Homeಅಂಕಣಗಳುಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

- Advertisement -
- Advertisement -

ಪಿಕೆ ಟಾಕೀಸ್ 15/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne)

ಟು ನೈಟ್ಸ್, ಒನ್ ನೈಟ್ (2014, ಫ್ರೆಂಚ್, Two nights, One night): ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ತಾಯಿ ಸ್ಯಾಂಡ್ರಾ. ಆಕೆ ಖಿನ್ನತೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಅವಳಿಗೆ ಆಘಾತಕಾರಿಯಾದ ಸುದ್ದಿ ಕಾದಿರುತ್ತದೆ.

ಅದು, ಆರ್ಥಿಕ ಹಿಂಜರಿತದ ಕಾರಣಕ್ಕೆ, ಶುಕ್ರವಾರದಂದು ಅವಳ ಫ್ಯಾಕ್ಟರಿಯಲ್ಲಿ ತೀರ್ಮಾನಿಸಿದಂತೆ, ಸ್ಯಾಂಡ್ರಾಳನ್ನು ಕೆಲಸದಿಂದ ಕಿತ್ತುಹಾಕಬೇಕಿರುತ್ತದೆ. ಅವಳ ಸಹೋದ್ಯೋಗಿಗಳು ಚಲಾಯಿಸುವ ಮತಗಳ ಮೇಲೆ ಸ್ಯಾಂಡ್ರಾಳ ಭವಿಷ್ಯವೇ ನಿರ್ಧಾರವಾಗಲಿರುತ್ತದೆ.

ಸ್ಯಾಂಡ್ರಾ ಮನೆಯಲ್ಲೂ ಆರ್ಥಿಕವಾಗಿ ಎಲ್ಲವೂ ಸರಿಯಿರುವುದಿಲ್ಲ. ಕೆಲಸವನ್ನು ಮರುಪಡೆಯಲು ಪ್ರಯತ್ನಿಸುವಂತೆ ಗಂಡ ಹೇಳುತ್ತಾನೆ. ಅದರಂತೆ ಸ್ಯಾಂಡ್ರಾ ತನಗೆ ಉಳಿದಿರುವ ಶನಿವಾರ ಮತ್ತು ಭಾನುವಾರದ ರಜಾದಿನಗಳಂದು ತನ್ನೆಲ್ಲ ಸಹೋದ್ಯೋಗಿಗಳನ್ನು ಒಬ್ಬೊಬ್ಬರಂತೆ ಭೇಟಿಯಾಗಿ, ತನ್ನ ಕೆಲಸ ಉಳಿಯುವ ಸಲುವಾಗಿ ತನ್ನ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುವುವೇ ಈ ಸಿನಿಮಾದ ಕಥಾನಕ.

ಸ್ಯಾಂಡ್ರಾಳ ಸಹೋದ್ಯೋಗಿಗಳಿಗೆ ತಲಾ ಸಾವಿರ ಯೂರೋ ಬೋನಸ್ ಹಣವನ್ನು ಗಳಿಸಿಕೊಳ್ಳುವ ಅವಕಾಶ, ತಾವು ಮತ ಚಲಾಯಿಸಿ ಸ್ಯಾಂಡ್ರಾ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಅಡಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಸಹೋದ್ಯೋಗಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗಲೂ ವಿವಿಧ ಬಗೆಯ ಸನ್ನಿವೇಶಗಳನ್ನು ಸ್ಯಾಂಡ್ರಾ ಎದುರಿಸಬೇಕಾಗುತ್ತದೆ.

