Homeಅಂಕಣಗಳುಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

ಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

- Advertisement -
- Advertisement -

ಮಂಡ್ಯ ಜಿಲ್ಲೆ ಜನತೆಗೆ ಸುಮಲತಾ ನಡೆ ಈ ಶತಮಾನದ ಎರಡನೇ ದ್ರೋಹವಾಗಿ ಕಾಣತೊಡಗಿದೆಯಂತಲ್ಲಾ. ಮೊದಲ ದ್ರೋಹ ಎಸ್.ಎಂ ಕೃಷ್ಣರದ್ದು. ಯಾರನ್ನು ಕೇಳಿದರೂ ತಾವು ಮೋಸ ಹೋದ ಮಾತು ಅವರಿಂದ ಹೊರಬರುತ್ತಿದೆ. ಇದಕ್ಕೆ ಅವರು ಕೊಡುವ ಕಾರಣ: ಸುಮಲತಾ ಚುನಾವಣೆ ಮುಗಿಯುವ ಹಂತದಲ್ಲಿ ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು; ಇದರಿಂದ ಕರಗಿಹೋದ ಮಂಡ್ಯದ ಜನ ತಮ್ಮ ಮನೆಯ ಮಗಳಾಗಿ ಸ್ವೀಕರಿಸಿದರು; ಅಂದು ಮುಖ್ಯಮಂತ್ರಿ ಮಗನೇ ಮೈತ್ರಿ ಸರ್ಕಾರದ ಅಭ್ಯರ್ಥಿಯಾದರೂ ಕಾಂಗ್ರೆಸ್ಸಿಗರು ಒಳಗೊಳಗೇ ಕೆಲಸ ಮಾಡಿದರು. ಭಾಷಾಭಿಮಾನಿಗಳು, ರೈತಸಂಘದವರು, ದಲಿತ ಸಂಘದ ಲೀಡರುಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಸುಮಲತಾ ಒಂದೂಕಾಲು ಲಕ್ಷದ ಲೀಡು ಪಡೆದು ಗೆದ್ದರು. ಆದರೇನು ಗೆದ್ದ ಕ್ಷಣದಿಂದಲೇ ಅವರ ಒಡನಾಟ ಮನೆಹಾಳು ಬಿಜೆಪಿಗಳ ಜೊತೆ ಆರಂಭವಾಯ್ತು. ಈಗ ಅವರು ಹೆಚ್ಚುಕಮ್ಮಿ ಬಿಜೆಪಿ ಸೇರಿದಂತೆಯೇ ಅಂಬಂತೆ ಬಿಜೆಪಿಗೆ ಬಂಬಲ ಘೋಷಿಸಿರುವುದು ಕೂಡ ಸಕಾರಣವಾಗಿರದೆ ಇನ್ನ ವರ್ಷವಿರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಸೇರಿ ಮತದಾರರಿಗೆ ಆಘಾತ ನೀಡಿದ್ದಾರೆ. ಈಕೆಯನ್ನು ಬೆಂಬಲಿಸಿದ ಸಿನಿಮಾ ನಟರೂ ಕೂಡ ಮೋಸ ಹೋಗಿದ್ದಾರೆ. ಆದರೇನು ಇಂತಹ ಯಾವ ನೋವೂ ಅವರನ್ನು ಭಾಧಿಸಿದಂತಿಲ್ಲ. ಇವರ ಬಗ್ಗೆ ಅಪ್ರಭುದ್ಧವಾಗಿ ಮಾತನಾಡಿದ್ದ ರೇವಣ್ಣ, ಶಿವರಾಮೇಗೌಡರ ಮಾತುಗಳೇ ನಿಜವಾಗಿರುವ ಈ ಸಮಯದಲ್ಲಿ, ಶಿವರಾಮೇಗೌಡ ಸುಮಲತಾ ಒಂದೇ ವೇದಿಕೆಗೆ ಬಂದರಲ್ಲಾ ಥೂತ್ತೇರಿ.

