Homeಚಳವಳಿಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. - ಕರ್ನಾಟಕ ಜನಶಕ್ತಿ ಸಮ್ಮೇಳನದಲ್ಲಿ ರಹಮತ್ ತರೀಕೆರೆಯವರ ಮಾತುಗಳು

- Advertisement -
- Advertisement -

ಈ ಕಾರ್ಯಕ್ರಮವನ್ನು ತೀಸ್ತಾ ಸೆಟಲ್ವಾಡ್‌ರವರು ಉದ್ಘಾಟಿಸಬೇಕಾಗಿತ್ತು. ಆದರೆ ಅವರನ್ನು ಬಂಧಿಸಲಾಗಿದೆ.  ತೀಸ್ತಾರವರು ನಮ್ಮೊಡನೆ ಇಂದು ಇಲ್ಲದಿದ್ದರೂ ಸಹ ಅವರ ಚಿಂತನೆಗಳು ನಮ್ಮ ಜೊತೆ ಇವೆ. ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. ಅವರು ಬಹಳ ಬೇಗ ಬಿಡುಗಡೆಯಾಗಿ ಜನರ ನಡುವೆ ಬರಲಿ ಎಂದು ಹಾರೈಸುತ್ತೇನೆ ಎಂದು ರಹಮತ್ ತರೀಕೆರೆ ತಿಳಿಸಿದರು.

ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಆರಂಭಗೊಂಡ ಕರ್ನಾಟಕ ಜನಶಕ್ತಿ ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಂಡಿತ ತಾರನಾಥರು ಕೆಲಸ ಮಾಡಿದ ಕರ್ಮಭೂಮಿ ಇದು. ಅವರು 1921ರಲ್ಲಿ ನದಿ ತೀರದ ಈ ಪ್ರದೇಶದಲ್ಲಿ ಪ್ರೇಮಾಯತನ ಎಂಬ ಆಶ್ರಮವನ್ನು, ಹಮ್‌ದರ್ದ್‌ (ಹಮ್‌ದರ್ದ್‌ ಎಂದರೆ ಬುದ್ಧನ ಮೈತ್ರಿ ಮತ್ತು ಅಂತಃಕರಣದ ಸಂಕೇತ) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರು ಬ್ರೀಟಿಷರ ಮತ್ತು ನಿಜಾಮರ ವಿರುದ್ಧ ಹೋರಾಡಿದ್ದ ಹೋರಾಟಗಾರರಾಗಿದ್ದರು ಎಂದರು.

ಒಬ್ಬ ವೈದ್ಯರಾಗಿ ಅವರು ತಮ್ಮ ಆಶ್ರಮಕ್ಕೆ ಎಲ್ಲಾ ಧರ್ಮದ, ಜಾತೀಯ ಜನರನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಸಂಗೀತವನ್ನು ಕಲಿಸುತ್ತಿದ್ದರು, ಯೋಗವನ್ನು ಮತ್ತು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಕಲಿಸುತ್ತಿದ್ದರು. ಸ್ವತಃ ಅಂತರ್ಜಾತಿ ವಿವಾಹವಾಗಿದ್ದರು. ಅವರ ಶಿಷ್ಯರಲ್ಲಿ ಎಲ್ಲ ಧರ್ಮದವರು ಇದ್ದರು ಎಂದರು. ಅವರು ಪ್ರೇಮ ಎನ್ನುವ ಪತ್ರಿಕೆ ನಡೆಸುತ್ತಿದ್ದರು. ಅಂತಹ ಪ್ರಯೋಗ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಮುಖ್ಯ ಎಂದರು.

