Homeಮುಖಪುಟಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

ಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

- Advertisement -
- Advertisement -

ನಮ್ಮ ಜನತಂತ್ರದ ಆಧಾರ ಸ್ತಂಭಗಳನ್ನು ಅಲುಗಿಸಲಾಗುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶ ಒಬ್ಬ ಯೋಗ್ಯ ಪತ್ರಕರ್ತನನ್ನು ಕಳೆದುಕೊಂಡಿದೆ. ಹಿಂದೀ ಟೆಲಿವಿಷನ್ ಪತ್ರಿಕೋದ್ಯಮ ಪ್ರವರ್ತಕ ವಿನೋದ್ ದುವಾ ನಿಧನರಾಗಿದ್ದಾರೆ. ಸರ್ವಾಧಿಕಾರವನ್ನು ಧರ್ಮಾಂಧತೆಯನ್ನು ಕೋಮುವಾದವನ್ನು ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುತ್ತಿದ್ದ ಧೀರ ಪತ್ರಿಕೋದ್ಯೋಗಿಯನ್ನು ಸಾವು ಸೆಳೆದುಕೊಂಡಿದೆ.

ಪತ್ನಿ ಪದ್ಮಾವತೀ ’ಚಿನ್ನಾ’ ದುವಾ ಅವರೊಂದಿಗೆ ಆರು ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದ ವಿನೋದ್ ಅವರ ಆರೋಗ್ಯ ಕುಸಿಯುತ್ತಲೇ ಹೋಯಿತು. ಚಿನ್ನಾ ಜೂನ್ ತಿಂಗಳಲ್ಲೇ ಅಗಲಿ ಹೋದರು.

ಹಳೆಯ ದಿಲ್ಲಿಯಲ್ಲಿ ಹುಟ್ಟಿ ಬೆಳೆದ ದುವಾ, ಹನ್ಸರಾಜ್ ಕಾಲೇಜಿನಿಂದ ಇಂಗ್ಲಿಷ್ ಪದವಿ ಪಡೆದು ದೆಹಲಿ ವಿಶ್ವಿವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಮುನ್ನ ದೆಹಲಿಯ ರಂಗಭೂಮಿ ವಲಯಗಳಲ್ಲಿ ಸಕ್ರಿಯರಾಗಿದ್ದರು.

ಆಳುವ ಪಕ್ಷ ಅವರ ಮೇಲೆ ರಾಜದ್ರೋಹದ ಕೇಸು ಹೆಟ್ಟಿ ಕಿರುಕುಳ ನೀಡಿದಾಗ ಅವರು ದೈಹಿಕರಾಗಿ ಜರ್ಝರಿತರು. ಸುಪ್ರೀಮ್ ಕೋರ್ಟು ಅವರ ಪರವಾಗಿ ತೀರ್ಪು ನೀಡಿತು. ರಾಜದ್ರೋಹದ ಕೇಸನ್ನು ವಜಾ ಮಾಡಿತು. ಅಧಿಕಾರಸ್ಥರು ಮತ್ತು ಅಧಿಕಾರವನ್ನು ಕಡೆಗಣ್ಣಿನಿಂದ ಕಂಡ ವಿರಳರು ದುವಾ. ಜನಹಿತಕ್ಕಾಗಿ ಹೇಮಾ ಹೇಮಿಗಳನ್ನು ಎದುರು ಹಾಕಿಕೊಳ್ಳಲು ಹಿಂದೆಮುಂದೆ ನೋಡದ ನಿರ್ಭೀತರು. ಕೇವಲ ಘೋಷಣೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ನೇರ ಮತ್ತು ದಿಟ್ಟರಾಗಿದ್ದವರು ಅವರು. ಜನವಾಣಿ ಕಾರ್ಯಕ್ರಮದ ಸಂದರ್ಶನಗಳ ಸರಣಿಯಲ್ಲಿ ಅವರೆದುರು ಕುಳಿತ ಮಂತ್ರಿಮಾನ್ಯರು ತತ್ತರಿಸುತ್ತಿದ್ದ ಗಳಿಗೆಗಳಿದ್ದವು. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನದಲ್ಲಿ ನಿಮಗೆ ಹತ್ತರಲ್ಲಿ ಮೂರೇ ಅಂಕ ನೀಡುತ್ತಿರುವುದಾಗಿ ಮಂತ್ರಿಗಳ ಮುಖಕ್ಕೇ ಹೇಳುವ ನೈತಿಕ ಧೈರ್ಯವನ್ನು ದುವಾ ಸಂಪಾದಿಸಿದ್ದರು. ಈ ಅವಹೇಳನವನ್ನು ಮತ್ತೆಮತ್ತೆ ಎದುರಿಸಿದ ಮಂತ್ರಿಗಳು ದೂರದರ್ಶನ ಬಿತ್ತರಿಸುತ್ತಿದ್ದ ಈ ಕಾರ್ಯಕ್ರಮವನ್ನೇ ರದ್ದು ಮಾಡುವಂತೆ ಪ್ರಧಾನಿಯ ಮೇಲೆ ಬಹುವಾದ ಒತ್ತಡ ತಂದದ್ದು ಉಂಟು. ಆದರೆ ಸಫಲರಾಗಲಿಲ್ಲ.

