Homeಮುಖಪುಟ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ...

‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಚಾರ್ಲಿ’ ಸಿನಿಮಾಕ್ಕೆ ಭಾರೀ ಜನಸ್ಪಂದನೆ ಮೂಡಿ ಬಂತು. ‘ಚಾರ್ಲಿ’ ಎಂಬ ನಾಯಿಯ ಸುತ್ತ ಹೆಣೆದ ಈ ಸಿನಿಮಾವನ್ನು ನೋಡಿ ಅನೇಕರು ಭಾವುಕರಾದರು. ಇದನ್ನೆಲ್ಲ ನೋಡುತ್ತಿದ್ದಾಗ, ‘ಚಾರ್ಲಿ’ ಎಂಬ ನಾಯಿ ಮಾರಾಟದ ಸರಕಾಗಿದೆ ಎನಿಸುತ್ತಿತ್ತು. ‘ಚಾರ್ಲಿ’ ಎಂಬ ನಾಯಿಯ ಕಥೆಗೆ ಜನ ನೀಡುತ್ತಿದ್ದ ವಿಪರೀತ ಸ್ಪಂದನೆಯ ನಡುವೆ- ‘ಕರುಪ್ಪಿ’ ಎಂಬ ನಾಯಿ ತೀವ್ರವಾಗಿ ಕಾಡತೊಡಗಿತ್ತು.

ಯಾವುದು ಉತ್ತಮ ಕಲಾಕೃತಿ? ಅದರ ಲಕ್ಷಣಗಳೇನು? ಎಂಬ ಪ್ರಶ್ನೆಗಳು ಇಂದು ಮೊನ್ನೆಯದ್ದಲ್ಲ. ಪ್ರತಿಯೊಂದು ಕಲಾ ಮಾಧ್ಯಮವು ತನ್ನದೇ ಆದ ಪರಿಭಾಷೆಗಳನ್ನು, ಕಲಾಭಿವ್ಯಕ್ತಿಯ ದಾರಿಗಳನ್ನು ಹೊಂದಿದ್ದರೂ ಕಲಾ ಮೀಮಾಂಸೆಯ ಒಟ್ಟು ಉದ್ದೇಶ- ರಸಾನುಭವ, ಅನುಭೂತಿ. ನಮ್ಮನ್ನು ಇನ್ನಿಲ್ಲದಂತೆ ಕಾಡುವ, ಪದಗಳಲ್ಲಿ ವಿವರಿಸಲಾಗದ ಅವ್ಯಕ್ತ ಭಾವನೆಗಳನ್ನು ಸೃಷ್ಟಿಸುವ ಮಾಧ್ಯಮಗಳನ್ನು- ಉತ್ತಮ ಕಲಾಕೃತಿ ಎನ್ನಬಹುದೇನೋ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳಿನ ಮಾರಿ ಸೆಲ್ವರಾಜ್ ಸಿನಿಮಾಗಳ ಕುರಿತು ಧ್ಯಾನಿಸುತ್ತಾ ಹೋದಂತೆ ಕಲಾ ಮೀಮಾಂಸೆಯ ಪರಿಭಾಷೆಗಳನ್ನೂ ಪಕ್ಕದಲ್ಲಿಟ್ಟು ನೋಡುವುದು ಅನಿವಾರ್ಯವಾಗುತ್ತದೆ. ಸೆಲ್ವರಾಜ್‌ ದೃಶ್ಯ ಕಲಾ ಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ಸೃಜನಶೀಲ ವ್ಯಕ್ತಿ. ಅವರ ಸಿನಿಮಾಗಳು ಮೂರರಲ್ಲಿ ಮತ್ತೊಂದಾಗದೆ ವಿಶಿಷ್ಟ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿಯೂ, ವಿನೂತನ ಪ್ರತಿರೋಧದ ಹೆಜ್ಜೆಗಳಾಗಿಯೂ ದಾಖಲಾಗುತ್ತಿವೆ.

