Homeಚಳವಳಿ144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

- Advertisement -
- Advertisement -

ನಮ್ಮ ದೇಶದಾಗ ಎಲ್ಲಾರಿಗೂ ಗೊತ್ತಿರುವ ಮೂರು ಕಾಯಿದೆ ಅಂದರ ಐಪಿಸಿ 420 ಮತ್ತು 302 ಹಾಗೂ ಸಿಆರ್‍ಪಿಸಿ 144.

420 ಅಂದರ ಭಾರತೀಯ ಅಪರಾಧ ಸಂಹಿತೆಯ ಪ್ರಕಾರ ಮೋಸದ’ ವ್ಯಾಖ್ಯಾನ. ಯಾವದಾದರೂ ವ್ಯಕ್ತಿ ಇನ್ನೊಬ್ಬನಿಗೆ ನಂಬಿಕೆ ದ್ರೋಹ ಮಾಡಿ, ಆ ಮೂಲಕ ಒಂದು ವಸ್ತುವನ್ನು ಬಿಟ್ಟುಕೊಡುವಂತೆ ಅಥವಾ ಯಾರಿಗಾದರೂ ಕೊಡುವಂತೆ ಮಾಡಿದರೆ ಅಥವಾ ಪ್ರಮುಖ ದಸ್ತಾವೇಜೊಂದನ್ನು ಸೃಷ್ಟಿಸಿ, ಬದಲಿಸಿ ಅಥವಾ ನಾಶ ಮಾಡಲು ಪ್ರಯತ್ನಿಸುವಂತೆ ಮಾಡಿದರೆ ಅಥವಾ ಯಾವುದಾದರೂ ಒಂದು ಸಹಿ ಮಾಡಿ, ಸೀಲು ಹಾಕಲಾದ ದಾಖಲೆಯೊಂದನ್ನು ದಸ್ತಾವೇಜನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರೆ, ಅವನಿಗೆ ಏಳು ವರ್ಷದವರೆಗೆ ಸಜೆ ಹಾಗೂ ದಂಡ ವಿಧಿಸಲಾಗುವುದು.

ಇಷ್ಟು ಸರಳ ಇರೋ ವಿಚಾರ ತಿಳೀದ ನಮ್ಮ ಸಾಹಿತಿಗಳು, ಚಲನಚಿತ್ರ ಹಾಗೂ ಸೀರಿಯಲ್ಲು ನಿರ್ದೇಶಕರು ತಪ್ಪುತಪ್ಪಾಗಿ ವಜ್ರಮುನಿ, ತೂಗುದೀಪ ಶ್ರೀನಿವಾಸ, ದಿನೇಶ ಮುಂತಾದವರಿಗೆ 420, 420 ಅಂದ ಬಿಟ್ಟರಲ್ಲಾ ಪಾಪ ! ಇನ್ನ ಎಲ್ಲಾ ರಂಗದಾಗೂ ತಮ್ಮ ಮಹಾನ್ ನಾಯಕರಿಗೆ ನಡಕೊಳ್ಳೋ ನಮ್ಮ ಜನ ತಮ್ಮ ತಮ್ಮ ಊರಾಗ ಯಾರ್ಯಾರು ಪ್ರಶ್ನಾರ್ಥಕ ಸ್ವಭಾವದ ಜನ ಇರತಾರೋ ಅವರಿಗೆಲ್ಲಾ 420 ಅಂದು ಕೈತೊಳಕೊಂಡರು.

ಇನ್ನ ಐಪಿಸಿ 302. ಇದರ ಪ್ರಕಾರ ಯಾವ ವ್ಯಕ್ತಿ ಕೊಲೆ ಮಾಡುತ್ತಾನೋ ಅವನಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಆಗುವುದು. ಅದರ ಜೊತೆಗೆ ಆ ವ್ಯಕ್ತಿ ದಂಡವನ್ನು ತೆತ್ತಬೇಕಾಗುವುದು.

