Homeಚಳವಳಿಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. - ಕರ್ನಾಟಕ ಜನಶಕ್ತಿ ಸಮ್ಮೇಳನದಲ್ಲಿ ರಹಮತ್ ತರೀಕೆರೆಯವರ ಮಾತುಗಳು

- Advertisement -
- Advertisement -

ಈ ಕಾರ್ಯಕ್ರಮವನ್ನು ತೀಸ್ತಾ ಸೆಟಲ್ವಾಡ್‌ರವರು ಉದ್ಘಾಟಿಸಬೇಕಾಗಿತ್ತು. ಆದರೆ ಅವರನ್ನು ಬಂಧಿಸಲಾಗಿದೆ.  ತೀಸ್ತಾರವರು ನಮ್ಮೊಡನೆ ಇಂದು ಇಲ್ಲದಿದ್ದರೂ ಸಹ ಅವರ ಚಿಂತನೆಗಳು ನಮ್ಮ ಜೊತೆ ಇವೆ. ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. ಅವರು ಬಹಳ ಬೇಗ ಬಿಡುಗಡೆಯಾಗಿ ಜನರ ನಡುವೆ ಬರಲಿ ಎಂದು ಹಾರೈಸುತ್ತೇನೆ ಎಂದು ರಹಮತ್ ತರೀಕೆರೆ ತಿಳಿಸಿದರು.

ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಆರಂಭಗೊಂಡ ಕರ್ನಾಟಕ ಜನಶಕ್ತಿ ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಂಡಿತ ತಾರನಾಥರು ಕೆಲಸ ಮಾಡಿದ ಕರ್ಮಭೂಮಿ ಇದು. ಅವರು 1921ರಲ್ಲಿ ನದಿ ತೀರದ ಈ ಪ್ರದೇಶದಲ್ಲಿ ಪ್ರೇಮಾಯತನ ಎಂಬ ಆಶ್ರಮವನ್ನು, ಹಮ್‌ದರ್ದ್‌ (ಹಮ್‌ದರ್ದ್‌ ಎಂದರೆ ಬುದ್ಧನ ಮೈತ್ರಿ ಮತ್ತು ಅಂತಃಕರಣದ ಸಂಕೇತ) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರು ಬ್ರೀಟಿಷರ ಮತ್ತು ನಿಜಾಮರ ವಿರುದ್ಧ ಹೋರಾಡಿದ್ದ ಹೋರಾಟಗಾರರಾಗಿದ್ದರು ಎಂದರು.

ಒಬ್ಬ ವೈದ್ಯರಾಗಿ ಅವರು ತಮ್ಮ ಆಶ್ರಮಕ್ಕೆ ಎಲ್ಲಾ ಧರ್ಮದ, ಜಾತೀಯ ಜನರನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಸಂಗೀತವನ್ನು ಕಲಿಸುತ್ತಿದ್ದರು, ಯೋಗವನ್ನು ಮತ್ತು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಕಲಿಸುತ್ತಿದ್ದರು. ಸ್ವತಃ ಅಂತರ್ಜಾತಿ ವಿವಾಹವಾಗಿದ್ದರು. ಅವರ ಶಿಷ್ಯರಲ್ಲಿ ಎಲ್ಲ ಧರ್ಮದವರು ಇದ್ದರು ಎಂದರು. ಅವರು ಪ್ರೇಮ ಎನ್ನುವ ಪತ್ರಿಕೆ ನಡೆಸುತ್ತಿದ್ದರು. ಅಂತಹ ಪ್ರಯೋಗ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಮುಖ್ಯ ಎಂದರು.

