Homeಕರ್ನಾಟಕ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

- Advertisement -
- Advertisement -

ಯಾವ ಆಯಾಮದಲ್ಲಿ ನೋಡಿದರೂ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ಉದ್ರೇಕಕಾರಿ ಭಾಷೆ ಹೊಂದಿದೆ, ಅದರಲ್ಲಿ ಮುಸ್ಲಿಮರು ಅನ್ಯರು ಎಂಬ ವಾಸನೆ ಇದೆ. 2002 ರ ಗುಜರಾತ್ ಹತ್ಯಾಕಾಂಡದ ಸಮರ್ಥನೆಯಿದೆ. ಗೋಧ್ರಾ ಘಟನೆ ನಂತರ ನಾನು ಊಹಿಸಿದಂತೆ ಅಲ್ಲಿ ದೊಡ್ಡ ಪ್ರತೀಕಾರ ನಡೆಯಿತು ಎಂಬ ’ಹೆಮ್ಮೆಯೂ’ ಇದೆ.

ಅವರ ಪೋಸ್ಟಿನಲ್ಲಿ ಅಲ್ಪಸಂಖ್ಯಾತರ ಮೇಲೆ ’ಸಂಘಪರಿವಾರ’ ನಡೆಸುವ ದಾಳಿಗೆ ಪರೋಕ್ಷ ಬೆಂಬಲವಿದೆ. ಮೊದಲಿನಿಂದಲೂ ಬಿಜೆಪಿ ಆರಾಧಕರೇ ಆಗಿರುವ ಅವರು, ಈ ಮಟ್ಟಿಗೆ ಭಜರಂಗದಳದ ಪುಂಡರ ಭಾಷೆ ಬಳಸುತ್ತಾರೆ, ದ್ವೇಷ ಕಕ್ಕುತ್ತಾರೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈಗ ಅವರು ಗುಜರಾತ್ ಹತ್ಯಾಕಾಂಡ ಬಂಗಾಳದಲ್ಲಿ ನಡೆದೇ ನಡೆಯುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಈ ಪೋಸ್ಟ್ ಇರುವ ಕಾರಣಕ್ಕೆ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ಇದನ್ನು ಎಲ್ಲ ರಾಜ್ಯಗಳಿಗೂ ಹರಡತೊಡಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ

ಅವರ ಪೋಸ್ಟ್ ಮೊದಲು ಓದಿ ಬಿಡಿ:

“27 ಫೆಬ್ರುವರಿ 2002 ರ ಬೆಳಿಗ್ಗೆ, ಗೋದ್ರಾ ಬಳಿ ರೈಲಿನಲ್ಲಿ 59 ಮಂದಿ ಕರಸೇವಕರನ್ನ ಸುಟ್ಟು ಕೊಂದಾಗ, ನನ್ನ ಒಬ್ಬ ಉದಾರವಾದಿ ನಿಲುವಿನ ಲಿಬರಲ್ ಗೆಳೆಯ – ಈಗ ಅವನ ಜೊತೆ ಗೆಳೆತನ ಇಲ್ಲ- ಅಹ್ಮದಾಬಾದಿನಿಂದ ಫೋನ್ ಮಾಡಿ, `ಇದು ಸಂಘಿಗಳಿಗೆ ಸರಿಯಾದ ಪಾಠ ಕಲಿಸುತ್ತದೆ’ ಅಂತ ಏನೋ ಹೇಳಿದ್ದ. ನಾನು ಹೇಳಿದ್ದೆ, ಇದಕ್ಕೆ ನೀಡಲಿರುವ ಪ್ರತೀಕಾರ ತ್ವರಿತವಾಗಿರುತ್ತದೆ ಮತ್ತು ಭೀಕರವಾಗಿರುತ್ತದೆ ಎಂದು. ಅದು ಹಾಗೇ ಆಯ್ತು.

ಹೌದು, ಗುಜರಾತಿನಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 8% ಇರುವ ಕಾರಣ ಆ ಗಲಭೆ ಏಕಪಕ್ಷೀಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬೇರೆ ಸನ್ನಿವೇಶವಿದೆ. ಮುಸ್ಲಿಮರು 30% ಇದ್ದಾರೆ. ಹೀಗಾಗಿ, ಪ್ರತೀಕಾರ ಅಷ್ಟೊಂದು ತ್ವರಿತವಾಗಿರುವುದಿಲ್ಲ. ಆದರೆ ತಪ್ಪು ತಿಳಿದುಕೊಳ್ಳಬೇಡಿ, ಅದು ಆಗಿಯೇ ಆಗುತ್ತದೆ. ಸಮಯ ಆದ ಹಾಗೆ ಹಿಂದು-ಮುಸ್ಲಿಂ ಗಲಭೆ ಏಳಲಿದೆ. ಅದು ಆದಾಗ, ಅದು ಬಹಳ ದುರಂತಮಯವಾಗಲಿದೆ, ಕ್ರೂರವಾಗಿರಲಿದೆ ಮತ್ತು ಸಂಘಟಿತವಾಗಿ ನಡೆಯಲಿದೆ.

