Homeಅಂಕಣಗಳುಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

ಹಾಸನ ಪ್ರಥಮ ಸ್ಥಾನಕ್ಕೆ ಭವಾನಿ ಕಾರಣ ಕಂಡ್ರೀ

- Advertisement -
- Advertisement -

ಯಾಹೂ |

ಅದೊಂದು ಕಾಲದಲ್ಲಿ ಎಸ್ಸೆಸೆಲ್ಸಿಯಲ್ಲಿ ಪೇಲಾಗುವುದು ಅವಮಾನವೇ ಅಲ್ಲ. ಆದರು ಪಾಸದವರು ಸರಸ್ವತಿ ಪುತ್ರನಂತೆ ಬೀಗುತ್ತಿದ್ದರು. ಕಾಲ ಮಾಗಿದ ಬದಲಾವಣೆಯಲ್ಲಿ ಬದುಕೇ ಮುಖ್ಯವಾಗಿ, ಡಿಗ್ರಿಗಳು ಸರ್ಟಿಪಿಕೇಟುಗಳಾಗುತ್ತಿರುವ ಸಮಯದಲ್ಲಿ ಫಲಿತಾಂಶಗಳೂ ಮಹತ್ವ ಕಳೆದುಕೊಂಡಿರುವಾಗ ಮಾನ್ಯ ರೇವಣ್ಣನವರ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಒನ್ ನಂಬರಿಗೆ ಬಂದಿದೆಯಂತಲ್ಲಾ. ಈ ಅಚ್ಚರಿ ಸುದ್ದಿಯನ್ನು ರೇವಣ್ಣನವರ ಜೊತೆಯಲ್ಲದೆ ಇನ್ನಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿ ಫೋನ್ ಮಾಡಿದಾಗ ರಿಂಗಾಯ್ತು.
ರಿಂಗ್‍ಠೋನ್: ಶಾರದೆ ದಯತೋರು ನೀ………. ಶಾರದೆ “ಹಲೋ ಯಾರ್ರೀ”
“ನಾನು ಸರ್ ಯಾಹು”
“ಯಾವೂ ಅಂದ್ರ್ಯಾರ್ರೀ”
“ಪತ್ರಕರ್ತ ಸರ್”
“ಏನಾಗಬೇಕು”
“ಏನೂ ಆಗಬೇಕಾಗಿಲ್ಲ ಸಾರ್, ಅಭಿನಂದನೆ ಹೇಳನ ಅಂತ ಮಾಡಿದೆ”
“ರಿಜಲ್ಟು ಬಂದ ಮ್ಯಾಲೆ ಹೇಳಿ”
“ಯಲಕ್ಷನ್ ವಿಷಯ ಅಲ್ಲ ಸಾ, ಹಾಸನ ಜಿಲ್ಲೇಲಿ ಈಸಾರಿ ಎಸೆಸೆಲ್ಸಿ ಎಕ್ಸಾಮಲ್ಲಿ ಮಕ್ಕಳು ಪ್ರಥಮ ಸ್ಥಾನಗಳಿಸಿವೆ”
“ಅದ್ಕೆ ಭವಾನಿಗೆ ಅಭಿನಂದನೆ ಹೇಳ್ರಿ”
“ಭವಾನಿ ಏನು ಮಾಡಿದ್ರು ಸಾರ್”
“ಇದೇನ್ರಿ ಹಿಂಕೇಳ್ತಿರಿ, ಭವಾನಿ ಏನು ವಸಿ ಕಷ್ಟ ಪಟ್ಳೇನ್ರಿ, ಅವುಳು ಕಷ್ಟಪಡದ ನಾನೇ ನೋಡಕ್ಕಾಗಲಿಲ್ಲ”
“ಆಶ್ಚರ್ಯ ಸಾರ್, ನಮಿಗೆ ಗೊತ್ತೇ ಇರಲಿಲ್ಲ.”
“ಅವುಳು ನನ್ನ ಮದುವೆಯಾದಾಗ ನನಿಗೇನು ಗೊತ್ತಿತ್ರಿ ಪ್ರತಿಯೊಂದನ್ನು ಕಲಿಸಿದ್ಲು.”
