Homeಅಂಕಣಗಳುಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

- Advertisement -
- Advertisement -

ಹೇಳದೆ ಮಾಡುವವ ರೂಢಿಯೊಳಗುತ್ತಮ. ಹೇಳಿ ಮಾಡುವವ ಮಧ್ಯಮ. ಹೇಳಿಯೂ ಮಾಡದವನು ಅಧಮನಿಗೆ ಸಮವಾಗುತ್ತಾನಂತೆ. ಇದೊಂದು ಕನ್ನಡದ ಜನಪ್ರಿಯ ಗಾದೆ ಮಾತು. ಇದನ್ನು ಚಾಚುತಪ್ಪದೆ ಮಾಡುತ್ತ, ಭಾರತ ಈವರೆಗೆ ಕಂಡರಿಯದ ಉತ್ತಮ ಪ್ರಧಾನಿಯಾಗಿ ಮೋದಿ ಮೆರೆದಾಡುತ್ತಿದ್ದಾರಂತಲ್ಲಾ. ಉದಾಹರಣೆ ಕೊಡುವುದಾದರೆ ರಾತ್ರೋರಾತ್ರಿ ನೋಟ್‌ಬ್ಯಾನ್ ಮಾಡಿಬಿಟ್ಟರು. ಅದರ ಪರಿಣಾಮಗಳು ಅನುಭವಿಸುವವರಿಗೆ ಬಿಟ್ಟದ್ದು. ಹಾಗೆಯೇ ಜಿಎಸ್‌ಟಿ ತಂದುಬಿಟ್ಟರು. ಅದೂ ಕೂಡ ಸಂಬಂಧಪಟ್ಟ ಸಾವಿರಾರು ಸಣ್ಣ ಉದ್ಯಮಗಳು ಮಧ್ಯಮ ಸ್ಥಿತಿಗೆ ಬಂದು ನಂತರ ಅಧಃಪಥನ ಕಂಡವು. ಲಾಕ್‌ಡೌನ್ ಮಾಡಿದರು. ಸಾವಿರಾರು ಜನ ಸತ್ತು ಹೋದರು. ಕೃಷಿ ಕಾಯ್ದೆ ತಂದರು. ಅದರ ವಿರುದ್ಧ ಪ್ರತಿಭಟಿಸುತ್ತಲೇ ಬರೋಬ್ಬರಿ ಏಳುನೂರ ಐವತ್ತು ಜನ ರೈತರು ಮಣ್ಣುಪಾಲಾದರು. ಈಗ ಅಗ್ನಿಪಥ ಜಾರಿಗೆ ತಂದು ಇಡೀ ದೇಶಕ್ಕೆ ಕೊಳ್ಳಿ ಇಟ್ಟು ನಮ್ಮ ರೈಲ್ವೆ ನಿಲ್ದಾಣಗಳು ಉರಿಯುತ್ತಿರಬೇಕಾದರೆ ಮನಃಶಾಂತಿಗಾಗಿ ಮೋದಿ ನಮ್ಮ ಮೈಸೂರಿಗೆ ಬಂದು ಯೋಗ ಧ್ಯಾನದಲ್ಲಿ ಕುಳಿತುಬಿಟ್ಟರಂತಲ್ಲಾ. ಭಾರತದ ಯಾವುದೇ ಸ್ಥಿತಿಗೆ ಮೊದಲು ಉತ್ತರಿಸಬೇಕಾದವರು ಪ್ರಧಾನಿ. ಆದರೆ ದೇಶ ಹಿಂದೆಂದೂ ಕಂಡರಿಯದ ಕ್ಷೋಭೆಗೆ ತುತ್ತಾಗಿರುವ ಈ ಸಮಯದಲ್ಲೂ ಕೂಡ ಮೋದಿಯವರ ಮುಖದಲ್ಲಿ ದೇಶದ ತಲ್ಲಣದ ಗೆರೆಯೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.