ಈಗ ಬಹಳ ಶಾಂತ ರೀತಿಯಿಂದ ವರ್ತಿಸುವ ರಾಜ್ಯ ಸರ್ಕಾರ ಮತ್ತು ಲಿಬರಲ್‌ಗಳು, ’ಸಂಘಿಗಳಿಗೆ ಹಾಗೆ ಆಗಬೇಕು’ ಎಂತ ತಿಳಿದುಕೊಂಡಿದ್ದಾರೆ… ನಂತರ ಇವರೆಲ್ಲ ಲೆಕ್ಕಾಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತದೆ. ಈಗಾಗಲೇ ಇದನ್ನ ತಡೆಯಲು ಬಹಳ ತಡವಾಗಿದೆ” ಎಂದು ಪ್ರಕಾಶ್‌ ಬೆಳವಾಡಿ ಹೇಳಿದ್ದಾರೆ.

ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಸರ್ಕಾರದ ಒಂದು ಕೋಟಿ ರೂ. ಅನುದಾನದಲ್ಲಿ ಭೈರಪ್ಪನವರ ’ಪರ್ವ’ ಕೃತಿಯನ್ನು ನಾಟಕವಾಗಿ ರೂಪಾಂತರಿಸುವ ಕೆಲಸದಲ್ಲಿರುವ ಪ್ರಕಾಶ್ ಅವರಿಗೆ, ಬಂಗಾಳ ಚುನಾವಣೆಯಲ್ಲಿ ಬಿಜೆಪಿಗಾದ ಹೀನಾಯ ಸೋಲು ತೀವ್ರವಾಗಿ ತಾಕಿದಂತಿದೆ.

ಚುನಾವಣಾ ಫಲಿತಾಂಶದ ನಂತರ ನೆಡೆಯುವ ಗಲಾಟೆಗಳನ್ನು ದೊಡ್ಡದು ಮಾಡಿ, ಹಳೆಯ ವಿಡಿಯೋಗಳನ್ನು ಹಾಕಿ, ’ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ’ ಎಂದು ಅಭಿಯಾನ ಮಾಡುತ್ತಿರುವ ಬಿಜೆಪಿಯ ಐಟಿ ಸೆಲ್ ಮತ್ತು ಅದರ ಬೆಂಬಲಿಗರ ಜಾಯಮಾನದಲ್ಲೇ ಪ್ರಕಾಶ ಬೆಳವಾಡಿಯವರ ಪೋಸ್ಟ್ ಕೂಡ ಇದೆ.

ಈ ಕುರಿತು ಫೇಸ್‌ಬುಕ್ ಮತ್ತು ಇತರ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶರತ್‌ಚಂದ್ರ ಎನ್ನುವವರು, ’ಹಿಂದೆಯೂ ಎಫ್‌ಬಿಯಲ್ಲಿ ಅವರ ಪೋಸ್ಟ್ ಹೀಗೇ ಇದ್ದವಾದರೂ ನೇರವಾಗಿ ಸಂಘಪರಿವಾರದವರಂತೆ ಬರೆಯುತ್ತಿರಲಿಲ್ಲ. ಈಗ ತನ್ನ ನಿಜ ಮುಖದ ದರ್ಶನ ಮಾಡಿದ್ದಾರೆ ಈ ಬೆಳವಾಡಿ. ಈಗ ತನ್ನ ಪ್ರೊಫೈಲ್ ಅನ್ನೂ ಡಿ-ಆಕ್ಟಿವೇಟ್ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳಲ್ಲಿ ಬೆಳವಾಡಿ ಅವರ ’ಸಂಘಪರಿವಾರ’ದ ಮನಸ್ಥಿತಿಯನ್ನು ಟೀಕಿಸಲಾಗಿದೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ನಟ ಅಹಿಂಸಾ ಚೇತನ್, `ನಾನು ಆ ಪೋಸ್ಟ್ ಓದಿಲ್ಲ. ಸಾರಾಂಶ ಕೇಳಿದ್ದೇನೆ. ಬೆಳವಾಡಿಯವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾರೆ. ಅವರು ವೈಚಾರಿಕವಾಗಿ ಶೂನ್ಯರು, ಸಮಾಜ ನೋಡುವ ದೃಷ್ಟಿಕೋನವೆ ಅವರಲಿಲ್ಲ. ಈ ಕೋವಿಡ್ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತ? ಲಕ್ಷಾಂತರ ಜನ ಹಾಸಿಗೆ, ಆಕ್ಸಿಜನ್ ಇಲ್ಲದೇ ಸಾಯುತ್ತಿರುವಾಗ ಕೋಮುಗಲಭೆ ಪ್ರಚೋದಿಸುವ ಪೋಸ್ಟ್‌ಗಳನ್ನು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು. ಅವು ಮತ್ತೆ ಮುನ್ನೆಲೆಗೆ ಬರದಂತೆ ಮಾಡಬೇಕಾಗಿದೆ. ಈಗ ನಮ್ಮ ಕಾಳಜಿ ಕೋವಿಡ್ ಬಿಕ್ಕಟ್ಟನ್ನು ಪರಿಹರಿಸುವತ್ತ ಇರಬೇಕು…’ ಎಂದು ಹೇಳಿದರು.

