Homeಅಂಕಣಗಳುಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

ಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

- Advertisement -
- Advertisement -

ಪಾಕೀಸ್ತಾನದಲ್ಲೂ ಮೋದಿ ಭಕ್ತರಿದ್ದಾರೆ, ಅವರೆಲ್ಲಾ ಮೋದಿ ಆಡಳಿತಕ್ಕೆ ಒಳಪಡಲು ಹಾತೊರೆಯುತ್ತಿದ್ದಾರೆ ಎಂದು ನಮ್ಮ ಈಶ್ವರಪ್ಪನವರು ಹೇಳಿದ್ದಾರಲ್ಲಾ. ಕೇಳಿದ ಕೂಡಲೇ ಬೆಚ್ಚಿಬೀಳುವಂತಹ ಈ ಸಂಗತಿಯ ಬಗ್ಗೆ ಈಶ್ವರಪ್ಪರನ್ನೇ ಕೇಳಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್: ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ…’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿದ್ದಿರಿ, ಬನ್ರಿ ಮಾತಾಡಣ.”

“ಮಾತಾಡಸಕ್ಕೆ ಅಂತ ಫೋನು ಮಾಡಿದೆ ಸಾರ್.”

“ಏನಿಸೇಷ?”

“ತಾವು ಶಿವಮೊಗ್ಗದ ಖಾಸಗಿ ಬಸ್ಟಾಂಡಲ್ಲಿ ನಿಂತುಕೊಂಡು ಪಾಕೀಸ್ತಾನದ ಜನರು ಉಸುರಾಡದೆ ಕಷ್ಟ ಆಗಿದೆ. ಆದ್ರಿಂದ ಅವುರೆಲ್ಲಾ ಮೋದಿಯಂತವರು ನಮ್ಮ ದೇಶದ ಪ್ರಧಾನಿಯಾಗಬೇಕು ಅಂತ ಬಯಸಿದ್ದಾರೆ, ಅಲ್ಲಿ ಜನಕ್ಕೆ ಮೋದಿ ಆಡಳಿತದ ಒಲವಿದೆ ಅಂದಿದೀರಿ ಸಾರ್.”

“ಹೌದು ಹೇಳೀದ್ದಿನಿ, ಅದರಲ್ಲಿ ತಪ್ಪೇನು?”

“ಹಾಗಂತ ನಿಮಿಗೆ ಯಾರೇಳಿದ್ರು ಸಾರ್…”

“ಯಾರು ಹೇಳಕ್ಕೆ ಬಂದಿಲ್ಲ. ಪಾಕೀಸ್ತಾನದ ಸ್ಥಿತಿ ನೋಡಿದ್ರೆ, ನಾವೆ ಊಹೆ ಮಾಡಬಹುದು ಕಂಡ್ರಿ.”

“ಪಾಕೀಸ್ತಾನದವು ಹ್ವಟ್ಟಿಗಿಲ್ದೆಯಿದ್ರು ಮೋದಿ ಬಗ್ಗೆ ತಿಳಕತ್ತವೆ ಸಾರ್. ಗುಜರಾತ್ ಗಲಭೆ ಆಯ್ತಲ್ಲಾ, ಆಗಿನಿಂದ ಏನು ಮಾಡ್ತರೆ, ಏನೇಳ್ತರೆ ಅನ್ನದ ತಿಳಕತ್ತಾ ಅವುರೆ. ಅಂಥೊರು ಮೋದಿ ಆಡಳಿತದ ಬಗ್ಗೆ ಒಲವು ತೋರತರೆ ಅಂತಿರಲ್ಲಾ ಹ್ಯಂಗೇ?”

“ಮೋದಿ ಆಡಳಿತದಲ್ಲಿ ಹತ್ತೊರಸದಿಂದ ಗಲಭೆ ಆಗಿಲ್ಲ. ಜನಾಂಗದ ಘರ್ಷಣೆ ನಡೆದಿಲ್ಲ. ಕೊಲೆ ಸುಲಿಗೆ ಏನೂ ನಡದಿಲ್ಲ. ಇಡೀ ದೇಶ ತುಂಗಾ ನದಿಯಂಗೆ ಪ್ರಶಾಂತವಾಗಿ ಹರಿತಾ ಅದೆ.”

