Homeಚಳವಳಿಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. - ಕರ್ನಾಟಕ ಜನಶಕ್ತಿ ಸಮ್ಮೇಳನದಲ್ಲಿ ರಹಮತ್ ತರೀಕೆರೆಯವರ ಮಾತುಗಳು

- Advertisement -
- Advertisement -

ಈ ಕಾರ್ಯಕ್ರಮವನ್ನು ತೀಸ್ತಾ ಸೆಟಲ್ವಾಡ್‌ರವರು ಉದ್ಘಾಟಿಸಬೇಕಾಗಿತ್ತು. ಆದರೆ ಅವರನ್ನು ಬಂಧಿಸಲಾಗಿದೆ.  ತೀಸ್ತಾರವರು ನಮ್ಮೊಡನೆ ಇಂದು ಇಲ್ಲದಿದ್ದರೂ ಸಹ ಅವರ ಚಿಂತನೆಗಳು ನಮ್ಮ ಜೊತೆ ಇವೆ. ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. ಅವರು ಬಹಳ ಬೇಗ ಬಿಡುಗಡೆಯಾಗಿ ಜನರ ನಡುವೆ ಬರಲಿ ಎಂದು ಹಾರೈಸುತ್ತೇನೆ ಎಂದು ರಹಮತ್ ತರೀಕೆರೆ ತಿಳಿಸಿದರು.

ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಆರಂಭಗೊಂಡ ಕರ್ನಾಟಕ ಜನಶಕ್ತಿ ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಂಡಿತ ತಾರನಾಥರು ಕೆಲಸ ಮಾಡಿದ ಕರ್ಮಭೂಮಿ ಇದು. ಅವರು 1921ರಲ್ಲಿ ನದಿ ತೀರದ ಈ ಪ್ರದೇಶದಲ್ಲಿ ಪ್ರೇಮಾಯತನ ಎಂಬ ಆಶ್ರಮವನ್ನು, ಹಮ್‌ದರ್ದ್‌ (ಹಮ್‌ದರ್ದ್‌ ಎಂದರೆ ಬುದ್ಧನ ಮೈತ್ರಿ ಮತ್ತು ಅಂತಃಕರಣದ ಸಂಕೇತ) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರು ಬ್ರೀಟಿಷರ ಮತ್ತು ನಿಜಾಮರ ವಿರುದ್ಧ ಹೋರಾಡಿದ್ದ ಹೋರಾಟಗಾರರಾಗಿದ್ದರು ಎಂದರು.

ಒಬ್ಬ ವೈದ್ಯರಾಗಿ ಅವರು ತಮ್ಮ ಆಶ್ರಮಕ್ಕೆ ಎಲ್ಲಾ ಧರ್ಮದ, ಜಾತೀಯ ಜನರನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಸಂಗೀತವನ್ನು ಕಲಿಸುತ್ತಿದ್ದರು, ಯೋಗವನ್ನು ಮತ್ತು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಕಲಿಸುತ್ತಿದ್ದರು. ಸ್ವತಃ ಅಂತರ್ಜಾತಿ ವಿವಾಹವಾಗಿದ್ದರು. ಅವರ ಶಿಷ್ಯರಲ್ಲಿ ಎಲ್ಲ ಧರ್ಮದವರು ಇದ್ದರು ಎಂದರು. ಅವರು ಪ್ರೇಮ ಎನ್ನುವ ಪತ್ರಿಕೆ ನಡೆಸುತ್ತಿದ್ದರು. ಅಂತಹ ಪ್ರಯೋಗ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಮುಖ್ಯ ಎಂದರು.

