Homeಮುಖಪುಟಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

ಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

ಭಾರತ- ಬಾಂಗ್ಲಾ ನಡುವಿನ ಗಡಿಗಳನ್ನು ಮೀರಿದ ಅಫ್ಸಾನಾ ಬೀಬಿ-ಶೇಖ್ ರಫೀಕುಲ್‌ ಪ್ರೇಮಕಥನವಿದು... 26 ವರ್ಷಗಳ ದಾಂಪತ್ಯಕ್ಕೆ ಯಾವ ಪುರಾವೆ ಬೇಕು?

- Advertisement -
- Advertisement -

ನಾನು ಅವನನ್ನು ಮಾತ್ರ ಮದುವೆಯಾಗುತ್ತೇನೆ ಎಂದು ಹೇಳಿದ್ದ ಅಫ್ಸಾನಾ ಬೀಬಿ ಅವರಿಗೆ ಆಗ ಆಕೆಗೆ ಕೇವಲ 14 ವರ್ಷ. ಇಂದು, ಅವರು ಶೇಖ್ ರಫೀಕುಲ್ ಜೊತೆ 26 ವರ್ಷಗಳ ವೈವಾಹಿಕ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಲಾಲ್ಗೋಲಾ ಎಂಬ ಗಡಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. “ನಾವು ಎರಡು ವಿಭಿನ್ನ ದೇಶಗಳಿಗೆ ಸೇರಿದವರಾಗಿರುವುದರಿಂದ ನಮ್ಮಿಬ್ಬರ ಪೋಷಕರು ನಮ್ಮ ಮದುವೆಯನ್ನು ವಿರೋಧಿಸಿದ್ದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಅವರ ಒಂದು ಅಂತಸ್ತಿನ ಮನೆಯ ಮೇಲೆ ಕುಳಿತು ಮೆಲುಕು ಹಾಕುತ್ತಿದ್ದ ಅವರಿಗೆ, ದೂರದ ಬಿಸಿಲಿನಲ್ಲಿ ಕಾಣುವ ತಾಜಾ, ಹಳದಿ ಸಾಸಿವೆ ಹೊಲಗಳು. ಅದರ ಮಧ್ಯೆ ಕಾಡುವ ವಿರೋಧ ಮತ್ತು ಅಸಮ್ಮತಿಯ ಮಂದ ನೆನಪುಗಳು.

50 ವರ್ಷದ ರಫೀಕುಲ್ ಅವರು ಸುಮಾರು 31 ವರ್ಷಗಳ ಹಿಂದೆ ಅಫ್ಸಾನಾ ಅವರೊಂದಿಗೆ ಭಾರತದಲ್ಲಿ ಬದುಕಲೆಂದು ತಮ್ಮ ಕುಟುಂಬ ಮತ್ತು ದೇಶವನ್ನು (ಬಾಂಗ್ಲಾದೇಶ) ತೊರೆದಿದ್ದರು. “ಮೊದಲ ನೋಟದ ಪ್ರೀತಿಯದು. ಅವಳನ್ನು ಮದುವೆಯಾಗುವುದು ನನ್ನ ಜೀವನದ ಪ್ರಮುಖ ನಿರ್ಧಾರವಾಗಿತ್ತು. ನಾನು ದೇಶತೊರೆದಿದ್ದಕ್ಕಾಗಿ ಒಂದು ದಿನವೂ ವಿಷಾದಿಸುವುದಿಲ್ಲ” ಎಂದು ರಫೀಕುಲ್ ಹೇಳುತ್ತಾರೆ.

ಭಾರತ-ಬಾಂಗ್ಲಾದೇಶ ಗಡಿಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಲಾಲ್ಗೋಲಾ ಹಳ್ಳಿಯಲ್ಲಿ ಈ ದಂಪತಿಗಳು ಮತ್ತು ಅವರ ನಾಲ್ಕು ಮಕ್ಕಳು ವಾಸಿಸುತ್ತಿದ್ದಾರೆ. ಗಡಿಯಲ್ಲಿರುವ ಮುಳ್ಳುತಂತಿಯ ಬೇಲಿಗಳ ಆಚೆಯೇ ರಫೀಕುಲ್ ಬೆಳೆದದ್ದು, ಗಡಿಯಲ್ಲೇ ಹರಿಯುವ ಪದ್ಮಾ ನದಿಯು ಎರಡು ದೇಶಗಳ ನಡುವಿನ ನೈಸರ್ಗಿಕ ಗಡಿಯಾಗಿದೆ.

