Homeಅಂಕಣಗಳುದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

ದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

- Advertisement -
- Advertisement -

ಜೆಡಿಎಸ್ ಎಂಬ ಪಿತೃ ಪಕ್ಷ ಮುಂದೆ ಏಕಾಂಗಿಯಾಗಿಯೇ ಹೋರಾಡಿ ಮಡಿಯಲಿದೆ ಎಂದು ದೇವೇಗೌಡರು ಖಚಿತವಾಗಿ ಹೇಳಿದ್ದಾರಲ್ಲಾ. ಆದರೂ ಜನಕ್ಕೆ ಡವುಟು ಬಂದಿರುವುದು ಇಲ್ಲೆ; ಏಕೆಂದರೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಈತರದ ಮನೋಲ್ಲಾಸದ ಕಡೆ ಮನಸ್ಸನ್ನು ಕಿಂಚಿತ್ತೂ ಹರಿಯಬಿಡದೆ ರಾಜಕಾರಣಕ್ಕೆ ಕೇಂದ್ರೀಕರಿಸಿರುವ ದೇವೇಗೌಡರು ದೇಶಕಂಡ ಅಪರೂಪದ ರಾಜಕಾರಣಿ. ಇದನ್ನಾಗಲೇ ಜೀವನ ಚರಿತ್ರೆಕಾರರು ದಾಖಲಿಸಿ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ್ದಾರಂತಲ್ಲಾ. ತಮ್ಮ ಅಂಗೈನಲ್ಲಿಯೇ ಇನ್ನೂರ ಇಪ್ಪತ್ತ ನಾಲ್ಕು ಕ್ಷೇತ್ರಗಳ ಗೆರೆಗಳನ್ನ ನೋಡುವ ಗೌಡರು, ಹಿಂದೊಮ್ಮೆ ಮುಖ್ಯಮಂತ್ರಿ ಆಸೆ ತೋರಿಸಿ ಮಗನನ್ನು ಕಮಲದವರು ಅಪಹರಿಸಿದರೆಂದೂ, ಅದರಲ್ಲಿ ನನ್ನ ಪಾತ್ರವಿಲ್ಲ ಅದಕ್ಕೆ ನಾನು ಮುಂದಿನ ಇಪ್ಪತ್ತು ತಿಂಗಳನ್ನ ಎಡೂರಪ್ಪನಿಗೆ ಬಿಡದೆ ನನ್ನ ಜಾತ್ಯತೀತ ಕಾಯ್ದುಕೊಂಡೆ ಎಂದೂ ಲೋಕಸಭೆಯಲ್ಲಿ ನಂಬಿಸುವ ದನಿಯಲ್ಲಿ ಹೇಳಿದ್ದರು. ಲೋಕ ನಂಬಿತು, ಆದರೆ ಈಗ ಜನಕ್ಕೆ ಡವುಟಾಗುತ್ತಿರುವುದು ಏಕೆಂದರೆ 1983ರಲ್ಲಿ ಇದೇ ಸಿದ್ದರಾಮಯ್ಯ ಬಿಜೆಪಿ ಬೆಂಬಲಿತ ಜನತಾ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೆ ಎಂದು ಗೌಡರು ನೆನಪಿಸಿದ್ದಾರಲ್ಲಾ, ಥೂತ್ತೇರಿ.

