Homeಕರೋನಾ ತಲ್ಲಣಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

ಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

- Advertisement -
- Advertisement -

ಕೊರೊನಾ ವೈರಾಣುಗಳ ರುದ್ರ ತಾಂಡವದ ಆರ್ಭಟದಲ್ಲಿ ಅದಕ್ಕಿಂತಲೂ ಗಂಡಾಂತರಕಾರಿಯಾದ ರೋಗಗಳಿಂದ ಆಗುತ್ತಿರುವ ಅನಾಹುತವನ್ನು ಆಳುವ ಸರ್ಕಾರ ಕಡೆಗಣಿಸಿ ಕೂತಿದೆಯಾ? ರಾಜ್ಯಾದ್ಯಂತ ಇರುವ ಸಾವಿರಾರು ಕಿಡ್ನಿವೈಫಲ್ಯದ ರೋಗಿಗಳು ಅನುಭವಿಸುತ್ತಿರುವ ಸಾವುಬದುಕಿನ ನಡುವಿನ ಸಂಕಟ ಇಂತಹ ಅನುಮಾನವನ್ನು ಹುಟ್ಟುಹಾಕಿದೆ!

ಎರಡೂ ಮೂತ್ರಪಿಂಡ ವಿಫಲವಾಗಿರುವ ಮಂದಿಯದು ತೀರಾ ನಾಜೂಕಿನ ಮತ್ತು ಅಷ್ಟೇ ಕ್ಲಿಷ್ಟಕರ ಬದುಕು. ಒಂಚೂರು ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು. ಕೆಲವರಿಗಂತೂ ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಅನಿವಾರ್ಯ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥ ಸುಮಾರು 30-50 ಡಯಾಲಿಸಿಸ್ ರೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮವರ್ಗದ ಕುಟುಂಬದವರು; ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಷ್ಟು ಚೈತನ್ಯ ಇಲ್ಲದವರು. ಇವರೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ಸರ್ಕಾರಿ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಯು.ಟಿ ಖಾದರ್‌ಗೆ ಡಯಾಲಿಸಿಸ್ ರೋಗಿಗಳ ಗೋಳು ಗೊತ್ತಾಗಿತ್ತು. ಅವರ ಐದು ವರ್ಷದ ಕಾಲಮಿತಿಯಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ನಡೆಸುವಂಥ ಯೋಜನೆ ಹಾಕಿಕೊಂಡಿದ್ದರು. ಖಾದರ್ ಈ ಯೋಜನೆ ಸಿದ್ಧಪಡಿಸುತ್ತಿದ್ದ ಸಮಯದಲ್ಲೇ ಅವರ ಬಳಿಯಿದ್ದ ಆರೋಗ್ಯ ಖಾತೆ ಹೋಗಿ, ಅವರು ಆಹಾರ ಸಚಿವರಾದರು. ಅವರ ನಂತರ ಬಂದ ರಮೇಶ್‌ಕುಮಾರ್ ಅವರಿಗೆ ಇದಕ್ಕಿಂತ ಖಾಸಗಿಯವರಿಗೆ ಡಯಾಲಿಸಿಸ್ ಯೋಜನೆಯ ಗುತ್ತಿಗೆ ನೀಡುವುದು ಅನುಕೂಲಕರ ಎಂದೆನಿಸಿರಬೇಕು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಹೊರಟಿದ್ದ ಅವರು ಈ ಖಾಸಗಿ ಗುತ್ತಿಗೆಯಿಂದ ಆಗುವ ಅನಾಹುತಗಳ ಬಗ್ಗೆಯೇಕೋ ಗಮನಹರಿಸಲಿಲ್ಲ.