“ತುಂಗಾ ನದಿಗೆ ಸೇರಿದಂಗೆ ಮನೆಕಟ್ಟಿಗೊಂಡು ನೀವೀ ಮಾತೇಳದು ಸರಿ; ಆದ್ರೆ ತಾವು ಮಂತ್ರಿಯಾಗಿದ್ದಾಗ 144ನೇ ಸೆಕ್ಷನ್ ಜಾರಿಯಾಗಿದ್ರು ಎಂ.ಪಿಯಾದಿಯಾಗಿ ಮೆರವಣಿಗೆ ತಗದು ಮುಸ್ಲಿಮರ ಕೇರಿಗೆ ನುಗ್ಗಿ ಮನೆನ್ಯಲ್ಲ ಲೂಟಿ ಮಾಡಿ, ಹಲ್ಲೆ ಮಾಡುದ್ರಲ್ಲ ಸಾರ್, ಇದ ಮರತುಬುಟ್ರ?”

“ಅದು ಅಮಾಯಕನ ಕೊಲೆ ಮಾಡಿದ್ದಕ್ಕೆ ನಡೆದ ಪ್ರತಿಭಟನೆ ಕಂಡ್ರಿ.”

“ಪ್ರತಿಭಟನೆಲಿ ಹಿಂಸೆ ಇರಬವುದೊ?”

“ಕೈ ಮೀರಿದಾಗ ಏನೂ ಮಾಡಕ್ಕಾಗದಿಲ್ಲ.”

“ಅದು ಸಾರ್ವಜನಿಕರ ವಿಷಯ. ನೀವು ಮಂತ್ರಿಯಾಗಿದ್ದು ನಿಮ್ಮ ಲೀಡರ್‌ಶಿಪ್ಪಲ್ಲೆ ದೊಂಬಿ ನಡಿತು ಸಾರ್.”

“ಪುನಃ ಅದ್ನೆ ಹೇಳ್ತಿರಲ್ರೀ. ನಾವು ಮೆರವಣಿಗೆ ಹೋಗುವಾಗ ಯಾವನೊ ನಿಮ್ಮಂಥೋನು ಸಾಬರ ಮನಿಗೆ ನುಗ್ಗಿ ಟಿ.ವಿ ಹೊತ್ತಗಂಡು ಬಂದು ಬೀದಿಗಾಕಿದ. ಆಗ ಮೆತ್ತಗಾಕಪ್ಪ ವಡದೋಗತ್ತೆ ಅನ್ನಕ್ಕಾಗತ್ತ. ಇನ್ನೊಬ್ಬ ಪ್ರಿಜ್ ತಂದು ಯಸ್ದ. ಮತ್ತೊಬ್ಬ ಗುಜರಿ ಸಾಮನು ತಂದು ಚಲ್ಲಿದ. ಅಂತವರನ್ನ ತಡಿಯಕ್ಕಾಗತ್ತ?”

“ಆಗಲ್ಲ ಸಾರ್, ಅಂತ ಕ್ಯಲಸ ಮಾಡೋರ ಲೀಡ್ರು ನೀವೆ ಹಿಂದಿರುವಾಗ ಇನ್ನ ಅವುರನ್ನ್ ತಡಿಯಕ್ಕಾಗಲ್ಲ. ಇದು ಪಾಕೀಸ್ತಾನದವರಿಗೆ ಗೊತ್ತಿಲ್ಲವೆ?”

