Homeಅಂಕಣಗಳುಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

ಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

- Advertisement -
- Advertisement -

ಯಾಹೂ |

ಅದೊಂದು ಕಾಲದಲ್ಲಿ ಎಸ್ಸೆಸೆಲ್ಸಿಯಲ್ಲಿ ಪೇಲಾಗುವುದು ಅವಮಾನವೇ ಅಲ್ಲ. ಆದರು ಪಾಸದವರು ಸರಸ್ವತಿ ಪುತ್ರನಂತೆ ಬೀಗುತ್ತಿದ್ದರು. ಕಾಲ ಮಾಗಿದ ಬದಲಾವಣೆಯಲ್ಲಿ ಬದುಕೇ ಮುಖ್ಯವಾಗಿ, ಡಿಗ್ರಿಗಳು ಸರ್ಟಿಪಿಕೇಟುಗಳಾಗುತ್ತಿರುವ ಸಮಯದಲ್ಲಿ ಫಲಿತಾಂಶಗಳೂ ಮಹತ್ವ ಕಳೆದುಕೊಂಡಿರುವಾಗ ಮಾನ್ಯ ರೇವಣ್ಣನವರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಒನ್ ನಂಬರಿಗೆ ಬಂದಿದೆಯಂತಲ್ಲಾ. ಈ ಅಚ್ಚರಿ ಸುದ್ದಿಯನ್ನು ರೇವಣ್ಣನವರ ಜೊತೆಯಲ್ಲದೆ ಇನ್ನಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿ ಫೋನ್ ಮಾಡಿದಾಗ ರಿಂಗಾಯ್ತು.
ರಿಂಗ್‍ಠೋನ್: ಶಾರದೆ ದಯತೋರು ನೀ………. ಶಾರದೆ “ಹಲೋ ಯಾರ್ರೀ”
“ನಾನು ಸರ್ ಯಾಹು”
“ಯಾವೂ ಅಂದ್ರ್ಯಾರ್ರೀ”
“ಪತ್ರಕರ್ತ ಸರ್”
“ಏನಾಗಬೇಕು”
“ಏನೂ ಆಗಬೇಕಾಗಿಲ್ಲ ಸಾರ್, ಅಭಿನಂದನೆ ಹೇಳನ ಅಂತ ಮಾಡಿದೆ”
“ರಿಜಲ್ಟು ಬಂದ ಮ್ಯಾಲೆ ಹೇಳಿ”
“ಯಲಕ್ಷನ್ ವಿಷಯ ಅಲ್ಲ ಸಾ, ಹಾಸನ ಜಿಲ್ಲೇಲಿ ಈಸಾರಿ ಎಸೆಸೆಲ್ಸಿ ಎಕ್ಸಾಮಲ್ಲಿ ಮಕ್ಕಳು ಪ್ರಥಮ ಸ್ಥಾನಗಳಿಸಿವೆ”
“ಅದ್ಕೆ ಭವಾನಿಗೆ ಅಭಿನಂದನೆ ಹೇಳ್ರಿ”
“ಭವಾನಿ ಏನು ಮಾಡಿದ್ರು ಸಾರ್”
“ಇದೇನ್ರಿ ಹಿಂಕೇಳ್ತಿರಿ, ಭವಾನಿ ಏನು ವಸಿ ಕಷ್ಟ ಪಟ್ಳೇನ್ರಿ, ಅವುಳು ಕಷ್ಟಪಡದ ನಾನೇ ನೋಡಕ್ಕಾಗಲಿಲ್ಲ”
“ಆಶ್ಚರ್ಯ ಸಾರ್, ನಮಿಗೆ ಗೊತ್ತೇ ಇರಲಿಲ್ಲ.”
“ಅವುಳು ನನ್ನ ಮದುವೆಯಾದಾಗ ನನಿಗೇನು ಗೊತ್ತಿತ್ರಿ ಪ್ರತಿಯೊಂದನ್ನು ಕಲಿಸಿದ್ಲು.”
