Homeಅಂಕಣಗಳುಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

- Advertisement -
- Advertisement -

ಹೇಳದೆ ಮಾಡುವವ ರೂಢಿಯೊಳಗುತ್ತಮ. ಹೇಳಿ ಮಾಡುವವ ಮಧ್ಯಮ. ಹೇಳಿಯೂ ಮಾಡದವನು ಅಧಮನಿಗೆ ಸಮವಾಗುತ್ತಾನಂತೆ. ಇದೊಂದು ಕನ್ನಡದ ಜನಪ್ರಿಯ ಗಾದೆ ಮಾತು. ಇದನ್ನು ಚಾಚುತಪ್ಪದೆ ಮಾಡುತ್ತ, ಭಾರತ ಈವರೆಗೆ ಕಂಡರಿಯದ ಉತ್ತಮ ಪ್ರಧಾನಿಯಾಗಿ ಮೋದಿ ಮೆರೆದಾಡುತ್ತಿದ್ದಾರಂತಲ್ಲಾ. ಉದಾಹರಣೆ ಕೊಡುವುದಾದರೆ ರಾತ್ರೋರಾತ್ರಿ ನೋಟ್‌ಬ್ಯಾನ್ ಮಾಡಿಬಿಟ್ಟರು. ಅದರ ಪರಿಣಾಮಗಳು ಅನುಭವಿಸುವವರಿಗೆ ಬಿಟ್ಟದ್ದು. ಹಾಗೆಯೇ ಜಿಎಸ್‌ಟಿ ತಂದುಬಿಟ್ಟರು. ಅದೂ ಕೂಡ ಸಂಬಂಧಪಟ್ಟ ಸಾವಿರಾರು ಸಣ್ಣ ಉದ್ಯಮಗಳು ಮಧ್ಯಮ ಸ್ಥಿತಿಗೆ ಬಂದು ನಂತರ ಅಧಃಪಥನ ಕಂಡವು. ಲಾಕ್‌ಡೌನ್ ಮಾಡಿದರು. ಸಾವಿರಾರು ಜನ ಸತ್ತು ಹೋದರು. ಕೃಷಿ ಕಾಯ್ದೆ ತಂದರು. ಅದರ ವಿರುದ್ಧ ಪ್ರತಿಭಟಿಸುತ್ತಲೇ ಬರೋಬ್ಬರಿ ಏಳುನೂರ ಐವತ್ತು ಜನ ರೈತರು ಮಣ್ಣುಪಾಲಾದರು. ಈಗ ಅಗ್ನಿಪಥ ಜಾರಿಗೆ ತಂದು ಇಡೀ ದೇಶಕ್ಕೆ ಕೊಳ್ಳಿ ಇಟ್ಟು ನಮ್ಮ ರೈಲ್ವೆ ನಿಲ್ದಾಣಗಳು ಉರಿಯುತ್ತಿರಬೇಕಾದರೆ ಮನಃಶಾಂತಿಗಾಗಿ ಮೋದಿ ನಮ್ಮ ಮೈಸೂರಿಗೆ ಬಂದು ಯೋಗ ಧ್ಯಾನದಲ್ಲಿ ಕುಳಿತುಬಿಟ್ಟರಂತಲ್ಲಾ. ಭಾರತದ ಯಾವುದೇ ಸ್ಥಿತಿಗೆ ಮೊದಲು ಉತ್ತರಿಸಬೇಕಾದವರು ಪ್ರಧಾನಿ. ಆದರೆ ದೇಶ ಹಿಂದೆಂದೂ ಕಂಡರಿಯದ ಕ್ಷೋಭೆಗೆ ತುತ್ತಾಗಿರುವ ಈ ಸಮಯದಲ್ಲೂ ಕೂಡ ಮೋದಿಯವರ ಮುಖದಲ್ಲಿ ದೇಶದ ತಲ್ಲಣದ ಗೆರೆಯೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.

