Homeಅಂಕಣಗಳುರಾಮ ಕೃಷ್ಣ ಕಪ್ಪುಗಿದ್ರಲ್ಲವ..

ರಾಮ ಕೃಷ್ಣ ಕಪ್ಪುಗಿದ್ರಲ್ಲವ..

- Advertisement -
- Advertisement -

ಸಿಂಗಾಪುರದ ಮುಖಾಂತರ ಯೂರೋಪ್ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದ ಕುಮಾರಣ್ಣ ವಿಮಾನದಿಂದ ಇಳಿಯುವ ಕೊನೆ ಮೆಟ್ಟಿಲಲ್ಲೇ ಕರ್ನಾಟಕ ಸರ್ಕಾರದ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆದಿದೆ ಎಂದಿದ್ದಾರಲ್ಲಾ. ಸಿಂಗಾಪುರದಲ್ಲಿದ್ದ ಕುಮಾರಣ್ಣನಿಗೆ ಈ ಕಾಂಗ್ರೆಸ್ ಸರಕಾರದ ವರ್ಗಾವರ್ಗಿ ವಿವರ ಹೇಗೆ ಗೊತ್ತಾಯಿತು? ಕುಮಾರಣ್ಣನ ಕಡೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಇನ್ನೆಂತಹ ಜಾಲ ಹೆಣೆದಿರಬಹುದು? ಜೊತೆಗೆ ಪೆನ್‌ಡ್ರೈವ್ ಬೇರೆ ಕೆಲಸ ಮಾಡುತ್ತಿದೆ. ಹೇಗಾದರಾಗಲಿ ಹುಷಾರಾಗಿರಬೇಕು ಎಂದು ಸಿದ್ದು ಸಂಪುಟದ ಸಚಿವರು ಚಿಂತಿಸುತ್ತಿರುವಾಗಲೇ, ಮಂತ್ರಿಗಳಲ್ಲಿ ಕೆಲವು ಚಾಲಾಕಿಗಳು ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ವರ್ಗಾವರ್ಗಿಯ ದಂಧೆ ಗ್ರಹಿಸಿದವರು, ಅಲ್ಲದೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಿ ಅರಗಿಸಿಕೊಂಡವರು; ಈ ಅಂದಾಜಿನಲ್ಲೇ ಅವರು ಈ ಸರಕಾರದ ವಿರುದ್ಧ ಒಂದು ಸಾವಿರ ಕೋಟಿ ವ್ಯವಹಾರದ ದೂರನ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅವರನ್ನ ಹಿಟ್ ಅಂಡ್ ರನ್ ಕೇಸಿಗೆ ಸೇರಿಸಿ ಮಾತನಾಡುವುದಕ್ಕಿಂತ ಕುಮಾರಣ್ಣನ ಅಂದಾಜಿಗೆ ಸಿಗದಂತೆ ವ್ಯವಹಾರ ಮಾಡಬೇಕಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಸಾಲ ಹಾಗೇ ಇದೆ ಎಂದು ಮಾತನಾಡಿಕೊಂಡರಂತಲ್ಲಾ, ಥೂತ್ತೇರಿ.

*****

ಕರ್ನಾಟಕ ಈವರೆಗೆ ಕಂಡ ಅತ್ಯಂತ ದುರ್ಬಲ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಆಡಿರುವ ಮಾತೊಂದು ಇಡೀ ಕರ್ನಾಟಕದಲ್ಲೇ ಅಲ್ಲೊಲಕಲ್ಲೋಲವುಂಟುಮಾಡಿದೆಯಲ್ಲಾ. ಆರೆಸ್ಸ್ಸೆನ ಕಟ್ಟಾಳು ಮತ್ತು ಎಬಿವಿಪಿಯ ’ಧೀಮಂತ’ ವಿದ್ಯಾರ್ಥಿ, ಬಿಜೆಪಿಯ ’ಧೀಮಂತ’ ನಾಯಕನಾಗಿ ಬೆಳೆದು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಮತ್ತು ಕಿಮ್ಮನೆ ರತ್ನಾಕರ್ ಪ್ರತಿನಿಧಿಸಿದ ತೀರ್ಥಹಳ್ಳಿಯಿಂದ ಗೆದ್ದುಬಂದು ಗೃಹ ಸಚಿವರೂ ಆಗಿದ್ದ ಜ್ಞಾನೇಂದ್ರ ಅರೆಗ್ನಾನಿಯಾಗಿ ಬದಲಾದದ್ದು ಯಾವಾಗ ಎಂದು ಯೋಚಿಸಿ ಪೋನ್ ಮಾಡಲಾಗಿ ರಿಂಗಾಯ್ತು

ರಿಂಗ್ ಟೋನ್, “ನಮಸ್ತೆ ಸಧಾವತ್ಸಲೇ ಮಾತೃಭೂಮಿ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ.”

