Homeಅಂಕಣಗಳುರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

ರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದು ಹಕ್ಕು ಅಥವಾ ಕರ್ತವ್ಯವೆಂದು ಭಾವಿಸುತ್ತಲೇ ಬಂದದ್ದಾರೆ, ಇದಕ್ಕೆ ಅಪವಾದಗಳಿರಲೂ ಸಾಧ್ಯ. ಭಾರತೀಯ ನಾಗರರಿಕರೂ ಸಹ 1952ರಿಂದ ಇದೇ ರೀತಿಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನುಭವವನ್ನು ಪಡೆದಿದ್ದಾರೆ ಮತ್ತು ಸಹಜವಾಗಿಯೇ ಈ ಪ್ರತಿನಿಧಿಗಳು ತಮ್ಮ ಜೀವನವನ್ನು ಹಸನುಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನಂಬುವ ಜನ ಇವರು ಎಂದು ಹೇಳಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅಧಿಕಾರದಲ್ಲಿ ಕುಳಿತಿರುವ ಪಕ್ಷಗಳು, ಅವುಗಳ ನಾಯಕರು ಜನರ ಇಂಥ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ನಿಜವಾಗಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿ ಚುನಾವಣೆಗಳು ಎದುರಾದಾಗ ನಮ್ಮ ಮುಂದೆ ನಿಲ್ಲುತ್ತದೆ.
ಆದರೆ ಚುನಾವಣೆ ಎಂಬ ಪ್ರಕ್ರಿಯೆಯೇ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಶ ಎಂದಾಯಿತು. ಕೆಲವು ಬಾರಿ ಚುನಾವಣೆ ನಡೆಸುವುದೇ, ಅದರಲ್ಲಿ ಭಾಗವಹಿಸಿ ಮತ ‘ದಾನ’ ಮಾಡುವುದೇ ಪ್ರಜಾತಂತ್ರ ಎನ್ನುವ ಅತಿರೇಕದ ಮಾತುಗಳೂ ಕೇಳಿಬರುತ್ತಿವೆ. ಭಾರತ ಜಗತ್ತಿನ ಅತಿ ‘ದೊಡ್ಡ’ ಪ್ರಜಾಪ್ರಭುತ್ವ ರಾಷ್ಟ್ರ (ಜನಸಂಖ್ಯೆಯ ದೃಷ್ಟಿಯಿಂದ ಎನ್ನುವ ಮಾತಿನ ಹಿಂದಿನ ಪ್ರೇರಣೆ ಇದೆ) ಆದರೆ ಈ ಮಾತನ್ನು ಹೇಳುವವರು, ಅದನ್ನು ಪ್ರಶ್ನೆ ಮಾಡದೇ ಒಪ್ಪುವವರು ಮರೆಯುವ ಒಂದು ವಿಷಯವೇನೆಂದರೆ ಪ್ರಜಾತಂತ್ರವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ, ಮತ ಚಲಾಯಿಸುವುದಲ್ಲ, ಬದಲಿಗೆ ಅದು ಸಾಮಾಜಿಕ ಮೌಲ್ಯ ಎಂಬುದು. ನಮ್ಮ ಸಮಾಜ ಇನ್ನೂ ಉಳಿದುಕೊಂಡೇ ಬಂದಿರುವ ಸಾಮಾಜಿಕ, ಆರ್ಥಿಕ ಅಂತರಗಳು, ತಾರತಮ್ಯಗಳು, ಅವುಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿ ಹೊರಟವರ ನಾಲಿಗೆಯನ್ನು ಕಟ್ಟಿಹಾಕುತ್ತವೆ. ಹೀಗಿದ್ದೂ, ಈ ಮಾತನ್ನು ಹೇಳಿದ್ದೇವೆಂದರೆ ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುತ್ತಿದ್ದೇವೆಂದೇ ಹೇಳಬೇಕು.
