Homeಅಂಕಣಗಳುಜೈ ಸಿದ್ದೇಶ್ವರ ಸ್ವಾಮಿ

ಜೈ ಸಿದ್ದೇಶ್ವರ ಸ್ವಾಮಿ

- Advertisement -
- Advertisement -

ನಮ್ಮ ಸಿದ್ದೇಶ್ವರ ಸ್ವಾಮೀಜಿಗಳು ಸ್ವಾಮಿಗಳ ಹಿಂಡಿನಲ್ಲೇ ಎದ್ದು ಕಾಣುವಂತವರು ಎಲ್ಲ ಸ್ವಾಮಿಗಳು ಕೆಂಪು ಉಡುಪುಗಳಲ್ಲಿ ಕಾಣಿಸಿಕೊಂಡರೆ ಅವರು ಬಿಳಿ ಧಿರಿಸಿನಲ್ಲಿ ಹಂಸದಂತೆ ಕಾಣುತ್ತಾರೆ. ಮಾತು ಕೂಡ ಅಷ್ಟೆ. ಹಂಸಕ್ಷೀರ ನ್ಯಾಯದಂತೆ. ಉತ್ತರ ಕರ್ನಾಟಕದಲ್ಲಿ ಏರ್ಪಡುವ ಅವರ ಉಪನ್ಯಾಸ ಕೇಳಲು ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಸಿದ್ದೇಶ್ವರರು ಆಡುವ ಮಾತು ಕೇಳಿದರೆ ಬಸವ ಯುಗವೇ ತೆರೆದುಕೊಳ್ಳುತ್ತದೆ. ಅಮರ ಜ್ಯೋತಿಯಾದ ಬಸವೇಶ್ವರರ ವಾಣಿ ಕೇಳಿದಂತಾಗುತ್ತದೆ. ಇಂತಹ ಸುಯೋಗವೊಂದು ಸುತ್ತೂರು ಮಠದ ಸುತ್ತಲ ಭಕ್ತಾದಿಗಳಿಗೆ ಲಭ್ಯವಾಯ್ತಂತಲ್ಲಾ. ಕರ್ನಾಟಕಕ್ಕೆ ಯೋಗಾಭ್ಯಾಸ ಮಾಡಲು ಬಂದ ಪ್ರಧಾನ ಮಂತ್ರಿಯ ಪ್ರಧಾನ ಭೇಟಿಗಳಲ್ಲಿ ಸುತ್ತೂರು ಮಠವು ಒಂದಾಗಿತ್ತು. ಅಲ್ಲಿನ ಶ್ರೀಗಳು ತಲೆಯೋಡಿಸಿ ಮೋದಿಯನ್ನು ಮರಳು ಮಾಡುವ ಭಾಷಣ ಮಾಡುವ ಶಕ್ತಿ ತಮಗಿಲ್ಲವೆಂದು ಸಿದ್ದೇಶ್ವರ ಸ್ವಾಮಿಗಳನ್ನ ಕರೆಸಿದರು. ಶ್ರೀ ಸಿದ್ದೇಶ್ವರರು ಸುತ್ತೂರು ಅಲ್ಲದೆ ಮೋದಿಯವರೂ ತಲೆದೂಗುವಂತೆ ಮಾತನಾಡುವಾಗ ಅರ್ಥವಾಗದ ಮೋದಿ ಸುತ್ತೂರು ಕಡೆ ವಾಲಿ ಮಾತಿನ ಅರ್ಥವನ್ನ ತಿಳಿದುಕೊಂಡು ಕೈ ಮುಗಿಯುತ್ತಿದ್ದುದು ಮನಮೋಹಕವಾಗಿತ್ತಂತಲ್ಲಾ. ಮುಖ್ಯವಾಗಿ ಸಿದ್ದೇಶ್ವರರು ಮೋದಿಯನ್ನ ಕುರಿತು ನಮ್ಮ ಪ್ರಧಾನಿಯವರು ಲೋಕದ ಹಿತ ಬಯಸುವಂತಹ ಲೋಕ ಚಿಂತಕರು, ಆದರೂ ಆ ಮುಖದಲ್ಲಿ ಚಿಂತೆ ಕಾಣುವುದಿಲ್ಲ. ಬದಲಿಗೆ ಸದಾ ಪ್ರಸನ್ನತೆಯೇ ಕಾಣುತ್ತದೆ ಎಂದಾಗ ಇಡೀ ಸಭೆ ಬೆರಗಾಗಿ ಸಿದ್ದೇಶ್ವರ ಸ್ವಾಮಿ ಸುಳ್ಳಿಗೆ ಸುಸ್ತು ಹೊಡೆಯಲಿಲ್ಲವಂತಲ್ಲಾ. ಅಂತೂ ಭಾರತದಲ್ಲಿ ಆಳುವವರಿಗೊಂದು ನ್ಯಾಯ ಸಂಹಿತೆ ಸಾಮಾನ್ಯರಿಗೊಂದು ನ್ಯಾಯ ಸಂಹಿತೆ ರೂಪುಗೊಳ್ಳುತ್ತಿದೆಯಂತಲ್ಲಾ, ಥೂತ್ತೇರಿ.