****

ಅಗ್ನಿಪಥದ ದೆಸೆಯಿಂದ ದೇಶಬಾಂಧವರಲ್ಲಿ ಹಲವಾರು ಸಂಶಯದ ಅಲೆಗಳು ಎದ್ದು ಜನಸಾಮಾನ್ಯರಲ್ಲಿ ಭೀತಿಹುಟ್ಟಿಸುತ್ತಿವೆಯಂತಲ್ಲಾ. ಆ ಪೈಕಿ ಈ ಬಿಜೆಪಿ ಸರಕಾರ ಅಗ್ನಿಪಥಕ್ಕೆ ಸೇರಿಸಿಕೊಳ್ಳುವ ಹುಡುಗರು ನಾಲ್ಕೆ ವರುಷಕ್ಕೆ ವಾಪಸು ಬರುತ್ತಾರಂತಲ್ಲಾ. ಅವರು ಮುಂದೆ ಮಾಡಬಹುದಾದ ಕೆಲಸಗಳೇನೆಂದು ಈಗಾಗಲೇ ಬಿಜೆಪಿ ನಾಯಕರು ಮಾತನಾಡುವುದನ್ನು ಕೇಳಿಸಿಕೊಂಡರೆ ಬಂದವರು ಬಿಜೆಪಿ ಪಾರ್ಟಿಯ ಅಂಗರಕ್ಷಕ ಪಡೆಯಾಗುವುದರಲ್ಲಿ ಸಂಶಯವಿಲ್ಲಾ. ತರಬೇತಿ ಪಡೆದು ಶತ್ರು ಸೈನ್ಯದ ಎದುರು ಯುದ್ಧ ಮಾಡುವ ಹುಡುಗರು ದೇಶದ ಆಂತರಿಕ ಕ್ಷೋಭೆ ಸಮಯದಲ್ಲಿ ಏನು ಮಾಡಬಲ್ಲರು? ಅವರ ತರಬೇತಿ ಕೌಶಲಗಳು ದೇಶದ ಪ್ರಜೆಗಳ ಮೇಲೆಯೇ ನಡೆದರೆ ಗತಿಯೇನು? ಈಗಾಗಲೇ ಶಿವಮೊಗ್ಗದ ಕಡೆ ಈಶ್ವರಪ್ಪ ಎಂಬ ರಾಜಕಾರಣಿ 144 ಸೆಕ್ಷನ್ ಜಾರಿಯಿದ್ದರೂ ಮೆರವಣಿಗೆ ತೆಗೆದು, ತನ್ನದೇ ಗೂಂಡಾ ಪಡೆಯಿಂದ ಅಲ್ಪಸಂಖ್ಯಾತರು ಮತ್ತು ದಲಿತರ ಮನೆಗಳ ಮೇಲೆ ದಾಳಿ ಮಾಡಿ, ಮನೆಯೊಳಗಿದ್ದ ಪದಾರ್ಥಗಳನ್ನು ಬೀದಿಗೆ ಎಸೆದು ಜಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಮುಂದೆ ಇಂತಹ ಸನ್ನಿವೇಶ ಬಂದಾಗ ಪಾರ್ಟಿ ಜನರ ಜೊತೆಗೆ ಅಗ್ನಿಪಥದಲ್ಲಿ ತರಬೇತಿ ಪಡೆದು ಬಂದವರೂ ಸೇರಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂಬ ಅನುಮಾನಗಳು ದೇಶವಾಸಿಗಳಿಗೆ ಕಾಡುತ್ತಿರುವಾಗ, ಭಾರತದ ಪ್ರಧಾನಿ ಬಾಯಿಬಿಡದೆ ಯೋಗದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