****

ಅಗ್ನಿಪಥದ ದೆಸೆಯಿಂದ ದೇಶಬಾಂಧವರಲ್ಲಿ ಹಲವಾರು ಸಂಶಯದ ಅಲೆಗಳು ಎದ್ದು ಜನಸಾಮಾನ್ಯರಲ್ಲಿ ಭೀತಿಹುಟ್ಟಿಸುತ್ತಿವೆಯಂತಲ್ಲಾ. ಆ ಪೈಕಿ ಈ ಬಿಜೆಪಿ ಸರಕಾರ ಅಗ್ನಿಪಥಕ್ಕೆ ಸೇರಿಸಿಕೊಳ್ಳುವ ಹುಡುಗರು ನಾಲ್ಕೆ ವರುಷಕ್ಕೆ ವಾಪಸು ಬರುತ್ತಾರಂತಲ್ಲಾ. ಅವರು ಮುಂದೆ ಮಾಡಬಹುದಾದ ಕೆಲಸಗಳೇನೆಂದು ಈಗಾಗಲೇ ಬಿಜೆಪಿ ನಾಯಕರು ಮಾತನಾಡುವುದನ್ನು ಕೇಳಿಸಿಕೊಂಡರೆ ಬಂದವರು ಬಿಜೆಪಿ ಪಾರ್ಟಿಯ ಅಂಗರಕ್ಷಕ ಪಡೆಯಾಗುವುದರಲ್ಲಿ ಸಂಶಯವಿಲ್ಲಾ. ತರಬೇತಿ ಪಡೆದು ಶತ್ರು ಸೈನ್ಯದ ಎದುರು ಯುದ್ಧ ಮಾಡುವ ಹುಡುಗರು ದೇಶದ ಆಂತರಿಕ ಕ್ಷೋಭೆ ಸಮಯದಲ್ಲಿ ಏನು ಮಾಡಬಲ್ಲರು? ಅವರ ತರಬೇತಿ ಕೌಶಲಗಳು ದೇಶದ ಪ್ರಜೆಗಳ ಮೇಲೆಯೇ ನಡೆದರೆ ಗತಿಯೇನು? ಈಗಾಗಲೇ ಶಿವಮೊಗ್ಗದ ಕಡೆ ಈಶ್ವರಪ್ಪ ಎಂಬ ರಾಜಕಾರಣಿ 144 ಸೆಕ್ಷನ್ ಜಾರಿಯಿದ್ದರೂ ಮೆರವಣಿಗೆ ತೆಗೆದು, ತನ್ನದೇ ಗೂಂಡಾ ಪಡೆಯಿಂದ ಅಲ್ಪಸಂಖ್ಯಾತರು ಮತ್ತು ದಲಿತರ ಮನೆಗಳ ಮೇಲೆ ದಾಳಿ ಮಾಡಿ, ಮನೆಯೊಳಗಿದ್ದ ಪದಾರ್ಥಗಳನ್ನು ಬೀದಿಗೆ ಎಸೆದು ಜಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಮುಂದೆ ಇಂತಹ ಸನ್ನಿವೇಶ ಬಂದಾಗ ಪಾರ್ಟಿ ಜನರ ಜೊತೆಗೆ ಅಗ್ನಿಪಥದಲ್ಲಿ ತರಬೇತಿ ಪಡೆದು ಬಂದವರೂ ಸೇರಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂಬ ಅನುಮಾನಗಳು ದೇಶವಾಸಿಗಳಿಗೆ ಕಾಡುತ್ತಿರುವಾಗ, ಭಾರತದ ಪ್ರಧಾನಿ ಬಾಯಿಬಿಡದೆ ಯೋಗದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

