Homeಅಂಕಣಗಳುಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

- Advertisement -
- Advertisement -

ಸಾಮಾನ್ಯ ಮನುಷ್ಯನೂ ಕೂಡ ಅಸಹ್ಯ ಪಟ್ಟುಕೊಳ್ಳುವುದು ಯಾವುದಕ್ಕೆಂದರೆ ಅನವಶ್ಯಕವಾದ ಭಟ್ಟಂಗಿತನಕ್ಕಂತಲ್ಲಾ. ಅದು ಯಂಗೋ ಏನೋ ಭಟ್ಟಂಗಿಗಳು ಎಡೂರಪ್ಪನನ್ನು ರಾಜಾಹುಲಿ ಎಂದು ಕರೆದುಬಿಟ್ಟವು. ಸೂಕ್ಷ್ಮಜ್ಞರು ಆಲೋಚಿಸಿದಾಗ ಎಡೂರಪ್ಪ ಬರಿ ಹುಲಿಯಷ್ಟೆ; ಏಕೆಂದರೆ ಇಪ್ಪತ್ತಮೂರು ದಿನ ಕಂಬಿ ಹಿಂದೆ ಇದ್ದ ಈ ಹುಲಿ, ಬಿಡುಗಡೆಯ ನಂತರ ಕಾಡಿಗೇ ಕಾಂಪೌಂಡ್ ಹಾಕಿ ದಕ್ಕಿಸಿಕೊಂಡಿತು. ಜೊತೆಗೆ ಪತ್ರಕರ್ತರಿಗೂ ಮನೆ, ಸೈಟು ಮಾಡಿಕೊಟ್ಟಾಗ ಅವರೆಲ್ಲಾ ರಾಜಾಹುಲಿಯೆಂಬ ಬಿರುದು ಬರೆದುಕೊಟ್ಟರು. ಈಗ ರಾಜಾಹುಲಿಯ ಹಲ್ಲು ಮತ್ತು ಉಗುರುಗಳನ್ನ ಬಿಜೆಪಿಗಳು ಕಿತ್ತು ಕೂರಿಸಿವೆ. ಆದರೂ ನಿರಾಶೆಗೊಳ್ಳದೆ ಭಟ್ಟಂಗಿ ಮಾಧ್ಯಮದವರು ಯಡ್ಡಿ ಮಗನನ್ನಾಗಲೇ ಮರಿ ರಾಜಾಹುಲಿ ಎಂದು ನಾಮಕರಣ ಮಾಡಿ, ಸದನವನ್ನು ನಡುಗಿಸಿದ ಮರಿ ರಾಜಾಹುಲಿ ಎಂದು ನರಿಗಳಂತೆ ಊಳಿಟ್ಟಿವೆ. ಈ ಭಟ್ಟಂಗಿಗಳ ಬತ್ತಳಿಕೆಯಲ್ಲಿ ಇನ್ನು ಎಂತೆಂತಹ ಪದಪುಂಜಗಳಿವೆಯೆಂದರೆ, ಶಿಸ್ತಿನ ಪಕ್ಷ ಬಿಜೆಪಿ ಎಂದೇ ಯಾವಾಗಲೂ ನಮೂದಿಸುವ ಇವಕ್ಕೆ ಬಿಜೆಪಿ ಶುದ್ಧ ಅಶಿಸ್ತಿನ ಪಕ್ಷ ಎಂಬುದು ತಿಳಿದೇ ಇಲ್ಲವಂತಲ್ಲ. ಅಲ್ಲದೆ ಬಿಜೆಪಿಗಳನ್ನ ಸಂಬೋಧಿಸಬೇಕಾದರೆ ಕೇಸರಿ ಕಲಿಗಳು, ಕೇಸರಿಪಡೆ ಎನ್ನುತ್ತಿದ್ದ ಇವಕ್ಕೆ ಆ ಕಲಿಗಳು ಕಿಸುಗೊಂಡು ಬಿದ್ದು ಕ್ಷೇತ್ರ ಮರೆತು ಅಲೆಯುತ್ತಿರುವುದೇ ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ವಿಕೃತಭಟ್ಟನ ವಿಕೃತ ಪುಸ್ತಕಗಳನ್ನು ಬಿಡುಗಡೆ ಮಾಡಲು