“ಆಗ, 90ರ ದಶಕದಲ್ಲಿ, ಇದು ಅಂದಾಜಿನ ಗಡಿಯಾಗಿತ್ತು. ಯಾವುದೇ ಬೇಲಿ ಇರಲಿಲ್ಲ. ಎರಡೂ ಕಡೆ ಜನರ ಸಂಚಾರ ಸಾಮಾನ್ಯವಾಗಿತ್ತು” ಎಂದು ರಫೀಕುಲ್ ನೆನಪಿಸಿಕೊಳ್ಳುತ್ತಾರೆ. ಕೆಲಸ ಸಿಗುವ ನಿರೀಕ್ಷೆಯಲ್ಲಿ ಲಾಲ್ಗೊಲಾಗೆ ತೆರಳಲು ಅವರು ಉದ್ದೇಶಿಸಿದ್ದರು. ಆದರೆ ಅವರು ಕೋಲ್ಕತ್ತಾಗೆ ಬಂದರು. ಅವರು ತಮ್ಮ ಮನೆಗೆ ಮರಳಲು ಹಣ ಸಂಪಾದಿಸಲು ಸೀಲ್ದಾ ರೈಲು ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬೇಕಾಗಿತ್ತು.

ಆದರೆ, ಅವರಿಚ್ಚಿಸಿದ್ದ ಉದ್ಯೋಗ ಅಲ್ಲಿ ದೊರೆಯಲಿಲ್ಲ. ಹೀಗಾಗಿ ಅವರು ಮುರ್ಷಿದಾಬಾದ್‌ಗೆ ಮರಳಿದರು. ಐದು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರು. ಆಗ ಅವರು ಅಫ್ಸಾನಾ ಅವರ ಸಹೋದರರ ಗೆಳೆಯನಾಗಿದ್ದರು. ನಂತರ, ರಫೀಕುಲ್ ಅವರು ಅಫ್ಸಾನಾರನ್ನು ಮೊದಲ ಬಾರಿಗೆ ಭೇಟಿ ಮಾಡಿದರು. ಅದೂ, ಅವರ ಮನೆಯಲ್ಲೇ. ಆದರೆ, ಅವರ ಪ್ರೀತಿಯಿಂದ ಮದುವೆಯವರೆಗಿನ ಪ್ರಯಾಣವು ಸುಲಭವಾಗಿರಲಿಲ್ಲ.

“ರಫೀಕುಲ್ ಅವರ ತಂದೆ ನಮ್ಮ ಮದುವೆಯನ್ನು ಒಪ್ಪಲಿಲ್ಲ. ನನ್ನ ಪೋಷಕರು ಮತ್ತು ಸಹೋದರರೂ ಕೂಡ ಇದಕ್ಕೆ ವಿರುದ್ಧವಾಗಿದ್ದರು. ಏಕೆಂದರೆ, ಎರಡೂ ದೇಶಗಳ ಗಡಿಯಲ್ಲಿ ಬೇಲಿಗಳು ಬಂದರೆ ಏನಾಗುತ್ತದೆ ಎಂದು ಅವರು ಭಯಪಟ್ಟಿದ್ದರು” ಎಂದು 40 ವರ್ಷದ ಅಫ್ಸಾನಾ ಹೇಳುತ್ತಾರೆ.

ಆದರೂ ಅವರು ಹೇಗೂ ಮದುವೆಯಾದರು. ರಫೀಕುಲ್ ಅವರು ಕುಟುಂಬವನ್ನು, ಬಾಂಗ್ಲಾವನ್ನು ತೊರೆದು ಭಾರತದಲ್ಲಿ ಅಫ್ಸಾನಾ ಜೊತೆ ನೆಲೆಸಲು ಅತ್ಯಂತ ಧೈರ್ಯಶಾಲಿ ನಿರ್ಧಾರವನ್ನು ತೆಗೆದುಕೊಂಡರು. “ನನ್ನ ಮಾವನ ಮನೆಯವರು ನಮಗೆ ಅವರ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿಕೊಟ್ಟರು. ಅಲ್ಲದೆ, ಸಣ್ಣ ಜಮೀನನ್ನು ಖರೀದಿಸಲು ನಮಗೆ ಸಹಾಯ ಮಾಡಿದರು. ನಾವು ನೆಲೆ ನಿಲ್ಲಲು ಅವರು ಸಹಕರಿಸಿದರು” ಎಂದು ರಫೀಕುಲ್ ಹೇಳುತ್ತಾರೆ.