*****

ಈ ಹಿಂದಿನ ಸಿದ್ದೇಶ್ವರ ಸ್ವಾಮಿಯವರ ಮಾತುಗಳನ್ನು ಗ್ರಹಿಸಿದ್ದಾದರೆ, ಅವು ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು ಎನ್ನುವ ಬಸವಣ್ಣನವರ ಮಾನಿನಂತಿದ್ದುದ್ದರಿಂದ ಅವರೆದುರು ಕುಳಿತ ಸಾವಿರಾರು ಜನರು ಅಹುದಹುದೆನ್ನುತ್ತ ತಲೆ ಹಾಕುತ್ತಿದ್ದರು. ಆದರೆ ಸುತ್ತೂರಿನಲ್ಲಿ ಅಹುದಹುದೆನ್ನುವುದರ ಬದಲಿಗೆ ಮೋದಿಗೆ ಜೈಕಾರದಂತಹ ಗದ್ದಲ ಕೇಳಿಬಂತು. ದಶಕಗಳ ಕಾಲ ಮುತ್ತಿನಹಾರದಂತೆ ಮಾತಾನಾಡಿದ್ದ ಸಿದ್ದೇಶ್ವರರು ಮೋದಿ ಹೊಗಳಿಕೆಯ ಸುಳ್ಳು ಮಾತುಗಳಿಂದ ತಮ್ಮ ಖ್ಯಾತಿಗೇ ಕಳಂಕ ತಂದುಕೊಂಡರಂತಲ್ಲಾ. ಸಿದ್ದೇಶ್ವರರ ಸುಳ್ಳು ಬಿತ್ತರವಾಗುವಾಗ ಅಗ್ನಿಪಥ ಜಾರಿಯಿಂದ ಆಕ್ರೋಶಗೊಂಡ ಜನ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಇನ್ನೂರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದರು. ಇದು ಲೋಕಹಿತ ಬಯಸುವವರನ್ನ ಕಂಗಾಲು ಮಾಡಬೇಕಿತ್ತು. ಸಿದ್ದೇಶ್ವರರು ವಾರೊಪ್ಪತ್ತು ಮೌನವ್ರತ ಮಾಡಬೇಕಿತ್ತು. ಆದರೆ ದೇಶದ ಗಲಭೆಯ ಬಗ್ಗೆ ಕಿಂಚಿತ್ ಅರಿವಿಲ್ಲದಂತೆ ಒಬ್ಬರು ಹೊಗಳುತ್ತಾರೆ, ಕೇಳಿಸಿಕೊಂಡವರು ಕೈ ಮುಗಿಯುತ್ತಾರೆ. ಈ ಭಾಷಣಕ್ಕೆ ಕಳಶವಿಟ್ಟಂತೆ ಗುಜರಾತ್ ನರಮೇಧದ ವಿಷಯದಲ್ಲಿ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿದ ಕಾರಣ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುವುದಾದರೆ ಸಿದ್ದೇಶ್ವರ ಸ್ವಾಮಿಗಳ ಮಾತುಗಳನ್ನು ಗೌರವಿಸಬೇಕಂತಲ್ಲಾ ಥೂತ್ತೇರಿ.

