Homeಕರ್ನಾಟಕಲಂಕೇಶರ ಊರಿನಲ್ಲಿ

ಲಂಕೇಶರ ಊರಿನಲ್ಲಿ

- Advertisement -
- Advertisement -

ಮಾರ್ಚ್ 8ನೇ ತಾರೀಖು ಲಂಕೇಶರು ಹುಟ್ಟಿದ ದಿನ. ಅವರಿದ್ದಷ್ಟು ಕಾಲ ಆ ದಿನವನ್ನು ಲಂಕೇಶರ ಆಫೀಸು ಮತ್ತು ತೋಟದ ಮನೆಯಲ್ಲಿ ತುಂಬ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಯ್ತು. ಅವರ ನಿರ್ಗಮನದ ನಂತರ ಅವರ ಅಭಿಮಾನಿಗಳಲ್ಲಿ ಅನೇಕರು ಅಲ್ಲಿಇಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗದಲ್ಲೂ ನಡೆದಿದೆ. ಕಳೆದ ವರ್ಷ ನಾಟಕ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿ(ನಿ)ಗಳನ್ನು ಗುರುತಿಸಿ ಅವರನ್ನ ಕರೆದು ಕಥಾ ಕಮ್ಮಟ ಏರ್ಪಡಿಸಿದ್ದರು ಮತ್ತು ಅವರಿಗೆಲ್ಲಾ ಕಥೆ ಬರೆಯಲು ಪ್ರೇರೇಪಿಸಿದ್ದರು. ಇದರಿಂದ ಹೊಸ ತಲೆಮಾರು ಏನನ್ನ ಬರೆಯಲು ಯೋಚಿಸುತ್ತಿದೆ ಎಂಬುದು ಅರಿವಾಯ್ತು. ಸಂಜೆ ದಿಢೀರನೆ ಪ್ರತ್ಯಕ್ಷವಾದ ನಟರಾಜ್ ಹುಳಿಯಾರ್ ಲಂಕೇಶರನ್ನ ಕುರಿತು ಮಾತನಾಡಿ ಹೊಸ ತಲೆಮಾರಿಗೆ ಲಂಕೇಶ್ ಎಂತಹ ಲೇಖಕ ಎಂಬುದರ ಬಗ್ಗೆ ಒಂದು ಅಪರೂಪದ ವ್ಯಕ್ತಿಚಿತ್ರ ಹಿಡಿದುಕೊಟ್ಟರು. ಸೇರಿದ್ದ 70 ಜನ ವಿದ್ಯಾರ್ಥಿಗಳಿಗೆ ಲಂಕೇಶರ ಒಂದೊಂದು ಕೃತಿಯನ್ನ ಕೊಟ್ಟೆವು. ಅವನ್ನು ಲಂಕೇಶರ ಪತ್ನಿ ಇಂದಿರಮ್ಮ ಒದಗಿಸಿದ್ದರು.

ಸಾಸ್ವೆಹಳ್ಳಿ ಸತೀಶ್

ಈ ವರ್ಷ ಲಂಕೇಶರ ಗದ್ಯ ಸಾಹಿತ್ಯದ ಅಧ್ಯಯನ ಎಂಬ ವಿಷಯವನ್ನಿಟ್ಟುಕೊಂಡು ನಟರಾಜ್ ಹುಳಿಯಾರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮಾಡಲು ಹೊರಟೆವು. ಆದರೆ ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿ ಪರೀಕ್ಷೆ ನಡೆಯುವ ಕಾರಣಕ್ಕೆ ಕೈಬಿಟ್ಟೆವು. ಆದರೆ ಲಂಕೇಶರ ಹುಟ್ಟೂರಾದ ಕೊನಗವಳ್ಳಿಯಲ್ಲಿ ಅವರ ಕುರಿತು ಸಭೆಯಿದೆ ಎಂಬ ಸುದ್ದಿ ಬಂತು. ಕತ್ತಿಗೆ ಚನ್ನಪ್ಪ ಮತ್ತು ಶಂಕರಪ್ಪ ಏರ್ಪಡಿಸಿದ್ದಾರೆ, ಅವರ ಮಗ ಬರುತ್ತಾರೆ ಎಂದು ತಿಳಿದುಬಂತು. ಇನ್ನು ಅಲ್ಲಿ ನಮಗೇನು ಕೆಲಸ ಎಂದು ಸುಮ್ಮನಾದೆ. ಆದರೆ ಲಂಕೇಶರ ಮಗ ಹೈದರಾಬಾದಲ್ಲಿ ಶೂಟಿಂಗ್ ನಡೆಸುತ್ತಿರುವುದರಿಂದ ಬರುವುದಿಲ್ಲವಂತೆ ಎಂಬ ವರ್ತಮಾನ ಬಂತು. ಕೂಡಲೇ ನಾನು ಸಾಸ್ವೆಹಳ್ಳಿ ಸತೀಶ್ ಕೊನಗವಳ್ಳಿಗೆ ಹೊರಟೆವು.