ಕೆಲವರು ಸ್ಯಾಂಡ್ರಾಳ ಸ್ಥಿತಿಯನ್ನು ನೋಡಿ ಮರುಕಪಟ್ಟು, ಆಕೆ ಕೆಲಸಕ್ಕೆ ಹಿಂದಿರುಗಲು ಸಹಾಯವಾಗುವಂತೆ ಮತ ಚಲಾಯಿಸಲು ಒಪ್ಪಿಕೊಂಡರೆ, ಮತ್ತೆ ಕೆಲವರು ಸಾವಿರ ಯೂರೋಗಳನ್ನು ಕಳೆದುಕೊಳ್ಳಬೇಕಾಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇನ್ನು ಕೆಲವರು ತಮ್ಮ ಸಾವಿರ ಯೂರೋಗಳನ್ನು ಕಿತ್ತುಕೊಳ್ಳುವ ಹುನ್ನಾರವಿದು ಎಂದುಕೊಂಡು ಸ್ಯಾಂಡ್ರಾಳ ಮೇಲೆ ಸಿಟ್ಟಾಗುತ್ತಾರೆ ಮತ್ತು ರೇಗಾಡುತ್ತಾರೆ.

ಟು ನೈಟ್ಸ್, ಒನ್ ನೈಟ್

ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಿಗ್ಗೆ ಸ್ಯಾಂಡ್ರಾಳ ಸಹೋದ್ಯೋಗಿಗಳು ಮತ ಚಲಾಯಿಸುವುದರೊಂದಿಗೆ ಸ್ಯಾಂಡ್ರಾ ಹೊರಹೋಗುತ್ತಾಳೆ. ಸಿನಿಮಾ ಅಂತ್ಯವಾಗುತ್ತದೆ.

ಫ್ಯಾಕ್ಟರಿಗಳಲ್ಲಿ ವರ್ಷವೆಲ್ಲ ದುಡಿದು ನೌಕರರು ಬೋನಸ್ ಹಣಕ್ಕಾಗಿ ಕಾಯುತ್ತಿರುವಾಗ, ಸಹೋದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲು ಮತ ಚಲಾಯಿಸಿದರೆ ಮಾತ್ರ ಬೋನಸ್ ಹಣವನ್ನು ನೀಡುವ ಷರತ್ತಿನಿಂದ, ಪರಸ್ಪರರಲ್ಲಿಯೇ ಭೇದ ಮೂಡಿಸಿ, ಮಾನವೀಯ ಕಾಳಜಿಗಳನ್ನು ಮರೆಯುವಂತೆ ಮಾಡುವ ಆಡಳಿತ ವರ್ಗದ ಕ್ರೌರ್ಯವನ್ನು ಸಿನಿಮಾ ಸಶಕ್ತವಾಗಿ ಹಿಡಿದಿಡುತ್ತದೆ. ಫ್ಯಾಕ್ಟರಿ ತನ್ನ ನೌಕರರನ್ನು ಕುರಿತು ತೋರಿಸುವ ನಿರ್ಲಕ್ಷ್ಯ ಮತ್ತು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ವೀಕ್ಷಕರಿಗೆ ಮನಮುಟ್ಟುವಂತೆ ಕಥಾನಕವನ್ನು ನಿರ್ದೇಶಕ ಹೆಣೆದಿದ್ದಾರೆ.

ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವ ಮಾರಿಯಾನ್ ಕೊಟಿಯಾಡ್ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರಖ್ಯಾತಿ ಪಡೆದಿರುವವರು. ಈ ಸಿನಿಮಾದಲ್ಲಿ ಅವರು ಯಾವುದೇ ವಿಧವಾದ ಮೇಕಪ್ ಇಲ್ಲದೆ ಕಾಣಿಸಿಕೊಂಡು, ಅದ್ಬುತ ನಟನೆಯನ್ನು ನೀಡಿದ್ದಾರೆ.

ಖಿನ್ನತೆಯನ್ನು ನಿಜವಾದ ಕಾಯಿಲೆಯೆಂದು ಎಷ್ಟೋ ದೇಶಗಳಲ್ಲಿ ಗುರುತಿಸದೆ ಇರುವುದರ ಬಗ್ಗೆ ಕೂಡ ಈ ಸಿನಿಮಾ ದ್ವನಿ ಎತ್ತುತ್ತದೆ.