ಅಪರಾಧಿಗಳು ಇರಬೇಕಿದ್ದ ಸೆರಮನೆಗಳಲ್ಲಿ ಅಪರಾಧದ ವಿರುದ್ಧ ಹೋರಾಡುವವರನ್ನು ತುಂಬಲಾಗುತ್ತಿದೆ. ಇದು ಭಾರತದ ದೊಡ್ಡ ವೈರುದ್ಯವಾಗಿದೆ. ಪತ್ರಕರ್ತರು, ಕಾರ್ಯಕರ್ತರು, ಸ್ಟ್ಯಾಂಡಪ್‌ ಕಾಮಿಡಿಗಳು, ಬುದ್ದಿಜೀವಿಗಳು-ವಿದ್ವಾಂಸರನ್ನು ಜೈಲಿಗೆ ಹಾಕಲಾಗುತ್ತಿದೆ. ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿರುವ ವಿಚಿತ್ರ ಕಾಲಘಟ್ಟದಲ್ಲಿದ್ದೇವೆ ಎಂದು ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಕಲ್ಬುರ್ಗಿಯಂತಹ ದೊಡ್ಡ ವಿದ್ವಾಂಸವನ್ನು ಕಲ್ಯಾಣ ನಗರದಲ್ಲಿ ನಾವು ಕಳೆದುಕೊಂಡಿದ್ದೇವೆ. ಕಲ್ಯಾಣ ಎಂಬುದು ಕನ್ನಡಿಗರ ಸ್ವಪ್ನ. ಬಸವಣ್ಣನವರ ಆಶಯ. ಅಲ್ಲಿ ಕಲ್ಬುರ್ಗಿಯವರ ಧಾರುಣ ಹತ್ಯೆಯಾಗಿ ನೆತ್ತರು ಹರಿಯಿತು. ಇದು ಕರ್ನಾಟಕ ಹಿಂಸಾತ್ಮಕ ಪ್ರದೇಶವಾಗಿ ಭಿನ್ನಮತದವರನ್ನು ಕೊಲ್ಲುತ್ತೇವೆ ಎನ್ನುವ ವಿಷಾಧಕರ ಕಾಲಘಟ್ಟದಲ್ಲಿದ್ದೇವೆ. ಆನಂತರ ನಾವು ಗೌರಿಯನ್ನು ಕಳೆದುಕೊಂಡೆವು. ಪ್ರಭುತ್ವ ಮಾಡುತ್ತಿರುವ ಕೊಲೆ, ಹಲ್ಲೆ, ಜೈಲು ಇತ್ಯಾದಿಗಳಿಗೆ ಕೆಲವು ಮಾಧ್ಯಮಗಳು ಬೆಂಬಲಿಸುತ್ತಿವೆ ಮತ್ತು ಸಂಭ್ರಮಿಸುತ್ತಿದೆ ಎಂಬುದು ಶೋಚನೀಯ ಸಂಗತಿ. ತಮ್ಮ ವೃತ್ತಿ ಬಾಂಧವರು ಹಲ್ಲೆಗೆ ಒಳಗಾಗುತ್ತಿದ್ದರೆ, ಬರಹಗಾರರು, ಪತ್ರಕರ್ತರು ಗಾಬರಿಗೊಳ್ಳಬೇಕು. ವಿಷಾಧ, ಆಘಾತಕ್ಕೆ ಒಳಗಾಗಬೇಕು. ಆದರೆ ಒಂದು ವರ್ಗದ ಮಾಧ್ಯಮ ಇದನ್ನು ಸಂಭ್ರಮಿಸುತ್ತಿದೆ. ಬಸವಣ್ಣನವರು ಹೇಳಿದಂತೆ ತಾಯಿಯ ಮೊಲೆ ಹಾಲು ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವುದು? ಎಂಬ ಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾ ಸ್ವಾತಂತ್ರ್ಯ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿರುವ 5 ದೇಶಗಳಲ್ಲಿ ಭಾರತ ಒಂದಾಗಿದೆ. ಹೀಗಲಾದರೂ ಮಾಧ್ಯಮ ನನ್ನ ನೈತಿಕ ಹೊಣೆಗಾರಿಕೆಯನ್ನು ತೋರಿದರೆ ಈ ಪರಿಸ್ಥಿತಿ ಬದಲಾಗಬಹುದು. ತೀಸ್ತಾ ಪತ್ರಕರ್ತ, ವಕೀಲೆ, ಅವರ ಮುತ್ತಾತ ಅಟಾರ್ನಿ ಜನರಲ್ ಆಗಿ ಜನರಲ್ ಡಯರ್‌ ಅವರ ವಿಚಾರಣೆ ಮಾಡಿದ ಹಿನ್ನಲೆಯುಳ್ಳವರು. ತೀಸ್ತಾ ಸೆರೆಮನೆಯಲ್ಲಿರುವುದು ಇದು ಭಾರತದ ಆತ್ಮಸಾಕ್ಷಿಯ ಸಾವು, ಪ್ರಭುತ್ವದ ಕ್ರೌರ್ಯ ಎಂದರು.

