Homeಅಂಕಣಗಳುಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

ಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

- Advertisement -
- Advertisement -

ಯಾಹೂ |

ಅದೊಂದು ಕಾಲದಲ್ಲಿ ಎಸ್ಸೆಸೆಲ್ಸಿಯಲ್ಲಿ ಪೇಲಾಗುವುದು ಅವಮಾನವೇ ಅಲ್ಲ. ಆದರು ಪಾಸದವರು ಸರಸ್ವತಿ ಪುತ್ರನಂತೆ ಬೀಗುತ್ತಿದ್ದರು. ಕಾಲ ಮಾಗಿದ ಬದಲಾವಣೆಯಲ್ಲಿ ಬದುಕೇ ಮುಖ್ಯವಾಗಿ, ಡಿಗ್ರಿಗಳು ಸರ್ಟಿಪಿಕೇಟುಗಳಾಗುತ್ತಿರುವ ಸಮಯದಲ್ಲಿ ಫಲಿತಾಂಶಗಳೂ ಮಹತ್ವ ಕಳೆದುಕೊಂಡಿರುವಾಗ ಮಾನ್ಯ ರೇವಣ್ಣನವರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಒನ್ ನಂಬರಿಗೆ ಬಂದಿದೆಯಂತಲ್ಲಾ. ಈ ಅಚ್ಚರಿ ಸುದ್ದಿಯನ್ನು ರೇವಣ್ಣನವರ ಜೊತೆಯಲ್ಲದೆ ಇನ್ನಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿ ಫೋನ್ ಮಾಡಿದಾಗ ರಿಂಗಾಯ್ತು.
ರಿಂಗ್‍ಠೋನ್: ಶಾರದೆ ದಯತೋರು ನೀ………. ಶಾರದೆ “ಹಲೋ ಯಾರ್ರೀ”
“ನಾನು ಸರ್ ಯಾಹು”
“ಯಾವೂ ಅಂದ್ರ್ಯಾರ್ರೀ”
“ಪತ್ರಕರ್ತ ಸರ್”
“ಏನಾಗಬೇಕು”
“ಏನೂ ಆಗಬೇಕಾಗಿಲ್ಲ ಸಾರ್, ಅಭಿನಂದನೆ ಹೇಳನ ಅಂತ ಮಾಡಿದೆ”
“ರಿಜಲ್ಟು ಬಂದ ಮ್ಯಾಲೆ ಹೇಳಿ”
“ಯಲಕ್ಷನ್ ವಿಷಯ ಅಲ್ಲ ಸಾ, ಹಾಸನ ಜಿಲ್ಲೇಲಿ ಈಸಾರಿ ಎಸೆಸೆಲ್ಸಿ ಎಕ್ಸಾಮಲ್ಲಿ ಮಕ್ಕಳು ಪ್ರಥಮ ಸ್ಥಾನಗಳಿಸಿವೆ”
“ಅದ್ಕೆ ಭವಾನಿಗೆ ಅಭಿನಂದನೆ ಹೇಳ್ರಿ”
“ಭವಾನಿ ಏನು ಮಾಡಿದ್ರು ಸಾರ್”
“ಇದೇನ್ರಿ ಹಿಂಕೇಳ್ತಿರಿ, ಭವಾನಿ ಏನು ವಸಿ ಕಷ್ಟ ಪಟ್ಳೇನ್ರಿ, ಅವುಳು ಕಷ್ಟಪಡದ ನಾನೇ ನೋಡಕ್ಕಾಗಲಿಲ್ಲ”
“ಆಶ್ಚರ್ಯ ಸಾರ್, ನಮಿಗೆ ಗೊತ್ತೇ ಇರಲಿಲ್ಲ.”
“ಅವುಳು ನನ್ನ ಮದುವೆಯಾದಾಗ ನನಿಗೇನು ಗೊತ್ತಿತ್ರಿ ಪ್ರತಿಯೊಂದನ್ನು ಕಲಿಸಿದ್ಲು.”