ಯಂಗ್ ಅಹ್ಮೆದ್ (2019, ಫ್ರೆಂಚ್, Young Ahmed): ತಂದೆಯನ್ನು ಕಳೆದುಕೊಂಡಿರುವ ಹದಿಮೂರು ವರ್ಷದ ಅಹ್ಮೆದ್ ತಾಯಿ ಮತ್ತು ಸಹೋದರಿಯ ಜೊತೆ ಬೆಲ್ಜಿಯಂನ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಮುಸ್ಲಿಂ ಸಮುದಾಯದ ಹುಡುಗ.

ಅಹ್ಮೆದ್ ಅಲ್ಲಿನ ಹದಿಹರೆಯುದ ಹುಡುಗರು ತೊಡಗಿಸಿಕೊಳ್ಳುವಂತೆ ವಿಡಿಯೋ, ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟು, ಇಸ್ಲಾಂ ಮೂಲಭೂತವಾದಕ್ಕೆ ತಿರುಗಿ ಅದರಂತೆಯೇ ವರ್ತಿಸುತ್ತಾನೆ. ತನ್ನ ತಾಯಿ ಮತ್ತು ಅಕ್ಕನಿಗೆ ಸರಿಯಾದ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಲು ಪ್ರಾರಂಭಿಸುತ್ತಾನೆ. ಹೆಂಗಸರು
ಅಥವಾ ಹುಡುಗಿಯರನ್ನು ಮುಟ್ಟುವುದು ತಪ್ಪೆಂದು ಹೇಳುತ್ತಾನೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಪಾಠಗಳನ್ನು ಬೇಕಂತಲೇ ತಪ್ಪಿಸಿಕೊಳ್ಳುತ್ತಾನೆ. ಕಾರಣ ಶಿಕ್ಷಕಿಗೆ ’ಜ್ಯೂ’ ಬಾಯ್‌ಫ್ರೆಂಡ್ ಇರುವುದು. ಅದಕ್ಕಾಗಿ ಆಕೆಯನ್ನು ದ್ವೇಷಿಸುತ್ತಾನೆ.

ಅಹ್ಮೆದ್‌ನ ಸೋದರ ಸಂಬಂಧಿಯೊಬ್ಬ ಇಸ್ಲಾಂ ಜಿಹಾದಿಯಾಗಿರುತ್ತಾನೆ. ಅಲ್ಲದೆ ಅವನ ಹೆಸರಿನಲ್ಲಿರುವ ವೆಬ್‌ಸೈಟಿನಲ್ಲಿ ನಾಯಕನಂತೆ ರಂಜಿಸಿ ಬರೆದಿರುತ್ತಾರೆ. ಅದೇ ಊರಿನಲ್ಲಿ ಮೂಲಭೂತವಾದಿ ಇಮಾಮ್ ಜೊತೆಯಲ್ಲಿ ಅಹ್ಮೆದ್‌ನ ಗೆಳೆತನ. ’ಸೆಕ್ಯುಲರಿಸಂನಿಂದ ಇಸ್ಲಾಂ ದುರ್ಬಲಗೊಂಡು, ಇಸ್ಲಾಂ ಧರ್ಮವೇ ಮಾಯವಾಗುತ್ತದೆ. ಇದೇ ಕಾರಣದಿಂದ ಇಸ್ಲಾಂ ಧರ್ಮವನ್ನು ಉಳಿಸುವುದ್ದಕ್ಕಾಗಿ ಜವಾಬ್ದಾರಿಯನ್ನು ನಿರ್ವಹಿಸಿಬೇಕೆಂದು’ ಇಮಾಮ್ ಬ್ರೈನ್ ವಾಶ್ ಮಾಡುತ್ತಿರುತ್ತಾನೆ.

