Homeಅಂಕಣಗಳುಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

- Advertisement -
- Advertisement -

ಕಡೆಗೂ ಭಾರತ ಕಂಡ ಅಪರೂಪದ ಪ್ರಧಾನಿ ಲೋಕಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ಸಿಗರನ್ನು ಎರಡು ಗಂಟೆ ಟೀಕಿಸಿದರು, ನಂತರ ಐದು ನಿಮಿಷ ಮಣಿಪುರದ ಪ್ರಸ್ತಾಪ ಮಾಡಿದರು. ಆದರೇನು ಪ್ರಧಾನಿಯ ಮುಖ ಸಹಜವಾಗಿರಲಿಲ್ಲ. ತಪ್ಪುಗಳನ್ನು ಮುಚ್ಚಿಕೊಳ್ಳುವ ಸುಳ್ಳುಹೇಳುವ ಮುಖದಂತಿತ್ತು. ಮೋದಿ ಈ ದೇಶದ ಜವಾಬ್ದಾರಿ ಹೊತ್ತ ಪ್ರಧಾನಿಯಾಗಿದ್ದರೆ ಮಣಿಪುರದಲ್ಲಿ ಗಲಭೆ ಹೊತ್ತಿಕೊಂಡ ಕೂಡಲೇ ಅಲ್ಲಿಗೆ ಹೋಗುತ್ತಿದ್ದರೆ, ಆ ಕಾರಣಕ್ಕಾದರೂ ನೂರಾರು ಕೊಲೆಗಳು ನಡೆಯುತ್ತಿರಲಿಲ್ಲ; ಸಾವಿರಾರು ಮನೆ ಧ್ವಂಸವಾಗುತ್ತಿರಲಿಲ್ಲ; ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ನಡೆಯುತ್ತಿರಲಿಲ್ಲ ಮತ್ತು ಅವರ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ. ಮೋದಿ ಸಂಸತ್‌ಗೆ ಬರದಂತೆ ತಪ್ಪಿಸಿಕೊಂಡು ತಿರುಗುವ ಪ್ರಮೇಯವೇ ಜರುಗುತ್ತಿರಲಿಲ್ಲ. ಗುಜರಾತಿನಲ್ಲಿ ಮೋದಿ ಸರಕಾರವಿದ್ದಾಗ ಮುಸ್ಲಿಮರ ಮಾರಣಹೋಮಕ್ಕೆ ಕಾರಣರಾದ ಕೋಮುಗಲಭೆಯ ಬಗ್ಗೆ ಇಂದಿಗೂ ಅವರು ಕ್ಷಮೆ ಕೋರಿಲ್ಲ. ಇನ್ನು ಮಣಿಪುರದ ಘಟನೆ ಕೇವಲ ಮಣಿಪುರಕ್ಕೆ ಮಾತ್ರ ಸೀಮಿತ ಎಂದು ಭಾರತದ ಒಕ್ಕೂಟದ ರಾಜ್ಯಗಳು ಭಾವಿಸುವಂತಿಲ್ಲ. ಈ ನಡುವೆ ಮಣಿಪುರದ ಘಟನೆಗಳನ್ನು ಮರೆಮಾಚಿ ಕುಳಿತಿರುವ ಮಾಧ್ಯಮದವರು ರಾಹುಲ್ ಗಾಂಧಿಯವರ ’ಫ್ಲೈಯಿಂಗ್ ಕಿಸ್’ ಬಗ್ಗೆ ತಲೆಕೆಡಿಸಿಕೊಂಡು ದಿನಗಟ್ಟಲೆ ಕೊರೆಯುತ್ತಿರುವುದು ನಗು ಕಳೆದುಕೊಂಡವರಿಗೆ ನಗು ತರಿಸಿದೆಯಲ್ಲಾ, ಥೂತ್ತೇರಿ.

******

ಪತ್ರಕರ್ತರಿಗೆ ಪ್ರಿಯರಾಗಿರುವ ಕುಮಾರಣ್ಣನನ್ನು ಮಾತನಾಡಿಸಬೇಕೆನಿಸಿತಲ್ಲಾ. ಇಂತಹ ಅಪೇಕ್ಷೆ ಮೂಡಲು, ಕುಮಾರಣ್ಣ ಸಿಂಗಾಪುರದ ಮುಖಾಂತರ ಯೂರೋಪ್ ಟೂರು ಮಾಡುತ್ತಿದ್ದಾರೆ ಎಂಬ ಸುದ್ದಿಯೇ ಕಾರಣವಾಗಿ ಪೋನು ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು..’