******

ಇದು ಭಾರತವನ್ನಾಳುವ ಮೋದಿಯ ಕಥೆಯಾಯ್ತು. ಇನ್ನ ಕರ್ನಾಟಕವನ್ನಾಳುತ್ತಿರುವ ಬೊಮ್ಮಾಯಿ ಎಂಬ ಬೊಮ್ಮಾಯಿ ಅವರ ಮಗ ಮುಖ್ಯಮಂತ್ರಿಯಾಗಿ ಹೇರಲ್ಪಟ್ಟಾಗ ಚಡ್ಡಿ ವಿರೋಧಿಗಳೂ ಕೂಡ ಸಮಾಧಾನಗೊಂಡಿದ್ದರು. ಏಕೆಂದರೆ ಈ ಬೊಮ್ಮಾಯಿ ಹೆಸರು ಬಸವರಾಜ ಬೊಮ್ಮಾಯಿ. ಬಸವಣ್ಣನ ಹೆಸರು ಹೊತ್ತು ಬಂದವರು. ಜೊತೆಗೆ ಕರ್ನಾಟಕದ ಜೋಡೆತ್ತಿನಂತಿದ್ದ ದೇವೆಗೌಡರು ಮತ್ತು ಎಸ್.ಆರ್ ಬೊಮ್ಮಾಯಿಯವರ ರಾಜಕಾರಣ ಕಂಡವರು. ಅದರಲ್ಲೂ ರಾಜಕಾರಣದ ಯಾವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳದ ದೇವೆಗೌಡರು ಒಂದು ಕಡೆಯಾದರೆ ಎಂ.ಎಸ್ ರಾಯ್‌ರವರ ಅನುಯಾಯಿಯಾಗಿದ್ದ ಬೊಮ್ಮಾಯಿವರ ಮಗ ಮುಖ್ಯಮಂತ್ರಿಯಾಗಿದ್ದು ರಾಜಕಾರಣದ ಪಂಡಿತರಿಗೆ ಒಂದು ಭರವಸೆ ಮೂಡಿಸಿತ್ತು. ಅದಕ್ಕೆ ಕಾರಣ ಬೊಮ್ಮಾಯಿ ಆರೆಸ್ಸೆಸ್‌ನಿಂದ ಬಂದವರಲ್ಲ ಎಂಬುದು. ಹೀಗಿರುವಾಗ ದುರಂತವೆಂದರೆ ಆರೆಸ್ಸೆಸ್ ಅಲ್ಲದ ಬೊಮ್ಮಾಯಿ ಆರೆಸ್ಸೆಸಿಗರೂ ಅಂಜಿಕೊಳ್ಳುವಂತಹ ಆಡಳಿತ ನಡೆಸತೊಡಗಿರುವುದು. ಇದಕ್ಕೆ ಸ್ಪಷ್ಟ ಉದಾಹರಣೆರಯೆಂದರೆ ಆರೆಸ್ಸೆಸ್ ಪಡೆ ಕುಳಿತುಕೊಂಡು ತಿದ್ದಿಕೊಟ್ಟ ಪಠ್ಯಪುಸ್ತಕವನ್ನ ನಾಗೇಶನೆಂಬ ಮಂತ್ರಿ ಮತ್ತು ರೋಹಿತ್ ಚಕ್ರತೀರ್ಥ ಎಂಬ ಮೂರ್ಖನಿಗೆ ಒಪ್ಪಿಸಿದ ಹಾಗೆ, ಇದೇ ಬೊಮ್ಮಾಯಿ ಹೆಡ್ಗೇವಾರ್ ಪಾಠವನ್ನು ಕೈ ಬಿಡುವುದಿಲ್ಲ ಮತ್ತು ಪಠ್ಯವನ್ನು ಹಿಂಪಡೆಯುವುದಿಲ್ಲ ಎಂದು ತಂದೆ ಸಮಾನರಾದ ದೇವೆಗೌಡರಿಗೆ ಧಮಕಿ ಹಾಕಿದ್ದಾರಲ್ಲಾ, ಥೂತ್ತೇರಿ.

******

ನಿಜಕ್ಕೂ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಎಂದೂ ನಡೆಯದ ಹಗರಣವೊಂದು ಈ ಬಿಜೆಪಿ ಸರಕಾರದಲ್ಲಿ ನಡೆದು ಹೋಗಿದೆಯಂತಲ್ಲಾ. ತಮ್ಮ ಪುರೋಹಿತಶಾಹಿ ಅಜೆಂಡಾಗಳನ್ನ ಜಾರಿ ಮಾಡುವ ಸಲುವಾಗಿ ಪಠ್ಯದ ಸಾಲುಗಳನ್ನು ತಿದ್ದಿರುವುದೂ ಅಲ್ಲದೇ ಅದಕ್ಕೆ ಕಾರಣರಾದವರನ್ನ ಹೊಣೆಗಾರರನ್ನಾಗಿ ಮಾಡಬೇಕಿರುವಾಗ, ಜವಾಬ್ದಾರಿಯುತ ಅಧಿಕಾರಿಗಳು ಹಿಂದೆ ಸರಿದಾಗ, ತಿದ್ದಲು ಮುಖ್ಯ ಕಾರಣನಾದ ರೋಹಿತ್ ಚಕ್ರತೀರ್ಥ ಎಂಬವನು ಜನ ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಬೇಕೆಂದು ಹೇಳಿ ಜನರು ಮುಗಿಬಿದ್ದಾಗ ಸರಕಾರವೇ ಉತ್ತರಿಸಲು ಮುಂದಾಗಿದೆಯಂತಲ್ಲಾ. ಹೀಗೆ ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು ಮಾಡುತ್ತ ತಪ್ಪುಗಳ ಸರಣಿಯನ್ನ ಹೆಣಿಯುತ್ತ ಕುಳಿತ ಸರಕಾರ ಎಲ್ಲ ಜನಾಂಗದ ಆಕ್ರೋಶ ಎದುರಿಸಲಾರದೆ ಪಠ್ಯಪರಿಷ್ಕರಣ ಸಮಿತಿಯನ್ನು ರದ್ದು ಮಾಡಿದ್ದೇವೆ ಇನ್ಯಾವ ಸಮಸ್ಯೆಯೂ ಇಲ್ಲವೆಂದು ಭೋಜನಕ್ಕೆ ಕುಳಿತುಕೊಂಡರಂತಲ್ಲಾ. ತಪ್ಪು ಮಾಡಿದ ಮೇಲೆ ಸಮಿತಿ ರದ್ದುಪಡಿಸಿದರೆ ಏನು ಬಂತು, ತಪ್ಪು ತಿದ್ದುವವರು ಯಾರು, ಆಗಿರುವ ನಷ್ಟ ಭರಿಸುವರು ಯಾರು ಎಂದು ಜನ ಆಕ್ರೋಶ ವ್ಯಕ್ತಪಡಿಸಿ ಆ ಕೆಲಸ ಮೊದಲು ಮಾಡಿ ನಂತರ ಭೋಜನ ಆರಂಭಿಸಿ ಎಂದು ಹೇಳಿದ್ದಾರಲಾ, ಥೂತ್ತೇರಿ.