*****

ಮೋದಿಯವರು ಜಗದ್ಗುರುಗಳ ಸುಳ್ಳು ಆಶೀರ್ವಾದವನ್ನು ಹೊತ್ತು ದೆಹಲಿಯ ಕಡೆ ಹೊರಟನಂತರ ಇತ್ತ ಕರ್ನಾಟಕದ ಬಳ್ಳಾರಿಯ ಧೂಳಿನಿಂದ ಸುಂಟರಗಾಳಿಯೊಂದು ಎದ್ದಿದೆಯಲ್ಲಾ. ಎಡೂರಪ್ಪನ ಸರಕಾರ ಎದ್ದುನಿಲ್ಲಲು ಸಹಾಯ ಮಾಡಿದ ಬಳ್ಳಾರಿ ಗಣಿ’ಧಣಿ’ಗಳ ಪೈಕಿ ಪ್ರಧಾನ ವ್ಯಕ್ತಿಯಾದ ಗಾಲಿ ಜನಾರ್ದನ ರೆಡ್ಡಿ ಹಠಾತ್ತನೆ ನಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೆದರಿಸಿದ್ದಾರಲ್ಲಾ. ರೆಡ್ಡಿ ಇಂತಹ ಮಾತುಗಳನ್ನಾಡಬೇಕಾದರೆ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಕತೆ ಏನಾಗಿರಬೇಕು ಎಂಬ ಯೋಚನೆ ರೆಡ್ಡಿ ಮಾತನ್ನು ಗ್ರಹಿಸಿದವರಿಗೆ ಅಮರಿಕೊಂಡಿದೆಯಲ್ಲಾ. ರೆಡ್ಡಿ ಸಾರ್ವಜನಿಕರ ಎದುರೇ ತನ್ನ ಮುಖ್ಯಮಂತ್ರಿ ಪದವಿ ಘೋಷಿಸಬೇಕಾದರೆ ಮೂರು ಘಟನೆಗಳು ಆತನಿಗೆ ಪ್ರೇರಣೆ ನೀಡಿರಬೇಕು. ಒಂದು ಜೆಡಿಎಸ್ ಶಾಸಕರನ್ನು ಜಮೀರ್ ಅಹಮದ್ ಬಸ್ಸಿನಲ್ಲಿ ರೆಸಾರ್ಟಿಗೆ ಕರೆದುಕೊಂಡು ಹೋಗಿ ಮತ್ತೆ ತಂದು ವಿಧಾನಸೌಧದ ಎದುರು ಸುರಿದು ಧರ್ಮಸಿಂಗ್ ಸರಕಾರ ಕೆಡವಿ ಕುಮಾರಣ್ಣ ಅನಾಯಾಸವಾಗಿ ಮುಖ್ಯಮಂತ್ರಿಯಾದದ್ದು. ಅದೇ ಕುಮಾರಣ್ಣನ ಕೃತ್ಯವನ್ನು ಅವರಿಗೇ ಹಿಂತಿರುಗಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನ ಅಪಹರಿಸಿ ಬಾಂಬೆ ಗ್ರಾಂಟ್‌ರೋಡಿನಲ್ಲಿ ಇರಿಸಿದ್ದು, ನಂತರ ತಂದು ಎಡೂರಪ್ಪ ಮುಖ್ಯಮಂತ್ರಿಯಾದದ್ದು. ಇದೀಗ ಛತ್ರಪತಿ ಶಿವಾಜಿ ಕೋಟೆಯಿಂದ ಶಿವಸೈನಿಕ ಶಾಸಕರನ್ನು ಅಪಹರಿಸಿ, ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿರುವುದು. ಈ ಎಲ್ಲಾ ಬೆಳವಣಿಗೆಯ ಹಿಂದೆ ಝಣಝಣ ಕಾಂಚಣದ ಸದ್ದು ಕೇಳಿತಾಗಿ ರೆಡ್ಡಿ ರೋಮಾಂಚನಗೊಂಡು ಮುಂದಿನ ಮುಖ್ಯಮಂತ್ರಿ ನಾನೇ ಎಂದುಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇತ್ತ ಕರ್ನಾಟಕದ ಶಿಕ್ಷಣ ಇಲಾಖೆಯ ಸುದ್ದಿ ಅಧ್ವಾನವೆದ್ದು ಚಡ್ಡಿಗಳು ಹಠಕ್ಕೆ ಬಿದ್ದಿವೆಯಂತಲ್ಲಾ. ಪಠ್ಯಪುಸ್ತಕ ತಿರುಚಿದ ಘಟನೆಯ ಪ್ರಯುಕ್ತ ಶಿಕ್ಷಣ ಪಡೆದ ನಾಡಿನ ಮನಸ್ಸುಗಳು ಫ್ರೀಡಂಪಾರ್ಕಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಸಭೆ ಸೇರಿ ಪಠ್ಯ ಸರಿ ಮಾಡಲು ಹತ್ತು ದಿನ ಗಡುವು ಕೊಟ್ಟಿದ್ದರೆ, ಈ ಹತ್ತು ದಿನದಲ್ಲಿ ಏನು ಉತ್ತರ ಕೊಡಬೇಕೆಂದು ಚಿಂತಿಸಿದ ಚೆಡ್ಡಿಗಳು, ದೇವೇಗೌಡರು ಗುಟುರು ಹಾಕಿರುವುದರಿಂದ ಅವರೆದುರು ಅಶೋಕನ್ನು ನಿಲ್ಲಿಸುವುದು ಸೂಕ್ತ ಎಂದು ತೀರ್ಮಾನಿಸಿ, ಕಡಲೆಕಾಯಿ ಹೊಲಕ್ಕೆ ಬೆದರುಗೊಂಬೆ ಮಾಡಿ ನಿಲ್ಲಿಸಿದಂತೆ ಪಠ್ಯಕ್ಕೆ ಕಾಯುತ್ತಿರುವ ಮಕ್ಕಳ ಎದುರು ನಿಲ್ಲಿಸಿವೆಯಲ್ಲಾ. ಈ ಅಶೋಕರಿಗಾಗಲಿ ಅವರ ಜೊತೆಯಲ್ಲಿ ನಿಂತ ಇನ್ನಿತರ ಮಂತ್ರಿವರ್ಯರಿಗಾಗಲಿ ಪಠ್ಯದ ನಿಜವಾದ ಅರ್ಥವೇ ಗೊತ್ತಿಲ್ಲ. ಸ್ವತಃ ನಾಗೇಶರಿಗೆ ಬಹಳದಿನ ಗೊತ್ತಿರಲಿಲ್ಲ. ಇಂತಿರುವಾಗ ಹಿಂದಿನ ಪಠ್ಯದಲ್ಲಿ ಕಮ್ಯುನಿಸಂ ಸಿದ್ಧಾಂತವಿತ್ತು ಎಂದುಬಿಟ್ಟಿದ್ದಾರಲ್ಲಾ. ಈ ಬಗ್ಗೆ ಅಶೋಕರನ್ನ ಹಿಡಿದುಕೊಂಡು ಕಮ್ಯುನಿಸ್ಟ್ ಸಿದ್ಧಾಂತ ಅಂದರೇನು, ಅದರ ಉದ್ದೇಶಗಳೇನು ಅದು ನಮ್ಮ ಸಂಸ್ಕೃತಿಯೊಳಕ್ಕೆ ನುಸುಳಿರುವ ಪರಿಯೇನು ವಿವರಿಸೆಂದು ಕೇಳಿದ್ದರೆ ಮತ್ತೆ ಹತ್ತು ದಿನದ ಗಡವು ಕೇಳುತ್ತಿದ್ದರಂತಲ್ಲಾ. ಅದೆಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮಾಜಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೂ ಕೇರ್ ಮಾಡದೆ ಸುಳ್ಳುಗಳನ್ನ ಹೊಡೆಯುತ್ತ ಕುಳಿತಿರುವ ಚೆಡ್ಡಿಗಳು ತಮ್ಮ ಸಂಚು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭಾವಿಸುವ ಈ ಹೊತ್ತಿನಲ್ಲಿ ನಾಡನ್ನೇ ತುಂಬಿ ಮೆರೆದಂತಹ ಗೋಕಾಕ್ ಚಳವಳಿಯ ಅಗತ್ಯ ಅನಿವಾರ್ಯವಾಗಿದೆಯಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತರೆ ಸುದ್ದಿಗಳು ಶಾನೆ ತಮಾಷೆಯಿಂದಲೂ ಜೊತೆಗೆ ವಿಷಾದದಿಂದಲೂ ಕೂಡಿದೆಯಂತಲ್ಲಾ. ನಾಯಿ ಸಿನಿಮಾ ನೋಡಿದ ಮುಖ್ಯಮಂತ್ರಿ ಥಿಯೇಟರಿಂದ ಈಚೆ ಬಂದರೂ ಅಳು ನಿಲ್ಲಿಸದೆ ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಪ್ರಕಟವಾದ ಕೂಡಲೇ ನಾಡಿನ ನಾಯಿ ಮಾಲೀಕರು ತಮ್ಮತಮ್ಮ ನಾಯಿಗಳನ್ನ ಹಿಡಿದು ಶೃಂಗಾರ ಮಾಡಿ ಬತಡೇ ಮಾಡುವುದೇನು, ಹೆಣ್ಣು ನಾಯಿಗೆ ಕುಂಕುಮ ಹಚ್ಚಿ ಬಳೆ ತೊಡಿಸಿ ಸೀರೆ ಉಡಿಸಿ ಸೀಮಂತ ಮಾಡುವುದೇನು. ಈ ಕೃತ್ಯಗಳ ಬಗ್ಗೆ ತಿಳಿದ ಬೀದಿನಾಯಿಗಳು ಶಾನೆ ದುಗುಡದಿಂದ ಅವರು ಸಾಕಿದ ನಾಯಿಗಳಿಗೆ ಅವರು ಏನಾದರೂ ಮಾಡಿಕೊಳ್ಳಲಿ ನಮಗೇನು, ಆದರೆ ನಮಗೂ ಒಂದು ತುತ್ತು ಎಸೆಯಲು
ಇವರಿಗೇನು ಬಂದಿದೆ, ಸಾಕು ನಾಯಿ ಕಾರಣದಿಂದ ನಮ್ಮನ್ನ ತುಂಬ ತಿರಸ್ಕಾರದಿಂದ ಕಾಣುತ್ತಾರೆ, ಕಾಂಪೌಂಡ್ ಬಳಿಗೆ ಹೋದರೆ ಸಾಕು ಗದರುತ್ತಾರೆ, ಇವರ ಮಕ್ಕಳು ಕಲ್ಲು ತೆಗೆದುಕೊಂಡು ಬೀರುತ್ತವೆ, ಇತ್ತ ಮುನಿಸಿಪಾಲಿಟಿಯವರ ಕಾಟ ಬೇರೆ ಎಂದುಕೊಂಡವಂತಲ್ಲಾ. ಹಳ್ಳಿಯ ಕಡೆಗಳಲ್ಲಿ ಊಟ ಮಾಡುವಾಗ ನಮ್ಮವರ ಕಡೆ ಒಂದು ತುತ್ತು ಎಸೆಯುತ್ತಿದ್ದರು. ಈಗ ಆ ಸಂಸ್ಕೃತಿಯೂ ನಿಂತುಹೋಗಿ ನಮ್ಮವರೆಲ್ಲಾ ಊರು ಬಿಟ್ಟು ಗುಡ್ಡ ಗವಿ ಸೇರಿಕೊಂಡು ಆಡು ಕುರಿಗಳನ್ನು ಬೇಟೆಯಾಡುತ್ತಿದ್ದಾರಂತೆ. ಇದು ನಮ್ಮ ಕುಲಕ್ಕೆ ಬಂದ ಕಳಂಕ. ಇದಕ್ಕೆ ಕಾರಣ ಬದಲಾದ ನಾಯಿ ಮನುಷ್ಯನ ಸಂಬಂಧ. ಇಂಥ ಸನ್ನಿವೇಶದಲ್ಲಿ ನಾಯಿ ಸಿನಿಮಾ ನೋಡಿ ಅತ್ತಿರುವ ನಮ್ಮ ಮುಖ್ಯಮಂತ್ರಿಗಳ ಅಳುವಿಗೆ ಕಾರಣವೇನೆಂಬ ವಾಸನೆಯನ್ನ ನಾವೇ ಕಂಡುಹಿಡಿಯಬೇಕು, ಇಲ್ಲವಾದರೆ ಈ ತಲೆಕೆಟ್ಟ ಜನಗಳಿಂದ ನಾಯಿಗಳ ಹುಟ್ಟು ಹಬ್ಬ, ಮದುವೆ, ಸೀಮಂತ, ನಾಮಕರಣ ಇನ್ನು ಹೆಚ್ಚಾಗಿ ನಮ್ಮ ಬೀದಿ ಬದುಕು ಇನ್ನ ದಾರುಣವಾಗಲಿದೆ ಎಂದಿಲ್ಲವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಗುರುಗಳ ಬಗ್ಗೆ ಮಾತಾಡೋ ಯೋಗ್ಯತೆ ನಿಮ್ಮಂತ ಹಂದಿಗಳಿಗಿಲ್ಲಾ ,ಗುರುಗಳ ಪಾದದ ಧೂಳಿಗೂ ಸಮ ಇಲ್ಲಾ ನಿಮ್ಮಗಳ ಪರಿವಾರ