*****

ಇದ್ದಕ್ಕಿದ್ದಂತೆ ಮಂಡ್ಯ ಜಿಲ್ಲೆಯ ಉರಿಗೌಡ, ನಂಜೇಗೌಡರ ಬಗ್ಗೆ ವಕಾಲತ್ತು ವಹಿಸಿರುವ ಶೋಭಾ ಕರಂದ್ಲಾಜೆ ಎಂಬ ಸಂಶೋಧಕಿ ಎಡೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಬಲಗೈನಂತಿದ್ದವರು. ನೂರು ವರ್ಷದ ಇತಿಹಾಸವಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಕೇಂದ್ರ ಸರಕಾರ ಮುಚ್ಚಿ ಒಂದು ಸಾವಿರ ಕುಟುಂಬಗಳು ಬೀದಿಗೆ ಬಿದ್ದಾಗ ಇವರು ಮಾತನಾಡಲಿಲ್ಲ. ವಿಐಎಸ್‌ಎಲ್ ಮುಚ್ಚಲು ಸಹಕರಿಸಿದ ಶಿವಮೊಗ್ಗದ ರಾಜಕಾರಣಿಗಳ ಮನಸ್ಸಿನ ಹಿಂದೆ ಇದ್ದ ಕುತ್ಸಿತ ಭಾವನೆಗಳು ಹಲವು: ಭದ್ರಾವತಿ ಹಿಂದಿನಿಂದ ಕಾಂಗ್ರೆಸ್ಸನ್ನು ಬೆಂಬಲಿಸಿಕೊಂಡು ಬಂದ ಕ್ಷೇತ್ರ; ಅಲ್ಲಿಗೆ ಶಿವಮೊಗ್ಗದ ಯಾವ ಮತೀಯ ಕಾಯಿಲೆಗಳೂ ತಲುಪಲಿಲ್ಲ. ಅಲ್ಲಿನ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್) ಮತ್ತು ವಿಐಎಸ್‌ಎಲ್‌ನಲ್ಲಿನ ಬಹುತೇಕ ಕಾರ್ಮಿಕರೆಲ್ಲಾ ಒಕ್ಕಲಿಗರು. ಇವರ ಬಗ್ಗೆ ಮೊದಲಿನಿಂದಲೂ ಎಡೂರಪ್ಪನವರ ಟೀಮಿಗೆ ತಾತ್ಸಾರ. ಅದೇನೇ ಇರಲಿ ಮಂಡ್ಯಕ್ಕೆ ಬಂದು ಉರಿಗೌಡ ನಂಜೇಗೌಡರ ಬಗ್ಗೆ ಸಂಶೋಧನೆಗೆ ತೊಡಗಿರುವ ಈ ಶೋಭಾ ಕರಂದ್ಲಾಜೆ ನೂರುವರ್ಷದ ಇತಿಹಾಸವಿರುವ ವಿಐಎಸ್‌ಎಲ್ ಬಗ್ಗೆ ಈವರೆಗೂ ಚಕಾರವೆತ್ತದಿರುವುದು ಭದ್ರಾವತಿ ಜನರಿಗೆ ಬಗೆದಿರುವ ದ್ರೋಹವೆಂದು ಅರಿವು ಮಾಡಿಕೊಡಬೇಕಿದೆಯಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಇತಿಹಾಸದ ಸಮಾಧಿ ಅಗೆದು ಅಲ್ಲಿನ ಸತ್ಯಸಂಗತಿಗಳನ್ನು ಮರೆಮಾಡಿ ತಮಗೆ ಬೇಕಿರುವುದನ್ನು ಸೃಷ್ಟಿಸಿ ಸುಳ್ಳು ಹೇಳುತ್ತ ಹೋಗುವುದು ಬಿಜೆಪಿಗಳ ಹಳೆಯ ಚಾಳಿ. ಅದರಂತೆ ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನ ಬದಿಗೊತ್ತಿ ಉರಿ ಹಿಡಿದು ನಂಜುಕಾರುತ್ತ ಹೊರಟಿವೆ. ಸಂಶೋಧಕ ಹ.ಕ.ರಾಜೇಗೌಡರು ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಆಡಳಿತದ ವಿರುದ್ಧ ದಂಗೆ ಎದ್ದರು ಎಂಬ ಸಾಲನ್ನು ಹಿಡಿದುಹೊರಟಿರುವ ಬಿಜೆಪಿಯ ಮಂದಮತಿಗಳು ಒಂದಿಷ್ಟು ಧ್ಯಾನಿಸಿ ಸತ್ಯಸಂಗತಿಯನ್ನು ಗ್ರಹಿಸಿದ್ದಾರೆ. ಟಿಪ್ಪು ಸಂಪುಟದಲ್ಲಿದ್ದ ಎಂಟು ಜನ ಮಂತ್ರಿಗಳಲ್ಲಿ ಐವರು ಬ್ರಾಹ್ಮಣರಿದ್ದರು. ಅದರಲ್ಲಿ ದಿವಾನ್ ಪೂರ್ಣಯ್ಯನೂ ಬ್ರಾಹ್ಮಣ; ಇವರ ಆಣತಿಯಂತೇ ಆಡಳಿತ ನಡೆದಿದೆ. ಆ ಸಮಯದಲ್ಲಿ ಇವರುಗಳ ವರ್ಗವೆಲ್ಲಾ ಸವಲತ್ತಿನಿಂದ ಸಂತೃಪ್ತವಾಗಿದೆ. ಆದಕಾರಣ ವಿರೋಧ ವ್ಯಕ್ತವಾಗಿದೆ; ಟಿಪ್ಪು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬ್ರಾಹ್ಮಣರು ಏನು ಮಾಡಿದರು, ಎಷ್ಟು ಜಹಗೀರಿಗಳನ್ನು ಪಡೆದು ಆ ಭೂಮಿಯಲ್ಲಿ ಒಕ್ಕಲಿಗರಿಗೆ ಬೇಸಾಯ ಮಾಡಲು ಬಿಟ್ಟು ಗರ್ಭಗುಡಿಯಲ್ಲಿ ತಾವು ಆರಾಮವಾಗಿದ್ದು ಅವಸಾನ ಹೊಂದಿದರು ಎಂಬ ಸಂಗತಿ ಉರಿಗೌಡ ನಂಜೇಗೌಡರ ಸಂಗತಿಯೊಂದಿಗೆ ಈಚೆಬರಬೇಕಾಗಿದೆಯೆಲ್ಲಾ, ಥೂತ್ತೇರಿ.