“ಅದ್ಯಂಗೆ ಗೊತ್ತಾಗತ್ತೆರಿ? ಪಾಕೀಸ್ತಾನ ಎಲ್ಲೀ ಶಿವಮೊಗ್ಗ ಎಲ್ಲಿ…”

ಇದನ್ನೂ ಓದಿ: ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

“ಮಂಡ್ಯದ ಹಿಜಾಬ್ ಹುಡುಗಿ ವಿಷಯ ಸಂಗ್ರಹಿಸಿರೋರಿಗೆ ನಿಮ್ಮ ವಿಷಯ ತಿಳಿಯಲ್ವ ಸಾರ್?”

“ತಿಳಿಲಿ ಬುಡ್ರಿ, ಅವುರೇನು ಮಾಡ್ತರೆ?”

“ಅಲ್ಲ ಸಾರ್ ಇಡೀ ದೇಶದಲ್ಲಿ ಬಿಜೆಪಿ ಮಂತ್ರಿಗಳು ಶಾಸಕರೆಲ್ಲಾ ನಿಮ್ಮಂಗೆ ಇರುವಾಗ, ಇದ ತಿಳಕಂಡ ಪಾಕಿಸ್ತಾನಿಗಳು ಅದ್ಯಂಗೆ ಮೋದಿ ಆಡಳಿತವೇ ಚಂದ ಅಂತರೆ ಅನ್ನದೆ ನಮಿಗೆ ಸಮಸ್ಯೆ.”

“ಪಾಕೀಸ್ತಾನದಲ್ಲಿ ಈಗೇನು ನ್ಯಡಿತಾ ಅದೆ ಗೊತ್ತೇನ್ರಿ?”

“ಗೊತ್ತು ಸಾರ್. ಆ ದೇಶ ಪಾಲಾದಾಗಿಂದ ನ್ಯಟ್ಟಗಿಲ್ಲ. ಆ ದೇಶಕ್ಕೆ ಮೋದಿಯಂತ ಪ್ರಧಾನಿಗಳು ಬಂದು ಹೋಗ್ಯವುರೆ, ಆದ್ರೆ ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ತರದವುರು ಬಂದಿಲ್ಲ. ಅದ್ಕೆ ಆ ದೇಶ ಅಂಗಿರದು.”

“ನಾನೇಳಿದ್ದು ಈ ಕ್ಷಣಕ್ಕೆ ಆ ಜನ ಮೋದಿ ಆಡಳಿತ ಬೇಕು ಅಂತರೆ ಅಂತ.”

“ನೋಡಿ ಸಾರ್, ಮೋದಿ ನಿಮ್ಮ ಆರಾಧ್ಯ ದೈವ ಇರಬಹುದು, ಆದ್ರೆ ಅವರು ಈ ದೇಶಕ್ಕೆ ಸುಳ್ಳು ಹೇಳ್ಯವುರೆ.”

“ಏನು ಸುಳ್ಳೇಳಿದ್ದಾರ್ರೀ?”

“ಅವುರು ಮಾತಾಡೊ ಐದು ಮಾತಲ್ಲಿ ಮೂರು ಸುಳ್ಳಿರತವೆ ಸಾರ್.”

“ಒಂದೇ ಒಂದು ಸುಳ್ಳು ತೋರಿಸಿ, ನಾನು ರಾಜಕೀಯ ನಿವೃತ್ತಿ ತಗತಿನಿ.”

“ನಿಮ್ಮ ನಿವೃತ್ತಿನ ಬಿಜೆಪಿನೇ ಮಾಡಿದೆ ಸಾರ್, ನೀವು ಸುಮ್ಮನೆ ಅದನ್ನ ಒಪ್ಪಿಗಳದೆ ಸಕ್ರಿಯವಾಗಿದ್ದೀರಿ.”

“ಬಿಜೆಪಿ ಎಲ್ಲಿ ಮಾಡಿದೆ ರೀ?”

