Homeಕರ್ನಾಟಕಲಂಕೇಶರ ಊರಿನಲ್ಲಿ

ಲಂಕೇಶರ ಊರಿನಲ್ಲಿ

- Advertisement -
- Advertisement -

ಮಾರ್ಚ್ 8ನೇ ತಾರೀಖು ಲಂಕೇಶರು ಹುಟ್ಟಿದ ದಿನ. ಅವರಿದ್ದಷ್ಟು ಕಾಲ ಆ ದಿನವನ್ನು ಲಂಕೇಶರ ಆಫೀಸು ಮತ್ತು ತೋಟದ ಮನೆಯಲ್ಲಿ ತುಂಬ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಯ್ತು. ಅವರ ನಿರ್ಗಮನದ ನಂತರ ಅವರ ಅಭಿಮಾನಿಗಳಲ್ಲಿ ಅನೇಕರು ಅಲ್ಲಿಇಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗದಲ್ಲೂ ನಡೆದಿದೆ. ಕಳೆದ ವರ್ಷ ನಾಟಕ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಸಾಹಿತ್ಯಾಸಕ್ತ ಕಾಲೇಜು ವಿದ್ಯಾರ್ಥಿ(ನಿ)ಗಳನ್ನು ಗುರುತಿಸಿ ಅವರನ್ನ ಕರೆದು ಕಥಾ ಕಮ್ಮಟ ಏರ್ಪಡಿಸಿದ್ದರು ಮತ್ತು ಅವರಿಗೆಲ್ಲಾ ಕಥೆ ಬರೆಯಲು ಪ್ರೇರೇಪಿಸಿದ್ದರು. ಇದರಿಂದ ಹೊಸ ತಲೆಮಾರು ಏನನ್ನ ಬರೆಯಲು ಯೋಚಿಸುತ್ತಿದೆ ಎಂಬುದು ಅರಿವಾಯ್ತು. ಸಂಜೆ ದಿಢೀರನೆ ಪ್ರತ್ಯಕ್ಷವಾದ ನಟರಾಜ್ ಹುಳಿಯಾರ್ ಲಂಕೇಶರನ್ನ ಕುರಿತು ಮಾತನಾಡಿ ಹೊಸ ತಲೆಮಾರಿಗೆ ಲಂಕೇಶ್ ಎಂತಹ ಲೇಖಕ ಎಂಬುದರ ಬಗ್ಗೆ ಒಂದು ಅಪರೂಪದ ವ್ಯಕ್ತಿಚಿತ್ರ ಹಿಡಿದುಕೊಟ್ಟರು. ಸೇರಿದ್ದ 70 ಜನ ವಿದ್ಯಾರ್ಥಿಗಳಿಗೆ ಲಂಕೇಶರ ಒಂದೊಂದು ಕೃತಿಯನ್ನ ಕೊಟ್ಟೆವು. ಅವನ್ನು ಲಂಕೇಶರ ಪತ್ನಿ ಇಂದಿರಮ್ಮ ಒದಗಿಸಿದ್ದರು.

ಸಾಸ್ವೆಹಳ್ಳಿ ಸತೀಶ್

ಈ ವರ್ಷ ಲಂಕೇಶರ ಗದ್ಯ ಸಾಹಿತ್ಯದ ಅಧ್ಯಯನ ಎಂಬ ವಿಷಯವನ್ನಿಟ್ಟುಕೊಂಡು ನಟರಾಜ್ ಹುಳಿಯಾರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಮಾಡಲು ಹೊರಟೆವು. ಆದರೆ ವಿದ್ಯಾರ್ಥಿಗಳಿಗೆ ಆ ಸಮಯದಲ್ಲಿ ಪರೀಕ್ಷೆ ನಡೆಯುವ ಕಾರಣಕ್ಕೆ ಕೈಬಿಟ್ಟೆವು. ಆದರೆ ಲಂಕೇಶರ ಹುಟ್ಟೂರಾದ ಕೊನಗವಳ್ಳಿಯಲ್ಲಿ ಅವರ ಕುರಿತು ಸಭೆಯಿದೆ ಎಂಬ ಸುದ್ದಿ ಬಂತು. ಕತ್ತಿಗೆ ಚನ್ನಪ್ಪ ಮತ್ತು ಶಂಕರಪ್ಪ ಏರ್ಪಡಿಸಿದ್ದಾರೆ, ಅವರ ಮಗ ಬರುತ್ತಾರೆ ಎಂದು ತಿಳಿದುಬಂತು. ಇನ್ನು ಅಲ್ಲಿ ನಮಗೇನು ಕೆಲಸ ಎಂದು ಸುಮ್ಮನಾದೆ. ಆದರೆ ಲಂಕೇಶರ ಮಗ ಹೈದರಾಬಾದಲ್ಲಿ ಶೂಟಿಂಗ್ ನಡೆಸುತ್ತಿರುವುದರಿಂದ ಬರುವುದಿಲ್ಲವಂತೆ ಎಂಬ ವರ್ತಮಾನ ಬಂತು. ಕೂಡಲೇ ನಾನು ಸಾಸ್ವೆಹಳ್ಳಿ ಸತೀಶ್ ಕೊನಗವಳ್ಳಿಗೆ ಹೊರಟೆವು.