ದುವಾ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳರಾಗಿದ್ದರು. ಯಥಾಸ್ಥಿತಿಯನ್ನೂ, ಆಳುವ ವ್ಯವಸ್ಥೆಯನ್ನು ಅಂಜದೆ ಅಳುಕದೆ ಪ್ರಶ್ನಿಸುತ್ತಲೇ ಬಂದ ಅಪರೂಪದ ಪತ್ರಕರ್ತ. ಸೂಫೀ ಸಂಗೀತ ಮತ್ತು ಕವಿತೆಯೆಡೆಗಿನ ಅಗಾಧ ಪ್ರೇಮ ಅವರ ಸುದ್ದಿಗಾರಿಕೆಗೆ ಸೊಬಗು ಸಿರಿವಂತಿಕೆಗಳ ನೀಡಿತ್ತು.

ಅವರ ಆಕ್ರಮಣಶೀಲತೆಯಲ್ಲಿ ಇಂದಿನ ಬಹುತೇಕ ಆಂಕರುಗಳಂತೆ ಕೇವಲ ಭಾವ ಭಂಗಿಗಳ ಟೊಳ್ಳು ಇರಲಿಲ್ಲ. ಬದಲಾಗಿ ಅಧ್ಯಯನಶೀಲತೆ ಮತ್ತು ಆಳದ ತಿಳಿವಳಿಕೆಯ ಹರಿತ ಧಾರೆಯಿರುತ್ತಿತ್ತು.
ಅವರು ತಮ್ಮ ಕಾರ್ಯಕ್ರಮಗಳ ವೀಕ್ಷಿಸುತ್ತಿದ್ದವರ ಉದ್ಯೋಗಿಯಾಗಿದ್ದರೇ ವಿನಾ ಕಟ್ಟಕಡೆಯ ತನಕ ಯಾವುದೇ ಮಾಲೀಕರ ಉದ್ಯೋಗಿ ಆಗಿರಲಿಲ್ಲ. ಸ್ಥಾವರವಾಗಿ ಉಳಿಯದೆ ಜಂಗಮವಾಗಿ ಕೆಲಸ ಮಾಡಿದವರು. ಹತ್ತು ಹಲವು ಸುದ್ದಿ ಸಂಸ್ಥೆಗಳಿಗೆ ಗುತ್ತಿಗೆ ಕರಾರಿನ ಮೂಲಕ ಕಾರ್ಯಕ್ರಮಗಳನ್ನು ಮಾಡಿಕೊಟ್ಟವರು. ಗುತ್ತಿಗೆ ಮುಗಿದ ಕ್ಷಣವೇ ಮುಂದಿನ ಸಂಸ್ಥೆಗೆ ನಡೆಯುತ್ತಿದ್ದವರು. ಎಲ್ಲಿಯೂ ದೀರ್ಘ ಕಾಲ ನೆಲೆ ನಿಲ್ಲದೆ ಯಾಕೆ ಅಷ್ಟೊಂದು ಸಂಸ್ಥೆಗಳಿಗೆ ಕೆಲಸ ಮಾಡಿದಿರಿ ಎಂಬ ಪ್ರಶ್ನೆಗೆ ಅವರ ಉತ್ತರ- ನಿಷ್ಠುರನಾಗಿದ್ದ ನನ್ನನ್ನು ಯಾರೂ ಬಹುಕಾಲ ಇಷ್ಟಪಡುತ್ತಿರಲಿಲ್ಲ.