*****

ರೋಹಿತ್ ಚಕ್ರತೀರ್ಥ ಎಂಬುವನು ಕುವೆಂಪುಗೆ ಅವಮಾನ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಕುವೆಂಪು ಸನ್ನಿಧಿಯ ರಾಜಕಾರಣಿ ಕಿಮ್ಮನೆ ರತ್ನಾಕರ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಜಾಥ ತೆಗೆದರು. ಅಲ್ಲಿ
ರಾಜಕಾರಣಿಗಳನ್ನ ಹಿಂದೆಬಿಟ್ಟು, ಸಾಹಿತಿಗಳನ್ನು ಮುಂದೆ ಮಾಡಿ ತೀರ್ಥಹಳ್ಳಿಯಲ್ಲಿ ಬೃಹತ್ ಸಭೆಯನ್ನು ಮಾಡಿದರಲ್ಲಾ. ಅಷ್ಟು ಮಾತ್ರವಲ್ಲ ಕುವೆಂಪು ಜ್ಯೋತಿಯನ್ನು ಕುಪ್ಪಳಿಯಿಂದ ತೆಗೆದುಕೊಂಡು ಹೋಗಿ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತಲುಪಿಸಿದಾಗ ನಾಡಿನ ಪ್ರಜ್ಞಾವಂತರು ಮತ್ತು ಮಾಜಿ ಪ್ರಧಾನಿ ದೇವೆಗೌಡರ ಉಪಸ್ಥಿತಿ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದರೆ, ಒಕ್ಕಲಿಗ ಜನಾಂಗದ ಇಂಗ್ಲಿಷ್ ಸ್ವಾಮಿ ನಿರ್ಮಲಾನಂದರು ಗೈರು ಹಾಜರಿ ಎದ್ದು ಕಾಣುತ್ತಿತ್ತಂತಲ್ಲಾ. ಇದರಿಂದ ಸಿಟ್ಟಾದ ಕೆಲವರು ಈತ ಮೈಗೆ ಎಣ್ಣೆ ಹಚ್ಚಿಕೊಂಡಿರುವ ಸ್ವಾಮಿ ಎಂದಾಗ ಹೌದು ಜನಾಂಗದ ಮಠಗಳ ನಿರ್ವಹಣೆ ಮತ್ತು ಬಿಜೆಪಿ ನಡುವೆ ಕುಸ್ತಿಯಾಗಬೇಕಾದರೆ ಮೈಗೆ ಎಣ್ಣೆ ಹಚ್ಚಿಕೊಳ್ಳುವುದು ಅನಿವಾರ್ಯ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಈತ ಬಾಲಗಂಗಾಧರನಾಥರು ನೇಮಿಸಿ ಹೋದ ಸ್ವಾಮಿಯೇ ಹೊರತು ಜನಾಂಗ ಆರಿಸಿ ಹರಸಿದವರಲ್ಲ ಎಂದರಂತಲ್ಲಾ. ಮತ್ತಷ್ಟು ಜನ ಉತ್ತರಪ್ರದೇಶಕ್ಕೆ ಹೇಗೆ ಆದಿತ್ಯನಾಥನೊ ಹಾಗೆಯೇ ಕರ್ನಾಟಕಕ್ಕೆ ಮುಂದೆ ನಿರ್ಮಲನಾಥ ಎಂದು ಬಿಜೆಪಿಗಳು ಭಾವಿಸಿದ್ದಾರೆ, ಆದುದರಿಂದ ಅಂಥವರ ಮನನೋಯಿಸಲಾಗದ ನಿರ್ಮಲ ಮನಸ್ಸಿನ ನಿರ್ಮಲಾನಂದರು ಕುವೆಂಪುಗೆ ಅವಮಾನವಾದರೂ ಕ್ಯಾರೆ ಅನ್ನಲಿಲ್ಲವೆಂದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...