Homeಮುಖಪುಟ‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI - ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI – ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

- Advertisement -
- Advertisement -

ಬುಧವಾರ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತರಾತುರಿಯಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಧಾರ್ ಪೌರತ್ವ ದಾಖಲೆಯಲ್ಲ ಮತ್ತು ಪೌರತ್ವದ ಕುರಿತಾಗಿ ತನಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಲು ಹೋದ ಯುಐಡಿಎಐ, ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈದರಾಬಾದಿನ ಪೊಲೀಸರು, 127 ಜನರನ್ನು (ಎಲ್ಲರೂ ಮುಸ್ಲಿಮರು) ಅಕ್ರಮ ವಲಸೆಗಾರರು ಎಂದು ಗುರುತಿಸಿ, ಇವರೆಲ್ಲರ ಆಧಾರ್ ಕಾರ್ಡ್‌ಗೆ ಕ್ರಮಬದ್ಧವಾದ ದಾಖಲೆ ಇವೆಯೇ? ಇಲ್ಲದಿದ್ದರೆ ಇವರ ಆಧಾರ್ ಕಾರ್ಡ್ ರದ್ದು ಮಾಡಿ ಎಂದು ಯುಐಡಿಎಐಗೆ ಪತ್ರ ಬರೆದಿದ್ದರು.

127 ಜನರು ಆಧಾರ್ ಪಡೆಯಲು ಸೂಕ್ತ ದಾಖಲೆ ನೀಡಿದ್ದಾರೋ ಇಲ್ಲವೋ, ಅದರಲ್ಲಿ ಫೋರ್ಜರಿ ಆಗಿದೆಯಾ ಅಥವಾ ಅನಧಿಕೃತ ಮೂಲಗಳಿಂದ ದಾಖಲೆ ಪಡೆದಿರುವರಾ ಎಂದು ಚೆಕ್ ಮಾಡಿ, ಅಲ್ಲಿ ಅಕ್ರಮ ಕಂಡು ಬಂದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ರದ್ದು ಮಾಡಬೇಕಾಗಿತ್ತು.

ಆದರೆ, ತನ್ನ ಅಧಿಕಾರ ವ್ಯಾಪ್ತಿ ಮೀರಿದ ಯುಐಡಿಎಐ, ನೀವು ಭಾರತೀಯ ಪೌರತ್ವ ಹೊಂದಿದ್ದೀರಾ? ಅಕ್ರಮ ವಲಸೆ ಬಂದಿದ್ದೀರಾ ಎಂದೆಲ್ಲ ನೋಟಿಸ್ ನೀಡುವ ಮೂಲಕ ಈಗಾಗಲೇ ಪೌರತ್ವದ ದಾಖಲೆಗಳ ಕುರಿತು ಎದ್ದಿರುವ ಗೊಂದಲವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯುಐಡಿಎಐ ಮತ್ತು ಹೈದರಾಬಾದ್ ಪೊಲೀಸರ ನಡೆ 127 ಜನರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿದೆ.