ಅಪರಾಧಿಗಳು ಇರಬೇಕಿದ್ದ ಸೆರಮನೆಗಳಲ್ಲಿ ಅಪರಾಧದ ವಿರುದ್ಧ ಹೋರಾಡುವವರನ್ನು ತುಂಬಲಾಗುತ್ತಿದೆ. ಇದು ಭಾರತದ ದೊಡ್ಡ ವೈರುದ್ಯವಾಗಿದೆ. ಪತ್ರಕರ್ತರು, ಕಾರ್ಯಕರ್ತರು, ಸ್ಟ್ಯಾಂಡಪ್‌ ಕಾಮಿಡಿಗಳು, ಬುದ್ದಿಜೀವಿಗಳು-ವಿದ್ವಾಂಸರನ್ನು ಜೈಲಿಗೆ ಹಾಕಲಾಗುತ್ತಿದೆ. ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿರುವ ವಿಚಿತ್ರ ಕಾಲಘಟ್ಟದಲ್ಲಿದ್ದೇವೆ ಎಂದು ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಕಲ್ಬುರ್ಗಿಯಂತಹ ದೊಡ್ಡ ವಿದ್ವಾಂಸವನ್ನು ಕಲ್ಯಾಣ ನಗರದಲ್ಲಿ ನಾವು ಕಳೆದುಕೊಂಡಿದ್ದೇವೆ. ಕಲ್ಯಾಣ ಎಂಬುದು ಕನ್ನಡಿಗರ ಸ್ವಪ್ನ. ಬಸವಣ್ಣನವರ ಆಶಯ. ಅಲ್ಲಿ ಕಲ್ಬುರ್ಗಿಯವರ ಧಾರುಣ ಹತ್ಯೆಯಾಗಿ ನೆತ್ತರು ಹರಿಯಿತು. ಇದು ಕರ್ನಾಟಕ ಹಿಂಸಾತ್ಮಕ ಪ್ರದೇಶವಾಗಿ ಭಿನ್ನಮತದವರನ್ನು ಕೊಲ್ಲುತ್ತೇವೆ ಎನ್ನುವ ವಿಷಾಧಕರ ಕಾಲಘಟ್ಟದಲ್ಲಿದ್ದೇವೆ. ಆನಂತರ ನಾವು ಗೌರಿಯನ್ನು ಕಳೆದುಕೊಂಡೆವು. ಪ್ರಭುತ್ವ ಮಾಡುತ್ತಿರುವ ಕೊಲೆ, ಹಲ್ಲೆ, ಜೈಲು ಇತ್ಯಾದಿಗಳಿಗೆ ಕೆಲವು ಮಾಧ್ಯಮಗಳು ಬೆಂಬಲಿಸುತ್ತಿವೆ ಮತ್ತು ಸಂಭ್ರಮಿಸುತ್ತಿದೆ ಎಂಬುದು ಶೋಚನೀಯ ಸಂಗತಿ. ತಮ್ಮ ವೃತ್ತಿ ಬಾಂಧವರು ಹಲ್ಲೆಗೆ ಒಳಗಾಗುತ್ತಿದ್ದರೆ, ಬರಹಗಾರರು, ಪತ್ರಕರ್ತರು ಗಾಬರಿಗೊಳ್ಳಬೇಕು. ವಿಷಾಧ, ಆಘಾತಕ್ಕೆ ಒಳಗಾಗಬೇಕು. ಆದರೆ ಒಂದು ವರ್ಗದ ಮಾಧ್ಯಮ ಇದನ್ನು ಸಂಭ್ರಮಿಸುತ್ತಿದೆ. ಬಸವಣ್ಣನವರು ಹೇಳಿದಂತೆ ತಾಯಿಯ ಮೊಲೆ ಹಾಲು ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವುದು? ಎಂಬ ಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾ ಸ್ವಾತಂತ್ರ್ಯ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿರುವ 5 ದೇಶಗಳಲ್ಲಿ ಭಾರತ ಒಂದಾಗಿದೆ. ಹೀಗಲಾದರೂ ಮಾಧ್ಯಮ ನನ್ನ ನೈತಿಕ ಹೊಣೆಗಾರಿಕೆಯನ್ನು ತೋರಿದರೆ ಈ ಪರಿಸ್ಥಿತಿ ಬದಲಾಗಬಹುದು. ತೀಸ್ತಾ ಪತ್ರಕರ್ತ, ವಕೀಲೆ, ಅವರ ಮುತ್ತಾತ ಅಟಾರ್ನಿ ಜನರಲ್ ಆಗಿ ಜನರಲ್ ಡಯರ್‌ ಅವರ ವಿಚಾರಣೆ ಮಾಡಿದ ಹಿನ್ನಲೆಯುಳ್ಳವರು. ತೀಸ್ತಾ ಸೆರೆಮನೆಯಲ್ಲಿರುವುದು ಇದು ಭಾರತದ ಆತ್ಮಸಾಕ್ಷಿಯ ಸಾವು, ಪ್ರಭುತ್ವದ ಕ್ರೌರ್ಯ ಎಂದರು.

