Homeಅಂಕಣಗಳುದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

ದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

- Advertisement -
- Advertisement -

ಜೆಡಿಎಸ್ ಎಂಬ ಪಿತೃ ಪಕ್ಷ ಮುಂದೆ ಏಕಾಂಗಿಯಾಗಿಯೇ ಹೋರಾಡಿ ಮಡಿಯಲಿದೆ ಎಂದು ದೇವೇಗೌಡರು ಖಚಿತವಾಗಿ ಹೇಳಿದ್ದಾರಲ್ಲಾ. ಆದರೂ ಜನಕ್ಕೆ ಡವುಟು ಬಂದಿರುವುದು ಇಲ್ಲೆ; ಏಕೆಂದರೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಈತರದ ಮನೋಲ್ಲಾಸದ ಕಡೆ ಮನಸ್ಸನ್ನು ಕಿಂಚಿತ್ತೂ ಹರಿಯಬಿಡದೆ ರಾಜಕಾರಣಕ್ಕೆ ಕೇಂದ್ರೀಕರಿಸಿರುವ ದೇವೇಗೌಡರು ದೇಶಕಂಡ ಅಪರೂಪದ ರಾಜಕಾರಣಿ. ಇದನ್ನಾಗಲೇ ಜೀವನ ಚರಿತ್ರೆಕಾರರು ದಾಖಲಿಸಿ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ್ದಾರಂತಲ್ಲಾ. ತಮ್ಮ ಅಂಗೈನಲ್ಲಿಯೇ ಇನ್ನೂರ ಇಪ್ಪತ್ತ ನಾಲ್ಕು ಕ್ಷೇತ್ರಗಳ ಗೆರೆಗಳನ್ನ ನೋಡುವ ಗೌಡರು, ಹಿಂದೊಮ್ಮೆ ಮುಖ್ಯಮಂತ್ರಿ ಆಸೆ ತೋರಿಸಿ ಮಗನನ್ನು ಕಮಲದವರು ಅಪಹರಿಸಿದರೆಂದೂ, ಅದರಲ್ಲಿ ನನ್ನ ಪಾತ್ರವಿಲ್ಲ ಅದಕ್ಕೆ ನಾನು ಮುಂದಿನ ಇಪ್ಪತ್ತು ತಿಂಗಳನ್ನ ಎಡೂರಪ್ಪನಿಗೆ ಬಿಡದೆ ನನ್ನ ಜಾತ್ಯತೀತ ಕಾಯ್ದುಕೊಂಡೆ ಎಂದೂ ಲೋಕಸಭೆಯಲ್ಲಿ ನಂಬಿಸುವ ದನಿಯಲ್ಲಿ ಹೇಳಿದ್ದರು. ಲೋಕ ನಂಬಿತು, ಆದರೆ ಈಗ ಜನಕ್ಕೆ ಡವುಟಾಗುತ್ತಿರುವುದು ಏಕೆಂದರೆ 1983ರಲ್ಲಿ ಇದೇ ಸಿದ್ದರಾಮಯ್ಯ ಬಿಜೆಪಿ ಬೆಂಬಲಿತ ಜನತಾ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೆ ಎಂದು ಗೌಡರು ನೆನಪಿಸಿದ್ದಾರಲ್ಲಾ, ಥೂತ್ತೇರಿ.