ಹಳೇ ಹಿಂದಿ ಸಿನಿಮಾ ಅಥವಾ ಕಪ್ಪು- ಬಿಳಿ ಕನ್ನಡ ಸಿನಿಮಾ ನೋಡಿದ ಎಲ್ಲಾರಿಗೂ 302 ಗೊತ್ತಿರತದ. ಅದರಾಗ ಇಫ್ತಿಕಾರ್ ಅವರು ನ್ಯಾಯಮೂರ್ತಿಯಾಗಿ ಫಾರ್ಸಿ- ಉರ್ದು ಮಾತಾಡೋ ಲಕನೋ ಬ್ರಾಹ್ಮಣನಾಗಿ ತಾಜರಾತೆ ಎ ಹಿಂದ ದಫಾ ತೀನ ಸೌ ದೋ ಅಂತ ಅಂದರ ಇಲ್ಲೆ ನಾಯಕನ ತಾಯಿಯ ರೂಪದಾಗಿನ ನಿರುಪಾ ರಾಯ್ ನಹೀಂ ಅಂತ ಅಳ್ಳಿಕ್ಕೆ ಹತ್ತಿ ಬಿಡತಾಳ. ಕನ್ನಡದಾಗ ಅಪರಾಧಸಂಹಿತೆ 302 ಪ್ರಕಾರ ಗಲ್ಲು ಶಿಕ್ಷೆ ಅಂತ ಅಂದಕೂಡಲೇ ನಾಯಕಿ ತನ್ನ ಕುಂಕುಮ ಅಳಿಸಿಕೊಂಡು ಬಿಡತಾಳ. ಗಲ್ಲಿಗೇರಿಸುವುದು ಇನ್ನೂ ಮುಂದಿನ ಸೀನಿನ್ಯಾಗ ಇರತದ. ತಲಗವಾರ ಸೀತಾರಾಮ ಅವರ ಮಮಕಾರದ ಸೀರಿಯಲ್ಲಿನ್ಯಾಗ ಯಾವ ವಿಲನ್ನುಗಳು 302 ಶಿಕ್ಷೆಗೆ ಒಳಗಾಗುವಷ್ಟು ದೊಡ್ಡ ತಪ್ಪು ಇನ್ನೂ ಮಾಡಿಲ್ಲ. ಅದಕ್ಕ ನಮ್ಮ ಕರುನಾಡಿನ ಮಧ್ಯಮ ವರ್ಗದವರಿಗೆ ಇನ್ನೂ ಅದು ಗೊತ್ತಾಗಿರಲಿಕ್ಕಿಲ್ಲ.