ಪತ್ರಿಕೋದ್ಯಮಕ್ಕೆ ಅವರು ಕಾಲಿಟ್ಟದ್ದು ದೂರದರ್ಶನದ ಮೂಲಕ. 80ರ ದಶಕಗಳಲ್ಲಿ ಎನ್‌ಡಿಟಿವಿಯ ಪ್ರಣಯ್ ರಾಯ್ ಜೊತೆ ಆರಂಭಿಸಿದ ವಿರಳ ಒಳನೋಟಗಳ ಚುರುಕಿನ ಚುನಾವಣಾ ವಿಶ್ಲೇಷಣೆಗಳು ದುವಾ ಅವರಿಗೆ ದಿನಬೆಳಗಾಗುವುದರಲ್ಲಿ ಖ್ಯಾತಿ ತಂದುಕೊಟ್ಟವು. ಉರ್ದು ಹಿಂದೀ ಸಾಹಿತ್ಯದ ಆಳದ ಓದು ಅವರ ಸುದ್ದಿ ಪ್ರಸ್ತುತಿಯಲ್ಲಿ ಪ್ರತಿಫಲಿಸುತ್ತಿತ್ತು. ಅವರ ಪದಲಾಲಿತ್ಯ, ಪ್ರಖರ ವಿಶ್ಲೇಷಣೆ, ಸುಡುಕೆಂಡಗಳನ್ನು ಉಡಿಯಲ್ಲಿ ಕಟ್ಟಿಕೊಂಡಿರುತ್ತಿದ್ದಂತಹ ಟೀಕೆ ಟಿಪ್ಪಣಿಗಳ ವಿಶಿಷ್ಟ ಸೂಜಿಗಲ್ಲಿನ ಶೈಲಿ ಆದರ್ಶ ಪತ್ರಕರ್ತನೊಬ್ಬನ ದಾರಿ ದೀವಿಗೆ.

ಪ್ರಣಯ್ ರಾಯ್ ಪ್ರಕಾರ ದುವಾ ತಮ್ಮ ಕಾಲದ ಏಕೈಕ ಮಹಾನ್ ಟಿವಿ ಪತ್ರಕರ್ತರಾಗಿದ್ದರು. ತಾವು ಸದಾ ಮೆಚ್ಚಿ ಗೌರವಿಸಿದ ಈ ಸೋಜಿಗದ ಪ್ರತಿಭೆಯಿಂದ ಸಾಕಷ್ಟು ಕಲಿತದ್ದಾಗಿ ಹೇಳಿದ್ದಾರೆ.
ಇಂದಿರಾ ಗಾಂಧೀ ಹೇರಿದ್ದ ತುರ್ತುಪರಿಸ್ಥಿತಿಯಂತಹುದೇ ಗಂಭೀರ ಕಳವಳಕಾರಿ ದುಸ್ಥಿತಿ ಈಗ ದೇಶವನ್ನು ಅವರಿಸಿದೆ. ಅಂದು ಬಸ್ಸುಗಳು ರೈಲುಗಾಡಿಗಳಲ್ಲಿ ಬಂಗಾರದ ದಿನಗಳು ಬರಲಿವೆ ಎಂಬ ಘೋಷಣೆಗಳನ್ನು ಬರೆಸಲಾಗಿತ್ತು. ಇಂದು ’ಅಚ್ಛೇ ದಿನ’ಗಳ ಆಮಿಷವನ್ನು ತೂಗು ಬಿಡಲಾಗಿದೆ. ಇಂದಿರಾ ಸುತ್ತಮುತ್ತಲ ಪಾಪಾಸುಕಳ್ಳಿ ಹಿಡಿಯಷ್ಟು ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಆಳುತ್ತಿರುವವರ ಹಿಂದೆ ದೇಶವ್ಯಾಪಿ ಬೃಹತ್ ಸಂಘಟನೆಯೇ ಇದೆ. ಅದು ಪ್ರತಿಪಾದಿಸುವ ಭೇದಭಾವದ ಸಿದ್ಧಾಂತವೇ ಆವರಿಸಿದೆ ಎಂಬುದು ದುವಾ ಭಾವನೆಯಾಗಿತ್ತು.

