Homeಮುಖಪುಟ‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI - ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI – ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

- Advertisement -
- Advertisement -

ಬುಧವಾರ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತರಾತುರಿಯಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಧಾರ್ ಪೌರತ್ವ ದಾಖಲೆಯಲ್ಲ ಮತ್ತು ಪೌರತ್ವದ ಕುರಿತಾಗಿ ತನಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಲು ಹೋದ ಯುಐಡಿಎಐ, ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈದರಾಬಾದಿನ ಪೊಲೀಸರು, 127 ಜನರನ್ನು (ಎಲ್ಲರೂ ಮುಸ್ಲಿಮರು) ಅಕ್ರಮ ವಲಸೆಗಾರರು ಎಂದು ಗುರುತಿಸಿ, ಇವರೆಲ್ಲರ ಆಧಾರ್ ಕಾರ್ಡ್‌ಗೆ ಕ್ರಮಬದ್ಧವಾದ ದಾಖಲೆ ಇವೆಯೇ? ಇಲ್ಲದಿದ್ದರೆ ಇವರ ಆಧಾರ್ ಕಾರ್ಡ್ ರದ್ದು ಮಾಡಿ ಎಂದು ಯುಐಡಿಎಐಗೆ ಪತ್ರ ಬರೆದಿದ್ದರು.

127 ಜನರು ಆಧಾರ್ ಪಡೆಯಲು ಸೂಕ್ತ ದಾಖಲೆ ನೀಡಿದ್ದಾರೋ ಇಲ್ಲವೋ, ಅದರಲ್ಲಿ ಫೋರ್ಜರಿ ಆಗಿದೆಯಾ ಅಥವಾ ಅನಧಿಕೃತ ಮೂಲಗಳಿಂದ ದಾಖಲೆ ಪಡೆದಿರುವರಾ ಎಂದು ಚೆಕ್ ಮಾಡಿ, ಅಲ್ಲಿ ಅಕ್ರಮ ಕಂಡು ಬಂದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ರದ್ದು ಮಾಡಬೇಕಾಗಿತ್ತು.

ಆದರೆ, ತನ್ನ ಅಧಿಕಾರ ವ್ಯಾಪ್ತಿ ಮೀರಿದ ಯುಐಡಿಎಐ, ನೀವು ಭಾರತೀಯ ಪೌರತ್ವ ಹೊಂದಿದ್ದೀರಾ? ಅಕ್ರಮ ವಲಸೆ ಬಂದಿದ್ದೀರಾ ಎಂದೆಲ್ಲ ನೋಟಿಸ್ ನೀಡುವ ಮೂಲಕ ಈಗಾಗಲೇ ಪೌರತ್ವದ ದಾಖಲೆಗಳ ಕುರಿತು ಎದ್ದಿರುವ ಗೊಂದಲವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯುಐಡಿಎಐ ಮತ್ತು ಹೈದರಾಬಾದ್ ಪೊಲೀಸರ ನಡೆ 127 ಜನರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿದೆ.