ಹೋಗುವ ಸಿದ್ದರಾಮಯ್ಯನವರ ಬೌದ್ಧಿಕ ಪತನ ಆರಂಭವಾಗಲಿದೆಯಂತಲ್ಲಾ. ಏಕೆಂದರೆ ವಿಕೃತಭಟ್ಟನ ಇತಿಹಾಸವೇ ಹಾಗಿದೆ. ಈತ ಪತ್ರಿಕೆಯಲ್ಲಿ ಸಿದ್ದರಾಮಯ್ಯನ ಉಚ್ಛಾರಣೆ ಆಡಿಕೊಂಡ ದಾಖಲೆಯಿದೆ. ಸಿದ್ದುಗೆ ಶ,ಷ,ಸ,ಗಳ ವ್ಯತ್ಯಾಸ ಗೊತ್ತಿಲ್ಲವೆಂದು ಆಡಿಕೊಂಡ ಉದಾಹರಣೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣಿನ ದ್ವೇಷಿಯಾದ ಈತ ಗೌರಿ ಸಂಘಿಗಳ ಗುಂಡೇಟಿನಿಂದ ಹುತಾತ್ಮಳಾದಾಗ, “ಆಕೆ ಗುಂಡಿಗೆ ಬಲಿಯಾಗದೆ ಗುಂಡುಹಾಕಿ ಬಲಿಯಾಗಿದ್ದರೆ ಸಿಂಗಲ್ ಕಾಲಮ್ಮಿನ ಸುದ್ದಿಯಾಗುತ್ತಿದ್ದಳು” ಎಂದು ಬರೆದ. ಗೌರಿ ಸಿದ್ದು ಅಭಿಮಾನಿಯಾಗಿದ್ದರೆ ವಿಕೃತಭಟ್ಟ ಸಿದ್ದು ವಿರೋಧಿಯಾಗಿದ್ದ. ಗೌರಿ ಹುತಾತ್ಮಳಾದಾಗ ಸರಕಾರಿ ಗೌರವದೊಂದಿಗೆ ಸಂಸ್ಕಾರ ನೆರವೇರಿಸಿದ ಸಿದ್ದು ಆಕೆಗೆ ಗೌರವ ಕೊಡಲೋಸ್ಕರವಾಗಿಯಾದರೂ ವಿಕೃತಭಟ್ಟನ ಪುಸ್ತಕ ಬಿಡುಗಡೆಗೆ ಬಂದಿದ್ದ ಕರೆಯನ್ನು ನಿರಾಕರಿಸಬೇಕಿತ್ತು. ಸಿದ್ದುಗೆ ವಿರೋಧಿಗಳನ್ನ ಒಲಿಸಿಕೊಳ್ಳುವ ತಂತ್ರವಿದಾಗಿರಬಹುದು ಆದರೆ ಭಟ್ಟನ ವಿಷ ಹುಟ್ಟಿನಿಂದಲೇ ಬಂದಿದ್ದು. ಈತ ಹೆಣ್ಣಿನ ಬಗ್ಗೆ ಎಷ್ಟು ವಿಕೃತಿ ಮೆರೆದಿದ್ದಾನೆಂಬುದಕ್ಕೆ ಇನ್ನೂ ನೂರಾರು ಉದಾಹರಣೆಗಳಿವೆ. ಮಮತಾ ಬ್ಯಾನರ್ಜಿ ಮಂಚ್‌ಗೆ (ವೇದಿಕೆ) ಬರುವಂತೆ ಕರೆಕೊಟ್ಟಾಗ ಭಟ್ಟ ಮಂಚ್‌ಅನ್ನು ಮಂಚ ಎಂದು ತಿರುಚಿ ಬರೆದು ಮೋದಿ ವಿರೋಧಿಗಳಿಗೆ ಮಂಚಕ್ಕೆ ಬರುವಂತೆ ಮಮತಾ ಕರೆ ಎಂದು ವಿಕೃತ ಮೆರೆದ. ಆ ಮಟ್ಟಿನ ವಿಕೃತ ಭಟ್ಟನ ಮನಸ್ಸನ್ನ ಮುಂದೆ ಸಿದ್ದು ಬದಲಿಸಿದರೆ, ಆತನ ಪುಸ್ತಕ ಬಿಡುಗಡೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಅದು ಸಾಧ್ಯವೇ, ಥೂತ್ತೇರಿ.

