Homeಅಂಕಣಗಳುನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

ನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

- Advertisement -
- Advertisement -

 ಗೌರಿ ಲಂಕೇಶ್
14 ಜನವರಿ, 2014 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಕೋರ್ಟಿಗೆ ಹೋದಾಗಲೆಲ್ಲಾ ಅಲ್ಲಿಗೆ ಬರುವ ತರಹೇವಾರಿ ಜನರನ್ನು ಗಮನಿಸುತ್ತಾ ಕಾಲ ಕಳೆಯುತ್ತೇನೆ. ಹಲವೊಮ್ಮೆ ನನ್ನ ಕುತೂಹಲ ಕೆರಳಿಸಿದವರನ್ನು ಮಾತನಾಡಿಸುತ್ತೇನೆ. ಆಗ ವಿಚಿತ್ರ ರೀತಿಯ ಜನಗಳ, ಸಮಸ್ಯೆ ಬದುಕುಗಳ ಕಿರುನೋಟ ನನಗೆ ದೊರಕುತ್ತದೆ.
ಇತ್ತೀಚೆಗೆ ಕೋರ್ಟ್ ಹಾಲ್ ಒಂದರಲ್ಲಿ ನನ್ನ ಪಕ್ಕ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೂತಿದ್ದರು. ಅವರ ಮುಖದಲ್ಲಿ ಆತಂಕ, ಜಿಗುಪ್ಸೆ ತುಂಬಿತ್ತು. ಆಕೆಯೊಂದಿಗೆ ಮಾತನಾಡಿದಾಗ ಗೊತ್ತಾಗಿದ್ದು, ಅವರ ಮನೆಯನ್ನು ಅದ್ಯಾರಿಗೋ ಬಾಡಿಗೆ ಮೇಲೆ ನೀಡಿದ್ದರಂತೆ. ಆದರೆ ಬಾಡಿಗೆದಾರ ಎಂತೆಂತಹದ್ದೋ ತಕರಾರುಗಳನ್ನು ಎತ್ತಿ ಇವರ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದನಂತೆ. ಅ ವ್ಯಾಜ್ಯ ಐದಾರು ವರ್ಷ ನಡೆದು ಇನ್ನೇನು ತೀರ್ಪು ಬರಬೇಕು ಎನ್ನುವಾಗ ತಾನು ಬಾಡಿಗೆ ನೀಡುವುದಾಗಿ ಈ ಮಹಿಳೆಯ ಗಂಡನನ್ನು ಕರೆದನಂತೆ, ಆತನನ್ನು ಭೇಟಿಯಾಗಲೂ ಹೋದ ಗಂಡ ಎರಡು ದಿನವಾದರೂ ಮನೆಗೆ ಹಿಂದಿರುಗಲಿಲ್ಲ. ಬದಲಾಗಿ ಆತನ ಹೆಣ ಬೆಂಗಳೂರಿನ ಕೆರೆಯೊಂದರಲ್ಲಿ ಸಿಕ್ಕಿತು. ಬಾಡಿಗೆದಾರನೇ ಕೊಲೆ ಮಾಡಿಸಿದ್ದಾನೆಂದು ಈಕೆ ಪೊಲೀಸರಿಗೆ ದೂರು ನೀಡಿದರು. ಆದರೆ ಬಾಡಿಗೆದಾರನೊಂದಿಗೆ ಶಾಮೀಲಾದ ಪೊಲೀಸರು ಕೊಲೆಗಡುಕ ಸಿಕ್ಕಿಲ್ಲವೆಂದು ವರದಿ ಸಲ್ಲಿಸಿದರು. ಆಗ ಮಹಿಳೆ ಬಾಡಿಗೆದಾರ ಮತ್ತು ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆಹೋದರು.