*****

1983ರಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದುದು ನಿಜ. ಏಕೆಂದರೆ ಪ್ರತಿಭಾವಂತನಂತೆ ಕಾಣುತ್ತಿದ್ದ ಅವರನ್ನು ಖಾಲಿ ಬಿಡಬಾರದೆಂದು ನಜೀರ್ ಸಾಬ್ ಮತ್ತು ರಾಚಯ್ಯ, ರಾಮಕೃಷ್ಣ ಹೆಗಡೆಯವರಿಗೆ ಶಿಫಾರಸ್ಸು ಮಾಡಿದ್ದರು. ಆ ಕಾರಣವಾಗಿ ಸಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಹೆಗಡೆ ಸರಕಾರಕ್ಕೆ ಬೆಂಬಲಕೊಟ್ಟಿದ್ದ ಬಿಜೆಪಿ ಇಂದಿನ ಬಿಜೆಪಿಯಾಗಿರಲಿಲ್ಲ. ಇವತ್ತಿನ ಬಿಜೆಪಿಗಳ ತರಹ ಅಂದಿನ ಕಾಂಗ್ರೆಸ್ಸಿಗರಿದ್ದರು. ಎ.ಕೆ ಸುಬ್ಬಯ್ಯನವರ ನೇತೃತ್ವದ ಬಿಜೆಪಿ ದೇವೇಗೌಡರ ವಿಶ್ವಾಸದಲ್ಲಿತ್ತು. ಅಂದಿನ ಬಿಜೆಪಿ ಬ್ರಾಹ್ಮಣರು ಹೆಗಡೆ ನೇತೃತ್ವಕ್ಕೆ ತಮ್ಮನ್ನ ಅರ್ಪಿಸಿಕೊಂಡಿದ್ದರಿಂದ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಇಳಿಯಿತು. ಹೆಗಡೆಯವರು ಸುಬ್ಬಯ್ಯರನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾದಾಗ ದೇವೇಗೌಡರು ಸುಬ್ಬಯ್ಯನವರ ಪರವಿದ್ದರು. ತಮ್ಮ ಸರಳ ಸಜ್ಜನಿಕೆ ಸಿದ್ಧಾಂತದಿಂದ ದೇವೇಗೌಡರು ಅಂದು ಅವರ ಪಕ್ಷದಲ್ಲಿದ್ದ ಪಟೇಲ್, ಬೊಮ್ಮಾಯಿ, ಸಿಂಧ್ಯಾ, ಸಿದ್ದು, ಪ್ರಕಾಶ್ ಮತ್ತು ಆಳ್ವ ರಘುಪತಿ, ರಾಮಯ್ಯ ಇಂತಹ ಘಟಾನುಘಟಿ ರಾಜಕಾರಣಿಗಳ ಲೀಡರಾಗಿದ್ದರು. ಈಗ ಅವರಲ್ಲಿ ಕೆಲವರು ಭೌತಿಕವಾಗಿ ಇಲ್ಲ. ಮತ್ತೆ ಉಳಿದವರು ದೇವೇಗೌಡರ ಪಾರ್ಟಿಯಲ್ಲಿ ಇಲ್ಲ. ’ಹಾಳೂರಿಗೆ ಉಳಿದವನೇ ಗೌಡ’ ಎಂಬ ಗಾದೆಯಂತೆ ನಾನಿನ್ನೂ ಸೆಕ್ಯುಲರ್ ಮ್ಯಾನ್ ಎಂಬುವುದನ್ನ ತೋರಿಸಿಕೊಳ್ಳಲು ಇಬ್ರಾಹಿಂ ಎಂಬ ಮಾತಿನ ಮಲ್ಲರನ್ನ ಜೊತೆಗಿಟ್ಟುಕೊಂಡು ಮಗನನ್ನು ಆಟ ಆಡಲು ಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

 

