Homeಅಂಕಣಗಳುರಾಮ ಕೃಷ್ಣ ಕಪ್ಪುಗಿದ್ರಲ್ಲವ..

ರಾಮ ಕೃಷ್ಣ ಕಪ್ಪುಗಿದ್ರಲ್ಲವ..

- Advertisement -
- Advertisement -

ಸಿಂಗಾಪುರದ ಮುಖಾಂತರ ಯೂರೋಪ್ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದ ಕುಮಾರಣ್ಣ ವಿಮಾನದಿಂದ ಇಳಿಯುವ ಕೊನೆ ಮೆಟ್ಟಿಲಲ್ಲೇ ಕರ್ನಾಟಕ ಸರ್ಕಾರದ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆದಿದೆ ಎಂದಿದ್ದಾರಲ್ಲಾ. ಸಿಂಗಾಪುರದಲ್ಲಿದ್ದ ಕುಮಾರಣ್ಣನಿಗೆ ಈ ಕಾಂಗ್ರೆಸ್ ಸರಕಾರದ ವರ್ಗಾವರ್ಗಿ ವಿವರ ಹೇಗೆ ಗೊತ್ತಾಯಿತು? ಕುಮಾರಣ್ಣನ ಕಡೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಇನ್ನೆಂತಹ ಜಾಲ ಹೆಣೆದಿರಬಹುದು? ಜೊತೆಗೆ ಪೆನ್‌ಡ್ರೈವ್ ಬೇರೆ ಕೆಲಸ ಮಾಡುತ್ತಿದೆ. ಹೇಗಾದರಾಗಲಿ ಹುಷಾರಾಗಿರಬೇಕು ಎಂದು ಸಿದ್ದು ಸಂಪುಟದ ಸಚಿವರು ಚಿಂತಿಸುತ್ತಿರುವಾಗಲೇ, ಮಂತ್ರಿಗಳಲ್ಲಿ ಕೆಲವು ಚಾಲಾಕಿಗಳು ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ವರ್ಗಾವರ್ಗಿಯ ದಂಧೆ ಗ್ರಹಿಸಿದವರು, ಅಲ್ಲದೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಿ ಅರಗಿಸಿಕೊಂಡವರು; ಈ ಅಂದಾಜಿನಲ್ಲೇ ಅವರು ಈ ಸರಕಾರದ ವಿರುದ್ಧ ಒಂದು ಸಾವಿರ ಕೋಟಿ ವ್ಯವಹಾರದ ದೂರನ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅವರನ್ನ ಹಿಟ್ ಅಂಡ್ ರನ್ ಕೇಸಿಗೆ ಸೇರಿಸಿ ಮಾತನಾಡುವುದಕ್ಕಿಂತ ಕುಮಾರಣ್ಣನ ಅಂದಾಜಿಗೆ ಸಿಗದಂತೆ ವ್ಯವಹಾರ ಮಾಡಬೇಕಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಸಾಲ ಹಾಗೇ ಇದೆ ಎಂದು ಮಾತನಾಡಿಕೊಂಡರಂತಲ್ಲಾ, ಥೂತ್ತೇರಿ.

*****

ಕರ್ನಾಟಕ ಈವರೆಗೆ ಕಂಡ ಅತ್ಯಂತ ದುರ್ಬಲ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಆಡಿರುವ ಮಾತೊಂದು ಇಡೀ ಕರ್ನಾಟಕದಲ್ಲೇ ಅಲ್ಲೊಲಕಲ್ಲೋಲವುಂಟುಮಾಡಿದೆಯಲ್ಲಾ. ಆರೆಸ್ಸ್ಸೆನ ಕಟ್ಟಾಳು ಮತ್ತು ಎಬಿವಿಪಿಯ ’ಧೀಮಂತ’ ವಿದ್ಯಾರ್ಥಿ, ಬಿಜೆಪಿಯ ’ಧೀಮಂತ’ ನಾಯಕನಾಗಿ ಬೆಳೆದು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಮತ್ತು ಕಿಮ್ಮನೆ ರತ್ನಾಕರ್ ಪ್ರತಿನಿಧಿಸಿದ ತೀರ್ಥಹಳ್ಳಿಯಿಂದ ಗೆದ್ದುಬಂದು ಗೃಹ ಸಚಿವರೂ ಆಗಿದ್ದ ಜ್ಞಾನೇಂದ್ರ ಅರೆಗ್ನಾನಿಯಾಗಿ ಬದಲಾದದ್ದು ಯಾವಾಗ ಎಂದು ಯೋಚಿಸಿ ಪೋನ್ ಮಾಡಲಾಗಿ ರಿಂಗಾಯ್ತು

ರಿಂಗ್ ಟೋನ್, “ನಮಸ್ತೆ ಸಧಾವತ್ಸಲೇ ಮಾತೃಭೂಮಿ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ.”