2016ರ ಆಧಾರ್‌ ಆ್ಯಕ್ಟ್ ಯುಐಡಿಎಐಗೆ ನೀಡಿರುವ ಅಧಿಕಾರ ಸಿಮೀತ ಸ್ವರೂಪದ್ದು ಅಷ್ಟೇ. ಈ ಆ್ಯಕ್ಟ್‌ನ 9ನೇ ಸೆಕ್ಷನ್ ಪ್ರಕಾರ, ಆಧಾರ್ ಯಾವುದೇ ಬಗೆಯ ಪೌರತ್ವ ಅಥವಾ ವಲಸೆಗೆ ಸಂಬಂಧಿಸಿದ ದಾಖಲೆಯಲ್ಲ. ಆಧಾರ್ ಪಡೆಯಲು ನೀಡಿದ ದಾಖಲೆಗಳು ಅಸಮರ್ಪಕ ಅಥವಾ ನಕಲಿಯಾಗಿದ್ದಾಗ ಮಾತ್ರ ಯುಐಡಿಎಐ ಅಂತಹ ಆಧಾರ್ ಸಂಖ್ಯೆಯನ್ನು ರದ್ದು ಮಾಡಬಹುದು ಅಷ್ಟೇ. ಸೆಕ್ಷನ್ 3ರ ಪ್ರಕಾರ, ವಾಸದ ವಿಳಾಸದ ದಾಖಲೆ ಇದ್ದರೆ ಸಾಕು, ಆಧಾರ್ ಪಡೆಯಬಹುದು. ವಿದೇಶದಿಂದ ಬಂದು ಇಲ್ಲಿ ಆರು ತಿಂಗಳು ನೆಲೆಸಿದವರಿಗೂ ಆಧಾರ್ ಸಿಗುತ್ತದೆ. ಹೀಗಿರುವಾಗ ಯುಐಡಿಐಎ ಅಕ್ಟ್‌ ವಲಸೆ ವಿಚಾರದಲ್ಲಿ ಮೂಗು ತೂರಿಸಿ, ಜನರ ಪೌರತ್ವವನ್ನು ಪ್ರಶ್ನಿಸಲು ಹೊರಟಿದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಏಳುತ್ತವೆ: 2018ರ ಜೂನ್‌ನಲ್ಲಿ ಯುಐಡಿಎಐ ಸ್ಪಷ್ಟಪಡಿಸಿದಂತೆ, ಒಟ್ಟು ಆಧಾರ್ ನೋಂದಣಿ ಪೈಕಿ ಶೇ.38ರಷ್ಟು ನೋಂದಣಿ ವಿವರಗಳು (ಗುರುತು ಮತ್ತು ವಿಳಾಸದ ದಾಖಲೆ) ತನಗೆ ಲಭ್ಯ (access) ಆಗುತ್ತಿಲ್ಲ ಎಂದಿತ್ತು. ಈ 127 ಜನರು ‘ಆ ಲಭ್ಯವಿಲ್ಲದ’ ನೋಂದಣಿಯಲ್ಲಿರಬಹುದೇ ಎಂದು ಹೇಗೆ ದೃಢೀಕರಿಸುತ್ತಾರೆ? ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅವು ಅಸಲಿ ಎಂದು ರುಜುವಾತು ಮಾಡಿ ಎಂದಷ್ಟೇ 127 ಜನರಿಗೆ ಸೂಚಿಸಿದ್ದರೆ ಸಾಕಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋದ ಯುಐಡಿಎಐ, ವಲಸೆ, ಪೌರತ್ವದ ಪ್ರಶ್ನೆ ಎತ್ತಿ ವಿವಾದಕ್ಕೆ ಈಡಾಗಿದೆ.

ಹೈದರಾಬಾದ್ ಪೊಲೀಸರಿಗೆ 127 ಜನ ಅಕ್ರಮ ವಲಸೆಗಾರರು ಎಂಬ ಸಂಶಯ ಬಂದಿದ್ದರೆ, ಅವರು ವಿವರಣೆ ಪಡೆಯಬೇಕಾದುದು ಆಧಾರ್ ಕುರಿತಲ್ಲ ಮತ್ತು ಯುಐಡಿಎಐನಿಂದಲ್ಲ. ಅವರು ವಲಸೆ ವಿಭಾಗವನ್ನು ಸಂಪರ್ಕಿಸಿ, ವಿದೇಶಿಗರ ಆ್ಯಕ್ಟ್ ಅಡಿ 127 ಜನ ಅಕ್ರಮ ವಲಸಿಗರೇ ಎಂಬುದನ್ನು ಪರೀಕ್ಷಿಸಿ ಎಂದು ಕೇಳಬೇಕಿತ್ತು. ಆಮೇಲೆ ಆಧಾರ್ ರದ್ದಿನ ವಿಷಯ ನೋಡಬೇಕಿತ್ತು.

ಈಗ ನೋಡಿ, ಸರಿಯಾದ ವಿಚಾರಣೆಯಿಲ್ಲದೇ ಅಥವಾ ವಿಚಾರಣೆ ಮುಗಿಯುವವರೆಗೆ ಕಾಯದೆ 127 ಜನರ ಆಧಾರ್ ಕಿತ್ತುಕೊಂಡು ಬಿಟ್ಟರೆ, 127 ಕುಟುಂಬಗಳು ರೇಷನ್‌ನಿಂದ ಹಿಡಿದು ಚಿಕಿತ್ಸೆವರೆಗೆ ಎಲ್ಲ ಸೌಲಭ್ಯ ಕಳೆದುಕೊಳ್ಳಲಿವೆ.

ಅಕ್ರಮ ವಲಸಿಗರಾ ಎಂದು ಕೇಳಲು ಈ ಯುಐಡಿಎಐ ಯಾರು? ಅಕ್ರಮ ವಲಸೆಗಾರರ ವಿಷಯವನ್ನು ವಲಸೆ ವಿಭಾಗಕ್ಕೆ ತಲುಪಿಸಬೇಕಿದ್ದ ಪೊಲೀಸರು, ಯುಐಡಿಎಐ ಮೊರೆ ಹೋದರೇಕೆ? ಈಗಲೇ ಹೀಗೆ, ಈ ಎನ್‌ಪಿಆರ್, ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಬಂದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...