“ಸಾರ್ ನಲವತ್ತು ಪರಸೆಂಟ್ ಕಮಿಷನ್ ವಿಷಯದಲ್ಲಿ ಪೇ ಸಿಎಂ ಬೊಮ್ಮಾಯಿ ನಿಮ್ಮ ರಾಜಿನಾಮೆ ತಗಂಡ್ರು. ಸರಕಾರನೆ ಅತ್ಮಹತ್ಯೆ ವಿಷಯದಲ್ಲಿ ಬಿ ರಿಪೋರ್ಟು ಹಾಕ್ಸಿದ್ರೂ, ಸರಕಾರದ ಅವಧಿ ಮಿಗಿಯೋವರಿಗ್ರೂ, ನಿಮ್ಮನ್ನ ತಿರಗ ಮಂತ್ರಿ ಮಾಡಲಿಲ್ಲ. ಟಿಕೆಟ್‌ನೂ ಕೊಡಲಿಲ್ಲ ಇದರರ್ಥ ಏನೂ ಅಂತ?”

“ಬಿ ರಿಪೋರ್ಟು ಬಂತಲ್ಲ. ನಾನು ಆ ವಿಷಯದಲ್ಲಿ ನಿರಪರಾಧಿ ಅಂತ ಆಯ್ತು, ಇನ್ನ ಟಿಕೆಟ್ ವಿಷಯದಲ್ಲಿ ಯುವಕನಿಗೆ ಕೊಟ್ರು ಅದು ಪಾರ್ಟಿ ತೀರ್ಮಾನ. ನಮ್ಮಲ್ಲಿ ವಂಶಾಡಳಿತ ಇಲ್ಲ.”

“ವಿಜಯೇಂದ್ರ, ರಾಘವೇಂದ್ರ, ಎಡೂರಪ್ಪ ಬೇರೆಬೇರೆ ಜಾತಿನ?”

“ಅದ್ಕೆ ನಾನೀಗ ಹಾವೇರಿಗೆ ನನ್ನ ಮಗನ್ನ ನಿಲ್ಲುಸ್ತಿನಿ.”

“ಟಿಕೆಟ್ ಕೊಡದೆ ಹೋದ್ರೆ?”

“ಪಾರ್ಟಿ ಕೆಲಸ ಮಾಡ್ತಿವಿ. ಮುಸ್ಲಿಂ ಗೂಂಡಾಗಳ ವಿರುದ್ಧ ಹೋರಾಡ್ತಿವಿ.”

“ದ್ವೇಷ ವಳ್ಳೆದಲ್ಲ ಸಾರ್.”

“ಅದ್ನನಿಗೂ ಗೊತ್ತು ಕಂಡ್ರಿ, ಬಿಜೆಪಿಲಿ ರಾಜಕಾರಣ ಮಾಡಬೇಕಾದ್ರೆ ಹಿಂಸೆ ಮಾತಾಡಬೇಕು, ಜನಗಳನ್ನ ಸುಳ್ಳು ಸುಳ್ಳೆ ಪ್ರಚೋದಿಸಬೇಕು.”

“ಇನ್ನೊಂದು ಮಾತಾಡಿದ್ದೀರಿ ಸಾರ್ ನೀವು ಬಸ್ಟಾಂಡಲ್ಲಿ. ಅಧಿಕಾರದಾಸೆಗೆ ಕಾಂಗ್ರೆಸ್‌ನವರು ದೇಶ ತುಂಡು ಮಾಡಿದ್ರು. ಈಗ್ಲಾರ ಕ್ಷಮೆ ಕೇಳಿದ್ರೆ ಪಾಕೀಸ್ತಾನ ಭಾರತದ ತೆಕ್ಕೆಗೆ ಸೇರತದೆ ಅಂದಿದೀರಿ.”

“ಹೌದು, ಅದರಲ್ಲಿ ತಪ್ಪೇನು?”