ರಾಜ್ಯದ 23 ತಾಲ್ಲೂಕುಗಳ 122 ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರಪಿಂಡ ಕಾಯಿಲೆಯವರಿಗೆ ಡಯಾಲಿಸಿಸ್ ನಡೆಸುವ ಗುತ್ತಿಗೆ ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಬಿ.ಆರ್.ಶೆಟ್ಟಿಯ ಕಂಪನಿಗೆ ರಮೇಶ್ ಕುಮಾರ್ ಕಾಲದಲ್ಲಿ ಸಲೀಸಾಗಿ ದಕ್ಕಿತ್ತು. ಪ್ರತಿ ರೋಗಿಗೆ ಒಂದೂವರೆ ಸಾವಿರ ರೂ.ನಂತೆ ಡಯಾಲಿಸಿಸ್ ನಡೆಸುವ ಗುತ್ತಿಗೆಯನ್ನು ಬಿ.ಆರ್.ಶೆಟ್ಟಿ ಕಂಪನಿ ಪಡೆದುಕೊಂಡಿದೆ. ಹಾಗೆ ನೋಡಿದರೆ ತಲಾ 500-600ರೂ ಖರ್ಚು ತಗಲುವ ಈ ಡಯಾಲಿಸಿಸ್ ದುಬಾರಿ ರೇಟಿಗೆ ಬಿ.ಆರ್.ಶೆಟ್ಟಿ ಕುದುರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸರ್ಕಾರದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿಯಾಗುವ ತನಕ ಡಯಾಲಿಸಿಸ್ ಹೇಳುವಂಥ ತೊಂದರೆ ತೊಡಕಿಲ್ಲದೆ ನಡೆದುಕೊಂಡು ಹೋಗಿತ್ತು. ದುಬೈನಲ್ಲಿ ಬಿ.ಆರ್.ಶೆಟ್ಟರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಆತನ ವ್ಯವಹಾರವೆಲ್ಲ ಎಡವಟ್ಟಾಗುತ್ತ ಹೋಯಿತು. ಮಂತ್ರಿ ಡಾ.ಸುಧಾಕರ್ ಮತ್ತವರ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳ ಮಧ್ಯೆ ಸಾಮರಸ್ಯ ಇಲ್ಲದಾಯಿತು. ಬಿಆರ್‌ಎಸ್ ಕಂಪನಿಯ ಡಯಾಲಿಸಿಸ್ ಕೇಂದ್ರಗಳಲ್ಲಿ ನಾನಾ ನಮೂನೆಯ ಅವ್ಯವಸ್ಥೆ-ಅವಾಂತರ ನಡೆಯತೊಡಗಿತು.

ರೋಗಿಗಳು ದಿಕ್ಕೆಟ್ಟು ಹೋದರು. ಸರ್ಕಾರದಿಂದ ಬರಬೇಕಾದ ಹಣ ಕಾಲ ಕಾಲಕ್ಕೆ ಪಾವತಿ ಆಗದಿರುವುದೇ ಅವ್ಯವಸ್ಥೆಗೆ ಕಾರಣವೆಂದು ಬಿಆರ್‌ಎಸ್‌ನವರು ಬಹಿರಂಗವಾಗೇ ದೂರಹತ್ತಿದರು; ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದಾಗಿ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸಲು ಸಾಧ್ಯವಾಗದಂತಾಗಿದೆ ಎಂದು ಬಿಆರ್‌ಎಸ್ ಕಂಪನಿಯ ಕಾರ್ಯನಿರ್ವಾಹಕ ಹೇಳಿರುವ ಆಡಿಯೋ ಒಂದು ವೈರಲ್ ಆಯಿತು.

ಆರೋಗ್ಯ ಇಲಾಖೆ ಬಿಆರ್‌ಎಸ್ ಕಂಪನಿಯದೇ ತಪ್ಪೆನ್ನುತ್ತಿದೆ. ಬಿಆರ್‌ಎಸ್ ಕಂಪನಿ ಒಪ್ಪಂದ ಉಲ್ಲಂಘಿಸಿದೆ. ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆ ಬಿಆರ್‌ಎಸ್ ಕಂಪನಿಯೇ ಮಾಡಿಕೊಳ್ಳಬೇಕೆಂಬುದು ಒಪ್ಪಂದದ ಷರತ್ತು. ಆದರೆ ಬಿಆರ್‌ಎಸ್ ಕಂಪನಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರು ಮತ್ತು ವಿದ್ಯುತ್ ಬಳಸಿಕೊಂಡು ಅದರ ಖರ್ಚುವೆಚ್ಚ ಭರಿಸದೆ ಪಂಗನಾಮ ಹಾಕುತ್ತಿದ್ದಾರೆ. ಲೆಕ್ಕಪತ್ರ ಪರಿಶೀಲನೆಯಲ್ಲಿ ಇದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಬಿಲ್ ತಡೆಹಿಡಿಯಲಾಗಿದೆ ಎಂಬುದು ಆರೋಗ್ಯ ಇಲಾಖೆಯ ಸಮಜಾಯಿಷಿ.

ಬಿಆರ್‌ಎಸ್ ಕಂಪನಿ ಹಾಗು ಆರೋಗ್ಯ ಇಲಾಖೆಯ ಮೇಲಾಟದಲ್ಲಿ ಬಲಿ ಪಶುವಾಗುತ್ತಿರುವುದು ಮಾತ್ರ ನಿಸ್ಸಹಾಯಕ-ನಿರ್ಗತಿಕ ಡಯಾಲಿಸಿಸ್ ರೋಗಿಗಳು! ಬಿಆರ್‌ಎಸ್‌ನ ಎಲ್ಲ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಾಪದ ಪೇಶೆಂಟ್‌ಗಳು ಒದ್ದಾಡುತ್ತಿದ್ದಾರೆ. ಡಯಾಲಿಸಿಸ್‌ಗೆ ಬೇಕಾದ ರಾಸಾಯನಿಕ ಔಷಧ ಡಯಲೈಸರ್ ಮುಂತಾದ ಸಲಕರಣೆ ಸೆಂಟರ್‌ಗಳಲ್ಲಿ ಇಲ್ಲದಾಗಿದೆ! ಡಯಾಲಿಸಿಸ್ ಮಾಡುವ ನರ್ಸ್, ಟೆಕ್ನಿಶಿಯನ್‌ಗಳಿಗೆ ಬೇಕಾದ ಕನಿಷ್ಟ ಕೈಗ್ಲೌಸುಗಳು, ಮಾಸ್ಕ್‌ಗಳಿಗೂ ತತ್ವಾರವಾಗಿದೆ.