ಮಗನನ್ನು ಆಟ ಆಡಲು ಬಿಟ್ಟಿದ್ದಾರೆ ಎಂಬ ನಮ್ಮ ಆಪಾದನೆಗೆ ಸಾಕ್ಷಿಯೊದಗಿಸಬೇಕಲ್ಲವೇ! ಕುಮಾರಣ್ಣ ಬಿಜೆಪಿ ಸಖ್ಯ ಬೆಳೆಸಿಕೊಂಡು ಮುಖ್ಯಮಂತ್ರಿಯಾದದ್ದು ದಿಢೀರ್ ಬೆಳವಣಿಗೆಯೇನಲ್ಲ; ದಿನ ಬೆಳಗಾಯ್ತೆಂದರೆ ಮಗನನ್ನ ಮನೆಗೆ ಕರೆಸಿಕೊಂಡು ಮುಂದೆ ನಡೆಯುವ ಮಹಾ ನಾಟಕಕ್ಕೆ ತಾಲೀಮು ಕೊಡುತ್ತಿದ್ದರು ದೇವೇಗೌಡರು. ಹೇಳಿದಂತೆ ಕೇಳುವ ಜೆಡಿಎಸ್ ಅಧ್ಯಕ್ಷನಿದ್ದ ಆ ಕಾಲದಲ್ಲಿ ತೋರಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ಸ್ಪೀಕರ್ ಇದ್ದರು; ಹಾಗಾಗಿ ಗೌಡರು ಮನೆಯಲ್ಲೇ ಕುಳಿತು ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡುವುದಾದರೆ ನನ್ನ ಹೆಣದ ಮೇಲಾಗಲಿ ಎಂದರು. ದಳದವರೆಲ್ಲಾ ಹೆದರಿ ಗೌಡರನ್ನ ಉಳಿಸಿಕೊಂಡರು. ಮುಂದೆ ಕೆಲವೇ ತಿಂಗಳಲ್ಲಿ ಗೌಡರು ಮಗನೊಂದಿಗೆ ಸೇರಿ, ಯಯಾತಿಯಂತಾಗಿ ಈ ನಾಡನ್ನ ಸುತ್ತತೊಡಗಿದರು; ಮಗನ ಸುತ್ತಲೂ ಇದ್ದ ಮಂತ್ರಿಗಳ ಖಾತೆಗಳ ಮೇಲೆ ಹಿಡಿತ ಸಾಧಿಸಿದರು. ಮುಂದೆ ಜೆಡಿಎಸ್‌ನ ಪ್ರಶ್ನಾತೀತ ನಾಯಕನಾಗಿ ಮಗನನ್ನು ಪ್ರತಿಷ್ಠಾಪಿಸಿದರು. ಆಗ ದಳದ ಪತನ ಆರಂಭವಾಗಿ ಸಿಂಧ್ಯಾ, ಪ್ರಕಾಶ್ ಇಂತವರೆಲ್ಲಾ ವಲಸಿಗರಾಗಿ ಕಾಂಗ್ರೆಸ್ ಸೇರಿಕೊಂಡರು. ಆದರೇನು ಗೌಡರು ಬಿಜೆಪಿ ಜನತೆಗಿನ ಸರಸವನ್ನ ಇನ್ನೂ ಬಿಟ್ಟಿಲ್ಲ. ಈಗ ಗೌಡರ ಪಾರ್ಟಿ ಕಚೆರಿಗೆ ಎರಡು ಬಾಗಿಲಂತಲ್ಲಾ. ಒಂದರ ಮುಖಾಂತರ ಬಿಜೆಪಿಗೆ ಹೋಗುವವರು ಹೋಗಬಹುದು, ಮತ್ತೊಂದರ ಮುಖಾಂತರ ಕಾಂಗ್ರೆಸ್ಸಿಗೆ ಹೋಗುವವರು ಹೋಗಬಹುದು; ಕುಮಾರಣ್ಣ ಸಿಂಗಪುರಕ್ಕೆ ಹೋಗಿರುವುದರಲ್ಲಿ ಈ ಸಂದೇಶವೂ ಅಡಗಿದೆಯಂತಲ್ಲಾ, ಥೂತ್ತೇರಿ.

*****

ಕುಮಾರಣ್ಣ ಸಿಂಗಪುರದಲ್ಲಿದ್ದರೂ ಅವರು ಬಿಜೆಪಿಗಳನ್ನೇ ಮೀರಿಸಿ ಬಿಜೆಪಿಯಾಗಿರುವುದು ಹಳೆ ಸುದ್ದಿಯಂತಲ್ಲಾ. ಬಿಜೆಪಿಯ ಬೃಹಸ್ಪತಿಗಳು ರೈತವಿರೋಧಿ ಕಾನೂನು ತಂದಾಗ ಗೌಡರು ಮತ್ತು ಕುಮಾರಣ್ಣ ಮೋದಿಗೆ ನೋವಾಗದಂತೆ ನಡೆದುಕೊಂಡಿದ್ದರು. ಮತಾಂತರ ನಿಷೇದಧ ಕಾಯ್ದೆ ಜಾರಿಯಾಗುವಾಗ ಉಸಿರೆತ್ತದೆ ಬೆಂಬಲಿಸಿದರು. ಹೆಚ್ಚು ಗೋಮಾಂಸ ರಫ್ತು ಮಾಡುವ ಬಿಜೆಪಿಗರ ವಿರುದ್ಧ ದನಿ ಎತ್ತಲಿಲ್ಲ. ಕಾರಿನವರೆಗೂ ಬಂದು ನನ್ನನ್ನ ಮೋದಿ ಬೀಳ್ಕೊಟ್ಟರು ಎಂದು ಗೌಡರು ಮೋದಿಯ ದೊಡ್ಡತನವನ್ನ ಕೊಂಡಾಡಿದರೆ, ಮೋದಿ ಮಾತನ್ನು ನಾನು ಕೇಳಿದ್ದರೆ ಮುಖ್ಯಮಂತ್ರಿಯಾಗಿ ತಾಜ್‌ವೆಸ್ಟ್‌ಎಂಡ್ ಹೋಟೆಲಿನಲ್ಲೇ ಅಧಿಕಾರ ಅನುಭವಿಸಿ ಅವಧಿ ಮುಗಿಸುತ್ತಿದ್ದೆ ಎನ್ನುವ ಕುಮಾರಣ್ಣ ಈಗ ಅಧಿಕೃತ ಬಿಜೆಪಿಯ ವಕ್ತಾರನಾಗಿರುವುದಲ್ಲದೆ, ವಿರೋಧ ಪಕ್ಷದ ಅನಧಿಕೃತ ನಾಯಕನೂ ಆಗಿದ್ದಾರಲ್ಲಾ. ಇದಕ್ಕೆ ಸಿಕ್ಕ ತಾಜಾ ಉದಾಹರಣೆಯೆಂದರೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರತಿಭಟಿಸುವ ಬಿಜೆಪಿ ಲೆಟರ್‌ಗೆ ಆ ಪಾರ್ಟಿಯ ಆಫೀಸಿಗೆ ಹೋಗಿ ಸಹಿಮಾಡಿದ್ದು ಮತ್ತು ಬೊಮ್ಮಾಯಿ ಆಡಬೇಕಾದ ಮಾತನ್ನ ತಾವೇ ಆಡುತ್ತಿರುವುದು. ಉದಾಹರಣೆಗೆ ಹಿಂದಿನ ಸರಕಾರ ಆರ್ಥಿಕ ಅಶಿಸ್ತಿನಿಂದ ನಡೆದುಕೊಂಡಿದೆ ಎಂದು ಸದರಿ ಸರ್ಕಾರ ಟೀಕಿಸಿದರೆ, ಕುಮಾರಸ್ವಾಮಿಯವರು ಶಿಸ್ತಿನಿಂದಲೇ ಆಡಳಿತ ನಡೆಸಿದ್ದಾರೆ ಎನ್ನುತ್ತಿದ್ದಾರಲ್ಲಾ. ಇದಲ್ಲವೆ ಬಿಜೆಪಿಯ ಕಾರ್ಯಕರ್ತನ ಮಾತು ಎಂದು ಬಿಜೆಪಿಗಳೇ ಹೇಳುತ್ತಿದ್ದಾರಲ್ಲಾ, ಥೂತ್ತೇರಿ.

