HomeUncategorizedಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

ಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

- Advertisement -
- Advertisement -

ಹಣದುಬ್ಬರ ಅಥವಾ ಇನಫ್ಲೇಷನ್ ಅನ್ನೋದನ್ನ ಕೇಳಿಕೇಳಿ ಸಾಕಾಗಿಹೋಗೇದ. ಅದರ ಬಗ್ಗೆ ಸರಕಾರದವರು ಏನೂ ಮಾಡಲಾರದೇ ಇರೋದು ನೋಡಿ-ನೋಡಿ ಸಾಕಾಗಿಹೋಗೇದ. ಅದಕ್ಕ ಹೊಸಾದೊಂದು ಹುಡುಕೋಣ. ಅದರ ಹೆಸರು ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್.

ಅದು ಸ್ಟ್ಯಾಗ್ನೇಷನ್ ಹಾಗೂ ಇನಫ್ಲೇಷನ್ ಸೇರಿದ ಆರ್ಥಿಕ ಮಾರಿ. ವಾರ್ಷಿಕ ಆರ್ಥಿಕ ಬೆಳವಣಿಗೆ 5 ಶೇಕಡಾ ಇದ್ದು ಹಣದುಬ್ಬರ ಶೇ. 8ರ ಆಸುಪಾಸಿಗೆ ಬಂದಿದ್ದಕ್ಕೆ ಭಾರತ ಜಡದುಬ್ಬರವನ್ನು ಎದುರು ನೋಡ್ತಾ ಇದೆ ಅಂತ ತಜ್ಞರ ಅಂಬೋಣ.

ಸರ್ವೇಸಾಮಾನ್ಯವಾಗಿ ಏನಾಗತದ ಅಂದರ ಹಣದುಬ್ಬರ ಇದ್ದಾಗ ಬೇಡಿಕೆ ಹೆಚ್ಚಿತ್ತು ಅಂದರ ಬೆಳವಣಿಗೆ ಇರತದ. ಜನರಿಗೆ ಹಣ ಖರ್ಚು ಆಗೋದು ಹೆಚ್ಚಾದರೂ ಸಹ ಅವರ ವರಮಾನ ಹೆಚ್ಚು ಆಗೋದಕ್ಕ ಜನರಿಗೆ ತೊಂದರೆ ಆಗಂಗಿಲ್ಲ. ಆದರ ಹಣದುಬ್ಬರ ಇದ್ದು, ಸರಕು-ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿ ಆರ್ಥಿಕ ಹಿಂಜರಿತ ಉಂಟಾದರ, ಅದು ಆ ದೇಶದ ಜನರಿಗೆ ಭಾಳ ಕಿರಿಕಿರಿ ಆಗತದ. ಅವರ ದಿನ ನಿತ್ಯದ ಕೆಲಸನೂ ಆಗದಂಗ ತೊಂದರೆ ಆಗತದ.

ಹಿಂಗ 1973 ರಾಗ ಇಡಿ ಜಗತ್ತಿನೊಳಗ ಆಗಿತ್ತು. ಪೆಟ್ರೋಲು- ಡೀಸಲ್ ಬೆಲೆ ಹೆಚ್ಚಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ಸರಕುಗಳ ಬೆಲೆ ಜಾಸ್ತಿ ಆತು. ಜನ ನೌಕರಿ ಕಳಕೊಂಡರು, ಸರಕು ಖರೀದಿ ಮಾಡೋದು ಕಡಿಮೆ ಮಾಡಿದರು, ಆದರ ಜನ ಖರೀದಿ ಕಮ್ಮಿ ಮಾಡಿದರು ಅಂತ ವೆಚ್ಚಕಮ್ಮಿ ಆಗಲಿಲ್ಲ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅಲುಗಾಡಿ ಹೋತು.

ಇನ್ನೊಮ್ಮೆ ಹಿಂಗಾಗಿದ್ದು ಯಾವಾಗ ಅಂದರ ಚಂದ್ರಶೇಖರ ಅವರ ಕಾಲದಾಗ. ಸರಕಾರದ ನೀತಿಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಅದರ ಸರಕುಗಳ ಬೆಲೆ ಹೆಚ್ಚಾಗಿ ಕೂತವು. ಮಾರುವವರಿಗೂ ಅನುಕೂಲ ಆಗಲಿಲ್ಲ, ಖರೀದಿ ಮಾಡೋರಿಗೂ ಅನುಕೂಲ ಆಗಲಿಲ್ಲ.

ಇದನ್ನು ಕುಡಿಯಾಗಿದ್ದಾಗ ಚಿವುಟದಿದ್ದರೆ ಇದು ಅತ್ಯಂತ ದೊಡ್ಡ ಸಮಸ್ಯೆ ಆಗಬಹುದು. ಭಾಳ ದಿವಸ ಜಡದುಬ್ಬರ ಮುಂದುವರೆದರ ಅದು ಮಧ್ಯಮ ವರ್ಗದವರನ್ನೆಲ್ಲ ಬಡತನರೇಖೆಯ ಕೆಳಗೆ ದಬ್ಬಿ ಬಿಡತದ. ಆಡಳಿತ ಪಕ್ಷಕ್ಕೂ ಇದು ಒಳ್ಳೇದಲ್ಲ. ಸರಕಾರದ ಇಮೇಜು ಇದರಿಂದ ಕೆಡಬಹುದು. ಜನರನ್ನು ರೊಚ್ಚಿಗೆ ಎಬ್ಬಿಸಬಹುದು.

