Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

- Advertisement -
- Advertisement -

ಪೂರ್ವ ಜೆರುಸಲೆಮ್‌ನ ಶೇಕ್ ಜರ್‍ರಾಹ್‌‌ ಪ್ರದೇಶದಲ್ಲಿ ಹಲವಾರು ಪ್ಯಾಲೇಸ್ತೀನಿ ಕುಟುಂಬಗಳನ್ನು ಗಡಿಪಾರು ಮಾಡಲು ಜೆರುಸಲೆಮ್ ಜಿಲ್ಲಾ ನ್ಯಾಯಾಲಯ ತೀರ್ಪಿತ್ತ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದೀಗ ಅಲ್ಲಿ ಇಸ್ರೇಲ್‌ ಸೇನೆಗೆ ಹಿನ್ನಡೆಯಾಗಿದೆ ಎಂದು ವರದಿಯಾಗಿದ್ದು, ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಕೊಂಡಿದೆ. “ಸೋಮವಾರ (ಮೇ 10) ಗಾಝಾದಲ್ಲಿ ಕನಿಷ್ಠ 136 ಜನರು ಸಾವನ್ನಪ್ಪಿದ್ದಾರೆ. 34 ಮಕ್ಕಳು ಮತ್ತು 21 ಮಹಿಳೆಯರು ಸೇರಿದಂತೆ 950 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿ ವೈದ್ಯರು ಹೇಳಿದ್ದಾರೆ” ಎಂದು ರಾಯಿಟರ್ಸ್ ವರದಿ ಮಾಡಿತ್ತು.

ಭಾರತದಲ್ಲಿ ಇಸ್ರೇಲ್‌ನ ಕೃತ್ಯವನ್ನು ಬೆಂಬಲಿಸುವ ಕೆಲ ಬಲಪಂಥೀಯರು, ಮಕ್ಕಳ ಮುಖಕ್ಕೆ ಕೆಂಪು ಬಣ್ಣವನ್ನು ಹಚ್ಚುವ ವಿಡಿಯೊವೊಂದನ್ನು ವೈರಲ್‌ ಮಾಡಿದ್ದಾರೆ. ಅದರಲ್ಲಿ, “ಜಾಗತಿಕ ಸಹಾನುಭೂತಿ ಪಡೆಯಲು ಮತ್ತು ಇಸ್ರೇಲನ್ನು ಕೆಟ್ಟದಾಗಿ ಬಿಂಬಿಸಲು, ಗಾಝಾದ ಪ್ಯಾಲೆಸ್ತೀನಿಯರು ಮಕ್ಕಳ ಮುಖದ ಮೇಲೆ ನಕಲಿ ರಕ್ತವನ್ನು ಮತ್ತು ನಕಲಿ ಗಾಯಗಳನ್ನು ಮಾಡಿ ಚಿತ್ರಿಸುತ್ತಿದ್ದಾರೆ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.

ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ: ಬಲಪಂಥೀಯ ಮಹಿಳೆ ಮೇಲೆ ಕ್ರಮಕ್ಕೆ ಮುಂದಾದ ಕೋಲ್ಕತ್ತ ಪೊಲೀಸ್!

ಬಿಜೆಪಿ ಒಬಿಸಿ ಮೋರ್ಚಾ ಹರಿಯಾಣ ರಾಜ್ಯ ಉಪಾಧ್ಯಕ್ಷೆ ಎಂದು ಗುರುತಿಸಿಕೊಂಡಿರುವ ಮಾಯಾ ಯಾದವ್ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ.

PM झालावाडी (@ PMPATEl1969) ಮತ್ತು ಜನ್ಮಜಿತ್ ಸಿನ್ಹಾ (@ Impregnable007) ಸೇರಿದಂತೆ ಹಲವಾರು ಜನರು ಇದನ್ನು ಟ್ವಿಟರ್‌ನಲ್ಲಿ ಹಂಚಿದ್ದಾರೆ.