*****

1983ರಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದುದು ನಿಜ. ಏಕೆಂದರೆ ಪ್ರತಿಭಾವಂತನಂತೆ ಕಾಣುತ್ತಿದ್ದ ಅವರನ್ನು ಖಾಲಿ ಬಿಡಬಾರದೆಂದು ನಜೀರ್ ಸಾಬ್ ಮತ್ತು ರಾಚಯ್ಯ, ರಾಮಕೃಷ್ಣ ಹೆಗಡೆಯವರಿಗೆ ಶಿಫಾರಸ್ಸು ಮಾಡಿದ್ದರು. ಆ ಕಾರಣವಾಗಿ ಸಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಹೆಗಡೆ ಸರಕಾರಕ್ಕೆ ಬೆಂಬಲಕೊಟ್ಟಿದ್ದ ಬಿಜೆಪಿ ಇಂದಿನ ಬಿಜೆಪಿಯಾಗಿರಲಿಲ್ಲ. ಇವತ್ತಿನ ಬಿಜೆಪಿಗಳ ತರಹ ಅಂದಿನ ಕಾಂಗ್ರೆಸ್ಸಿಗರಿದ್ದರು. ಎ.ಕೆ ಸುಬ್ಬಯ್ಯನವರ ನೇತೃತ್ವದ ಬಿಜೆಪಿ ದೇವೇಗೌಡರ ವಿಶ್ವಾಸದಲ್ಲಿತ್ತು. ಅಂದಿನ ಬಿಜೆಪಿ ಬ್ರಾಹ್ಮಣರು ಹೆಗಡೆ ನೇತೃತ್ವಕ್ಕೆ ತಮ್ಮನ್ನ ಅರ್ಪಿಸಿಕೊಂಡಿದ್ದರಿಂದ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಇಳಿಯಿತು. ಹೆಗಡೆಯವರು ಸುಬ್ಬಯ್ಯರನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾದಾಗ ದೇವೇಗೌಡರು ಸುಬ್ಬಯ್ಯನವರ ಪರವಿದ್ದರು. ತಮ್ಮ ಸರಳ ಸಜ್ಜನಿಕೆ ಸಿದ್ಧಾಂತದಿಂದ ದೇವೇಗೌಡರು ಅಂದು ಅವರ ಪಕ್ಷದಲ್ಲಿದ್ದ ಪಟೇಲ್, ಬೊಮ್ಮಾಯಿ, ಸಿಂಧ್ಯಾ, ಸಿದ್ದು, ಪ್ರಕಾಶ್ ಮತ್ತು ಆಳ್ವ ರಘುಪತಿ, ರಾಮಯ್ಯ ಇಂತಹ ಘಟಾನುಘಟಿ ರಾಜಕಾರಣಿಗಳ ಲೀಡರಾಗಿದ್ದರು. ಈಗ ಅವರಲ್ಲಿ ಕೆಲವರು ಭೌತಿಕವಾಗಿ ಇಲ್ಲ. ಮತ್ತೆ ಉಳಿದವರು ದೇವೇಗೌಡರ ಪಾರ್ಟಿಯಲ್ಲಿ ಇಲ್ಲ. ’ಹಾಳೂರಿಗೆ ಉಳಿದವನೇ ಗೌಡ’ ಎಂಬ ಗಾದೆಯಂತೆ ನಾನಿನ್ನೂ ಸೆಕ್ಯುಲರ್ ಮ್ಯಾನ್ ಎಂಬುವುದನ್ನ ತೋರಿಸಿಕೊಳ್ಳಲು ಇಬ್ರಾಹಿಂ ಎಂಬ ಮಾತಿನ ಮಲ್ಲರನ್ನ ಜೊತೆಗಿಟ್ಟುಕೊಂಡು ಮಗನನ್ನು ಆಟ ಆಡಲು ಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

 

