Homeಕರೋನಾ ತಲ್ಲಣಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

ಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

- Advertisement -
- Advertisement -

ಕೊರೊನಾ ವೈರಾಣುಗಳ ರುದ್ರ ತಾಂಡವದ ಆರ್ಭಟದಲ್ಲಿ ಅದಕ್ಕಿಂತಲೂ ಗಂಡಾಂತರಕಾರಿಯಾದ ರೋಗಗಳಿಂದ ಆಗುತ್ತಿರುವ ಅನಾಹುತವನ್ನು ಆಳುವ ಸರ್ಕಾರ ಕಡೆಗಣಿಸಿ ಕೂತಿದೆಯಾ? ರಾಜ್ಯಾದ್ಯಂತ ಇರುವ ಸಾವಿರಾರು ಕಿಡ್ನಿವೈಫಲ್ಯದ ರೋಗಿಗಳು ಅನುಭವಿಸುತ್ತಿರುವ ಸಾವುಬದುಕಿನ ನಡುವಿನ ಸಂಕಟ ಇಂತಹ ಅನುಮಾನವನ್ನು ಹುಟ್ಟುಹಾಕಿದೆ!

ಎರಡೂ ಮೂತ್ರಪಿಂಡ ವಿಫಲವಾಗಿರುವ ಮಂದಿಯದು ತೀರಾ ನಾಜೂಕಿನ ಮತ್ತು ಅಷ್ಟೇ ಕ್ಲಿಷ್ಟಕರ ಬದುಕು. ಒಂಚೂರು ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು. ಕೆಲವರಿಗಂತೂ ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಅನಿವಾರ್ಯ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥ ಸುಮಾರು 30-50 ಡಯಾಲಿಸಿಸ್ ರೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮವರ್ಗದ ಕುಟುಂಬದವರು; ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಷ್ಟು ಚೈತನ್ಯ ಇಲ್ಲದವರು. ಇವರೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ಸರ್ಕಾರಿ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಯು.ಟಿ ಖಾದರ್‌ಗೆ ಡಯಾಲಿಸಿಸ್ ರೋಗಿಗಳ ಗೋಳು ಗೊತ್ತಾಗಿತ್ತು. ಅವರ ಐದು ವರ್ಷದ ಕಾಲಮಿತಿಯಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ನಡೆಸುವಂಥ ಯೋಜನೆ ಹಾಕಿಕೊಂಡಿದ್ದರು. ಖಾದರ್ ಈ ಯೋಜನೆ ಸಿದ್ಧಪಡಿಸುತ್ತಿದ್ದ ಸಮಯದಲ್ಲೇ ಅವರ ಬಳಿಯಿದ್ದ ಆರೋಗ್ಯ ಖಾತೆ ಹೋಗಿ, ಅವರು ಆಹಾರ ಸಚಿವರಾದರು. ಅವರ ನಂತರ ಬಂದ ರಮೇಶ್‌ಕುಮಾರ್ ಅವರಿಗೆ ಇದಕ್ಕಿಂತ ಖಾಸಗಿಯವರಿಗೆ ಡಯಾಲಿಸಿಸ್ ಯೋಜನೆಯ ಗುತ್ತಿಗೆ ನೀಡುವುದು ಅನುಕೂಲಕರ ಎಂದೆನಿಸಿರಬೇಕು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಹೊರಟಿದ್ದ ಅವರು ಈ ಖಾಸಗಿ ಗುತ್ತಿಗೆಯಿಂದ ಆಗುವ ಅನಾಹುತಗಳ ಬಗ್ಗೆಯೇಕೋ ಗಮನಹರಿಸಲಿಲ್ಲ.