“ಪ್ರತಿಯೊಂದನ್ನು ಅಂದ್ರೆ ಸಾ”
“ಪೇಪರ್ ಓದದ ಕಲಿಸಿದ್ಲು, ಯಾರತ್ರ ಯಂಗೆ ಮಾತಾಡಬೇಕು ಅನ್ನದ್ರಿಂದ ಹಿಡುದು ಏನುತ್ತರ ಕೊಡಬೇಕು ಅನ್ನೋವರಿಗು ಪ್ರತಿಯೊಂದನ್ನು ಕಲಿಸಿದ್ಲು ಕಂಡ್ರಿ”
“ರಿಯಲಿ ದೇವೇಗೌಡ್ರು ಗ್ರೇಟ್ ಸಾರ್.”
“ಯಾಕ್ರೀ.”
“ತಮ್ಮ ಮಗನನ್ನ ಗ್ರಹಿಸಿ, ಅವನನ್ನ ತಿದ್ದಿ ವಿದ್ಯೆ ಬುದ್ದಿ ಕಲಸೊ ಹೆಣ್ಣು ತಂದು ಮದುವೆ ಮಾಡಿದ್ರಲ್ಲ ಅದ್ಕೆ.”
“ನಿಜವಾಗ್ಲು ಭವಾನಿ ನನ್ನ ಭಾಗಕ್ಕೆ ಕಾಳಿಕಂಡ್ರಿ.”
“ಅಷ್ಟು ವಳ್ಳೆ ಹೆಣ್ಣುಮಗಳ ಕಾಳಿ ಅಂತೀರಲಾ ಸಾರ್.”
“ನಾನೇಳದ ಸಲುಪ ತಿಳಕಳ್ರಿ, ಕವಿರತ್ನ ಸುಮ್ಮಸುಮ್ಮನೆ ಆದನೇನ್ರಿ, ಕಾಳಿ ಅವುನಿಗೆ ವಿದ್ಯೆ ಬುದ್ದಿ ಕೊಟ್ಟಮ್ಯಾಲವುನು ಕತೆ ಕವನ ಬರದ ಅಲವೇನ್ರಿ.”
“ರಿಯಲಿ ಗ್ರೇಟ್ ಸಾರ್, ಭವಾನಿ ನಿಮ್ಮ ಭಾಗದ ಸರಸ್ವತಿ; ರೇವಣ್ಣನಿಗೆ ವಿದ್ಯಾಬುದ್ದಿ ಕಲಿಸಿ, ಎಮ್ಮೆಲ್ಲೆ ಮಾಡಿ, ಮಂತ್ರಿ ಮಾಡಿ, ಇವತ್ತು ಕರ್ನಾಟಕಕ್ಕೆ ಒಬ್ಬ ಸಮರ್ಥ ಮಂತ್ರಿ ಕೊಟ್ಟಿರೋದ್ರ ಕ್ರೆಡಿಟ್ಟು ಭವಾನಿಗೇ ಸೇರಬೇಕು ಸಾ. ಅಂಥ ರೇವಣ್ಣನಿಗೇ ವಿದ್ಯೆ ಹೇಳಿದ್ಕೆ ಇಡೀ ಹಾಸನಕ್ಕೆ ಹೇಳೊ ಶಕ್ತಿ ಬಂತು.”
“ಅದೇ ಕಂಡ್ರಿ ನಾನೇಳದು. ಭವಾನಿ ಬರಿ ಜಿಲ್ಲಾ ಪಂಚಾಯ್ತಿ ಮೆಂಬ್ರಾಗಿ ಕುಂತಿರಲಿಲ್ಲ. ಜಿಲ್ಲೆ ಪ್ರತಿ ಶಾಲೆಗೂ ಹೋಗಿ ದಡ್ಡುಡುಗುರನ್ನೆಲ್ಲ ಪತ್ತೆ ಮಾಡೀ, ಕಡೆಗೆ ಅವುರಪ್ಪ ಅವ್ವನ್ನು ಭೇಟಿ ಮಾಡಿ ನಿಮ್ಮುಡಗರಿಗೆ ಯಂಗೆ ಪಾಠ ಮಾಡಬೇಕು ಯಂಗೆ ಪಾಸಾಗಂಗೆ ಮಾಡಬೇಕು ಅನ್ನದ ಹೇಳತಿದ್ಲು. ಅದ ನಾನೇ ನೋಡಿದೀನಿ.”
