಂನಲ್ಲಿ, ‘ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾದ ಸಂಸದ ತೇಜಸ್ವಿ ಸೂರ್ಯ ಎಂಬ ವರದಿ ಪ್ರಕಟಿಸಿದ್ದೆವು. ಈಗ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಸಾವು ಸಂಭವಿಸಿದ ನಂತರ, ಸಂಘದ `ನೀಲಗಣ್ಣಿನ ಹುಡುಗ’ (blue eyed boy!) ನನ್ನು ಕಣಕ್ಕೆ ಇಳಿಸಿ, ಕೋವಿಡ್ ನಿಯಂತ್ರಣ ವೈಫಲ್ಯ ಮರೆಮಾಚುವ ಕೆಲಸಕ್ಕೆ ದೂಕಲಾಗಿದೆ.

ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

ಮೇ. 2 ರಿಂದಲೇ ಕೋಮು ವೈರಸ್!

ಕೊರೋನಾ ವೈರಸ್‌ಗಿಂತ ಅಪಾಯಕಾರಿಯಾದ ಸಂಘಪರಿವಾರದ ಕೋಮು ವೈರಸ್, ಮೇ 2 ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾದ ಕೂಡಲೇ ಮತ್ತಷ್ಟು ಸಕ್ರಿಯವಾಗಿದೆ. ಅದು ಕೊರೊನಾದಿಂದ ಸಾಯುತ್ತಿರುವ, ನರಳುತ್ತಿರುವ ಜನರ ಜೊತೆ ನಿಲ್ಲದೇ, ಕೊರೊನಾ ಜೊತೆಗೇ ಮೈತ್ರಿ ಮಾಡಿಕೊಂಡಂತಿದೆ.

ಬಂಗಾಳದ ಸೋಲು ಅದಕ್ಕೆ ಮರ್ಮಾಘಾತ ಮಾಡಿದೆ. ಚುನಾವಣೆಗಳ ನಂತರ ನಡೆಯುವ ಸ್ಥಳೀಯ ಕಿತ್ತಾಟಗಳನ್ನು ಅದು, ಕಡ್ಡಿಯನ್ನು ಗುಡ್ಡ ಮಾಡಿ ಬಿಂಬಿಸಲು ಹೊರಟಿದೆ. ಬಂಗಾಳದಲ್ಲಿ ಹಿಂದೂಗಳು ’ಖತರೆ ಮೆಂ ಹೈ’ ಎಂಬ ಸಂದೇಶವನ್ನು ತನ್ನ ಹಿಂಬಾಲಕರಿಗೆ ತಲುಪಿಸಿದೆ. ಅದರ ಪರಿಣಾಮವೇ ಪ್ರಕಾಶ್ ಬೆಳವಾಡಿ ಅಂತಹ ಜೀವ ವಿರೋಧಿ ಪೋಸ್ಟ್ ಹಾಕಿದ್ದು. ಕಂಗನಾ ಎಂಬ ಚೆಲುವೆ ಹಿಂಸಾಚಾರ ಬೆಂಬಲಿಸುವ ಅರ್ಜೆಂಟಿನಲ್ಲಿ, 2002 ರ ಗುಜರಾತ್ ಹತ್ಯಾಕಾಂಡಕ್ಕೆ ಮೋದಿಯೇ ಕಾರಣ ಎಂದು ಪರೋಕ್ಷವಾಗಿ ಹೇಳಿ ತೊಂದರೆಗೆ ಸಿಲುಕಿದ್ದು!

ಇಲ್ಲಿ ನಡೆದ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾಕ್ಷೇತ್ರಗಳಲ್ಲಿ ಗಲಾಟೆಯಿಲ್ಲ, ಆದರೆ ಸೋತ ಮಸ್ಕಿಯಲ್ಲಿ ಪ್ರತಾಪಗೌಡರ ಮಕ್ಕಳಾದ ರಾಜೇಶ್ ಮತ್ತು ಚೇತನ್ ಗ್ಯಾಂಗ್ ಕಾಂಗ್ರೆಸ್ಸಿಗರ ಮೇಲೆ ಹಲ್ಲೆ ನಡೆಸಿದೆ, ಈ ಕುರಿತು ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜನ ಠಾಣೆಗೆ ಮುತ್ತಿಗೆಯನ್ನು ಹಾಕಿದ್ದಾರೆ.