“ಪಾಕೀಸ್ತಾನ ಏನು ಅಂತ ಗೊತ್ತ ಸಾ ನಿಮಿಗೆ, ಅಲ್ಲಿ ಚುನಾಯಿತ ಸರಕಾರ ಅಂತ ಒಂದಿರುತ್ತೆ. ಅದಕ್ಕೆ ಪರ್ಯಾಯವಾಗಿ ಮಿಲಿಟ್ರಿನೂ ಆಡಳಿತ ನಡಸತ್ತೆ. ಇವುರ ನಡುವೆ ಭಯೋತ್ಪಾದಕರು, ಗೂಂಡಾಗಳು ಬೇರೆ ಅವುರೆ. ಈ ಮೂರು ಸಂಘಟನೆ ಕವುಲುಗಳೂ ಸ್ವತಂತ್ರವಾಗಿ ಅಪಾಯಕಾರಿಗಳಾಗಿವೆ. ಇಂತ ದೇಶನ ಭಾರತಕ್ಕೆ ಸೇರಿಕೊಳ್ಳುತ್ತೆ ಅಂತಿರಲ್ಲಾ, ಈ ಶತಮಾನದ ಜೋಕು ಸಾರ್ ಇದು.”

“ಅದ್ಯಂಗ್ರಿ ಜೋಕು. ನಮ್ಮ ಮಾತ್ಯಲ್ಲ ನಿಮಗೆ ಜೋಕಾಗಿ ಕಾಣತ್ತೆ.”

“ನೀವೇಳದೆಂಗೆ ಅಂದ್ರೆ, ಹುಚ್ಚರ ಜೊತೆಗೆ ತಿಕ್ಕಲ್ರು ಸೇರಿಕಂಡ್ರೆ ಎಷ್ಟು ಚನ್ನಾಗಿರುತ್ತೆ ಅನ್ನಂಗೆ ಮಾತಾಡ್ತಿರಿ.”

“ಯಾರ್ರಿ ತಿಕ್ಕಲ್ರು?”

“ತಿಕ್ಕಲರಲ್ಲ ಬಿಡಿ. ಅಸಾಮಾನ್ಯ ದೇಶಭಕ್ತರೆ ಅಂತ ಮಾತಾಡಣ. ಮಣಿಪುರ ಯಾವ ದೇಶದಲ್ಲಿದೆ ಸಾರ್? ಅದರ ಬಗ್ಗೆ ಮಾತಾಡದ ಬುಟ್ಟು ಪಾಕೀಸ್ತಾನದ ಬಗ್ಗೆ ಮಾತಾಡ್ತಿರಿ. ಅಲ್ಲಿ ಜನಾಂಗಿಯ ಹತ್ಯೆ ಶುರುವಾಗಿ, ಮೂರು ತಿಂಗಳಾಯ್ತು, ಪ್ರಧಾನಿ ಆ ವಿಷಯದಲ್ಲೂ ಬಾಯಿ ಬಿಡಕ್ಕೆ ಮೂರು ತಿಂಗಳಾಯ್ತು. ಅದೂ ಬಲವಂತವಾಗಿ ಸಂಸತ್ತಿಗೆ ಬಂದು ಎರಡು ಗಂಟೆ ಕಾಂಗ್ರೆಸ್‌ಗೆ ಬೈದು, ಐದು ನಿಮಿಷ ಮಣಿಪುರದ ಬಗ್ಗೆ ಮಾತಾಡಿದ್ರು. ಇದು ಸರಿನ?”

“ಮೋದಿ ಬಗ್ಗೆ ಮಾತಾಡಬೇಡಿ.”

“ಮಾತಾಡ್ತಿನಿ ಸಾರ್, ಅವರು ನಮ್ಮ ದೇಶದ ಪ್ರಧಾನಿ, ಅವುರ ಈ ದೇಶಕ್ಕೆ ಹೇಳಿರೊ ಸುಳ್ಳು ಯಾವುದು ಅಂದ್ರೇ: ಚೀನಾ ದೇಶ ನಮ್ಮ ದೇಶದ ಹುಲ್ಲುಗಾವಲನ್ನು ಅಕ್ರಮಿಸಿದೆ. ಇದು ಗೊತ್ತಿದ್ದೂ ಮೋದಿ ಒಂದಿಂಚು ಭೂಮಿಯನ್ನು ಚೀನಾ ಅಕ್ರಮಿಸಿಕೊಂಡಿಲ್ಲ ಅಂದ್ರು. ಪ್ರಧಾನಿ ಸುಳ್ಳಿಗೆ ಗಡಿಲಿದ್ದ ಸೈನಿಕರೆ ದಂಗುಬಡದವುರೆ ಗೊತ್ತೆ?”