ನಾವು ಇಂದು ಎರಡು ಭಾರತದ ಕಲ್ಪನೆಗಳನ್ನು ಮುಖಾಮುಖಿ ಮಾಡಲಾಗುತ್ತಿದೆ. ಒಂದು ದ್ವೇಷದ ಮೂಲಕ ದೇಶ ಕಟ್ಟಬಹುದು, ಇನ್ನೊಂದು ಪ್ರೇಮದ ಮೂಲಕ ದೇಶವನ್ನು ಕಟ್ಟಬಹುದು ಎಂಬು ಎರಡು ಸಿದ್ದಾಂತಗಳನ್ನು ಮುಖಾಮುಖಿಯಾಗುತ್ತಿದ್ದೇವೆ. ಬಾಬ್ರಿ ಮಸೀದಿ ಕೆಡವಿ 30 ವರ್ಷ ಆಗಿದೆ. ಈ 30 ವರ್ಷಗಳಲ್ಲಿ ಧಾರ್ಮಿಕವಾದ, ದ್ವೇ‍ಷ, ಅಸೂಹೆ, ಹಿಂಸೆಗಳಿಲ್ಲದಿದ್ದರೆ ಭಾರತ ಆರ್ಥಿಕವಾಗಿ 10 ಗಾವುದ ಮೇಲೆ ಹೋಗುತ್ತಿತ್ತು. ನಾವೆಲ್ಲವರು ಮನಗಂಡು ಪ್ರಭುತ್ವಕ್ಕೆ ಮನಗಾಣಿಸಬೇಕಾದ ಸಂಗತಿಯೆಂದರೆ ಸಾಮಾಜಿಕ ಸಂಬಂಧಗಳು, ಧಾರ್ಮಿಕ ಸಂಬಂಧಗಳು ಸರಿ ಇಲ್ಲದೆ ದೇಶ ಮುಂದಕ್ಕೆ  ಹೋಗಲು ಸಾಧ್ಯವಿಲ್ಲ. ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂಬ ಸವಾಲನ್ನು ಎದುರಿಸಬೇಕಾಗಿದೆ. ಪ್ರೇಮದ ಭಾರತವನ್ನು ನಾವು ಕಟ್ಟುವ ಕನಸು ಕಾಣಬೇಕಿದೆ.

ಟಿವಿ ಚಾನೆಗಳು ಗುಂಡಿಟ್ಟು ಸಾಯಿಸಬೇಕು ಎಂಬುದನ್ನು ತಲೆಬರೆಹ ಹಾಕಬೇಕು ಎನ್ನವುದು ಏನನ್ನೂ ಸೂಚಿಸುತ್ತಿದೆ?  ‘ಬೆಂಕಿ ಹಚ್ಚುತ್ತೇವೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಿದ್ದೇವೆ. ಗುಂಡು ಹೊಡೆಯುತ್ತೇವೆ, ಕಡಿಯುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರಕಾರ ಜನಪ್ರತಿನಿಧಿಗಳಾದವರು ಈ ಮಾತುಗಳನ್ನು ಹೇಳುತ್ತಿದ್ದಾರೆ. ಗೂಂಡಗಳು ಈ ಮಾತುಗಳನ್ನು ಹೇಳುತ್ತಿದ್ದಾರೆ. ಯಾವ ಧರ್ಮದವರೂ ಈ ಮಾತು ಹೇಳಿದರೂ ಅವು ನೀಚತನದ ಮಾತುಹಳು. ಇದರಿಂದ ರಾಜಕೀಯ ಪಕ್ಷಗಳಿಗೆ ಲಾಭ ಹೊರತು, ಭಾರತಕ್ಕೆ ಅಲ್ಲ ಎಂದರು.