ಮಗನನ್ನು ಆಟ ಆಡಲು ಬಿಟ್ಟಿದ್ದಾರೆ ಎಂಬ ನಮ್ಮ ಆಪಾದನೆಗೆ ಸಾಕ್ಷಿಯೊದಗಿಸಬೇಕಲ್ಲವೇ! ಕುಮಾರಣ್ಣ ಬಿಜೆಪಿ ಸಖ್ಯ ಬೆಳೆಸಿಕೊಂಡು ಮುಖ್ಯಮಂತ್ರಿಯಾದದ್ದು ದಿಢೀರ್ ಬೆಳವಣಿಗೆಯೇನಲ್ಲ; ದಿನ ಬೆಳಗಾಯ್ತೆಂದರೆ ಮಗನನ್ನ ಮನೆಗೆ ಕರೆಸಿಕೊಂಡು ಮುಂದೆ ನಡೆಯುವ ಮಹಾ ನಾಟಕಕ್ಕೆ ತಾಲೀಮು ಕೊಡುತ್ತಿದ್ದರು ದೇವೇಗೌಡರು. ಹೇಳಿದಂತೆ ಕೇಳುವ ಜೆಡಿಎಸ್ ಅಧ್ಯಕ್ಷನಿದ್ದ ಆ ಕಾಲದಲ್ಲಿ ತೋರಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ಸ್ಪೀಕರ್ ಇದ್ದರು; ಹಾಗಾಗಿ ಗೌಡರು ಮನೆಯಲ್ಲೇ ಕುಳಿತು ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡುವುದಾದರೆ ನನ್ನ ಹೆಣದ ಮೇಲಾಗಲಿ ಎಂದರು. ದಳದವರೆಲ್ಲಾ ಹೆದರಿ ಗೌಡರನ್ನ ಉಳಿಸಿಕೊಂಡರು. ಮುಂದೆ ಕೆಲವೇ ತಿಂಗಳಲ್ಲಿ ಗೌಡರು ಮಗನೊಂದಿಗೆ ಸೇರಿ, ಯಯಾತಿಯಂತಾಗಿ ಈ ನಾಡನ್ನ ಸುತ್ತತೊಡಗಿದರು; ಮಗನ ಸುತ್ತಲೂ ಇದ್ದ ಮಂತ್ರಿಗಳ ಖಾತೆಗಳ ಮೇಲೆ ಹಿಡಿತ ಸಾಧಿಸಿದರು. ಮುಂದೆ ಜೆಡಿಎಸ್‌ನ ಪ್ರಶ್ನಾತೀತ ನಾಯಕನಾಗಿ ಮಗನನ್ನು ಪ್ರತಿಷ್ಠಾಪಿಸಿದರು. ಆಗ ದಳದ ಪತನ ಆರಂಭವಾಗಿ ಸಿಂಧ್ಯಾ, ಪ್ರಕಾಶ್ ಇಂತವರೆಲ್ಲಾ ವಲಸಿಗರಾಗಿ ಕಾಂಗ್ರೆಸ್ ಸೇರಿಕೊಂಡರು. ಆದರೇನು ಗೌಡರು ಬಿಜೆಪಿ ಜನತೆಗಿನ ಸರಸವನ್ನ ಇನ್ನೂ ಬಿಟ್ಟಿಲ್ಲ. ಈಗ ಗೌಡರ ಪಾರ್ಟಿ ಕಚೆರಿಗೆ ಎರಡು ಬಾಗಿಲಂತಲ್ಲಾ. ಒಂದರ ಮುಖಾಂತರ ಬಿಜೆಪಿಗೆ ಹೋಗುವವರು ಹೋಗಬಹುದು, ಮತ್ತೊಂದರ ಮುಖಾಂತರ ಕಾಂಗ್ರೆಸ್ಸಿಗೆ ಹೋಗುವವರು ಹೋಗಬಹುದು; ಕುಮಾರಣ್ಣ ಸಿಂಗಪುರಕ್ಕೆ ಹೋಗಿರುವುದರಲ್ಲಿ ಈ ಸಂದೇಶವೂ ಅಡಗಿದೆಯಂತಲ್ಲಾ, ಥೂತ್ತೇರಿ.

*****

ಕುಮಾರಣ್ಣ ಸಿಂಗಪುರದಲ್ಲಿದ್ದರೂ ಅವರು ಬಿಜೆಪಿಗಳನ್ನೇ ಮೀರಿಸಿ ಬಿಜೆಪಿಯಾಗಿರುವುದು ಹಳೆ ಸುದ್ದಿಯಂತಲ್ಲಾ. ಬಿಜೆಪಿಯ ಬೃಹಸ್ಪತಿಗಳು ರೈತವಿರೋಧಿ ಕಾನೂನು ತಂದಾಗ ಗೌಡರು ಮತ್ತು ಕುಮಾರಣ್ಣ ಮೋದಿಗೆ ನೋವಾಗದಂತೆ ನಡೆದುಕೊಂಡಿದ್ದರು. ಮತಾಂತರ ನಿಷೇದಧ ಕಾಯ್ದೆ ಜಾರಿಯಾಗುವಾಗ ಉಸಿರೆತ್ತದೆ ಬೆಂಬಲಿಸಿದರು. ಹೆಚ್ಚು ಗೋಮಾಂಸ ರಫ್ತು ಮಾಡುವ ಬಿಜೆಪಿಗರ ವಿರುದ್ಧ ದನಿ ಎತ್ತಲಿಲ್ಲ. ಕಾರಿನವರೆಗೂ ಬಂದು ನನ್ನನ್ನ ಮೋದಿ ಬೀಳ್ಕೊಟ್ಟರು ಎಂದು ಗೌಡರು ಮೋದಿಯ ದೊಡ್ಡತನವನ್ನ ಕೊಂಡಾಡಿದರೆ, ಮೋದಿ ಮಾತನ್ನು ನಾನು ಕೇಳಿದ್ದರೆ ಮುಖ್ಯಮಂತ್ರಿಯಾಗಿ ತಾಜ್‌ವೆಸ್ಟ್‌ಎಂಡ್ ಹೋಟೆಲಿನಲ್ಲೇ ಅಧಿಕಾರ ಅನುಭವಿಸಿ ಅವಧಿ ಮುಗಿಸುತ್ತಿದ್ದೆ ಎನ್ನುವ ಕುಮಾರಣ್ಣ ಈಗ ಅಧಿಕೃತ ಬಿಜೆಪಿಯ ವಕ್ತಾರನಾಗಿರುವುದಲ್ಲದೆ, ವಿರೋಧ ಪಕ್ಷದ ಅನಧಿಕೃತ ನಾಯಕನೂ ಆಗಿದ್ದಾರಲ್ಲಾ. ಇದಕ್ಕೆ ಸಿಕ್ಕ ತಾಜಾ ಉದಾಹರಣೆಯೆಂದರೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರತಿಭಟಿಸುವ ಬಿಜೆಪಿ ಲೆಟರ್‌ಗೆ ಆ ಪಾರ್ಟಿಯ ಆಫೀಸಿಗೆ ಹೋಗಿ ಸಹಿಮಾಡಿದ್ದು ಮತ್ತು ಬೊಮ್ಮಾಯಿ ಆಡಬೇಕಾದ ಮಾತನ್ನ ತಾವೇ ಆಡುತ್ತಿರುವುದು. ಉದಾಹರಣೆಗೆ ಹಿಂದಿನ ಸರಕಾರ ಆರ್ಥಿಕ ಅಶಿಸ್ತಿನಿಂದ ನಡೆದುಕೊಂಡಿದೆ ಎಂದು ಸದರಿ ಸರ್ಕಾರ ಟೀಕಿಸಿದರೆ, ಕುಮಾರಸ್ವಾಮಿಯವರು ಶಿಸ್ತಿನಿಂದಲೇ ಆಡಳಿತ ನಡೆಸಿದ್ದಾರೆ ಎನ್ನುತ್ತಿದ್ದಾರಲ್ಲಾ. ಇದಲ್ಲವೆ ಬಿಜೆಪಿಯ ಕಾರ್ಯಕರ್ತನ ಮಾತು ಎಂದು ಬಿಜೆಪಿಗಳೇ ಹೇಳುತ್ತಿದ್ದಾರಲ್ಲಾ, ಥೂತ್ತೇರಿ.