ಇದೆಲ್ಲಾ ನಡೆದು ಬರೋಬ್ಬರಿ 16 ವರ್ಷಗಳಾಗಿವೆ. ಈ ಮಧ್ಯೆ ಈಕೆಯ ಮಕ್ಕಳು ಬೆಳೆದು ನಿಂತಿದ್ದಾರೆ. ಪೊಲೀಸ್ ಅಧಿಕಾರಿ ನಿವೃತ್ತಿ ಪಡೆದು ತನ್ನ ಮನೆ ಸೇರಿದ್ದಾನೆ. ಬಾಡಿಗೆದಾರ ಇನ್ನೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಈ ಮಹಿಳೆಯ ಅರ್ಜಿ ಅಂದು ಎಲ್ಲಿತ್ತೋ ಇವತ್ತಿಗೂ ಅಲ್ಲೇ ಇದೆ. ಆಕೆಗೆ ಬಾಡಿಗೆಯೂ ಬಂದಿಲ್ಲ. ಆಸ್ತಿಯೂ ವಾಪಸ್ಸಾಗಿಲ್ಲ, ನ್ಯಾಯವಂತೂ ಸಿಕ್ಕಿಲ್ಲ, ಈ ವ್ಯಾಜ್ಯ ಮ್ಯಾಜಿಸ್ಟ್ರೇಟರ ನಂತರ ಹೈಕೋರ್ಟಿಗೆ ಹೋಗಿ ಅಂತ್ಯಗೊಳ್ಳುವುದು ಇನ್ನು ಎಷ್ಟು ವರ್ಷಕ್ಕೋ?
ಇನ್ನೊಂದು ವಿಚಿತ್ರ ಪ್ರಕರಣ. ಸುಮಾರು 45 ಪ್ರಾಯದ ಈಕೆ ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದಾರೆ. ಈಕೆಯ ಗಂಡ ಕೇಂದ್ರ ಸರ್ಕಾರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದಾನೆ. ಈಕೆ ಮದುವೆಯಾದ ಕೆಲ ವರ್ಷಗಳಲ್ಲೇ ಗಂಡ ಮತ್ತೊಬ್ಬಳನ್ನು ಮದುವೆಯಾದಾಗ ಈಕೆ ಆತನನ್ನು ತೊರೆದು ತಾನಾಯಿತು ತನ್ನ ಪಾಡಾಯಿತು ಎಂದು ಏಕಾಂಗಿ ಜೀವನ ಸಾಗಿಸಲಾರಂಭಿಸಿದಳು. ಆದರೆ ಗಂಡನ ಕಾಟ ಮುಂದುವರೆಯಿತು. ಆತ ಸರ್ಕಾರಿ ನೌಕರನಾದ್ದರಿಂದ ತನ್ನ ಎರಡನೇ ಪತ್ನಿಯ ಬಗ್ಗೆ ದಾಖಲಿಸುವಂತಿಲ್ಲ. ಆದ್ದರಿಂದ ಎರಡನೇ ಪತ್ನಿಯೊಂದಿಗೆ ಮಕ್ಕಳಾದಾಗ ಆತ ಆಸ್ಪತ್ರೆಯಲ್ಲಿ ತಾಯಿಯ ಹೆಸರು ನಮೂದಿಸಬೇಕಿದ್ದ ಜಾಗದಲ್ಲಿ ತನ್ನ ಮೊದಲನೆ ಹೆಂಡತಿಯ ಹೆಸರನ್ನೇ ದಾಖಲಿಸಿದ್ದ. ಇದು ಮೊದಲನೇ ಪತ್ನಿಗೆ ಗೊತ್ತಾದಾಗ ಆಕೆ ಕೆಂಡಾಮಂಡಲವಾದಳು. ತನ್ನ ಬದುಕನ್ನು ಹಾಳು ಮಾಡಿ ಏಕಾಂಗಿಯಾಗಿ ಸದ್ದಿಲ್ಲದೇ ತನ್ನದಲ್ಲದ ಮಕ್ಕಳನ್ನು ತನ್ನ ತಲೆಗೆ ಕಟ್ಟುತ್ತಿರುವ ನಾಳೆ ತನ್ನ ಚೂರುಪಾರು ಆಸ್ತಿಗೂ ಆತನ ಎರಡನೇ ಪತ್ನಿಯ ಮಕ್ಕಳು ತಾವೇ ವಾರಸುದಾರರು ಎಂದು ವಾದಿಸಿದರೆ ಏನು ಗತಿ ಎಂದು ಚಿಂತಿಸಿ ಗಂಡನ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಏರಿದಳು. ಆ ಮಕ್ಕಳು ತನ್ನ ಮಕ್ಕಳಲ್ಲ, ಅವರುಗಳ ತಾಯಿ ತಾನಲ್ಲ ಎಂಬ ತೀರ್ಪು ಕೋರಿದಳು.