ಕೊನಗವಳ್ಳಿಯಲ್ಲಿ ಕರಿಯವ್ವನ ಗುಡಿ ನೋಡಿ ಲಂಕೇಶರ ಮನೆ ಹಿಂದಿನ ಉಡೇವು ನೋಡಿ ಕಾರ್ಯಕ್ರಮ ನಡೆಯಲಿರುವ ಲಂಕೇಶ್ ಸಮುದಾಯಕ್ಕೆ ಬಂದೆವು. ಸಭೆ ಆರಂಭವಾಯ್ತು. ನಿರೂಪಕ ಪ್ರಸ್ತಾವನೆಯನ್ನ ದೀರ್ಘವಾಗಿ ಮಾಡಿ ನಮಗೆಲ್ಲಾ ಐದು ನಿಮಿಷ ಸಾಕು ಎಂದರು. ಲಂಕೇಶರ ಸಂಬಂಧಿ ಶಂಕರಪ್ಪ ಸುದೀರ್ಘವಾಗಿ ಮಾತನಾಡಿದರು. ಇವರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಜನಗಳೇ ಇಲ್ಲದ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವುದು, ಪುಸ್ತಕದ ಮಳಿಗೆಗಳಿಲ್ಲದ ಸಾಹಿತ್ಯ ಸಮಾರಂಭ ಮಾಡುವುದರಲ್ಲಿ ಎತ್ತಿದ ಕೈ. ವೇದಿಕೆ ಮೇಲೆ ಎಷ್ಟು ಜನ ಇರುತ್ತಾರೊ ಅಷ್ಟೇ ಜನ ಸಭಾಂಗಣದಲ್ಲಿದ್ದರೆ ಇವರಿಗೇನೂ ಸಮಾಧಾನ. ಕೇಳಿದರೆ “ಜನ ಬರಲಿಲ್ಲ ಅಂದ್ರೆ ನಾನೇಮಾಡಕ್ಯಾತಿ” ಎನ್ನುತ್ತಿದ್ದರು. ಒಳ್ಳೆಯ ವ್ಯಕ್ತಿಯಾದ್ದರಿಂದ ಸಹಿಸಿಕೊಂಡೆವು. ಆದರೆ ಕಳೆದ ಚುನಾವಣೆಯಲ್ಲಿ ಇವರನ್ನ ಕರೆದುಕೊಂಡು ಹೋದ ಆರ್‌ಎಸ್‌ಎಸ್ಸಿಗರು ತಮ್ಮ ನಡುವೆ ಕೂರಿಸಿಕೊಂಡು ನೀವು ಗೆದ್ದಾಯ್ತು ಎಂದು ಉಬ್ಬಿಸಿದರು. ಲೋಕಸಭಾ ಸದಸ್ಯ ರಾಘವೇಂದ್ರ ಶಂಕರಪ್ಪನಿಗೆ ಮತಹಾಕುವಂತೆ ಸ್ವತಃ ಆಜ್ಞಾಪಿಸಿದರು. ಲಿಂಗಾಯಿತ ಉಪ ಜಾತಿಗಳೆಲ್ಲಾ ಒಟ್ಟಾಗಿ ಶಂಕರಪ್ಪನ ಬೆಂಬಲಕ್ಕೆ ನಿಂತರು. ಇದರಿಂದ ಎಚ್ಚೆತ್ತುಕೊಂಡ ಸಾಹಿತ್ಯ ಪರಿಷತ್ ಮತದಾರರು ಒಟ್ಟಾಗಿ ಡಿ. ಮಂಜುನಾಥರನ್ನ ಬೆಂಬಲಿಸಿ ಗೆಲ್ಲಿಸಿದರು. ಆದರೆ ಶಂಕರಪ್ಪನಿಗೆ ಜ್ಞಾನೋದಯವಾದಂತೆ ಕಾಣಲಿಲ್ಲ.