“ಪ್ರತಿಯೊಂದನ್ನು ಅಂದ್ರೆ ಸಾ”
“ಪೇಪರ್ ಓದದ ಕಲಿಸಿದ್ಲು, ಯಾರತ್ರ ಯಂಗೆ ಮಾತಾಡಬೇಕು ಅನ್ನದ್ರಿಂದ ಹಿಡುದು ಏನುತ್ತರ ಕೊಡಬೇಕು ಅನ್ನೋವರಿಗು ಪ್ರತಿಯೊಂದನ್ನು ಕಲಿಸಿದ್ಲು ಕಂಡ್ರಿ”
“ರಿಯಲಿ ದೇವೇಗೌಡ್ರು ಗ್ರೇಟ್ ಸಾರ್.”
“ಯಾಕ್ರೀ.”
“ತಮ್ಮ ಮಗನನ್ನ ಗ್ರಹಿಸಿ, ಅವನನ್ನ ತಿದ್ದಿ ವಿದ್ಯೆ ಬುದ್ದಿ ಕಲಸೊ ಹೆಣ್ಣು ತಂದು ಮದುವೆ ಮಾಡಿದ್ರಲ್ಲ ಅದ್ಕೆ.”
“ನಿಜವಾಗ್ಲು ಭವಾನಿ ನನ್ನ ಭಾಗಕ್ಕೆ ಕಾಳಿಕಂಡ್ರಿ.”
“ಅಷ್ಟು ವಳ್ಳೆ ಹೆಣ್ಣುಮಗಳ ಕಾಳಿ ಅಂತೀರಲಾ ಸಾರ್.”
“ನಾನೇಳದ ಸಲುಪ ತಿಳಕಳ್ರಿ, ಕವಿರತ್ನ ಸುಮ್ಮಸುಮ್ಮನೆ ಆದನೇನ್ರಿ, ಕಾಳಿ ಅವುನಿಗೆ ವಿದ್ಯೆ ಬುದ್ದಿ ಕೊಟ್ಟಮ್ಯಾಲವುನು ಕತೆ ಕವನ ಬರದ ಅಲವೇನ್ರಿ.”
“ರಿಯಲಿ ಗ್ರೇಟ್ ಸಾರ್, ಭವಾನಿ ನಿಮ್ಮ ಭಾಗದ ಸರಸ್ವತಿ; ರೇವಣ್ಣನಿಗೆ ವಿದ್ಯಾಬುದ್ದಿ ಕಲಿಸಿ, ಎಮ್ಮೆಲ್ಲೆ ಮಾಡಿ, ಮಂತ್ರಿ ಮಾಡಿ, ಇವತ್ತು ಕರ್ನಾಟಕಕ್ಕೆ ಒಬ್ಬ ಸಮರ್ಥ ಮಂತ್ರಿ ಕೊಟ್ಟಿರೋದ್ರ ಕ್ರೆಡಿಟ್ಟು ಭವಾನಿಗೇ ಸೇರಬೇಕು ಸಾ. ಅಂಥ ರೇವಣ್ಣನಿಗೇ ವಿದ್ಯೆ ಹೇಳಿದ್ಕೆ ಇಡೀ ಹಾಸನಕ್ಕೆ ಹೇಳೊ ಶಕ್ತಿ ಬಂತು.”
“ಅದೇ ಕಂಡ್ರಿ ನಾನೇಳದು. ಭವಾನಿ ಬರಿ ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಕುಂತಿರಲಿಲ್ಲ. ಜಿಲ್ಲೆ ಪ್ರತಿ ಶಾಲೆಗೂ ಹೋಗಿ ದಡ್ಡುಡುಗುರನ್ನೆಲ್ಲ ಪತ್ತೆ ಮಾಡೀ, ಕಡೆಗೆ ಅವುರಪ್ಪ ಅವ್ವನ್ನು ಭೇಟಿ ಮಾಡಿ ನಿಮ್ಮುಡಗರಿಗೆ ಯಂಗೆ ಪಾಠ ಮಾಡಬೇಕು ಯಂಗೆ ಪಾಸಾಗಂಗೆ ಮಾಡಬೇಕು ಅನ್ನದ ಹೇಳತಿದ್ಲು. ಅದ ನಾನೇ ನೋಡಿದೀನಿ.”
“ಮತ್ತೆ ಪ್ರಥಮ ಸ್ಥಾನಕ್ಕೆ ಜಿಲ್ಲಾಧಿಕಾರಿ ರೋಹಿಣಿ ಕಾರಣ ಅಂತರಲ್ಲ ಸಾ.”