ಯಂಗ್ ಅಹ್ಮೆದ್

ಅದರಂತೆ ಅಹ್ಮೆದ್ ದಿನಚರಿ ಬದಲಾಗುತ್ತದೆ. ಒಂಟಿಯಾಗಿರುವುದು, ನಮಾಜ್ ಮಾಡುವುದು ಇಲ್ಲವೇ ಇಮಾಮ್‌ನ ಸಂಘದಲ್ಲಿ ಇರುವುದು ಅಷ್ಟೇ! ಇಸ್ಲಾಂಅನ್ನು ಉಳಿಸಬೇಕೆಂದು ’ಜ್ಯೂಯಿಶ್’ ಬಾಯ್‌ಫ್ರೆಂಡ್ ಇರುವ ಶಿಕ್ಷಕಿಯನ್ನು ಕೊಲ್ಲುವ ಪ್ರಯತ್ನಮಾಡುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಈ ಹಲ್ಲೆಗಾಗಿ ಬಾಲಾಪರಾಧ ಕೇಂದ್ರದಲ್ಲಿ ಬಂಧಿಯಾಗುತ್ತಾನೆ.

ಬಾಲಾಪರಾಧ ಕೇಂದ್ರದಲ್ಲಿಯೇ ಐದು ಬಾರಿ ನಮಾಜ್ ಮಾಡುತ್ತಾ, ತನ್ನಲ್ಲಿ ಪರಿವರ್ತನೆಯಾಗುತ್ತಿದೆ ಎಂದು
ತೋರಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿ ಬಿತ್ತಲಾಗಿದ್ದ ವಿಷ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಕೇಂದ್ರದಲ್ಲಿ ಮನೋಶಾಸ್ತ್ರಜ್ಞರ ಸಹಾಯದಿಂದ, ತೋಟದ ಕೆಲಸದ ನಿಮಿತ್ತ ಅಹ್ಮೆದ್‌ನನ್ನು ಹೊರಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಭೇಟಿಯಾಗುವ ಹುಡುಗಿಯಿಂದ ಅಹ್ಮೆದ್‌ನಲ್ಲಿ ಬದಲಾವಣೆಗಳಾಗುತ್ತಾ ಸಿನಿಮಾ ಕೊನೆಮುಟ್ಟುತ್ತದೆ.

ಹದಿಹರೆಯದವರ ದುರ್ಬಲ ಮನಸ್ಸುಗಳನ್ನು ಹೇಗೆ ಮೂಲಭೂತವಾದಿಗಳು ತಮ್ಮ ತಕ್ಕೆಗೆ ತೆಗೆದುಕೊಂಡು, ಅವರ ಬದುಕನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಾರೆ ಎಂಬುದನ್ನು ಚಿತ್ರಿಸಿರುವ ಸಿನಿಮಾದಲ್ಲಿ ಮಹತ್ವದ ಪ್ರಶ್ನೆಗಳನ್ನೂ ಎತ್ತಲಾಗಿದೆ. ಮನಸ್ಸೆಲ್ಲ ವಿಷ ತುಂಬಿಕೊಂಡು ಮಾಡಿರುವ ತಪ್ಪುಗಳಿಗೆ ಶಿಕ್ಷಿಸಬೇಕಾ ಇಲ್ಲವಾ ಆಥವಾ ಪರಿವರ್ತನೆ ಸಾಧ್ಯವೇ ಎನ್ನುವ ಅತಿ ದೊಡ್ಡ ಪ್ರಶ್ನೆಯನ್ನು ನಿರ್ದೇಶಕರು ಪ್ರೇಕ್ಷಕರಿಗೆ ತೇಲಿಬಿಡುತ್ತಾರೆ.

ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne): ಡಾರ್‌ಡೆನ್ ಸಹೋದರಿಗೆ ವಯಸ್ಸಿನಲ್ಲಿ ಮೂರು ವರ್ಷಗಳ ಅಂತರ. ಈ ಜೋಡಿ ನಿರ್ದೇಶಕರು ಮುಂದುವರೆದ ಸಮಾಜದಲ್ಲಿ ವಿವಿಧ ಕಾರಣಗಳಿಂದ ಒಂಟಿಯಾಗಿರುವ ಮನಸ್ಸುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವ ಪ್ರಯತ್ನವನ್ನು ತಮ್ಮ ಸಿನಿಮಾಗಳಲ್ಲಿ ಶೋಧಿಸಿದ್ದಾರೆ.

ಇವರ ’ಕಿಡ್ ವಿತ್ ಅ ಬೈಕ್’ (2011), ’ದಿ ಚೈಡ್’ (2005) ಮತ್ತು ’ಯಂಗ್ ಅಹ್ಮೆದ್’ ಚಿತ್ರಗಳಲ್ಲಿ ಮಕ್ಕಳ ಮನೋಲೋಕವನ್ನು ಅನ್ವೇಷಿಸಿ ಹಿಡಿದಿಟ್ಟಿದ್ದಾರೆ.

ಇವರ ಸಿನಿಮಾಟೋಗ್ರಾಫಿಯ ಶೈಲಿ ಕೂಡ ವಿಭಿನ್ನವಾದದ್ದು. ಸಾಂಪ್ರದಾಯಿಕವಾಗಿ ಚಿತ್ರಿಸುವಂತೆ ಫುಲ್, ಮಿಡ್ ಮತ್ತು ಕ್ಲೋಸ್‌ಅಪ್ ಶಾಟ್‌ಗಳನ್ನು ಬಳಸದೆ, ಪಾತ್ರಗಳು ತಮ್ಮ ದಿನನಿತ್ಯದಲ್ಲಿ ವ್ಯವಹರಿಸುವಂತೆಯೇ ಅಥವಾ ಮತ್ತೊಂದು ಪಾತ್ರದೊಂದಿಗೆ ಸಂಭಾಷಿಸುತ್ತಿದ್ದಾಗ ಕ್ಯಾಮರಾ ಒಂದೇ ಕಡೆ ನಿಂತು, ಎಲ್ಲದಕ್ಕೂ ಸಾಕ್ಷಿಯೆಂಬಂತೆ ಗಮನಿಸುತ್ತದೆ.

ಡಾರ್‌ಡೆನ್ ಸಹೋದರರು

ಇವರ ಸಿನಿಮಾಗಳಲ್ಲಿ ಕ್ಯಾಮರಾ ಚಲನೆಯೂ ಗಮನಾರ್ಹವಾದದ್ದು. ಪಾತ್ರವೊಂದು ಎಡಬದಿಯಿಂದ ಬೇರೆಕಡೆಗೆ ಹೋಗುವ ಸನ್ನಿವೇಶದಲ್ಲಿ, ಮಧ್ಯೆದಲ್ಲಿ ನಿಂತು ಕ್ಯಾಮರಾವನ್ನು ಎಡಗಡೆಯಿಂದ ಪ್ಯಾನ್ ಮಾಡಿ ಬಲಭಾಗಕ್ಕೆ ತಿರುಗಿಸುತ್ತಾರೆ. ಮತ್ತು ದೃಶ್ಯಗಳನ್ನು ಪದೇ ಪದೇ ತುಂಡರಿಸದೆ, ನಿರಂತರವಾಗಿ ನಡೆವ ಸಂಭಾಷಣೆಗಳಲ್ಲಿ ಪ್ರೇಕ್ಷಕ ಮುಳುಗಿ, ಇದು ಸಿನಿಮಾ ಎಂಬುದನ್ನು ಮರೆತು, ನಿಜವಾಗಿ ನಡೆಯುತ್ತಿರುವ ಸನ್ನಿವೇಶಗಳೇನೋ ಎಂದು ಭಾಸವಾಗುವಂತೆ ಮಾಡಿ, ಪ್ರೇಕ್ಷಕನನ್ನು ಅದಕ್ಕೆ ಮೂಕಸಾಕ್ಷಿಯನ್ನಾಗಿಸುತ್ತಾರೆ.

ಡಾರ್‌ಡೆನ್ ಸಹೋದರರು ಹಲವಾರು ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇದೇ ಕಾರಣದಿಂದಲೇ ಇವರ ಸಿನಿಮಾಟೋಗ್ರಾಫಿಯ ಶೈಲಿ ಫೀಚರ್ ಫಿಲ್ಮ್‌ಗಳಲ್ಲಿ ಕೂಡ ನೈಜತೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...