ನಾವು ಇಂದು ಎರಡು ಭಾರತದ ಕಲ್ಪನೆಗಳನ್ನು ಮುಖಾಮುಖಿ ಮಾಡಲಾಗುತ್ತಿದೆ. ಒಂದು ದ್ವೇಷದ ಮೂಲಕ ದೇಶ ಕಟ್ಟಬಹುದು, ಇನ್ನೊಂದು ಪ್ರೇಮದ ಮೂಲಕ ದೇಶವನ್ನು ಕಟ್ಟಬಹುದು ಎಂಬು ಎರಡು ಸಿದ್ದಾಂತಗಳನ್ನು ಮುಖಾಮುಖಿಯಾಗುತ್ತಿದ್ದೇವೆ. ಬಾಬ್ರಿ ಮಸೀದಿ ಕೆಡವಿ 30 ವರ್ಷ ಆಗಿದೆ. ಈ 30 ವರ್ಷಗಳಲ್ಲಿ ಧಾರ್ಮಿಕವಾದ, ದ್ವೇ‍ಷ, ಅಸೂಹೆ, ಹಿಂಸೆಗಳಿಲ್ಲದಿದ್ದರೆ ಭಾರತ ಆರ್ಥಿಕವಾಗಿ 10 ಗಾವುದ ಮೇಲೆ ಹೋಗುತ್ತಿತ್ತು. ನಾವೆಲ್ಲವರು ಮನಗಂಡು ಪ್ರಭುತ್ವಕ್ಕೆ ಮನಗಾಣಿಸಬೇಕಾದ ಸಂಗತಿಯೆಂದರೆ ಸಾಮಾಜಿಕ ಸಂಬಂಧಗಳು, ಧಾರ್ಮಿಕ ಸಂಬಂಧಗಳು ಸರಿ ಇಲ್ಲದೆ ದೇಶ ಮುಂದಕ್ಕೆ  ಹೋಗಲು ಸಾಧ್ಯವಿಲ್ಲ. ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂಬ ಸವಾಲನ್ನು ಎದುರಿಸಬೇಕಾಗಿದೆ. ಪ್ರೇಮದ ಭಾರತವನ್ನು ನಾವು ಕಟ್ಟುವ ಕನಸು ಕಾಣಬೇಕಿದೆ.

ಟಿವಿ ಚಾನೆಗಳು ಗುಂಡಿಟ್ಟು ಸಾಯಿಸಬೇಕು ಎಂಬುದನ್ನು ತಲೆಬರೆಹ ಹಾಕಬೇಕು ಎನ್ನವುದು ಏನನ್ನೂ ಸೂಚಿಸುತ್ತಿದೆ?  ‘ಬೆಂಕಿ ಹಚ್ಚುತ್ತೇವೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಿದ್ದೇವೆ. ಗುಂಡು ಹೊಡೆಯುತ್ತೇವೆ, ಕಡಿಯುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರಕಾರ ಜನಪ್ರತಿನಿಧಿಗಳಾದವರು ಈ ಮಾತುಗಳನ್ನು ಹೇಳುತ್ತಿದ್ದಾರೆ. ಗೂಂಡಗಳು ಈ ಮಾತುಗಳನ್ನು ಹೇಳುತ್ತಿದ್ದಾರೆ. ಯಾವ ಧರ್ಮದವರೂ ಈ ಮಾತು ಹೇಳಿದರೂ ಅವು ನೀಚತನದ ಮಾತುಹಳು. ಇದರಿಂದ ರಾಜಕೀಯ ಪಕ್ಷಗಳಿಗೆ ಲಾಭ ಹೊರತು, ಭಾರತಕ್ಕೆ ಅಲ್ಲ ಎಂದರು.