ನಿರ್ದೇಶಕ ಮಾರಿ ಸೆಲ್ವರಾಜ್‌

ಸಾಹಿತಿ ದೇವನೂರ ಮಹಾದೇವ ಅವರ ಮಾತಿಗಳಿಗೆ ಹೆಚ್ಚು ತೂಕ ಏಕೆ? ಎಂದು ಪ್ರಶ್ನಿಸಿಕೊಂಡರೆ, ಅವರು ಯಾವುದಾದರೂ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡುವಾಗ ಬಳಸುವ ರೂಪಕತೆಗಳೇ ಇದಕ್ಕೆ ಕಾರಣವೆಂದು  ಹೇಳಿಬಿಡಬಹುದು. ಯಾರಿಗೂ ಹೊಳೆಯದ ರೂಪಕಗಳು ದೇವನೂರರಲ್ಲಿ ಮೂಡುತ್ತವೆ. ಅವರ ಪ್ರತಿಕ್ರಿಯೆಗಳು ಸಾಂಸ್ಕೃತಿಕ ಇತಿಹಾಸಕ್ಕೆ ತಳುಕುಹಾಕಿಕೊಂಡು ಸೃಜನಶೀಲವಾಗಿರುತ್ತವೆ. ಮಾರಿ ಸೆಲ್ವರಾಜ್‌ ಅವರ ಕಲಾಕೃತಿಗಳಿಗೂ ಇದೇ ಮಾತು ಅನ್ವಯಿಸಬಹುದೇನೋ.

ಮಾರಿ ಸೆಲ್ವರಾಜ್ ನಿರ್ದೇಶಿಸಿರುವ ‘ಪರಿಯೇರುಮ್ ಪೆರುಮಾಳ್‌- ಬಿ.ಎ. ಬಿ.ಎಲ್‌’, ‘ಕರ್ಣನ್‌’ ಸಿನಿಮಾಗಳಲ್ಲಿ ಬಳಕೆಯಾಗಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಮಾತುಗಳಲ್ಲಿ ವಿವರಿಸಲಾಗದ ಅನುಭೂತಿ ನಮ್ಮದಾಗುತ್ತದೆ. ‘ಪರಿಯೇರುಮ್‌ ಪರುಮಾಳ್‌’ (ಕುದುರೆಯೇರಿ ಬರುವ ಪೆರುಮಾಳ್‌) ಎಂಬುದೇ ಒಂದು ರೀತಿಯ ರೂಪಕ. ‘ಕರ್ಣನ್‌’- ಸಿನಿಮಾವಂತೂ ಹೆಸರು ಮತ್ತು ಅದಕ್ಕಂಟಿದ ಜಾತಿ ಐಡೆಂಟಿಗಳ ಕುರಿತು ಢಾಳಾಗಿ ಚರ್ಚಿಸುತ್ತದೆ.

‘ಪರಿಯೇರುಮ್‌ ಪೆರುಮಾಳ್‌’ ರೂಪಕಗಳು

ಸೆಲ್ವರಾಜ್‌ ಅವರ ಸಿನಿಮಾಗಳಲ್ಲಿ ಹಲವು ರೂಪಕಗಳು ಅಲ್ಲಲ್ಲಿ ಬಳಕೆಯಾದರೂ ಪ್ರಧಾನ ರೂಪಕವೊಂದು ಇಡೀ ಸಿನಿಮಾದುದ್ದಕ್ಕೂ ಹರಿಯುವುದನ್ನು ಕಾಣಬಹುದು. ಪರಿಯೇರುಮ್‌ ಪೆರುಮಾಳ್‌ನಲ್ಲಿ ‘ಕರುಪ್ಪಿ’ (ಕಪ್ಪು ನಾಯಿ) ಪ್ರಧಾನ ರೂಪಕವಾಗಿದೆ. ಕಾರಣವಿಲ್ಲದೆ ಕೊಲೆಯಾಗುವ ಮುಗ್ಧ ಜನರ ಪ್ರತಿನಿಧಿಯಾಗಿ ‘ಕರುಪ್ಪಿ’ ನಿಲ್ಲುತ್ತದೆ. ಇಲ್ಲಿ ಕೊಲೆಯಾಗಿದ್ದು ‘ಕರುಪ್ಪಿ’ಯೋ ‘ಕಥಾನಾಯಕ’ನೋ ಎಂಬ ದುಗುಡವನ್ನು ಕಥೆಯ ಆರಂಭದಲ್ಲೇ ನಿರ್ದೇಶಕ ಬಿಟ್ಟು ಹೊರಡುತ್ತಾರೆ.

ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುವ, ಆದರೆ ತನ್ನ ಗೆಳತಿಗೆ ಈ ಕಾರಣವನ್ನು ಕೊನೆಯವರೆಗೂ ಹೇಳದೇ ಇರುವ ‘ಕಥಾನಾಯಕ’ ಯಾರಿಗೂ ಕೇಡು ಬಯಸದ ಮುಗ್ಧ ಜೀವಿ. ಗೆಳತಿ ಮುನಿಸಿಕೊಂಡು ಕ್ಲಾಸ್‌ ರೂಮ್‌ನಿಂದ ಹೊರ ನಡೆದಾಗ, ಅನಾಥನಂತೆ ಕುಳಿತ ಪೆರುಮಾಳ್‌ ಹತ್ತಿರ ಧಾವಿಸುತ್ತಾ ಬರುವ ‘ಕರುಪ್ಪಿ’ ಒಂದು ಅಮೂರ್ತ ಕಲ್ಪನೆ. ‘ನಾಯಾರ್‌’ ಹಾಡಿನಲ್ಲಿ ತೋರಿಸಲಾಗುವ ಕ್ರಿಮಿ, ಕೀಟ, ಗಾಯಗೊಂಡ ನಾಯಿ, ಹಾವು, ಚೇಳು- ಇವೆಲ್ಲವೂ ಕಥಾ ನಾಯಕನ ತಬ್ಬಲಿತನವನ್ನು ತೀವ್ರವಾಗಿ ತೋರಿಸುವ ರೂಪಕಗಳು.

ಜಾತಿಯ ಕಾರಣಕ್ಕೆ ಮಾರ್ಯಾದೆ ಹತ್ಯೆಗಳನ್ನು ಮಾಡುತ್ತ ಬರುತ್ತಿರುವ ಮುದುಕ, ಕೊನೆಗೆ ಪೆರುಮಾಳ್‌ನನ್ನು ಕೂಡ ಹೊಡೆದು ರೈಲಿನ ಕಂಬಿಯ ಮೇಲೆ ಮಲಗಿಸಿರುತ್ತಾನೆ. ಸಾವಿನ ದವಡೆಯಲ್ಲಿ ಮಲಗಿರುವ ಆತನತ್ತ ಓಡೋಡಿ ಬರುವ ನೀಲಿ ಬಣ್ಣದ ನಾಯಿ- ತೀವ್ರವಾಗಿ ಕಾಡುತ್ತದೆ. ಸಿನಿಮಾದ ಆರಂಭದಲ್ಲಿ ಕರುಪ್ಪಿಯನ್ನು ರೈಲಿನ ಅಳಿಗೆ ಕಟ್ಟಿ ಕೊಲ್ಲಲಾಗಿರುತ್ತದೆ. ಕರುಪ್ಪಿಯಂತೆಯೇ ಪೆರುಮಾಳ್‌ನನ್ನು ಕೊಲ್ಲಲು ಯತ್ನಿಸುವ ದೃಶ್ಯ ಹಾಗೂ ಎಚ್ಚರದ ಸೂಚಕವಾಗಿ ಓಡೋಡಿ ಬರುವ ಕರುಪ್ಪಿ- ನಮ್ಮನ್ನು ಸದಾ ಕಾಡುವ ರೂಪಕಗಳು.