ಈಗ ಸದ್ಯ ಇಡೀ ರಾಜ್ಯದಲ್ಲಿ ಮೂರು ದಿನ 144 ಸೀಆರ್‍ಪಿಸಿ ದ ಕಪಿಮುಷ್ಟಿಯೊಳಗ ಅದ. ಇದೂ ಸಹಿತ ಬಹಳ ಜನರಿಗೆ ಗೊತ್ತಿರೋ ವಿಷಯ. ಬೆಂಗಾವಲೂರಿನ ಬೆಂಗಾವಲು ಅಧಿಕಾರಿಯೊಬ್ಬರು ಇತರರಿಗೆ ಅನಾನುಕೂಲವಾದಾಗ ಇದನ್ನು ಜಾರಿ ಮಾಡಬಹುದು. ಇದರಿಂದ ಯಾರಿಗಾದರೂ ಅನಾನುಕೂಲವಾದರೆ ಅವರು ಉತ್ತರ ಭಾರತಕ್ಕೆ ಹೋಗಲಿ ಅಂತ ಹೇಳಿದ್ದಾರೆ. ಯಾವ ಪ್ರತಿಭಟನೆಗೂ ಹೋಗಬೇಡಿ. ಪಾಲಕರು ಮಕ್ಕಳಿಗೆ ಬುದ್ಧಿವಾದ ಹೇಳಿ ಅಂತ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಸಲಹೆ ಕೊಟ್ಟಾರ. ಬ್ಯಾರೆ ಎಲ್ಲಾ ಕಡೆ ಕಾನೂನು ಸುವ್ಯವಸ್ಥೆ ಪಾಲಿಸೋ ದೃಷ್ಟಿಯಿಂದ ಹಾಕೇವಿ ಅಂತ ಹೇಳತಾರ. ಇಷ್ಟೆಲ್ಲ ಮುಂಜಾಗ್ರತೆ ಇದ್ದರೂ ಕೂಡ ಹಿಂಸಾಚಾರ, ಪೊಲೀಸ್ ದೌರ್ಜನ್ಯ, ಸಾವು, ನೋವು ಕಮ್ಮಿ ಆಗಿಲ್ಲ.  ಇಷ್ಟೆಲ್ಲ  ಗುಂಡು ಹಾರಿಸಿದರೂ ಒಂದೂ ಹೆಣ ಬೀಳಲಿಲ್ಲ ಅಂತ ಕೆಲವರು ಬೇಜಾರು ಮಾಡಿಕೊಳ್ಳೋಹಂಗ ಆತು. ಅದು ಬ್ಯಾರೆ ವಿಷಯ. ಇಷ್ಟೆಲ್ಲ ಕುತಂತ್ರದ ಪ್ರತಿಭಟನೆ ನಡದರೆ ಸುಮ್ಮನೆ ಕೂಡಲು ಕೇಂದ್ರ ಹಾಗೂ ರಾಜ್ಯದಲ್ಲಿ ಇರೋದು ಹೇಡಿ ಸರಕಾರ ಅಲ್ಲ. ಅದನ್ನ ಹೇಗೆ ಎದುರಿಸಬೇಕು ಅನ್ನೊದು ನಮಗ ಗೊತ್ತೈತಿ ಅಂತ ಸಚಿವ ಚಿಕ್ಕಮಾಗರವಳ್ಳಿ ತಿಮ್ಮೇ ಗೌಡ ರವಿ ಅವರು ಹೇಳ್ಯಾರ. ಯಾಕ ಗೋಧ್ರಾ ನೆನಪ ಐತ್ಯೋ ಇಲ್ಲೋ ಅಂತ ಮಾಜಿ ಕಾಂಗ್ರೆಸ್ ಸಚಿವರೊಬ್ಬರಿಗೆ ಎದುರುತ್ತರ ಕೊಟ್ಟಾರ.

ಭವ್ಯ ಭರತಖಂಡದ ಬಹುತೇಕ ರಾಜ್ಯದಾಗ ಜಾರಿಗೆ ಬಂದಿರೋ ಈ 144ರ ಹಕೀಕತ್ತು ಏನು? ಇದರ ಪ್ರಕಾರ ಜಿಲ್ಲಾ ದಂಡಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಇತರ ಯಾವುದೇ ವಿಶೇಷ ಅಧಿಕಾರ ಹೊಂದಿದ ಅಧಿಕಾರಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಅಂತ ಹೇಳಬಹುದು. ಈ ಆಸ್ತಿಯನ್ನು ಈ ರೀತಿಯಿಂದ ಕಾಳಜಿ ಮಾಡಿ ಅಂತ ಸಲಹೆ ನೀಡಬಹುದು.

ಇದನ್ನು ಮೂರು ಸಂದರ್ಭದೊಳಗ ಮಾಡಬಹುದು.
1. ಶಾಂತಿ ಭಂಗದ ಸಾಧ್ಯತೆ. ಹಿಂಸಾತ್ಮಕ ಘಟನೆ, ದೊಂಬಿಯ ಸಾಧ್ಯತೆ.
2. ಮಾನವ ಮಾನಹಾನಿ, ಆರೋಗ್ಯ, ಸುರಕ್ಷೆಗೆ ಅಪಾಯ ಸಾಧ್ಯತೆ.
3. ಸರಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿಯಾದರೆ, ತೊಂದರೆ, ಗಾಯ ಆಗುವ ಸಾಧ್ಯತೆ ಇದ್ದರೆ.