ಕತೆಗಾರ, ನಾಟಕಕಾರ ಹನುಮಂತ ಹಾಲಿಗೇರಿ, ‘ಸಾಹಿತ್ಯ, ರಂಗಭೂಮಿ, ಕಲೆ ಇವು ಮನುಷ್ಯನ ಯೋಚನಾ ಲಹರಿಯನ್ನು ಹದ ಮಾಡಿ, ಮಾನವೀಯತೆ ಅಂಶ ಬೆಳೆಸುತ್ತವೆ. ಆದರೆ ರಂಗಭೂಮಿಯ ಹಿನ್ನೆಲೆಯ ಪ್ರಕಾಶ್ ಬೆಳವಾಡಿಯವರು ವಯಸ್ಸಾದಂತೆಲ್ಲ ಹೆಚ್ಚೆಚ್ಚು ಮಾನವೀಯರಾಗುವ ಬದಲು ಕ್ರೂರ ಮತ್ತು ಕೋಮುವಾದಿ ಸಂದೇಶಗಳನ್ನು ಹರಡುತ್ತಿರುವುದು ವಿಷಾದನೀಯ.

ಸರ್ಕಾರ ಅವರ ‘ಪರ್ವ’ ನಾಟಕ ಪ್ರದರ್ಶನಗಳಿಗೆ ಒಂದು ಕೋಟಿ ರೂ. ಅನುದಾನ ನೀಡಿದೆ. ಭೈರಪ್ಪನವರು ಆರಂಭದಲ್ಲಿ ಬರೆದ ಈ ಕಾದಂಬರಿಯಲ್ಲಿ ಕೋಮುವಾದಿ, ಜಾತಿವಾದಿ ಅಂಶಗಳಿಲ್ಲ. ಆದರೆ ಬೆಳವಾಡಿ ಅವರು ಈ ಕೃತಿ ಆಧರಿತ ನಾಟಕದಲ್ಲಿ ಕೋಮುವಿಷ ಬೆರೆಸುತ್ತಾರೇನೋ ಎಂಬ ಸಂಶಯ ಶುರುವಾಗಿದೆ’ ಎಂದು ನಾನುಗೌರಿ.ಕಾಂಗೆ ಹೇಳಿದರು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪ್ರಕಾಶ್ ಬೆಳವಾಡಿಯ ಹೇಳಿಕೆ ಕಂಡನಾರ್ಹ ಹಾಗೂ ಈ ಕಲಾವಿದ “ಮಾರಿಕೊಂಡವರು” ಗುಂಪನ್ನು ಸೇರಿದ್ದು ನೋವಿನ ಸಂಗತಿ.

  2. ಕೂಡಲೇ ಈತನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಇವನ ಮೇಲೆ ದೇಶದ್ರೋಹದ ಪ್ರಕರಣ ಹಾಕಿ ನೇಣುಗಂಬಕ್ಕೆ ಏರಿಸಿ. ಮುಂದಾಗುವ ಮತಿಯ ಘರ್ಷಣೆ ತಡೆಯಲು ಇವನ ಬಂಧನ ಹಾಗೂ ಮರಣದಂಡನೆ ಒಂದೇ ಮಾರ್ಗ.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...