ರಾಜಕಾರಣವು ‘ಸಾಧ್ಯತೆಗಳ ಕಲೆ’ (ಪಾಲಿಟಿಕ್ಸ್ ಇಸ್ ದ ಆರ್ಟ್ ಆಫ್ ಪಾಸಿಬಲ್) ಎಂದು ಜರ್ಮನಿಯ ಏಕೀಕರಣದ ರೂವಾರಿಯೆಂದೂ, ಉಕ್ಕಿನ ಮನುಷ್ಯನೆಂದೂ ಬಣ್ಣಿಸಲಾದ ಬಿಸ್ಮಾರ್ಕ್ ಹೇಳಿದನೆಂದು ಪ್ರಚಲಿತವಿದೆ. ಅಂದರೆ ರಾಜಕಾರಣದಲ್ಲಿ ತೊಡಗಿರುವವರು ಆದರ್ಶಗಳ ಬೆನ್ನು ಹತ್ತದೆ ತಮ್ಮ ಸಾಮಥ್ರ್ಯ ಹಾಗೂ ಮಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬ ಮಾತಿದು. ಆದರೆ ಆ ಸಾಧ್ಯತೆಗಳು ಎಂಥವು, ಯಾರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಪ್ರಶ್ನೆ. ಈ ಆಚರಣಯೋಗ್ಯ ಯೋಜನೆಗಳಿಂದಾಗಿ ನಾಯಕರಿಗೆ ಮಾತ್ರ ಲಾಭ ಸಿಗುತ್ತದೋ, ಅಥವಾ ಸಮಾಜದಲ್ಲಿ ಈಗಾಗಲೇ ಸವಲತ್ತುಗಳನ್ನು ಅನುಭವಿಸುವವರು ಉಪಯುಕ್ತರಾಗುತ್ತಾರೋ, ಅಥವಾ ದುರ್ಭರ ಜೀವನವನ್ನು ನಡೆಸುವವರ ಬಾಳು ಹಸನಾಗುತ್ತದೋ ಎನ್ನುವುದರ ಮೇಲೆ ಆ ಸಾಧ್ಯತೆಗಳ ಗುಣಾವಗುಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಸಮಕಾಲೀನ ರಾಜಕಾರಣವು ರಾಜಕೀಯವಾಗಿರುವ ಬಗೆಯ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಸನ್ನಿವೇಷವನ್ನು ಅರ್ಥಮಾಡಿಕೊಳ್ಳಬಹುದು. ದುರಂತವೆಂದರೆ ಭಾರತದ ಬಹುತೇಕ ರಾಜಕೀಯ ನಾಯಕರು ಈ ಸಾಧ್ಯತೆಗಳನ್ನು ತೀರಾ ವೈಯಕ್ತಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಧನಾತ್ಮಕ ಶಬ್ದವಾದ ‘ರಾಜಕಾರಣ’ ಇಂದು ಋಣಾತ್ಮಕವಾದ ‘ರಾಜಕೀಯ’ವಾಗಿದೆ. ಅದೆಷ್ಟರಮಟ್ಟಿಗೆಂದರೆ ಯಾವನಾದರು ಕುತಂತ್ರಿಯೆಂದರೆ ಅವನು ರಾಜಕೀಯ ಮಾಡುತ್ತಾನೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಧಿಕಾರವನ್ನು ಪಡೆಯಲು ಮತ್ತು ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬುದು ಇಂದು ರಾಜಕಾರಣಿಗಳ ನಡುವೆ ಮಾತ್ರವಲ್ಲ, ಅವರನ್ನು ಚುನಾಯಿಸುವ ಪ್ರಜೆಗಳ ನಡುವೆಯೂ ಒಪ್ಪಿತ ಮೌಲ್ಯವೇ ಆಗಿದೆ. ಹಣ ಸಂಪಾದನೆಗಾಗಿ ಬಂಡವಾಳ ಹೂಡುವಂತೆ ಅಧಿಕಾರ (ಆ ಮೂಲಕ ಹಣ) ಸಂಪಾದನೆಗಾಗಿ ಹಣದ ಹೊಳೆ ಹರಿಸುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಯಾರಾದರೂ ಕೆಲವರು ಹಣವನ್ನು ಖರ್ಚುಮಾಡದೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟರೆ ಅಂಥವರನ್ನು ತಲೆಕೆಟ್ಟವರೆಂದೇ ಕರೆಯಲಾಗುವ ಹಂತಕ್ಕೆ ಸಮಾಜ ತಲುಪಿದೆ. ಇಂಥ ಅವನತಿಗೆ ಕಾರಣವೇನು? ಒಂದು ಓಟಿಗೆ ನಿಗಿದಿತ ಮೊತ್ತವನ್ನೋ, ಬೆಳೆ ಬಾಳುವ ವಸ್ತುವನ್ನೋ ನೀಡದಿದ್ದರೆ ಮತ‘ದಾನ’ ಮಾಡುವ ಗೋಜಿಗೆ ಹೋಗದ ಜನರಿದ್ದಾರೆ. ಮತ‘ದಾನ’ಯೆಂಬುದು ವ್ಯವಹಾರವಾಗಿ ‘ಮತ’ವು ಒಂದು ಸರಕಿನ ಸ್ಥಿತಿಯನ್ನು ತಲುಪುವಂತೆ ಮಾಡುವಲ್ಲಿ ಜನನಾಯಕರೆನ್ನಿಸಿಕೊಳ್ಳುವವರ ಪಾತ್ರವೇ ದೊಡ್ಡದು. ಆಗ ಮತ ಪವಿತ್ರವೆಂದೂ ಮತ‘ದಾನ’ ಕರ್ತವ್ಯವೆಂದೂ, ಆ ಕರ್ತವ್ಯವನ್ನೇ ಮಾಡದಿರುವವರು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆಂದೂ ಹೇಳುವುದು ಹುಂಬತನದ ಮಾತುಗಳು ಮಾತ್ರವಾಗುತ್ತವೆ.
ಇನ್ನು ಈ ದೇಶದ ಹಲವು ಮೂಲೆಗಳಲ್ಲಿ ನಡೆಯುವ ಚಳವಳಿಗಳು ಪ್ರಜಾತಂತ್ರವೆಂಬ ಮೌಲ್ಯವನ್ನು ಜನರಲ್ಲಿ ಅರ್ಥಪೂರಿತವಾಗಿ ನೆಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮತ್ತೊಂದು ಪ್ರಶ್ನೆ. ಚುನಾವಣೆಗಳೇ ಪ್ರಜಾತಂತ್ರ ಎಂಬ ಭ್ರಮೆಯಲ್ಲಿ ಜನ ತೇಲುವಂತೆ ಮಾಡಲು ಜನನಾಯಕರೆನಿಸಿಕೊಳ್ಳುವವರು ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದರಿಂದ ಈ ಚಳವಳಿಗಳು ಜನರನ್ನು ಆಕರ್ಷಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟದ ಮಾತು.
2019ನೇ ಇಸವಿಯಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಇದುವರೆಗೂ ಜನರ ಹೆಸರಿನಲ್ಲಿಯೇ ಸಂವಿಧಾನದ ಸಾಕ್ಷಿಯಾಗಿ ಅಧಿಕಾರವನ್ನು ಅನುಭವಿಸಿದ ಸರ್ಕಾರಗಳ ಸೋಲನ್ನೇ ತನ್ನ ಚಿಮ್ಮುವ ಹಲಗೆಯನ್ನಾಗಿ ಮಾಡಿಕೊಂಡು ಯಶಸ್ಸನ್ನು ಗಳಿಸಿದ ಭಾರತೀಯ ಜನತಾ ಪಕ್ಷ ತನ್ನ ಒಬ್ಬ ನಾಯಕನನ್ನು ಅತಿಮಾನುಷನಂತೆ ಚಿತ್ರಿಸುತ್ತಾ ಇಲ್ಲಿಯವರೆಗೂ ತೋರಿಕೆಗಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದ ಪ್ರಜಾತಂತ್ರವನ್ನು ಹಾಳುಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವ ನಮ್ಮದು ಎಂಬ ಮಾತನ್ನೇ ಮರೆಮಾಚಿ, ಈ ದೇಶದ ಪ್ರಧಾನಿಯನ್ನು ನೇರವಾಗಿ ಚುನಾಯಿಸುತ್ತೇವೆಂದು ಅಥವಾ ಸೋಲಿಸುತ್ತೇವೆಂದು ಜನರು ನಂಬುವಂತೆ, ಹೇಳುವಂತೆ ಆಗಿದೆ. ಆ ಪಕ್ಷ ನಾಯಕರು ತಮ್ಮ ಸೇನಾಪತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಭಾಷೆಯಲ್ಲಿ ಸಮರಕ್ಕೇ ಹೊರಟಿದ್ದಾರೆ. ಇದೆಲ್ಲಾ ಒಂದು ಮಹಾಯುದ್ಧವೇನೊ ಎಂಬಂತೆ ಇಲ್ಲಿನ ಜನ ಪ್ರೇಕ್ಷಕರಾಗಿದ್ದಾರೆ. ಇನ್ನು ಪ್ರಜಾತಂತ್ರಕ್ಕೇ ಇಲ್ಲಿ ಜಾಗವೆಲ್ಲಿದೆ? ಇಬ್ಬರು ಯೋಧರ ನಡುವೆ ನಡೆಯುವ ಯುದ್ಧದೋಪಾದಿಯಲ್ಲಿ ಈ ಚುನಾವಣೆಗಳು ನಮ್ಮ ಮುಂದೆ ವಿಜೃಂಭಿಸುತ್ತಿವೆ.
