Homeಅಂಕಣಗಳುಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

- Advertisement -
- Advertisement -

ಹಸಿರುಮಯವಾಗಿದ್ದ ಮಂಡ್ಯವನ್ನು ಕೇಸರಿಮಯವಾಗಿಸಲು ಪಣತೊಟ್ಟ ಬಿಜೆಪಿಗಳು ಪ್ರಧಾನಿಯವರ ರೋಡ್ ಶೋ ಏರ್ಪಡಿಸಿದ್ದ ಫಲವಾಗಿ ಮೋದಿ ಕೈ ಬೀಸಲು ಅಡ್ಡಿಯಾಗಿದ್ದ ಮರದ ರೆಂಬೆಕೊಂಬೆಗಳನ್ನೆಲ್ಲಾ ಕಡಿದು, ರಸ್ತೆಯ ಮಾರ್ಗವನ್ನು ಬದಲಿಸಿ ಅಂತೂ ಮಂಡ್ಯಕ್ಕೆ ಮೋದಿ ಕರೆತಂದು ಫೈಟರ್ ರವಿಯನ್ನ ಪರಿಚಯಿಸಿದವಲ್ಲಾ. ಮಂಡ್ಯ ಧೀಮಂತ ರಾಜಕಾರಣಿಗಳಿಗೆ ಹೆಸರಾದ ಜಿಲ್ಲೆ. ಅಲ್ಲಿನ ರಾಜಕಾರಣದ ಇತಿಹಾಸ ನೋಡಿದರೆ ಇಲ್ಲಿನ ಪ್ರಾಮಾಣಿಕ ಮತದಾರರ ಮೆಚ್ಚಿನ ಜನ ನಾಯಕರ ಇತಿಹಾಸವೇ ಇದೆ. ಅವರ ಸಂತತಿಗಳು ಕೂಡ ಇನ್ನೂ ಇವೆ. ಅವರನ್ನೆಲ್ಲಾ ಬಿಟ್ಟು ಈ ಬಿಜೆಪಿಗಳು ಫೈಟರ್ ರವಿ ಎಂಬ ವ್ಯಕ್ತಿಯನ್ನು ಪರಿಚಯಿಸಿದಾಗ ಮೋದಿಯವರಿಗೆ ಅಮಿತ್‌ಶಾ ದರ್ಶನ ಮಾಡಿದಂತಾಗಿ ಕೈ ಮುಗಿದು ಮುಗುಳುನಕ್ಕಿದ್ದಾರಲ್ಲಾ. ಇದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ. ಬೆಂಗಳೂರು ಠಾಣೆಗಳಲ್ಲಿ ಕೇಸುಗಳಿರುವ ವ್ಯಕ್ತಿಯೊಬ್ಬ ಜಾದೂ ಮಾಡಿದಂತೆ ಧನಕನಕ ಸಂಗ್ರಹಿಸಿಕೊಂಡು ಒಂದು ಓಟಿಗೆ ಇಂತಿಷ್ಟು ಸಾವಿರ ಕೊಡುತ್ತೇನೆಂದು ಘೋಷಣೆ ಮಾಡಿಕೊಂಡು ತಿರುಗುತ್ತಿರುವಾಗ, ಆತ ಬಿಜೆಪಿಗಳಿಗೆ ಗಣ್ಯನಾಗಿ ಕಂಡಿದ್ದೂ ಅಲ್ಲದೆ, ಆತ ಪ್ರಧಾನ ಮಂತ್ರಿ ಭೇಟಿಮಾಡಲೇಬೇಕಾದ ವ್ಯಕ್ತಿಯೆಂದು ಭಾವಿಸಿದ ಈ ಬಿಜೆಪಿಗಳು ಮುಟ್ಟಿರುವ ಪಾತಾಳ ಎದ್ದು ಬರಲಾರದಂತಹುದಂತಲ್ಲಾ, ಥೂತ್ತೇರಿ.