“ಅಭಿಮಾನಿ ಯಾರ್ರಿ?”

“ಅದು ಈ ಕ್ಷಣದ ಅಭಿಮಾನಿ ಸಾ. ಖರ್ಗೆಗೆ ಸರಿಯಾಗೇಳಿದ್ದಿರಿ ಬುಡಿ ಸಾ.”

“ನಾನೇನು ಹೇಳಿಲ್ಲ ಕಂಡ್ರಿ. ನನಿಗಾಗದವರು ಸುಳ್ಳು ಹೇಳ್ತ ಅವುರೆ. ಮಾಧ್ಯಮದವರು ಅದನ್ನೆ ನಂಬಿದಾರೆ.”

“ಅದೇನಾರ ಆಗ್ಲಿ, ಖರ್ಗೆ ಬಣ್ಣದ ಬಗ್ಗೆ ಹೇಳಿ, ನೋಡಿ ಸೀದು ಕರುಕಲಾಗ್ಯವುರೆ ಅಂದಿರದು ಸರಿ ಸಾ.”

“ರೀ ನಾನು ಅಂಗಂದೇಯಿಲ್ಲ ಕಂಡ್ರಿ.”

“ಅಂಗನ್ನಬಾರ್ದು ಸಾರ್. ಜಮೀರಹಮದ್ ತರ ಸಮರ್ಥಿಸಿಕೋಬೇಕು.”

“ಅವುರು ಏನನ್ನು ಸಮರ್ಥಿಸಿಕೊಂಡ್ರು ರೀ?”

“ಕುಮಾರಸ್ವಾಮಿ ಬಣ್ಣದ ಬಗ್ಗೆ ಆಡಿಕೊಳ್ಳುವಾಗ, ನಾನು ಕುಳ್ಳ ಎಂದು ಹೇಳ್ಕಂಡವರೆ.”

“ಅವುರ್‍ಯಾಕಂಗಂದರು?”

“ಕೆಲವರನ್ನ ಆಡಿಕೊಬೇಕಾದ್ರೆ ಕೆಲವು ಸಾರಿ ನಮ್ಮನ್ನ ಅಣಕಿಸಿಕೊಬೇಕಾಗತ್ತೆ, ಅದ್ಕೆ ಜಮೀರು ನಾನು ಕುಳ್ಳ ಸತ್ಯ ಅಲ್ಲವ ಅಂದು ಕುಮಾರಸ್ವಾಮಿ ಬಗ್ಗೆ ಹೇಳಿದ್ದು ನಿಜ ಅಲ್ಲವಾ” ಅಂದವರೆ ಸಾರ್.

“ಅವುರನಾರ ಅನ್ಲಿ, ನಾನು ಅನ್ನದೇಯಿರೊ ಮಾತನ್ನ ತಗೊಂಡು ರಾಜಕೀಯ ಮಾಡಿದಾರಲ್ರೀ.”

“ಹಂಗಿದ್ರೆ ನೀವು ಹಿಂಗೆ ಮಾಡಬಹುದು, ಅದು ನನ್ನ ಮಾತಲ್ಲ. ಮಿಮಿಕ್ರಿ ದಯಾನಂದರನ್ನ ಹಿಡಿದು ನನ್ನಂಗೆ ಮಾತಾಡ್ಸಿದಾರೆ. ನಾನು ಖರ್ಗೆ ಅಭಿಮಾನಿ ಅವರ ಕಾಲಿನ ಧೂಳಿಗೂ ಸಮ ಅಲ್ಲ. ಅಂತ ಪ್ರೆಸ್ ಸ್ಟೇಟುಮಂಟು ಕೊಡಿ ಸಾರ್.”