ಈ ವಿಡಿಯೋವನ್ನು ಬಲಪಂಥೀಯರು ಫೇಸ್‌‌ಬುಕ್‌ನಲ್ಲಿ ಕೂಡಾ ವೈರಲ್‌ ಮಾಡಿದ್ದಾರೆ. ದೀಕ್ಷಿತ್‌ ಶೆಟ್ಟಿಗಾರ್‌ ಕೊಣಾಜೆ ಎಂಬವರು ಹಾಕಿರುವ ಈ ವಿಡಿಯೊ ಇದುವರೆಗೂ 193 ಶೇರ್‌ ಆಗಿದೆ. ಅದರ ಆರ್ಕೈವ್ ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಇದು ಹಳೆಯ ವೀಡಿಯೊವಾಗಿದ್ದು, ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೊವನ್ನು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ಆಲ್ಟ್‌‌ ನ್ಯೂಸ್‌ ಹುಡುಕಾಡಿದೆ. ಗೂಗಲ್‌ನಲ್ಲಿ ಈ ವಿಡಿಯೊ ಬಗ್ಗೆ 2018 ರಲ್ಲಿ ಫ್ರಾನ್ಸ್ 24 ಮತ್ತು ಸ್ನೋಪ್ಸ್ ಪ್ರಕಟಿಸಿದ ಫ್ಯಾಕ್ಟ್-ಚೆಕ್ ವರದಿಗಳು ಕಂಡುಬಂದಿದೆ. ದೀರ್ಘ ವೀಡಿಯೊವನ್ನು ಕ್ಲಿಪ್‌ ಅನ್ನು ಕಟ್‌ ಮಾಡಿ ಇಸ್ರೇಲಿ ಮತ್ತು ಸಿರಿಯನ್ ಪಡೆಗಳ ದೌರ್ಜನ್ಯ ಎಂದು ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ಪ್ಯಾಲೇಸ್ಟಿನಿಯನ್ ವೆಬ್‌ಸೈಟ್ ‘ದಿ ಗಾಝಾ ಪೋಸ್ಟ್‌’ನ ಸುದ್ದಿ ವರದಿಯಿಂದ ಈ ವೀಡಿಯೊ ಕ್ಲಿಪ್ ಪಡೆಯಲಾಗಿದೆ. “ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರು ಪ್ಯಾಲೇಸ್ತೀನಿಯನ್ ಸಿನೆಮಾ ಸ್ಪೆಷಲ್ ಎಫೆಕ್ಟ್ಸ್ ಉದ್ಯಮದಲ್ಲಿ ಮಾಡಿದ ಕೆಲಸಗಳ ಬಗ್ಗೆ” ಈ ವಿಡಿಯೊ ವರದಿಯನ್ನು ಮಾಡಲಾಗಿದೆ ಎಂದು ಸ್ನೋಪ್ಸ್ ವರದಿ ಮಾಡಿದೆ.

ಆದರೆ  ವೈರಲ್ ಆಗುತ್ತಿರುವ ಈ ವಿಡಿಯೊವನ್ನು ಎಡಿಟ್ ಮಾಡಿ, ಮುಖಕ್ಕೆ ಗಾಯದ ಮೇಕಪ್‌ ಮಾಡುವುದನ್ನು ಮಾತ್ರ ತೋರಿಸಲಾಗಿದೆ. ಜೊತೆಗೆ ಇತರ ವಿವರಗಳ ದೃಶ್ಯಗಳನ್ನು ಕೂಡಾ ಕತ್ತರಿಸಲಾಗಿದೆ. ಆ ವಿಡಿಯೊ ಏನೆಂದು ತಿಳಿಸುವ ಅರೇಬಿಕ್ ವಿಶ್ಲೇಷಣೆಯನ್ನು ಕೂಡಾ ಮ್ಯೂಟ್ ಮಾಡಿ, ಅದರಲ್ಲಿ ತಪ್ಪಾಗಿ ಅರ್ಥೈಸುವಂತೆ ಇಂಗ್ಲಿಷ್‌ ಸಬ್‌ಟೈಟಲ್‌ ನೀಡಲಾಗಿದೆ.

ಈ ವಿಡಿಯೊವನ್ನು ವೀಕ್ಷಿಸುವಾಗ ಸುಮಾರು 20 ಸೆಕೆಂಡುಗಳಲ್ಲಿ, ಒಬ್ಬ ವ್ಯಕ್ತಿಯ ಬೆನ್ನ ಹಿಂದೆ ಶರ್ಟಿನಲ್ಲಿ ‘ಸ್ಪೆಷಲ್ ಎಫೆಕ್ಟ್ ಮೇಕಪ್’ ಎಂದು ಬರೆದ ಬರಹವನ್ನು ಕೂಡಾ ಗುರುತಿಸಬಹುದು.