ಆಳುವವರ ಬಾಲ ಬಡಿಯುವ ಭಟ್ಟಂಗಿ ಸುದ್ದಿಗಾರಿಕೆಯನ್ನು ಅವರು ದರಬಾರಿ ಮತ್ತು ಸರಕಾರಿ ಎಂದು ಹೆಸರಿಟ್ಟು ಹಂಗಿಸುತ್ತಿದ್ದರು. ಭಾರತ ರಾಜಕಾರಣದ ಅತಿರಥ ಮಹಾರಥರನ್ನು ಸಂದರ್ಶಿಸಿದ್ದ ಅವರು ಭಟ್ಟಂಗಿ ಪ್ರಶ್ನೆಗಳನ್ನು ಎಂದೂ ಕೇಳಿದವರಲ್ಲ. ದೂರದರ್ಶನಕ್ಕಾಗಿ ಅವರು ನಡೆಸಿಕೊಟ್ಟ ಕೆದಕುವ ಶೋಧ ಎಂಬ ಅಜಮಾಸು ಅರ್ಥದ ’ಪರಖ್’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಇಂದಿಗೂ ಅನುಕರಣೀಯ.

ಅಧಿಕಾರವನ್ನು ಸದಾ ಪ್ರಶ್ನಿಸಿದ ಪತ್ರಿಕೆಗಳಲ್ಲಿ ಒಂದಾದ ’ಜನಸತ್ತಾ’ದ ಮಾಜಿ ಸಂಪಾದಕ ಓಮ್ ಥನ್ವಿ ಅವರ ಪ್ರಕಾರ ದುವಾ ತಮ್ಮ ಟಿವಿ ಸುದ್ದಿ ಪ್ರಸ್ತುತಿಗಳ ಬರಹರೂಪವನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿರಲಿಲ್ಲ. ಆಂಕರ್‌ಗಳು ಅವಲಂಬಿಸುವ ಟೆಲಿಪ್ರಾಂಪ್ಟರಿನ ಹಂಗೂ ಅವರಿಗೆ ಇರಲಿಲ್ಲ. ಕ್ಯಾಮೆರಾ ಚಾಲೂ ಆಯಿತೆಂದರೆ ಅವರ ಆಲೋಚನೆಗಳು ಅಭಿಜಾತವಾಗಿ ಹರಿಯುತ್ತಿದ್ದವು. ಹರಿತ ವ್ಯಂಗ್ಯ ವಿಡಂಬನೆ ಮತ್ತು ಸೂಕ್ಷ್ಮ ಒಳನೋಟಗಳ ಲೀಲಾಜಾಲ ವಿಶ್ಲೇಷಣೆ ಅವರದಾಗಿತ್ತು. ತಪ್ಪು, ತಡವರಿಕೆ ರೀಟೇಕ್‌ಗಳ ಗೊಡವೆಯೇ ಅವರಿಗಿರಲಿಲ್ಲ. ಟೆಲಿವಿಷನ್ ಸುದ್ದಿ ತಂತ್ರಜ್ಞಾನ ಇನ್ನೂ ನಡೆಯಲು ಕಲಿಯುತ್ತಿದ್ದ ದಿನಗಳಲ್ಲಿ ಮಾಧ್ಯಮದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು ದುವಾ.