ರಫೀಕುಲ್ ಅವರು ಬಾಂಗ್ಲಾದೇಶದಲ್ಲಿ ಅವರ ಹೆತ್ತವರು ಮತ್ತು ನಾಲ್ಕು ಸಹೋದರಿಯರೊಂದಿಗೆ ವಾಸವಾಗಿದ್ದರು. ಅವರು ಬಾಂಗ್ಲಾ ತೊರೆದು ಬಂದ ನಂತರ, ಕಳೆದ ಎರಡು ದಶಕಗಳಲ್ಲಿ ಒಮ್ಮೆ ಮಾತ್ರ ಮನೆಗೆ ಹೋಗಿಬಂದಿದ್ದಾರೆ. ಅದು ಕೇವಲ ಒಂದು ದಿನಕ್ಕಾಗಿ ಮಾತ್ರ. “ಸುಮಾರು 10 ವರ್ಷಗಳ ಹಿಂದೆ, ನನ್ನ ತಾಯಿ ಇನ್ನಿಲ್ಲ ಎಂಬ ಸುದ್ದಿ ಬಂದಿತ್ತು. ಆಗ ಗಡಿ ಪ್ರವೇಶಕ್ಕೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ ನಂತರ ಭಾರತೀಯರಿಗೆ ಬಾಂಗ್ಲಾದೇಶಕ್ಕೆ ಒಂದು ದಿನ ಭೇಟಿ ನೀಡಲು ಅವಕಾಶವನ್ನು ಗಡಿ ಭದ್ರತಾ ಪಡೆ ನೀಡುತ್ತಿತ್ತು” ಎಂದು ಅವರು ಹೇಳುತ್ತಾರೆ.

ದಂಪತಿಗಳ ಜೀವನವು ಸರಾಗವಾಗಿ ಸಾಗುತ್ತಿದೆ. ಅವರ ಹಿರಿಯ ಮಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮಗಳ ಮದುವೆಯಾಗಿದೆ. ಅವರ ಇನ್ನಿಬ್ಬರು ಹೆಣ್ಣು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ.

ಆದರೆ, ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಜಾರಿಗೊಳಿಸಲು ಮುಂದಾದಾಗ ರಫೀಕುಲ್‌ಗೆ ಅನಿಶ್ಚಿತತೆ ಎದುರಾಗಿದೆ. ರಫೀಕುಲ್ ಈಗ ತನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. “ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ನನ್ನ ಬಳಿ ಎಲ್ಲಾ ಭಾರತೀಯ ದಾಖಲೆಗಳು ಮತ್ತು ಕಾಗದಗಳಿವೆ. ನನ್ನ ಹೆಂಡತಿ ಮಕ್ಕಳಿಗಿಂತ ನನ್ನನ್ನು ಈ ದೇಶದವನಾಗಿಸುವ ದಾಖಲೆ ಬೇರೊಂದಿಲ್ಲ. ಅವು ನನ್ನ ಪ್ರಮುಖ ದಾಖಲೆಗಳಾಗಿವೆ” ಎನ್ನುತ್ತಾರೆ ರಫೀಕುಲ್.

“ನಾನು ಅವನನ್ನು ತೊರೆಯಲು ಎಂದಿಗೂ ಅನುಮತಿಸುವುದಿಲ್ಲ. ನನ್ನ ಮತ್ತು ನನ್ನ ಮಕ್ಕಳ ಬಗ್ಗೆ ಅವರಿಗೆ ಜವಾಬ್ದಾರಿ ಇದೆ. ನಾನು ಭಾರತದಲ್ಲಿ ಅವರೊಂದಿಗೆ ನನ್ನ ಜೀವನವನ್ನು ಕಟ್ಟಿಕೊಂಡಿದ್ದೇನೆ. ಯಾರೂ ಅವರನ್ನು ನಮ್ಮಿಂದ ದೂರ ಮಾಡಲು ಸಾಧ್ಯವಿಲ್ಲ” ಎಂದು ಅಫ್ಸಾನಾ ಹೇಳುತ್ತಾರೆ.

ಮೂಲ: ಇಂಡಿಯನ್ ಎಕ್ಸ್‌ಪ್ರೆಸ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಆತಂಕ ಬೇಡ: ಸಿಎಂ ಹೇಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...