ಸಾಂಪ್ರದಾಯಿಕವಾಗಿ ಪುರುಷರು ನಡೆಸುತ್ತಿರುವ ಪ್ಯಾಲೇಸ್ತೀನಿಯನ್ ಚಲನಚಿತ್ರೋದ್ಯಮಕ್ಕೆ ಮರಿಯಮ್ ಸಲಾಹ್ ಪ್ರವೇಶಿಸುವ ಬಗ್ಗೆ ‘ಟಿಆರ್‌ಟಿ ವರ್ಲ್ಡ್’ ಚಾನೆಲ್‌ ಕೂಡಾ ವೀಡಿಯೊ ವರದಿಯನ್ನು ಪ್ರಸಾರ ಮಾಡಿದೆ. ಈ ವರದಿಯಲ್ಲಿ ಕೂಡಾ ವೈರಲ್‌ ಆಗಿರುವ ಅದೇ ತುಣುಕುಗಳನ್ನು ಕಾಣಬಹುದು.

ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!

“ಗಾಜಾ ಪಟ್ಟಿಯ ಫಿಲ್ಮ್‌ಸೆಟ್‌ನಲ್ಲಿ, ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರು ಫ್ರೆಂಚ್ ಚಾರಿಟಿ ಡಾಕ್ಟರ್ಸ್ ಆಫ್ ದಿ ವರ್ಲ್ಡ್ ಯೋಜನೆಯ ಅಡಿಯಲ್ಲಿ ಪಾಲ್ಗೊಳ್ಳುವ ನಟರ ಮೇಲೆ ಭೀಕರವಾಗಿ ಕಾಣುವ ಗಾಯಗಳನ್ನು ಸೃಷ್ಟಿಸುತ್ತಿದ್ದಾರೆ. ಗಾಜಾ ನಿವಾಸಿಗಳು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಆಶಿಸಿದ್ದಾರೆ” ಎಂದು ಟಿಆರ್‌ಟಿ ವಲ್ಡ್‌‌ ನಿರೂಪಕಿ ಹೇಳುತ್ತಾರೆ.

ಚಲನಚಿತ್ರ ಯೋಜನೆಗಾಗಿ ನಟರ ಮೇಲೆ ಗಾಯಗಳನ್ನು ಕೃತಕವಾಗಿ ಮೇಕಪ್‌ ಮೂಲಕ ಮಾಡಿರುವ ಫ್ಯಾಲೆಸ್ತೀನಿ ಮೇಕಪ್ ಕಲಾವಿದೆಯ ಮೂರು ವರ್ಷಗಳ ಹಿಂದಿನ ವೀಡಿಯೊವನ್ನು, “ಗಾಜಾ ನಿವಾಸಿಗಳು ಜಗತ್ತಿನ ಅನುಕಂಪ ಗಿಟ್ಟಿಸಲು ಬೇಕಾಗಿ ಮತ್ತು ಇಸ್ರೇಲ್ ಅನ್ನು ಕೆಟ್ಟದಾಗಿ ಬಿಂಬಿಸಲು ಬೇಕಾಗಿ ನಕಲಿ ಗಾಯಗಳನ್ನು ಮಾಡುತ್ತಿದ್ದಾರೆ” ಎಂಬ ಸುಳ್ಳು ಹೇಳಿಕೆಯನ್ನು ಮತ್ತೆ ಹರಿಯಬಿಡಲಾಗಿದೆ.

ಗಾಜಾ ನಿವಾಸಿಗಳು ಸಹಾನುಭೂತಿ ಪಡೆಯಲು “ನಕಲಿ ಅಂತ್ಯಕ್ರಿಯೆ” ನಡೆಸುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದರ ಸತ್ಯಾಸತ್ಯತೆಯನ್ನು ಆಲ್ಟ್‌ನ್ಯೂಸ್ ಈ ಹಿಂದೆ ಬಿಡುಗಡೆ ಮಾಡಿತ್ತು.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿಯನ್ನು ಹಂಚಿದ ಮಾಧ್ಯಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...