“ಮತ್ತೆ ಪ್ರಥಮ ಸ್ಥಾನಕ್ಕೆ ಜಿಲ್ಲಾಧಿಕಾರಿ ರೋಹಿಣಿ ಕಾರಣ ಅಂತರಲ್ಲ ಸಾ.”
“ನನಿಗೆಲ್ಲಿ ನಗಬೇಕೊ ಗೊತ್ತಾಯ್ತಾಯಿಲ್ಲ ಕಂಡ್ರಿ, ಈ ಮಾತ ಕೇಳಿ. ಅಲ್ರೀ ರೋಹಿಣಿ ಏನು ಜಿಲ್ಲೆ ಇಸುಗೂಲಿಗೆಲ್ಲಾ ಹೆಡ್ಮೇಷ್ಟ್ರಾಗಿದ್ಲ, ಹೋಗ್ಲಿ ಪ್ರಿನ್ಸಿಪಾಲಾಗಿದ್ಲಾ? ಪಾಪ ಅವುಳಿಗೆ ಜಿಲ್ಲಾಧಿಕಾರಿ ಕ್ಯಲಸನೆ ರಾಶಿ ಬಿದ್ದಿತ್ತು. ಆ ಕ್ಯಲಸನೆ ಒಂದು ಖಂಡಗ ಇದ್ದಾಗ ಇನ್ನ ಮಕ್ಕಳ ಮಾತಾಡಿಸೋದಕ್ಕೆ ಪುರುಸೊತ್ತೆಲ್ಲೀ?””
“ಅದು ನಿಜವೆ, ಆದ್ರು ಆ ಹೆಣಮಗಳು ತಾನು ಹ್ಯಾಂಗೆ ಓದಿ ಮುಂದಕ್ಕೆ ಬಂದೆ ಅನ್ನೋ ಮೆತಡ್ಡ ಇಡೀ ಜಿಲ್ಲೆ ಮೇಷ್ಟ್ರಿಗೆ ಹೇಳಿದ್ದರಂತೆ. ಅವುರು ವಿದ್ಯಾರ್ಥಿಗಳಿಗೆ ಹೇಳಿದ್ರಂತೆ, ಅಂಗಾಗಿ ಎಸ್ಸೆಲ್ಸಿ ರಿಜಲ್ಟಲ್ಲಿ ಜಿಲ್ಲೆ ಪ್ರಥಮ ಬಂದದೆ ಅಂತ ಪತ್ರಕರ್ತರೆ ಬರದವುರೆ ಸಾ.”
“ನೀವು, ಪತ್ರಕರ್ತರಿಗೇನು ಬರೀತೀರಿ ಕಂಡ್ರಿ, ಈಗ ಅಂಗ್ಯಲ್ಲ ಬರಿಯೋರು ಈಟು ದಿನ ಎಲ್ಲೋಗಿದ್ರಪ್ಪ, ರೋಹಿಣಿ ಎಲ್ಲೆಲ್ಲಿ ಪಾಠ ಮಾಡಿದ್ರು ಅಂತ ಆಗ್ಲೇ ಬರೀಬೇಕಾಗಿತ್ತು. ಅವುರೇನೋ ಮಾಡಿದ್ರು ಅಂತ ಬರೀತಾ ಇರೊ ಈ ಪತ್ರಕರ್ತರು. ಅದೇ ಭವಾನಿ ಬಗ್ಗೆ ಒಂದು ಮಾತ ಬರೀಲಿಲ್ಲ. ನಾನೇ ಹೇಳಬೇಕಾಯ್ತು.”
“ಪತ್ರಕರ್ತರು ಬುಡಿ ಸಾ ನಿಮ್ಮ ಪ್ಯಾಮಿಲಿ ಕಂಡ್ರೆಸಾಕು ಏನೇನೊ ಬರೀತಾರೆ, ಆದ್ರು ಬಹಳ ಹಿಂದೆನೆ ನೀವು ನಿಮ್ಮ ಭವಾನಿ ಮೇಡಂನ ಸರಿಯಾಗಿ ಬಳಸಿಕಂಡಿದ್ದ್ರೆ, ಯಲ್ರೂ ಎಸ್ಸೆಲ್ಸೀಲಿ ಪಸ್ಟ್ ಕ್ಲಾಸಲ್ಲಿ ಪಾಸಾಗಬಹುದಿತ್ತು.”
