Homeಕರ್ನಾಟಕಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬಯಲಲ್ಲಿ ಬಯಲಾದ ಬಯಲ ಜೀವ ಕಾರ್ನಾಡ್

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು.

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾದ ಗಿರೀಶ್ ಕಾರ್ನಾಡರು ನಮ್ಮಿಂದ ಇಂದು ಅಗಲಿ ಹೋಗಿದ್ದಾರೆ. ಆದರೆ ಅವರು ಕಟ್ಟಿಕೊಟ್ಟ, ಬಿತ್ತಿ ಹೋದ ಬೀಜಗಳು ನಮ್ಮೆಲ್ಲರ ಅಂತರಂಗದಲ್ಲಿ ಮೊಳಕೆ ಒಡೆದಿವೆ. ಅವರ ವಿಚಾರಧಾರೆಯ ಎಳೆ ಹಿಡಿದು ಹೊರಟ ಎಷ್ಟೋ ಕನಸಿನ ಹೂಗಳು ಈಗಾಗಲೆ ಮಿಡಿಯಾಗಿ, ಕಾಯಾಗಿ , ಹಣ್ಣಾಗಿ ನಮ್ಮ ಕಣ್ಣ ಮುಂದೆಯೆ ನಳನಳಿಸುತ್ತಿವೆ. ಗಿರೀಶ್ ಕರ್ನಾಡರು ತಲೆದಂಡ ಬರೆದಾಗ ಅವರ ಬಗೆಗೆ ಕೆಲವು ಆಕ್ಷೇಪಗಳು ಇದ್ದವು. ಅವನ್ನು ಹೊರತು ಪಡಿಸಿ ಅವರೊಬ್ಬ ಗಟ್ಟಿಯಾದ ನಿಲುವುಗಳು ಹೊಂದಿದ ಬರಹಗಾರರಾಗಿದ್ದರು. ನಿರ್ದೇಶಕರಾಗಿದ್ದರು. ಅತ್ಯುತ್ತಮ ನಟರೂ ಆಗಿದ್ದರು.

ಇದಷ್ಟೇ ಅಲ್ಲದೆ ಕಲಾವಿದ, ಬರಹಗಾರ, ನಾಟಕಕಾರ ಕೇವಲ ತನ್ನ ಲೋಕದಲ್ಲಿ ಮುಳುಗಿ ಹೋಗದೆ ವಾಸ್ತವಿಕ ಜಗತ್ತಿನಲ್ಲೂ ತನ್ನ ಪಾತ್ರವನ್ನು ಅವಕಾಶ ಸಿಕ್ಕಾಗಲೆಲ್ಲ ತೋರ್ಪಡಿಸುತ್ತಿದ್ದರು. ಪಿ.ಲಂಕೇಶ್ ಅವರೊಂದಿಗೆ ಬೆಳೆದ ಸಖ್ಯ, ಗೌರಿ ಲಂಕೇಶ್ ವರೆಗೂ ಹಾಗೆ ಮುಂದುವರೆಯಿತು. ರಾಷ್ಟ್ರದಲ್ಲಿ ಹಿಂದೂ ಭಕ್ತಿಯ ಹೆಸರಿನ ಮೇಲೆ ನಡೆದ ನಂಗಾನಾಚ ವಿರುದ್ಧ ಧ್ವನಿ ಎತ್ತಿದವರಲ್ಲಿ ಕಾರ್ನಾಡರೂ ಒಬ್ಬರಾಗಿದ್ದರು. ದನದ ಸೆಗಣಿ, ಗಂಜಳಕ್ಕಿಂತಲೂ ಮನುಷ್ಯತ್ವ ಶ್ರೇಷ್ಠ ಎಂಬುದು ಅವರ ಚಿಂತನೆಯ ಒಟ್ಟು ಧ್ವನಿಯಾಗಿತ್ತು.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ? ಎಂಬುದು ಅವರ ಮಾರ್ಗವಾಗಿತ್ತು. ಹೀಗಾಗಿ ಅವರು ಬೆಳಕಿಲ್ಲದ ದಾರಿಯಲ್ಲಿ ನಡೆದು ಬೆಳಕು ಹೊತ್ತಿಸಿದರು. ತಮ್ಮ ಗಟ್ಟಿಯಾದ ಅಷ್ಟೇ ದಿಟ್ಟವಾದ ಹೆಜ್ಜೆಗಳನ್ನು ಇಡುವ ಮೂಲಕ ಕನಸುಗಳನ್ನೂ ಕಟ್ಟಿಕೊಟ್ಟರು. ಇಡೀ ನಾಡಿನ ತುಂಬ ತಮ್ಮ ಚಟುವಟಿಕೆಗಳ ಮೂಲಕ ಎಲ್ಲರ ಹೆಗ್ಗಳಿಕೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿಯ ಪುರಸ್ಕಾರವೂ ಅವರ ಮಡಿಲಿಗೆ ಏರಿತು.