“ಯಾರು? ಹಲೊ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿ ಬ್ರದರ್ ಸಿಕ್ಕಲೇಯಿಲ್ಲ ನೀವು.”

“ಬಂದಿದ್ದೆ ಸಾರ್, ಈಗತಾನೇ ಸಿಂಗಾಪುರಕ್ಕೋದ್ರು ಅಂದ್ರು ಸಾರ್.”

“ಕರೆದಿದ್ರೆ ನೀವು ಬರತಿದ್ರ?”

“ನಾನಾಗ್ಲೆ ನೋಡಿದ್ದಿನಿ ಸಾರ್.”

“ಯಾವಾಗ ನೋಡಿದ್ರಿ?”

“ನಾನು ಸಿಂಗಾಪುರ ನೋಡಿದಾಗ ನೀವಿನ್ನೂ ಸ್ಟೂಡೆಂಟು ಸಾರ್, ಆಗ ಸಿಂಗಾಪುರ ತೋರಿಸೊ ಏಜೆಂಟ್‌ಗಳು ಹುಟ್ಟಿಗಂಡಿದ್ರು. ನಮ್ಮನ್ನ ಕರಕಂಡು ಹೋಗಿ, ನಮ್ಮ ಹೆಸರಲ್ಲಿ ಟಿ.ವಿ, ಗಡಿಯಾರ, ಫೋನು, ಟೇಪರಿಕಾರ್ಡು ಯಲ್ಲಾನು ತಗಂಡು ರಸ್ತೆ ಪಾರ್ಕು ಮಾಲ್ ತೋರಿಸಿ ಕರಕಂಡು ಬರೋರು. ಅಂಗೆ ನಾನು ಹೋಗಿದ್ದೆ, ನಾನು ಪತ್ರಕರ್ತ ಅಂತ ಒಂದು ಪೆನ್ನು ತಕ್ಕೊಟ್ರು ಸಾರ್, ಅಂಗಾಗಿ ನಾನು ಸಿಂಗಾಪುರ ನೋಡಿದ್ದಿನಿ.”

“ಈಗ ನೋಡಬೇಕು ನೀವು. ಆ ದೇಶಗಳ ನೋಡಿದ್ರೆ ತಲೆ ತಗ್ಗಸಂಗಾಯ್ತದೆ ಕಂಡ್ರಿ.”

“ನೀವ್ಯಾಕೆ ತಲೆ ತಗ್ಗಸಬೇಕು ಸಾರ್.”

“ನಾನು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿಂಗಾಪುರದ ತರ ಒಂದು ರೋಡು ಒಂದು ಪಾರ್ಕು ಮಾಡಕ್ಕಾಗಲಿಲ್ಲವಲ್ಲ ಅಂತ ತಲೆ ತಗ್ಗಸತಕ್ಕಂತ ಅಭಿಪ್ರಾಯ ಮೂಡುತ್ತೆ ಕಂಡ್ರಿ.”

“ನಿಜ ಸಾರ್, ನಿಮ್ಮ ಆತ್ಮವಿಮರ್ಶೆ ಮೆಚ್ಚತಕ್ಕೆಂತದ್ದು. ಎಷ್ಟು ಜನ ರಾಜಕಾರಣಿಗಳಿಗೆ ಇಂತ ಜ್ಞಾನೋದಯ ಆಗತ್ತೆ ಸಾರ್? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನೀವು ರಾಮನಗರದ ಊರೊಳಗಡೆ ಹೋದ್ರೆ ತಲೆ ತಗ್ಗಿಸಲೇಬೇಕು ಸಾರ್. ಆ ರಸ್ತೆ ಗುಂಡಿಗಳು ಆ ಗಲೀಜು ನೋಡಕ್ಕಾಗಲ್ಲ ಸಾರ್.”

