Homeಮುಖಪುಟಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ

ಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ

7ನೇ ತರಗತಿ ಸಮಾಜ ವಿಜ್ಞಾನ-2 ಪಠ್ಯದಿಂದ ಹೋರಾಟಗಾರ್ತಿಯರಾದ ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ, ಉಮಾಬಾಯಿ ಕುಂದಾಪುರರವರ ಪಾಠ ಕೈಬಿಡಲಾಗಿದೆ.

- Advertisement -
- Advertisement -

ಬಿಜೆಪಿ ಸರ್ಕಾರದ ನೂತನ ಪಠ್ಯ ಪರಿಷ್ಕರಣೆ ಸಮಿತಿಯ ಮಾಡಿರುವ ತಿದ್ದುಪಡಿಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಅನಾಹುತ ಕಂಡುಬಂದಿದೆ. 7ನೇ ತರಗತಿ ಸಮಾಜ ವಿಜ್ಞಾನ-2 ಪಠ್ಯದಿಂದ ಕರ್ನಾಟಕದ ಮಹಿಳಾ ಹೋರಾಟಗಾರರಾದ ಉಲ್ಲಾಳದ ರಾಣಿ ಅಬ್ಬಕ್ಕ ದೇವಿ, ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠ ಕೈಬಿಡಲಾಗಿದೆ.

ಕಳೆದ ವರ್ಷ 7ನೇ ತರಗತಿಯ ಮಕ್ಕಳು ‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಪಾಠದಲ್ಲಿ ಬಹಳ ವಿವರವಾಗಿ ಕರ್ನಾಟಕದ ಹೋರಾಟಗಾರ್ತಿಯರ ಬಗ್ಗೆ ಅಭ್ಯಸಿಸಿದ್ದರು. ಗಾಂಧಿ ಪೂರ್ವ ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಹಿಳೆ ಎಂದು ಹೆಸರಿಸಿ ರಾಣಿ ಅಬ್ಬಕ್ಕದೇವಿಯವರ ಪಾಠ ಇಡಲಾಗಿತ್ತು. ಅದರಲ್ಲಿ ಅವರು ಪೋರ್ಚುಗೀಸರ ವಿರುದ್ಧ ಕಾದಾಡಿದ್ದ ವಿವರಗಳಿದ್ದವು. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರಿಗೆ ಕಪ್ಪ ಕೊಡಲು ನಿರಾಕರಿಸಿದಾಗ 1568ರಲ್ಲಿ ಅವರು ದಾಳಿ ನಡೆಸುತ್ತಾರೆ. ಅದನ್ನು ಅಬ್ಬಕ್ಕ ಹಿಮ್ಮೆಟ್ಟಿಸಿದ್ದ ವಿವರಗಳನ್ನು ನೀಡಲಾಗಿತ್ತು. ಆದರೆ ನೂತನ ಪಠ್ಯ ಪರಿಷ್ಕರಣೆಯಲ್ಲಿ ಆ ಪಠ್ಯ ಕೈಬಿಡಲಾಗಿದೆ.

ಅದೇ ರೀತಿಯಾಗಿ ಕಳೆದ ವರ್ಷದ ಪಠ್ಯದಲ್ಲಿ ಕರ್ನಾಟಕದ ದಿಟ್ಟ ಹೋರಾಟಗಾರ್ತಿಯರಾದ ಬಳ್ಳಾರಿ ಸಿದ್ದಮ್ಮ, ಯಶೋಧರಮ್ಮ ದಾಸಪ್ಪ ಮತ್ತು ಉಮಾಬಾಯಿ ಕುಂದಾಪುರರವರ ಪಾಠವಿತ್ತು. ಅದನ್ನು ತೆಗೆದುಹಾಕಿರುವ ನೂತನ ಸಮಿತಿಯು ಕರ್ನಾಟಕ ಸಮಾಜಿಮುಖಿ ಚಳವಳಿಗಳ ಎಂಬ ಪಠ್ಯದಲ್ಲಿ ಕೇವಲ ಕಮಲಾದೇವಿ ಚಟ್ಟೋಪಾಧ್ಯಾಯ ಮತ್ತು ಅರುಣಾ ಅಸಫ್ ಅಲಿಯವರ ಪಠ್ಯ ಮಾತ್ರ ಇರಿಸಿಕೊಂಡಿದೆ. ಅವರ ಕುರಿತು ಸಮರ್ಪಕ ವಿವರಗಳಿಲ್ಲದೆ ಕೇವಲ 4 ಪ್ಯಾರಗಳಲ್ಲಿ ಮೇಲುಮಟ್ಟಕ್ಕೆ ಪರಿಚಯಿಸಿ ಕೈತೊಳೆದುಕೊಳ್ಳಲಾಗಿದೆ.

ನಮ್ಮ ಮಕ್ಕಳು ಏಕೆ ಕನ್ನಡದ ಹೋರಾಟಗಾರರ ಬಗ್ಗೆ ಅದರಲ್ಲಿಯೂ ಮಹಿಳಾ ಹೋರಾಟಗಾರ್ತಿಯರ ಬಗ್ಗೆ ತಿಳಿದುಕೊಳ್ಳಬಾರದು ಎಂಬ ಪ್ರಶ್ನೆ ಎದ್ದಿದೆ. “ಕಪ್ಪ, ನಿಮಗೇಕೆ ಕೊಡಬೇಕು ಕಪ್ಪ? ನಮ್ಮ ದೇಶಕ್ಕೆ ಕಳ್ಳರಂತೆ ನುಗ್ಗಿರುವ ನಿಮಗೆ ಕಪ್ಪ ಕೊಟ್ಟು ಹೇಡಿ ಎನಿಸಿಕೊಳ್ಳುವುದಕ್ಕಿಂತ ಹೋರಾಡಿ ಸಾಯುವುದೇ ಲೇಸು” ಎಂದು ಹೇಳಿದ್ದ ವೀರ ರಾಣಿ ಅಬ್ಬಕ್ಕನವರ ಪಠ್ಯ ಕೈಬಿಟ್ಟಿದ್ದೇಕೆ ಎಂದು ನೂತನ ಸಮಿತಿಯು ಉತ್ತರಿಸಬೇಕಿದೆ.

ಅದೇ ರೀತಿಯಾಗಿ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಪ್ರಾಣತೆತ್ತ ನೂರಾರು ಮಹಿಳೆಯರ ಜೀವನ ಚಿತ್ರಣಗಳು ಹೂತು ಹೋಗಿವೆ. ಇರುವ ಕೆಲವರ ಬಗ್ಗೆಯಾದರೂ ನಮ್ಮ ಮಕ್ಕಳು ಓದಿ ಅವರನ್ನು ಆದರ್ಶವನ್ನಾಗಿ ಪರಿಗಣಿಸಬೇಕು. ಆದರೆ ನೂತನ ಸಮಿತಿಯು ಅಂತಹ ಮಹಿಳಾ ಹೋರಾಟಗಾರ್ತಿಯರ ಪಠ್ಯವನ್ನೇ ಕೈಬಿಟ್ಟಿರುವುದು ದುರಂತ.

ಇದನ್ನೂ ಓದಿ: ಕನ್ನಡ ದ್ರೋಹಿಯ ಮರು ಪರಿಷ್ಕರಣೆಯಲ್ಲಿ ‘ಡಾ. ರಾಜ್‌’ ಪಠ್ಯ ಇದ್ದರೆ, ಅವರಿಗೆ ಅವಮಾನ ಮಾಡಿದಂತೆ: ವರನಟನ ಪಾಠ ವಾಪಾಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...

ಬಾಂಗ್ಲಾದೇಶ: ಚುನಾವಣೆಗೂ ಮುನ್ನ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ ಹತ್ಯೆ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ಸೋಮವಾರ ತಡರಾತ್ರಿ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಅಕ್ಕಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯೊಳಗೆ ಹತ್ಯೆಯಾಗಿದೆ.  ತ್ರಿಶಾಲ್ ಉಪಜಿಲಾದ ಬೋಗರ್ ಬಜಾರ್ ಛೇದಕದಲ್ಲಿರುವ "ಮೆಸರ್ಸ್ ಭಾಯ್...

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮಸೀದಿ ಕೆಡವಿದ ಉತ್ತರ ಪ್ರದೇಶ ಸರ್ಕಾರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಉತ್ತರ ಪ್ರದೇಶ ಆಡಳಿತವು ಬರೇಲಿ ಜಿಲ್ಲೆಯ ಮಸೀದಿಯನ್ನು ನೆಲಸಮಗೊಳಿಸಿದೆ. ಮಸೀದಿ ನಿರ್ಮಾಣ ಕುರಿತಾದ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಾರಿಯಾ...

‘ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ’ : ಜನರಲ್ ನರವಾಣೆ ಪುಸ್ತಕದ ಕುರಿತ ಪ್ರಕಾಶಕರ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಪ್ರಕಾಶಕರ ವಿರುದ್ಧ ರಾಹುಲ್ ಗಾಂಧಿ ಮಂಗಳವಾರ (ಫೆ.10) ಗಂಭೀರ ಆರೋಪ ಮಾಡಿದ್ದಾರೆ. ನರವಾಣೆ ಅವರ ನೆನಪುಗಳ ಆಧಾರಿತ ಪುಸ್ತಕವು ಈಗಾಗಲೇ ಮಾರಾಟಕ್ಕೆ...

‘ಆದಿತ್ಯನಾಥನ ಆಡಳಿತದಲ್ಲಿ ಬ್ರಾಹ್ಮಣರು ಅಸುರಕ್ಷಿತರು, ಸನಾತನಿಗಳು ಎಂದಿಗೂ ಮರೆಯುವುದಿಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು...

ಹಿಮಂತ ಬಿಸ್ವಾ ಶರ್ಮಾ ‘ಗುಂಡು ಹಾರಿಸುವ’ ವಿಡಿಯೋ ವಿರುದ್ಧದ ಅರ್ಜಿ; ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದಿಷ್ಟ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟು ರೈಫಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಡಪಂಥೀಯ...

ನರವಾಣೆಯ ಅಪ್ರಕಟಿತ ಆತ್ಮಚರಿತ್ರೆ ಪ್ರಸಾರ ಆರೋಪ : ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು

ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ"ಯ ಪ್ರಸಾರ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಪುಸ್ತಕದ ವಿಷಯಗಳನ್ನು ಪ್ರತಿಪಕ್ಷ...

ನರವಾಣೆ ಅವರ ಆತ್ಮಚರಿತ್ರೆಯ ಯಾವುದೇ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ: ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಗೆ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಹೇಳಿದ್ದು,...