“ಅಂಗಾಗದಿಲ್ಲ ಕಂಡ್ರೀ, ನಮ್ಮ ಮನೆ ಹುಡುಗರಿಗೆ ನಾವು ಪಾಠ ಹೇಳಕ್ಕಾಗತ್ತೇ, ವಡದುಬುಡ್ತಿವಿ ಕಂಡ್ರಿ, ಅದ್ಕೆ ಅಲವ ಬ್ಯಾರೆ ಮೇಸ್ಟ್ರುತಕ್ಕೆ ಕಳಸದು. ಆಗ ಭವಾನಿ ನನಿಗೊಬ್ಬನಿಗೆ ವಿದ್ಯೆ ಬುದ್ದಿ ಕಲಸಕ್ಕೆ ಸಾಕಾಗೋಯ್ತಿತ್ತು. ಇನ್ನ ಉಳದೋರಿಗೆ ಎಲ್ಲಿಂದ ಹೇಳಿಕೊಡದ್ರಿ.”
“ಆಗದಿಲ್ಲ ಸಾ, ನಿಜಕ್ಕೂ ನಿಮ್ಮ ಕಥೆ ಕೇಳಿದ್ರೆ ಮಲ್ಲಮ್ಮನ ಪವಾಡ ಸಿನುಮ ಕತೆ ಕೇಳಿದಂಗಾಯ್ತು ಸಾ.”
“ನಾನು ಕವಿರತ್ನ ಕಾಳಿದಾಸ ಅಂದ್ರೆ, ನೀವು ಮಲ್ಲಮ್ಮನ ಪವಾಡ ಅಂತೀರಲ್ರೀ.”
“ಸಾರಿ ಸಾ. ಸರಿಯಾದ ಹೋಲಿಕೆನೂ ಬರಲ್ಲ ನಂಗೆ. ಆದ್ರು ಒಂದು ಡವುಟು ಸಾ.”
“ಏನ್ರಿ ಡವುಟು”
“2016-17ನೇ ಸಾಲಲ್ಲಿ 7ನೇ ಸ್ಥಾನದಲ್ಲಿದ್ದ ಜಿಲ್ಲೆ, 2019ಕ್ಕೆ ಪ್ರಥಮ ಸ್ಥಾನಕ್ಕೆ ಯಂಗೆ ಬಂತು ಅಂತ”
“ಅದೆ ಹೇಳ್ಳಿಲ್ಲವೇನ್ರಿ, ಭವಾನಿ ಮನಸು ಮಾಡಿದ್ಕೆ ಅಂತ”
“ನನಗಿರೊ ಡವುಟು ಪ್ರಕಾರ, ಇಂತ ಪವಾಡ ನ್ಯಡಿಬೇಕಾದ್ರೆ ಸಾಮೂಹಿಕ ಕಾಫಿ ನ್ಯಡಿದಿರಬೇಕು ಸಾ”
“ಅದ್ಯಂಗ್ರಿ ಇಡೀ ಜಿಲ್ಲೇನೆ ಕಾಫಿ ಮಾಡ್ತದೆ”
“ಒಂದು ಸತಿ ಪೋಲೀಸ್‍ನೋರ್ಯಲ್ಲ ಅಕೌಂಟ್ ಹೈಯರ್, ಲೋಯರ್, ಜನರಲ್ ಲಾ, ಎಕ್ಸಾಂ ತಗಂಡಿದ್ರು ಸಾ, ಎಸ್ಸಿ ಕೆಂಪಯ್ಯನೋರು ಮನಸು ಮಾಡಿದ್ರಿಂದ ಯಲ್ಲ ಪೋಲೀಸ್ರು ಕಾಫಿ ಮಾಡಿ ಯಲ್ಲ ಪಾಸಾಗಿದ್ರು. ಅಂಗೇನಾರ ಭವಾನಿ ಮಾಡಿದ್ರ ಅಂತ”
“ಯಾವನ್ರಿ ನಿಮಗೇಳಿದೋನು? ಹೊಟ್ಟಿಗೆ ಅನ್ನ ತಿಂತಿರೊ ಇಲ್ಲ ಮಣ್ಣು ತಿಂತಿರೊ”
“ಬರಿ ಮುದ್ದೆ ಸಾ”
“ಅದ್ಕೆ ಹಿಂಗೆ ಮಾತಾಡದು ನೀವು”
“ದೇವೇಗೌಡ್ರು ಅದ್ನೆ ಅಲವ ಸಾ ತಿನ್ನದು”
“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...