*****

ಕುಮಾರಣ್ಣ ಬಿಜೆಪಿ ಬಾಗಿಲಲ್ಲಿ ನಿಂತು ಹೋಗಿ ಬರುವವರನ್ನ ನೋಡಿ “ಹಲೋ ಬ್ರದರ್” ಎಂಬುದನ್ನ ಕೇಳಿ ಶಿವಮೊಗ್ಗದ ಆಯನೂರ್ ಮಂಜುನಾಥ್ ಕಂಗಾಲಾಗಿದ್ದಾರಂತಲ್ಲಾ. ಏಕೆಂದರೆ ಶಿವಮೊಗ್ಗದ ಹರಕುಬಾಯಿ ಈಶ್ವರಪ್ಪನ ವಿರುದ್ದ ಸೆಡ್ಡು ಹೊಡೆದು ಫ್ಲೆಕ್ಸ್ ಹಾಕಿದ್ದರು. ಕಾಂಗ್ರೆಸ್ ಕಡೆ ಹೊರಟಾಗ ಕಾಂಗೈನ ಕೆಲವರು ತಡೆಯೊಡ್ಡಿದರು. ಆಗ ಆಯನೂರ್ ಅನಿವಾರ್ಯವಾಗಿ ದಳ ಸೇರಿ ಕ್ಯಾಂಡಿಡೇಟ್ ಆದರು. ಈಗತಾನೆ ಅವರ ಪಾರ್ಟಿಗೆ ಹೋಗಿ ಸೋತು ಸುಧಾರಿಸಿಕೊಳ್ಳುತ್ತಿರುವಾಗಲೇ ಕುಮಾರಣ್ಣ ಬಿಜೆಪಿಗೆ ಹೊರಟದ್ದು ನೋಡಿ ದಿಕ್ಕುತೋಚದಂತಾಗಿದ್ದಾರಂತಲ್ಲಾ. ಏಕೆಂದರೆ ಪುನಃ ಬಂದರೆ ಆಯನೂರರನ್ನು ಹಲ್ಲುಗಿಂಜಿ ಅಣುಕಿಸಲು ಈಶ್ವರಪ್ಪನ ಕಡೆಯವರು ಕಾಯುತ್ತಿದ್ದಾರಂತೆ. ಆಯನೂರ್ ಕತೆ ಹಿಂಗಾದರೆ ಇನ್ನ ನಾಡಿನ ತುಂಬ ಆಯನೂರ್‌ನಂತ ಆಸಾಮಿಗಳು ಎಷ್ಟಿದ್ದಾರೆಯೋ ಏನೋ, ಥೂತ್ತೇರಿ.

ಇದನ್ನೂ ಓದಿ: ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...