ಇದನ್ನೂ ಓದಿ: ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಒಂದು ಕಡೆ ಗೋಹತ್ಯೆ ನಿಷೇಧದ ಕಾಯಿದೆ ತಂದು ಗೋವುಗಳನ್ನೆಲ್ಲಾ ಗೋಶಾಲೆಗೆ ಹೊಡೆದು, ಅವು ನೀರು ಮೇವಿಲ್ಲದೆ ಸಾಯುತ್ತಿದ್ದರೂ, ಗೋರಕ್ಷಣೆಯ ಅನುದಾನ ಪಡೆಯುತ್ತ ಸುಳ್ಳು ಲೆಕ್ಕ ತೋರಿಸುತ್ತ ಗೋವಿನ ಹೆಸರಲ್ಲಿ ಕೊಳ್ಳೆಹೊಡೆಯುತ್ತ ಕುಳಿತಿರುವ ಬಿಜೆಪಿಗಳು ಗೋವುಗಳೆಲ್ಲಾ ಗೋಶಾಲೆ ಸೇರಿದ ಮೇಲೆ ಗೋಮಾಳವೇಕೆ ಎಂದು ಆರೆಸ್ಸೆಸ್ ಸಂಸ್ಥೆಗೆ ಖಾತೆಮಾಡಿ ಕೊಟ್ಟಿದ್ದಾರಂತಲ್ಲಾ. ಇದನ್ನ ಪತ್ತೆ ಹಚ್ಚಿದ ಸರಕಾರ ತಡೆಯೊಡ್ಡಿದರೆ ಚಡ್ಡಿಗಳ ಬದಲು ಪೈಜಾಮಿನ ಬೊಮ್ಮಾಯಿಂದ ಖಂಡನಾ ಹೇಳಿಕೆ ಕೊಡಿಸಿದ್ದಾರಲ್ಲಾ. ಒಂದೇ ಅವಧಿಗೆ ರಾಜ್ಯದ ಗೋಮಾಳಗಳನ್ನೆಲ್ಲಾ ಕಬಳಿಸಿ ಹೊರಟ ಬಿಜೆಪಿಗಳು ಕಬಳಿಸಿದ ಜಾಗದಲ್ಲಿ ಏನೇನು ಮಾಡಬೇಕೆಂದು ನೀಲಿನಕ್ಷೆಯ ತಯಾರಿ ನಡೆಸುತ್ತಿದ್ದಾಗ, ಕರ್ನಾಟಕದ ಕತೆಯೇ ಇಷ್ಟಿದ್ದರೆ ಇನ್ನು ದೇಶದ ನಾನಾ ಕಡೆಗಳಲ್ಲಿ ಸರ್ಕಾರ ನಡೆಸುತ್ತಿರುವ ಚೆಡ್ಡಿಗಳು ಇನ್ನೆಷ್ಟು ಭೂಮಿ ಲಪಟಾಯಿಸಿರಬಹುದೆಂಬುದು ಊಹೆಗೂ ಸಿಲುಕುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ಸದ್ಯಕ್ಕೆ ಸದನದ ವಿರೋಧಪಕ್ಷವನ್ನ ಆವರಿಸಿರುವ ಕುಮಾರಣ್ಣನವರು ಸದರಿ ಸರಕಾರದ ಎಲ್ಲ ನಡೆಗಳನ್ನು ಟೀಕಿಸುವ ಭರದಲ್ಲಿ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ವರ್ಗಾವಣೆ ಪಟ್ಟಿಯನ್ನ ಮರೆತು, ಈ ಸರಕಾರದ ವರ್ಗಾವಣೆ ದರಪಟ್ಟಿಯನ್ನ ಪತ್ರಿಕೆಗೆ ಬಿಡುಗಡೆ ಮಾಡಿದ್ದಲ್ಲದೆ ಸದನದಲ್ಲೂ ಬಿಡುಗಡೆಗೊಳಿಸಿದರಂತಲ್ಲಾ. ಆದರೇನು ಹಿಂದೆ ಕುಮಾರಣ್ಣನ ಸರಕಾರ ವರ್ಗಾವಣೆಗೆ ದರ ನಿಗದಿ ಮಾಡಿ ವಸೂಲಿ ಮಾಡಿದ್ದ ಪತ್ರಿಕಾ ವರದಿಯನ್ನೇ ಚಲುವರಾಯಸ್ವಾಮಿ ಬಿಡುಗಡೆ ಮಾಡಲಾಗಿ ಸಿಟ್ಟಾದ ಕುಮಾರಣ್ಣ ಜೆಡಿಎಸ್‌ಅನ್ನೆ ಬಿಜೆಪಿಯಲ್ಲಿ ಲೀನಗೊಳಿಸಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಲು ಹೊರಟಿದ್ದಾರಂತಲ್ಲಾ. ಹಾಗೇನಾದರು ಆದರೆ ದೇವೇಗೌಡರು ಮಕ್ಕಳಿಗಾಗಿ ಕಟ್ಟಿಬೆಳೆಸಿದ ಪಾರ್ಟಿಯ ಕತೆಯೇನು ಎಂದು ನಿರಾಶ್ರಿತರಂತಾಗಿರುವ ಜೆಡಿಎಸ್‌ನವರು ಆತಂಕಗೊಂಡಿದ್ದಾರಂತಲ್ಲಾ. ಕುಮಾರಣ್ಣ ಪಂಚರತ್ನ ಮುಂದಿಟ್ಟುಕೊಂಡು ಕರ್ನಾಟಕ ಸುತ್ತುವಾಗ ನನಗೆ ನೀವು ನೂರ ಇಪ್ಪತ್ತುಮೂರು ಸೀಟು ಗೆಲ್ಲಿಸಿಕೊಡದಿದ್ದರೆ ಪಾರ್ಟಿಯನ್ನೆ ವಿಸರ್ಜನೆ ಮಾಡುತ್ತೇನೆ ಎಂದು ಶಪಥಗೈದಿದ್ದರು ಎಂದು ಕಾಂಗ್ರೆಸ್‌ನವರು ಪದೇಪದೇ ಆರೋಪಿಸುತ್ತಿದ್ದಾರೆ. ಈಗ ಕುಮಾರಣ್ಣ ಬಿಜೆಪಿ ಸೇರಿದರೆ ಪಾರ್ಟಿ ತಂತಾನೆ ವಿಸರ್ಜನೆಯಾಗುತ್ತದಂತಲ್ಲಾ. ಹಾಗೇನಾದರು ಆದರೆ ರೇವಣ್ಣ, ಜಿ.ಟಿ.ದೇವೇಗೌಡ ಇನ್ನು ಮುಂತಾದವರು ಸಿದ್ದು ಸನಿಹಕ್ಕೆ ಬಂದರೆ ಆಶ್ಚರ್ಯವಿಲ್ಲ. 123 ಸೀಟು ಬರದಿದ್ದರೆ ಪಾರ್ಟಿಯನ್ನೇ ವಿಸರ್ಜಿಸುವೆನೆಂದು ಕುಮಾರಸ್ವಾಮಿ ಹೇಳಿದ್ದರು ಎಂದು ಸದನದಲ್ಲಿಯೇ ಸಿದ್ದು ಹೇಳಿದ ಮಾತಿಗೆ ಕುಮಾರಣ್ಣನ ಕಡೆ ಇರುವ ನಾಗಮಂಗಲ ಕಡೆಯ ಕಾರ್ಯಕರ್ತರು, “ಹೌದು ಕುಮಾರಣ್ಣ ಅಂಗೇಳಿದ್ರು. ಆದ್ರೆ ಅಕಸ್ಮಾತ್ 19 ಸೀಟು ಬಂದ್ರೆ ವಿಸರ್ಜನೆ ಮಾಡ್ತಿನಿ ಅಂತ ಎಲ್ಲೇಳಿದ್ರು ಎಂದವಂತಲ್ಲಾ. ಇದಲ್ಲವೆ ಬಿಜೆಪಿ ಸೇರುವ ತಯಾರಿ, ಥೂತ್ತೇರಿ.