ಆಕೆ ಇಂಥದ್ದೊಂದು ಅರ್ಜಿ ಸಲ್ಲಿಸಿ, ಈಗ ಹನ್ನೊಂದು ವರ್ಷಗಳಾಗಿವೆ. ಆದರೆ ಅರ್ಜಿ ಮಾತ್ರ ಮುಂದಕ್ಕೆ ಹೋಗದೇ ಎಲ್ಲಿದೆಯೋ ಅಲ್ಲೇ ಇದೆ. ಇದನ್ನೆಲ್ಲಾ ಹೇಳಿದಕ್ಕೆ ಕಾರಣವಿದೆ. ಇವತ್ತು 21 ಹೈಕೋರ್ಟ್‍ಗಳ ಮುಂದೆ ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಕೇಸುಗಳಿವೆ. ಇನ್ನು ಇತರೆ ನ್ಯಾಯಾಲಯಗಳ ಮುಂದೆ ಸುಮಾರು ಮೂರು ಕೋಟಿ ಕೇಸುಗಳಿವೆ. ಅಷ್ಟೇ ಅಲ್ಲ ದೇಶದಾದ್ಯಂತ ಕನಿಷ್ಠ ಮೂರು ಸಾವಿರ ಜಡ್ಜ್‍ಗಳ ಕೊರತೆ ಇದೆ. ಹೀಗಿರುವಾಗ ಈ ಲಕ್ಷಾಂತರ ಕೇಸುಗಳು ಇತ್ಯರ್ಥವಾಗುವುದೆಂದು? ಜನಸಾಮಾನ್ಯರಿಗೆ ನ್ಯಾಯ ಸಿಗುವುದೆಂದು?
ನಮ್ಮ ನ್ಯಾಯ ವ್ಯವಸ್ಥೆಯ ಒಂದು ಮಗ್ಗಲು ಇದಾದರೆ ಇನ್ನೊಂದು ಮಗ್ಗಲು ನಮ್ಮ ಜೈಲಿನಲ್ಲಿರುವ ಎರಡೂವರೆ ಲಕ್ಷ ವಿಚಾರಣಾಧೀನ ಬಂಧಿಗಳು. ಅವರಲ್ಲಿ ಬಹಳಷ್ಟು ಜನ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬಹಳಷ್ಟು ವಿಚಾರಣಾಧೀನ ಖೈದಿಗಳ ವಿರುದ್ದದ ಕೇಸುಗಳು ಸಾಬೀತಾಗದೆ ಕೊನೆಗೆ ಅವರು ನಿರಪರಾಧಿಗಳು ಎಂದು ಬಿಡುಗಡೆ ಹೊಂದುತ್ತಾರೆ. ಆದರೆ ಅಷ್ಟರ ಮಟ್ಟಿಗೆ ಅವರ ಬದುಕಿನ ಹಲವಾರು ವರ್ಷಗಳು ಜೈಲಿನಲ್ಲೇ ಕಳೆದು ಹೋಗಿರುತ್ತದಲ್ಲದೇ, ಅವರು ಬಿಡುಗಡೆಗೊಂಡು ಹೊರಬರುವ ಹೊತ್ತಿಗೆ ಸಮಾಜದಲ್ಲಿನ ಅವರ ಮಾನ ಮತ್ತು ಬದುಕಿನ ಅವಕಾಶಗಳು ನಾಶವಾಗಿರುತ್ತವೆ. ಹಾಗೆಯೇ ಬಹಳಷ್ಟು ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯೇ ಆತನ ಸಂಸಾರದ ಆರ್ಥಿಕ ಸ್ತಂಭವಾಗಿರುವುದರಿಂದ ಆತ ಜೈಲಿನಲ್ಲಿರುವಾಗ ಆ ಸಂಸಾರವೇ ಛಿದ್ರಗೊಂಡಿರುತ್ತದೆ. ಇದೆಲ್ಲದರ ಅರ್ಥ ಕೊನೆಗೂ ವಿಚಾರಣಾಧೀನ ಖೈದಿಗೆ ನ್ಯಾಯ ಸಿಕ್ಕರೂ ಅನ್ಯಾಯವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...