“ನನಿಗೆಲ್ಲಿ ನಗಬೇಕೊ ಗೊತ್ತಾಯ್ತಾಯಿಲ್ಲ ಕಂಡ್ರಿ, ಈ ಮಾತ ಕೇಳಿ. ಅಲ್ರೀ ರೋಹಿಣಿ ಏನು ಜಿಲ್ಲೆ ಇಸುಗೂಲಿಗೆಲ್ಲಾ ಹೆಡ್ಮೇಷ್ಟ್ರಾಗಿದ್ಲ, ಹೋಗ್ಲಿ ಪ್ರಿನ್ಸಿಪಾಲಾಗಿದ್ಲಾ? ಪಾಪ ಅವುಳಿಗೆ ಜಿಲ್ಲಾಧಿಕಾರಿ ಕ್ಯಲಸನೆ ರಾಶಿ ಬಿದ್ದಿತ್ತು. ಆ ಕ್ಯಲಸನೆ ಒಂದು ಖಂಡಗ ಇದ್ದಾಗ ಇನ್ನ ಮಕ್ಕಳ ಮಾತಾಡಿಸೋದಕ್ಕೆ ಪುರುಸೊತ್ತೆಲ್ಲೀ?””
“ಅದು ನಿಜವೆ, ಆದ್ರು ಆ ಹೆಣಮಗಳು ತಾನು ಹ್ಯಾಂಗೆ ಓದಿ ಮುಂದಕ್ಕೆ ಬಂದೆ ಅನ್ನೋ ಮೆತಡ್ಡ ಇಡೀ ಜಿಲ್ಲೆ ಮೇಷ್ಟ್ರಿಗೆ ಹೇಳಿದ್ದರಂತೆ. ಅವುರು ವಿದ್ಯಾರ್ಥಿಗಳಿಗೆ ಹೇಳಿದ್ರಂತೆ, ಅಂಗಾಗಿ ಎಸ್ಸೆಲ್ಸಿ ರಿಜಲ್ಟಲ್ಲಿ ಜಿಲ್ಲೆ ಪ್ರಥಮ ಬಂದದೆ ಅಂತ ಪತ್ರಕರ್ತರೆ ಬರದವುರೆ ಸಾ.”
“ನೀವು, ಪತ್ರಕರ್ತರಿಗೇನು ಬರೀತೀರಿ ಕಂಡ್ರಿ, ಈಗ ಅಂಗ್ಯಲ್ಲ ಬರಿಯೋರು ಈಟು ದಿನ ಎಲ್ಲೋಗಿದ್ರಪ್ಪ, ರೋಹಿಣಿ ಎಲ್ಲೆಲ್ಲಿ ಪಾಠ ಮಾಡಿದ್ರು ಅಂತ ಆಗ್ಲೇ ಬರೀಬೇಕಾಗಿತ್ತು. ಅವುರೇನೋ ಮಾಡಿದ್ರು ಅಂತ ಬರೀತಾ ಇರೊ ಈ ಪತ್ರಕರ್ತರು. ಅದೇ ಭವಾನಿ ಬಗ್ಗೆ ಒಂದು ಮಾತ ಬರೀಲಿಲ್ಲ. ನಾನೇ ಹೇಳಬೇಕಾಯ್ತು.”
“ಪತ್ರಕರ್ತರು ಬುಡಿ ಸಾ ನಿಮ್ಮ ಪ್ಯಾಮಿಲಿ ಕಂಡ್ರೆಸಾಕು ಏನೇನೊ ಬರೀತಾರೆ, ಆದ್ರು ಬಹಳ ಹಿಂದೆನೆ ನೀವು ನಿಮ್ಮ ಭವಾನಿ ಮೇಡಂನ ಸರಿಯಾಗಿ ಬಳಸಿಕಂಡಿದ್ದ್ರೆ, ಯಲ್ರೂ ಎಸ್ಸೆಲ್ಸೀಲಿ ಪಸ್ಟ್ ಕ್ಲಾಸಲ್ಲಿ ಪಾಸಾಗಬಹುದಿತ್ತು.”