“ರಾಮನಗರ ಅಷ್ಟೇ ಅಲ್ಲ ಕಂಡ್ರಿ. ಐದಾರು ಬಾರಿ ಗೆದ್ದು ಶಾಸಕರು ಮಂತ್ರಿಗಳಾಗಿರತಕ್ಕಂತ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಹೇರಳವಾಗಿವೆ. ಕನಿಷ್ಟ ಜನಗಳಿಗೆ ಪ್ರಾಥಮಿಕವಾಗಿ ಬೇಕಾಗಿರತಕ್ಕಂತ ಅಗತ್ಯಗಳು ಏನಿವೆ ಅವನ್ನ ಪೂರ್ಣವಾಗಿ ಒದಗಿಸತಕ್ಕಂತ ಕೆಲಸನ ಯಾರೂ ಮಾಡತಕ್ಕಂತದ್ದಕ್ಕೆ ಮನಸು ಮಾಡದೆ ಬರೀ ಆಸ್ತಿ ಮಾಡಿಬುಟು.”

“ನಿಜ ಸಾರ್ ಕೇವಲ ಐದೊರ್ಸ ಮಂತ್ರಿಗಳಾಗಿದ್ದ ಜನಗಳು ಕೋಟ್ಯಾಂತರ ರೂಪಾಯಿಗಳ ಆಸ್ತಿ ಮಾಡಿದ್ದರೆ, ರಾಜಕಾರಣಿಗಳಿಗೆ ದುಡ್ಡು ಹೊಡಿಯಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬ ಅಧಿಕಾರಿನ ಲೋಕಾಯುಕ್ತರು ರೈಡ್ ಮಾಡಿದ್ರೆ ಐದು ಕೋಟಿ ಬೆಲೆ ಬಾಳೊ ಮನೆ, ಮೂರುವರೆ ಕೆ.ಜಿ ಚಿನ್ನ, ಸೈಟುಗಳು, ಅಪಾರ್ಟ್‌ಮೆಂಟ್ ಮನೆಲಿ ಎಪ್ಪತೈದು ಲಕ್ಷ ಕ್ಯಾಶು ಇನ್ನೂರು ಪ್ಯಾಂಟು, ನಾನ್ನೂರು ಶರಟು, ನೂರು ಜೊತೆ ಚಪ್ಪಲಿ ಸಿಗತವೆ ಸಾರ್.”

“ರಾಜಕಾರಣಿಗಳ ಮನೆ ರೈಡು ಮಾಡಿದ್ರು ಅಷ್ಟೆ ಆಸ್ತಿ ಸಿಗತಕ್ಕಂತ ವಾತಾವರಣ ಇದೆಯಲ್ರಿ. ಆ ದುಡ್ಡನ್ನೆಲ್ಲಾ ನಾವು ಕರ್ನಾಟಕದ ಅಭಿವೃದ್ಧಿಗೆ ಬಳಸಿದ್ರೆ ನಮ್ಮೂರು ಸಿಂಗಾಪುರ ಆಯ್ತಿತ್ತಲ್ರೀ.”

ಇದನ್ನೂ ಓದಿ: ರಾಮ ಕೃಷ್ಣ ಕಪ್ಪುಗಿದ್ರಲ್ಲವ..

“ಹಂಡ್ರೆಡ್ ಪರಸೆಂಟು ನಿಜ ಸಾರ್. ಒಬ್ಬ ರಾಜಕಾರಣಿಗೆ ನಾಲ್ಕು ಜನ ಗಂಡು ಮಕ್ಕಳಿದ್ರೆ ಅವುರಿಗೆಲ್ಲಾ ಮನೆ ಇರತ್ತೆ, ಕಾರಿರತ್ತೆ, ಬೈಕಿರತವೆ ನಾಲ್ಕು ಜನ ಸೊಸೆಯರತ್ರ ತಲಾ ನಾಲ್ಕು ಕೆ.ಜಿ ಚಿನ್ನದ ಒಡವೆಗಳಿರತವೆ. ಇಂಥ ರಾಜಕಾರಣಿಗಳ ಆಸ್ತಿ ಹರಾಜಾಕಿದ್ರೆ ಸಾಕು ಸಾರ್. ನಾವು ದುಬೈ ಶೇಕ್‌ಗಳ ತರ ಇರಬಹುದು.”