‘ಕರ್ಣನ್‌’ ರೂಪಕಗಳು

ತುಳುನಾಡಿನ ದಲಿತ ಆತ್ಮಕಥೆಗಳನ್ನು ‘ಪಾಡ್ದನಾಗಳು’ ಎಂದು ಕರೆಯಲಾಗಿದೆ. ಇಲ್ಲಿನ ಭೂತಗಳನ್ನು ದಲಿತ ಪೂರ್ವಜರು ಎಂದು ಗುರುತಿಸಲಾಗಿದೆ. ಇಂತಹದ್ದೇ ದೈವ ಕಲ್ಪನೆಯನ್ನು ‘ಕರ್ಣನ್‌’ ಸಿನಿಮಾದಲ್ಲಿ ತರಲಾಗಿದೆ. ಇಡೀ ಸಿನಿಮಾದುದ್ದಕ್ಕೂ ಚಲಿಸುವ ಪ್ರಧಾನ ರೂಪಕವಿದು. ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಿದ್ದು ಹೊರಳಾಗಿ, ಯಾರ ಸಹಾಯವೂ ಸಿಗದೆ ಸಾವಿಗೀಡಾದ ಮಗು- ದೈವ ರೂಪ ಪಡೆಯುತ್ತದೆ. ದಲಿತರು ವಾಸವಿರುವ ಈ ಊರಿನ ಮುಂದೆ ಬಸ್‌ ನಿಲ್ಲಿಸದೆ ಇರುವುದು ಕ್ರಾಂತಿಯ ಮೂಲ. ಜಾತಿ ವಾದಿಗಳ ಅಸಹನೆ, ಕಿರುಕುಳ ಎಲ್ಲವನ್ನೂ ಪ್ರಶ್ನಿಸಿ, ಇಡೀ ವ್ಯವಸ್ಥೆಗೆ ಪ್ರತಿರೋಧ ತೋರುವಾಗಲೆಲ್ಲ- ಆ ದೈವದ ರೂಪ ತೆರೆಯ ಮೇಲೆ ಬಂದು ಖುಷಿಪಟ್ಟು ಹೋಗುತ್ತದೆ. ಬಸ್ಸನ್ನು ಛಿದ್ರ ಛಿದ್ರ ಮಾಡಿದಾಗ, ಇಡೀ ಊರೇ ಒಂದಾಗಿ ಹೋರಾಟಕ್ಕೆ ಸಜ್ಜಾದಾಗ, ಕಥಾ ನಾಯಕ ಕತ್ತಿ ಹಿಡಿದು ಕುದುರೆ ಏರಿ ಬರುವ ಮುನ್ನ… ಹೀಗೆ ಅನೇಕ ಸಂದರ್ಭಗಳಲ್ಲಿ ಈ ದೈವ ಪ್ರವೇಶಿಸುತ್ತದೆ.

ಬಸ್‌ ನಿಲ್ಲಿಸದ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತ, ಆನೆ ಮೇಲೆ ಏರಿ ಬರುವ ಊರಿನ ಜನ, ಜನಜಂಗುಳಿಯನ್ನು ಹಾದಿಹೋಗಲಾರದೆ ನಿಂತಿರುವ ವಾಹನಗಳು, ತಲೆ ಇಲ್ಲದ ಬುದ್ಧನ ವಿಗ್ರಹ, ಬುದ್ಧನ ಶಿರದ ಮೇಲೆ ಉದಯಿಸಿದಂತೆ ಭಾಸವಾಗುವ ಸೂರ್ಯ, ಕಾಲಿಗೆ ಕಟ್ಟು ಬಿಗಿದ ಕತ್ತೆ ಕುಂಟುತ್ತಾ ನಡೆಯುವುದು, ದೇವರ ಕತ್ತಿ, ಕೋಳಿ ಮರಿಗಳನ್ನು ಕದ್ದು ಹೊತ್ತುಯ್ಯುವ ರಣಹದ್ದು, ಪ್ರತಿರೋಧದ ಸೂಚಕವಾಗಿ ಕತ್ತೆಯ ಕಾಲಿನ ಕಟ್ಟು ಬಿಚ್ಚುವುದು… ಹೀಗೆ ಅನೇಕ ರೂಪಕಗಳನ್ನು ಕರ್ಣನ್‌ನಲ್ಲಿ ಬಳಸಲಾಗಿದೆ.