ಲಂಕೇಶರ ಸಭೆಗೆ ಬಂದು ಮಾತನಾಡುತ್ತ “ಲಂಕೇಶ್ ನನ್ನತ್ರ ಏನೇಳಿದ್ರು ಅಂದ್ರೆ ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಕಣಯ್ಯ ಅಂದಿದ್ರು” ಎಂದರು. ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪ ಒಂದು ಸಭೆಯಲ್ಲಿ ಹೇಳಿದ ಸುಳ್ಳಿಗೆ ಬೆಚ್ಚುವಂತಾಯ್ತು. ಮುಂದುವರಿದ ಶಂಕರಪ್ಪ, “ನಾನು ಸಾಹಿತ್ಯ ಸಮ್ಮೇಳನ ಮಾಡ್ತಿನಿ ದುಡ್ಡು ಕೊಡಿ ಅಂತ ಇಪ್ಪತ್ತೈದು ಲಕ್ಷ ಕೇಳಿದ್ರೆ ಐವತ್ತು ಲಕ್ಷ ಕೊಟ್ರು” ಎಂದರು. ಹೀಗೆ ಶಂಕರಪ್ಪ ಲಂಕೇಶರನ್ನ ಸುಳ್ಳುಸುಳ್ಳೇ ಯಡಿಯೂರಪ್ಪನ ಅಭಿಮಾನಿ ಮಾಡಿಬಿಟ್ಟರು. ಇದಕ್ಕಿಂತ ಮೊದಲು “ಲಂಕೇಶರಿಗೆ ನಮ್ಮ ಜನ ಕಂಡ್ರೆ ಭಾಳ ಪ್ರೀತಿ, ನನ್ನ ತಮ್ಮನಿಗೆ ಎಮ್ಮೆಲ್ಲೆ ಟಿಕೆಟ್ ಕೊಡಿಸಿದ್ರು” ಎಂದಿದ್ದರು. “ನನ್ನ ತಮ್ಮನಿಗೆ ಟಿಕೆಟ್ ಕೊಡಿಸಲು ಸಹಾಯ ಮಾಡಲಿಲ್ಲ, ಮೆಚ್ಚಿ ಬರೆಯಲಿಲ್ಲ. ನಮ್ಮ ಏಳಿಗೆನ ಸಹಿಸಲ್ಲ ನೀವು” ಎಂದು ಟೀಕಿಸಿ ಬರೆದ ಪತ್ರ ಲಂಕೇಶರ ಟೇಬಲ್ ಮೇಲಿದ್ದುದನ್ನ ನಾನು ನೋಡಿದ್ದೆ.

ಅದೇನಾದರೂ ಆಗಲಿ, ನಿನ್ನೆ ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪನವರು ಬಿಜೆಪಿ ಸೇರಿದ ಕೂಡಲೇ ಸುಳ್ಳುಬುರುಕನಾಗಿ ಬದಲಾದದ್ದು ನಮಗಂತೂ ಆಶ್ಚರ್ಯ ಹುಟ್ಟಸಲಿಲ್ಲ. ಆದರೆ ಈತ ’ಯಡಿಯೂರಪ್ಪ ಒಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ಲಂಕೇಶ್ ಹೇಳಿದ್ದರು’ ಎಂಬ ಮಾತನ್ನ ಖಂಡಿಸಬೇಕಿದೆ. ಲಂಕೇಶ್ ಎಂದೂ ಯಡಿಯೂರಪ್ಪನ ಪರ ಮಾತನಾಡಿದ್ದಾಗಲಿ, ಒಂದು ಸಾಲನ್ನು ಬರೆದಿದ್ದಾಗಲಿ ಇಲ್ಲ. ಶಂಕರಪ್ಪ ಕನ್ನಡದ ಪ್ರಜ್ಞಾವಂತರ ಮನಸ್ಸಿನ ಒಂದು ಎಚ್ಚರವಾಗಿರುವ ಲಂಕೇಶರ ಬಗ್ಗೆ ಸುಳ್ಳುಗಳನ್ನ ನಿಲ್ಲಿಸುವುದು
ಅವರಿಗೇ ಒಳ್ಳೆಯದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...