ಹಂಗಂತ ಅದನ್ನು ಸಂಭಾಳಿಸೋದು ಸರಳ ಇಲ್ಲ. ಸರಕಾರ ಅಥವಾ ರಿಸರ್ವ ಬ್ಯಾಂಕಿನಂಥ ಕೇಂದ್ರ ಬ್ಯಾಂಕು ಬಡ್ಡಿ ದರ ಹೆಚ್ಚು ಮಾಡಿದರ ಸಾಲಗಳು ದುಬಾರಿಯಾಗಿ ಯಾರೂ ತೊಗೊಳ್ಳಲಾರದಂತಾಗಿ, ಅಥವಾ ತೊಗೊಂಡವರು ವಾಪಸು ಕೊಡಲಿಕ್ಕೆ ಆಗಲಾರದಂತಾಗಿ ವ್ಯಾಪಾರ -ವ್ಯವಹಾರಕ್ಕೆ ತೊಂದರೆ ಆಗಬಹುದು. ಬಡ್ಡಿ ದರ ಕಮ್ಮಿ ಮಾಡಿದರ ಹಣದುಬ್ಬರ ಹೆಚ್ಚಾಗಿ ಜನ ಏನನ್ನೂ ಖರೀದಿ ಮಾಡದಂಗಾಗಬಹುದು, ಮಾಡಿದರ ಅವರ ಉಳಿತಾಯ ಕರಗಬಹುದು.

ಈ ವರ್ಷ ಏನಾಗೇದಪಾ ಅಂದರ ಪ್ರವಾಹ- ಬರಗಾಲದಿಂದ ಕೃಷಿ ಉತ್ಪನ್ನ ಕಮ್ಮಿ ಆಗೇದ. ಇದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗೇದ. ಇದು ಕೇಂದ್ರದ ಹೊಸ ಆಮದು ನೀತಿಯಿಂದ ಕಮ್ಮಿ ಆದರ, ಅಥವಾ ಆರ್ಥಿಕ ಬೆಳವಣಿಗೆ ಮುಂದಿನ ಎರಡು – ಮೂರು ತಿಂಗಳಲ್ಲಿ ಹೆಚ್ಚಿದರ ಜಡದುಬ್ಬರದ ಬರೋ ಸಾಧ್ಯತೆ ಕಮ್ಮಿ ಆಗಬಹುದು. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಮಂಡಳಿ ಅವರು ಈಗಿನ ಹಣದುಬ್ಬರ ಕಮ್ಮಿ ಆಗತದ ಅಂತ ಹೇಳ್ಯಾರ.

ದೇಶದ ವರಮಾನ ಅಷ್ಟೇ ಉಳದು ಅಥವಾ ಕಮ್ಮಿ ಆಗುವಾಗ ಖರ್ಚು ಜಾಸ್ತಿ ಆದಂಗನ, ಪ್ರತಿ ಗೃಹಸ್ಥನ ಪರಿಸ್ಥಿತಿನೂ ಆಗಬಹುದು. ಅವನ ನೌಕರಿಗೆ ಖತರಾ ಬಂದು, ಯಾವಾಗ ಕೆಲಸ ಕಳಕೋತೇನಿ ಅನ್ನುವ ಹೆದರಿಕೆಯೊಳಗ ಇರೋವಾಗ, ಅಥವಾ ಅವನಿಗ ವಾರ್ಷಿಕ ಬಡ್ತಿ ಸಿಗಲಾರದೇ, ಸಂಬಳ ಹೆಚ್ಚಾಗಲಾರದೇ ಇದ್ದು, ವಸ್ತುಗಳ ಬೆಲೆ ಜಾಸ್ತಿ ಆಗತಾ ಹೋದರ ಅವನು ಬರೇ ಊಟ, ಮನಿ ಬಾಡಗಿ, ಅರವಿ- ಅಂಚಡಿ, ಸಾಲಿ ಫೀಸು ಇಷ್ಟ ಖರ್ಚು ಮಾಡತಾ ಹೋದಾ ಅಂದರ ಅವನು ದೇಶದ ಆರ್ಥಿಕ ಪರಿಸ್ಥಿತಿಗೆ ಯಾವ ಕೊಡುಗೆ ಕೊಡಲಾರ.

ಹೊಸ ಬಂಡವಾಳ ದೇಶಕ್ಕೆ ಬರಲಾರದು, ಹೊಸ ಉದ್ಯೋಗ ಸೃಷ್ಟಿ ಆಗಲಾರವು. ಜನರ ಕೈಯೊಳಗ ದುಡ್ಡು ನಿಲ್ಲಂಗಿಲ್ಲ. ಜನ ಬ್ಯಾಂಕಿನೊಳಗ, ಷೇರು ಮಾರುಕಟ್ಟೆಯೊಳಗ ಉಳಿತಾಯ ಮಾಡಿದರ ಅದಕ್ಕ ಬೇಕಷ್ಟು ಬಡ್ಡಿ ಬರಂಗಿಲ್ಲ.

ಜಡದುಬ್ಬರವನ್ನ ಸರಕಾರಗಳು ಕಮ್ಮಿ ಮಾಡಲಿಕ್ಕೆ ಕ್ರಮ ಕೈಕೊಳ್ಳಬೇಕು. ಸರಿಯಾದ ನೀತಿ ಪಾಲಿಸಿ ಮತ್ತ ಬರಲಾರದ ಹಂಗ ನೋಡಿಕೊಳ್ಳಬೇಕು. ಇಲ್ಲದಿದ್ದರ ಅನೇಕ ವರ್ಷಗಳ ಬೆಳವಣಿಗಿ ಹೊಳಿಯೊಳಗ ಹುಣಸೀಹಣ್ಣು ತೊಳದಂಗ ಆಗಿ ಬಿಡತದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...