“ಈಗಾಗ್ಲೆ ಕೊಟ್ಟಿದ್ದಿನಿ ಕಂಡ್ರಿ.”

“ಅದರಲ್ಲೇ ಸಿಗಾಯ್ಕಂಡಿದ್ದಿರಲ್ಲ ಸಾರ್?”

“ಎಲ್ಲಿ ಸಿಗಾಯ್ಕಂಡಿದ್ದಿನ್ರಿ?”

“ಖರ್ಗೆಯವರನ್ನ ಟೀಕೀಸಿದ್ರೆ ನಾನು ಯಾವ ಶಿಕ್ಷೆ ಬೇಕಾದ್ರು ಅನುಭವುಸ್ತಿನಿ ಅಂದಿದ್ದಿರಿ.”

“ಸರಿ ಅಂದಿಲವಲ್ಲಾ…”

“ಅಂದಿರದ ಸಾಬೀತು ಮಾಡಿಕಂಡಿದ್ದಿರಿ.”

“ಹೇಗೆ ಅಂತ?”

“ನೀವು ಯಾವ ಮಾತನ್ನ ಆಡದೆ ಖರ್ಗೆ ಹೆಸರು ಹೆಂಗೆ ಬಂತು. ಇದ್ದಕ್ಕಿದ್ದಂಗೆ ಅವರನ್ನ ಹೊಗಳೊ ಕಾರಣ ಏನು? ವೈಯಕ್ತಕವಾಗಿ ನಿಂದಿಸಿ ಕೀಳುಮಟ್ಟದ ರಾಜಕಾರಣ ಮಾಡಲ್ಲ ಅಂದು ಅದ್ನೇ ಮಾಡಿದ್ದಿರಲ್ಲಾ ಸಾರ್. ಮನುಷ್ಯನ ಬಣ್ಣ ಆಕಾರ ಆಡಿಕಳದು ಅಪರಾಧ, ಅವನ್ನ ನೀವು ಮಾಡಬಾರದಿತ್ತು.”

“ಖಂಡಿತ ಮಾಡಿಲ್ಲ ಕಂಡ್ರಿ ನನ್ನ ಬಾಯಲ್ಲಿ ಆ ಮಾತೇ ಬರಲಿಲ್ಲಾ.”

“ಸರಿ, ಮಾಧ್ಯಮದ ಎದುರಿನ ಮೈಕಿನಲ್ಲಿ ಈ ಶಬ್ದ ಬಂತು, ನಿಮ್ಮ ತುಟಿ ಕೂಡ ಚಲಿಸಿವೆ ಸಾರ್.”

“ಅದೇ ಹೇಳಿದೆನಲ್ಲಾ, ನೀವೆ ಹೇಳಿದಂಗೆ ಮಿಮಿಕ್ರಿ ಕಲಾವಿದರ ಬಳಸಿ ಏನು ಬೇಕಾದ್ರು ಮಾಡಬಹುದು.”

“ಅದನ್ನ ಕೋರ್ಟಲ್ಲಿ ಸಾಬೀತು ಮಾಡ್ಸಿ. ಸಾರ್ ಹ್ಯಾಗಿದ್ರು ಬಿಜೆಪಿಗಳಿಗೆ ಕೋರ್ಟ್ ಅಂದ್ರೆ ತುಂಬಾ ಇಷ್ಟ. ನೀವು ಕೋರ್ಟಲ್ಲಿ ನಿಮ್ಮನ್ನ ಸಮರ್ಥಿಸಿಕೊಳ್ಳಬಹುದು; ರಾಹುಲಗಾಂಧಿ ನೋಡಿ, ತಪ್ಪು ಮಾಡಿಲ್ಲ, ತಪ್ಪು ಅಂತ ಒಪ್ಪಿಗಳಲ್ಲ ಅಂದ್ರು. ಅವರ ಪ್ರಾಮಾಣಿಕ ಮಾತಿಗೆ ಕೋರ್ಟ್ ಮನ್ನಣೆ ಕೊಟ್ಟು ಅವರ ಶಿಕ್ಷೆಗೆ ಸ್ಟೇ ತಂತು ಅಲ್ಲವ?”

“ಈಗ ನಾನೇನು ಮಾಡ್ಲಿ?”