“ಪ್ರತಿಯೊಂದನ್ನು ಅಂದ್ರೆ ಸಾ”
“ಪೇಪರ್ ಓದದ ಕಲಿಸಿದ್ಲು, ಯಾರತ್ರ ಯಂಗೆ ಮಾತಾಡಬೇಕು ಅನ್ನದ್ರಿಂದ ಹಿಡುದು ಏನುತ್ತರ ಕೊಡಬೇಕು ಅನ್ನೋವರಿಗು ಪ್ರತಿಯೊಂದನ್ನು ಕಲಿಸಿದ್ಲು ಕಂಡ್ರಿ”
“ರಿಯಲಿ ದೇವೇಗೌಡ್ರು ಗ್ರೇಟ್ ಸಾರ್.”
“ಯಾಕ್ರೀ.”
“ತಮ್ಮ ಮಗನನ್ನ ಗ್ರಹಿಸಿ, ಅವನನ್ನ ತಿದ್ದಿ ವಿದ್ಯೆ ಬುದ್ದಿ ಕಲಸೊ ಹೆಣ್ಣು ತಂದು ಮದುವೆ ಮಾಡಿದ್ರಲ್ಲ ಅದ್ಕೆ.”
“ನಿಜವಾಗ್ಲು ಭವಾನಿ ನನ್ನ ಭಾಗಕ್ಕೆ ಕಾಳಿಕಂಡ್ರಿ.”
“ಅಷ್ಟು ವಳ್ಳೆ ಹೆಣ್ಣುಮಗಳ ಕಾಳಿ ಅಂತೀರಲಾ ಸಾರ್.”
“ನಾನೇಳದ ಸಲುಪ ತಿಳಕಳ್ರಿ, ಕವಿರತ್ನ ಸುಮ್ಮಸುಮ್ಮನೆ ಆದನೇನ್ರಿ, ಕಾಳಿ ಅವುನಿಗೆ ವಿದ್ಯೆ ಬುದ್ದಿ ಕೊಟ್ಟಮ್ಯಾಲವುನು ಕತೆ ಕವನ ಬರದ ಅಲವೇನ್ರಿ.”
“ರಿಯಲಿ ಗ್ರೇಟ್ ಸಾರ್, ಭವಾನಿ ನಿಮ್ಮ ಭಾಗದ ಸರಸ್ವತಿ; ರೇವಣ್ಣನಿಗೆ ವಿದ್ಯಾಬುದ್ದಿ ಕಲಿಸಿ, ಎಮ್ಮೆಲ್ಲೆ ಮಾಡಿ, ಮಂತ್ರಿ ಮಾಡಿ, ಇವತ್ತು ಕರ್ನಾಟಕಕ್ಕೆ ಒಬ್ಬ ಸಮರ್ಥ ಮಂತ್ರಿ ಕೊಟ್ಟಿರೋದ್ರ ಕ್ರೆಡಿಟ್ಟು ಭವಾನಿಗೇ ಸೇರಬೇಕು ಸಾ. ಅಂಥ ರೇವಣ್ಣನಿಗೇ ವಿದ್ಯೆ ಹೇಳಿದ್ಕೆ ಇಡೀ ಹಾಸನಕ್ಕೆ ಹೇಳೊ ಶಕ್ತಿ ಬಂತು.”
“ಅದೇ ಕಂಡ್ರಿ ನಾನೇಳದು. ಭವಾನಿ ಬರಿ ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಕುಂತಿರಲಿಲ್ಲ. ಜಿಲ್ಲೆ ಪ್ರತಿ ಶಾಲೆಗೂ ಹೋಗಿ ದಡ್ಡುಡುಗುರನ್ನೆಲ್ಲ ಪತ್ತೆ ಮಾಡೀ, ಕಡೆಗೆ ಅವುರಪ್ಪ ಅವ್ವನ್ನು ಭೇಟಿ ಮಾಡಿ ನಿಮ್ಮುಡಗರಿಗೆ ಯಂಗೆ ಪಾಠ ಮಾಡಬೇಕು ಯಂಗೆ ಪಾಸಾಗಂಗೆ ಮಾಡಬೇಕು ಅನ್ನದ ಹೇಳತಿದ್ಲು. ಅದ ನಾನೇ ನೋಡಿದೀನಿ.”
“ಮತ್ತೆ ಪ್ರಥಮ ಸ್ಥಾನಕ್ಕೆ ಜಿಲ್ಲಾಧಿಕಾರಿ ರೋಹಿಣಿ ಕಾರಣ ಅಂತರಲ್ಲ ಸಾ.”