200 ವರ್ಷದ ಗುಲಾಮಗಿರಿ ವಿರುದ್ಧ ಹೋರಾಡಿ ವಿಮುಕ್ತಿ ಪಡೆದ ದೇಶದಲ್ಲಿ ಈಗ ತಮ್ಮ ಜೊತೆಗೆ ಬದುಕಬೇಕಾದ ಸಹವಾಸಿಗಳ ಭಿನ್ನಮತವನ್ನು ಹಲ್ಲೆ-ಕೊಲೆ ಮೂಲಕ ತೀರಿಸುವುದರಿಂದ ಭಾರತವನ್ನು ಕಟ್ಟಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸಮಾಜ ಸುಧಾಕರ ಪಠ್ಯನ್ನು ಬಿಡಲಾಗುತ್ತಿದೆ. ಬ್ರಾಹ್ಮಣವಾದಿ, ಮತೀಯವಾದಿ ಸಿದ್ಧಾಂತವನ್ನು ಸೇರಿಸಲಾಗುತ್ತದೆ. ನಮ್ಮ ಮಕ್ಕಳು ಇಂತಹ ಪಠ್ಯಗಳನ್ನು ಓದಿ ಕೂಡಿ ಕಟ್ಟುವ ಭಾರತವನ್ನು ಕಟ್ಟಲಾಗದು. ನಂಜಿನ ಭಾರತ ನಮ್ಮದ್ದಲ್ಲ. ಕೂಡು ಹೋರಾಟ ಪರಿಕಲ್ಪನೆಯನ್ನು ನಾವು ಮಂಡಿಸಬೇಕಾಗಿದೆ. ಜನರ ಕಡೆ ಹೋಗಬೇಕಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ವಿರೋಧಿ ಹೋರಾಟವೂ ಆಶಾಭಾವನೆಯನ್ನು ಮೂಡಿಸಿದೆ. ಅದು ಎಲ್ಲ ಮಹನೀಯರ ಚಿಂತನೆಯನ್ನು ಒಳಗೊಂಡಿತ್ತು. ನಮ್ಮ ಸೂಫಿಗಳು, ಶರಣರು, ದಾಸರು ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ ಸಮತಳರವರು ಮಾತನಾಡಿ, “ಇಂದು ಭಾರತದ ತುಂಬಾ ಕಾರ್ಮೊಡ ಕವಿದಿದೆ. ವಾಕ್‌ ಸ್ವಾತಂತ್ರ್ಯ ಕುಸಿದು ಬಿದ್ದಿದೆ. ಹೋರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯ ಭಾರತದ ಆಶಯ ಮಣ್ಣುಗೂಡುತ್ತಿದೆ. ಈ ದೇಶವನ್ನು ಬದಲಾವಣೆ ಮಾಡಲು ಎಲ್ಲರೂ ಕೂಡಿ ಮುನ್ನಡೆಯುವುದು ತುಂಬಾ ಅಗತ್ಯವಾಗಿದೆ. ದೆಹಲಿ ಹೋರಾಟ ನಮಗೆ ಹೊಸ ದಾರಿಯನ್ನು ತೋರಿದೆ. ತೀಸ್ತಾ ಜೈಲಿನಲ್ಲಿದ್ದಾರೆ. ನಾವು ಮುಂದೊಂದು ದಿನ ಜೈಲಿಗೆ ಹೋಗಬಹುದು. ಕಾನೂನುಗಳನ್ನು ಆ ನಿಟ್ಟಿನಲ್ಲಿ ರೂಪಿಸಲಾಗಿದೆ. ಈ ಕುರಿತು ಚಿಂತನೆ ನೀಡುವ ಪ್ರಯತ್ನವಾಗಿ ಈ ಸಮ್ಮೇಳನ ನಡೆಯುತ್ತಿದೆ. ಹೊಸ ದಾರಿಯನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಧಿಸಲ್ಪಟ್ಟಿರುವ ಪತ್ರಕರ್ತ ಮೊಹಮ್ಮದ್ ಜುಬೇರ್, ತೀಸ್ತಾ ಸೆಟಲ್ವಾಡ್, ಮತ್ತು ಶ್ರೀಕುಮಾರ್‌ರವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ಕಮ್ಯೂನಿಸ್ಟ್ ರು ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

  2. ನೀವು ಈ ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....