ಆದರೆ ಬಹಳಷ್ಟು ಜನ ಸಾಹಿತಿಗಳು ಕಲಾವಿದರು ಪ್ರಶಸ್ತಿ ಫಲಗಳು, ಸ್ಥಾನ ಮಾನಗಳು ದೊರೆತಾದ ಮೇಲೆ ಎಲ್ಲರ ಜೊತೆ ಅಂದರೆ ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆಯುವುದು ಕಮ್ಮಿ. ತಮ್ಮ ಎಂದಿನ ಪ್ರಶಸ್ತಿಯ ಗುಂಗಿನಿಂದ ಹೊರಗಡೆ ಬಂದಿರುವುದಿಲ್ಲ. ಆ ಪ್ರಶಸ್ತಿ ಹಾರ ತುರಾಯಿಗಳಲ್ಲಿಯೇ ಕೊಳೆತು ಹೋಗಿರುತ್ತಾರೆ. ಈ ಮಾತಿಗೆ ಕಾರ್ನಾಡರು ಅಪವಾದವಾಗಿದ್ದರು. ತಾವು ನಂಬಿದ ತತ್ವ ಸಿದ್ಧಾಂತಗಳು ತಮ್ಮ ಕಣ್ಣ ಮುಂದೆಯೆ ನಗೆಪಾಟಲಿಗೆ ಈಡಾಗುತ್ತಿದ್ದರೆ ತಕ್ಷಣವೆ ಅದಕ್ಕೆ ಸ್ಪಂದಿಸುತ್ತಿದ್ದರು. ಬೆಂಗಳೂರಿನ ಟೌನ ಹಾಲ್ ಮುಂದೆ ನಡೆಯುವ ಏನೆಲ್ಲ ಪ್ರತಿಭಟನೆಯಲ್ಲಿಯೂ ಅವರ ಹಾಜರಿ ಇರುತ್ತಿತ್ತು.

ಪ್ರಜ್ಞಾವಂತ ನಡಾವಳಿಯ ಬರಹಗಾರರನ್ನು ಕಂಡರೆ ಗುಲಾಮರಿಗೆ ಉರಿ ಉರಿ. ಕಾರ್ನಾಡರ ಬಗೆಗೂ ಸಂಘಿಗಳು ಕಿಡಿಕಾರಿದವು. ನಾನೂ ನಗರ ನಕ್ಸಲ್ ವಾದಿ ಎಂದು ಬರಹವೊಂದನ್ನು ಕೊರಳಲ್ಲಿ ಹಾಕಿಕೊಂಡು ಪ್ರತಿಭಟನೆಗೆ ಇಳಿದಾಗ ಬಹಳಷ್ಟು ಜನ ಕುಹಕದ ಮಾತನಾಡಿದರು. ಆಗಲೂ ಅವರ ಮಾತನ್ನು ಕಾರ್ನಾಡ ನಗು ನಗುತ್ತಾ ಸ್ವೀಕರಿಸಿದರು. ಏಕೆಂದರೆ ಅವರಿಗೆ ಸತ್ಯ ಗೊತ್ತಿತ್ತು. ಸನಾತನವಾದಿಗಳು ವಿಚಾರವಾದವನ್ನು ಒಪ್ಪಲಾರರು. ಧರ್ಮವನ್ನು ಅಫೀಮನ್ನಾಗಿ ಜನಗಳಿಗೆ ನೀಡುವವರು ಧರ್ಮವೊಂದು ದಯಯ ತಳಹದಿ ಎಂದು ಅರಿಯಲಾರರು ಎಂದು.