ಸರ್ಕಾರದ ಹಲವು ವೈಫಲ್ಯಗಳು, ಸುಳ್ಳುಗಳು, ಅವರ ಕೃಪಾಪೋಷಿತ ಪುಂಡರುಗಳ ದಾಂಧಲೆಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಲ್ಲಿನ ಮಾಧ್ಯಮ, ಮೇಲ್ವರ್ಗದ ಜನ ಮತ್ತು ನವಉದಾರವಾದಿ ವ್ಯವಸ್ಥೆಯ ಫಲಾನುಭವಿಗಳು ಈ ಎಲ್ಲಾ ವಾಸ್ತವಗಳಿಗೆ ಕಣ್ಣು ಮುಚ್ಚಿದ್ದಾರೆ. ತಮ್ಮ ಎದುರಾಳಿಗಳನ್ನು ಅಂದರೆ ತಮ್ಮ ಮಾತುಗಳನ್ನು ಒಪ್ಪದವರನ್ನು ‘ನಗರದ ನಕ್ಸಲರು’, ದೇಶದ್ರೋಹಿಗಳು, ‘ತುಕಡೆ ತುಕಡೆ’ ಗುಂಪುಗಳು ಮುಂತಾದ ಹೆಸರುಗಳಿಂದ ಕರೆದು, ಅಶ್ಲೀಲ ಭಾಷೆಯಲ್ಲಿ ಟೀಕಿಸಿ ವಿಚಿತ್ರ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತರರ ದನಿ ಅಡಗಿ ಹೋಗುವಷ್ಟು ಗಲಾಟೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹಲವರು ಮೌನಕ್ಕೆ ಶರಣು ಹೋಗಿದ್ದಾರೆ. ಅಸಡ್ಡೆಯಿಂದ, ಹೆದರಿಕೆಯಿಂದ, ನಿರಾಸಕ್ತಿಯಿಂದ.
ಇನ್ನು, ಇಲ್ಲಿನ ವಿರೋಧ ಪಕ್ಷಗಳ ನಡವಳಿಕೆ ಏನು ಪ್ರಶ್ನಾತೀತವಾಗಿ ಉಳಿದಿಲ್ಲ. ತಮ್ಮ ಸಣ್ಣತನಗಳು, ಒಳಜಗಳಗಳು, ಪ್ರತಿಷ್ಠೆಗಳು, ಅಧಿಕಾರದಾಹ ಇವುಗಳಿಂದಲೂ ಸಂಪೂರ್ಣವಾಗಿ ಮುಕ್ತರಾಗದ ಇವರು ಯಾವ ಕ್ಷಣದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇಂಥವರನ್ನು ನಂಬಿ ಇವರ ಕೈಗೆ ಅಧಿಕಾರವನ್ನು ಕೊಡುವುದು ಹೇಗೆ ಎನ್ನುವುದು ಜನಸಾಮಾನ್ಯರ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಚಿಂತೆ
ಚುನಾವಣೆಗಳೂ ಪ್ರಜಾತಂತ್ರದ ಒಂದು ಪ್ರಕ್ರಿಯೆ, ಮುಖ್ಯವಾದ ಪ್ರಕ್ರಿಯೆ ಎಂದು ಅರ್ಥಮಾಡಿಕೊಂಡು, ಪ್ರಜಾತಂತ್ರವೆಂದರೆ ಜನರೆಲ್ಲರ ಸಾರ್ಥಕ ಪಾಲುಗೊಳ್ಳುವಿಕೆ ಎಂಬುದನ್ನು ಆಚರಣೆಗೆ ತರುವವರೆಗೂ ನಮ್ಮ ಅತಿ ದೊಡ್ಡ ಪ್ರಜಾತಂತ್ರದ ಈ ಗೊಂದಲಗಳು ಮುಂದುವರೆಯುವಂಥವೇ. ಚಳವಳಿಗಳ ಯಶಸ್ಸಿನ ಬಗ್ಗೆ ಎಷ್ಟೇ ಅನುಮಾಗಳಿರಲಿ, ಅಂತಿಮವಾಗಿ ಜನರನ್ನು ನಿಜವಾದ ಅರ್ಥದಲ್ಲಿ ಪ್ರಜಾತಂತ್ರವಾದಿಗಳನ್ನಾಗಿ ಮಾಡುವಂಥ ಶಕ್ತಿ ಇರುವುದು ಜನಪರ ಚಳವಳಿಗೆ ಮಾತ್ರ ಎನ್ನುವ ಮಾತನ್ನು ನಂಬಿ ಕಾರ್ಯಪ್ರವೃತ್ತರಾಗುವುದೊಂದೇ ಇಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳಿಗೆ ಉಳಿದಿರುವ ದಾರಿ. ರಾಜಕೀಯದ ಜಾಗದಲ್ಲಿ ರಾಜಕಾರಣವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...