ರಾಜ್ಯದ 23 ತಾಲ್ಲೂಕುಗಳ 122 ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರಪಿಂಡ ಕಾಯಿಲೆಯವರಿಗೆ ಡಯಾಲಿಸಿಸ್ ನಡೆಸುವ ಗುತ್ತಿಗೆ ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಬಿ.ಆರ್.ಶೆಟ್ಟಿಯ ಕಂಪನಿಗೆ ರಮೇಶ್ ಕುಮಾರ್ ಕಾಲದಲ್ಲಿ ಸಲೀಸಾಗಿ ದಕ್ಕಿತ್ತು. ಪ್ರತಿ ರೋಗಿಗೆ ಒಂದೂವರೆ ಸಾವಿರ ರೂ.ನಂತೆ ಡಯಾಲಿಸಿಸ್ ನಡೆಸುವ ಗುತ್ತಿಗೆಯನ್ನು ಬಿ.ಆರ್.ಶೆಟ್ಟಿ ಕಂಪನಿ ಪಡೆದುಕೊಂಡಿದೆ. ಹಾಗೆ ನೋಡಿದರೆ ತಲಾ 500-600ರೂ ಖರ್ಚು ತಗಲುವ ಈ ಡಯಾಲಿಸಿಸ್ ದುಬಾರಿ ರೇಟಿಗೆ ಬಿ.ಆರ್.ಶೆಟ್ಟಿ ಕುದುರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸರ್ಕಾರದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿಯಾಗುವ ತನಕ ಡಯಾಲಿಸಿಸ್ ಹೇಳುವಂಥ ತೊಂದರೆ ತೊಡಕಿಲ್ಲದೆ ನಡೆದುಕೊಂಡು ಹೋಗಿತ್ತು. ದುಬೈನಲ್ಲಿ ಬಿ.ಆರ್.ಶೆಟ್ಟರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಆತನ ವ್ಯವಹಾರವೆಲ್ಲ ಎಡವಟ್ಟಾಗುತ್ತ ಹೋಯಿತು. ಮಂತ್ರಿ ಡಾ.ಸುಧಾಕರ್ ಮತ್ತವರ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳ ಮಧ್ಯೆ ಸಾಮರಸ್ಯ ಇಲ್ಲದಾಯಿತು. ಬಿಆರ್‌ಎಸ್ ಕಂಪನಿಯ ಡಯಾಲಿಸಿಸ್ ಕೇಂದ್ರಗಳಲ್ಲಿ ನಾನಾ ನಮೂನೆಯ ಅವ್ಯವಸ್ಥೆ-ಅವಾಂತರ ನಡೆಯತೊಡಗಿತು.

ರೋಗಿಗಳು ದಿಕ್ಕೆಟ್ಟು ಹೋದರು. ಸರ್ಕಾರದಿಂದ ಬರಬೇಕಾದ ಹಣ ಕಾಲ ಕಾಲಕ್ಕೆ ಪಾವತಿ ಆಗದಿರುವುದೇ ಅವ್ಯವಸ್ಥೆಗೆ ಕಾರಣವೆಂದು ಬಿಆರ್‌ಎಸ್‌ನವರು ಬಹಿರಂಗವಾಗೇ ದೂರಹತ್ತಿದರು; ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದಾಗಿ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸಲು ಸಾಧ್ಯವಾಗದಂತಾಗಿದೆ ಎಂದು ಬಿಆರ್‌ಎಸ್ ಕಂಪನಿಯ ಕಾರ್ಯನಿರ್ವಾಹಕ ಹೇಳಿರುವ ಆಡಿಯೋ ಒಂದು ವೈರಲ್ ಆಯಿತು.

ಆರೋಗ್ಯ ಇಲಾಖೆ ಬಿಆರ್‌ಎಸ್ ಕಂಪನಿಯದೇ ತಪ್ಪೆನ್ನುತ್ತಿದೆ. ಬಿಆರ್‌ಎಸ್ ಕಂಪನಿ ಒಪ್ಪಂದ ಉಲ್ಲಂಘಿಸಿದೆ. ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆ ಬಿಆರ್‌ಎಸ್ ಕಂಪನಿಯೇ ಮಾಡಿಕೊಳ್ಳಬೇಕೆಂಬುದು ಒಪ್ಪಂದದ ಷರತ್ತು. ಆದರೆ ಬಿಆರ್‌ಎಸ್ ಕಂಪನಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರು ಮತ್ತು ವಿದ್ಯುತ್ ಬಳಸಿಕೊಂಡು ಅದರ ಖರ್ಚುವೆಚ್ಚ ಭರಿಸದೆ ಪಂಗನಾಮ ಹಾಕುತ್ತಿದ್ದಾರೆ. ಲೆಕ್ಕಪತ್ರ ಪರಿಶೀಲನೆಯಲ್ಲಿ ಇದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಬಿಲ್ ತಡೆಹಿಡಿಯಲಾಗಿದೆ ಎಂಬುದು ಆರೋಗ್ಯ ಇಲಾಖೆಯ ಸಮಜಾಯಿಷಿ.

ಬಿಆರ್‌ಎಸ್ ಕಂಪನಿ ಹಾಗು ಆರೋಗ್ಯ ಇಲಾಖೆಯ ಮೇಲಾಟದಲ್ಲಿ ಬಲಿ ಪಶುವಾಗುತ್ತಿರುವುದು ಮಾತ್ರ ನಿಸ್ಸಹಾಯಕ-ನಿರ್ಗತಿಕ ಡಯಾಲಿಸಿಸ್ ರೋಗಿಗಳು! ಬಿಆರ್‌ಎಸ್‌ನ ಎಲ್ಲ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಾಪದ ಪೇಶೆಂಟ್‌ಗಳು ಒದ್ದಾಡುತ್ತಿದ್ದಾರೆ. ಡಯಾಲಿಸಿಸ್‌ಗೆ ಬೇಕಾದ ರಾಸಾಯನಿಕ ಔಷಧ ಡಯಲೈಸರ್ ಮುಂತಾದ ಸಲಕರಣೆ ಸೆಂಟರ್‌ಗಳಲ್ಲಿ ಇಲ್ಲದಾಗಿದೆ! ಡಯಾಲಿಸಿಸ್ ಮಾಡುವ ನರ್ಸ್, ಟೆಕ್ನಿಶಿಯನ್‌ಗಳಿಗೆ ಬೇಕಾದ ಕನಿಷ್ಟ ಕೈಗ್ಲೌಸುಗಳು, ಮಾಸ್ಕ್‌ಗಳಿಗೂ ತತ್ವಾರವಾಗಿದೆ.