“ಏನಿಲ್ಲ ಖರ್ಗೆಯವರ ಬಣ್ಣದ ಬಗ್ಗೆ ಮಾತಾಡಿದ್ದೀನಿ. ಯಾಕಂದ್ರೆ, ನಮ್ಮ ಶ್ರೀರಾಮಚಂದ್ರ ಕಪ್ಪಗಿದ್ದ, ಹನ್ನೆರಡು ವರ್ಷ ಅರಣ್ಯದಲ್ಲಿ ಅಲದೂ ಕಾಯಿ ಕುಸುರು ತಿಂದು ಕರಕಲಾಗಿದ್ದ. ನಮ್ಮ ಖರ್ಗೆ ಸಾಹೇಬರಿಗೆ ಕಚ್ಛೆ ಹಾಕಿ ಕೈಗೆ ಬಿಲ್ಲು ಬಾಣ ಕೊಟ್ರೆ ಥೇಟ್ ಶ್ರೀರಾಮಚಂದ್ರನಂಗೇ ಕಾಣ್ತಾರೆ. ಆ ವೇಶದಲ್ಲಿ ಅವರ ಕಾಲಿಗೆ ಬೀಳಂಗಾಗತ್ತೆ; ಇನ್ನ ನಮ್ಮ ಕೃಷ್ಣನೂ ಕಪ್ಪಗಿದ್ದ. ಇವರಿಬ್ಬರು ನಮ್ಮ ಬಿಜೆಪಿ ಪಾರ್ಟಿಗೆ ಎರಡು ಚಕ್ರ ಇದ್ದಂಗೆ; ಅದರಲ್ಲೂ ಕೃಷ್ಣ ದನ ಕಾಯ್ತಾ ಕಾಯ್ತ ಕಪ್ಪಗೆ ಕರಕಲಾಗಿದ್ದ. ನಮ್ಮ ಪುರೋಹಿತಶಾಹಿಗಳು ಕಪ್ಪು ಬಣ್ಣನ ಒಪ್ಪದೇಯಿರದ್ರಿಂದ ಅವುರಿಬ್ಬರಿಗೂ ನಾಟಕದಲ್ಲಿ ಮತ್ತು ಸಿನಿಮಾದಲ್ಲಿ ನೀಲಿಬಣ್ಣ ಬಳಿತರೆ. ಈ ಭೂಮಿ ಮೇಲೆ ಯಾರಾದ್ರು ನೀಲಿ ಬಣ್ಣಕ್ಕಿದ್ದಾರ? ಆದ್ರಿಂದ ನಮ್ಮ ಪುರೋಹಿತಶಾಹಿಗಳು ಕಪ್ಪುಬಣ್ಣ ಒಪ್ಪದೆ ನೀಲಿ ಬಣ್ಣ ಬಳದು ನಾವೆಲ್ಲಾ ಕಪ್ಪುಬಣ್ಣ ದ್ವೇಷ ಮಾಡಂಗೆ ಮಾಡಿದಾರೆ. ಆ ಕಾರಣಕ್ಕೆ ನನ್ನ ಬಾಯಿ ತಪ್ಪಿ ಖಂಡ್ರೆ ಖರ್ಗೆ ಕುರಿತು ಮಾತನಾಡುವಾಗ, ಆ ಬಯಲುಸೀಮೆ, ಗುಲಬರ್ಗಾ, ರಾಯಚೂರು, ಬಳ್ಳಾರಿ ಕಡೆಯೆಲ್ಲ ಬಿಸಲಲ್ಲಿ ಬೆಂದು ಹ್ಯಂಗೆ ಕರಲಾಗ್ಯವುರೆ ನೋಡಿ ಅಂದೆ ಸಾ, ಅಂತ ಹೇಳಿ.”

“ನಿಮ್ಮ ಮಾತ ಕೇಳಿದ್ರೆ ಜೈಲಿಗೋಗಬೇಕಾಯ್ತದೆ.”

“ಮತ್ತೇನು ಮಾಡ್ತಿರಿ ಸಾರ್?”

“ನಾನು ಅಂದೇಯಿಲ್ಲ ಅಂತಿನಿ, ಮಾತು ನಂದಲ್ಲ ವಾಯ್ಸು ನಂದಲ್ಲ ಅಂತಿನಿ.”

“ಥೂತ್ತೇರಿ.”


ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...