ಅಪರಾಧಿಗಳು ಇರಬೇಕಿದ್ದ ಸೆರಮನೆಗಳಲ್ಲಿ ಅಪರಾಧದ ವಿರುದ್ಧ ಹೋರಾಡುವವರನ್ನು ತುಂಬಲಾಗುತ್ತಿದೆ. ಇದು ಭಾರತದ ದೊಡ್ಡ ವೈರುದ್ಯವಾಗಿದೆ. ಪತ್ರಕರ್ತರು, ಕಾರ್ಯಕರ್ತರು, ಸ್ಟ್ಯಾಂಡಪ್‌ ಕಾಮಿಡಿಗಳು, ಬುದ್ದಿಜೀವಿಗಳು-ವಿದ್ವಾಂಸರನ್ನು ಜೈಲಿಗೆ ಹಾಕಲಾಗುತ್ತಿದೆ. ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿರುವ ವಿಚಿತ್ರ ಕಾಲಘಟ್ಟದಲ್ಲಿದ್ದೇವೆ ಎಂದು ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಕಲ್ಬುರ್ಗಿಯಂತಹ ದೊಡ್ಡ ವಿದ್ವಾಂಸವನ್ನು ಕಲ್ಯಾಣ ನಗರದಲ್ಲಿ ನಾವು ಕಳೆದುಕೊಂಡಿದ್ದೇವೆ. ಕಲ್ಯಾಣ ಎಂಬುದು ಕನ್ನಡಿಗರ ಸ್ವಪ್ನ. ಬಸವಣ್ಣನವರ ಆಶಯ. ಅಲ್ಲಿ ಕಲ್ಬುರ್ಗಿಯವರ ಧಾರುಣ ಹತ್ಯೆಯಾಗಿ ನೆತ್ತರು ಹರಿಯಿತು. ಇದು ಕರ್ನಾಟಕ ಹಿಂಸಾತ್ಮಕ ಪ್ರದೇಶವಾಗಿ ಭಿನ್ನಮತದವರನ್ನು ಕೊಲ್ಲುತ್ತೇವೆ ಎನ್ನುವ ವಿಷಾಧಕರ ಕಾಲಘಟ್ಟದಲ್ಲಿದ್ದೇವೆ. ಆನಂತರ ನಾವು ಗೌರಿಯನ್ನು ಕಳೆದುಕೊಂಡೆವು. ಪ್ರಭುತ್ವ ಮಾಡುತ್ತಿರುವ ಕೊಲೆ, ಹಲ್ಲೆ, ಜೈಲು ಇತ್ಯಾದಿಗಳಿಗೆ ಕೆಲವು ಮಾಧ್ಯಮಗಳು ಬೆಂಬಲಿಸುತ್ತಿವೆ ಮತ್ತು ಸಂಭ್ರಮಿಸುತ್ತಿದೆ ಎಂಬುದು ಶೋಚನೀಯ ಸಂಗತಿ. ತಮ್ಮ ವೃತ್ತಿ ಬಾಂಧವರು ಹಲ್ಲೆಗೆ ಒಳಗಾಗುತ್ತಿದ್ದರೆ, ಬರಹಗಾರರು, ಪತ್ರಕರ್ತರು ಗಾಬರಿಗೊಳ್ಳಬೇಕು. ವಿಷಾಧ, ಆಘಾತಕ್ಕೆ ಒಳಗಾಗಬೇಕು. ಆದರೆ ಒಂದು ವರ್ಗದ ಮಾಧ್ಯಮ ಇದನ್ನು ಸಂಭ್ರಮಿಸುತ್ತಿದೆ. ಬಸವಣ್ಣನವರು ಹೇಳಿದಂತೆ ತಾಯಿಯ ಮೊಲೆ ಹಾಲು ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವುದು? ಎಂಬ ಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾ ಸ್ವಾತಂತ್ರ್ಯ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿರುವ 5 ದೇಶಗಳಲ್ಲಿ ಭಾರತ ಒಂದಾಗಿದೆ. ಹೀಗಲಾದರೂ ಮಾಧ್ಯಮ ನನ್ನ ನೈತಿಕ ಹೊಣೆಗಾರಿಕೆಯನ್ನು ತೋರಿದರೆ ಈ ಪರಿಸ್ಥಿತಿ ಬದಲಾಗಬಹುದು. ತೀಸ್ತಾ ಪತ್ರಕರ್ತ, ವಕೀಲೆ, ಅವರ ಮುತ್ತಾತ ಅಟಾರ್ನಿ ಜನರಲ್ ಆಗಿ ಜನರಲ್ ಡಯರ್‌ ಅವರ ವಿಚಾರಣೆ ಮಾಡಿದ ಹಿನ್ನಲೆಯುಳ್ಳವರು. ತೀಸ್ತಾ ಸೆರೆಮನೆಯಲ್ಲಿರುವುದು ಇದು ಭಾರತದ ಆತ್ಮಸಾಕ್ಷಿಯ ಸಾವು, ಪ್ರಭುತ್ವದ ಕ್ರೌರ್ಯ ಎಂದರು.

