Homeಮುಖಪುಟ‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI - ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI – ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

- Advertisement -
- Advertisement -

ಬುಧವಾರ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತರಾತುರಿಯಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಧಾರ್ ಪೌರತ್ವ ದಾಖಲೆಯಲ್ಲ ಮತ್ತು ಪೌರತ್ವದ ಕುರಿತಾಗಿ ತನಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಲು ಹೋದ ಯುಐಡಿಎಐ, ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈದರಾಬಾದಿನ ಪೊಲೀಸರು, 127 ಜನರನ್ನು (ಎಲ್ಲರೂ ಮುಸ್ಲಿಮರು) ಅಕ್ರಮ ವಲಸೆಗಾರರು ಎಂದು ಗುರುತಿಸಿ, ಇವರೆಲ್ಲರ ಆಧಾರ್ ಕಾರ್ಡ್‌ಗೆ ಕ್ರಮಬದ್ಧವಾದ ದಾಖಲೆ ಇವೆಯೇ? ಇಲ್ಲದಿದ್ದರೆ ಇವರ ಆಧಾರ್ ಕಾರ್ಡ್ ರದ್ದು ಮಾಡಿ ಎಂದು ಯುಐಡಿಎಐಗೆ ಪತ್ರ ಬರೆದಿದ್ದರು.

127 ಜನರು ಆಧಾರ್ ಪಡೆಯಲು ಸೂಕ್ತ ದಾಖಲೆ ನೀಡಿದ್ದಾರೋ ಇಲ್ಲವೋ, ಅದರಲ್ಲಿ ಫೋರ್ಜರಿ ಆಗಿದೆಯಾ ಅಥವಾ ಅನಧಿಕೃತ ಮೂಲಗಳಿಂದ ದಾಖಲೆ ಪಡೆದಿರುವರಾ ಎಂದು ಚೆಕ್ ಮಾಡಿ, ಅಲ್ಲಿ ಅಕ್ರಮ ಕಂಡು ಬಂದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ರದ್ದು ಮಾಡಬೇಕಾಗಿತ್ತು.

ಆದರೆ, ತನ್ನ ಅಧಿಕಾರ ವ್ಯಾಪ್ತಿ ಮೀರಿದ ಯುಐಡಿಎಐ, ನೀವು ಭಾರತೀಯ ಪೌರತ್ವ ಹೊಂದಿದ್ದೀರಾ? ಅಕ್ರಮ ವಲಸೆ ಬಂದಿದ್ದೀರಾ ಎಂದೆಲ್ಲ ನೋಟಿಸ್ ನೀಡುವ ಮೂಲಕ ಈಗಾಗಲೇ ಪೌರತ್ವದ ದಾಖಲೆಗಳ ಕುರಿತು ಎದ್ದಿರುವ ಗೊಂದಲವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯುಐಡಿಎಐ ಮತ್ತು ಹೈದರಾಬಾದ್ ಪೊಲೀಸರ ನಡೆ 127 ಜನರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿದೆ.