*****

ಕುಮಾರಣ್ಣ ಬಿಜೆಪಿ ಬಾಗಿಲಲ್ಲಿ ನಿಂತು ಹೋಗಿ ಬರುವವರನ್ನ ನೋಡಿ “ಹಲೋ ಬ್ರದರ್” ಎಂಬುದನ್ನ ಕೇಳಿ ಶಿವಮೊಗ್ಗದ ಆಯನೂರ್ ಮಂಜುನಾಥ್ ಕಂಗಾಲಾಗಿದ್ದಾರಂತಲ್ಲಾ. ಏಕೆಂದರೆ ಶಿವಮೊಗ್ಗದ ಹರಕುಬಾಯಿ ಈಶ್ವರಪ್ಪನ ವಿರುದ್ದ ಸೆಡ್ಡು ಹೊಡೆದು ಫ್ಲೆಕ್ಸ್ ಹಾಕಿದ್ದರು. ಕಾಂಗ್ರೆಸ್ ಕಡೆ ಹೊರಟಾಗ ಕಾಂಗೈನ ಕೆಲವರು ತಡೆಯೊಡ್ಡಿದರು. ಆಗ ಆಯನೂರ್ ಅನಿವಾರ್ಯವಾಗಿ ದಳ ಸೇರಿ ಕ್ಯಾಂಡಿಡೇಟ್ ಆದರು. ಈಗತಾನೆ ಅವರ ಪಾರ್ಟಿಗೆ ಹೋಗಿ ಸೋತು ಸುಧಾರಿಸಿಕೊಳ್ಳುತ್ತಿರುವಾಗಲೇ ಕುಮಾರಣ್ಣ ಬಿಜೆಪಿಗೆ ಹೊರಟದ್ದು ನೋಡಿ ದಿಕ್ಕುತೋಚದಂತಾಗಿದ್ದಾರಂತಲ್ಲಾ. ಏಕೆಂದರೆ ಪುನಃ ಬಂದರೆ ಆಯನೂರರನ್ನು ಹಲ್ಲುಗಿಂಜಿ ಅಣುಕಿಸಲು ಈಶ್ವರಪ್ಪನ ಕಡೆಯವರು ಕಾಯುತ್ತಿದ್ದಾರಂತೆ. ಆಯನೂರ್ ಕತೆ ಹಿಂಗಾದರೆ ಇನ್ನ ನಾಡಿನ ತುಂಬ ಆಯನೂರ್‌ನಂತ ಆಸಾಮಿಗಳು ಎಷ್ಟಿದ್ದಾರೆಯೋ ಏನೋ, ಥೂತ್ತೇರಿ.

ಇದನ್ನೂ ಓದಿ: ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...