ನಾವು ಇಂದು ಎರಡು ಭಾರತದ ಕಲ್ಪನೆಗಳನ್ನು ಮುಖಾಮುಖಿ ಮಾಡಲಾಗುತ್ತಿದೆ. ಒಂದು ದ್ವೇಷದ ಮೂಲಕ ದೇಶ ಕಟ್ಟಬಹುದು, ಇನ್ನೊಂದು ಪ್ರೇಮದ ಮೂಲಕ ದೇಶವನ್ನು ಕಟ್ಟಬಹುದು ಎಂಬು ಎರಡು ಸಿದ್ದಾಂತಗಳನ್ನು ಮುಖಾಮುಖಿಯಾಗುತ್ತಿದ್ದೇವೆ. ಬಾಬ್ರಿ ಮಸೀದಿ ಕೆಡವಿ 30 ವರ್ಷ ಆಗಿದೆ. ಈ 30 ವರ್ಷಗಳಲ್ಲಿ ಧಾರ್ಮಿಕವಾದ, ದ್ವೇ‍ಷ, ಅಸೂಹೆ, ಹಿಂಸೆಗಳಿಲ್ಲದಿದ್ದರೆ ಭಾರತ ಆರ್ಥಿಕವಾಗಿ 10 ಗಾವುದ ಮೇಲೆ ಹೋಗುತ್ತಿತ್ತು. ನಾವೆಲ್ಲವರು ಮನಗಂಡು ಪ್ರಭುತ್ವಕ್ಕೆ ಮನಗಾಣಿಸಬೇಕಾದ ಸಂಗತಿಯೆಂದರೆ ಸಾಮಾಜಿಕ ಸಂಬಂಧಗಳು, ಧಾರ್ಮಿಕ ಸಂಬಂಧಗಳು ಸರಿ ಇಲ್ಲದೆ ದೇಶ ಮುಂದಕ್ಕೆ  ಹೋಗಲು ಸಾಧ್ಯವಿಲ್ಲ. ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂಬ ಸವಾಲನ್ನು ಎದುರಿಸಬೇಕಾಗಿದೆ. ಪ್ರೇಮದ ಭಾರತವನ್ನು ನಾವು ಕಟ್ಟುವ ಕನಸು ಕಾಣಬೇಕಿದೆ.

ಟಿವಿ ಚಾನೆಗಳು ಗುಂಡಿಟ್ಟು ಸಾಯಿಸಬೇಕು ಎಂಬುದನ್ನು ತಲೆಬರೆಹ ಹಾಕಬೇಕು ಎನ್ನವುದು ಏನನ್ನೂ ಸೂಚಿಸುತ್ತಿದೆ?  ‘ಬೆಂಕಿ ಹಚ್ಚುತ್ತೇವೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಿದ್ದೇವೆ. ಗುಂಡು ಹೊಡೆಯುತ್ತೇವೆ, ಕಡಿಯುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರಕಾರ ಜನಪ್ರತಿನಿಧಿಗಳಾದವರು ಈ ಮಾತುಗಳನ್ನು ಹೇಳುತ್ತಿದ್ದಾರೆ. ಗೂಂಡಗಳು ಈ ಮಾತುಗಳನ್ನು ಹೇಳುತ್ತಿದ್ದಾರೆ. ಯಾವ ಧರ್ಮದವರೂ ಈ ಮಾತು ಹೇಳಿದರೂ ಅವು ನೀಚತನದ ಮಾತುಹಳು. ಇದರಿಂದ ರಾಜಕೀಯ ಪಕ್ಷಗಳಿಗೆ ಲಾಭ ಹೊರತು, ಭಾರತಕ್ಕೆ ಅಲ್ಲ ಎಂದರು.