ಇದನ್ನೂ ಓದಿ: BJP ಎಂದೂ ಸಂವಿಧಾನವನ್ನು ನಂಬುವುದಿಲ್ಲ: ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಇಂಥದ್ದು ಬಂಗಾಳದಲ್ಲೂ ನಡೆದಿರಬಹುದು, ಅಲ್ಲಿ ಹತಾಶರಾದ ಬಿಜೆಪಿ ಕಾರ್ಯಕರ್ತರು ಗಲಾಟೆಗೆ ಇಳಿದಿರಬಹುದು ಅಥವಾ ರಾಜಕೀಯ ಹಿಂಸೆಯಲ್ಲಿ ಪಳಗಿರುವ ಟಿಎಂಸಿ ಕಾರ್ಯಕರ್ತರು ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರಬಹುದು. ಇದು ಕಾನೂನು ವ್ಯವಸ್ಥೆಯ ವೈಫಲ್ಯದ ಪ್ರಶ್ನೆ. ಇದು ಅಪಾಯದ ಮಟ್ಟ ಮುಟ್ಟಿ ಅಲ್ಲಿ 14 ಜನ ಪ್ರಾಣ ತೆತ್ತಿದ್ದಾರೆ ಎನ್ನಲಾಗಿದೆ.

ಆದರೆ ಈ ಸಂದರ್ಭ ಬಳಸಿಕೊಂಡ ಬಿಜೆಪಿ, ಅಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಕೋಮುವಿಷ ಹರಡತೊಡಗಿತು. ಬಂಗಾಳದ ಹೀನಾಯ ಸೋಲು, ಆರ್ಭಟಿಸಿದ ಮೋದಿ-ಶಾಗಳಿಗಾದ ಅವಮಾನ ಮತ್ತು ಇದಕ್ಕೂ ಮುಖ್ಯವಾಗಿ ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದ ಸಂಫೂರ್ಣ ವೈಫಲ್ಯವನ್ನು ಮುಚ್ಚಿಡಲು ಜನರ ಗಮನ ಬೇರೆ ಕಡೆ ಸೆಳೆಯುವ ಉದ್ದೇಶದಲ್ಲಿ ಬಂಗಾಳ ಗಲಭೆ ಎಂದು ಹಳೆಯ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ.

ನಾಲ್ಕು ದಿನದ ಹಿಂದೆ, ನಮ್ಮ ಕೈಗಳಿಗೆ ರಕ್ತ ಮೆತ್ತಿದೆ; ಸಂಪಾದಕನೊಬ್ಬನ ತಪ್ಪೊಪ್ಪಿಗೆ ಎಂದು ಸಂಪಾದಕೀಯ ಬರೆದ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ಜಿ.ಎಸ್ ವಾಸು ಅವರು, ಈ ದೇಶದ ಎಲ್ಲ ಸಮಸ್ಯೆಗಳಿಗೆ ಅಲ್ಪಸಂಖ್ಯಾತರ ಅಸ್ತಿತ್ವವೇ ಕಾರಣ ಎಂದು ನಾವೆಲ್ಲ (ಮಾಧ್ಯಮಗಳು) ತಪ್ಪಾಗಿ ಬಿಂಬಿಸುತ್ತ ಬಂದೆವು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ಈಗ ಬಂಗಾಳದ ಸೋಲಿಗೂ, ಕೋವಿಡ್ ನಿಯಂತ್ರಣದ ವೈಫಲ್ಯಕ್ಕೂ ಮುಸ್ಲಿಮರನ್ನೇ ಗುರಿ ಮಾಡಲು ಬಿಜೆಪಿ ಹೊರಟಿದೆ.

ಕಳೆದ ವಾರ ಗುಜರಾತಿನಲ್ಲಿ ನಕಲಿ ರೆಮ್ಡೆಸೆವಿರ್ ಇಂಜೆಕ್ಷನ್‌ ಮಾರಾಟ ಮಾಡುವ ಗ್ಯಾಂಗ್ ಒಂದನ್ನು ಬಂಧಿಸಲಾಗಿತು. ಬಂಧಿತರಾದ ಏಳು ಜನರಲ್ಲಿ ಇಬ್ಬರು ಮುಸ್ಲಿಮರು, ಐವರು ಹಿಂದೂಗಳಿದ್ದಾರೆ. ಆದರೆ, ಹತಾಶ ಬಿಜೆಪಿ ಬೆಂಬಲಿಗರು ಇಬ್ಬರ ಮುಸ್ಲಿಮರ ಹೆಸರನ್ನಷ್ಟೇ ಹಾಕಿ ಜಾಲತಾಣದಲ್ಲಿ ಅಪಪ್ರಚಾರ ಮಾಡಿದರು.