“ಆ ದೇಶದ ಜನಗಳನ್ನ ನೋಡ್ತಾಯಿದ್ರೆ ನಾವು ಯಾವತ್ತು ಆತರ ಆಗ್ತಿವಿ ಅನತಕ್ಕಂತ ಭಾವನೆ ಏನಿದೆ ಆ ಬಗ್ಗೆ ಚಿಂತನೆ ಮಾಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಕಂಡ್ರಿ.”

“ನೀವು ಆ ದೇಶದ ಜನ ನೋಡದಿರ್ಲಿ, ಇಲ್ಲೆ ನಮ್ಮ ಸಿಟಿಗಳ ಹೊರಗೆ ಶೆಡ್ಡು ಗುಡುಸ್ಲಾಕ್ಕಂಡಿರೊ ಅಲೆಮಾರಿಗಳ ನೋಡಿದ್ರೆ. ಈ ರಾಜಕಾರಣಿಗಳು ಯಾವತ್ತು ಉದ್ದಾರಾಗಬಾರದು ಅನ್ಸುತ್ತೆ ಸಾರ್. ನೀವು ಮುಖ್ಯಮಂತ್ರಿಯಾಗಿದ್ದಾಗ ಇಂತವರ ಕಡೆ ನೋಡದು ಬಿಟ್ಟು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ರಿ ಗೊತ್ತ ಸಾರ್.”

“ನಾನು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ದು ಸರಿ ಕಂಡ್ರಿ. ಆ ಜನ ಸಮಾಜಕ್ಕೆ ಏನಾದ್ರು ಮಾಡ್ತರೆ, ಅದೇ ಈ ಊರ ಹೊರಗೆ ಇರತಕ್ಕಂತ ಜನಗಳಿಗೆ ಏನಾದ್ರು ಸಹಾಯ ಮಾಡಿದ್ರೆ ಕುಡುದು ತಿಂದು ಹಾಳು ಮಾಡ್ತರೆ. ಅವರಿಗೆ ಕೊಟ್ಟಿದ್ದೆ ವೇಸ್ಟು ಅನ್ನಂಗೆ ಮಾಡ್ತರೆ, ಅದ್ಕೆ ನಾನು ನಮ್ಮ ಸಹಾಯ ಏನಿದೆ ಅದು ಸದುಪಯೋಗ ಮಾಡಿಕತಕ್ಕಂತ ಜನಗಳನ್ನ ಪತ್ತೆ ಹಚ್ಚಿ ಆ ಕೆಲಸ ಮಾಡಿದೆ.”

“ನೀವು ಮಾಡಿದ್ದು ಬಿಜೆಪಿ ಕಾರ್ಯಕ್ರಮ ಸಾರ್. ನೋಡಿ ಅವುರು ನಿಮ್ಮನ್ನ ಬಳಸ್ಕಂಡ್ರು. ಮೋದಿನು ಬಳಸ್ಕಂಡು ಎಕನಾಮಿಕಲಿ ವೀಕರ್ ಸೆಕ್ಷನ್‌ಗೆ ಮೀಸಲಾತಿ ಬೇಕು ಅಂತ ಪಡದೇಬುಟ್ರು. ಈಗ ಅವುರನ್ನ ಹಿಡಿಯಕ್ಕೆ ಯಾರ ಕೈಲು ಆಗಲ್ಲ ಗೊತ್ತೆ.”

“ಆದ್ರು ಅವುರೆಷ್ಟು ಜನ ಇದಾರ್ರಿ?”

“ಒಬ್ಬರೆ ಸಾಕು ಸಾರ್, ಬ್ರಿಟಿಷರು ಎಷ್ಟು ಜನ ಇದ್ರು? ಇಂಡಿಯಾನೆ ಆಳಲಿಲ್ಲವ?”

“ಆಳಿದ್ರು ಸರಿ, ಆದ್ರೆ ರಾಜ್ಯವನ್ನ ಆಳತಕ್ಕಂತ ಜನಕ್ಕೆ ಅಧಿಕಾರ ಹೋದ್ರೆ ಹಾಗೆ ಇರದು ಕಷ್ಟ ಕಂಡ್ರಿ. ನನಿಗಂತು ಕರ್ನಾಟಕದಲ್ಲಿ ಇರಕ್ಕೆ ಬೇಜಾರು.”