“ಅಭಿಮಾನಿ ಯಾರ್ರಿ?”

“ಅದು ಈ ಕ್ಷಣದ ಅಭಿಮಾನಿ ಸಾ. ಖರ್ಗೆಗೆ ಸರಿಯಾಗೇಳಿದ್ದಿರಿ ಬುಡಿ ಸಾ.”

“ನಾನೇನು ಹೇಳಿಲ್ಲ ಕಂಡ್ರಿ. ನನಿಗಾಗದವರು ಸುಳ್ಳು ಹೇಳ್ತ ಅವುರೆ. ಮಾಧ್ಯಮದವರು ಅದನ್ನೆ ನಂಬಿದಾರೆ.”

“ಅದೇನಾರ ಆಗ್ಲಿ, ಖರ್ಗೆ ಬಣ್ಣದ ಬಗ್ಗೆ ಹೇಳಿ, ನೋಡಿ ಸೀದು ಕರುಕಲಾಗ್ಯವುರೆ ಅಂದಿರದು ಸರಿ ಸಾ.”

“ರೀ ನಾನು ಅಂಗಂದೇಯಿಲ್ಲ ಕಂಡ್ರಿ.”

“ಅಂಗನ್ನಬಾರ್ದು ಸಾರ್. ಜಮೀರಹಮದ್ ತರ ಸಮರ್ಥಿಸಿಕೋಬೇಕು.”

“ಅವುರು ಏನನ್ನು ಸಮರ್ಥಿಸಿಕೊಂಡ್ರು ರೀ?”

“ಕುಮಾರಸ್ವಾಮಿ ಬಣ್ಣದ ಬಗ್ಗೆ ಆಡಿಕೊಳ್ಳುವಾಗ, ನಾನು ಕುಳ್ಳ ಎಂದು ಹೇಳ್ಕಂಡವರೆ.”

“ಅವುರ್‍ಯಾಕಂಗಂದರು?”

“ಕೆಲವರನ್ನ ಆಡಿಕೊಬೇಕಾದ್ರೆ ಕೆಲವು ಸಾರಿ ನಮ್ಮನ್ನ ಅಣಕಿಸಿಕೊಬೇಕಾಗತ್ತೆ, ಅದ್ಕೆ ಜಮೀರು ನಾನು ಕುಳ್ಳ ಸತ್ಯ ಅಲ್ಲವ ಅಂದು ಕುಮಾರಸ್ವಾಮಿ ಬಗ್ಗೆ ಹೇಳಿದ್ದು ನಿಜ ಅಲ್ಲವಾ” ಅಂದವರೆ ಸಾರ್.

“ಅವುರನಾರ ಅನ್ಲಿ, ನಾನು ಅನ್ನದೇಯಿರೊ ಮಾತನ್ನ ತಗೊಂಡು ರಾಜಕೀಯ ಮಾಡಿದಾರಲ್ರೀ.”

“ಹಂಗಿದ್ರೆ ನೀವು ಹಿಂಗೆ ಮಾಡಬಹುದು, ಅದು ನನ್ನ ಮಾತಲ್ಲ. ಮಿಮಿಕ್ರಿ ದಯಾನಂದರನ್ನ ಹಿಡಿದು ನನ್ನಂಗೆ ಮಾತಾಡ್ಸಿದಾರೆ. ನಾನು ಖರ್ಗೆ ಅಭಿಮಾನಿ ಅವರ ಕಾಲಿನ ಧೂಳಿಗೂ ಸಮ ಅಲ್ಲ. ಅಂತ ಪ್ರೆಸ್ ಸ್ಟೇಟುಮಂಟು ಕೊಡಿ ಸಾರ್.”

