ಕೊರೊನಾ ವೈರಸ್ ಒಂದು ಜೀವಂತ ಜೀವಿ, ನಮ್ಮಂತೆ ಅದಕ್ಕೂ ಬದುಕುವ ಹಕ್ಕು ಇದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಇವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿದೆ.
“ಒಂದು ತಾತ್ವಿಕ ಕೋನದಿಂದ ನೋಡಿದರೆ, ಕೊರೊನಾ ವೈರಸ್ ಸಹ ಜೀವವಿರುವ ಜೀವಿ. ಇದು ನಮ್ಮಂತೆ, ಉಳಿದವರಂತೆ ಬದುಕುವ ಹಕ್ಕನ್ನು ಹೊಂದಿದೆ. ಆದರೆ ನಾವು (ಮಾನವರು) ನಮ್ಮನ್ನು ಅತ್ಯಂತ ಬುದ್ಧಿವಂತರೆಂದು ಭಾವಿಸಿ, ಅದನ್ನು ನಾಶಮಾಡಲು ಹೊರಟಿದ್ದೇವೆ. ಆದ್ದರಿಂದ ಅದು ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ” ಎಂದು ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಆದರೂ, ಸದ್ಯಕ್ಕೆ ಮನುಷ್ಯ ಸುರಕ್ಷಿತವಾಗಿರಲು ಈ ವೈರಸ್ ಅನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: ಯಜ್ಞ ಮಾಡಿದರೆ ಕೊರೊನಾ 3ನೇ ಅಲೆ ಭಾರತವನ್ನು ಟಚ್ ಮಾಡಲ್ಲ ಎಂದ ಬಿಜೆಪಿ ಸಚಿವೆ!
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದೆ. ಇಡೀ ದೇಶವು ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವಾಗ ಈ ಹೇಳಿಕೆ ನಿಡಿರುವ ಬಗ್ಗೆ ವ್ಯಾಪಕ ಆಹ್ರೊಶ ಕೂಡ ವ್ಯಕ್ತವಾಗಿದೆ.
ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿಕೆಗೆ ವ್ಯಂಗ್ಯವಾಗಿ, “ಈ ಜೀವಂತ ವೈರಸ್ಗೆ ಸೆಂಟ್ರಲ್ ವಿಸ್ತಾದಲ್ಲಿ ಆಶ್ರಯ ನೀಡಬೇಕು” ಎಂದು ಹೇಳಿದ್ದಾರೆ.
"Corona virus is a living being and every living creature has a right to live", says BJP leader and Ex Uttarakhand CM Trivendra Singh Rawat.
With such people at the helm of affairs it should not be a surprise that our country is facing worst human tragedy in the world today. pic.twitter.com/zJBgus9o5k
— Gaurav Pandhi (@GauravPandhi) May 13, 2021
ಇದನ್ನೂ ಓದಿ: ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಸಿಟಿ ರವಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಚಿವ!
ಕೊರೊನಾ ವೈರಸ್ ಒಂದು ಜೀವಿಯಾಗಿದ್ದು, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ”ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉತ್ತರಾಖಂಡದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳುತ್ತಾರೆ. ಇಂತಹ ಜನರು ಅಧಿಕಾರದ ಚುಕ್ಕಾಣಿ ಹಿಡಿದಿರುವಾಗ, ನಮ್ಮ ದೇಶವು ಇಂದು ವಿಶ್ವದ ಅತ್ಯಂತ ಕೆಟ್ಟ ಮಾನವ ದುರಂತವನ್ನು ಎದುರಿಸುತ್ತಿದೆ ಎಂಬುದರ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ” ಎಂದು ಟ್ವಿಟರ್ ಬಳಕೆದಾರರು ಎಂದಿದ್ದಾರೆ.
Corona Virus deserves to live, it has a right to life- BJP legislator and until recently Uttarakhand CM Trivendra Singh Rawat pic.twitter.com/jZXWjTYLct
— Dushyant (@atti_cus) May 14, 2021
हिन्दू मुस्लिम और धर्म की अफीम चाटी है हमने इसीलिए ऐसे महाज्ञानी @tsrawatbjp राज कर रहे हैं देश और प्रदेश पर। आप भी इनका प्रवचन सुन लें। @Devendra_1925 @pritamSpcc @INCUttarakhand @ANI @sb_11 pic.twitter.com/AY0EvzHYYb
— Suryakant Dhasmana (@SuryaKDhasmana) May 13, 2021
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆಗೆ ವ್ಯಾಪಕ ವಿರೋಧ: ಪೋಟೋ, ವಿಡಿಯೊ ನಿಷೇಧಿಸಿದ ಸರ್ಕಾರ
ಹ್ಯಾಲೊ ಬಿಜೆಪಿ ಕರೋನಾ ವೈರಸನ್ನು ನಿಮ್ಮಾ ಮನೆಗೆ ಕಾರ್ಕೊಡು ಹೊಗಿ ಕಟ್ಟಿ ಅಕೂ
Halo BJP coronavirus virus has been found in your home
(TT)