ಬಿಬಿಎಂಪಿ ‘ಬೆಡ್ ಬ್ಲಾಕಿಂಗ್‌’ನಲ್ಲಿ ಈವರೆಗೆ ಬಂಧಿತರಾದ ಇಬ್ಬರು ಹಿಂದೂಗಳೇ. ಆದರೆ ಜಾಲತಾಣದಲ್ಲಿ, ತೇಜಸ್ವಿ ಸೂರ್ಯ ಹೆಸರಿಸಿದ ಮುಸ್ಲಿಮರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಇಡೀ ಪ್ರಕರಣಕ್ಕೆ ಕೋಮು ಸ್ವರೂಪ ನೀಡಲು ತಿಣುಕುತ್ತಿದ್ದಾರೆ ಬಲಪಂಥೀಯ ಹತಾಶ ಮನಸ್ಸಿನ ಜೀವವಿರೋಧಿಗಳು.

ರಾಜ್ಯಕ್ಕೆ ಆಮ್ಲಜನಕ ಸರಬರಾಜು ಕುರಿತಂತೆ ರಾಜ್ಯ ಹೈಕೋರ್ಟ್ ಕೇಂದ್ರದ ವೈಫಲ್ಯವನ್ನು ಕಟು ಶಬ್ದಗಳಲ್ಲಿ ನಿನ್ನೆ ಮಂಗಳವಾರ ಟೀಕಿಸಿದೆ. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಜನರು ಅಸುನೀಗಿದ ನಂತರ, ನಿನ್ನೆ ಮಂಗಳವಾರ ಆಮ್ಲಜನಕ ಕೊರತೆಯ ಕಾರಣಕ್ಕೆ ರಾಜ್ಯದಲ್ಲಿ ಮತ್ತೆ 8 ಸಾವು ಸಂಭವಿಸಿವೆ.
ಇದೆಲ್ಲವನ್ನೂ ಕೇಂದ್ರ ಸರ್ಕಾರದ ಎದುರು ಪ್ರಶ್ನಿಸಬೇಕಿದ್ದ ತೇಜಸ್ವಿ ಸೂರ್ಯ ಮತ್ತು ಇತರ 24 ಬಿಜೆಪಿ ಸಂಸದರು `ಹಾಸಿಗೆ’ ಹಿಡಿದು ಬೆಚ್ಚಗೆ ಇದ್ದಾರೆ.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

ಇಲ್ಲಿವೆ ನೊಡಿ ಸಾಕ್ಷ್ಯಗಳು

ಬಂಗಾಳದಲ್ಲಿ ಟಿಎಂಸಿ ಭೀಕರ ಹಿಂಸಾಚಾರ ನಡೆಸುತ್ತಿದೆ ಎಂದು ಹೇಳುತ್ತ, ಅದನ್ನು ಮುಸ್ಲಿಮರ ಮೇಲೆ ಆರೋಪಿಸಲು ನೋಡಲಾಗುತ್ತಿದೆ. ಅಲ್ಲಿ ಮುಸ್ಲಿಮರ ಮೇಲೆ ಗುಜರಾತ್-2002 ರ ಹತ್ಯಾಕಾಂಡದಂತಹ ದಾಳಿ ನಡೆಯಬೇಕು ಎಂದು ಕಂಗನಾ-ಮಂಗನಾ, ಬೆಳವಾಡಿಗಳು ಆಗ್ರಹಿಸಿದ್ದಾರೆ! ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದಲ್ಲಿ ಅಲ್ಲಲ್ಲಿ ಸ್ಥಳಿಯ ಮಟ್ಟದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ, ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ ಮತ್ತು ಇದನ್ನು ಕೋಮುವಾದಿ ಆಯಾಮಕ್ಕೆ ತಿರುಗಿಸಲು ನೋಡುತ್ತಿವೆ.

ಹಳೆಯ ಫೋಟೊ ಮತ್ತು ವಿಡೀಯೋಗಳನ್ನು ಹಾಕಿ, ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸಂಭವಿಸುತ್ತಿದೆ ಎಂದು ಸುಳ್ಳು ಹರಡಲಾಗುತ್ತಿದೆ. ಅಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿ ಹಲವಾರು ಸುಳ್ಳುಗಳನ್ನು ಬಯಲು ಮಾಡಿದೆ. ಅದರಲ್ಲಿ ಕೆಲವನ್ನು ಲಿಂಕ್ ಸಮೇತ ಇಲ್ಲಿ ನೀಡಿದ್ದೇವೆ.