“ಅಂಗಾಗದಿಲ್ಲ ಕಂಡ್ರೀ, ನಮ್ಮ ಮನೆ ಹುಡುಗರಿಗೆ ನಾವು ಪಾಠ ಹೇಳಕ್ಕಾಗತ್ತೇ, ವಡದುಬುಡ್ತಿವಿ ಕಂಡ್ರಿ, ಅದ್ಕೆ ಅಲವ ಬ್ಯಾರೆ ಮೇಸ್ಟ್ರುತಕ್ಕೆ ಕಳಸದು. ಆಗ ಭವಾನಿ ನನಿಗೊಬ್ಬನಿಗೆ ವಿದ್ಯೆ ಬುದ್ದಿ ಕಲಸಕ್ಕೆ ಸಾಕಾಗೋಯ್ತಿತ್ತು. ಇನ್ನ ಉಳದೋರಿಗೆ ಎಲ್ಲಿಂದ ಹೇಳಿಕೊಡದ್ರಿ.”
“ಆಗದಿಲ್ಲ ಸಾ, ನಿಜಕ್ಕೂ ನಿಮ್ಮ ಕಥೆ ಕೇಳಿದ್ರೆ ಮಲ್ಲಮ್ಮನ ಪವಾಡ ಸಿನುಮ ಕತೆ ಕೇಳಿದಂಗಾಯ್ತು ಸಾ.”
“ನಾನು ಕವಿರತ್ನ ಕಾಳಿದಾಸ ಅಂದ್ರೆ, ನೀವು ಮಲ್ಲಮ್ಮನ ಪವಾಡ ಅಂತೀರಲ್ರೀ.”
“ಸಾರಿ ಸಾ. ಸರಿಯಾದ ಹೋಲಿಕೆನೂ ಬರಲ್ಲ ನಂಗೆ. ಆದ್ರು ಒಂದು ಡವುಟು ಸಾ.”
“ಏನ್ರಿ ಡವುಟು”
“2016-17ನೇ ಸಾಲಲ್ಲಿ 7ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ಕ್ಕೆ ಪ್ರಥಮ ಸ್ಥಾನಕ್ಕೆ ಯಂಗೆ ಬಂತು ಅಂತ”
“ಅದೆ ಹೇಳ್ಳಿಲ್ಲವೇನ್ರಿ, ಭವಾನಿ ಮನಸು ಮಾಡಿದ್ಕೆ ಅಂತ”
“ನನಗಿರೊ ಡವುಟು ಪ್ರಕಾರ, ಇಂತ ಪವಾಡ ನ್ಯಡಿಬೇಕಾದ್ರೆ ಸಾಮೂಹಿಕ ಕಾಫಿ ನ್ಯಡಿದಿರಬೇಕು ಸಾ”
“ಅದ್ಯಂಗ್ರಿ ಇಡೀ ಜಿಲ್ಲೇನೆ ಕಾಫಿ ಮಾಡ್ತದೆ”
“ಒಂದು ಸತಿ ಪೋಲೀಸ್‍ನೋರ್ಯಲ್ಲ ಅಕೌಂಟ್ ಹೈಯರ್, ಲೋಯರ್, ಜನರಲ್ ಲಾ, ಎಕ್ಸಾಂ ತಗಂಡಿದ್ರು ಸಾ, ಎಸ್ಸಿ ಕೆಂಪಯ್ಯನೋರು ಮನಸು ಮಾಡಿದ್ರಿಂದ ಯಲ್ಲ ಪೋಲೀಸ್ರು ಕಾಫಿ ಮಾಡಿ ಯಲ್ಲ ಪಾಸಾಗಿದ್ರು. ಅಂಗೇನಾರ ಭವಾನಿ ಮಾಡಿದ್ರ ಅಂತ”
“ಯಾವನ್ರಿ ನಿಮಗೇಳಿದೋನು? ಹೊಟ್ಟಿಗೆ ಅನ್ನ ತಿಂತಿರೊ ಇಲ್ಲ ಮಣ್ಣು ತಿಂತಿರೊ”
“ಬರಿ ಮುದ್ದೆ ಸಾ”
“ಅದ್ಕೆ ಹಿಂಗೆ ಮಾತಾಡದು ನೀವು”
“ದೇವೇಗೌಡ್ರು ಅದ್ನೆ ಅಲವ ಸಾ ತಿನ್ನದು”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...