2016ರ ಆಧಾರ್‌ ಆ್ಯಕ್ಟ್ ಯುಐಡಿಎಐಗೆ ನೀಡಿರುವ ಅಧಿಕಾರ ಸಿಮೀತ ಸ್ವರೂಪದ್ದು ಅಷ್ಟೇ. ಈ ಆ್ಯಕ್ಟ್‌ನ 9ನೇ ಸೆಕ್ಷನ್ ಪ್ರಕಾರ, ಆಧಾರ್ ಯಾವುದೇ ಬಗೆಯ ಪೌರತ್ವ ಅಥವಾ ವಲಸೆಗೆ ಸಂಬಂಧಿಸಿದ ದಾಖಲೆಯಲ್ಲ. ಆಧಾರ್ ಪಡೆಯಲು ನೀಡಿದ ದಾಖಲೆಗಳು ಅಸಮರ್ಪಕ ಅಥವಾ ನಕಲಿಯಾಗಿದ್ದಾಗ ಮಾತ್ರ ಯುಐಡಿಎಐ ಅಂತಹ ಆಧಾರ್ ಸಂಖ್ಯೆಯನ್ನು ರದ್ದು ಮಾಡಬಹುದು ಅಷ್ಟೇ. ಸೆಕ್ಷನ್ 3ರ ಪ್ರಕಾರ, ವಾಸದ ವಿಳಾಸದ ದಾಖಲೆ ಇದ್ದರೆ ಸಾಕು, ಆಧಾರ್ ಪಡೆಯಬಹುದು. ವಿದೇಶದಿಂದ ಬಂದು ಇಲ್ಲಿ ಆರು ತಿಂಗಳು ನೆಲೆಸಿದವರಿಗೂ ಆಧಾರ್ ಸಿಗುತ್ತದೆ. ಹೀಗಿರುವಾಗ ಯುಐಡಿಐಎ ಅಕ್ಟ್‌ ವಲಸೆ ವಿಚಾರದಲ್ಲಿ ಮೂಗು ತೂರಿಸಿ, ಜನರ ಪೌರತ್ವವನ್ನು ಪ್ರಶ್ನಿಸಲು ಹೊರಟಿದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಏಳುತ್ತವೆ: 2018ರ ಜೂನ್‌ನಲ್ಲಿ ಯುಐಡಿಎಐ ಸ್ಪಷ್ಟಪಡಿಸಿದಂತೆ, ಒಟ್ಟು ಆಧಾರ್ ನೋಂದಣಿ ಪೈಕಿ ಶೇ.38ರಷ್ಟು ನೋಂದಣಿ ವಿವರಗಳು (ಗುರುತು ಮತ್ತು ವಿಳಾಸದ ದಾಖಲೆ) ತನಗೆ ಲಭ್ಯ (access) ಆಗುತ್ತಿಲ್ಲ ಎಂದಿತ್ತು. ಈ 127 ಜನರು ‘ಆ ಲಭ್ಯವಿಲ್ಲದ’ ನೋಂದಣಿಯಲ್ಲಿರಬಹುದೇ ಎಂದು ಹೇಗೆ ದೃಢೀಕರಿಸುತ್ತಾರೆ? ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅವು ಅಸಲಿ ಎಂದು ರುಜುವಾತು ಮಾಡಿ ಎಂದಷ್ಟೇ 127 ಜನರಿಗೆ ಸೂಚಿಸಿದ್ದರೆ ಸಾಕಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋದ ಯುಐಡಿಎಐ, ವಲಸೆ, ಪೌರತ್ವದ ಪ್ರಶ್ನೆ ಎತ್ತಿ ವಿವಾದಕ್ಕೆ ಈಡಾಗಿದೆ.

ಹೈದರಾಬಾದ್ ಪೊಲೀಸರಿಗೆ 127 ಜನ ಅಕ್ರಮ ವಲಸೆಗಾರರು ಎಂಬ ಸಂಶಯ ಬಂದಿದ್ದರೆ, ಅವರು ವಿವರಣೆ ಪಡೆಯಬೇಕಾದುದು ಆಧಾರ್ ಕುರಿತಲ್ಲ ಮತ್ತು ಯುಐಡಿಎಐನಿಂದಲ್ಲ. ಅವರು ವಲಸೆ ವಿಭಾಗವನ್ನು ಸಂಪರ್ಕಿಸಿ, ವಿದೇಶಿಗರ ಆ್ಯಕ್ಟ್ ಅಡಿ 127 ಜನ ಅಕ್ರಮ ವಲಸಿಗರೇ ಎಂಬುದನ್ನು ಪರೀಕ್ಷಿಸಿ ಎಂದು ಕೇಳಬೇಕಿತ್ತು. ಆಮೇಲೆ ಆಧಾರ್ ರದ್ದಿನ ವಿಷಯ ನೋಡಬೇಕಿತ್ತು.

ಈಗ ನೋಡಿ, ಸರಿಯಾದ ವಿಚಾರಣೆಯಿಲ್ಲದೇ ಅಥವಾ ವಿಚಾರಣೆ ಮುಗಿಯುವವರೆಗೆ ಕಾಯದೆ 127 ಜನರ ಆಧಾರ್ ಕಿತ್ತುಕೊಂಡು ಬಿಟ್ಟರೆ, 127 ಕುಟುಂಬಗಳು ರೇಷನ್‌ನಿಂದ ಹಿಡಿದು ಚಿಕಿತ್ಸೆವರೆಗೆ ಎಲ್ಲ ಸೌಲಭ್ಯ ಕಳೆದುಕೊಳ್ಳಲಿವೆ.

ಅಕ್ರಮ ವಲಸಿಗರಾ ಎಂದು ಕೇಳಲು ಈ ಯುಐಡಿಎಐ ಯಾರು? ಅಕ್ರಮ ವಲಸೆಗಾರರ ವಿಷಯವನ್ನು ವಲಸೆ ವಿಭಾಗಕ್ಕೆ ತಲುಪಿಸಬೇಕಿದ್ದ ಪೊಲೀಸರು, ಯುಐಡಿಎಐ ಮೊರೆ ಹೋದರೇಕೆ? ಈಗಲೇ ಹೀಗೆ, ಈ ಎನ್‌ಪಿಆರ್, ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಬಂದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...