ತಲೆಗೆ ಮುಂಡಾಸು ಕಟ್ಟಿ ಮಾತನಾಡಿದ ಕಾರಣಕ್ಕೆ ಕೋಪಾದ್ರಿಕ್ತನಾದ ಪೊಲೀಸ್‌ ಅಧಿಕಾರಿ, ವಯಸ್ಸಾದವರನ್ನು ಥಳಿಸುವುದು, ಪತಂಗವೊಂದು ಆ ಭೀಕರ ದೃಶ್ಯಗಳ ಸುತ್ತ ಹಾರಾಡುವುದು, ವಿಷಯ ತಿಳಿದ ಊರಿನ ಜನ ಪೊಲೀಸ್‌ ಠಾಣೆಗೆ ನುಗ್ಗಿ ಪ್ರತಿರೋಧ ತೋರುವಾಗ ಬಾಬಾ ಸಾಹೇಬರ ಫೋಟೋಕ್ಕೆ ಕೈ ತಗುಲಿ, ಆ ಫೋಟೋ ಅತ್ತಂದಿತ್ತ ಅಲ್ಲಾಡುವುದು- ಇವೆಲ್ಲವೂ ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮಾರಿ ಸೆಲ್ವರಾಜ್‌ ಕಥೆಯನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ. ಹಲವು ರೂಪಕಗಳನ್ನು ತನ್ನ ಸಿನಿಮಾಗಳಲ್ಲಿ ಸಶಕ್ತವಾಗಿ ಬಳಸುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಇಡೀ ಕಥೆಗೆ ಒಂದು ತೂಕವಿದ್ದರೆ, ಅದರ ಅಂದವನ್ನು ಹೆಚ್ಚಿಸುವ ರೂಪಕಗಳಿಗೆ ಮತ್ತೊಂದು ತೂಕವಿರುತ್ತದೆ.

ಇದನ್ನೂ ಓದಿರಿ: ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ಸಂತೋಷ್‌ ನಾರಾಯಣ್ ಸಂಗೀತ

ಮುಖ್ಯವಾಗಿ ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ‘ಪರಿಯೇರುಮ್ ಪೆರುಮಾಳ್‌’ ಮತ್ತು ‘ಕರ್ಣನ್‌’ ಸಿನಿಮಾಕ್ಕೆ ಸಂತೋಷ್ ನಾರಾಯಣ್‌ ನೀಡಿರುವ ಸಂಗೀತದಿಂದಾಗಿ ರೂಪಕಗಳ ಕಲಾತ್ಮಕತೆ ಹೆಚ್ಚಿದೆ. ಸೆಲ್ವರಾಜ್‌ ಅವರ ದೃಶ್ಯಗಳ ತೀವ್ರತೆಯನ್ನು ಇಮ್ಮಡಿಗೊಳಿಸುವಲ್ಲಿ ಸಂತೋಷ್ ನಾರಾಯಣ್ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬೆಸುಗೆಯನ್ನು ಒಳಗೊಂಡ ಕಥನದೊಳಗೆ ದೇಸಿ ಹಾಗೂ ರ್‍ಯಾಪ್‌‌ ಮಿಶ್ರಿತ ಸಂಗೀತವನ್ನು ಸಂತೋಷ್ ನಾರಾಯಣ್‌ ರಚಿಸಿದ್ದಾರೆ. ಪರಿಯೇರು‌ಮ್‌ ಪೆರುಮಾಳ್‌ನ ‘ಕರುಪ್ಪಿ’, ‘ನಾಯಾರ್‌‌’ ಹಾಡುಗಳು, ‘ಕರ್ಣನ್‌’ನ ‘ಮಂಜನೆತ್ತಿ’, ‘ಕಂಡವರ ಸೊಲ್ಲುಂಗ’, ‘ಉತ್ರಾದಿಂಗ ಯಪ್ಪೊ’ ಹಾಡುಗಳು ಸೆಲ್ವರಾಜ್ ಅವರ ಆಶಯವನ್ನು ಗಟ್ಟಿಗೊಳಿಸಿವೆ.

ಕೊನೆಯದಾಗಿ, ‘ಚಾರ್ಲಿ’ ಥರದ ಮಧ್ಯಮ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ರೂಪಕತೆಯನ್ನು ಹುಡುಕಬಾರದು. ಭಾವುಕತೆಯೇ ಬಂಡವಾಳವಾಗುವ ಸಿನಿಮಾಗಳಲ್ಲಿ ಕಲಾತ್ಮಕತೆಯನ್ನು, ದಟ್ಟ ಅನುಭೂತಿಯನ್ನು ನಿರೀಕ್ಷಿಸಲಾಗದು ಎಂಬುದು ನಿಜ. ಆದರೆ ಸಿನಿಮಾವೊಂದು ಅಷ್ಟೇ ಆಗಿ ನಿಲ್ಲಬಾರದೆಂಬುದು ಇಲ್ಲಿನ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...