200 ವರ್ಷದ ಗುಲಾಮಗಿರಿ ವಿರುದ್ಧ ಹೋರಾಡಿ ವಿಮುಕ್ತಿ ಪಡೆದ ದೇಶದಲ್ಲಿ ಈಗ ತಮ್ಮ ಜೊತೆಗೆ ಬದುಕಬೇಕಾದ ಸಹವಾಸಿಗಳ ಭಿನ್ನಮತವನ್ನು ಹಲ್ಲೆ-ಕೊಲೆ ಮೂಲಕ ತೀರಿಸುವುದರಿಂದ ಭಾರತವನ್ನು ಕಟ್ಟಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸಮಾಜ ಸುಧಾಕರ ಪಠ್ಯನ್ನು ಬಿಡಲಾಗುತ್ತಿದೆ. ಬ್ರಾಹ್ಮಣವಾದಿ, ಮತೀಯವಾದಿ ಸಿದ್ಧಾಂತವನ್ನು ಸೇರಿಸಲಾಗುತ್ತದೆ. ನಮ್ಮ ಮಕ್ಕಳು ಇಂತಹ ಪಠ್ಯಗಳನ್ನು ಓದಿ ಕೂಡಿ ಕಟ್ಟುವ ಭಾರತವನ್ನು ಕಟ್ಟಲಾಗದು. ನಂಜಿನ ಭಾರತ ನಮ್ಮದ್ದಲ್ಲ. ಕೂಡು ಹೋರಾಟ ಪರಿಕಲ್ಪನೆಯನ್ನು ನಾವು ಮಂಡಿಸಬೇಕಾಗಿದೆ. ಜನರ ಕಡೆ ಹೋಗಬೇಕಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ವಿರೋಧಿ ಹೋರಾಟವೂ ಆಶಾಭಾವನೆಯನ್ನು ಮೂಡಿಸಿದೆ. ಅದು ಎಲ್ಲ ಮಹನೀಯರ ಚಿಂತನೆಯನ್ನು ಒಳಗೊಂಡಿತ್ತು. ನಮ್ಮ ಸೂಫಿಗಳು, ಶರಣರು, ದಾಸರು ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ ಸಮತಳರವರು ಮಾತನಾಡಿ, “ಇಂದು ಭಾರತದ ತುಂಬಾ ಕಾರ್ಮೊಡ ಕವಿದಿದೆ. ವಾಕ್‌ ಸ್ವಾತಂತ್ರ್ಯ ಕುಸಿದು ಬಿದ್ದಿದೆ. ಹೋರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯ ಭಾರತದ ಆಶಯ ಮಣ್ಣುಗೂಡುತ್ತಿದೆ. ಈ ದೇಶವನ್ನು ಬದಲಾವಣೆ ಮಾಡಲು ಎಲ್ಲರೂ ಕೂಡಿ ಮುನ್ನಡೆಯುವುದು ತುಂಬಾ ಅಗತ್ಯವಾಗಿದೆ. ದೆಹಲಿ ಹೋರಾಟ ನಮಗೆ ಹೊಸ ದಾರಿಯನ್ನು ತೋರಿದೆ. ತೀಸ್ತಾ ಜೈಲಿನಲ್ಲಿದ್ದಾರೆ. ನಾವು ಮುಂದೊಂದು ದಿನ ಜೈಲಿಗೆ ಹೋಗಬಹುದು. ಕಾನೂನುಗಳನ್ನು ಆ ನಿಟ್ಟಿನಲ್ಲಿ ರೂಪಿಸಲಾಗಿದೆ. ಈ ಕುರಿತು ಚಿಂತನೆ ನೀಡುವ ಪ್ರಯತ್ನವಾಗಿ ಈ ಸಮ್ಮೇಳನ ನಡೆಯುತ್ತಿದೆ. ಹೊಸ ದಾರಿಯನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಧಿಸಲ್ಪಟ್ಟಿರುವ ಪತ್ರಕರ್ತ ಮೊಹಮ್ಮದ್ ಜುಬೇರ್, ತೀಸ್ತಾ ಸೆಟಲ್ವಾಡ್, ಮತ್ತು ಶ್ರೀಕುಮಾರ್‌ರವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ಕಮ್ಯೂನಿಸ್ಟ್ ರು ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

  2. ನೀವು ಈ ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...