ಭೋಜನಪ್ರಿಯ ದುವಾ ಗಂಭೀರ ಸುದ್ದಿ ವಿಶ್ಲೇಷಣೆಯ ಜೊತೆಗೆ ’ಜಾಯ್ಕಾ ಇಂಡಿಯಾ ಕಾ’ ಎಂಬ ಅತ್ಯಂತ ಜನಪ್ರಿಯ ತಿಂಡಿ ತಿನಿಸು ಭೋಜನದ ಕಾರ್ಯಕ್ರಮವನ್ನೂ ದೀರ್ಘಕಾಲ ನಡೆಸಿಕೊಟ್ಟರು. ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಗಳ ಅಪರೂಪದ ರುಚಿಕರ ವ್ಯಂಜನಗಳು ಮತ್ತು ಹೊಟೆಲುಗಳನ್ನು ಪರಿಚಯಿಸಿದರು. ಮೈಸೂರಿನ ಗುರು ಸ್ವೀಟ್ಸ್‌ನಲ್ಲಿ ಮೈಸೂರು ಪಾಕ್ ಮೆದ್ದು ಹೊರಬಿದ್ದು ಅರಮನೆ ನಗರಿಯ ಸ್ವಚ್ಛತೆ ಮತ್ತು ಅಲ್ಲಿನ ಪೌರರ ನೈರ್ಮಲ್ಯಪ್ರಜ್ಞೆಯನ್ನು ಮೆಚ್ಚಿದ್ದು ಈ ಪತ್ರಕರ್ತನಿಗೆ ಇನ್ನೂ ನೆನಪಿದೆ. ವಿದೇಶಗಳಿಗೂ ಪಯಣಿಸಿದ ಅವರ ಈ ಕಾರ್ಯಕ್ರಮದ ಹೆಸರು ವಿಶೇಷವಾಗಿ ಉತ್ತರಭಾರತದ ಭೋಜನಪ್ರಿಯರ ನಾಲಗೆಗಳ ಮೇಲೆ ನಲಿಯಿತು.

ಟೆಲಿವಿಷನ್ ಪತ್ರಿಕೋದ್ಯಮದ ನಂತರ ಭಾರೀ ಸೆಟ್ಟುಗಳ ಸ್ಟುಡಿಯೋಗಳ ಅಂಧಾದುಂದಿನ ಹಂಗಿಲ್ಲದ ಸಾಮಾಜಿಕ ಅಂತರ್ಜಾಲ ತಾಣಗಳ ನೇರ ಸರಳ ಗುಣಗಳು ದುವಾ ಅವರನ್ನು ಸೆಳೆದಿದ್ದವು.

ಸಿದ್ಧಾರ್ಥ ವರದರಾಜನ್ ಸಂಗಾತಿಗಳು ನಡೆಸುವ ’ದಿ ವೈರ್’ ಹೆಸರಿನ ಡಿಜಿಟಲ್ ಸುದ್ದಿ ವೇದಿಕೆಗೆ ನಡೆಸಿಕೊಟ್ಟ ಸುದ್ದಿ ವಿಶ್ಲೇಷಣೆಗಳ ಪ್ರದರ್ಶನಗಳಿಗೆ ಚಿಕ್ಕಾಸನ್ನೂ ಪಡೆಯಲಿಲ್ಲ ಅವರು. ತಾವು ದುಡಿದ ಸಂಸ್ಥೆಗಳಿಗೆ ಘನತೆ ತಂದುಕೊಟ್ಟವರು. ಮೂರೂವರೆ ದಶಕಗಳ ಕಾಲ ಟೀವಿ ಪತ್ರಿಕೋದ್ಯಮದ ಬೆಳಕಿನ ಸ್ತಂಭವಾಗಿದ್ದವರು.

ಅಪ್ರತಿಮ ಅಭಿಜಾತ ಸಮಾಜಮುಖಿ ಸುದ್ದಿ ಸಂವಹನಕಾರ ಕಟ್ಟಕಡೆಯ ಸುದ್ದಿ ಪ್ರಸ್ತುತಿ ಮುಗಿಸಿ ಮರಳಿ ಬಾರದಂತೆ ಮರೆಯಾಗಿದ್ದಾನೆ. ಹೀಗೆ ನಿರ್ಗಮಿಸುವ ಕಾಲ ಇದಾಗಿರಲಿಲ್ಲ. ಆದರೆ ಕಾಲನನ್ನು ಗೆದ್ದವರು ಯಾರಿದ್ದಾರೆ?


ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...