“ನನಿಗೆಲ್ಲಿ ನಗಬೇಕೊ ಗೊತ್ತಾಯ್ತಾಯಿಲ್ಲ ಕಂಡ್ರಿ, ಈ ಮಾತ ಕೇಳಿ. ಅಲ್ರೀ ರೋಹಿಣಿ ಏನು ಜಿಲ್ಲೆ ಇಸುಗೂಲಿಗೆಲ್ಲಾ ಹೆಡ್ಮೇಷ್ಟ್ರಾಗಿದ್ಲ, ಹೋಗ್ಲಿ ಪ್ರಿನ್ಸಿಪಾಲಾಗಿದ್ಲಾ? ಪಾಪ ಅವುಳಿಗೆ ಜಿಲ್ಲಾಧಿಕಾರಿ ಕ್ಯಲಸನೆ ರಾಶಿ ಬಿದ್ದಿತ್ತು. ಆ ಕ್ಯಲಸನೆ ಒಂದು ಖಂಡಗ ಇದ್ದಾಗ ಇನ್ನ ಮಕ್ಕಳ ಮಾತಾಡಿಸೋದಕ್ಕೆ ಪುರುಸೊತ್ತೆಲ್ಲೀ?””
“ಅದು ನಿಜವೆ, ಆದ್ರು ಆ ಹೆಣಮಗಳು ತಾನು ಹ್ಯಾಂಗೆ ಓದಿ ಮುಂದಕ್ಕೆ ಬಂದೆ ಅನ್ನೋ ಮೆತಡ್ಡ ಇಡೀ ಜಿಲ್ಲೆ ಮೇಷ್ಟ್ರಿಗೆ ಹೇಳಿದ್ದರಂತೆ. ಅವುರು ವಿದ್ಯಾರ್ಥಿಗಳಿಗೆ ಹೇಳಿದ್ರಂತೆ, ಅಂಗಾಗಿ ಎಸ್ಸೆಲ್ಸಿ ರಿಜಲ್ಟಲ್ಲಿ ಜಿಲ್ಲೆ ಪ್ರಥಮ ಬಂದದೆ ಅಂತ ಪತ್ರಕರ್ತರೆ ಬರದವುರೆ ಸಾ.”
“ನೀವು, ಪತ್ರಕರ್ತರಿಗೇನು ಬರೀತೀರಿ ಕಂಡ್ರಿ, ಈಗ ಅಂಗ್ಯಲ್ಲ ಬರಿಯೋರು ಈಟು ದಿನ ಎಲ್ಲೋಗಿದ್ರಪ್ಪ, ರೋಹಿಣಿ ಎಲ್ಲೆಲ್ಲಿ ಪಾಠ ಮಾಡಿದ್ರು ಅಂತ ಆಗ್ಲೇ ಬರೀಬೇಕಾಗಿತ್ತು. ಅವುರೇನೋ ಮಾಡಿದ್ರು ಅಂತ ಬರೀತಾ ಇರೊ ಈ ಪತ್ರಕರ್ತರು. ಅದೇ ಭವಾನಿ ಬಗ್ಗೆ ಒಂದು ಮಾತ ಬರೀಲಿಲ್ಲ. ನಾನೇ ಹೇಳಬೇಕಾಯ್ತು.”
“ಪತ್ರಕರ್ತರು ಬುಡಿ ಸಾ ನಿಮ್ಮ ಪ್ಯಾಮಿಲಿ ಕಂಡ್ರೆಸಾಕು ಏನೇನೊ ಬರೀತಾರೆ, ಆದ್ರು ಬಹಳ ಹಿಂದೆನೆ ನೀವು ನಿಮ್ಮ ಭವಾನಿ ಮೇಡಂನ ಸರಿಯಾಗಿ ಬಳಸಿಕಂಡಿದ್ದ್ರೆ, ಯಲ್ರೂ ಎಸ್ಸೆಲ್ಸೀಲಿ ಪಸ್ಟ್ ಕ್ಲಾಸಲ್ಲಿ ಪಾಸಾಗಬಹುದಿತ್ತು.”