2016ರ ಆಧಾರ್‌ ಆ್ಯಕ್ಟ್ ಯುಐಡಿಎಐಗೆ ನೀಡಿರುವ ಅಧಿಕಾರ ಸಿಮೀತ ಸ್ವರೂಪದ್ದು ಅಷ್ಟೇ. ಈ ಆ್ಯಕ್ಟ್‌ನ 9ನೇ ಸೆಕ್ಷನ್ ಪ್ರಕಾರ, ಆಧಾರ್ ಯಾವುದೇ ಬಗೆಯ ಪೌರತ್ವ ಅಥವಾ ವಲಸೆಗೆ ಸಂಬಂಧಿಸಿದ ದಾಖಲೆಯಲ್ಲ. ಆಧಾರ್ ಪಡೆಯಲು ನೀಡಿದ ದಾಖಲೆಗಳು ಅಸಮರ್ಪಕ ಅಥವಾ ನಕಲಿಯಾಗಿದ್ದಾಗ ಮಾತ್ರ ಯುಐಡಿಎಐ ಅಂತಹ ಆಧಾರ್ ಸಂಖ್ಯೆಯನ್ನು ರದ್ದು ಮಾಡಬಹುದು ಅಷ್ಟೇ. ಸೆಕ್ಷನ್ 3ರ ಪ್ರಕಾರ, ವಾಸದ ವಿಳಾಸದ ದಾಖಲೆ ಇದ್ದರೆ ಸಾಕು, ಆಧಾರ್ ಪಡೆಯಬಹುದು. ವಿದೇಶದಿಂದ ಬಂದು ಇಲ್ಲಿ ಆರು ತಿಂಗಳು ನೆಲೆಸಿದವರಿಗೂ ಆಧಾರ್ ಸಿಗುತ್ತದೆ. ಹೀಗಿರುವಾಗ ಯುಐಡಿಐಎ ಅಕ್ಟ್‌ ವಲಸೆ ವಿಚಾರದಲ್ಲಿ ಮೂಗು ತೂರಿಸಿ, ಜನರ ಪೌರತ್ವವನ್ನು ಪ್ರಶ್ನಿಸಲು ಹೊರಟಿದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಏಳುತ್ತವೆ: 2018ರ ಜೂನ್‌ನಲ್ಲಿ ಯುಐಡಿಎಐ ಸ್ಪಷ್ಟಪಡಿಸಿದಂತೆ, ಒಟ್ಟು ಆಧಾರ್ ನೋಂದಣಿ ಪೈಕಿ ಶೇ.38ರಷ್ಟು ನೋಂದಣಿ ವಿವರಗಳು (ಗುರುತು ಮತ್ತು ವಿಳಾಸದ ದಾಖಲೆ) ತನಗೆ ಲಭ್ಯ (access) ಆಗುತ್ತಿಲ್ಲ ಎಂದಿತ್ತು. ಈ 127 ಜನರು ‘ಆ ಲಭ್ಯವಿಲ್ಲದ’ ನೋಂದಣಿಯಲ್ಲಿರಬಹುದೇ ಎಂದು ಹೇಗೆ ದೃಢೀಕರಿಸುತ್ತಾರೆ? ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅವು ಅಸಲಿ ಎಂದು ರುಜುವಾತು ಮಾಡಿ ಎಂದಷ್ಟೇ 127 ಜನರಿಗೆ ಸೂಚಿಸಿದ್ದರೆ ಸಾಕಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋದ ಯುಐಡಿಎಐ, ವಲಸೆ, ಪೌರತ್ವದ ಪ್ರಶ್ನೆ ಎತ್ತಿ ವಿವಾದಕ್ಕೆ ಈಡಾಗಿದೆ.

ಹೈದರಾಬಾದ್ ಪೊಲೀಸರಿಗೆ 127 ಜನ ಅಕ್ರಮ ವಲಸೆಗಾರರು ಎಂಬ ಸಂಶಯ ಬಂದಿದ್ದರೆ, ಅವರು ವಿವರಣೆ ಪಡೆಯಬೇಕಾದುದು ಆಧಾರ್ ಕುರಿತಲ್ಲ ಮತ್ತು ಯುಐಡಿಎಐನಿಂದಲ್ಲ. ಅವರು ವಲಸೆ ವಿಭಾಗವನ್ನು ಸಂಪರ್ಕಿಸಿ, ವಿದೇಶಿಗರ ಆ್ಯಕ್ಟ್ ಅಡಿ 127 ಜನ ಅಕ್ರಮ ವಲಸಿಗರೇ ಎಂಬುದನ್ನು ಪರೀಕ್ಷಿಸಿ ಎಂದು ಕೇಳಬೇಕಿತ್ತು. ಆಮೇಲೆ ಆಧಾರ್ ರದ್ದಿನ ವಿಷಯ ನೋಡಬೇಕಿತ್ತು.

ಈಗ ನೋಡಿ, ಸರಿಯಾದ ವಿಚಾರಣೆಯಿಲ್ಲದೇ ಅಥವಾ ವಿಚಾರಣೆ ಮುಗಿಯುವವರೆಗೆ ಕಾಯದೆ 127 ಜನರ ಆಧಾರ್ ಕಿತ್ತುಕೊಂಡು ಬಿಟ್ಟರೆ, 127 ಕುಟುಂಬಗಳು ರೇಷನ್‌ನಿಂದ ಹಿಡಿದು ಚಿಕಿತ್ಸೆವರೆಗೆ ಎಲ್ಲ ಸೌಲಭ್ಯ ಕಳೆದುಕೊಳ್ಳಲಿವೆ.

ಅಕ್ರಮ ವಲಸಿಗರಾ ಎಂದು ಕೇಳಲು ಈ ಯುಐಡಿಎಐ ಯಾರು? ಅಕ್ರಮ ವಲಸೆಗಾರರ ವಿಷಯವನ್ನು ವಲಸೆ ವಿಭಾಗಕ್ಕೆ ತಲುಪಿಸಬೇಕಿದ್ದ ಪೊಲೀಸರು, ಯುಐಡಿಎಐ ಮೊರೆ ಹೋದರೇಕೆ? ಈಗಲೇ ಹೀಗೆ, ಈ ಎನ್‌ಪಿಆರ್, ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಬಂದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...