ಈ ಕಾಯಿದೆ ಸಂವಿಧಾನದಲ್ಲಿ ಕೊಟ್ಟ ಮೂಲ ಸ್ವಾತಂತ್ರ್ಯದ ಹಕ್ಕಾದ 1. ವಾಕ್ ಸ್ವಾತಂತ್ರ್ಯ, ನಡೆದಾಡುವ ಹಾಗೂ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಇವುಗಳ ಮಿತಿಯಿಂದ ಇದನ್ನು ತಪ್ಪಿಸಬೇಕೆಂದರ ಅದಕ್ಕ ವಿಶೇಷ ಸ್ಥಾನ ಇರಬೇಕು.

ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೀರಬೇಕಾದ ಯಾವುದೇ ಕಾನೂನು ಸಕಾರಣವಾಗಿರಬೇಕು. ನ್ಯಾಯಯುತವಾಗಿರಬೇಕು, ಪಾರದರ್ಶಕವಾಗಿರಬೇಕು ಅಂತ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಹಂಗ ಇರಬೇಕು.
ಹಂಗಂದರ 144 ಅನ್ನೋದು ಇಷ್ಟೆಲ್ಲ ಪರೀಕ್ಷೆಗಳನ್ನ ಮೀರತದಾ? ಮಾಡರ್ನ ಡೆಂಟಲ್ ಕಾಲೇಜು ಪ್ರಕರಣದಾಗ ನ್ಯಾಯಾಲಯ ಸಿದ್ಧಪಡಿಸಿದ ಸಮಪಾತಳಿಯ ಸಿದ್ಧಾಂತದ ಪ್ರಕಾರ ಇದು ಇರಬೇಕು.

1. ಪ್ರತಿಯೊಂದು ಇಂಥಾ ಪ್ರಕರಣಕ್ಕೂ ಇದು ಅತ್ಯಗತ್ಯವಾಗಿರಬೇಕು.
2. ಇದರಿಂದ ಆ ಕಾರ್ಯಸಾಧನೆ ಆಗುವಂತಿರಬೇಕು.
3. ಇದಕ್ಕೊಂದು ನಿರ್ದಿಷ್ಟ ಗುರಿ ಇರಬೇಕು.
ಇನ್ನು ಪುಟ್ಟಸ್ವಾಮಿ ಪ್ರಕರಣದಾಗ ಹೇಳಿದಂಗ ಅದು ಸರಕಾರದ ಕ್ರಮಕ್ಕೂ ನಡಿತಾ ಇರೋ ಘಟನೆಗೂ 1. ನೇರ ಸಂಬಂಧ 2. ನೈಜವಾದ ಗುರಿ, 3. ಕಾರ್ಯಕಾರಣ ಸಮತೋಲನ ಇರಬೇಕು ಹಾಗೂ ಬಳಸಿದ ಕ್ರಮ 4. ಸಕಾರಣವಾದ ಪ್ರಕ್ರಿಯೆ ಆಗಿರಬೇಕು.

ಬಾಬುಲಾಲ ಪರಾಠೆ ಪ್ರಕರಣದೊಳಗ ಪ್ರತಿಭಟನೆಯಿಂದ ಹಿಂಸೆ ಆಗಬಹುದು ಎನ್ನುವ ಊಹಾಪೋಹಗಳಿಗೆಲ್ಲ 144 ಹಾಕಬಾರದು ಅಂತ ಸುಪ್ರೀಂಕೋರ್ಟು ಹೇಳೇದ. ಮಧು ಲಿಮಯೆ ಪ್ರಕರಣದೊಳಗ ಇದನ್ನು ಅತ್ಯಂತ ಜರೂರಿನ ಪ್ರಕರಣಗಳಲ್ಲಿ, ಗಂಭೀರ ಸಮಸ್ಯೆ ಎದುರಾದಾಗ , ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು ಅಂತ ಅಭಿಪ್ರಾಯ ಪಟ್ಟದ.

ಆದರೆ ಚುನಾಯಿತ ಸರಕಾರಗಳು ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು, ಲೋಕಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಇದನ್ನು ಬಳಸುತ್ತವೆ ಅನ್ನೋದು ತಿಳಿದವರ ಅಂಬೋಣ.

ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಇದು ಬ್ರಿಟಿಷರು ಮಾಡಿಹೋದ ಕಾನೂನನ್ನು ಸಾರಾಸಾರ ವಿಚಾರ ಮಾಡದೇ ಬಳಸುವ ತರಾತುರಿಯ ಕ್ರಮ. ಇದು ನಮ್ಮನ್ನು ಆಳುವವರ ವಸಾಹತುಶಾಹಿ ಮಾನಸಿಕತೆಯ ಗುರುತು ಅಂತ ಟೀಕೆ ಮಾಡಿದಾರ. ಹಿಂಸೆ ಆಗಲು ಬಲವಾದ ಕಾರಣ ಇರದೇ, ಸಾಕ್ಷ್ಯ ಇರದೇ ಇದನ್ನು ಬಳಸುವುದು ಸರಿ ಅಲ್ಲ, ಅಂತ ಸುಪ್ರೀಂಕೋರ್ಟು ಹೇಳೇದ. ಜಿಲ್ಲಾಧಿಕಾರಿ ಇದನ್ನು ಜಾರಿ ಮಾಡುವಾಗ ಲಿಖಿತ ಆದೇಶ ನೀಡಬೇಕು ಅದರಲ್ಲಿ ಹಿಂಸೆಯ ಪ್ರಚೋದನೆಗೆ ಸಂಬಂಧಿಸಿದಂತೆ ಕಾರಣ ನೀಡಬೇಕು ಅಂತ ನ್ಯಾಯಮೂರ್ತಿಗಳು ಆದೇಶ ಮಾಡ್ಯಾರ.

ರಾಮಲೀಲಾ ಮೈದಾನ ಪ್ರಕರಣದಾಗ ಅನಗತ್ಯವಾಗಿ 144 ಹಾಕಿದ್ದಕ್ಕ ಅಧಿಕಾರಿಗಳಿಗೆ ದಂಡ ಹಾಗೂ ಪೊಲೀಸ್ ದೌರ್ಜನ್ಯಕ್ಕ ಒಳಗಾದವರಿಗೆ ಪರಿಹಾರ ಕೊಡಿಸಿತು. ಅದನ್ನು ನಾವು ಮರೆತುಬಿಟ್ಟಿವಿ.

ರಾಮ ಮನೋಹರ ಲೋಹಿಯಾ ಪ್ರಕರಣದಾಗ ಅಕಾರಣವಾಗಿ ಮೂಲಭೂತ ಹಕ್ಕುಗಳನ್ನು ತಡೆಯೋದು ಪ್ರತಿಭಟನೆ ನಿಲ್ಲಿಸುವ ನೆವ ಅಷ್ಟೆ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟದ. ಆದರ ನಾವು ಭಾರತೀಯರು ಜಾಣ ಕಿವುಡರು. ನಮಗೆ ಬೇಕಿದ್ದಷ್ಟನ್ನ ನಾವು ಕೇಳತೇವಿ.

ಹಂಗಾರ ಕಡೀಕೆ ಏನಾತಪಾ ಅಂದರ 420ಗಳಿಗೆ ಅಧಿಕಾರ ಕೊಟ್ಟರ ಅವರು ಮೊದಲ 144 ಹಾಕತಾರ. ಅದಕ್ಕ ಬಗ್ಗಲಿಲ್ಲ ಅಂದರ ನಾವೆಲ್ಲಾ ಅಣ್ಣ ತಮ್ಮಾ ಹೊಡದಾಡಿಕೊಂಡು 302 ಪ್ರಕರಣಕ್ಕ ಒಳಪಡೋಹಂಗ ಮಾಡತಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...