“ಅಂಗಾಗದಿಲ್ಲ ಕಂಡ್ರೀ, ನಮ್ಮ ಮನೆ ಹುಡುಗರಿಗೆ ನಾವು ಪಾಠ ಹೇಳಕ್ಕಾಗತ್ತೇ, ವಡದುಬುಡ್ತಿವಿ ಕಂಡ್ರಿ, ಅದ್ಕೆ ಅಲವ ಬ್ಯಾರೆ ಮೇಸ್ಟ್ರುತಕ್ಕೆ ಕಳಸದು. ಆಗ ಭವಾನಿ ನನಿಗೊಬ್ಬನಿಗೆ ವಿದ್ಯೆ ಬುದ್ದಿ ಕಲಸಕ್ಕೆ ಸಾಕಾಗೋಯ್ತಿತ್ತು. ಇನ್ನ ಉಳದೋರಿಗೆ ಎಲ್ಲಿಂದ ಹೇಳಿಕೊಡದ್ರಿ.”
“ಆಗದಿಲ್ಲ ಸಾ, ನಿಜಕ್ಕೂ ನಿಮ್ಮ ಕಥೆ ಕೇಳಿದ್ರೆ ಮಲ್ಲಮ್ಮನ ಪವಾಡ ಸಿನುಮ ಕತೆ ಕೇಳಿದಂಗಾಯ್ತು ಸಾ.”
“ನಾನು ಕವಿರತ್ನ ಕಾಳಿದಾಸ ಅಂದ್ರೆ, ನೀವು ಮಲ್ಲಮ್ಮನ ಪವಾಡ ಅಂತೀರಲ್ರೀ.”
“ಸಾರಿ ಸಾ. ಸರಿಯಾದ ಹೋಲಿಕೆನೂ ಬರಲ್ಲ ನಂಗೆ. ಆದ್ರು ಒಂದು ಡವುಟು ಸಾ.”
“ಏನ್ರಿ ಡವುಟು”
“2016-17ನೇ ಸಾಲಲ್ಲಿ 7ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ಕ್ಕೆ ಪ್ರಥಮ ಸ್ಥಾನಕ್ಕೆ ಯಂಗೆ ಬಂತು ಅಂತ”
“ಅದೆ ಹೇಳ್ಳಿಲ್ಲವೇನ್ರಿ, ಭವಾನಿ ಮನಸು ಮಾಡಿದ್ಕೆ ಅಂತ”
“ನನಗಿರೊ ಡವುಟು ಪ್ರಕಾರ, ಇಂತ ಪವಾಡ ನ್ಯಡಿಬೇಕಾದ್ರೆ ಸಾಮೂಹಿಕ ಕಾಫಿ ನ್ಯಡಿದಿರಬೇಕು ಸಾ”
“ಅದ್ಯಂಗ್ರಿ ಇಡೀ ಜಿಲ್ಲೇನೆ ಕಾಫಿ ಮಾಡ್ತದೆ”
“ಒಂದು ಸತಿ ಪೋಲೀಸ್‍ನೋರ್ಯಲ್ಲ ಅಕೌಂಟ್ ಹೈಯರ್, ಲೋಯರ್, ಜನರಲ್ ಲಾ, ಎಕ್ಸಾಂ ತಗಂಡಿದ್ರು ಸಾ, ಎಸ್ಸಿ ಕೆಂಪಯ್ಯನೋರು ಮನಸು ಮಾಡಿದ್ರಿಂದ ಯಲ್ಲ ಪೋಲೀಸ್ರು ಕಾಫಿ ಮಾಡಿ ಯಲ್ಲ ಪಾಸಾಗಿದ್ರು. ಅಂಗೇನಾರ ಭವಾನಿ ಮಾಡಿದ್ರ ಅಂತ”
“ಯಾವನ್ರಿ ನಿಮಗೇಳಿದೋನು? ಹೊಟ್ಟಿಗೆ ಅನ್ನ ತಿಂತಿರೊ ಇಲ್ಲ ಮಣ್ಣು ತಿಂತಿರೊ”
“ಬರಿ ಮುದ್ದೆ ಸಾ”
“ಅದ್ಕೆ ಹಿಂಗೆ ಮಾತಾಡದು ನೀವು”
“ದೇವೇಗೌಡ್ರು ಅದ್ನೆ ಅಲವ ಸಾ ತಿನ್ನದು”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...