****

ಈ ಜಗತ್ತಿಗೆ ಶ್ರೇಷ್ಠ ರಾಜಕೀಯ ವ್ಯವಸ್ಥೆ ಎಂದರೆ ಅದು ಪ್ರಜಾತಂತ್ರ. ಇಂತಹ ವ್ಯವಸ್ಥೆಯನ್ನು ದುರುಳವಾಗಿ ಬಳಸಿಕೊಂಡ ಬಿಜೆಪಿಗಳು ಏನೆಲ್ಲಾ ಅನಾಹುತ ಸಾಧ್ಯವೊ ಅದನ್ನೆಲ್ಲಾ ಮಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದುಬಂದು ತಮ್ಮ ಅಜೆಂಡಾಗಳನ್ನು ಕೈಗೆತ್ತಿಕೊಂಡರು. ಆರಂಭವೇ ರಥಯಾತ್ರೆ, ಇದು ಮುಗಿದನಂತರ ರಾಮಜ್ಯೋತಿ ಪಾದುಕೆ ಮತ್ತು ಇಟ್ಟಿಗೆ ಯಾತ್ರೆ ನಂತರ ಬಾಬರಿ ಮಸೀದಿಯನ್ನು ಕೆಡವಲಾಯ್ತು. ಅಲ್ಲಿಗೆ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ಕೆಡವಿ ಕೋಮುಘರ್ಷಣೆಯನ್ನು ದೊಡ್ಡಮಟ್ಟದಲ್ಲಿ ಉದ್ಘಾಟಿಸಲಾಯ್ತು. ಅಂದಿನಿಂದ ನಿರಂತರವಾಗಿ ಮತೀಯ ಘರ್ಷಣೆ ನಡೆಸುತ್ತ, ಪ್ರಜಾತಂತ್ರ ಬಳಸಿಕೊಂಡು ಗೆದ್ದು ಬಂದು, ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಹೇಳಿದ ಸಂಸದನ ವಿರುದ್ಧ ಮೋದಿ ಮಾತನಾಡಲಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಹಾಳುಮಾಡಿ ನ್ಯಾಯಾಂಗ ವ್ಯವಸ್ಥೆಯನ್ನು ಶಿಥಿಲಗೊಳಿಸಿ ದೇಶಕ್ಕೆ ಗಂಡಾಂತರ ತಂದಿರುವಾಗ ಆ ಬಗ್ಗೆ ಮಾತನಾಡಿದ ರಾಹುಲಗಾಂಧಿಗೇ ಪ್ರಜಾತಂತ್ರದಿಂದ ತೊಂದರೆಯಾಗಿದೆ ಎನ್ನುವ ಮೋದಿಯವರು ಪ್ರಜಾತಂತ್ರದ ಬುಡಕ್ಕೆ ಕೊಡಲಿ ಏಟು ಕೊಡುತ್ತ ಬಂದಿರುವುದು ಅರಿವಿಗೇ ಬಂದಿಲ್ಲವಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...