ಕೊನಗವಳ್ಳಿಯಲ್ಲಿ ಕರಿಯವ್ವನ ಗುಡಿ ನೋಡಿ ಲಂಕೇಶರ ಮನೆ ಹಿಂದಿನ ಉಡೇವು ನೋಡಿ ಕಾರ್ಯಕ್ರಮ ನಡೆಯಲಿರುವ ಲಂಕೇಶ್ ಸಮುದಾಯಕ್ಕೆ ಬಂದೆವು. ಸಭೆ ಆರಂಭವಾಯ್ತು. ನಿರೂಪಕ ಪ್ರಸ್ತಾವನೆಯನ್ನ ದೀರ್ಘವಾಗಿ ಮಾಡಿ ನಮಗೆಲ್ಲಾ ಐದು ನಿಮಿಷ ಸಾಕು ಎಂದರು. ಲಂಕೇಶರ ಸಂಬಂಧಿ ಶಂಕರಪ್ಪ ಸುದೀರ್ಘವಾಗಿ ಮಾತನಾಡಿದರು. ಇವರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಜನಗಳೇ ಇಲ್ಲದ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವುದು, ಪುಸ್ತಕದ ಮಳಿಗೆಗಳಿಲ್ಲದ ಸಾಹಿತ್ಯ ಸಮಾರಂಭ ಮಾಡುವುದರಲ್ಲಿ ಎತ್ತಿದ ಕೈ. ವೇದಿಕೆ ಮೇಲೆ ಎಷ್ಟು ಜನ ಇರುತ್ತಾರೊ ಅಷ್ಟೇ ಜನ ಸಭಾಂಗಣದಲ್ಲಿದ್ದರೆ ಇವರಿಗೇನೂ ಸಮಾಧಾನ. ಕೇಳಿದರೆ “ಜನ ಬರಲಿಲ್ಲ ಅಂದ್ರೆ ನಾನೇಮಾಡಕ್ಯಾತಿ” ಎನ್ನುತ್ತಿದ್ದರು. ಒಳ್ಳೆಯ ವ್ಯಕ್ತಿಯಾದ್ದರಿಂದ ಸಹಿಸಿಕೊಂಡೆವು. ಆದರೆ ಕಳೆದ ಚುನಾವಣೆಯಲ್ಲಿ ಇವರನ್ನ ಕರೆದುಕೊಂಡು ಹೋದ ಆರ್‌ಎಸ್‌ಎಸ್ಸಿಗರು ತಮ್ಮ ನಡುವೆ ಕೂರಿಸಿಕೊಂಡು ನೀವು ಗೆದ್ದಾಯ್ತು ಎಂದು ಉಬ್ಬಿಸಿದರು. ಲೋಕಸಭಾ ಸದಸ್ಯ ರಾಘವೇಂದ್ರ ಶಂಕರಪ್ಪನಿಗೆ ಮತಹಾಕುವಂತೆ ಸ್ವತಃ ಆಜ್ಞಾಪಿಸಿದರು. ಲಿಂಗಾಯಿತ ಉಪ ಜಾತಿಗಳೆಲ್ಲಾ ಒಟ್ಟಾಗಿ ಶಂಕರಪ್ಪನ ಬೆಂಬಲಕ್ಕೆ ನಿಂತರು. ಇದರಿಂದ ಎಚ್ಚೆತ್ತುಕೊಂಡ ಸಾಹಿತ್ಯ ಪರಿಷತ್ ಮತದಾರರು ಒಟ್ಟಾಗಿ ಡಿ. ಮಂಜುನಾಥರನ್ನ ಬೆಂಬಲಿಸಿ ಗೆಲ್ಲಿಸಿದರು. ಆದರೆ ಶಂಕರಪ್ಪನಿಗೆ ಜ್ಞಾನೋದಯವಾದಂತೆ ಕಾಣಲಿಲ್ಲ.