ಕೆಲವು ತಾಲ್ಲೂಕಿನ ರೋಗಿಗಳು ಅಥವಾ ಅವರ ಸಂಬಂಧಿಕರು ತೀರಾ ಅಗತ್ಯವಾದ ಪರಿಕರ-ಔಷಧ-ರಾಸಾಯನಿಕ ತಂದುಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ಸಂಬಳ ಸಿಗದೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಿಆರ್‌ಎಸ್ ಕಂಪನಿ ಬಿಟ್ಟು ಹೋಗುತ್ತಿರುವುದು, ರೋಗಿಗಳು ಮತ್ತವರ ಪರಿವಾರದವರನ್ನು ಚಿಂತೆಗೀಡುಮಾಡಿದೆ! ಸರ್ಕಾರದಿಂದ ಬರೋಬ್ಬರಿ 28 ಕೋಟಿ ಹಣ ಬರದಿರುವುದರಿಂದ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಬಿಆರ್‌ಎಸ್ ಕಂಪನಿಯವರು ಹೇಳುತ್ತಿದ್ದಾರೆ. ಹಾಗಂತ ಸಂಬಂಧಿಸಿದ ಸಚಿವ ಅಧಿಕಾರಿಗಳಿಗೂ ಪತ್ರ ಬರೆದಿರುವುದಾಗಿ ಬಿಆರ್‌ಎಸ್ ಕಂಪನಿ ಹೇಳಿಯೂ ಆಗಿದೆ.

ಇದು ಪರ್ಸೆಂಟೇಜ್ ಪರಾಕ್ರಮದ ಅಡ್ಡ ಪರಿಣಾಮವೆಂಬ ಆರೋಪವೂ ಕೇಳಿ ಬರುತ್ತಿದೆ. ಈಗಲಾದರೂ ಆರೋಗ್ಯ ಮಂತ್ರಿ ಹಾಗು ಆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಡಯಾಲಿಸಿಸ್ ಪೇಶೆಂಟ್‌ಗಳು ಸಾಲು ಸಾಲಾಗಿ ಸಾಯುವುದು ಖಂಡಿತ! ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮೊದಲೇ ಹೈರಾಣಾಗಿರುವ ಡಯಾಲಿಸಿಸ್ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬ ಕಷ್ಟ. ಉದಾಹರಣೆಗೆ ಉತ್ತರಕನ್ನಡದ ರೋಗಿಗಳು ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಪಣಜಿಗೆ ಹೋಗಬೇಕು. ಹೋಗಲಿಕ್ಕೆ ನಾಲ್ಕೈದು ತಾಸು ಬೇಕು; ಬರುವುದಕ್ಕೆ ಅಷ್ಟೇ ಸಮಯಬೇಕು. ಡಯಾಲಿಸಿಸ್‌ಗೆ 2-3 ಗಂಟೆ ಬೇಕಾಗುತ್ತದೆ. ಅಷ್ಟರಲ್ಲಿ ರೋಗಿ ಏದುಸಿರು ಬಿಡತೊಡಗುತ್ತಾನೆ/ಳೆ. ನಸೀಬ್ ಇದ್ದರಷ್ಟೇ ಬಚಾವ್!!

ತಕ್ಷಣಕ್ಕೆ ಮಂತ್ರಿ ಡಾ. ಸುಧಾಕರ್ ಬಿಆರ್‌ಎಸ್ ಕಂಪನಿಯನ್ನು ಹಳಿಗೆ ತರಲು ಗಂಭೀರ-ನಿಷ್ಠುರ ಪ್ರಯತ್ನ ಮಾಡಬೇಕಿದೆ; ಅದಾಗದಿದ್ದರೆ ಬಡ ರೋಗಿಗಳನ್ನು ಬದುಕಿಸಲು ಬದಲಿ ವ್ಯವಸ್ಥೆ ಮಾಡಬೇಕಿದೆ. ನಂತರ ನಿಧಾನಕ್ಕೆ ಪ್ರತಿ ತಾಲ್ಲೂಕಾಸ್ಪತ್ರೆಗಳಲ್ಲಿ ಸರಕಾರದ್ದೇ ಸ್ವತಂತ್ರ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಯೋಜನೆ ಹಾಕಿ ಕಾರ್ಯಗತಗೊಳಿಸಬೇಕಿದೆ.


ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...