*****

ಮಂಡ್ಯದಲ್ಲಿ ಫೈಟರ್ ರವಿಯ ಜೊತೆಗೆ ಮತ್ತೊಬ್ಬ ಧೀಮಂತ ಮಹಿಳೆ ಸುಮಲತಾ ತಾನು ಈವರೆಗೆ ಹಸುವಿನಂತಿದ್ದೆ, ನನಗೆ ಆನೆ ಬಲ ಬರಬೇಕಾದರೆ ಬಿಜೆಪಿಗೆ ಸೇರಲೇಬೇಕೆಂದು ಹಠತೊಟ್ಟು ಮೋದಿ ಸಮ್ಮುಖದಲ್ಲೇ ಬಿಜೆಪಿಗಿ ನುಗ್ಗಿದ್ದಾರಲ್ಲಾ. ಸುಮಲತಾ ಚುನಾವಣೆಗೆ ನಿಂತಾಗ ನಾಗಮಂಗಲದ ಮಾಜಿ ಶಾಸಕ ಮತ್ತು ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ತನ್ನದೇ ಶೈಲಿಯಲ್ಲಿ ಸುಮಲತಾರನ್ನು ಜರಿದಿದ್ದರು. ಆಗ ಇಡೀ ನಾಡಿನ ತುಂಬ ಪ್ರತಿಭಟನೆಗಳಾಗಿದ್ದವು. ಶಿವರಾಮೇಗೌಡರ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. ಆದರೆ ಈಗ ಸುಮಲತಾ ದಿಢೀರನೆ ಬಿಜೆಪಿಗೆ ಬೆಂಬಲ ಘೋಷಿಸಿ ಅಸಂಬದ್ಧವಾಗಿ ಮಾತನಾಡುವ ಶಿವರಾಮೇಗೌಡನ ಮಾತನ್ನೇ ಮರೆಸುವಂತೆ ಮುನ್ನುಗ್ಗುತ್ತಿದ್ದಾರಲ್ಲಾ. ಅಂದು ಜೆಡಿಎಸ್ ಲೀಡರುಗಳನ್ನು ಮೆಚ್ಚಿಸಲೋಸ್ಕರ ಅಸಂಬದ್ಧ ಮಾತನಾಡಿದ್ದ ಶಿವರಾಮೇಗೌಡ ಇಂದು ಜೆಡಿಎಸ್‌ನಿಂದಲೀ ಉಚ್ಛಾಟನೆಗೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವಾಗಲೇ, ಫೈಟರ್ ರವಿ ನಾಗಮಂಗಲಕ್ಕೆ ಕೋಟಿಗೂ ಹೆಚ್ಚು ಖರ್ಚು ಮಾಡಿ ಪ್ರಧಾನಿಯಿಂದಲೇ ಕೈ ಮುಗಿಸಿಕೊಂಡು ಭೇಷ್ ಎನ್ನಿಸಿಕೊಳ್ಳುವಾಗ, ಸುಮಲತಾ ಕೂಡ ಬಿಜೆಪಿ ಸೇರಿದ್ದು (ಬಾಹ್ಯ ಬೆಂಬಲವೆಂಬ ನಾಟಕದೊಂದಿದೆಗೆ) ಈಗ ಎಲ್ಲಿಗೆ ಹೋಗಲಿ ಎಂಬ ಸ್ಥಿತಿಯನ್ನು ಶಿವರಾಮೇಗೌಡ ಎದುರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಈಗ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಕಳೆದ ಬಾರಿ ಎದುರಿಸಿದ್ದ ಚುನಾವಣೆಯನ್ನು ಪ್ರಪಂಚದಲ್ಲೆಲ್ಲಾ ಹರಡಿರುವ ಅಂಬರೀಶ್ ಅಭಿಮಾನಿಗಳು ಕುತೂಹಲದಿಂದ ನೋಡಿದ್ದರು. ಅದೂಅಲ್ಲದೆ ದುಬೈನ ಬುರ್ಜು ಖಲೀಫದ ಕಟ್ಟಡದಲ್ಲಿ ಕುಳಿತ ಅದರ ಮಾಲೀಕರೂ ಕೂಡ ವೀಕ್ಷಿಸಿದ್ದರು. ಏಕೆಂದರೆ ಅವರೆಲ್ಲಾ ಅಂಬರೀಶ್ ಗೆಳೆಯರಾಗಿದ್ದರು. ಅದೂಅಲ್ಲದೆ ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಕೂಡ ತನ್ನ ಗೆಳೆಯನ ಪತ್ನಿ ಗೆಲ್ಲಲೆಂದು ಪ್ರಾರ್ಥಿಸಿದ್ದರು. ಅಂತೂ ಸುಮಲತಾ ಗೆದ್ದರು. ಆ ಗೆಲುವಿನಲ್ಲೂ ಕೆಲವು ದಾಖಲೆಗಳಿದ್ದವು. ಅವರ ಬೆನ್ನಿಗೆ ರೈತಸಂಘ, ಕಾಂಗ್ರೆಸ್ಸು, ಕೆಲ ಬಿಜೆಪಿಗಳೂ ನಿಂತಿದ್ದವು. ಆದ್ದರಿಂದ ಒಂದು ಲಕ್ಷದ ಇಪ್ಪತೈದು ಸಾವಿರ ಲೀಡಿನಲ್ಲಿ ಗೆದ್ದಿದ್ದರು. ಇದನ್ನೆಲ್ಲ ದಾಟಿದ ಸುಮಲತಾ ಬಿಜೆಪಿಗೆ ನೆಗೆದದ್ದು ಈ ಶತಮಾನದ ದ್ರೋಹ ಎಂದು ಮಂಡ್ಯದ ಸ್ವಾಭಿಮಾನಿಗಳು ಹೇಳುತ್ತಿದ್ದಾರಲ್ಲಾ. ಇದೆಲ್ಲಕ್ಕಿಂತ ಮಂಡ್ಯದವರು ಬೆಚ್ಚಿರುವುದೇಕೆಂದರೆ ಅಂದು ಸೆರಗೊಡ್ಡಿ ಮತ ಕೇಳಿದ್ದ ಈಕೆಯ ನಟನೆ ನಮಗೆ ಗೊತ್ತೇ ಆಗಲಿಲ್ಲ ಎಂದ ರೋಷಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಪ್ರಧಾನಿ ಭೇಟಿಯಿಂದ ಮಂಡ್ಯ ಸುಸ್ತು ಹೊಡೆದು ಕುಳಿತಿದೆಯಲ್ಲಾ. ಏಕೆಂದರೆ ಇಡೀ ಸರಕಾರಿ ಯಂತ್ರಾಂಗವನ್ನೇ ಬಳಸಿಕೊಂಡು ಅದ್ದೂರಿಯಾಗಿ ಪ್ರಧಾನಿಯ ಪ್ರವಾಸವನ್ನು ಮಾಡಿ ಮುಗಿಸಿದ ಬಿಜೆಪಿಯ ಸಾಧನೆ ನೋಡಿದರೆ, ಪ್ರಧಾನಿಗಳು ಫೈಟರ್ ರವಿಗೆ ಕೈ ಮುಗಿದದ್ದು ಮತ್ತು ಸುಮಲತಾರನ್ನು ಪಾರ್ಟಿಗೆ ಸೇರಿಸಿಕೊಂಡಿದ್ದೇ ಬಹುದೊಡ್ಡ ಸಾಧನೆಯಾಗಿ ಕಾಣತೊಡಗಿದೆಯಲ್ಲಾ. ಒಂದೊಂದು ತಾಲೂಕಿನಿಂದ ತಲಾ ಎಪ್ಪತ್ತು ಬಸ್ಸು ಜನ ತುಂಬಿಕೊಂಡು ಬಂದವು. ಅದರಲ್ಲಿ 50 ಜನರಿದ್ದು ತಲಾ ಮುನ್ನೂರು ಬಟವಾಡೆಯಾಗಿ ಕೊಟ್ಟರಂತಲ್ಲಾ. ಹಣ ಮತ್ತು ಬಂದ ಜನರ ದಾಖಲೆ ಎಲ್ಲ ಸರಿಯಾಗಿರಬೇಕು ಎಂದು ಹಿಂದೆಂದು ಕಾಣದ ಶಿಸ್ತಿನಿಂದ ನಡೆದುಹೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನ ಚಲುವರಾಯಸ್ವಾಮಿ ನಡೆಸುವ ಸಭೆಗೆ ಮತ್ತು ಶಿವರಾಮೇಗೌಡ ಹಾಗೂ ಇನ್ನಿತರ ಸಭೆಗೂ ಹೋಗುತ್ತ ನಾವು ಕೂಲಿಗೆ ಹೋದರೆ ಐದುನೂರು ಕೊಡುತ್ತಾರೆ ಈ ಮುನ್ನೂರು ಸಾಲುವುದಿಲ್ಲ ಇನ್ನ ಮುಂದೆ ಐನೂರರ ಜೊತೆಗೆ ಒಂದು ಪ್ಯಾಕೆಟ್ ಬಿರಿಯಾನಿ ಮತ್ತು ಒಂದು ಕ್ವಾಟರ್ ಕೊಡುವುದಿದ್ದರೆ ಮನೆ ಹತ್ತಿರ ಬನ್ನಿ ಎನ್ನವಂತಾಗಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...