‘ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು. ಪ್ರತಿಯೊಂದು ಪ್ರಾರ್ಥನೆಯೂ ನಮ್ಮನ್ನು ದೇವರೆಡೆಗೆ ಒಯ್ಯುವ ಮೆಟ್ಟಿಲಾಗಬೇಕು. ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣದ ಸೋಂಕು ಬಡಿದಿದೆ’ ಎಂದು ತುಘಲಕ್ ನಾಟಕದಲ್ಲಿ ಬರೆಯುವ ಮೂಲಕ ನಮ್ಮ ಇಂದಿನ ರಾಜಕೀಯ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.

ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮ ಗುರುವು ತೊಳೆದಿಲ್ಲ! ಎಂಬುದು ಅವರಿಗೆ ಖಚಿತವಾಗಿತ್ತು. ಆದರೂ ಅವರು ತಮ್ಮ ಮಾನವೀಯ ನಡಾವಳಿಕೆಗಳ ಮೂಲಕ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ಮುಂದಾಗುತ್ತಿದ್ದರು. ಆಗ ರಾಕ್ಷಸಿ ಪ್ರವೃತಿಯನ್ನು ರೂಢಿಸಿಕೊಂಡ ಕೆಲವು ಮನಸ್ಸುಗಳು ಈಗ ಸಂತೋಷ ವ್ಯಕ್ತ ಪಡಿಸುತ್ತಿವೆ. ಸಾವನ್ನು ಮರಣವೇ ಮಹನವಮಿ ಎಂದು ಸ್ವೀಕರಿಸುವ ಛಲ ಕಾರ್ನಾಡರಿಗೆ ಇತ್ತು. ಆದ್ದರಿಂದಲೆ ತಮ್ಮ ಜೀವವಿಲ್ಲದ ದೇಹಕ್ಕೆ ಸರಕಾರಿ ಸಕಲ ಗೌರವ ಎಂಬ ನಾಟಕ ಗೀಟಕ ಬೇಡ ಎಂದು ತಮ್ಮ ಕುಟುಂಬದ ಸದಸ್ಯರಲ್ಲಿ ಹೇಳಿಕೊಂಡಿದ್ದಾರೆ. ಅವರ ಶರೀರವೂ ಸಹ ಯಾವುದೆ ಧಾರ್ಮಿಕ ವಿಧಿ ವಿಧಾನ ಇಲ್ಲದೆ ನೆರವೇರಿಸಬೇಕೆಂದೂ ತಿಳಿಸಿದ್ದಾರೆ. ಈ ಮೂಲಕ ಅವರು ಅನಂತದೆಡೆಗೆ ಪಯಣಿಸಿದ್ದಾರೆ.

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಎಂಬ ಅಲ್ಲಮಪ್ರಭುವಿನ ವಚನದಂತೆ ಬಯಲು ಬಯಲನ್ನು ಬಿತ್ತಿ ಬಯಲು ಬಯಲನ್ನೆ ಬೆಳೆದು ಬಯಲು ಬಯಲಾದರು ಕರ್ನಾಡರು. ಅವರ ಬಯಲ ಜೀವನ ಬಯಲ ಭಾವನೆ ನಮ್ಮೆಲ್ಲರೊಳಗೆ ಬಯಲು ಬಯಲಾಯಿತ್ತು. ಸಮಾಜವನ್ನು ಪ್ರೀತಿಸಿದ ಗೌರವಿಸಿದ ಸಮಾಜದೊಂದಿಗೆ ಜೀವಂತವಾಗಿ ಸ್ಪಂದಿಸಿ ಜೀವಂತ ಬದುಕಿದ ಕಾರ್ನಾಡ ಸತ್ಯವನ್ನು ನಂಬಿ ಬಯಲಾಗಿದ್ದಾರೆ. ಅಂದರೆ ನಮ್ಮೆಲ್ಲರೊಳಗೆ ಬೆರೆತು ಹೋಗಿದ್ದಾರೆ. ಕಾರ್ನಾಡರಿಗೆ ಸಾವು ಇಲ್ಲ. ಅರಿತವರು ಸಾಯುವುದೂ ಇಲ್ಲ. ಅರಿತುಕೊಂಡಿದ್ದ ಕಾರ್ನಾಡರು ನಮ್ಮೆಲ್ಲರೊಳಗೆ ಪ್ರಜ್ಞೆಯಾಗಿ ಜೀವಂತವಾಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...