200 ವರ್ಷದ ಗುಲಾಮಗಿರಿ ವಿರುದ್ಧ ಹೋರಾಡಿ ವಿಮುಕ್ತಿ ಪಡೆದ ದೇಶದಲ್ಲಿ ಈಗ ತಮ್ಮ ಜೊತೆಗೆ ಬದುಕಬೇಕಾದ ಸಹವಾಸಿಗಳ ಭಿನ್ನಮತವನ್ನು ಹಲ್ಲೆ-ಕೊಲೆ ಮೂಲಕ ತೀರಿಸುವುದರಿಂದ ಭಾರತವನ್ನು ಕಟ್ಟಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸಮಾಜ ಸುಧಾಕರ ಪಠ್ಯನ್ನು ಬಿಡಲಾಗುತ್ತಿದೆ. ಬ್ರಾಹ್ಮಣವಾದಿ, ಮತೀಯವಾದಿ ಸಿದ್ಧಾಂತವನ್ನು ಸೇರಿಸಲಾಗುತ್ತದೆ. ನಮ್ಮ ಮಕ್ಕಳು ಇಂತಹ ಪಠ್ಯಗಳನ್ನು ಓದಿ ಕೂಡಿ ಕಟ್ಟುವ ಭಾರತವನ್ನು ಕಟ್ಟಲಾಗದು. ನಂಜಿನ ಭಾರತ ನಮ್ಮದ್ದಲ್ಲ. ಕೂಡು ಹೋರಾಟ ಪರಿಕಲ್ಪನೆಯನ್ನು ನಾವು ಮಂಡಿಸಬೇಕಾಗಿದೆ. ಜನರ ಕಡೆ ಹೋಗಬೇಕಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ವಿರೋಧಿ ಹೋರಾಟವೂ ಆಶಾಭಾವನೆಯನ್ನು ಮೂಡಿಸಿದೆ. ಅದು ಎಲ್ಲ ಮಹನೀಯರ ಚಿಂತನೆಯನ್ನು ಒಳಗೊಂಡಿತ್ತು. ನಮ್ಮ ಸೂಫಿಗಳು, ಶರಣರು, ದಾಸರು ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ ಸಮತಳರವರು ಮಾತನಾಡಿ, “ಇಂದು ಭಾರತದ ತುಂಬಾ ಕಾರ್ಮೊಡ ಕವಿದಿದೆ. ವಾಕ್‌ ಸ್ವಾತಂತ್ರ್ಯ ಕುಸಿದು ಬಿದ್ದಿದೆ. ಹೋರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯ ಭಾರತದ ಆಶಯ ಮಣ್ಣುಗೂಡುತ್ತಿದೆ. ಈ ದೇಶವನ್ನು ಬದಲಾವಣೆ ಮಾಡಲು ಎಲ್ಲರೂ ಕೂಡಿ ಮುನ್ನಡೆಯುವುದು ತುಂಬಾ ಅಗತ್ಯವಾಗಿದೆ. ದೆಹಲಿ ಹೋರಾಟ ನಮಗೆ ಹೊಸ ದಾರಿಯನ್ನು ತೋರಿದೆ. ತೀಸ್ತಾ ಜೈಲಿನಲ್ಲಿದ್ದಾರೆ. ನಾವು ಮುಂದೊಂದು ದಿನ ಜೈಲಿಗೆ ಹೋಗಬಹುದು. ಕಾನೂನುಗಳನ್ನು ಆ ನಿಟ್ಟಿನಲ್ಲಿ ರೂಪಿಸಲಾಗಿದೆ. ಈ ಕುರಿತು ಚಿಂತನೆ ನೀಡುವ ಪ್ರಯತ್ನವಾಗಿ ಈ ಸಮ್ಮೇಳನ ನಡೆಯುತ್ತಿದೆ. ಹೊಸ ದಾರಿಯನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಧಿಸಲ್ಪಟ್ಟಿರುವ ಪತ್ರಕರ್ತ ಮೊಹಮ್ಮದ್ ಜುಬೇರ್, ತೀಸ್ತಾ ಸೆಟಲ್ವಾಡ್, ಮತ್ತು ಶ್ರೀಕುಮಾರ್‌ರವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ಕಮ್ಯೂನಿಸ್ಟ್ ರು ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

  2. ನೀವು ಈ ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...