“ಬೇಜಾರಾದ್ರೆ ಒಂದು ಕೆಲಸ ಮಾಡಬಹುದು ಸಾರ್. ಹ್ಯಂಗಿದ್ರೂ ನಮ್ಮ ಸಿನಿಮಾ ರಂಗ ಹಾಳಾಗ್ತಾಯಿದೆ. ಅದಕ್ಕೆ ಜೀವಕೊಡಿ ಸಾರ್, ಹೊಸ ಸಿನಿಮಾ ತಗಿರಿ, ಸಿನಿಮಾ ಟಾಕೀಸ್ ಕಟ್ಟಿ, ಡಿಸ್ಟ್ರಿಬ್ಯೂಷನ್ ಮಾಡಿ.”

“ಅವುನ್ಯಲ್ಲ ಮಾಡಿ ಆಯ್ತಲ್ರಿ, ಆ ಸಿನಿಮಾ ಲೋಕ ಏನು ಅನತಕ್ಕಂತ ಅನುಭವವನ್ನ ಪಡಕೊಂಡೆ ನಾನು ರಾಜಕಾರಣಕ್ಕೆ ಬಂದಿದ್ದು. ಈಗ ರಾಜಕಾರಣದ ಅನುಭವನೂ ಆಯ್ತು, ಪಂಚರತ್ನ ಕೈ ಹಿಡಿತವೆ ಅಂತ ತಿಳಕಂಡಿದ್ದೇ ತಪ್ಪಾಯ್ತು.”

“ಸಾರ್ ನನಿಗೆ ನಿಮ್ಮ ಬಗ್ಗೆ ಏನೋ ಒಂಥರ ಅಭಿಮಾನ ಇತ್ತು. ಅದ್ಯಲ್ಲ ವಂಟೊಯ್ತು ಸಾರ್.”

“ಯಾಕ್ರಿ?”

“ನಿಮ್ಮ ಪಾರ್ಟಿಗೆ ಐವತ್ತೆಂಟು ಸೀಟು ಬಂದಾಗ ಎಸ್ಸೆಂ ಕೃಷ್ಣ ಆಡಳಿತ ರಾಜ್ಯಪಾಲರ ಆಡಳಿತದಂಗಿತ್ತು, ಜನತಾದಳದಲ್ಲಿ ಪಟೇಲ್ರು, ಪ್ರಕಾಶ್, ಸಿಂಧ್ಯ, ಸಿದ್ದರಾಮಯ್ಯ, ವೈದ್ಯನಾಥ ಪಾಟೀಲ, ರಾಯರೆಡ್ಡಿ ಈ ತರ ಒಂದು ದಂಡೇಯಿದ್ದ ಕಾರಣಕ್ಕೆ ಜನತಾ ಪಾರ್ಟಿಗೆ ಅಷ್ಟು ಸೀಟು ಬಂದು ಈಗ ಅವರ್‍ಯಾರೂ ಇಲ್ಲದ ಕಾಲದಲ್ಲಿ ಪಂಚರತ್ನ ತೋರುಸ್ತ ನೀವೊಬ್ರು ಹೋದ್ರೆ ಯಾರು ಓಟಾಕ್ತರೆ ಸಾರ್? ನಿಜವಾಗ್ಲು ಹೇಳ್ತಿನಿ ನಿಮ್ಮ ಕುಟುಂಬದ ಮರ್‍ಯಾದಿಗೋಸ್ಕರ ಹತ್ತೊಂಬತ್ತು ಬಂದವೆ. ಇಲ್ಲಾ ಅಂದಿದ್ರೆ ಹತ್ತೆಯ. ಈಗ್ಲು ನೀವು ಬಿಜೆಪಿ ಕಡಿಕೋದ್ರೆ ನಿಮ್ಮ ಜೊತೆ ಬರವು ಒಂಬತ್ತು ನವಗ್ರಹಗಳು ಮಾತ್ರ.”

“ಮತ್ತೇನು ಮಾಡದೀಗ?”

“ಗ್ಯಾರಂಟಿ ಸಪೊರ್ಟ್ ಮಾಡಿ, ಮುಂದೆ ನೋಡಿ.”

“ಸತ್ರು ಅಂತ ಕೆಲಸ ಮಾಡಲ್ಲ.”

“ಥೂತ್ತೆರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...