*****

ಬಿಜೆಪಿ ಜೊತೆ ಸೇರಿ ರಾಜಕೀಯ ಕೂಡಾವಳಿ ಜೀವನ ನಡೆಸಲು ಹೊರಟಿರುವ ಕುಮಾರಣ್ಣನ ಬಗ್ಗೆ ಸಹಜವಾಗಿ ಕರ್ನಾಟಕದ ಕೆಲ ಮನಸ್ಸುಗಳು ಮಮ್ಮಲ ಮರುಗಿವೆ. ಏಕೆಂದರೆ ಇದೇ ಕುಮಾರಣ್ಣ ಪ್ರಹ್ಲಾದ ಜೋಶಿ ಟೀಮನ್ನು ಪೇಶ್ವೆ ಸಂತತಿಗೆ ಹೋಲಿಸಿದ್ದರು ಮತ್ತು ಆರೆಸ್ಸೆಸ್ಸಿಗರ ಮೇಲೆ ದಾಳಿ ಮಾಡಿದ್ದರು. ಆದರೆ ಈಗ ಈ ಮಾತುಗಳು ಅರ್ಥ ಕಳೆದುಕೊಳ್ಳತೊಡಗಿವೆ. ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಬಿಜೆಪಿಗಳಿಗೆ ಕುಮಾರಣ್ಣನೇ ಆದರ್ಶ, ಏಕೆಂದರೆ ಎಮ್ಮೆ ನಡಿಗೆಯಲ್ಲಿ ಹೋಗುತ್ತಿದ್ದ ಧರ್ಮಸಿಂಗ್ ಸರಕಾರ ಕೆಡವಿ ಮುಖ್ಯಮಂತ್ರಿಯಾದ ಕುಮಾರಣ್ಣನಿಗೆ ಕೆಲ ಸತ್ಯಸಂಗತಿಗಳು ಗೊತ್ತಿವೆ. ಅದೇನೆಂದರೆ ತಾನು ಯಾವತ್ತೂ ಜನಾಭಿಪ್ರಾಯದ ಮುಖ್ಯಮಂತ್ರಿಯಾಗಲೂ ಸಾಧ್ಯವಿಲ್ಲ ಎಂದು; ಒಂದೋ ಕಾಂಗೈ ತೆಕ್ಕೆಗೆ ಬೀಳಬೇಕು, ಇಲ್ಲ ಬಿಜೆಪಿ ಆಲಿಂಗನಕ್ಕೆ ಅರ್ಪಿಸಿಕೊಳ್ಳಬೇಕು. ಆದರೆ ಬಿಜೆಪಿಯದ್ದು ದೃತರಾಷ್ಟ್ರಲಿಂಗನ. ಅವರು ಕುಮಾರಣ್ಣನನ್ನ ಆಲಂಗಿಸಿ ಜೆಡಿಎಸ್ ಸಮಾಧಿಯ ಮೇಲೆ ಪಾಪಾಸು ಕಳ್ಳಿಯಂತೆ ಬೆಳೆಯಬಲ್ಲರಂತಲ್ಲಾ. ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆಯ ಉದಾಹರಣೆ ಕಣ್ಣಮುಂದೆಯಿದ್ದರೂ, ಕುಮಾರಸ್ವಾಮಿಯವರಿಗೆ ಅದು ಕಾಣುತ್ತಿಲ್ಲವಂತಲ್ಲಾ, ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...