  • ಪ್ರಶ್ನಾರ್ಹ ಚಿತ್ರವು 2019 ರ ಮೇ ತಿಂಗಳಲ್ಲಿ ವಿದ್ಯಾಸಾಗರ್ ಕಾಲೇಜಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವಿನ ಘರ್ಷಣೆಗೆ ಸಂಬಂಧಿಸಿದೆ. ಚಿತ್ರವನ್ನು ಸ್ಟೇಟ್ಸ್‌ಮನ್ ಮತ್ತು ಸ್ವರಾಜ್ ಡಿಜಿಟಲ್ ಆಗಲೇ ಪ್ರಕಟಿಸಿವೆ. ಇದನ್ನು ಮತದಾನದ ನಂತರದ ಹಿಂಸಾಚಾರ ಎಂದು Twitter@ishowcase01 ಪ್ರಸಾರ ಮಾಡಿದ್ದು, ಅದು ಈಗ ಸಕ್ರಿಯವಾಗಿಲ್ಲ! ಗೃಹ ಸಚಿವ ಅಮಿತ್ ಶಾ ಅವರ ಬೃಹತ್ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರು ಕೋಲ್ಕತ್ತಾದ ಬೀದಿಗಳಲ್ಲಿ ಬಡಿದಾಡಿದರು ಎಂದು ಸ್ಟೇಟ್ಸ್‌ಮನ್ ವರದಿ ಮಾಡಿತ್ತು. ಈಗ ಅದನ್ನು ಚುನಾವಣಾ ಫಲಿತಾಂಸದ ನಂತರದ ಘಟನೆ ಎಂದು ಸುಳ್ಳು ಹರಡಲಾಗಿದೆ. ಅದರ ಫ್ಯಾಕ್ಟ್‌‌ಚೆಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

  • ರಾಮ ನವಮಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಳೆಯ ಚಿತ್ರವನ್ನು ಹಾಕಿ, ಇತ್ತೀಚಿನ ಅಸೆಂಬ್ಲಿ ಫಲಿತಾಂಶದ ನಂತರದಲ್ಲಿ ನಡೆದ ಹಿಂಸಾಚಾರ ಎಂದು ಸುಳ್ಳು ಹರಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ.
  • ಹಲವಾರು ಟಿಎಂಸಿ ಸದಸ್ಯರು ಅಥವಾ ಬೆಂಬಲಿಗರು ಬಂಗಾಳಿ ಗೀತೆ ’ಖೇಲಾ ಹೋಬೆ’ಗೆ ಕತ್ತಿ ಮತ್ತು ಬಂದೂಕುಗಳನ್ನು ಹಿಡಿದು ನರ್ತಿಸುವ 16 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿ ಬೆಂಬಲಿಗರು, ಮೊನ್ನೆಯ ಚುನಾವಣಾ ಫಲಿತಾಂಶದ ನಂತರದ ಘಟನೆ ಎಂದು ಅಪಪ್ರಚಾರ ಮಾಡಿದ್ದಾರೆ. ಈ ಹಾಡು ಇತ್ತೀಚಿನ ಚುನಾವಣೆಗಳಲ್ಲಿ ಟಿಎಂಸಿ ಧ್ಯೇಯ ಗೀತೆ ಆಗಿತ್ತು. ಆಲ್ಟ್ ನ್ಯೂಸ್ ಈ ವೀಡಿಯೊವನ್ನು ಕಳೆದ ವರ್ಷ ಅಪ್ಲೋಡ್ ಮಾಡಲಾಗಿದೆ ಎಂಬುದನ್ನು ಕಂಡು ಹಿಡಿದಿದೆ. ಸಂಗೀತಗಾರ ತನ್ಮೋಯ್ ಅಭಿನಾಬಾ ಬ್ಯಾನರ್ಜಿ 2021 ರಲ್ಲಿ `ಖೇಲಾ ಹೋಬೆ’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅಂದರೆ ಈ ಹಾಡು ಕಳೆದ ವರ್ಷ ಇರಲೇ ಇಲ್ಲ! ಈ ಹಾಡನ್ನು ಹಳೆಯ ವಿಡಿಯೊದಲ್ಲಿ ಸೂಪರ್ ಇಂಪೋಸ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
  • ಒಡಿಶಾದಲ್ಲಿ ಜನರು ಪೊಲೀಸರ ಮೇಲೆ ದಾಳಿ ಮಾಡಿದ ಹಳೆ ವಿಡಿಯೋ-ಫೋಟೊಗಳನ್ನು, ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರ ಎಂದು ಹಂಚಿಕೊಂಡಿದ್ದಾರೆ.
  • ಯುವಕನೊಬ್ಬನ ಸಾವಿನ ನಂತರ ಒಡಿಶಾದಲ್ಲಿ ಪೊಲೀಸ್ ವಾಹನದ ಮೇಲೆ ಜನರು ಮುಗಿಬಿದ್ದ ಹಳೆಯ ವಿಡಿಯೋವನ್ನು ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್‌ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿದ ಟ್ವಿಟರ್‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...