“ರೀ ಚೀನಾದವುರು ಅಕ್ರಮಿಸಿರೋದು ಹುಲ್ಲುಗಾವಲು. ಆ ಹುಲ್ಲುಗಾವುಲಲ್ಲಿ ಗೋವು ಮೇಯ್‌ಸ್ತರೆ. ಗೋವು ಯಲ್ಲಾರಿಗೂ ಒಂದೆ. ಇದೂ ಒಂದು ಸುದ್ದಿ ಅಂತ ಹೇಳ್ತಿರಿ ನೀವು.”

“ಇನ್ನೊಂದು ವಿಷಯ ಸಾರ್, ನಿಮಗೆ ಗೊತ್ತಿರಲಿ ದೇಶಕ್ಕೆ ಸ್ವಾತಂತ್ರ ಬಂದಾಗ ನಿಮ್ಮ ಸಾವರಕರು ಮತ್ತೆ ಇತರರು ಇನ್ನು ಮುಂದೆ ಈ ದೇಶ ಹಿಂದೂ ರಾಷ್ಟ್ರವಾಗತ್ತೆ ಅಂದ್ರು. ಇವುರಂಗಂದ ಕೂಡ್ಲೆ ಜಿನ್ನಾ ಹಿಂದೂ ದೇಶದಲ್ಲಿ ನಾವಿರಲ್ಲ ಪಾಕೀಸ್ತಾನ ಕೊಡಿ ಅಂದ. ಅಂಗಾಗಿ ನಿಮ್ಮವುರ ಮಾತಿಂದ ದೇಶ ಒಡದು, ನಮ್ಮನಮ್ಮ ದಾರಿಲಿ ಆಗ್ಲೆ 75 ವರ್ಷ ನ್ಯಡದಿದ್ದೀವಿ. ಆ ದೇಶನೂ ಅವನತಿ ಅಂಚಿಗೆ ಬಂದಿದೆ. ತಿರಗ ಮೋದಿ ಬಂದ್ರೆ ನಾವೂ ಸರ್ವನಾಶದ ಹಾದಿಗೆ ಬೀಳ್ತಿವಿ. ಇಂಥದೊಂದು ಸ್ಥಿತಿಲಿ ನೀವು ಪಾಕೀಸ್ತಾನ ಸೇರಿಸಿಗಳಕ್ಕೆ ಹಾತೊರೆಯದರ ಬದ್ಲು ಶಿವಮೊಗ್ಗದ ಮಿಳಘಟ್ಟ, ಟಿಪ್ಪು ನಗರ ಮಂಡಿ ಕಡೆಯಿರೊ ಮುಸಲ್ಮಾನರನ್ನ ಮಾತಾಡಿಸಿ ಕಷ್ಟ ಸುಖ ಕೇಳಿ ಸಾರ್. ನೀವಂಗೆ ಮಾಡಿದ್ರೆ ಮುಂದೆ ಪಕ್ಷೇತರವಾಗಿ ನಿಂತ್ರು ಗೆಲ್ತೀರಿ.”

“ಪಕ್ಷೇತರವಾಗಿ ಈಶ್ವರಪ್ಪನ ಶರೀರದಲ್ಲಿ ಉಸಿರಿರೊವರಿಗೂ ನಿಲ್ಲಲ್ಲ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...

SIR ತಂದಿಟ್ಟ ಸಂಕಷ್ಟ : ದಾಖಲೆ ಹೊಂದಿಸಲು ಅಲೆಮಾರಿಗಳ ಅಲೆದಾಟ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಅನ್‌ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 23,45,428 ಅನ್‌ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್...

ಸಚಿವ ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ನಿವಾಸಗಳ ಮೇಲೆ ಇಡಿ ದಾಳಿ: 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ)...

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...