  2. ದಯವಿಟ್ಟು 100ರಲ್ಲಿ 1ತಪ್ಪನ್ನು ತಿರುಚಿ, ಅವರ ಜೀವನದುದ್ದಕ್ಕೂ ಗಳಿಸಿದ ಹೆಸರಿಗೆ ಕಳಂಕ ತರಬೇಡಿ. ಇಲ್ಲೀವರೆಗೂ ಅವರ ಆದ್ಯಾತ್ಮಿಕ ಮಾತಿನ ಮೋಡಿಯಿಂದ ಸಾಕಷ್ಟುಉತ್ತರ ಕರ್ನಾಟಕದ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಿಕೊಂಡ ಉತ್ತಮ ಜೀವನ ಮಾಡುತ್ತಿದ್ದಾರೆ.ಅವರು ತಿಳಿಯದೆ ಮಾತನಾಡಿರಬಹುದು 🙏🙏

  3. ಕಾಂಗ್ರಸ್ಸಿನ ಉಡಾಫೆ ಆಡಳಿತ,ಭ್ರಷ್ಟತೆ ಗಳಿಗೆ ಬೇಸರ ಪಟ್ಟು ಭಾರತದ ಜನ 2014 ರಲ್ಲಿ ಬಿಜೆಪಿ ಯ ಮಾತುಗಾರ ಮೋದಿಗೆಮತನೀಡಿದರು. ಆಗ ಜನ ಗುಜರಾತಿನ ಅಮಾನವೀಯಗೋಧ್ರಾ ದುರಂತ ಮರೆತಿದ್ದರು,ಮೋದಿ ಒಬ್ಬರೇ ಬರಲಿಲ್ಲ,ಜೊತೆಗೆ ಕಟುಗ ಮನಸ್ಸುಳ್ಳ ಅಮಿತ್ ಶಾ ಎಂಭವ್ಯಕ್ತಿಯನ್ನು ಜೋತೆಗೆ ತಂದು,ತಾವು ವಿಶ್ರಮಿತ ಸ್ಥಿತಿಯಲ್ಲಿ ಇರುವದಕ್ಕೆ ಪ್ರಾರಂಭಿಸಿದರು. ಆದರೆ ದುರಂತ ಆರ್ ಎಸ್ ಏಸ್ ಈ ಅವಕಾಶ ಬಳಸಿಕೊಂಡು ಜನರವಿರುದ್ಧ ಇಸ್ತುಕ್ರೂರವಾಗಬಾರದಿತ್ತು,ಎಂ7ಮಾಡುವದು, ಅದು ಅವರ ಮೂಲಗುಣ. ಈ ಕ್ರೌರ್ಯದವಿರುದ್ಧ ಜನ ಬೇಸತ್ತಿದ್ದಾರೆ ಆದರೆ ಅವರಿಗೆ ಪರ್ಯಾಯ ಇಲ್ಲ. ಇಂತಹ ಸ್ಥಿತಿಯಲ್ಲಿ ಈ ಮೋದಿಯನ್ನ ಒಬ್ಬಸ್ವಾಮಿಜಿ ಈ ರೀತಿ ಹೊಗಳಿದ್ದು,ಪ್ರಜ್ಞಾವಂತಿಕೆಯಿಂದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವವರಿಗೆ, ಆ ಸ್ವಾಮಿಜಿಯವರ ಮನೋಸ್ಥಿತಿಯಬಗ್ಗೆ ಮರುಕ ಹುಟ್ಟಿಸುತ್ತದೆ,ಅವರು ಸತ್ಯದ ನಿಲುವನ್ನು ತಿಳಿಯದೆ ಆ ಒಲೈಕೆಯ ಮಾತುಆಡಿದ್ದು ಅವರಬಗ್ಗೆ ಇದ್ದ ಗೌರವ ಕಡಿಮೆಯಾಗುತ್ರದೆ ಎನ್ನವದು ಸತ್ಯ.

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...