“ಈಗಾಗ್ಲೆ ಕೊಟ್ಟಿದ್ದಿನಿ ಕಂಡ್ರಿ.”

“ಅದರಲ್ಲೇ ಸಿಗಾಯ್ಕಂಡಿದ್ದಿರಲ್ಲ ಸಾರ್?”

“ಎಲ್ಲಿ ಸಿಗಾಯ್ಕಂಡಿದ್ದಿನ್ರಿ?”

“ಖರ್ಗೆಯವರನ್ನ ಟೀಕೀಸಿದ್ರೆ ನಾನು ಯಾವ ಶಿಕ್ಷೆ ಬೇಕಾದ್ರು ಅನುಭವುಸ್ತಿನಿ ಅಂದಿದ್ದಿರಿ.”

“ಸರಿ ಅಂದಿಲವಲ್ಲಾ…”

“ಅಂದಿರದ ಸಾಬೀತು ಮಾಡಿಕಂಡಿದ್ದಿರಿ.”

“ಹೇಗೆ ಅಂತ?”

“ನೀವು ಯಾವ ಮಾತನ್ನ ಆಡದೆ ಖರ್ಗೆ ಹೆಸರು ಹೆಂಗೆ ಬಂತು. ಇದ್ದಕ್ಕಿದ್ದಂಗೆ ಅವರನ್ನ ಹೊಗಳೊ ಕಾರಣ ಏನು? ವೈಯಕ್ತಕವಾಗಿ ನಿಂದಿಸಿ ಕೀಳುಮಟ್ಟದ ರಾಜಕಾರಣ ಮಾಡಲ್ಲ ಅಂದು ಅದ್ನೇ ಮಾಡಿದ್ದಿರಲ್ಲಾ ಸಾರ್. ಮನುಷ್ಯನ ಬಣ್ಣ ಆಕಾರ ಆಡಿಕಳದು ಅಪರಾಧ, ಅವನ್ನ ನೀವು ಮಾಡಬಾರದಿತ್ತು.”

“ಖಂಡಿತ ಮಾಡಿಲ್ಲ ಕಂಡ್ರಿ ನನ್ನ ಬಾಯಲ್ಲಿ ಆ ಮಾತೇ ಬರಲಿಲ್ಲಾ.”

“ಸರಿ, ಮಾಧ್ಯಮದ ಎದುರಿನ ಮೈಕಿನಲ್ಲಿ ಈ ಶಬ್ದ ಬಂತು, ನಿಮ್ಮ ತುಟಿ ಕೂಡ ಚಲಿಸಿವೆ ಸಾರ್.”

“ಅದೇ ಹೇಳಿದೆನಲ್ಲಾ, ನೀವೆ ಹೇಳಿದಂಗೆ ಮಿಮಿಕ್ರಿ ಕಲಾವಿದರ ಬಳಸಿ ಏನು ಬೇಕಾದ್ರು ಮಾಡಬಹುದು.”

“ಅದನ್ನ ಕೋರ್ಟಲ್ಲಿ ಸಾಬೀತು ಮಾಡ್ಸಿ. ಸಾರ್ ಹ್ಯಾಗಿದ್ರು ಬಿಜೆಪಿಗಳಿಗೆ ಕೋರ್ಟ್ ಅಂದ್ರೆ ತುಂಬಾ ಇಷ್ಟ. ನೀವು ಕೋರ್ಟಲ್ಲಿ ನಿಮ್ಮನ್ನ ಸಮರ್ಥಿಸಿಕೊಳ್ಳಬಹುದು; ರಾಹುಲಗಾಂಧಿ ನೋಡಿ, ತಪ್ಪು ಮಾಡಿಲ್ಲ, ತಪ್ಪು ಅಂತ ಒಪ್ಪಿಗಳಲ್ಲ ಅಂದ್ರು. ಅವರ ಪ್ರಾಮಾಣಿಕ ಮಾತಿಗೆ ಕೋರ್ಟ್ ಮನ್ನಣೆ ಕೊಟ್ಟು ಅವರ ಶಿಕ್ಷೆಗೆ ಸ್ಟೇ ತಂತು ಅಲ್ಲವ?”

“ಈಗ ನಾನೇನು ಮಾಡ್ಲಿ?”