******

ಇದು ಭಾರತವನ್ನಾಳುವ ಮೋದಿಯ ಕಥೆಯಾಯ್ತು. ಇನ್ನ ಕರ್ನಾಟಕವನ್ನಾಳುತ್ತಿರುವ ಬೊಮ್ಮಾಯಿ ಎಂಬ ಬೊಮ್ಮಾಯಿ ಅವರ ಮಗ ಮುಖ್ಯಮಂತ್ರಿಯಾಗಿ ಹೇರಲ್ಪಟ್ಟಾಗ ಚಡ್ಡಿ ವಿರೋಧಿಗಳೂ ಕೂಡ ಸಮಾಧಾನಗೊಂಡಿದ್ದರು. ಏಕೆಂದರೆ ಈ ಬೊಮ್ಮಾಯಿ ಹೆಸರು ಬಸವರಾಜ ಬೊಮ್ಮಾಯಿ. ಬಸವಣ್ಣನ ಹೆಸರು ಹೊತ್ತು ಬಂದವರು. ಜೊತೆಗೆ ಕರ್ನಾಟಕದ ಜೋಡೆತ್ತಿನಂತಿದ್ದ ದೇವೆಗೌಡರು ಮತ್ತು ಎಸ್.ಆರ್ ಬೊಮ್ಮಾಯಿಯವರ ರಾಜಕಾರಣ ಕಂಡವರು. ಅದರಲ್ಲೂ ರಾಜಕಾರಣದ ಯಾವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳದ ದೇವೆಗೌಡರು ಒಂದು ಕಡೆಯಾದರೆ ಎಂ.ಎಸ್ ರಾಯ್‌ರವರ ಅನುಯಾಯಿಯಾಗಿದ್ದ ಬೊಮ್ಮಾಯಿವರ ಮಗ ಮುಖ್ಯಮಂತ್ರಿಯಾಗಿದ್ದು ರಾಜಕಾರಣದ ಪಂಡಿತರಿಗೆ ಒಂದು ಭರವಸೆ ಮೂಡಿಸಿತ್ತು. ಅದಕ್ಕೆ ಕಾರಣ ಬೊಮ್ಮಾಯಿ ಆರೆಸ್ಸೆಸ್‌ನಿಂದ ಬಂದವರಲ್ಲ ಎಂಬುದು. ಹೀಗಿರುವಾಗ ದುರಂತವೆಂದರೆ ಆರೆಸ್ಸೆಸ್ ಅಲ್ಲದ ಬೊಮ್ಮಾಯಿ ಆರೆಸ್ಸೆಸಿಗರೂ ಅಂಜಿಕೊಳ್ಳುವಂತಹ ಆಡಳಿತ ನಡೆಸತೊಡಗಿರುವುದು. ಇದಕ್ಕೆ ಸ್ಪಷ್ಟ ಉದಾಹರಣೆರಯೆಂದರೆ ಆರೆಸ್ಸೆಸ್ ಪಡೆ ಕುಳಿತುಕೊಂಡು ತಿದ್ದಿಕೊಟ್ಟ ಪಠ್ಯಪುಸ್ತಕವನ್ನ ನಾಗೇಶನೆಂಬ ಮಂತ್ರಿ ಮತ್ತು ರೋಹಿತ್ ಚಕ್ರತೀರ್ಥ ಎಂಬ ಮೂರ್ಖನಿಗೆ ಒಪ್ಪಿಸಿದ ಹಾಗೆ, ಇದೇ ಬೊಮ್ಮಾಯಿ ಹೆಡ್ಗೇವಾರ್ ಪಾಠವನ್ನು ಕೈ ಬಿಡುವುದಿಲ್ಲ ಮತ್ತು ಪಠ್ಯವನ್ನು ಹಿಂಪಡೆಯುವುದಿಲ್ಲ ಎಂದು ತಂದೆ ಸಮಾನರಾದ ದೇವೆಗೌಡರಿಗೆ ಧಮಕಿ ಹಾಕಿದ್ದಾರಲ್ಲಾ, ಥೂತ್ತೇರಿ.

******

ನಿಜಕ್ಕೂ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಎಂದೂ ನಡೆಯದ ಹಗರಣವೊಂದು ಈ ಬಿಜೆಪಿ ಸರಕಾರದಲ್ಲಿ ನಡೆದು ಹೋಗಿದೆಯಂತಲ್ಲಾ. ತಮ್ಮ ಪುರೋಹಿತಶಾಹಿ ಅಜೆಂಡಾಗಳನ್ನ ಜಾರಿ ಮಾಡುವ ಸಲುವಾಗಿ ಪಠ್ಯದ ಸಾಲುಗಳನ್ನು ತಿದ್ದಿರುವುದೂ ಅಲ್ಲದೇ ಅದಕ್ಕೆ ಕಾರಣರಾದವರನ್ನ ಹೊಣೆಗಾರರನ್ನಾಗಿ ಮಾಡಬೇಕಿರುವಾಗ, ಜವಾಬ್ದಾರಿಯುತ ಅಧಿಕಾರಿಗಳು ಹಿಂದೆ ಸರಿದಾಗ, ತಿದ್ದಲು ಮುಖ್ಯ ಕಾರಣನಾದ ರೋಹಿತ್ ಚಕ್ರತೀರ್ಥ ಎಂಬವನು ಜನ ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಬೇಕೆಂದು ಹೇಳಿ ಜನರು ಮುಗಿಬಿದ್ದಾಗ ಸರಕಾರವೇ ಉತ್ತರಿಸಲು ಮುಂದಾಗಿದೆಯಂತಲ್ಲಾ. ಹೀಗೆ ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು ಮಾಡುತ್ತ ತಪ್ಪುಗಳ ಸರಣಿಯನ್ನ ಹೆಣಿಯುತ್ತ ಕುಳಿತ ಸರಕಾರ ಎಲ್ಲ ಜನಾಂಗದ ಆಕ್ರೋಶ ಎದುರಿಸಲಾರದೆ ಪಠ್ಯಪರಿಷ್ಕರಣ ಸಮಿತಿಯನ್ನು ರದ್ದು ಮಾಡಿದ್ದೇವೆ ಇನ್ಯಾವ ಸಮಸ್ಯೆಯೂ ಇಲ್ಲವೆಂದು ಭೋಜನಕ್ಕೆ ಕುಳಿತುಕೊಂಡರಂತಲ್ಲಾ. ತಪ್ಪು ಮಾಡಿದ ಮೇಲೆ ಸಮಿತಿ ರದ್ದುಪಡಿಸಿದರೆ ಏನು ಬಂತು, ತಪ್ಪು ತಿದ್ದುವವರು ಯಾರು, ಆಗಿರುವ ನಷ್ಟ ಭರಿಸುವರು ಯಾರು ಎಂದು ಜನ ಆಕ್ರೋಶ ವ್ಯಕ್ತಪಡಿಸಿ ಆ ಕೆಲಸ ಮೊದಲು ಮಾಡಿ ನಂತರ ಭೋಜನ ಆರಂಭಿಸಿ ಎಂದು ಹೇಳಿದ್ದಾರಲಾ, ಥೂತ್ತೇರಿ.