ಕೆಲವು ತಾಲ್ಲೂಕಿನ ರೋಗಿಗಳು ಅಥವಾ ಅವರ ಸಂಬಂಧಿಕರು ತೀರಾ ಅಗತ್ಯವಾದ ಪರಿಕರ-ಔಷಧ-ರಾಸಾಯನಿಕ ತಂದುಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ಸಂಬಳ ಸಿಗದೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಿಆರ್‌ಎಸ್ ಕಂಪನಿ ಬಿಟ್ಟು ಹೋಗುತ್ತಿರುವುದು, ರೋಗಿಗಳು ಮತ್ತವರ ಪರಿವಾರದವರನ್ನು ಚಿಂತೆಗೀಡುಮಾಡಿದೆ! ಸರ್ಕಾರದಿಂದ ಬರೋಬ್ಬರಿ 28 ಕೋಟಿ ಹಣ ಬರದಿರುವುದರಿಂದ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಬಿಆರ್‌ಎಸ್ ಕಂಪನಿಯವರು ಹೇಳುತ್ತಿದ್ದಾರೆ. ಹಾಗಂತ ಸಂಬಂಧಿಸಿದ ಸಚಿವ ಅಧಿಕಾರಿಗಳಿಗೂ ಪತ್ರ ಬರೆದಿರುವುದಾಗಿ ಬಿಆರ್‌ಎಸ್ ಕಂಪನಿ ಹೇಳಿಯೂ ಆಗಿದೆ.

ಇದು ಪರ್ಸೆಂಟೇಜ್ ಪರಾಕ್ರಮದ ಅಡ್ಡ ಪರಿಣಾಮವೆಂಬ ಆರೋಪವೂ ಕೇಳಿ ಬರುತ್ತಿದೆ. ಈಗಲಾದರೂ ಆರೋಗ್ಯ ಮಂತ್ರಿ ಹಾಗು ಆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಡಯಾಲಿಸಿಸ್ ಪೇಶೆಂಟ್‌ಗಳು ಸಾಲು ಸಾಲಾಗಿ ಸಾಯುವುದು ಖಂಡಿತ! ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮೊದಲೇ ಹೈರಾಣಾಗಿರುವ ಡಯಾಲಿಸಿಸ್ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬ ಕಷ್ಟ. ಉದಾಹರಣೆಗೆ ಉತ್ತರಕನ್ನಡದ ರೋಗಿಗಳು ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಪಣಜಿಗೆ ಹೋಗಬೇಕು. ಹೋಗಲಿಕ್ಕೆ ನಾಲ್ಕೈದು ತಾಸು ಬೇಕು; ಬರುವುದಕ್ಕೆ ಅಷ್ಟೇ ಸಮಯಬೇಕು. ಡಯಾಲಿಸಿಸ್‌ಗೆ 2-3 ಗಂಟೆ ಬೇಕಾಗುತ್ತದೆ. ಅಷ್ಟರಲ್ಲಿ ರೋಗಿ ಏದುಸಿರು ಬಿಡತೊಡಗುತ್ತಾನೆ/ಳೆ. ನಸೀಬ್ ಇದ್ದರಷ್ಟೇ ಬಚಾವ್!!

ತಕ್ಷಣಕ್ಕೆ ಮಂತ್ರಿ ಡಾ. ಸುಧಾಕರ್ ಬಿಆರ್‌ಎಸ್ ಕಂಪನಿಯನ್ನು ಹಳಿಗೆ ತರಲು ಗಂಭೀರ-ನಿಷ್ಠುರ ಪ್ರಯತ್ನ ಮಾಡಬೇಕಿದೆ; ಅದಾಗದಿದ್ದರೆ ಬಡ ರೋಗಿಗಳನ್ನು ಬದುಕಿಸಲು ಬದಲಿ ವ್ಯವಸ್ಥೆ ಮಾಡಬೇಕಿದೆ. ನಂತರ ನಿಧಾನಕ್ಕೆ ಪ್ರತಿ ತಾಲ್ಲೂಕಾಸ್ಪತ್ರೆಗಳಲ್ಲಿ ಸರಕಾರದ್ದೇ ಸ್ವತಂತ್ರ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಯೋಜನೆ ಹಾಕಿ ಕಾರ್ಯಗತಗೊಳಿಸಬೇಕಿದೆ.


ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...