ಲಂಕೇಶರ ಸಭೆಗೆ ಬಂದು ಮಾತನಾಡುತ್ತ “ಲಂಕೇಶ್ ನನ್ನತ್ರ ಏನೇಳಿದ್ರು ಅಂದ್ರೆ ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಕಣಯ್ಯ ಅಂದಿದ್ರು” ಎಂದರು. ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪ ಒಂದು ಸಭೆಯಲ್ಲಿ ಹೇಳಿದ ಸುಳ್ಳಿಗೆ ಬೆಚ್ಚುವಂತಾಯ್ತು. ಮುಂದುವರಿದ ಶಂಕರಪ್ಪ, “ನಾನು ಸಾಹಿತ್ಯ ಸಮ್ಮೇಳನ ಮಾಡ್ತಿನಿ ದುಡ್ಡು ಕೊಡಿ ಅಂತ ಇಪ್ಪತ್ತೈದು ಲಕ್ಷ ಕೇಳಿದ್ರೆ ಐವತ್ತು ಲಕ್ಷ ಕೊಟ್ರು” ಎಂದರು. ಹೀಗೆ ಶಂಕರಪ್ಪ ಲಂಕೇಶರನ್ನ ಸುಳ್ಳುಸುಳ್ಳೇ ಯಡಿಯೂರಪ್ಪನ ಅಭಿಮಾನಿ ಮಾಡಿಬಿಟ್ಟರು. ಇದಕ್ಕಿಂತ ಮೊದಲು “ಲಂಕೇಶರಿಗೆ ನಮ್ಮ ಜನ ಕಂಡ್ರೆ ಭಾಳ ಪ್ರೀತಿ, ನನ್ನ ತಮ್ಮನಿಗೆ ಎಮ್ಮೆಲ್ಲೆ ಟಿಕೆಟ್ ಕೊಡಿಸಿದ್ರು” ಎಂದಿದ್ದರು. “ನನ್ನ ತಮ್ಮನಿಗೆ ಟಿಕೆಟ್ ಕೊಡಿಸಲು ಸಹಾಯ ಮಾಡಲಿಲ್ಲ, ಮೆಚ್ಚಿ ಬರೆಯಲಿಲ್ಲ. ನಮ್ಮ ಏಳಿಗೆನ ಸಹಿಸಲ್ಲ ನೀವು” ಎಂದು ಟೀಕಿಸಿ ಬರೆದ ಪತ್ರ ಲಂಕೇಶರ ಟೇಬಲ್ ಮೇಲಿದ್ದುದನ್ನ ನಾನು ನೋಡಿದ್ದೆ.

ಅದೇನಾದರೂ ಆಗಲಿ, ನಿನ್ನೆ ಮೊನ್ನೆಯವರೆಗೂ ಚೆನ್ನಾಗಿದ್ದ ಶಂಕರಪ್ಪನವರು ಬಿಜೆಪಿ ಸೇರಿದ ಕೂಡಲೇ ಸುಳ್ಳುಬುರುಕನಾಗಿ ಬದಲಾದದ್ದು ನಮಗಂತೂ ಆಶ್ಚರ್ಯ ಹುಟ್ಟಸಲಿಲ್ಲ. ಆದರೆ ಈತ ’ಯಡಿಯೂರಪ್ಪ ಒಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ಲಂಕೇಶ್ ಹೇಳಿದ್ದರು’ ಎಂಬ ಮಾತನ್ನ ಖಂಡಿಸಬೇಕಿದೆ. ಲಂಕೇಶ್ ಎಂದೂ ಯಡಿಯೂರಪ್ಪನ ಪರ ಮಾತನಾಡಿದ್ದಾಗಲಿ, ಒಂದು ಸಾಲನ್ನು ಬರೆದಿದ್ದಾಗಲಿ ಇಲ್ಲ. ಶಂಕರಪ್ಪ ಕನ್ನಡದ ಪ್ರಜ್ಞಾವಂತರ ಮನಸ್ಸಿನ ಒಂದು ಎಚ್ಚರವಾಗಿರುವ ಲಂಕೇಶರ ಬಗ್ಗೆ ಸುಳ್ಳುಗಳನ್ನ ನಿಲ್ಲಿಸುವುದು
ಅವರಿಗೇ ಒಳ್ಳೆಯದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...