*****

ರೋಹಿತ್ ಚಕ್ರತೀರ್ಥ ಎಂಬುವನು ಕುವೆಂಪುಗೆ ಅವಮಾನ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಕುವೆಂಪು ಸನ್ನಿಧಿಯ ರಾಜಕಾರಣಿ ಕಿಮ್ಮನೆ ರತ್ನಾಕರ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಜಾಥ ತೆಗೆದರು. ಅಲ್ಲಿ
ರಾಜಕಾರಣಿಗಳನ್ನ ಹಿಂದೆಬಿಟ್ಟು, ಸಾಹಿತಿಗಳನ್ನು ಮುಂದೆ ಮಾಡಿ ತೀರ್ಥಹಳ್ಳಿಯಲ್ಲಿ ಬೃಹತ್ ಸಭೆಯನ್ನು ಮಾಡಿದರಲ್ಲಾ. ಅಷ್ಟು ಮಾತ್ರವಲ್ಲ ಕುವೆಂಪು ಜ್ಯೋತಿಯನ್ನು ಕುಪ್ಪಳಿಯಿಂದ ತೆಗೆದುಕೊಂಡು ಹೋಗಿ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತಲುಪಿಸಿದಾಗ ನಾಡಿನ ಪ್ರಜ್ಞಾವಂತರು ಮತ್ತು ಮಾಜಿ ಪ್ರಧಾನಿ ದೇವೆಗೌಡರ ಉಪಸ್ಥಿತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದರೆ, ಒಕ್ಕಲಿಗ ಜನಾಂಗದ ಇಂಗ್ಲಿಷ್ ಸ್ವಾಮಿ ನಿರ್ಮಲಾನಂದರು ಗೈರು ಹಾಜರಿ ಎದ್ದು ಕಾಣುತ್ತಿತ್ತಂತಲ್ಲಾ. ಇದರಿಂದ ಸಿಟ್ಟಾದ ಕೆಲವರು ಈತ ಮೈಗೆ ಎಣ್ಣೆ ಹಚ್ಚಿಕೊಂಡಿರುವ ಸ್ವಾಮಿ ಎಂದಾಗ ಹೌದು ಜನಾಂಗದ ಮಠಗಳ ನಿರ್ವಹಣೆ ಮತ್ತು ಬಿಜೆಪಿ ನಡುವೆ ಕುಸ್ತಿಯಾಗಬೇಕಾದರೆ ಮೈಗೆ ಎಣ್ಣೆ ಹಚ್ಚಿಕೊಳ್ಳುವುದು ಅನಿವಾರ್ಯ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಈತ ಬಾಲಗಂಗಾಧರನಾಥರು ನೇಮಿಸಿ ಹೋದ ಸ್ವಾಮಿಯೇ ಹೊರತು ಜನಾಂಗ ಆರಿಸಿ ಹರಸಿದವರಲ್ಲ ಎಂದರಂತಲ್ಲಾ. ಮತ್ತಷ್ಟು ಜನ ಉತ್ತರಪ್ರದೇಶಕ್ಕೆ ಹೇಗೆ ಆದಿತ್ಯನಾಥನೊ ಹಾಗೆಯೇ ಕರ್ನಾಟಕಕ್ಕೆ ಮುಂದೆ ನಿರ್ಮಲನಾಥ ಎಂದು ಬಿಜೆಪಿಗಳು ಭಾವಿಸಿದ್ದಾರೆ, ಆದುದರಿಂದ ಅಂಥವರ ಮನನೋಯಿಸಲಾಗದ ನಿರ್ಮಲ ಮನಸ್ಸಿನ ನಿರ್ಮಲಾನಂದರು ಕುವೆಂಪುಗೆ ಅವಮಾನವಾದರೂ ಕ್ಯಾರೆ ಅನ್ನಲಿಲ್ಲವೆಂದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...