“ಏನಿಲ್ಲ ಖರ್ಗೆಯವರ ಬಣ್ಣದ ಬಗ್ಗೆ ಮಾತಾಡಿದ್ದೀನಿ. ಯಾಕಂದ್ರೆ, ನಮ್ಮ ಶ್ರೀರಾಮಚಂದ್ರ ಕಪ್ಪಗಿದ್ದ, ಹನ್ನೆರಡು ವರ್ಷ ಅರಣ್ಯದಲ್ಲಿ ಅಲದೂ ಕಾಯಿ ಕುಸುರು ತಿಂದು ಕರಕಲಾಗಿದ್ದ. ನಮ್ಮ ಖರ್ಗೆ ಸಾಹೇಬರಿಗೆ ಕಚ್ಛೆ ಹಾಕಿ ಕೈಗೆ ಬಿಲ್ಲು ಬಾಣ ಕೊಟ್ರೆ ಥೇಟ್ ಶ್ರೀರಾಮಚಂದ್ರನಂಗೇ ಕಾಣ್ತಾರೆ. ಆ ವೇಶದಲ್ಲಿ ಅವರ ಕಾಲಿಗೆ ಬೀಳಂಗಾಗತ್ತೆ; ಇನ್ನ ನಮ್ಮ ಕೃಷ್ಣನೂ ಕಪ್ಪಗಿದ್ದ. ಇವರಿಬ್ಬರು ನಮ್ಮ ಬಿಜೆಪಿ ಪಾರ್ಟಿಗೆ ಎರಡು ಚಕ್ರ ಇದ್ದಂಗೆ; ಅದರಲ್ಲೂ ಕೃಷ್ಣ ದನ ಕಾಯ್ತಾ ಕಾಯ್ತ ಕಪ್ಪಗೆ ಕರಕಲಾಗಿದ್ದ. ನಮ್ಮ ಪುರೋಹಿತಶಾಹಿಗಳು ಕಪ್ಪು ಬಣ್ಣನ ಒಪ್ಪದೇಯಿರದ್ರಿಂದ ಅವುರಿಬ್ಬರಿಗೂ ನಾಟಕದಲ್ಲಿ ಮತ್ತು ಸಿನಿಮಾದಲ್ಲಿ ನೀಲಿಬಣ್ಣ ಬಳಿತರೆ. ಈ ಭೂಮಿ ಮೇಲೆ ಯಾರಾದ್ರು ನೀಲಿ ಬಣ್ಣಕ್ಕಿದ್ದಾರ? ಆದ್ರಿಂದ ನಮ್ಮ ಪುರೋಹಿತಶಾಹಿಗಳು ಕಪ್ಪುಬಣ್ಣ ಒಪ್ಪದೆ ನೀಲಿ ಬಣ್ಣ ಬಳದು ನಾವೆಲ್ಲಾ ಕಪ್ಪುಬಣ್ಣ ದ್ವೇಷ ಮಾಡಂಗೆ ಮಾಡಿದಾರೆ. ಆ ಕಾರಣಕ್ಕೆ ನನ್ನ ಬಾಯಿ ತಪ್ಪಿ ಖಂಡ್ರೆ ಖರ್ಗೆ ಕುರಿತು ಮಾತನಾಡುವಾಗ, ಆ ಬಯಲುಸೀಮೆ, ಗುಲಬರ್ಗಾ, ರಾಯಚೂರು, ಬಳ್ಳಾರಿ ಕಡೆಯೆಲ್ಲ ಬಿಸಲಲ್ಲಿ ಬೆಂದು ಹ್ಯಂಗೆ ಕರಲಾಗ್ಯವುರೆ ನೋಡಿ ಅಂದೆ ಸಾ, ಅಂತ ಹೇಳಿ.”

“ನಿಮ್ಮ ಮಾತ ಕೇಳಿದ್ರೆ ಜೈಲಿಗೋಗಬೇಕಾಯ್ತದೆ.”

“ಮತ್ತೇನು ಮಾಡ್ತಿರಿ ಸಾರ್?”

“ನಾನು ಅಂದೇಯಿಲ್ಲ ಅಂತಿನಿ, ಮಾತು ನಂದಲ್ಲ ವಾಯ್ಸು ನಂದಲ್ಲ ಅಂತಿನಿ.”

“ಥೂತ್ತೇರಿ.”


ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...